Homeಮುಖಪುಟಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

ಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

- Advertisement -
- Advertisement -

ಉತ್ತರ ಕನ್ನಡದ ಒಂದು ಕಾಲದ ಕೈಗಾರಿಕಾ ನಗರ ದಾಂಡೇಲಿ ಭೂಮಾಫಿಯಾದ ಆಡಂಬೋಲದಂತಾಗಿ ಹೋಗಿದೆ! ದೈತ್ಯ ರಾಜಕಾರಣಿ ದೇಶಪಾಂಡೆ ದೊಡ್ಡ ಕೈಗಾರಿಕೆಗಳ ಪ್ರಭಾವಿ ಮಂತ್ರಿ ಮಾಂಡಲೀಕನಾಗಿದ್ದಾಗಲೇ ಇಲ್ಲಿಯ ಒಂದೊಂದೇ ಕಾರ್ಖಾನೆಗಳು ಬಾಗಿಲು ಎಳೆದುಕೊಂಡಿರುವುದು ಇವತ್ತಿಗೂ ಬಿಡಿಸಲಾಗದ ಒಗಟಾಗೇ ಉಳಿದಿದೆ. ಈಗೇನಿದ್ದರೂ ದಾಂಡೇಲಿಯಲ್ಲಿ ಪ್ರವಾಸೋದ್ಯಮ “ದಂಧೆ”ಯ ಭಯಾನಕ ಭರಾಟೆ! ದಾಂಡೇಲಿ ಜೋಯಿಡಾದ ನಿತ್ಯಹರಿದ್ವರ್ಣ ಕಾಡಿನ ನೀರವತೆ ಮೃಗ-ಪಕ್ಷಿಗಳ ಕೂಗು-ಕಲರವ, ಕಾಳಿ-ಪಾಂಡರಿ ನದಿಗಳ ನಿನಾದ ತಂಡೋಪತಂಡವಾಗಿ ಪ್ರವಾಸಿಗರನ್ನ ಸೆಳೆಯುತ್ತಿದೆ. ಒಂದು ವಾರಕ್ಕೆ ಹಲವು ಕೋಟಿ ವಹಿವಾಟು ಆಗುತ್ತಿದೆ.
ದಾಂಡೇಲಿ-ಜೋಯಿಡಾದ ಸುತ್ತಲೂ ರೆಸಾರ್ಟ್, ಹೋಮ್‍ಸ್ಟೇಗಳದೇ ಹಾವಳಿ. ಪ್ರವಾಸೋದ್ಯಮದ ಮೋಜು-ಮಸ್ತಿ ಭೂ ಮಾಫಿಯಾ ನಿಭಾಯಿಸುತ್ತಿದೆ. ಹೀಗಾಗಿ ದಾಂಡೇಲಿಯ ಕಾಡಿನ ಅಂಚಿನ ಮತ್ತು ಕಾಳಿ ನದಿದಂಡೆಯ ಒಂದಿಂಚು ಜಾಗಕ್ಕೂ ಬಂಗಾರದ ಬೆಲೆ ಬಂದಿದೆ! ಟೂರಿಸಮ್‍ಗೆ ತೆಕ್ಕೆಹಾಕಿಕೊಂಡಿರುವ ಲ್ಯಾಂಡ್ ಲಫಡಾ, ಲಡಾಯಿ ದಾಂಡೇಲಿಯಲ್ಲಿ ನಿತ್ಯನೂತನ ಮುಂಬೈ-ಕೇರಳ-ಬೆಳಗಾವಿ-ಬೆಂಗಳೂರು ಮತ್ತು ಸ್ಥಳೀಯ ಭೂಭಾನ್ಗಡಿದಾರರು ಯಾರ್ಯಾರದೋ ಜಾಗ ಕಬಳಿಸಲು ಹೊಂಚುಹಾಕಿ ಕುಂತಿದ್ದಾರೆ. ಧೋಖಾ ಬಾಜಿಗಳ ಹಿಂದೆ ಸರ್ಕಾರಿ ಏಜೆನ್ಸಿಗಳು, ಕಾನೂನಿನ ಸಿಕ್ಕು ಬಿಡಿಸುವ ನ್ಯಾಯವಾದಿಗಳು, ಖಾಕಿಕಿರಾತಕರೆಲ್ಲ ಅಡಗಿಕೊಂಡಿದ್ದಾರೆ. ರೆಸಾರ್ಟ್ ಉದ್ಯಮಿಯಾಗಿ ಕೊಪ್ಪರಿಗೆ ಕಾಸು ಬಾಚುವ ದುರಾಸೆಯ ಪೈಪೋಟಿಯಿಂದ ದಾಂಡೇಲಿಯ ಪ್ರವಾಸೋದ್ಯಮಕ್ಕೆ ಈಗ ರಕ್ತದ ಕಲೆಯೂ ಅಂಟಿಬಿಟ್ಟಿದೆ!
ಕಳೆದ ಶುಕ್ರವಾರ, ಜುಲೈ 27ರ ರಾತ್ರಿ 9.30ರ ಹೊತ್ತಿಗೆ ಮುಸುಕುಧಾರಿ ಪಾತಕಿಯ ಮಚ್ಚಿನೇಟಿಗೆ ಹತರಾದ ದಾಂಡೇಲಿಯ ನಾಮಾಂಕಿತ ನ್ಯಾಯವಾದಿಯೂ, ಸಾಮಾಜಿಕ ಹೋರಾಟಗಾರರೂ ಆಗಿದ್ದ ಅಜಿತ್‍ನಾಯಕ್ ಬರ್ಬರ ಹತ್ಯೆ ಪ್ರಕರಣವೂ ಇದೇ ಪ್ರವಾಸೋದ್ಯಮ ನಂಟಿನ ಭೂ ಮಾಫಿಯಾದ ಭೀಭತ್ಸ ಕಾರ್ಯಾಚರಣೆ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಅಜಿತ್ ವಕೀಲಿಕೆಯಿಂದ ಭರ್ಜರಿ ದುಡ್ಡು-ಭೂಮಿ ಮಾಡಿಕೊಂಡಿದ್ದರು. ಸಣ್ಣ ಸೈಜಿನ ರಾಜಕಾರಣಿಯೂ ಆಗಿದ್ದರು. ದಾಂಡೇಲಿ ನಗರಸಭೆಯ ಅರ್ಯರೂ ಒಮ್ಮೆ ಆಗಿದ್ದರು. ಬ್ಲಾಕ್-ಕಾಂಗ್ರೆಸ್ ಕಮಿಟಿಯ ಅಧ್ಯಕ್ಷತೆ ನಿಭಾಯಿಸಿದ್ದರು; ಎಂಪಿಯಾಗಿದ್ದ ಮ್ಯಾಗಿ, ಸಿಎಂ ಆಗಿದ್ದ ‘ಬಂ’ ಬಾಂಧವ್ಯ ಅಜಿತ್‍ಗೆ ಇತ್ತು. ದಾಂಡೇಲಿಯ ಪರಿಸರ, ಸಾಮಾಜಿಕ ವ್ಯವಸ್ಥೆಗೆ ತೊಂದರೆಯಾದಾಗ ಆತ ಸೆಟೆದು ನಿಲ್ಲುತಿದ್ದರು. ಹೋರಾಟ ಕಟ್ಟೆ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ದಾಂಡೇಲಿ ತಾಲ್ಲೂಕು ಮಾಡಬೇಕೆಂದು ಸಂಘಟನೆ ಮಾಡಿ ಹೋರಾಟ ಅಜಿತ್‍ನಾಯಕ್ ರೂಪಿಸಿದ್ದರು. ಈಚೆಗೆ ದಾಂಡೇಲಿ ತಾಲ್ಲೂಕು ಘೋಷಣೆಯಾದಾಗ ಆತ ತುಂಬ ಖುಷಿಯಾಗಿದ್ದರು. ದಾಂಡೇಲಿಯ ಜೀವನದಿ ಕಾಳಿ ಬೆನ್ನಿವನ ಮೇಲೆ ಸಾಲಾಗಿ ಕಟ್ಟಲಾಗಿರುವ ಜಲವಿದ್ಯುತ್ ಡ್ಯಾಮ್‍ನಿಂದಾಗುವ ಡ್ಯಾಮೇಜ್ ಅರಿವಿನ ಕಾಳಿ ಬಚಾವ್ ಆಂದೋಲನದಲ್ಲಿ ಅಜಿತ್ ಸಕ್ರಿಯರಾಗಿದ್ದರು; ನದಿಯಿಂದ ಎತ್ತುವ ಮರಳು ಮಾಫಿಯಾ, ಕೈಗಾರಿಕಾ ಮಾಲಿನ್ಯ ಮಾಫಿಯಾದ ಕಣ್ಣುರಿಗೂ ಆತ ಕಾರಣರಾಗಿದ್ದರು. ಆದರೆ ಇದ್ಯಾವುದೂ ಆತನ ಕೊಂದೇ ಹಾಕುವಷ್ಟು ಸೇಡಿನ ಶತ್ರುಗಳನ್ನೇನೂ ಸೃಷ್ಟಿಸಿರಲಿಲ್ಲ. ಹಾಗಂತ ಆತ ಗÀುಣಸ್ವಭಾವ ಕಂಡಿರುವ ದಾಂಡೇಲಿಯ ಜನರು ಹೇಳುತ್ತಾರೆ.
ಹಾಗಿದ್ದರೆ ಅಜಿತ್‍ನಾಯಕ್‍ರ ಕೊಲೆ ಮಾಡುವಂಥ ಹಠದ ಜಿದ್ದಿನ ಹಿನೆÀ್ನಲೆ ಏನಿರಬಹುದು ಎಂದು ಉತ್ತರ ಕನ್ನಡದಲ್ಲಿ ಬಿರುಸಿನ ಚರ್ಚೆಗಳು ನಡೆದಿದೆ. ಪೊಲೀಸರು ಆತನ ವಕೀಲಿ ವೃತ್ತಿಗೆ ಸುತ್ತಿಕೊಂಡಿದ್ದ ಒಂದಿಷ್ಟು ಭೂಮಾಫಿಯಾ ವ್ಯವಹಾರಗಳತ್ತ ತನಿಖೆ ಕೇಂದ್ರೀಕರಿಸಿದ್ದಾರೆ. ಈಚೆಗೆ ಅಜಿತ್‍ನಾಯಕ್‍ಗೆ ಭೂಮಿಯ ಮೋಹ ವಿಪರೀತವಾಗಿತ್ತು. ಆತ ಹಲವು ಕಡೆ ಬೇನಾಮಿಯಾಗಿ ಭೂಖರೀದಿಯೂ ಮಾಡಿದ್ದರು. ರೆಸಾರ್ಟ್ ಬಿಸ್ನೆಸ್‍ನ ಸೆಳೆತಕ್ಕೆ ಬಿದ್ದಿದ್ದರಂತೆ. ಕಾಳಿನದಿ ತೀರದ ಮೌಳಂಗಿ ಎಂಬ ಮನಮೋಹಕ ಪ್ರದೇಶದ ಪ್ರೈಮ್ ಲ್ಯಾಂಡ್ ಮೇಲೆ ಅಜಿತ್ ಕಣ್ಣು ಬಿದ್ದಿತ್ತಂತೆ. ಇದೇ ಆತನಿಗೆ ಗಂಡಾಂತರಕಾರಿ ಆಯ್ತೆಂಬ ಕಾರಾರುವಾಕ್ಕಾದ ಲೆಕ್ಕಾಚಾರದ ಮಾತುಗಳೀಗ ದಾಂಡೇಲಿಯಲ್ಲಿ ಮೊಳಗಲಾರಂಭಿಸಿದೆ!
ಒಂದು ಸುದ್ದಿಯಂತೆ ಮೌಳಂಗಿಯ ಎರಡು ದಲಿತ ಕುಟುಂಬದ ಮಧ್ಯೆ ಭೂವ್ಯಾಜ್ಯ ನಡೆದಿತ್ತು. ಒಂದು ಕಡೆ ವಕೀಲರಾಗಿ ಅಜಿತ್‍ನಾಯಕ್ ನಿಂತಿದ್ದರು. ಎದುರಾಳಿ ತಂಡದ ಪಾಂಡುರಂಗ ಕಾಂಬಳೆಗೆ ಬಲಾಢ್ಯ ಭೂಮಾಫಿಯಾದ ನಂಟಿತ್ತು. ಕಾಂಬಳೆಯ ಜಾಗವನ್ನು ಎದುರುದಾರರು ಕಬ್ಜಾ ಮಾಡಿಕೊಂಡಿದ್ದರು. ಇದು ಘನಘೋರ ಕಾಳಗಕ್ಕೂ ಕಾರಣವಾಗಿಹೋಯ್ತು. ಆಗ ಅಜಿತ್ ನಾಯಕ್ ಮುತುವರ್ಜಿಯಲ್ಲಿ ಸರ್ವೇಯೂ ನಡೆಯಿತು. ತಾವೇ ಖುದ್ದು ನಿಂತು ಮೋಜುಣಿ ಮಾಡಿಸಿದ್ದರಂತೆ. ದೀಪಕ್ ಯಾನೆ ಪಾಂಡುರಂಗ ಕಾಂಬಳೆಯವರ ವಿರುದ್ಧ ಪೊಲೀಸ್ ಕಂಪ್ಲೇಂಟೂ ಆಗಿತ್ತು. ಪೊಲೀಸರು ಅಜಿತ್‍ನಾಯಕ್‍ರ ಪ್ರಭಾವದಿಂದ ಎದುರಾಳಿಗಳನ್ನು ಸತಾಯಿಸಿದ್ದರು. ಅಷ್ಟೇ ಅಲ್ಲ, ಕೆರಳಿದ ಕಾಂಬಳೆ ಪಾಳಯವು ಅಜಿತ್‍ನಾಯಕ್‍ರ ಕಕ್ಷಿದಾರನ ಜಾಗಕ್ಕೆ ಮಾರಕಾಸ್ತ್ರಗಳ ಸಮೇತ ಲಗ್ಗೆಹಾಕಿ ಧಮಕಿ ಹಾಕಿತ್ತು. ಒಂದೆಡೆ ತಗಾದೆ ನ್ಯಾಯಾಲಯ ಮೆಟ್ಟಿಲೇರಿದರೆ, ಮತ್ತೊಂದೆಡೆ ಆರೋಪಿಗಳಿಗೆ ಪೊಲೀಸರು ಜೈಲಿಗೆ ಹಾಕಿ ಬೆಂಡೆತ್ತಿದ್ದರು. ಇದಕ್ಕೆಲ್ಲ ವಕೀಲ ಅಜಿತ್‍ನಾಯಕ್ ಚಿತಾವಣಿಯೇ ಕಾರಣವೆಂಬ ಸಿಟ್ಟು ಕಾಂಬಳೆ ಕುಟುಂಬಕ್ಕಿತ್ತು. ಕೆರಳಿ ಬುಸುಗುಡುತ್ತಿದ್ದ ಕಾಂಬಳೆ ತಂಡ ಅಜಿತ್‍ನಾಯಕ್‍ಗೆ ಬೆದರಿಕೆ ಫೋನ್ ಕರೆಗಳನ್ನು ಆಗಾಗ ಮಾಡುತ್ತಲೇ ಇತ್ತು.
ಇದನ್ನು ಅಜಿತ್ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ ಈಗ ದಾಂಡೇಲಿಯಲ್ಲಿರುವ ಪುಕಾರುಗಳ ಪ್ರಕಾರ ತುಂಬ ಬೆಲೆಬಾಳುವ ಮಹತ್ವದ ಟೂರಿಸಮ್ ಸೈಟಾಗಿದ್ದ ಮೌಳಂಗಿಯ ಜಾಗದಲ್ಲಿ ಬೇನಾಮಿ ರೆಸಾರ್ಟ್ ಮಾಡುವ ಸ್ಕೆಚ್ ಹಾಕಿದ್ದ ಅಜಿತ್‍ನಾಯಕ್ ತುಂಬ ವ್ಯವಸ್ಥಿತವಾಗಿ ಎದುರಾಳಿಗಳ ಹಣಿಯಲು ಹತ್ತಿದ್ದರು. ಆದರೆ ಇದೇ ಜಾಗಕ್ಕಾಗಿ ಬಲಾಢ್ಯ ಭೂಮಾಫಿಯಾ ಒಂದು ಪ್ರಯತ್ನ ನಡೆಸಿ ಮತ್ತೊಂದು ದಲಿತÀ ಕುಟುಂಬದ ಬೆನ್ನಿಗೆ ನಿಂತಿತ್ತು. ಮೌಳಂಗಿಯಲ್ಲಿ ಈಕೋ ಪಾರ್ಕ್ ಆದ ಬಳಿಕ ವಿವಾದಿತ ಜಾಗದ ಕಿಮ್ಮತ್ತು ಜಾಸ್ತಿಯಾಗಿತ್ತು; ಅಜಿತ್ ನಾಯಕ್ ಕೂಡಾ ಸದ್ರಿ ಜಾಗದ ಬಗ್ಗೆ `ವಿಶೇಷ’ ಆಸಕ್ತಿ ವಹಿಸಿದ್ದರು. ಇದು ಪಾಂಡುರಂಗ ಕಾಂಬಳೆಯ ಆಕ್ರೋಶ ಹೆಚ್ಚಿಸಿತ್ತು. ಈ ದ್ವೇಷ ಒಳಗೊಳಗೇ ಹೊಗೆಯಾಡುತ್ತಲೇ ಇತ್ತು. ಅಜಿತ್‍ನಾಯಕ್‍ರ ಕಾನೂನು ತಂತ್ರಗಾರಿಕೆ, ಖಾಕಿಗಳ ಮೇಲಿನ ಹಿಡಿತದಿಂದ ಎದುರಾಳಿ ತಂಡ ಹೈರಾಣಾಗಿಹೋಗಿತ್ತು. ಇದು ಕೊಲೆಗೂ ಪ್ರೇರೇಪಿಸಿತೆಂಬ ತರ್ಕ ನಡೆದಿದೆ. ಇದು ಜನಸಾಮಾನ್ಯರದ್ದಷ್ಟೇ ಅಲ್ಲ, ಪೊಲೀಸರ ತಲೆಯೂ ತಿನ್ನುತ್ತಿದೆ.
ಹಂತಕರು ಹಲವು ದಿನಗಳಿಂದ ಅಜಿತ್‍ನಾಯಕ್ ಚಲನವಲನ, ಚಟುವಟಿಕೆ ಮೇಲೆ ನಿಗಾಯಿಟ್ಟು ನೋಡಿದ್ದಾರೆ. ಆತ ಅಂದು ರಾತ್ರಿ ದಾಂಡೇಲಿಯ ಜೆಎನ್ ರಸ್ತೆಯಲ್ಲಿರುವ ಕಚೇರಿಯಿಂದ ಹೊರಬರುವುದನ್ನೇ ಕಾದು ಕುಳಿತಿದ್ದಾರೆ. ಒಬ್ಬರೇ ಬರುವುದು ಖಾತ್ರಿಯಾಗಿದೆ. ಆತ ಕಾರಿನ ಬಳಿ ಹೋಗುವಾಗ ಮಚ್ಚಿನಿಂದ ತಲೆಗೆ ಹೊಡೆದಿದ್ದಾರೆ. ತಲೆಯ ಎಡಭಾಗ ಸೀಳಿಹೋಗಿದೆ. ಕಿವಿಯೂ ಚಿಂದಿಯಾಗಿದೆ. ಕೊಚ್ಚಿದ ರಭಸಕ್ಕೆ ಅಜಿತ್ ನಿಂತಲ್ಲೇ ಕುಸಿದು ರಕ್ತದ ಮಡುವಲ್ಲಿ ಒದ್ದಾಡಿ ಜೀವ ಬಿಟ್ಟಿದ್ದಾರೆ. ಕತ್ತಲಲ್ಲಿ ಹಂತಕ ಕರಗಿಹೋಗಿದ್ದಾನೆ. ಪೊಲೀಸರು ಈ ಲ್ಯಾಂಡ್ ಪ್ರಕರಣದತ್ತಲೇ ತನಿಖೆ ನಡೆಸಿದ್ದಾರೆ. ಹಂತಕನನ್ನು ಬಂಧಿಸಲಾಗಿದೆ ಎಂಬ ಅನಧಿಕೃತ ಸುದ್ದಿಯೂ ಹಬ್ಬಿದೆ ಯಲ್ಲಾಪುರದಲ್ಲಿ ಸೆರೆಸಿಕ್ಕಿರುವ ಹಂತಕ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾನಂತೆ!
ಆತ ಅಸ್ತ್ರವಷ್ಟೇ! ಬಳಸಿದ್ದು ಯಾರೆಂಬುದು ಬಹಿರಂಗವಾಗಬೇಕಾಗಿದೆ. ಒಂದಂತೂ ಖರೆ; ಅಜಿತ್‍ನಾಯಕ್ ಕೋಲೆ ದಾಂಡೇಲಿ ಭಾಗದ ರೆಸಾರ್ಟ್ ದಂಧೆಯ ಅನಾಹುತಕಾರಿ ಆಯಾಮ ತೋರಿಸಿದೆ!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...