Homeಅಂಕಣಗಳು“ಯುವಜನರ ನಿಜವಾದ ನಾಯಕ “ಭಗತ್ ಸಿಂಗ್”

“ಯುವಜನರ ನಿಜವಾದ ನಾಯಕ “ಭಗತ್ ಸಿಂಗ್”

- Advertisement -
- Advertisement -

| ಸಂತೋಷ.ಎಚ್.ಎಂ, ಕನ್ನಡ ವಿ.ವಿ ಹಂಪಿ |

ದೇಶದ ಜನರ ವಿಮೋಚನೆಗಾಗಿ ನಗುನಗುತಲೇ ನೇಣುಗಂಬ ಏರಿದ ಧೀರೋದಾತ್ತ ನಾಯಕ, ದೇಶದ ಹಿತವೇ ತನ್ನ ಹಿತ, ಒಡೆದಾಳುವ ನೀತಿ, ಅಸಮಾನತೆ, ಸಾಮಜ್ಯವಾದವೇ ತನ್ನ ಪರಮ ಶತೃಗಳು ಎಂದು ಸಿಡಿಲಗುಂಡಿನಂತೆ ಮಿಂಚಿ ಮರೆಯಾದ ಭಗತ್‍ಸಿಂಗ್ ಅಕ್ಷರಶಃ ಯುವ ಸಮುದಾಯದ ದೃವತಾರೆ.

“ನನ್ನಲ್ಲೂ ಆಕಾಂಕ್ಷೆ, ಭರವಸೆ, ಬದುಕಿನ ಸೌಂದರ್ಯಗಳೆಲ್ಲ ತುಂಬಿದೆ ಎಂದು ಒತ್ತಿಹೇಳುತ್ತೇನೆ. ಆದರೆ ಅಗತ್ಯ ಬಿದ್ದಾಗ ಅದೆಲ್ಲವನ್ನೂ ತೊರೆಯಬಲ್ಲೆ. ಅದೇ ನಿಜವಾದ ತ್ಯಾಗ” “ನಾವು ಬದುಕನ್ನು ಪ್ರೀತಿಸುತ್ತೇವೆ, ಅದರ ಸೌಂದರ್ಯ ಕಾಪಾಡಲು ಹೋರಾಡುತ್ತೇವೆ’’ ಎನ್ನುವ ಮೂಲಕ ದೇಶದ ಯುವಜನರಿಗೆ ಅಗ್ರಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಭಗತ್‍ಸಿಂಗ್ ಮತ್ತು ಸ್ನೇಹಿತರ ಸಮರಶೀಲ ಹೋರಾಟ ಎಂತವರಲ್ಲೂ ರೋಮಾಂಚನ ಉಂಟುಮಾಡುತ್ತದೆ. ಕೇವಲ 23 ವಯಸ್ಸಿನಲ್ಲೇ ಅದಮ್ಯ ಚೈತನ್ಯದೊಂದಿಗೆ ಇಡೀ ಸ್ವಾತಂತ್ರ್ಯ ಚಳವಳಿಗೆ ಹೊಸದಿಕ್ಕು ಕೊಡುವ ಮೂಲಕ ಭಾರತೀಯರ ಹೃದಗಳಲ್ಲಿ ಎಂದಿಗೂ ಅಳಿಸಲಾಗದ ಮುದ್ರೆಯನ್ನೊತ್ತಿದ್ದಾರೆ.

*ಭಗತ್‍ಸಿಂಗ್‍ರನ್ನು ಪ್ರಭಾವಿಸಿದ ಆ ಘಟನೆ:*

ಯಾರನ್ನಾದರೂ ವಿಚಾರಣೆಯಿಲ್ಲದೇ ಬಂಧಿಸುವ ಅಧಿಕಾರ ನೀಡಿದ ಬ್ರಿಟಿಷರ ರೌಲಟ್ ಕಾಯಿದೆಯನ್ನು ವಿರೋಧಿಸಿ 1919 ಏಪ್ರಿಲ್ 13ರಂದು ಪಂಜಾಬಿನ ಅಮೃತಸರದ ಉದ್ಯಾನದಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಇದರಿಂದ ವಿಚಲಿತಗೊಂಡ ಬ್ರಿಗೇಡಿಯರ್ ಜನರಲ್ ರೇಜಿನಾಲ್ಡ್ ಡಯರ್ ತನ್ನ ಸೈನ್ಯವನ್ನು ಸುತ್ತುವರಿಸಿ ಯಾವುದೇ ಸೂಚನೆ ನೀಡದೇ ಗುಂಡಿನ ಮಳೆಗರಿಸಿದ. ಇದರಿಂದಾಗಿ ಮಾರಣಹೋಮವೇ ನಡೆಯಿತು. ಉದ್ಯಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ರಕ್ತದ ಕೋಡಿಯೇ ಹರಿಯಿತು. ಈ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿ, ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತು.

ಈ ಘಟನೆಯಿಂದ ಬಾಲಕನೊಬ್ಬನಿಗೆ ಸಿಡಿಲಪ್ಪಳಿಸಿದ ಅನುಭವವಾಯಿತು. ಮಾರನೇ ದಿನವೇ ಆ ಬಾಲಕ ಶಾಲೆ ಮುಗಿದ ನಂತರ ಘಟನಾ ಸ್ಥಳಕ್ಕೆ ಹೋಗಿ, ದಿಟ್ಟತನ ಮೆರೆದು ಪ್ರಾಣಾರ್ಪಣೆಗೈದವರ ರಕ್ತದ ಕೋಡಿಯನ್ನು ಕಂಡು ಮಮ್ಮಲ ಮರಗಿದ. ಆ ಕ್ಷಣವೇ ಹೋರಾಟದ ಕಿಚ್ಚು ಆತನಲ್ಲಿ ಜಾಗೃತವಾಯಿತು. ಅಲ್ಲಿಗೆ ಸುಮ್ಮನಿರದ ಆ ಬಾಲಕ, ತಾನು ತಂದಿದ್ದ ಬುತ್ತಿಡಬ್ಬಿಯನ್ನು ತೆಗೆದು  ಹೋರಾಟಗಾರರ ರಕ್ತದಲ್ಲಿ ತೊಯ್ದ ಮಣ್ಣನ್ನು ಅದರಲ್ಲಿ ಸಂಗ್ರಹಿಸಿಟ್ಟುಕೊಂಡು ಮನೆ ಕಡೆ ಹೆಜ್ಜೆ ಇಟ್ಟ.

ಮನೆಯಲ್ಲಿ ಇಡೀ ಘಟನೆಯನ್ನು ತಿಳಿಸಿದ ಆತ ತಾನು ತಂದಿದ್ದ ಮಣ್ಣನ್ನು ತನ್ನ ತಾಯಿಗೆ ತೋರಿಸಿ “ನೋಡಿಲ್ಲಿ ಬ್ರಿಟೀಷರು ನಮ್ಮ ಜನರನ್ನು ಹತ್ಯೆಮಾಡಿದ ರಕ್ತಸಿಕ್ತ ಮಣ್ಣಿದು. ಇದಕ್ಕೆ ನಮಸ್ಕಾರ ಮಾಡು’’ ಎಂದು ಹೇಳುವ ಮೂಲಕ, ಅದನ್ನು ಒಂದೆಡೆಯಿಟ್ಟು ಪೂಜಿಸಿದ. ಈ ಘಟನೆ ಭಗತ್‍ಸಿಂಗ್‍ರನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಕೊನೆವರೆಗೂ ಹೋರಾಟ ನಡೆಸಲು ಹುರಿಗೊಳಿಸಿತು.

*ಭಗತ್‍ಸಿಂಗ್‍ರ ಹಿನ್ನೆಲೆ*

ಭಗತ್‍ಸಿಂಗ್ ಸೆಪ್ಟೆಂಬರ್ 28, 1907ರಲ್ಲಿ ಕಿಷನ್‍ಸಿಂಗ್ ಮತ್ತು ವಿದ್ಯಾವತಿ ಕೌರ್ ದಂಪತಿಗಳ ಮಗನಾಗಿ ಜನಿಸಿದರು. ಅವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವರ ಚಿಕ್ಕಪ್ಪನ ಮಾತುಗಳು ಸ್ಫೂತಿರ್ಯ ಸೆಲೆಯಾದವು. ಇದರಿಂದ ಭಗತ್‍ಸಿಂಗ್ ಚಿಕ್ಕವಯಸ್ಸಿನಲ್ಲೇ ಮಹಾತ್ಮಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ತದನಂತರ ಸ್ಟಷ್ಟ ರಾಜಕೀಯ ಕಣ್ಣೋಟಕ್ಕಾಗಿ ಜಗತ್ತಿನಲ್ಲಿ ಘಟಿಸಿದ ಹಲವು ಕ್ರಾಂತಿಕಾರಿ ಹೋರಾಟಗಳ ಬಗ್ಗೆ ಓದಲು ಶುರುಮಾಡಿದರು. ಮಾರ್ಕ್ಸ್ ವಾದ, ಲೆನಿನ್ ಅವರ ಬರವಣಿಗೆ, ಕಮ್ಯುನಿಸ್ಟ್ ಚಳವಳಿಗಳು ಮತ್ತು ಅದರ ಜನವಿಮೋಚನೆಯ ಆಶಯಗಳು ಅವರನ್ನು ಬಹಳಷ್ಟು ಪ್ರಭಾವಗೊಳಿಸಿದವು.

ಸ್ವಾತಂತ್ರ್ಯಕ್ಕಾಗಿ ಚಳವಳಿಯನ್ನು ನಡೆಸಿ ಯುವಜನರ ಪ್ರೀತಿಗೆ ಪಾತ್ರರಾಗಿದ್ದ ಭಗತ್ ಸಿಂಗ್ ತನ್ನ 23ನೇ ವರ್ಷಕ್ಕೆ ದೇಶಕ್ಕಾಗಿ ಪ್ರಾಣಕೊಟ್ಟ ಮಹಾನ್ ಕ್ರಾಂತಿಕಾರಿ. ಇಂದಿಗೂ ಎಂದಿಗೂ ಯುವಜನರು ಮರೆಯಲಾಗದ ಚೈತನ್ಯ ಎಂದರೂ ತಪ್ಪಾಗಲಾರದು.

ಬ್ರಿಟಿಷರ ವಿರುದ್ಧ ಹೋರಾಟ ಹುರಿಗೊಳಿಸಿದ ಪರಿಣಾಮ ಭಗತ್‍ಸಿಂಗ್ ಮತ್ತು ಆತನ ಸ್ನೇಹಿತರು ಜೈಲಿನಲ್ಲಿ ಬಂಧಿಯಾಗುತ್ತಾರೆ. ಇದ್ಯಾವುದಕ್ಕೂ ಹೆದರದ ಅವರು ಮತ್ತಷ್ಟು ದಿಟ್ಟತನ ಪ್ರದರ್ಶಿಸುತ್ತಾರೆ. ಜೈಲಿನಲ್ಲಿದ್ದಾಗ ತಾಯಿಗೆ ಬರೆದ ಪತ್ರದಲ್ಲಿ ‘ ಅಮ್ಮಾ ನನ್ನ ದೇಶ ಒಂದಲ್ಲಾ ಒಂದು ದಿನ ಸ್ವಾತಂತ್ರ್ಯ ಪಡೆಯಲಿದೆ ಎಂಬ ಬಗ್ಗೆ ನನಗೆ ಸಂಶಯವೇ ಇಲ್ಲ. ಆದರೆ ಬಿಳಿಯ ಸಾಹೇಬರು ಖಾಲಿ ಮಾಡಿದ ಕುರ್ಚಿಯಲ್ಲಿ ಕಂದು ಸಾಹೇಬರು ಕುಳಿತುಕೊಳ್ಳುತ್ತಾರೆಂಬ’ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಇದು ಅವರ ಸ್ಪಷ್ಟ ರಾಜಕೀಯ ತಿಳಿವಳಿಕೆ ಮತ್ತು ಸಮಾನತೆಯ ಆಶಯದ ಬಗ್ಗೆ ಇದ್ದ ಕಳಕಳಿಯ ಬಗ್ಗೆ ತೋರಿಸುತ್ತದೆ.

“ದೇಶದ ಇತಿಹಾಸದ ಸಂಕಷ್ಟಮಯ ಸನ್ನಿವೇಶದಲ್ಲಿ ಯುವಕರು ಒಂದು ಮಹಾನ್ ಜವಾಬ್ದಾರಿಯನ್ನು ಹೊರಬೇಕಾಗಿದೆ. ದೇಶದ ಮೂಲೆ ಮೂಲೆಗಳಿಗೆ ವಿದ್ಯಾರ್ಥಿಗಳು ಈ ಕ್ರಾಂತಿಕಾರಿ ಸಂದೇಶವನ್ನು ಕೊಂಡೊಯ್ಯಬೇಕು. ಕೈಗಾರಿಕಾ ಪ್ರದೇಶಗಳಲ್ಲಿರುವ ಕೋಟ್ಯಂತರ ಕೊಳಚೆ ಪ್ರದೇಶಗಳ ನಿವಾಸಿಗಳನ್ನು, ಮುರುಕು ಗುಡಿಸಲುಗಳಲ್ಲಿನ ಗ್ರಾಮೀಣ ಜನತೆಯನ್ನು ಅವರು ಬಡಿದೆಬ್ಬಿಸಬೇಕು. ಕೆಲವರು ಮನುಷ್ಯರು ಉಳಿದ ಜನಸಾಮಾನ್ಯರನ್ನು ಶೋಷಿಸುವಂಥ ಪರಿಸ್ಥಿತಿ ಅಸಾಧ್ಯವಾಗಬೇಕು’’ಎಂದು ಹೇಳುವ ಮೂಲಕ ಯುವಜನರನ್ನು ಎಚ್ಚರಿಸಿದ್ದಾರೆ.

ಬ್ರಿಟಿಷ್ ಸರಕಾರಕ್ಕೆ ಸಿಂಹಸ್ವಪ್ನವಾಗಿದ ಭಗತ್‍ಸಿಂಗ್‍ರನ್ನು ಹೇಗಾದರೂ ನಿವಾರಿಸಿಕೊಳ್ಳಲು, 1931ಮಾರ್ಚ್ 23ರಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಈ ಮೂವರು ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು. ಭಗತ್‍ಸಿಂಗ್ ಅವರು ಒಂದು ಕಡೆ ಹೇಳಿದಂತೆ “ಅವರು ವ್ಯಕ್ತಿಗಳನ್ನು ಕೊಲ್ಲಬಹುದು ಅದರೆ ಅವರ ಆಲೋಚನೆಗಳನ್ನೂ ಕೊಲ್ಲಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ ಇಂದಿಗೂ ನಿಜವಾಗಿದೆ. ಬ್ರಿಟಿಷರು ಭಗತ್‍ಸಿಂಗ್ ಅವರನ್ನು ಭೌತಿಕವಾಗಿ ಇಲ್ಲವಾಗಿಸಿದರು. ಆದರೆ ಅವರಿಂದ ಪ್ರೇರಣೆಗೊಂಡ ಯುವಕರು ಕೋಟ್ಯಂತರ.

ಅಂದು ಭಗತ್ ಸಿಂಗ್ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದರು ಅಂದೇ ಅಸಮಾನತೆ, ಸಾಮ್ರಾಜ್ಯಶಾಹಿ ನೀತಿ ವಿರುದ್ದ ಹೋರಾಡಿದರು. ಅದರೆ ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳು ದೇಶದಲ್ಲಿ ಅಗುತ್ತಿರುವ ಸಾಲು ಸಾಲು ಅತ್ಯಾಚಾರ. ಮಹಿಳೆಯರ ಮೇಲಿನ ದೌರ್ಜನ್ಯ, ಅಸಮಾನತೆ, ರೈತರ ಆತ್ಮಹತ್ಯೆ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ಸಂವಿಧಾನದ ಮೇಲಿನ ನಿರಂತರ ದಾಳಿಗೆ ಪ್ರಬಲ ಧ್ವನಿ ಎತ್ತದಿರುವುದು ವಿಪರ್ಯಾಸವೇ ಸರಿ. ಬಡತನ, ನಿರುದ್ಯೋಗ, ಅನಾರೋಗ್ಯ, ಮೂಲ ಸೌಕರ್ಯ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳು ಇಡೀ ದೇಶವನ್ನು ಕಾಡುತ್ತಿರುವಾಗ ಯುವಜನತೆ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಆಶಯಗಳ ಉಳಿವಿಗಾಗಿ ಧ್ವನಿ ಎತ್ತಬೇಕಿದೆ. ಅಂದಾಗ ಮಾತ್ರ ಭಗತ್‍ಸಿಂಗ್ ಅವರಿಗೆ ನಾವು ನಿಜವಾದ ಗೌರವ ಕೊಟ್ಟಂತಾಗುತ್ತದೆ.

ಸಂತೋಷ.ಎಚ್.ಎಂ

ಕನ್ನಡ ವಿ.ವಿ ಹಂಪಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...