Homeಅಂಕಣಗಳು“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

- Advertisement -
- Advertisement -

ಬದನೆಕಾಯಿ ಇರೋದು ತಿನ್ನಕ್ಕೆ ಪುರಾಣ ಇರದು ಹೇಳಕ್ಕೆ. ಇದೊಂದು ಹಳ್ಳಿ ಕಡೆಯ ಗಾದೆ. ಇದನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಎಡೂರಪ್ಪನ ಸರಕಾರ ಕೊರೊನಾ ಕಾಯಿಲೆ ನಿಯಂತ್ರಿಸುವ ನಿಷೇಧಗಳನ್ನ ಜನಗಳ ಮೇಲೆ ಹೇರಿ ತಾವು ಮಾತ್ರ ಮದುವೆ ಮುಂಜಿ ಹಬ್ಬಹರಿದಿನಗಳಲ್ಲಿ ಆರಾಮವಾಗಿ ಅಡ್ಡಾಡುತ್ತಿವೆಯಂತಲ್ಲಾ. ಹಾಗೆ ನೋಡಿದರೆ ಈ ಬಿಜೆಪಿಗಳೇ ಹಾಗೆ. ಬಾಯಿಬಿಟ್ಟಕೂಡಲೇ ಪುರಾಣವನ್ನು ಹೇಳುವ ಪ್ರಧಾನಿಯನ್ನ ಪಡೆದಿರುವ ನಾವು, ಅವರ ಸರಕಾರಗಳು ಅಸ್ತಿತ್ವದಲ್ಲಿರುವ ರಾಜ್ಯಗಳ ನಾಯಕರಿಂದ ಇನ್ನೇನು ಪಡೆಯಲು ಸಾಧ್ಯ. ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ನೂರು ಜನ ಸೇರಿ ಮಾಡುತ್ತಿದ್ದ ಅಮ್ಮನ ಹಬ್ಬ ತಡೆದ ಡಿ.ಸಿ, ಸಾಹಸವನ್ನೆ ಗೈದಂತೆ ಹೋಗುತ್ತಿದ್ದರೆ ಅತ್ತ ಎಡೂರಪ್ಪ `ಕೊರೊನ ಪರೋನ ನನಿಗೆ ಬರದಿಲ್ಲ’ ಅನ್ನಂಗೆ ತಪಾಸಣೆ ತಡಾಯ್ದು ಹೋಗುತ್ತಿದ್ದರೆ ಇತ್ತ ದೇವೇಗೌಡರು ನಾಲ್ಕೈದು ಸಾವಿರ ಜನ ಸೇರಿ ಮಾಡಿದ ಮದುವೆಯ ಮಧ್ಯದಲ್ಲಿದ್ದರು. ಇನ್ನ ಈಶ್ವರಪ್ಪನೂ ಕೂಡ ನಾನೇನು ಕಡಿಮೆ ಎನ್ನುವಂತೆ ಹಬ್ಬ ಸಡಗರದಲ್ಲಿದ್ದರಂತಲ್ಲಾ, ಥೂತ್ತೇರಿ.

ಜನ ಸೇರುವ ಹಬ್ಬ, ಹರಿದಿನ ಹುಡುಕುತ್ತ, ತಿರುಗುತ್ತಿರುವ ಈಶ್ವರಪ್ಪ ಬದುಕಿನಲ್ಲಿ ಬಹಳ ಪುರಾಣ ಹೇಳುವ ಮನುಷ್ಯನಂತಲ್ಲಾ. ಮಾಂಸ ನಿಷೇಧವಿದ್ದಾಗಲೇ ಭಕ್ಷಣೆ ಮಾಡಿ ತಾನು ಅಸುರ ಸಂತತಿ ಎಂದು ಹೇಳಿದವರು. ಚಡ್ಡಿಗಳಿಗೆ ಎಡೂರಪ್ಪನಿಗಿಂತಲೂ ಪ್ರಿಯರಾದವರು. ಅದಕ್ಕೇ ಏನೋ ಎಡೂರಪ್ಪನವರು ದಾವಣಗೆರೆ ಉಸ್ತುವಾರಿ ಸಚಿವರನ್ನಾಗಿ ಮಾಡಿಬಿಟ್ಟಿದ್ದಾರೆ. ಲಂಕೇಶ್ ಹೇಳುತ್ತಿದ್ದ ಪ್ರಕಾರ, ದಾವಣಗೆರೆಯಲ್ಲಿ ಒಂದು ಕಲ್ಲು ಬೀಸಿದರೆ ಅದು ಒಬ್ಬ ಲಿಂಗಾಯತನಿಗೇ ತಗಲುತ್ತದಂತೆ. ಮೊದಲು ಸೆಕ್ಯುಲರ್ ಎಂದೇಳುವ ಶ್ಯಾಮನೂರು ಜೊತೆಗಿದ್ದು, ಈಗ ಬಿಜೆಪಿ ಸಿದ್ದೇಶನ ಜೊತೆ ಸೇರಿಕೊಂಡು ಮೋದಿ ಭಜನೆ ಮಾಡುತ್ತಿರುವ ದಾವಣಗೆರೆಗೆ ಈಶ್ವರಪ್ಪನನ್ನು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡಿರುವುದು ಸೇಡುತೀರಿಸಿಕೊಳ್ಳುವ ಕ್ರಮವೆಂದು ಹೇಳುತ್ತಿದ್ದಾರಲ್ಲಾ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಲಿಂಗಾಯತರೆಲ್ಲಾ ಸೇರಿಕೊಂಡು ಈಶ್ವರಪ್ಪನನ್ನು ಹುಡುಕಿಕೊಡಿ ಎಂದು ಪ್ರತಿಭಟಿಸಿದಾಗ, ಈಶ್ವರಪ್ಪ ಹಬ್ಬದಲ್ಲಿ ಭಾಗವಹಿಸಿ ಕೊರೊನಾ ಗಿರೋನ ಯಲ್ಲ ದೇವೇಗೌಡನಂತ ಮುದುಕರಿಗೆ ಬತ್ತದೆ ಕಂಡ್ರಿ ನಮಗಲ್ಲ ಎಂದರಂತಲ್ಲಾ, ಥೂತ್ತೇರಿ.

ವಿಧಾನಸೌಧದ ಹೊರಗೆ ಈ ಕತೆಯಾದರೆ, ಇನ್ನ ವಿಧಾನಸೌಧದ ಒಳಗಿನ ಕತೆಗಳು ಮನಕರಗುವಂತಿವೆಯಲ್ಲ. ಪ್ರವಾಹ, ಜನರ ಗೋಳು, ದೊರೆಸ್ವಾಮಿ ನಿಂದನೆಯ ವಿಚಾರ ಚರ್ಚೆಯಾಗಲು ಅವಕಾಶ ಕೊಡದೆ ಕಾಗೇರಿ, ಸಂವಿಧಾನ ಚರ್ಚೆಯಾಗಲು ಧಾರಾಳ ಅವಕಾಶಕೊಟ್ಟು, ಅಳುತ್ತ ಹೋದರಂತಲ್ಲ. ಇವರ ಬುದ್ಧವಂತಿಕೆ ಗ್ರಹಿಸುವುದಾದರೆ, ಪ್ರವಾಹಸಂತ್ರಸ್ತರ ವಿಷಯಕ್ಕೆ ಸಮಯ ಕೊಟ್ಟರೆ ಸರಕಾರದ ಮರ್ಯಾದೆ ಹರಾಜಾಗುತ್ತದೆ. ಜನರ ಗೋಳಿನ ಚರ್ಚೆಯೂ ಅಂತಹ ಅನಾಹುತವನ್ನೆ ಮಾಡಬಹುದು. ಇನ್ನ ದೊರೆಸ್ವಾಮಿ ವಿಷಯ ಪಾರ್ಟಿಯಲ್ಲಿ ಅನಾಗರಿಕರ ಅಪೂರ್ವ ಗುಣಗಳನ್ನ ಅನಾವರಣಮಾಡಬಹುದು. ಸಂವಿಧಾನಕ್ಕೆ ಅವಕಾಶ ಕೊಟ್ಟರೆ ಹಾಗಾಗುವುದಿಲ್ಲ. ಚಡ್ಡಿಗಳಿಗೂ ಸಂವಿಧಾನದ ಬಗ್ಗೆ ಗೌರವವಿದೆ ಎಂಬುದು ಜಗಜ್ಜಾಹೀರಾಗುತ್ತದೆ. ಇಂತಹ ಯೋಚನೆಯ ಕಾಗೇರಿ ಹೊಗಳುಭಟ್ಟರ ಸಂತತಿಯವರಾದ ರಮೇಶಕುಮಾರರಿಂದ ಹಿಗಾಮುಗ್ಗ ಹೊಗಳಿಸಿಕೊಂಡು ನಿರ್ಗಮಿಸಿದರಂತಲ್ಲಾ, ಥೂತ್ತೇರಿ.

ಇನ್ನ ವಿಧಾನಪರಿಷತ್‍ನಲ್ಲಿ ಯಾತಕ್ಕೂ ಲಾಯಕ್ ಅಲ್ಲದ ಕೋಟ ಶ್ರೀನಿವಾಸ ಪೂಜಾರಿ ಎಂಬ ಸಭಾನಾಯಕ ಕರ್ನಾಟಕದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿ ಇಲ್ಲ ಎಂದು ಬಿಟ್ಟಿದ್ದಾನಲ್ಲ. ಈ ಅಜ್ಞಾನಿಗೆ ಬಹುಶ ದೃಷ್ಟಿದೋಷವಿರಬಹುದು ಇಲ್ಲವೇ ಕೂಪಮಂಡೂಕನಿರಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಬಿ.ಜೆ.ಪಿ.ಯ ಭಯಂಕರ ಸುಳ್ಳುಗಾರನಿರಬಹುದು. ಈತನನ್ನ ಹಿಡಿದುಕೊಂಡು ಹೋಗಿ ಅಸ್ಪøಶ್ಯತೆ ಭೀಕರವಾಗಿರುವ ನಮ್ಮ ಹಳ್ಳಿಗಳ ಆಚರಣೆ ತೋರಿಸಬೇಕು. ಅಲ್ಲಿ ಹೊಲೆಯರವನು ಇನ್ನೂ ಅಮ್ಮನಗುಡಿ ಮುಂದೆ ತಮಟೆ ಬಡಿಯುತ್ತಿದ್ದಾನೆ. ಮಾದಿಗರವನು ಕೊಂಡ ಹಾಕುತ್ತಿದ್ದಾನೆ. ಮಡಿವಾಳರವನ್ನು ನೆಡೆಮಡಿಹಾಸಿ ಪತ್ತು ಹಿಡಿಯುತ್ತಿದ್ದಾನೆ. ಕ್ಷೌರಿಕರವನು ವಾಲಗ ಊದುತ್ತಿದ್ದಾನೆ ಇವರೆಲ್ಲಾ ತಮ್ಮತಮ್ಮ ಸ್ಥಾನದಲ್ಲಿ ತಮ್ಮ ಕರ್ತವ್ಯ ಅಂದರೆ ಭಕ್ತಿ ಅರ್ಪಿಸುತ್ತಿದ್ದಾರೆ. ಇನ್ನ ಹೊಟೇಲುಗಳಿಗೆ ಪ್ಲಾಸ್ಟಿಕ್ ಲೋಟ ಬಂದಿರುವುದರಿಂದ ಅದರ ಸಮಸ್ಯೆ ಸಾಲ್ವು ಆಗಿದೆ. ಇಂತಹ ಕೇರಿಗಳಿಗೆ ಈ ಪೂಜಾರಿ ಹೋಗಿ ನೋಡಬೇಕು. ಅವನು ಅಲ್ಲಿಗೆಲ್ಲ ಹೋಗುವುದಿಲ್ಲ. ಸುಳ್ಳುಗಾರ ಜನಕ್ಕೆ ಪ್ರತ್ಯಕ್ಷದ ಅಗತ್ಯವಿಲ್ಲವಂತಲ್ಲಾ, ಥೂತ್ತೇರಿ.

ಪ್ರಭಾಕರ ಕೋರೆಗೆ ಕೆಂಗಲ್ ಹನುಮಂತಯ್ಯ ಸಂಸ್ಕøತಿ ದತ್ತಿ ಪ್ರಶಸ್ತಿ ಪ್ರಾಪ್ತವಾಗಿದೆ. ಕೋರೆಗೆ ಅಭಿನಂದನೆ, ಆದರೆ ಅದನ್ನ ಕೊಡಮಾಡಿದ ಲೀಡರ್ ಬಗ್ಗೆ ಅನುಮಾನ ಎದ್ದಿವೆಯಲ್ಲಾ. ಏಕೆಂದರೆ, ಈ ಪ್ರಶಸ್ತಿಯನ್ನ ಕನ್ನಡ ಸಾಹಿತ್ಯ ಪರಿಷತ್ ಕೊಡುತ್ತದೆ. ಅದರ ಅಧ್ಯಕ್ಷ ಮನುಬಳಿಗಾರ. ಈತ ಪ್ರಶಸ್ತಿ ಕೊಡುವ ಮೊದಲೇ ಸದಸ್ಯರಿಗೆ ಸೂಚನೆ ಕೊಡುವ ಗಿರಾಕಿ. ಆದ್ದರಿಂದ ಕೆಂಗಲ್ ಮತ್ತು ಕೋರೆಗೆ ಜೊತೆಯಾಗಿಯೇ ಅವಮಾನವಾಗಿದೆ. ಕೆಂಗಲ್ ಕರ್ನಾಟಕ ಕಂಡ ಅಪ್ರತಿಮ ನಾಯಕ. ವಿಧಾನಸೌಧ ಕಟ್ಟಿದವರು. ನೆಹರೂಗೆ ಹೆದರದ ಧೀರ. ಇಂದಿರಾಗಾಂಧಿ ಎದುರು ಪಾರ್ಟಿ ಕಟ್ಟಿದವರು. ಭಗವಧ್ಗೀತೆ ಸಾಮಾನ್ಯನೂ ಓದಲೆಂದು ಮುದ್ರಿಸಿ ಹಂಚಿದವರು. ಕನ್ನಡದ ಸಂಸ್ಕøತಿ ಮತ್ತು ರಾಜಕಾರಣದ ಪ್ರತಿನಿಧಿ ಅನ್ನಬಹುದು. ಇಂತಹ ಮಹಾನಾಯಕನ ಹೆಸರಿನ ಪ್ರಶಸ್ತಿ ಕೋರೆಗೆ ಅನವುನ್ಸಾದಾಗ ಬಹುಶ: ಕೋರೆಗೆ ಅಚ್ಚರಿಯಾಗಿರಬಹುದು. ಕೊಟ್ಟವರಾರು ಎಂದು ಗೊತ್ತಾದಾಗ ಈಸಿಕೊಳ್ಳಲು ಸಂಕೋಚವೂ ಆಗಿರಬಹುದು. ಅದಕ್ಕಾಗಿ ಪ್ರಶಸ್ತಿ ಹಣವಾದ 25 ಸಾವಿರವನ್ನು ನೀನೇ ಇಟ್ಟಗಳೊ ಬಳಿಗಾರ ಅನ್ನುವ ಸಂಭವವಿದೆಯೆಂದು ಸಣ್ಣ ಸಂಸ್ಕøತಿ ಜನ ಆಡಿಕೊಳ್ಳುತ್ತಿದ್ದಾರಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...