Homeಮುಖಪುಟಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

ಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

- Advertisement -
- Advertisement -

ಉತ್ತರ ಕನ್ನಡದ ಒಂದು ಕಾಲದ ಕೈಗಾರಿಕಾ ನಗರ ದಾಂಡೇಲಿ ಭೂಮಾಫಿಯಾದ ಆಡಂಬೋಲದಂತಾಗಿ ಹೋಗಿದೆ! ದೈತ್ಯ ರಾಜಕಾರಣಿ ದೇಶಪಾಂಡೆ ದೊಡ್ಡ ಕೈಗಾರಿಕೆಗಳ ಪ್ರಭಾವಿ ಮಂತ್ರಿ ಮಾಂಡಲೀಕನಾಗಿದ್ದಾಗಲೇ ಇಲ್ಲಿಯ ಒಂದೊಂದೇ ಕಾರ್ಖಾನೆಗಳು ಬಾಗಿಲು ಎಳೆದುಕೊಂಡಿರುವುದು ಇವತ್ತಿಗೂ ಬಿಡಿಸಲಾಗದ ಒಗಟಾಗೇ ಉಳಿದಿದೆ. ಈಗೇನಿದ್ದರೂ ದಾಂಡೇಲಿಯಲ್ಲಿ ಪ್ರವಾಸೋದ್ಯಮ “ದಂಧೆ”ಯ ಭಯಾನಕ ಭರಾಟೆ! ದಾಂಡೇಲಿ ಜೋಯಿಡಾದ ನಿತ್ಯಹರಿದ್ವರ್ಣ ಕಾಡಿನ ನೀರವತೆ ಮೃಗ-ಪಕ್ಷಿಗಳ ಕೂಗು-ಕಲರವ, ಕಾಳಿ-ಪಾಂಡರಿ ನದಿಗಳ ನಿನಾದ ತಂಡೋಪತಂಡವಾಗಿ ಪ್ರವಾಸಿಗರನ್ನ ಸೆಳೆಯುತ್ತಿದೆ. ಒಂದು ವಾರಕ್ಕೆ ಹಲವು ಕೋಟಿ ವಹಿವಾಟು ಆಗುತ್ತಿದೆ.
ದಾಂಡೇಲಿ-ಜೋಯಿಡಾದ ಸುತ್ತಲೂ ರೆಸಾರ್ಟ್, ಹೋಮ್‍ಸ್ಟೇಗಳದೇ ಹಾವಳಿ. ಪ್ರವಾಸೋದ್ಯಮದ ಮೋಜು-ಮಸ್ತಿ ಭೂ ಮಾಫಿಯಾ ನಿಭಾಯಿಸುತ್ತಿದೆ. ಹೀಗಾಗಿ ದಾಂಡೇಲಿಯ ಕಾಡಿನ ಅಂಚಿನ ಮತ್ತು ಕಾಳಿ ನದಿದಂಡೆಯ ಒಂದಿಂಚು ಜಾಗಕ್ಕೂ ಬಂಗಾರದ ಬೆಲೆ ಬಂದಿದೆ! ಟೂರಿಸಮ್‍ಗೆ ತೆಕ್ಕೆಹಾಕಿಕೊಂಡಿರುವ ಲ್ಯಾಂಡ್ ಲಫಡಾ, ಲಡಾಯಿ ದಾಂಡೇಲಿಯಲ್ಲಿ ನಿತ್ಯನೂತನ ಮುಂಬೈ-ಕೇರಳ-ಬೆಳಗಾವಿ-ಬೆಂಗಳೂರು ಮತ್ತು ಸ್ಥಳೀಯ ಭೂಭಾನ್ಗಡಿದಾರರು ಯಾರ್ಯಾರದೋ ಜಾಗ ಕಬಳಿಸಲು ಹೊಂಚುಹಾಕಿ ಕುಂತಿದ್ದಾರೆ. ಧೋಖಾ ಬಾಜಿಗಳ ಹಿಂದೆ ಸರ್ಕಾರಿ ಏಜೆನ್ಸಿಗಳು, ಕಾನೂನಿನ ಸಿಕ್ಕು ಬಿಡಿಸುವ ನ್ಯಾಯವಾದಿಗಳು, ಖಾಕಿಕಿರಾತಕರೆಲ್ಲ ಅಡಗಿಕೊಂಡಿದ್ದಾರೆ. ರೆಸಾರ್ಟ್ ಉದ್ಯಮಿಯಾಗಿ ಕೊಪ್ಪರಿಗೆ ಕಾಸು ಬಾಚುವ ದುರಾಸೆಯ ಪೈಪೋಟಿಯಿಂದ ದಾಂಡೇಲಿಯ ಪ್ರವಾಸೋದ್ಯಮಕ್ಕೆ ಈಗ ರಕ್ತದ ಕಲೆಯೂ ಅಂಟಿಬಿಟ್ಟಿದೆ!
ಕಳೆದ ಶುಕ್ರವಾರ, ಜುಲೈ 27ರ ರಾತ್ರಿ 9.30ರ ಹೊತ್ತಿಗೆ ಮುಸುಕುಧಾರಿ ಪಾತಕಿಯ ಮಚ್ಚಿನೇಟಿಗೆ ಹತರಾದ ದಾಂಡೇಲಿಯ ನಾಮಾಂಕಿತ ನ್ಯಾಯವಾದಿಯೂ, ಸಾಮಾಜಿಕ ಹೋರಾಟಗಾರರೂ ಆಗಿದ್ದ ಅಜಿತ್‍ನಾಯಕ್ ಬರ್ಬರ ಹತ್ಯೆ ಪ್ರಕರಣವೂ ಇದೇ ಪ್ರವಾಸೋದ್ಯಮ ನಂಟಿನ ಭೂ ಮಾಫಿಯಾದ ಭೀಭತ್ಸ ಕಾರ್ಯಾಚರಣೆ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಅಜಿತ್ ವಕೀಲಿಕೆಯಿಂದ ಭರ್ಜರಿ ದುಡ್ಡು-ಭೂಮಿ ಮಾಡಿಕೊಂಡಿದ್ದರು. ಸಣ್ಣ ಸೈಜಿನ ರಾಜಕಾರಣಿಯೂ ಆಗಿದ್ದರು. ದಾಂಡೇಲಿ ನಗರಸಭೆಯ ಅರ್ಯರೂ ಒಮ್ಮೆ ಆಗಿದ್ದರು. ಬ್ಲಾಕ್-ಕಾಂಗ್ರೆಸ್ ಕಮಿಟಿಯ ಅಧ್ಯಕ್ಷತೆ ನಿಭಾಯಿಸಿದ್ದರು; ಎಂಪಿಯಾಗಿದ್ದ ಮ್ಯಾಗಿ, ಸಿಎಂ ಆಗಿದ್ದ ‘ಬಂ’ ಬಾಂಧವ್ಯ ಅಜಿತ್‍ಗೆ ಇತ್ತು. ದಾಂಡೇಲಿಯ ಪರಿಸರ, ಸಾಮಾಜಿಕ ವ್ಯವಸ್ಥೆಗೆ ತೊಂದರೆಯಾದಾಗ ಆತ ಸೆಟೆದು ನಿಲ್ಲುತಿದ್ದರು. ಹೋರಾಟ ಕಟ್ಟೆ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ದಾಂಡೇಲಿ ತಾಲ್ಲೂಕು ಮಾಡಬೇಕೆಂದು ಸಂಘಟನೆ ಮಾಡಿ ಹೋರಾಟ ಅಜಿತ್‍ನಾಯಕ್ ರೂಪಿಸಿದ್ದರು. ಈಚೆಗೆ ದಾಂಡೇಲಿ ತಾಲ್ಲೂಕು ಘೋಷಣೆಯಾದಾಗ ಆತ ತುಂಬ ಖುಷಿಯಾಗಿದ್ದರು. ದಾಂಡೇಲಿಯ ಜೀವನದಿ ಕಾಳಿ ಬೆನ್ನಿವನ ಮೇಲೆ ಸಾಲಾಗಿ ಕಟ್ಟಲಾಗಿರುವ ಜಲವಿದ್ಯುತ್ ಡ್ಯಾಮ್‍ನಿಂದಾಗುವ ಡ್ಯಾಮೇಜ್ ಅರಿವಿನ ಕಾಳಿ ಬಚಾವ್ ಆಂದೋಲನದಲ್ಲಿ ಅಜಿತ್ ಸಕ್ರಿಯರಾಗಿದ್ದರು; ನದಿಯಿಂದ ಎತ್ತುವ ಮರಳು ಮಾಫಿಯಾ, ಕೈಗಾರಿಕಾ ಮಾಲಿನ್ಯ ಮಾಫಿಯಾದ ಕಣ್ಣುರಿಗೂ ಆತ ಕಾರಣರಾಗಿದ್ದರು. ಆದರೆ ಇದ್ಯಾವುದೂ ಆತನ ಕೊಂದೇ ಹಾಕುವಷ್ಟು ಸೇಡಿನ ಶತ್ರುಗಳನ್ನೇನೂ ಸೃಷ್ಟಿಸಿರಲಿಲ್ಲ. ಹಾಗಂತ ಆತ ಗÀುಣಸ್ವಭಾವ ಕಂಡಿರುವ ದಾಂಡೇಲಿಯ ಜನರು ಹೇಳುತ್ತಾರೆ.
ಹಾಗಿದ್ದರೆ ಅಜಿತ್‍ನಾಯಕ್‍ರ ಕೊಲೆ ಮಾಡುವಂಥ ಹಠದ ಜಿದ್ದಿನ ಹಿನೆÀ್ನಲೆ ಏನಿರಬಹುದು ಎಂದು ಉತ್ತರ ಕನ್ನಡದಲ್ಲಿ ಬಿರುಸಿನ ಚರ್ಚೆಗಳು ನಡೆದಿದೆ. ಪೊಲೀಸರು ಆತನ ವಕೀಲಿ ವೃತ್ತಿಗೆ ಸುತ್ತಿಕೊಂಡಿದ್ದ ಒಂದಿಷ್ಟು ಭೂಮಾಫಿಯಾ ವ್ಯವಹಾರಗಳತ್ತ ತನಿಖೆ ಕೇಂದ್ರೀಕರಿಸಿದ್ದಾರೆ. ಈಚೆಗೆ ಅಜಿತ್‍ನಾಯಕ್‍ಗೆ ಭೂಮಿಯ ಮೋಹ ವಿಪರೀತವಾಗಿತ್ತು. ಆತ ಹಲವು ಕಡೆ ಬೇನಾಮಿಯಾಗಿ ಭೂಖರೀದಿಯೂ ಮಾಡಿದ್ದರು. ರೆಸಾರ್ಟ್ ಬಿಸ್ನೆಸ್‍ನ ಸೆಳೆತಕ್ಕೆ ಬಿದ್ದಿದ್ದರಂತೆ. ಕಾಳಿನದಿ ತೀರದ ಮೌಳಂಗಿ ಎಂಬ ಮನಮೋಹಕ ಪ್ರದೇಶದ ಪ್ರೈಮ್ ಲ್ಯಾಂಡ್ ಮೇಲೆ ಅಜಿತ್ ಕಣ್ಣು ಬಿದ್ದಿತ್ತಂತೆ. ಇದೇ ಆತನಿಗೆ ಗಂಡಾಂತರಕಾರಿ ಆಯ್ತೆಂಬ ಕಾರಾರುವಾಕ್ಕಾದ ಲೆಕ್ಕಾಚಾರದ ಮಾತುಗಳೀಗ ದಾಂಡೇಲಿಯಲ್ಲಿ ಮೊಳಗಲಾರಂಭಿಸಿದೆ!
ಒಂದು ಸುದ್ದಿಯಂತೆ ಮೌಳಂಗಿಯ ಎರಡು ದಲಿತ ಕುಟುಂಬದ ಮಧ್ಯೆ ಭೂವ್ಯಾಜ್ಯ ನಡೆದಿತ್ತು. ಒಂದು ಕಡೆ ವಕೀಲರಾಗಿ ಅಜಿತ್‍ನಾಯಕ್ ನಿಂತಿದ್ದರು. ಎದುರಾಳಿ ತಂಡದ ಪಾಂಡುರಂಗ ಕಾಂಬಳೆಗೆ ಬಲಾಢ್ಯ ಭೂಮಾಫಿಯಾದ ನಂಟಿತ್ತು. ಕಾಂಬಳೆಯ ಜಾಗವನ್ನು ಎದುರುದಾರರು ಕಬ್ಜಾ ಮಾಡಿಕೊಂಡಿದ್ದರು. ಇದು ಘನಘೋರ ಕಾಳಗಕ್ಕೂ ಕಾರಣವಾಗಿಹೋಯ್ತು. ಆಗ ಅಜಿತ್ ನಾಯಕ್ ಮುತುವರ್ಜಿಯಲ್ಲಿ ಸರ್ವೇಯೂ ನಡೆಯಿತು. ತಾವೇ ಖುದ್ದು ನಿಂತು ಮೋಜುಣಿ ಮಾಡಿಸಿದ್ದರಂತೆ. ದೀಪಕ್ ಯಾನೆ ಪಾಂಡುರಂಗ ಕಾಂಬಳೆಯವರ ವಿರುದ್ಧ ಪೊಲೀಸ್ ಕಂಪ್ಲೇಂಟೂ ಆಗಿತ್ತು. ಪೊಲೀಸರು ಅಜಿತ್‍ನಾಯಕ್‍ರ ಪ್ರಭಾವದಿಂದ ಎದುರಾಳಿಗಳನ್ನು ಸತಾಯಿಸಿದ್ದರು. ಅಷ್ಟೇ ಅಲ್ಲ, ಕೆರಳಿದ ಕಾಂಬಳೆ ಪಾಳಯವು ಅಜಿತ್‍ನಾಯಕ್‍ರ ಕಕ್ಷಿದಾರನ ಜಾಗಕ್ಕೆ ಮಾರಕಾಸ್ತ್ರಗಳ ಸಮೇತ ಲಗ್ಗೆಹಾಕಿ ಧಮಕಿ ಹಾಕಿತ್ತು. ಒಂದೆಡೆ ತಗಾದೆ ನ್ಯಾಯಾಲಯ ಮೆಟ್ಟಿಲೇರಿದರೆ, ಮತ್ತೊಂದೆಡೆ ಆರೋಪಿಗಳಿಗೆ ಪೊಲೀಸರು ಜೈಲಿಗೆ ಹಾಕಿ ಬೆಂಡೆತ್ತಿದ್ದರು. ಇದಕ್ಕೆಲ್ಲ ವಕೀಲ ಅಜಿತ್‍ನಾಯಕ್ ಚಿತಾವಣಿಯೇ ಕಾರಣವೆಂಬ ಸಿಟ್ಟು ಕಾಂಬಳೆ ಕುಟುಂಬಕ್ಕಿತ್ತು. ಕೆರಳಿ ಬುಸುಗುಡುತ್ತಿದ್ದ ಕಾಂಬಳೆ ತಂಡ ಅಜಿತ್‍ನಾಯಕ್‍ಗೆ ಬೆದರಿಕೆ ಫೋನ್ ಕರೆಗಳನ್ನು ಆಗಾಗ ಮಾಡುತ್ತಲೇ ಇತ್ತು.
ಇದನ್ನು ಅಜಿತ್ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ ಈಗ ದಾಂಡೇಲಿಯಲ್ಲಿರುವ ಪುಕಾರುಗಳ ಪ್ರಕಾರ ತುಂಬ ಬೆಲೆಬಾಳುವ ಮಹತ್ವದ ಟೂರಿಸಮ್ ಸೈಟಾಗಿದ್ದ ಮೌಳಂಗಿಯ ಜಾಗದಲ್ಲಿ ಬೇನಾಮಿ ರೆಸಾರ್ಟ್ ಮಾಡುವ ಸ್ಕೆಚ್ ಹಾಕಿದ್ದ ಅಜಿತ್‍ನಾಯಕ್ ತುಂಬ ವ್ಯವಸ್ಥಿತವಾಗಿ ಎದುರಾಳಿಗಳ ಹಣಿಯಲು ಹತ್ತಿದ್ದರು. ಆದರೆ ಇದೇ ಜಾಗಕ್ಕಾಗಿ ಬಲಾಢ್ಯ ಭೂಮಾಫಿಯಾ ಒಂದು ಪ್ರಯತ್ನ ನಡೆಸಿ ಮತ್ತೊಂದು ದಲಿತÀ ಕುಟುಂಬದ ಬೆನ್ನಿಗೆ ನಿಂತಿತ್ತು. ಮೌಳಂಗಿಯಲ್ಲಿ ಈಕೋ ಪಾರ್ಕ್ ಆದ ಬಳಿಕ ವಿವಾದಿತ ಜಾಗದ ಕಿಮ್ಮತ್ತು ಜಾಸ್ತಿಯಾಗಿತ್ತು; ಅಜಿತ್ ನಾಯಕ್ ಕೂಡಾ ಸದ್ರಿ ಜಾಗದ ಬಗ್ಗೆ `ವಿಶೇಷ’ ಆಸಕ್ತಿ ವಹಿಸಿದ್ದರು. ಇದು ಪಾಂಡುರಂಗ ಕಾಂಬಳೆಯ ಆಕ್ರೋಶ ಹೆಚ್ಚಿಸಿತ್ತು. ಈ ದ್ವೇಷ ಒಳಗೊಳಗೇ ಹೊಗೆಯಾಡುತ್ತಲೇ ಇತ್ತು. ಅಜಿತ್‍ನಾಯಕ್‍ರ ಕಾನೂನು ತಂತ್ರಗಾರಿಕೆ, ಖಾಕಿಗಳ ಮೇಲಿನ ಹಿಡಿತದಿಂದ ಎದುರಾಳಿ ತಂಡ ಹೈರಾಣಾಗಿಹೋಗಿತ್ತು. ಇದು ಕೊಲೆಗೂ ಪ್ರೇರೇಪಿಸಿತೆಂಬ ತರ್ಕ ನಡೆದಿದೆ. ಇದು ಜನಸಾಮಾನ್ಯರದ್ದಷ್ಟೇ ಅಲ್ಲ, ಪೊಲೀಸರ ತಲೆಯೂ ತಿನ್ನುತ್ತಿದೆ.
ಹಂತಕರು ಹಲವು ದಿನಗಳಿಂದ ಅಜಿತ್‍ನಾಯಕ್ ಚಲನವಲನ, ಚಟುವಟಿಕೆ ಮೇಲೆ ನಿಗಾಯಿಟ್ಟು ನೋಡಿದ್ದಾರೆ. ಆತ ಅಂದು ರಾತ್ರಿ ದಾಂಡೇಲಿಯ ಜೆಎನ್ ರಸ್ತೆಯಲ್ಲಿರುವ ಕಚೇರಿಯಿಂದ ಹೊರಬರುವುದನ್ನೇ ಕಾದು ಕುಳಿತಿದ್ದಾರೆ. ಒಬ್ಬರೇ ಬರುವುದು ಖಾತ್ರಿಯಾಗಿದೆ. ಆತ ಕಾರಿನ ಬಳಿ ಹೋಗುವಾಗ ಮಚ್ಚಿನಿಂದ ತಲೆಗೆ ಹೊಡೆದಿದ್ದಾರೆ. ತಲೆಯ ಎಡಭಾಗ ಸೀಳಿಹೋಗಿದೆ. ಕಿವಿಯೂ ಚಿಂದಿಯಾಗಿದೆ. ಕೊಚ್ಚಿದ ರಭಸಕ್ಕೆ ಅಜಿತ್ ನಿಂತಲ್ಲೇ ಕುಸಿದು ರಕ್ತದ ಮಡುವಲ್ಲಿ ಒದ್ದಾಡಿ ಜೀವ ಬಿಟ್ಟಿದ್ದಾರೆ. ಕತ್ತಲಲ್ಲಿ ಹಂತಕ ಕರಗಿಹೋಗಿದ್ದಾನೆ. ಪೊಲೀಸರು ಈ ಲ್ಯಾಂಡ್ ಪ್ರಕರಣದತ್ತಲೇ ತನಿಖೆ ನಡೆಸಿದ್ದಾರೆ. ಹಂತಕನನ್ನು ಬಂಧಿಸಲಾಗಿದೆ ಎಂಬ ಅನಧಿಕೃತ ಸುದ್ದಿಯೂ ಹಬ್ಬಿದೆ ಯಲ್ಲಾಪುರದಲ್ಲಿ ಸೆರೆಸಿಕ್ಕಿರುವ ಹಂತಕ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾನಂತೆ!
ಆತ ಅಸ್ತ್ರವಷ್ಟೇ! ಬಳಸಿದ್ದು ಯಾರೆಂಬುದು ಬಹಿರಂಗವಾಗಬೇಕಾಗಿದೆ. ಒಂದಂತೂ ಖರೆ; ಅಜಿತ್‍ನಾಯಕ್ ಕೋಲೆ ದಾಂಡೇಲಿ ಭಾಗದ ರೆಸಾರ್ಟ್ ದಂಧೆಯ ಅನಾಹುತಕಾರಿ ಆಯಾಮ ತೋರಿಸಿದೆ!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನಾಸಿಕ್‌ನ...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...