Homeಅಂಕಣಗಳು“ಯುವಜನರ ನಿಜವಾದ ನಾಯಕ “ಭಗತ್ ಸಿಂಗ್”

“ಯುವಜನರ ನಿಜವಾದ ನಾಯಕ “ಭಗತ್ ಸಿಂಗ್”

- Advertisement -
- Advertisement -

| ಸಂತೋಷ.ಎಚ್.ಎಂ, ಕನ್ನಡ ವಿ.ವಿ ಹಂಪಿ |

ದೇಶದ ಜನರ ವಿಮೋಚನೆಗಾಗಿ ನಗುನಗುತಲೇ ನೇಣುಗಂಬ ಏರಿದ ಧೀರೋದಾತ್ತ ನಾಯಕ, ದೇಶದ ಹಿತವೇ ತನ್ನ ಹಿತ, ಒಡೆದಾಳುವ ನೀತಿ, ಅಸಮಾನತೆ, ಸಾಮಜ್ಯವಾದವೇ ತನ್ನ ಪರಮ ಶತೃಗಳು ಎಂದು ಸಿಡಿಲಗುಂಡಿನಂತೆ ಮಿಂಚಿ ಮರೆಯಾದ ಭಗತ್‍ಸಿಂಗ್ ಅಕ್ಷರಶಃ ಯುವ ಸಮುದಾಯದ ದೃವತಾರೆ.

“ನನ್ನಲ್ಲೂ ಆಕಾಂಕ್ಷೆ, ಭರವಸೆ, ಬದುಕಿನ ಸೌಂದರ್ಯಗಳೆಲ್ಲ ತುಂಬಿದೆ ಎಂದು ಒತ್ತಿಹೇಳುತ್ತೇನೆ. ಆದರೆ ಅಗತ್ಯ ಬಿದ್ದಾಗ ಅದೆಲ್ಲವನ್ನೂ ತೊರೆಯಬಲ್ಲೆ. ಅದೇ ನಿಜವಾದ ತ್ಯಾಗ” “ನಾವು ಬದುಕನ್ನು ಪ್ರೀತಿಸುತ್ತೇವೆ, ಅದರ ಸೌಂದರ್ಯ ಕಾಪಾಡಲು ಹೋರಾಡುತ್ತೇವೆ’’ ಎನ್ನುವ ಮೂಲಕ ದೇಶದ ಯುವಜನರಿಗೆ ಅಗ್ರಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಭಗತ್‍ಸಿಂಗ್ ಮತ್ತು ಸ್ನೇಹಿತರ ಸಮರಶೀಲ ಹೋರಾಟ ಎಂತವರಲ್ಲೂ ರೋಮಾಂಚನ ಉಂಟುಮಾಡುತ್ತದೆ. ಕೇವಲ 23 ವಯಸ್ಸಿನಲ್ಲೇ ಅದಮ್ಯ ಚೈತನ್ಯದೊಂದಿಗೆ ಇಡೀ ಸ್ವಾತಂತ್ರ್ಯ ಚಳವಳಿಗೆ ಹೊಸದಿಕ್ಕು ಕೊಡುವ ಮೂಲಕ ಭಾರತೀಯರ ಹೃದಗಳಲ್ಲಿ ಎಂದಿಗೂ ಅಳಿಸಲಾಗದ ಮುದ್ರೆಯನ್ನೊತ್ತಿದ್ದಾರೆ.

*ಭಗತ್‍ಸಿಂಗ್‍ರನ್ನು ಪ್ರಭಾವಿಸಿದ ಆ ಘಟನೆ:*

ಯಾರನ್ನಾದರೂ ವಿಚಾರಣೆಯಿಲ್ಲದೇ ಬಂಧಿಸುವ ಅಧಿಕಾರ ನೀಡಿದ ಬ್ರಿಟಿಷರ ರೌಲಟ್ ಕಾಯಿದೆಯನ್ನು ವಿರೋಧಿಸಿ 1919 ಏಪ್ರಿಲ್ 13ರಂದು ಪಂಜಾಬಿನ ಅಮೃತಸರದ ಉದ್ಯಾನದಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಇದರಿಂದ ವಿಚಲಿತಗೊಂಡ ಬ್ರಿಗೇಡಿಯರ್ ಜನರಲ್ ರೇಜಿನಾಲ್ಡ್ ಡಯರ್ ತನ್ನ ಸೈನ್ಯವನ್ನು ಸುತ್ತುವರಿಸಿ ಯಾವುದೇ ಸೂಚನೆ ನೀಡದೇ ಗುಂಡಿನ ಮಳೆಗರಿಸಿದ. ಇದರಿಂದಾಗಿ ಮಾರಣಹೋಮವೇ ನಡೆಯಿತು. ಉದ್ಯಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ರಕ್ತದ ಕೋಡಿಯೇ ಹರಿಯಿತು. ಈ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿ, ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತು.

ಈ ಘಟನೆಯಿಂದ ಬಾಲಕನೊಬ್ಬನಿಗೆ ಸಿಡಿಲಪ್ಪಳಿಸಿದ ಅನುಭವವಾಯಿತು. ಮಾರನೇ ದಿನವೇ ಆ ಬಾಲಕ ಶಾಲೆ ಮುಗಿದ ನಂತರ ಘಟನಾ ಸ್ಥಳಕ್ಕೆ ಹೋಗಿ, ದಿಟ್ಟತನ ಮೆರೆದು ಪ್ರಾಣಾರ್ಪಣೆಗೈದವರ ರಕ್ತದ ಕೋಡಿಯನ್ನು ಕಂಡು ಮಮ್ಮಲ ಮರಗಿದ. ಆ ಕ್ಷಣವೇ ಹೋರಾಟದ ಕಿಚ್ಚು ಆತನಲ್ಲಿ ಜಾಗೃತವಾಯಿತು. ಅಲ್ಲಿಗೆ ಸುಮ್ಮನಿರದ ಆ ಬಾಲಕ, ತಾನು ತಂದಿದ್ದ ಬುತ್ತಿಡಬ್ಬಿಯನ್ನು ತೆಗೆದು  ಹೋರಾಟಗಾರರ ರಕ್ತದಲ್ಲಿ ತೊಯ್ದ ಮಣ್ಣನ್ನು ಅದರಲ್ಲಿ ಸಂಗ್ರಹಿಸಿಟ್ಟುಕೊಂಡು ಮನೆ ಕಡೆ ಹೆಜ್ಜೆ ಇಟ್ಟ.

ಮನೆಯಲ್ಲಿ ಇಡೀ ಘಟನೆಯನ್ನು ತಿಳಿಸಿದ ಆತ ತಾನು ತಂದಿದ್ದ ಮಣ್ಣನ್ನು ತನ್ನ ತಾಯಿಗೆ ತೋರಿಸಿ “ನೋಡಿಲ್ಲಿ ಬ್ರಿಟೀಷರು ನಮ್ಮ ಜನರನ್ನು ಹತ್ಯೆಮಾಡಿದ ರಕ್ತಸಿಕ್ತ ಮಣ್ಣಿದು. ಇದಕ್ಕೆ ನಮಸ್ಕಾರ ಮಾಡು’’ ಎಂದು ಹೇಳುವ ಮೂಲಕ, ಅದನ್ನು ಒಂದೆಡೆಯಿಟ್ಟು ಪೂಜಿಸಿದ. ಈ ಘಟನೆ ಭಗತ್‍ಸಿಂಗ್‍ರನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಕೊನೆವರೆಗೂ ಹೋರಾಟ ನಡೆಸಲು ಹುರಿಗೊಳಿಸಿತು.

*ಭಗತ್‍ಸಿಂಗ್‍ರ ಹಿನ್ನೆಲೆ*

ಭಗತ್‍ಸಿಂಗ್ ಸೆಪ್ಟೆಂಬರ್ 28, 1907ರಲ್ಲಿ ಕಿಷನ್‍ಸಿಂಗ್ ಮತ್ತು ವಿದ್ಯಾವತಿ ಕೌರ್ ದಂಪತಿಗಳ ಮಗನಾಗಿ ಜನಿಸಿದರು. ಅವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವರ ಚಿಕ್ಕಪ್ಪನ ಮಾತುಗಳು ಸ್ಫೂತಿರ್ಯ ಸೆಲೆಯಾದವು. ಇದರಿಂದ ಭಗತ್‍ಸಿಂಗ್ ಚಿಕ್ಕವಯಸ್ಸಿನಲ್ಲೇ ಮಹಾತ್ಮಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ತದನಂತರ ಸ್ಟಷ್ಟ ರಾಜಕೀಯ ಕಣ್ಣೋಟಕ್ಕಾಗಿ ಜಗತ್ತಿನಲ್ಲಿ ಘಟಿಸಿದ ಹಲವು ಕ್ರಾಂತಿಕಾರಿ ಹೋರಾಟಗಳ ಬಗ್ಗೆ ಓದಲು ಶುರುಮಾಡಿದರು. ಮಾರ್ಕ್ಸ್ ವಾದ, ಲೆನಿನ್ ಅವರ ಬರವಣಿಗೆ, ಕಮ್ಯುನಿಸ್ಟ್ ಚಳವಳಿಗಳು ಮತ್ತು ಅದರ ಜನವಿಮೋಚನೆಯ ಆಶಯಗಳು ಅವರನ್ನು ಬಹಳಷ್ಟು ಪ್ರಭಾವಗೊಳಿಸಿದವು.

ಸ್ವಾತಂತ್ರ್ಯಕ್ಕಾಗಿ ಚಳವಳಿಯನ್ನು ನಡೆಸಿ ಯುವಜನರ ಪ್ರೀತಿಗೆ ಪಾತ್ರರಾಗಿದ್ದ ಭಗತ್ ಸಿಂಗ್ ತನ್ನ 23ನೇ ವರ್ಷಕ್ಕೆ ದೇಶಕ್ಕಾಗಿ ಪ್ರಾಣಕೊಟ್ಟ ಮಹಾನ್ ಕ್ರಾಂತಿಕಾರಿ. ಇಂದಿಗೂ ಎಂದಿಗೂ ಯುವಜನರು ಮರೆಯಲಾಗದ ಚೈತನ್ಯ ಎಂದರೂ ತಪ್ಪಾಗಲಾರದು.

ಬ್ರಿಟಿಷರ ವಿರುದ್ಧ ಹೋರಾಟ ಹುರಿಗೊಳಿಸಿದ ಪರಿಣಾಮ ಭಗತ್‍ಸಿಂಗ್ ಮತ್ತು ಆತನ ಸ್ನೇಹಿತರು ಜೈಲಿನಲ್ಲಿ ಬಂಧಿಯಾಗುತ್ತಾರೆ. ಇದ್ಯಾವುದಕ್ಕೂ ಹೆದರದ ಅವರು ಮತ್ತಷ್ಟು ದಿಟ್ಟತನ ಪ್ರದರ್ಶಿಸುತ್ತಾರೆ. ಜೈಲಿನಲ್ಲಿದ್ದಾಗ ತಾಯಿಗೆ ಬರೆದ ಪತ್ರದಲ್ಲಿ ‘ ಅಮ್ಮಾ ನನ್ನ ದೇಶ ಒಂದಲ್ಲಾ ಒಂದು ದಿನ ಸ್ವಾತಂತ್ರ್ಯ ಪಡೆಯಲಿದೆ ಎಂಬ ಬಗ್ಗೆ ನನಗೆ ಸಂಶಯವೇ ಇಲ್ಲ. ಆದರೆ ಬಿಳಿಯ ಸಾಹೇಬರು ಖಾಲಿ ಮಾಡಿದ ಕುರ್ಚಿಯಲ್ಲಿ ಕಂದು ಸಾಹೇಬರು ಕುಳಿತುಕೊಳ್ಳುತ್ತಾರೆಂಬ’ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಇದು ಅವರ ಸ್ಪಷ್ಟ ರಾಜಕೀಯ ತಿಳಿವಳಿಕೆ ಮತ್ತು ಸಮಾನತೆಯ ಆಶಯದ ಬಗ್ಗೆ ಇದ್ದ ಕಳಕಳಿಯ ಬಗ್ಗೆ ತೋರಿಸುತ್ತದೆ.

“ದೇಶದ ಇತಿಹಾಸದ ಸಂಕಷ್ಟಮಯ ಸನ್ನಿವೇಶದಲ್ಲಿ ಯುವಕರು ಒಂದು ಮಹಾನ್ ಜವಾಬ್ದಾರಿಯನ್ನು ಹೊರಬೇಕಾಗಿದೆ. ದೇಶದ ಮೂಲೆ ಮೂಲೆಗಳಿಗೆ ವಿದ್ಯಾರ್ಥಿಗಳು ಈ ಕ್ರಾಂತಿಕಾರಿ ಸಂದೇಶವನ್ನು ಕೊಂಡೊಯ್ಯಬೇಕು. ಕೈಗಾರಿಕಾ ಪ್ರದೇಶಗಳಲ್ಲಿರುವ ಕೋಟ್ಯಂತರ ಕೊಳಚೆ ಪ್ರದೇಶಗಳ ನಿವಾಸಿಗಳನ್ನು, ಮುರುಕು ಗುಡಿಸಲುಗಳಲ್ಲಿನ ಗ್ರಾಮೀಣ ಜನತೆಯನ್ನು ಅವರು ಬಡಿದೆಬ್ಬಿಸಬೇಕು. ಕೆಲವರು ಮನುಷ್ಯರು ಉಳಿದ ಜನಸಾಮಾನ್ಯರನ್ನು ಶೋಷಿಸುವಂಥ ಪರಿಸ್ಥಿತಿ ಅಸಾಧ್ಯವಾಗಬೇಕು’’ಎಂದು ಹೇಳುವ ಮೂಲಕ ಯುವಜನರನ್ನು ಎಚ್ಚರಿಸಿದ್ದಾರೆ.

ಬ್ರಿಟಿಷ್ ಸರಕಾರಕ್ಕೆ ಸಿಂಹಸ್ವಪ್ನವಾಗಿದ ಭಗತ್‍ಸಿಂಗ್‍ರನ್ನು ಹೇಗಾದರೂ ನಿವಾರಿಸಿಕೊಳ್ಳಲು, 1931ಮಾರ್ಚ್ 23ರಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಈ ಮೂವರು ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು. ಭಗತ್‍ಸಿಂಗ್ ಅವರು ಒಂದು ಕಡೆ ಹೇಳಿದಂತೆ “ಅವರು ವ್ಯಕ್ತಿಗಳನ್ನು ಕೊಲ್ಲಬಹುದು ಅದರೆ ಅವರ ಆಲೋಚನೆಗಳನ್ನೂ ಕೊಲ್ಲಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ ಇಂದಿಗೂ ನಿಜವಾಗಿದೆ. ಬ್ರಿಟಿಷರು ಭಗತ್‍ಸಿಂಗ್ ಅವರನ್ನು ಭೌತಿಕವಾಗಿ ಇಲ್ಲವಾಗಿಸಿದರು. ಆದರೆ ಅವರಿಂದ ಪ್ರೇರಣೆಗೊಂಡ ಯುವಕರು ಕೋಟ್ಯಂತರ.

ಅಂದು ಭಗತ್ ಸಿಂಗ್ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದರು ಅಂದೇ ಅಸಮಾನತೆ, ಸಾಮ್ರಾಜ್ಯಶಾಹಿ ನೀತಿ ವಿರುದ್ದ ಹೋರಾಡಿದರು. ಅದರೆ ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳು ದೇಶದಲ್ಲಿ ಅಗುತ್ತಿರುವ ಸಾಲು ಸಾಲು ಅತ್ಯಾಚಾರ. ಮಹಿಳೆಯರ ಮೇಲಿನ ದೌರ್ಜನ್ಯ, ಅಸಮಾನತೆ, ರೈತರ ಆತ್ಮಹತ್ಯೆ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ಸಂವಿಧಾನದ ಮೇಲಿನ ನಿರಂತರ ದಾಳಿಗೆ ಪ್ರಬಲ ಧ್ವನಿ ಎತ್ತದಿರುವುದು ವಿಪರ್ಯಾಸವೇ ಸರಿ. ಬಡತನ, ನಿರುದ್ಯೋಗ, ಅನಾರೋಗ್ಯ, ಮೂಲ ಸೌಕರ್ಯ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳು ಇಡೀ ದೇಶವನ್ನು ಕಾಡುತ್ತಿರುವಾಗ ಯುವಜನತೆ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಆಶಯಗಳ ಉಳಿವಿಗಾಗಿ ಧ್ವನಿ ಎತ್ತಬೇಕಿದೆ. ಅಂದಾಗ ಮಾತ್ರ ಭಗತ್‍ಸಿಂಗ್ ಅವರಿಗೆ ನಾವು ನಿಜವಾದ ಗೌರವ ಕೊಟ್ಟಂತಾಗುತ್ತದೆ.

ಸಂತೋಷ.ಎಚ್.ಎಂ

ಕನ್ನಡ ವಿ.ವಿ ಹಂಪಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...