Homeಮುಖಪುಟಕಾಂಗ್ರೆಸ್ಸು ತನ್ನ ಭಿನ್ನ ರಾಷ್ಟ್ರೀಯತೆಯನ್ನು ಮುಂದಿಡದೇ ಮೃಗದೆದುರು ಸೆಣಸಲಾಗುವುದಿಲ್ಲ

ಕಾಂಗ್ರೆಸ್ಸು ತನ್ನ ಭಿನ್ನ ರಾಷ್ಟ್ರೀಯತೆಯನ್ನು ಮುಂದಿಡದೇ ಮೃಗದೆದುರು ಸೆಣಸಲಾಗುವುದಿಲ್ಲ

ನಮ್ಮೆದುರಿನ ಕ್ರೂರ ಮೃಗದ ಗಾತ್ರವನ್ನು ಸರಿಯಾಗಿ ತಿಳಿಯದಿದ್ದರೆ ಅದರ ವಿರುದ್ಧ ಹೋರಾಡಲು ಹೇಗೆ ಸಾಧ್ಯ?

- Advertisement -
- Advertisement -

|ಕನ್ನಡಕ್ಕೆ: ಸಿರಿಮನೆ ನಾಗರಾಜ್ |

ಕಾಂಗ್ರೆಸ್ಸಿಗೆ ABCDMSಗಳ ಅಂದರೆ ಶೇ. 80 ಜನರ ಓಟಿನಲ್ಲಿ ಪಾಲು ಬೇಕಿದ್ದಲ್ಲಿ ಅದು ಅವರಿಗಾಗಿ ಕನಸು ಕಾಣಲು ಮತ್ತು ಫಲ ದೊರಕಿಸಲು ಹಿಂಜರಿಯಬಾರದು. ಅಂದಾಗ ಅದು 1920ರ ದಶಕದ ‘ಹಿಂದು-ಮುಸ್ಲಿಂ ಐಕ್ಯತೆ’ಯಂಥ ಘೋಷಣೆಗಳಿಗೆ ಹಿಂಜರಿಯಬಾರದು, ಅದು 1984ಕ್ಕಾಗಿ ಕ್ಷಮೆ ಕೇಳಬೇಕು, ಅದು ಕಂಧಮಾಲ್ ಮತ್ತು ಮುಜಾಫರ್‍ಪುರಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹೋರಾಡಬೇಕು.

ನನ್ನ ರಾಜ್ಯ ಕೇರಳವು ದ್ವೇಷದ ರಾಜಕೀಯ ಸಿದ್ಧಾಂತಕ್ಕೆ ‘ಖಾತೆ ತೆರೆಯಲು’ ಅವಕಾಶ ನೀಡದಿರುವ ತನ್ನ ದಾಖಲೆಯನ್ನು ಈ ಚುನಾವಣೆಯಲ್ಲಿ ಸಹ ಮುಂದುವರಿಸಿದೆ; ಇದು ಒಬ್ಬ ಮಲೆಯಾಳಿಯಾಗಿ ನನಗೆ ಸಂತೋಷ ತಂದಿದೆ. ಬಿಜೆಪಿ – 0. ಮಲೆಯಾಳಿಗಳೆ, ನಿಮಗೆ ಮಂಗಳವಾಗಲಿ!

ಆದರೆ ಒಬ್ಬ ಭಾರತೀಯನಾಗಿ, ಭಾರತವು ಸತತ ಎರಡನೇ ಬಾರಿ ಮೋದಿಗೆ ವಶವಾಗಿರುವ ಬಗ್ಗೆ ದುಃಖವೂ ಆಗಿದೆ. ಮತ್ತೊಂದು ರೀತಿಯಲ್ಲಿ, ಭಾರತವೆಂಬ ಐಡಿಯವನ್ನು ಜೀವಂತವಾಗಿ ಕಾಪಿಡುವ ಹೋರಾಟ ಸುದೀರ್ಘವಾದುದು ಎಂಬ ವಿಚಾರ ಮತ್ತೊಮ್ಮೆ ಸಾಬೀತಾಗಿರುವ ಬಗ್ಗೆ ಖುಷಿಯೂ ಆಗಿದೆ. ದೇಶದ ವ್ಯವಸ್ಥೆಯು ಹಲವು ಸ್ತರಗಳಲ್ಲಿ ಮುರಿದುಬಿದ್ದಿದೆ, ಅದನ್ನು ಎಲ್ಲಾ ಸ್ತರಗಳಲ್ಲೂ ದುರಸ್ತಿ ಮಾಡಬೇಕಿದೆ. ಕಾಂಗ್ರೆಸ್ ಪಕ್ಷವೇಕೆ ದ್ವೇಷ ಸಿದ್ಧಾಂತದ ವಿರುದ್ಧ ಗೆಲ್ಲಲಿಲ್ಲ ಎಂದು ನನ್ನ ಅನೇಕ ಮಂದಿ ದಕ್ಷಿಣ ಭಾರತದ ಮಿತ್ರರು ಕೇಳುತ್ತಾರೆ. ಆದರೆ ರಾಷ್ಟ್ರೀಯ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಪುನಃ ಅಧಿಕಾರ ಗಳಿಸುವುದೆನ್ನುವುದು ಒಂದು ಬೃಹತ್ ಸವಾಲು. ಉತ್ತರ ಭಾರತದಲ್ಲಿ ಕಾಂಗ್ರೆಸ್ಸು ಮತ್ತೊಮ್ಮೆ ಹೀನಾಯವಾಗಿ ಸೋತಿದ್ದೇಕೆ?

ಮುರಿದುಬಿದ್ದಿರುವ ಭಾರತವನ್ನು ದುರಸ್ತಿ ಮಾಡುವಲ್ಲಿ ಕಾಂಗ್ರೆಸ್ಸಿಗೆ ಏನಾದರೂ ಪಾತ್ರ ಇದೆಯಾ ಎಂದು ಯೋಚಿಸುವುದು ಸಹ ಹಲವು ಸಂಗತಿಗಳಲ್ಲಿ ಒಂದು.

ಪಾಯಿಂಟ್ 1

ನಮ್ಮೆದುರಿನ ಕ್ರೂರ ಮೃಗದ ಗಾತ್ರವನ್ನು ಸರಿಯಾಗಿ ತಿಳಿಯದಿದ್ದರೆ ಅದರ ವಿರುದ್ಧ ಹೋರಾಡಲು ಹೇಗೆ ಸಾಧ್ಯ? ಅನೇಕ ಮಂದಿ ಕಾಂಗ್ರೆಸ್ ನಾಯಕರು ಅಂತಹ ಕ್ರೂರ ಮೃಗದ (ಬಿಜೆಪಿಯ) ನೆರಳಿನ ಜೊತೆ ಸೆಣೆಸುತ್ತಿದ್ದಾರೆ ಹೊರತು ಮೃಗದ (ಆರೆಸ್ಸೆಸ್) ವಿರುದ್ಧವೇ ಅಲ್ಲ. ಪಕ್ಷದ ದಿಕ್ಕನ್ನು ನಿರ್ದೇಶಿಸಬಲ್ಲಷ್ಟು ಬಲಾಢ್ಯರಾಗಿರುವ ಬಹುತೇಕ ನಾಯಕರು ಮೇಲು ಜಾತಿಗಳಿಗೆ ಸೇರಿದ್ದಾರೆ; ಭಾರತದ ಜನಸಂಖ್ಯೆಯಲ್ಲಿ ಈ ಮೇಲುಜಾತಿಗಳು ಶೇ. 15ಕ್ಕಿಂತ ಕಮ್ಮಿಯಿದ್ದಾರೆ. ಕಾಂಗ್ರೆಸ್ಸಿನ ಈ ನಾಯಕರು ಅನೇಕ ವೇಳೆ ಆರೆಸ್ಸೆಸ್ ಬಗ್ಗೆ ಅತ್ಯಂತ ಗೌರವ ಹೊಂದಿರುತ್ತಾರೆ. ಅವರು ಚರಿತ್ರೆಯನ್ನೂ ಮರೆಯುತ್ತಾರೆ. ಆರೆಸ್ಸೆಸ್ಸು ಬಹುಸಂಖ್ಯಾತ ರಾಷ್ಟ್ರೀಯತೆಯಲ್ಲಿ ನಂಬಿಕೆ ಹೊಂದಿದೆಯಾದರೆ ನೆಹರೂ ಯುಗದ ಕಾಂಗ್ರೆಸ್ಸು ಒಪ್ಪಂದದ ರಾಷ್ಟ್ರೀಯತೆ* (Contractual Nationalism)ಯಲ್ಲಿ ನಂಬಿಕೆ ಇಟ್ಟಿತ್ತು. ಆದರೆ, ಒಬ್ಬ ರಾಹುಲ್ ಗಾಂಧಿಯ ಹೊರತಾಗಿ ಬಹುತೇಕ ಕಾಂಗ್ರೆಸ್ ನಾಯಕರು ಆರೆಸ್ಸೆಸ್ಸನ್ನು ತಾವು ಎದುರಿಸಿ ಹೋರಾಡಬೇಕಿರುವ ಒಂದು ಶಕ್ತಿಯೆಂದು ಪರಿಗಣಿಸುವ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರೆ. ರಾಹುಲ್ ಗಾಂಧಿ ಒಬ್ಬ ನಾಯಕನಾಗಿ ಪಕ್ಷವನ್ನು ತನ್ನ ಆದೇಶಕ್ಕೆ ತಕ್ಕಂತೆ ಅಣಿನೆರೆಸುವಲ್ಲಿ ವಿಫಲರಾಗಿದ್ದಾರೆ. ಪರಿಣಾಮವಾಗಿ ಪಕ್ಷವು ನಿಜವಾದ ಮೃಗಕ್ಕೆ ತನ್ನ ಗಾತ್ರವನ್ನು ಬೇಕಾದಂತೆ ಬೆಳೆಸಿಕೊಳ್ಳಲು ಅವಕಾಶ ಕೊಟ್ಟು ನೆರಳಿನ ಜೊತೆ ಸೆಣಸಾಡುತ್ತಿದೆ. ಭಾರತವೆಂಬ ಐಡಿಯದಲ್ಲಿರುವ ಬಹುಸಂಖ್ಯಾತ ರಾಷ್ಟ್ರೀಯತೆ ಹಾಗೂ ಕಂಟ್ರಾಕ್ಚುವಲ್ ರಾಷ್ಟ್ರೀಯತೆ ಎಂಬ ಈ ಎರಡು ಸ್ಪಷ್ಟವಾದ ಲಕ್ಷಣಗಳನ್ನು ನಿಖರವಾಗಿ ಎತ್ತಿತೋರಿಸಿ ಜನತೆಯ ಮುಂದಿಡದಿದ್ದಲ್ಲಿ ಮತದಾರರಿಗೆ ಅವರ ಮುಂದಿರುವ ಆಯ್ಕೆ ಏನೆಂಬುದು ಸ್ಪಷ್ಟವಾಗುವುದಾದರೂ ಹೇಗೆ? ಭಾಷೆ, ಧರ್ಮ, ಆಹಾರ, ಚರ್ಮದ ಬಣ್ಣ, ಜಾತಿ – ಹೀಗೆ ಜನರನ್ನು ಧ್ರುವೀಕರಿಸುವ ಪ್ರತಿಯೊಂದು ಪ್ರಶ್ನೆಯ ಕೇಂದ್ರದಲ್ಲಿರುವುದು ಈ ವಾಗ್ವಾದವೇ ಆಗಿದೆ.

ಪಾಯಿಂಟ್ 2

ಆರೆಸ್ಸೆಸ್ ವಿರುದ್ಧ ಹೋರಾಟ ಮಾಡಬೇಕೆನ್ನುವವರು ಅದರ ಯಾವ ಅಂಗದ ವಿರುದ್ಧ ತಾವು ಹೋರಾಟ ಮಾಡುತ್ತಿದ್ದೇವೆಂಬುದನ್ನು ಸಹ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆರೆಸ್ಸೆಸ್ಸಿನ ಅಸ್ತಿತ್ವಕ್ಕೆ ಎರಡು ಆಯಾಮಗಳಿವೆ; ಅವೆರಡಕ್ಕೂ ಕಾಂಗ್ರೆಸ್ ಬಳಿ ಉತ್ತರವಾಗಲಿ ಪ್ರತ್ಯಸ್ತ್ರವಾಗಲಿ ಇಲ್ಲ. ಆ ಎರಡು ಆಯಾಮಗಳೆಂದರೆ –

ಮೊದಲನೆಯದು: ಆರೆಸ್ಸೆಸ್ ಒಂದು ಥಿಂಕ್ ಟ್ಯಾಂಕ್. ಅದು ಚಿಂತನ-ಮಂಥನ ನಡೆಸಿ ಅಜೆಂಡಾ ರೂಪಿಸಿ ಅದನ್ನು ಜನರಿಗೆ ತಲುಪಿಸುವ ತಳಮಟ್ಟದ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ. ಇದಕ್ಕೆ ಪ್ರತಿಯಾದುದು ಕಾಂಗ್ರೆಸ್‍ನಲ್ಲಿ ಇಲ್ಲ ಮಾತ್ರವಲ್ಲ, ಅದರ ಸಿದ್ಧಾಂತವನ್ನು ಹರಿತಗೊಳಿಸಿ ಕೊಡಬಲ್ಲ ಬುದ್ಧಿಜೀವಿಗಳು/ತತ್ವಜ್ಞಾನಿಗಳು ಕೂಡ ಅದರ ಬಳಿ ಇಲ್ಲ. ಕಾಂಗ್ರೆಸ್ಸು ಪಿ.ಎನ್.ಹಕ್ಸರ್ ನಂತರ ಒಂದು ಬುದ್ಧಿಜೀವಿ-ವಿರೋಧಿ ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ. ಅದು ಇಷ್ಟಪಡುವ ಬುದ್ಧಿಜೀವಿಗಳೆಂದರೆ ‘ಅರ್ಥಶಾಸ್ತ್ರಜ್ಞರು’ ಮಾತ್ರ; ದುರದೃಷ್ಟವಶಾತ್ ಆರೆಸ್ಸೆಸ್ಸಿನಂತಹ ಒಂದು ಅರೆ-ಫ್ಯಾಸಿಸ್ಟ್ ಸಂಘಟನೆ ವಿರುದ್ಧ ಸಮೂಹ ಚಳವಳಿ ಕಟ್ಟುವಲ್ಲಿ ಅರ್ಥಶಾಸ್ತ್ರಜ್ಞರ ಪಾತ್ರ ಬಹಳ ಸೀಮಿತವಾದುದು.

ಎರಡನೆಯದು: ಆರೆಸ್ಸೆಸ್ ಒಂದು ಮಾನವ ಸಂಪನ್ಮೂಲ ಪ್ರಾಜೆಕ್ಟ್. ಅದು ಕೆಲವು ತಲೆಮಾರುಗಳ ಕಾಲ ಸತತವಾಗಿ ಕೆಲಸ ಮಾಡಿ ಸಾಕಷ್ಟು ಪ್ರಮಾಣದ ಕುಶಲಿಗಳನ್ನು ಸೃಷ್ಟಿಸಿದೆ. ಅವರು ಸಂಪಾದಕ/ನ್ಯಾಯಾಧೀಶ/ಅಧಿಕಾರಿ … ಹೀಗೆ ಯಾವುದೇ ಸ್ಥಾನವನ್ನು ಬೇಕಾದರೂ ತುಂಬಬಲ್ಲವರು; ಅವರಲ್ಲಿ ಅದಕ್ಕೆ ಬೇಕಾದ ಕೌಶಲ ಇರಲಿ ಬಿಡಲಿ, ಇಂದು ಅವರು ಆ ಸ್ಥಾನಗಳಲ್ಲಿದ್ದಾರೆ, ಎಲ್ಲಾ ಕಡೆಯೂ ಅವರಿದ್ದಾರೆ. ಆರೆಸ್ಸೆಸ್ಸು ಭಾರತೀಯ ಸಂಸ್ಥೆಗಳನ್ನು ಒಳಗಿನಿಂದ ಆಕ್ರಮಿಸಿಕೊಂಡಿದೆ ಹಾಗೂ ಅವುಗಳನ್ನು ಆರೆಸ್ಸೆಸ್ಸಿನ ವಿಶ್ವದೃಷ್ಟಿಯನ್ನು ಅನುಸರಿಸುವ ಸಾರ್ವಜನಿಕ ಏಜೆನ್ಸಿಗಳನ್ನಾಗಿ ಪರಿವರ್ತಿಸಿದೆ. ಹೀಗಾಗಿ ಮೀಸಲಾತಿ ವಿರುದ್ಧ ತೀರ್ಪುಗಳು ಬರುತ್ತವೆ; ಮಾನವ ಹಕ್ಕು ಕಾರ್ಯಕರ್ತರ ಹೆಸರನ್ನು ‘ನಗರ ನಕ್ಸಲ್’ಗಳೆಂದು ಬಹಳ ಸಲೀಸಾಗಿ ಬದಲಾಯಿಸುವಂಥ ಪ್ರೈಮ್ ಟೈಮ್ ಆ್ಯಂಕರುಗಳನ್ನು ನೋಡುತ್ತಿದ್ದೇವೆ; ದಶಕಗಳ ಕಾಲದ ನಿರಂತರ ಹೋರಾಟಗಳ ಫಲವಾಗಿ ಗಳಿಸಿಕೊಂಡಂತಹ ಹಕ್ಕುಗಳು ಮತ್ತು ಸ್ಥಾನಗಳನ್ನು ಕೇವಲ ಒಬ್ಬಿಬ್ಬರು ವ್ಯಕ್ತಿಗಳು ಅತ್ಯಂತ ಸುಲಭವಾಗಿ ಹಾಳುಗೆಡವುತ್ತಿದ್ದಾರೆ.

ಆರೆಸ್ಸೆಸ್ಸಿನ ಈ ಎರಡೂ ಆಯಾಮಗಳಿಗೆ ಪ್ರತಿಯಾದುದನ್ನು ಕಾಂಗ್ರೆಸ್ಸು ಅಭಿವೃದ್ಧಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಅದು ಯಾವುದೇ ಪರಿಣಾಮವಿಲ್ಲದ್ದಾಗಿರುತ್ತದೆ.

ಪಾಯಿಂಟ್ 3

ಕಾಂಗ್ರೆಸ್ಸು/ಯುಪಿಎ ಈ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ರಾಜ್ಯಗಳಾದ ಕೇರಳ, ತಮಿಳ್ನಾಡು ಹಾಗೂ ಪಂಜಾಬಿನಲ್ಲಿ ಆರೆಸ್ಸೆಸ್/ಆರ್ಯತ್ವ/ಬ್ರಾಹ್ಮಣತ್ವ/ಮನುಸ್ಮೃತಿ ಇವುಗಳಿಗೆ ವಿರುದ್ಧವಾಗಿ ಪ್ರಬಲವಾದ ಸಾಮಾಜಿಕ ಪರಂಪರೆ ಇದೆ, ಕಾಂಗ್ರೆಸ್ಸು ಅದರ ಫಲವನ್ನಷ್ಟೇ ಸವಿದಿದೆ. ಕಾಂಗ್ರೆಸ್ ಒಂದು ಪರ್ಯಾಯವಾಗಬೇಕಿದ್ದಲ್ಲಿ ಅದು ದಲಿತರ, ಆದಿವಾಸಿಗಳ, ಬಿ.ಸಿ.ಗಳ, ಮುಸ್ಲಿಮರ, ಸಿಖ್ಖರ ಹಾಗೂ ಕ್ರೈಸ್ತರ ಪಕ್ಷವಾಗಲು ಹಿಂಜರಿಯಬಾರದು (ಇದು ABCDMS ಎಂದು ಕರೆಯಬಹುದಾದ ಒಂದು ಸ್ಪಷ್ಟವಾದ ಮತಕ್ಷೇತ್ರ – constituency – ಆಗಿದೆ). ರಾಹುಲ್ ಗಾಂಧಿಯ ಜನಿವಾರ ಪ್ರದರ್ಶನವು ಸಮಾಜದ ಮೇಲ್ಪದರದ 12-15% ಜನರನ್ನು ಖುಷಿಪಡಿಸುವ ಪ್ರಯತ್ನವಾಗಿತ್ತು; ಅವರಾದರೋ ಈ 21ನೇ ಶತಮಾನದಲ್ಲಿ ಹೇಗಿದ್ದರೂ ಕಾಗ್ರೆಸ್ಸಿಗೆ ಬದಲು ಮೋದಿ/ಆರೆಸ್ಸೆಸ್ಸನ್ನೇ ಆರಿಸುವವರು. ಅದೇ ವೇಳೆ ಅವರ ಈ ಚರ್ಯೆಯು ABCDMSಗೆ, ಅಂದರೆ ಶೇ. 80ಕ್ಕಿಂತ ಹೆಚ್ಚಿನ ಜನತೆಗೆ ಬೇರೆಯೇ ಅರ್ಥ ಕೊಡುವುದಾಗಿದ್ದು, ಅವರ ಪಾಲಿಗೆ ಅದು ಬಹಳ ಆಘಾತಕಾರಿಯಾಗಿತ್ತು ಎನ್ನುವುದು ರಾಹುಲ್‍ಗಾಗಲಿ ಅವರ ಸಹೋದ್ಯೋಗಿಗಳಿಗಾಗಲಿ ಅರ್ಥವಾಗಿದೆಯಾ?

ಕಾಂಗ್ರೆಸ್ಸು ABCDMSಗಳ ಪಕ್ಷವಾಗಿ ಪುನರುತ್ಥಾನ ಹೊಂದಲು ವಿಫಲವಾದಲ್ಲಿ (ಆರೆಸ್ಸೆಸ್ಸಿಗೆ ಹಾಗೂ ಕಾಂಗ್ರೆಸ್ಸಿನೊಳಗಿರುವ ಜಾತಿ ನಾಯಕರಿಗೆ ಇದು ಬೇಡವಾದುದು) ಅದು ಮೋದಿಗೆ ಸವಾಲಾಗುವುದು ಸಾಧ್ಯವಿಲ್ಲ. ಅಂಕಿಸಂಖ್ಯೆಗಳ ಪ್ರಕಾರ ಈ ಸಮುದಾಯಗಳೆಂದರೆ ಭಾರತದ ಶೇ. 80 ಭಾಗ. ಆದರೆ ಕಾಂಗ್ರೆಸ್ಸಿನ ಚಿಂತನೆಯು ಯಾರು ABCDMSಗಳ ಇಶ್ಯೂಗಳು ಹಾಗೂ ಅವರಿಗೆ ಸಲ್ಲಬೇಕಿರುವ ಸವಲತ್ತುಗಳ ಪರವಾಗಿ ಫೀಲ್ ಮಾಡಲಾರರೋ ಅಂತಹ ಮೇಲುಜಾತಿ ಮಧ್ಯಮಾರ್ಗಿಗಳಿಂದ ನಿರೂಪಿತವಾಗುತ್ತದೆ.

ಕಾಂಗ್ರೆಸ್ಸಿಗೆ ABCDMSಗಳ ಅಂದರೆ ಶೇ. 80 ಜನರ ಓಟಿನಲ್ಲಿ ಪಾಲು ಬೇಕಿದ್ದಲ್ಲಿ ಅದು ಅವರಿಗಾಗಿ ಕನಸು ಕಾಣಲು ಮತ್ತು ಫಲ ದೊರಕಿಸಲು ಹಿಂಜರಿಯಬಾರದು. ಅಂದಾಗ ಅದು 1920ರ ದಶಕದ ‘ಹಿಂದು-ಮುಸ್ಲಿಂ ಐಕ್ಯತೆ’ಯಂಥ ಘೋಷಣೆಗಳಿಗೆ ಹಿಂಜರಿಯಬಾರದು, ಅದು 1984ಕ್ಕಾಗಿ ಕ್ಷಮೆ ಕೇಳಬೇಕು, ಅದು ಕಂಧಮಾಲ್ ಮತ್ತು ಮುಜಾಫರ್‍ಪುರಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹೋರಾಡಬೇಕು. ಅದು ಖಾಸಗಿ ವಲಯದಲ್ಲಿ ಆದಿವಾಸಿ ಮತ್ತು ದಲಿತರಿಗೆ ಮೀಸಲಾತಿಗಾಗಿ ನಿರ್ಭಿಡೆಯಿಂದ ಹೋರಾಟ ಮಾಡಬೇಕು. ನೆನಪಿಡಿ: ಸಂಸತ್ತಿನಲ್ಲಿ 1990ರಲ್ಲಿ ರಾಜೀವ್ ಗಾಂಧಿ ಮಾಡಿದ ಭಾಷಣವೇ ಇಂದಿಗೂ ಬಿಸಿಗಳ ಮನಸ್ಸಿನಲ್ಲಿ ಹಸಿರಾಗಿ ಉಳಿದಿರುವ ಮಂಡಲ್ ವಿರುದ್ಧದ ಅತಿ ದೀರ್ಘ ಭಾಷಣ. ಅಷ್ಟಾಗಿಯೂ ದೀರ್ಘ ಕಾಲ ಬಿ.ಸಿ.ಗಳು ಕಾಂಗ್ರೆಸ್ಸಿಗೆ ಓಟು ಮಾಡಿದರು. ಆದರೆ ಇಂದು ಆರೆಸ್ಸೆಸ್ಸು ಬಿ.ಸಿ.ಗಳಿಗೆ ಹಿಂದುತ್ವ, ಹಿಂದು ರಾಷ್ಟ್ರೀಯತೆ ಮುಂತಾದವುಗಳಲ್ಲಿ ನಂಬಿಕೆ ಹುಟ್ಟಿಸಿ ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದರೆ ಕಾಂಗ್ರೆಸ್ಸು ಅವರಿಗೆ ನೀಡಬಹುದಾದ್ದು ಏನೂ ಇಲ್ಲ. ABCDMSನೊಳಗಿರುವ ಪ್ರತಿಯೊಂದು ಸಮುದಾಯದ ಮನಸ್ಸಿನಲ್ಲೂ ಕಾಂಗ್ರೆಸ್ಸು ತಮಗೆ ಮಾಡಿರುವ ಅನ್ಯಾಯದ ಬಗ್ಗೆ ಎದ್ದುಕಾಣುವಂಥ ಕ್ಷಣಗಳಿವೆ. ಕಾಂಗ್ರೆಸ್ಸು ಅವುಗಳನ್ನು ಪುನರ್ವಿಮರ್ಶಿಸಿ ಅವುಗಳಿಗೊಂದು ಮುಕ್ತಾಯ ಹಾಡಲು ಸಿದ್ಧವಿದ್ದಲ್ಲಿ ಅವರಲ್ಲಿನ ಬಹುದೊಡ್ಡ ಸಂಖ್ಯೆ ಪುನಃ ಅದರ ತೆಕ್ಕೆಗೆ ಬರುತ್ತಾರೆ.

ಭಾರತವೆಂಬ ಐಡಿಯವನ್ನು ಕಂಟ್ರಾಕ್ಚುವಲ್ ರಾಷ್ಟ್ರೀಯತೆಯಾಗಿ ಗುರುತಿಸುವ ಪಕ್ಷವಾಗಿ ಕಾಂಗ್ರೆಸ್ಸು ತನ್ನನ್ನು ಪುನರುತ್ಥಾನಗೊಳಿಸಿಕೊಳ್ಳದಿದ್ದಲ್ಲಿ ಅದು ಬಹುಸಂಖ್ಯಾತ ರಾಷ್ಟ್ರೀಯತೆಗೆ ಸಲೀಸಾಗಿ ದಾರಿ ಬಿಟ್ಟುಕೊಡುತ್ತದೆ (ವಾಕ್ ಓವರ್ ಕೊಡುತ್ತದೆ). ಆದ್ದರಿಂದ ಇಂದು ಕಾಂಗ್ರೆಸ್ಸಿನ ಮುಂದಿರುವ ಸವಾಲು ಇಂದಿರಾ/ರಾಜೀವ್ ಮುಂದಿದ್ದ ಸವಾಲಿನಂತಿರದೆ 1920ರ ದಶಕದಲ್ಲಿ ಗಾಂಧಿ/ನೆಹರೂ ಅವರ ಮುಂದಿದ್ದಂಥದಾಗಿದೆ; ಅಂದರೆ ರಾಯ್ ಮತ್ತು ಮದನಮೋಹನ ಮಾಳವೀಯ ಅವರುಗಳನ್ನು ನಿಯಂತ್ರಿಸಿದಂಥದ್ದಾಗಿದೆ. 1920ರ ದಶಕದಲ್ಲಿ ಗಾಂಧಿ/ನೆಹರೂ ಜೋಡಿಯು ರಾಯ್ ಮತ್ತು ಮಾಳವೀಯರನ್ನು ಕಾಂಗ್ರೆಸ್ಸಿನಿಂದ ಹೊರಗಿಟ್ಟಿತು; ಹಿಂದೂ ಮಹಾಸಭಾ ಸಂಸ್ಥಾಪಕರಲ್ಲಿ ಅವರಿಬ್ಬರೂ ಇದ್ದಾರೆಂಬುದು ನೆನಪಿದೆಯಷ್ಟೆ? ಅದು ಬಹುಸಂಖ್ಯಾತ ರಾಷ್ಟ್ರೀಯತೆಯ ವಿರುದ್ಧದ ಮೊತ್ತಮೊದಲ ಜಯವಾಗಿತ್ತು. ಇಂದು ಕಾಂಗ್ರೆಸ್ಸು ತಾನೊಂದು ರಾಜಕೀಯ ಪರ್ಯಾಯದ ಪಾತ್ರ ನಿರ್ವಹಿಸಬೇಕಿರುವುದು ಎಷ್ಟು ದೊಡ್ಡ ಸವಾಲು ಎಂಬುದನ್ನು ಮನಗಂಡಿರುವ ಯಾರೊಬ್ಬ ಕಾಂಗ್ರೆಸ್ ನಾಯಕನೂ ನನಗೆ ಕಾಣುತ್ತಿಲ್ಲ. ಅವರು ಇದರಲ್ಲಿ ವಿಫಲರಾದಲ್ಲಿ ಅದೊಂದು ನಿರ್ವಾತವನ್ನು ಹುಟ್ಟುಹಾಕುತ್ತದೆ; ಅದನ್ನು ಭರ್ತಿ ಮಾಡಲು ಯಾರಾದರೊಬ್ಬ ಬೆಳೆದುಬರಬಹುದು/ಬರುತ್ತಾರೆ. ಗಾಂಧಿ-ನೆಹರು-ಅಂಬೇಡ್ಕರ್ ಮುಂತಾದವರು ಭಾರತವು (ಇಟಲಿ ಮತ್ತು ಜರ್ಮನ್ ಮಾದರಿಯ) ಬಹುಸಂಖ್ಯಾತ ರಾಷ್ಟ್ರೀಯತೆಯನ್ನು ಅಪ್ಪಿಕೊಳ್ಳುವ ಅಪಾಯದ ವಿರುದ್ಧ ಮಾತಾಡಿ ಜಯಿಸಿ, (ಇಂಗ್ಲೆಂಡ್, ಫ್ರಾನ್ಸ್ ಮಾದರಿಯ) ಕಂಟ್ರಾಕ್ಚುವಲ್ ರಾಷ್ಟ್ರೀಯತೆಯ ಸುತ್ತ ಭಾರತವೆಂಬ ಐಡಿಯವನ್ನು ಸದೃಢೀಕರಿಸುವಲ್ಲಿ ಯಶಸ್ವಿಯಾಗುತ್ತಾರೆಂದರೆ, ಅದನ್ನು ಈ 21ನೇ ಶತಮಾನದಲ್ಲಿ ಜನತೆಗೆ ಮತ್ತೊಮ್ಮೆ ನೆನಪಿಸಲು ಇದು ಸಕಾಲವಾಗಿದೆ. ಭಾರತದಂಥ ವೈವಿಧ್ಯಮಯವಾದ ದೇಶಕ್ಕೆ ಇದನ್ನು ಸಾಧಿಸಬಲ್ಲ ನಾಯಕರ ಅಗತ್ಯವಿದೆ. ಭಾರತವು ತನ್ನ ಮುಂದಿರುವ ಹೋರಾಟಕ್ಕೆ ಬೇಕಾದಂಥ ಸ್ಪಷ್ಟತೆ ಮತ್ತು ದಿಟ್ಟತನವನ್ನು ಹೊಂದಿರುವ (ರಾಜಕೀಯ, ಸಾಮಾಜಿಕ, ಬೌದ್ಧಿಕ) ನಾಯಕರನ್ನು ರೂಪಿಸಬಲ್ಲದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...