Homeಮುಖಪುಟಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

ಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

- Advertisement -
- Advertisement -

ಉತ್ತರ ಕನ್ನಡದ ಒಂದು ಕಾಲದ ಕೈಗಾರಿಕಾ ನಗರ ದಾಂಡೇಲಿ ಭೂಮಾಫಿಯಾದ ಆಡಂಬೋಲದಂತಾಗಿ ಹೋಗಿದೆ! ದೈತ್ಯ ರಾಜಕಾರಣಿ ದೇಶಪಾಂಡೆ ದೊಡ್ಡ ಕೈಗಾರಿಕೆಗಳ ಪ್ರಭಾವಿ ಮಂತ್ರಿ ಮಾಂಡಲೀಕನಾಗಿದ್ದಾಗಲೇ ಇಲ್ಲಿಯ ಒಂದೊಂದೇ ಕಾರ್ಖಾನೆಗಳು ಬಾಗಿಲು ಎಳೆದುಕೊಂಡಿರುವುದು ಇವತ್ತಿಗೂ ಬಿಡಿಸಲಾಗದ ಒಗಟಾಗೇ ಉಳಿದಿದೆ. ಈಗೇನಿದ್ದರೂ ದಾಂಡೇಲಿಯಲ್ಲಿ ಪ್ರವಾಸೋದ್ಯಮ “ದಂಧೆ”ಯ ಭಯಾನಕ ಭರಾಟೆ! ದಾಂಡೇಲಿ ಜೋಯಿಡಾದ ನಿತ್ಯಹರಿದ್ವರ್ಣ ಕಾಡಿನ ನೀರವತೆ ಮೃಗ-ಪಕ್ಷಿಗಳ ಕೂಗು-ಕಲರವ, ಕಾಳಿ-ಪಾಂಡರಿ ನದಿಗಳ ನಿನಾದ ತಂಡೋಪತಂಡವಾಗಿ ಪ್ರವಾಸಿಗರನ್ನ ಸೆಳೆಯುತ್ತಿದೆ. ಒಂದು ವಾರಕ್ಕೆ ಹಲವು ಕೋಟಿ ವಹಿವಾಟು ಆಗುತ್ತಿದೆ.
ದಾಂಡೇಲಿ-ಜೋಯಿಡಾದ ಸುತ್ತಲೂ ರೆಸಾರ್ಟ್, ಹೋಮ್‍ಸ್ಟೇಗಳದೇ ಹಾವಳಿ. ಪ್ರವಾಸೋದ್ಯಮದ ಮೋಜು-ಮಸ್ತಿ ಭೂ ಮಾಫಿಯಾ ನಿಭಾಯಿಸುತ್ತಿದೆ. ಹೀಗಾಗಿ ದಾಂಡೇಲಿಯ ಕಾಡಿನ ಅಂಚಿನ ಮತ್ತು ಕಾಳಿ ನದಿದಂಡೆಯ ಒಂದಿಂಚು ಜಾಗಕ್ಕೂ ಬಂಗಾರದ ಬೆಲೆ ಬಂದಿದೆ! ಟೂರಿಸಮ್‍ಗೆ ತೆಕ್ಕೆಹಾಕಿಕೊಂಡಿರುವ ಲ್ಯಾಂಡ್ ಲಫಡಾ, ಲಡಾಯಿ ದಾಂಡೇಲಿಯಲ್ಲಿ ನಿತ್ಯನೂತನ ಮುಂಬೈ-ಕೇರಳ-ಬೆಳಗಾವಿ-ಬೆಂಗಳೂರು ಮತ್ತು ಸ್ಥಳೀಯ ಭೂಭಾನ್ಗಡಿದಾರರು ಯಾರ್ಯಾರದೋ ಜಾಗ ಕಬಳಿಸಲು ಹೊಂಚುಹಾಕಿ ಕುಂತಿದ್ದಾರೆ. ಧೋಖಾ ಬಾಜಿಗಳ ಹಿಂದೆ ಸರ್ಕಾರಿ ಏಜೆನ್ಸಿಗಳು, ಕಾನೂನಿನ ಸಿಕ್ಕು ಬಿಡಿಸುವ ನ್ಯಾಯವಾದಿಗಳು, ಖಾಕಿಕಿರಾತಕರೆಲ್ಲ ಅಡಗಿಕೊಂಡಿದ್ದಾರೆ. ರೆಸಾರ್ಟ್ ಉದ್ಯಮಿಯಾಗಿ ಕೊಪ್ಪರಿಗೆ ಕಾಸು ಬಾಚುವ ದುರಾಸೆಯ ಪೈಪೋಟಿಯಿಂದ ದಾಂಡೇಲಿಯ ಪ್ರವಾಸೋದ್ಯಮಕ್ಕೆ ಈಗ ರಕ್ತದ ಕಲೆಯೂ ಅಂಟಿಬಿಟ್ಟಿದೆ!
ಕಳೆದ ಶುಕ್ರವಾರ, ಜುಲೈ 27ರ ರಾತ್ರಿ 9.30ರ ಹೊತ್ತಿಗೆ ಮುಸುಕುಧಾರಿ ಪಾತಕಿಯ ಮಚ್ಚಿನೇಟಿಗೆ ಹತರಾದ ದಾಂಡೇಲಿಯ ನಾಮಾಂಕಿತ ನ್ಯಾಯವಾದಿಯೂ, ಸಾಮಾಜಿಕ ಹೋರಾಟಗಾರರೂ ಆಗಿದ್ದ ಅಜಿತ್‍ನಾಯಕ್ ಬರ್ಬರ ಹತ್ಯೆ ಪ್ರಕರಣವೂ ಇದೇ ಪ್ರವಾಸೋದ್ಯಮ ನಂಟಿನ ಭೂ ಮಾಫಿಯಾದ ಭೀಭತ್ಸ ಕಾರ್ಯಾಚರಣೆ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಅಜಿತ್ ವಕೀಲಿಕೆಯಿಂದ ಭರ್ಜರಿ ದುಡ್ಡು-ಭೂಮಿ ಮಾಡಿಕೊಂಡಿದ್ದರು. ಸಣ್ಣ ಸೈಜಿನ ರಾಜಕಾರಣಿಯೂ ಆಗಿದ್ದರು. ದಾಂಡೇಲಿ ನಗರಸಭೆಯ ಅರ್ಯರೂ ಒಮ್ಮೆ ಆಗಿದ್ದರು. ಬ್ಲಾಕ್-ಕಾಂಗ್ರೆಸ್ ಕಮಿಟಿಯ ಅಧ್ಯಕ್ಷತೆ ನಿಭಾಯಿಸಿದ್ದರು; ಎಂಪಿಯಾಗಿದ್ದ ಮ್ಯಾಗಿ, ಸಿಎಂ ಆಗಿದ್ದ ‘ಬಂ’ ಬಾಂಧವ್ಯ ಅಜಿತ್‍ಗೆ ಇತ್ತು. ದಾಂಡೇಲಿಯ ಪರಿಸರ, ಸಾಮಾಜಿಕ ವ್ಯವಸ್ಥೆಗೆ ತೊಂದರೆಯಾದಾಗ ಆತ ಸೆಟೆದು ನಿಲ್ಲುತಿದ್ದರು. ಹೋರಾಟ ಕಟ್ಟೆ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ದಾಂಡೇಲಿ ತಾಲ್ಲೂಕು ಮಾಡಬೇಕೆಂದು ಸಂಘಟನೆ ಮಾಡಿ ಹೋರಾಟ ಅಜಿತ್‍ನಾಯಕ್ ರೂಪಿಸಿದ್ದರು. ಈಚೆಗೆ ದಾಂಡೇಲಿ ತಾಲ್ಲೂಕು ಘೋಷಣೆಯಾದಾಗ ಆತ ತುಂಬ ಖುಷಿಯಾಗಿದ್ದರು. ದಾಂಡೇಲಿಯ ಜೀವನದಿ ಕಾಳಿ ಬೆನ್ನಿವನ ಮೇಲೆ ಸಾಲಾಗಿ ಕಟ್ಟಲಾಗಿರುವ ಜಲವಿದ್ಯುತ್ ಡ್ಯಾಮ್‍ನಿಂದಾಗುವ ಡ್ಯಾಮೇಜ್ ಅರಿವಿನ ಕಾಳಿ ಬಚಾವ್ ಆಂದೋಲನದಲ್ಲಿ ಅಜಿತ್ ಸಕ್ರಿಯರಾಗಿದ್ದರು; ನದಿಯಿಂದ ಎತ್ತುವ ಮರಳು ಮಾಫಿಯಾ, ಕೈಗಾರಿಕಾ ಮಾಲಿನ್ಯ ಮಾಫಿಯಾದ ಕಣ್ಣುರಿಗೂ ಆತ ಕಾರಣರಾಗಿದ್ದರು. ಆದರೆ ಇದ್ಯಾವುದೂ ಆತನ ಕೊಂದೇ ಹಾಕುವಷ್ಟು ಸೇಡಿನ ಶತ್ರುಗಳನ್ನೇನೂ ಸೃಷ್ಟಿಸಿರಲಿಲ್ಲ. ಹಾಗಂತ ಆತ ಗÀುಣಸ್ವಭಾವ ಕಂಡಿರುವ ದಾಂಡೇಲಿಯ ಜನರು ಹೇಳುತ್ತಾರೆ.
ಹಾಗಿದ್ದರೆ ಅಜಿತ್‍ನಾಯಕ್‍ರ ಕೊಲೆ ಮಾಡುವಂಥ ಹಠದ ಜಿದ್ದಿನ ಹಿನೆÀ್ನಲೆ ಏನಿರಬಹುದು ಎಂದು ಉತ್ತರ ಕನ್ನಡದಲ್ಲಿ ಬಿರುಸಿನ ಚರ್ಚೆಗಳು ನಡೆದಿದೆ. ಪೊಲೀಸರು ಆತನ ವಕೀಲಿ ವೃತ್ತಿಗೆ ಸುತ್ತಿಕೊಂಡಿದ್ದ ಒಂದಿಷ್ಟು ಭೂಮಾಫಿಯಾ ವ್ಯವಹಾರಗಳತ್ತ ತನಿಖೆ ಕೇಂದ್ರೀಕರಿಸಿದ್ದಾರೆ. ಈಚೆಗೆ ಅಜಿತ್‍ನಾಯಕ್‍ಗೆ ಭೂಮಿಯ ಮೋಹ ವಿಪರೀತವಾಗಿತ್ತು. ಆತ ಹಲವು ಕಡೆ ಬೇನಾಮಿಯಾಗಿ ಭೂಖರೀದಿಯೂ ಮಾಡಿದ್ದರು. ರೆಸಾರ್ಟ್ ಬಿಸ್ನೆಸ್‍ನ ಸೆಳೆತಕ್ಕೆ ಬಿದ್ದಿದ್ದರಂತೆ. ಕಾಳಿನದಿ ತೀರದ ಮೌಳಂಗಿ ಎಂಬ ಮನಮೋಹಕ ಪ್ರದೇಶದ ಪ್ರೈಮ್ ಲ್ಯಾಂಡ್ ಮೇಲೆ ಅಜಿತ್ ಕಣ್ಣು ಬಿದ್ದಿತ್ತಂತೆ. ಇದೇ ಆತನಿಗೆ ಗಂಡಾಂತರಕಾರಿ ಆಯ್ತೆಂಬ ಕಾರಾರುವಾಕ್ಕಾದ ಲೆಕ್ಕಾಚಾರದ ಮಾತುಗಳೀಗ ದಾಂಡೇಲಿಯಲ್ಲಿ ಮೊಳಗಲಾರಂಭಿಸಿದೆ!
ಒಂದು ಸುದ್ದಿಯಂತೆ ಮೌಳಂಗಿಯ ಎರಡು ದಲಿತ ಕುಟುಂಬದ ಮಧ್ಯೆ ಭೂವ್ಯಾಜ್ಯ ನಡೆದಿತ್ತು. ಒಂದು ಕಡೆ ವಕೀಲರಾಗಿ ಅಜಿತ್‍ನಾಯಕ್ ನಿಂತಿದ್ದರು. ಎದುರಾಳಿ ತಂಡದ ಪಾಂಡುರಂಗ ಕಾಂಬಳೆಗೆ ಬಲಾಢ್ಯ ಭೂಮಾಫಿಯಾದ ನಂಟಿತ್ತು. ಕಾಂಬಳೆಯ ಜಾಗವನ್ನು ಎದುರುದಾರರು ಕಬ್ಜಾ ಮಾಡಿಕೊಂಡಿದ್ದರು. ಇದು ಘನಘೋರ ಕಾಳಗಕ್ಕೂ ಕಾರಣವಾಗಿಹೋಯ್ತು. ಆಗ ಅಜಿತ್ ನಾಯಕ್ ಮುತುವರ್ಜಿಯಲ್ಲಿ ಸರ್ವೇಯೂ ನಡೆಯಿತು. ತಾವೇ ಖುದ್ದು ನಿಂತು ಮೋಜುಣಿ ಮಾಡಿಸಿದ್ದರಂತೆ. ದೀಪಕ್ ಯಾನೆ ಪಾಂಡುರಂಗ ಕಾಂಬಳೆಯವರ ವಿರುದ್ಧ ಪೊಲೀಸ್ ಕಂಪ್ಲೇಂಟೂ ಆಗಿತ್ತು. ಪೊಲೀಸರು ಅಜಿತ್‍ನಾಯಕ್‍ರ ಪ್ರಭಾವದಿಂದ ಎದುರಾಳಿಗಳನ್ನು ಸತಾಯಿಸಿದ್ದರು. ಅಷ್ಟೇ ಅಲ್ಲ, ಕೆರಳಿದ ಕಾಂಬಳೆ ಪಾಳಯವು ಅಜಿತ್‍ನಾಯಕ್‍ರ ಕಕ್ಷಿದಾರನ ಜಾಗಕ್ಕೆ ಮಾರಕಾಸ್ತ್ರಗಳ ಸಮೇತ ಲಗ್ಗೆಹಾಕಿ ಧಮಕಿ ಹಾಕಿತ್ತು. ಒಂದೆಡೆ ತಗಾದೆ ನ್ಯಾಯಾಲಯ ಮೆಟ್ಟಿಲೇರಿದರೆ, ಮತ್ತೊಂದೆಡೆ ಆರೋಪಿಗಳಿಗೆ ಪೊಲೀಸರು ಜೈಲಿಗೆ ಹಾಕಿ ಬೆಂಡೆತ್ತಿದ್ದರು. ಇದಕ್ಕೆಲ್ಲ ವಕೀಲ ಅಜಿತ್‍ನಾಯಕ್ ಚಿತಾವಣಿಯೇ ಕಾರಣವೆಂಬ ಸಿಟ್ಟು ಕಾಂಬಳೆ ಕುಟುಂಬಕ್ಕಿತ್ತು. ಕೆರಳಿ ಬುಸುಗುಡುತ್ತಿದ್ದ ಕಾಂಬಳೆ ತಂಡ ಅಜಿತ್‍ನಾಯಕ್‍ಗೆ ಬೆದರಿಕೆ ಫೋನ್ ಕರೆಗಳನ್ನು ಆಗಾಗ ಮಾಡುತ್ತಲೇ ಇತ್ತು.
ಇದನ್ನು ಅಜಿತ್ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ ಈಗ ದಾಂಡೇಲಿಯಲ್ಲಿರುವ ಪುಕಾರುಗಳ ಪ್ರಕಾರ ತುಂಬ ಬೆಲೆಬಾಳುವ ಮಹತ್ವದ ಟೂರಿಸಮ್ ಸೈಟಾಗಿದ್ದ ಮೌಳಂಗಿಯ ಜಾಗದಲ್ಲಿ ಬೇನಾಮಿ ರೆಸಾರ್ಟ್ ಮಾಡುವ ಸ್ಕೆಚ್ ಹಾಕಿದ್ದ ಅಜಿತ್‍ನಾಯಕ್ ತುಂಬ ವ್ಯವಸ್ಥಿತವಾಗಿ ಎದುರಾಳಿಗಳ ಹಣಿಯಲು ಹತ್ತಿದ್ದರು. ಆದರೆ ಇದೇ ಜಾಗಕ್ಕಾಗಿ ಬಲಾಢ್ಯ ಭೂಮಾಫಿಯಾ ಒಂದು ಪ್ರಯತ್ನ ನಡೆಸಿ ಮತ್ತೊಂದು ದಲಿತÀ ಕುಟುಂಬದ ಬೆನ್ನಿಗೆ ನಿಂತಿತ್ತು. ಮೌಳಂಗಿಯಲ್ಲಿ ಈಕೋ ಪಾರ್ಕ್ ಆದ ಬಳಿಕ ವಿವಾದಿತ ಜಾಗದ ಕಿಮ್ಮತ್ತು ಜಾಸ್ತಿಯಾಗಿತ್ತು; ಅಜಿತ್ ನಾಯಕ್ ಕೂಡಾ ಸದ್ರಿ ಜಾಗದ ಬಗ್ಗೆ `ವಿಶೇಷ’ ಆಸಕ್ತಿ ವಹಿಸಿದ್ದರು. ಇದು ಪಾಂಡುರಂಗ ಕಾಂಬಳೆಯ ಆಕ್ರೋಶ ಹೆಚ್ಚಿಸಿತ್ತು. ಈ ದ್ವೇಷ ಒಳಗೊಳಗೇ ಹೊಗೆಯಾಡುತ್ತಲೇ ಇತ್ತು. ಅಜಿತ್‍ನಾಯಕ್‍ರ ಕಾನೂನು ತಂತ್ರಗಾರಿಕೆ, ಖಾಕಿಗಳ ಮೇಲಿನ ಹಿಡಿತದಿಂದ ಎದುರಾಳಿ ತಂಡ ಹೈರಾಣಾಗಿಹೋಗಿತ್ತು. ಇದು ಕೊಲೆಗೂ ಪ್ರೇರೇಪಿಸಿತೆಂಬ ತರ್ಕ ನಡೆದಿದೆ. ಇದು ಜನಸಾಮಾನ್ಯರದ್ದಷ್ಟೇ ಅಲ್ಲ, ಪೊಲೀಸರ ತಲೆಯೂ ತಿನ್ನುತ್ತಿದೆ.
ಹಂತಕರು ಹಲವು ದಿನಗಳಿಂದ ಅಜಿತ್‍ನಾಯಕ್ ಚಲನವಲನ, ಚಟುವಟಿಕೆ ಮೇಲೆ ನಿಗಾಯಿಟ್ಟು ನೋಡಿದ್ದಾರೆ. ಆತ ಅಂದು ರಾತ್ರಿ ದಾಂಡೇಲಿಯ ಜೆಎನ್ ರಸ್ತೆಯಲ್ಲಿರುವ ಕಚೇರಿಯಿಂದ ಹೊರಬರುವುದನ್ನೇ ಕಾದು ಕುಳಿತಿದ್ದಾರೆ. ಒಬ್ಬರೇ ಬರುವುದು ಖಾತ್ರಿಯಾಗಿದೆ. ಆತ ಕಾರಿನ ಬಳಿ ಹೋಗುವಾಗ ಮಚ್ಚಿನಿಂದ ತಲೆಗೆ ಹೊಡೆದಿದ್ದಾರೆ. ತಲೆಯ ಎಡಭಾಗ ಸೀಳಿಹೋಗಿದೆ. ಕಿವಿಯೂ ಚಿಂದಿಯಾಗಿದೆ. ಕೊಚ್ಚಿದ ರಭಸಕ್ಕೆ ಅಜಿತ್ ನಿಂತಲ್ಲೇ ಕುಸಿದು ರಕ್ತದ ಮಡುವಲ್ಲಿ ಒದ್ದಾಡಿ ಜೀವ ಬಿಟ್ಟಿದ್ದಾರೆ. ಕತ್ತಲಲ್ಲಿ ಹಂತಕ ಕರಗಿಹೋಗಿದ್ದಾನೆ. ಪೊಲೀಸರು ಈ ಲ್ಯಾಂಡ್ ಪ್ರಕರಣದತ್ತಲೇ ತನಿಖೆ ನಡೆಸಿದ್ದಾರೆ. ಹಂತಕನನ್ನು ಬಂಧಿಸಲಾಗಿದೆ ಎಂಬ ಅನಧಿಕೃತ ಸುದ್ದಿಯೂ ಹಬ್ಬಿದೆ ಯಲ್ಲಾಪುರದಲ್ಲಿ ಸೆರೆಸಿಕ್ಕಿರುವ ಹಂತಕ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾನಂತೆ!
ಆತ ಅಸ್ತ್ರವಷ್ಟೇ! ಬಳಸಿದ್ದು ಯಾರೆಂಬುದು ಬಹಿರಂಗವಾಗಬೇಕಾಗಿದೆ. ಒಂದಂತೂ ಖರೆ; ಅಜಿತ್‍ನಾಯಕ್ ಕೋಲೆ ದಾಂಡೇಲಿ ಭಾಗದ ರೆಸಾರ್ಟ್ ದಂಧೆಯ ಅನಾಹುತಕಾರಿ ಆಯಾಮ ತೋರಿಸಿದೆ!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...