Homeಮುಖಪುಟಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

ಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

- Advertisement -
- Advertisement -

| ಬಿ. ಚಂದ್ರೇಗೌಡ |

ಮರಿ ಹಾಕಿದ್ದ ಬೆಕ್ಕಿನಂತೆ ಓಡಾಡುತ್ತಿದ್ದ ಶಾಮಣ್ಣನವರಲ್ಲಿ ಲವಲವಿಕೆ ಸ್ವಲ್ಪ ತಗ್ಗಿದೆ. ಆದ್ದರಿಂದ ಶ್ರೀದೇವಕ್ಕನವರು ಶಾಮಣ್ಣನವರ ಬಗ್ಗೆ ಹಿಂದಿಗಿಂತ ಹೆಚ್ಚು ಕಾಳಜಿವಹಿಸಿ ಯಾವುದೇ ಸಭೆ ಸಮಾರಂಭಕ್ಕೆ ಜೊತೆಯಲ್ಲೇ ಬಂದು ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ದಿನಾಂಕ 14ರಂದು ನಡೆದ ಶಿವಮೊಗ್ಗದ ಕೊಡುಗೈದಾನಿ ಇಬ್ರಾಹಿಂ ಸಾಹೇಬರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮಕ್ಕೆ ಶಾಮಣ್ಣ ಶ್ರೀದೇವಕ್ಕ ಜೊತೆಯಾಗೆ ಬಂದಿದ್ದರು. ಇಬ್ರಾಹಿಂ ಸಾಹೇಬರು ಕನ್ನಡದ ಸಾಂಸ್ಕøತಿಕ ಲೋಕದಲ್ಲಿ ಅಚ್ಚಳಿಯದ ನೆನಪನ್ನ ಬಿಟ್ಟು ಹೋಗಿದ್ದಾರೆ. 1992ರಲ್ಲಿ ಬೆಂಗಳೂರಲ್ಲಿ ನಡೆದ ಲಂಕೇಶ್-ಕಂಬಾರ, ಗಿರೀಶ್ ಕಾರ್ನಾಡರ ನಾಟಕೋತ್ಸವಕ್ಕೆ ಧನಸಹಾಯ ಮಾಡಿದವರು ಇಬ್ರಾಹಿಂ ಸಾಹೇಬರು. ಅಷ್ಟೇ ಅಲ್ಲ ಶಿವಮೊಗ್ಗದ ಅವರ ಮನೆ ಆವರಣ ಯಾಚಕರಿಂದ ತುಂಬಿರುತ್ತಿತ್ತು.

ಮದುವೆ, ಮುಂಜಿ, ದೇವಸ್ಥಾನಕ್ಕೆ ಬಣ್ಣ, ಗಣಪತಿ ಹಬ್ಬದ ಖರ್ಚು ಇದಲ್ಲದೆ ಪುಸ್ತಕ ಪ್ರಕಟಿಸುವ ಸಾಹಿತಿಗಳು, ರಾಜಕಾರಣಿ ನಾನಾ ತರದ ಸಂಸ್ಕøತಿಯವರು ಇಬ್ರಾಹಿಂ ಸಾಹೇಬರನ್ನು ಹೀರಿ ಬಿಸಾಡಿದರು. ಇವರ ಹೊಡೆತ ತಾಳಲಾರದೆ ತೀರ್ಥಹಳ್ಳಿಗೆ ಹೋಗಿ ನೆಲೆಸಿದರು. ಯಾಚಕರು ಅಲ್ಲಿಗೂ ದಾಳಿಯಿಟ್ಟರು. ಅಲ್ಲಿಂದ ಅವರು ತಮ್ಮ ಹುಟ್ಟೂರಾದ ಬಳ್ಳಾರಿ ಜಿಲ್ಲೆಯ ಹಿರೇಹಾಳಕ್ಕೆ ಹೋಗಿ ನೆಲೆಸಿದರು. ಅಲ್ಲಿ ಈ ಕೊಡುಗೈ ಕರ್ಣ ದಾನಮಾಡದ ಸ್ಥಿತಿಗೆ ಬಂದಿದ್ದರು. ಆದರೇನು ಇಬ್ರಾಹಿಂ ಸಾಹೇಬರ ಮನೆಗೆ ಹೋದವರು ಬರಿಗೈಲಿ ಹೋಗುವುದು ಅವರಿಗೇ ಅವಮಾನವೆಂದು ಭಾವಿಸಿ ಸಾಲಮಾಡಿ ದಾನ ಮಾಡತೊಡಗಿದರು. ಇಂತಹ ದಾನಶೂರ ಕರ್ಣನ ನೆನಪಿನ ಸಭೆಗೆ ಮೂವತ್ತು ಜನ ಬಂದರು. ಮನುಷ್ಯರು ಉಪಕಾರ ಸ್ಮರಣೆಯಿಲ್ಲದ ನೀಚರೆಂದು ಲಂಕೇಶ್ ಹೇಳಿದ್ದರು. ಆದರೆ ಇಬ್ರಾಹಿಂ ಸಾಹೇಬರು ಅದರ ಅರಿವಿದ್ದೂ ನಗುತ್ತಲೇ ಸಹಾಯ ಮಾಡಿದರು, ಮಾಡುತ್ತಲೇ ಹೊರಟುಹೋದರು.

ಈ ಸಮಯದಲ್ಲಿ ಕಡಿದಾಳು ಶಾಮಣ್ಣನವರು ಕುತೂಹಲ ಸಂಗತಿಯೊಂದನ್ನ ಹೇಳಿದರು. ಜೆ.ಹೆಚ್.ಪಟೇಲರು ಹಂಪಿ ಯೂನಿವರ್ಸಿಟಿಗೆ ಇಬ್ರಾಹಿಂ ಸಾಹೇಬರು ಮತ್ತು ಕಡಿದಾಳು ಶಾಮಣ್ಣನವರನ್ನ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದರು. ಸತತ ನಾಲ್ಕು ವರ್ಷಗಳ ಕಾಲ ಒಂದು ಸಭೆಗೂ ತಪ್ಪಿಸದಂತೆ ಇಬ್ರಾಹಿಂ ಸಾಹೇಬರು ಶಾಮಣ್ಣನವರನ್ನ ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಶಾಮಣ್ಣ ಸಂಗೀತ ಪ್ರೇಮಿಯೆಂದು ಗೊತ್ತಿದ್ದ ಇಬ್ರಾಹಿಂ ಸಾಹೇಬರು ತಮ್ಮ ಕಾರಿನಲ್ಲಿ ಸಂಗೀತದ ಸೀಡಿಗಳನ್ನು ತುಂಬಿಕೊಂಡು. ಅಲ್ಲದೆ ರಾಗಗಳ ಪರಿಚಯವನ್ನ ಮಾಡಿಸಿದರಂತೆ. ನಾಲ್ಕು ವರ್ಷದ ಹಂಪಿ ಪ್ರಯಾಣ ಅದೊಂದು ಸಂಗೀತದ ರಸದೌತಣದ ಪ್ರಯಾಣವಾಗಿತ್ತಂತೆ. ಮರುದಿನ ಶಾಮಣ್ಣನವರ ಸಹೋದರ ಗೋಪಾಲ್ ಮನೆಯಲ್ಲಿ ಸಿಕ್ಕ ಶಾಮಣ್ಣ ಹಿಂದಿನ ದಿನವನ್ನು ಮುಂದುವರಿಸಿದರು.

ಹಾಗೆ ನೋಡಿದರೆ ಶಾಮಣ್ಣನವರ ಬದುಕಿನಲ್ಲಿ ಸಂಗೀತ ಅಧಿಕೃತವಾಗಿ ಪ್ರವೇಶ ಪಡೆದದ್ದು ಮೈಸೂರಲ್ಲಿ ನಡೆದ ರವಿಶಂಕರ್ ಸಿತಾರ್ ಮತ್ತು ಅಲಿ ಅಕ್ಬರ್ ಖಾನ್‍ರವರ ಜುಗಲ್‍ಬಂದಿ ಕಾರ್ಯಕ್ರಮ ಕೇಳಿದ ನಂತರ. ಅದೇ ದಿನ ರಾಜೀವ ತಾರಾನಾಥ್ ಕೂಡ ಆ ಕಛೇರಿ ಕೇಳಿ ಸಂಗೀತದ ಭಾವಸಮಾದಿಗೆ ಒಳಗಾಗಿ ಜೊತೆಯಲ್ಲಿ ಬಂದವರನ್ನ ಮರೆತದ್ದು ಮತ್ತು ನಂತರ ಸರೋದ್ ಮಾಂತ್ರಿಕನಾದ ಆಲಿ ಅಕ್ಬರ್ ಖಾನ್ ಹುಡುಕುತ್ತ ಬಾಂಬೆಗೆ ಹೋದದ್ದು. ಆಶ್ಚರ್ಯವೆಂದರೆ ಶಾಮಣ್ಣನವರೂ ಹೋಗಿಬಿಟ್ಟರು. ಅದಾಗಲೇ ಸರೋದ್ ಮತ್ತು ಸಿತಾರ್‍ನ ನಾದಮೋಹದೊಳಗೆ ಸಿಲುಕಿದ ತೇಜಸ್ವಿಯವರು ನಾನು ಸಿತಾರ್ ಕಲಿಯುತ್ತೇನೆ, ನೀವು ಸರೋದ್ ಕಲಿಯಿರೆಂದು ಶಾಮಣ್ಣನವರಿಗೆ ಹೇಳಿದ್ದು ಕಾರಣವಾಗಿ ಶಾಮಣ್ಣ ಬಾಂಬೆಗೆ ಹೋದರು. ಅಲ್ಲಿಗೋಗಿ ನೋಡಿದರೆ ಚಿಕ್ಕಮನೆಯೊಂದರಲ್ಲಿ ಮಧ್ಯೆ ಒಂದು ಗೋಡೆ. ಆ ಕಡೆ ಅಡಿಗೆ ಮನೆ ಈ ಕಡೆ ಪುಟ್ಟ ಹಾಲು. ಅದಕ್ಕೆ ಅಟ್ಯಾಚ್ ಆದಂತೆ ಟಾಯ್ಲೆಟ್. ಆ ಮನೆಯಲ್ಲಿ ಆಲಿ ಅಕ್ಬರ್ ಖಾನ್‍ರವರಿಂದ ಸಂಗೀತ ಹೇಳಿಸಿಕೊಳ್ಳಲು ಹುಡುಗರು ಬರುತ್ತಿದ್ದರು. ಅವರೆಲ್ಲಾ ಹೊರಟುಹೋದರೆ ಶಾಮಣ್ಣ ಅಲ್ಲೇ ಉಳಿಯುತ್ತಿದ್ದರು. ತಮ್ಮ ಜಾತಿಯವನಲ್ಲ, ಕಳ್ಳುಬಳ್ಳಿಯವನೂ ಅಲ್ಲದ ಹುಡುಗ ಸಂಗೀತದ ಬೆನ್ನು ಹತ್ತಿ ಬಂದಿದ್ದಾನೆ, ಸರಿಯಾಗಿ ಭಾಷೆಯೂ ಬರುತ್ತಿಲ್ಲ. ಅಂತಹ ಶಾಮಣ್ಣನನ್ನ ತಮಗೇ ಮಲಗಲು ಜಾಗವಿಲ್ಲದ ಮನೆಯಲ್ಲಿ ಆಶ್ರಯ ಕೊಟ್ಟು ಸರೋದ್ ಹೇಳಿಕೊಟ್ಟ ಆಲಿ ಅಕ್ಬರ್‍ಖಾನ್ ಮತ್ತು ಅವರ ಶ್ರೀಮತಿಯವರ ಉದಾತ್ತ ನಡವಳಿಕೆ ನೆನಸಿಕೊಂಡರೆ ಈ ಭರತ ಖಂಡದಲ್ಲಿ ಎಂತೆಂತಹ ಮೇಧಾವಿಗಳು ಆಗಿಹೋದರು ಅನ್ನಿಸುತ್ತದೆ. ಸುದೈವಕ್ಕೆ ಆಲಿ ಅಕ್ಬರ್‍ಖಾನ್‍ರಿಗೆ ಎರಡು ಗಂಡುಮಕ್ಕಳಿದ್ದು, ಅವು ಶಾಮಣ್ಣನವರಿಗೆ ಅಂಟಿಕೊಂಡವು. ಶಾಮಣ್ಣನವರಿಗೆ ಡ್ರೈವಿಂಗ್ ಬರುತ್ತಿದ್ದುದು ಅನುಕೂಲವಾಗಿತ್ತು. ಆಗಾಗ್ಗೆ ರವಿಶಂಕರ್ ಮತ್ತು ಅವರ ಶ್ರೀಮತಿ ಅನ್ನಪೂರ್ಣದೇವಿಯವರನ್ನ ಅವರ ಮನೆಗೆ ತಲುಪಿಸಲು, ಕರೆದುಕೊಂಡು ಬರಲು ಶಾಮಣ್ಣ ಬೇಕಾಗಿತ್ತು. ಅಲ್ಲಾವುದ್ದೀನ್ ಖಾನ್, ಅಲಿ ಅಕ್ಬರ್ ಖಾನರ ತಂದೆ. ತಮ್ಮ ಮಗಳಿಗೆ ಅನ್ನಪೂರ್ಣ ಎಂದು ಹೆಸರಿಟ್ಟು ರವಿಶಂಕರ್‍ಗೆ ಮದುವೆ ಮಾಡಿಕೊಟ್ಟಿದ್ದರು. ಹಾಗೇ ತಮ್ಮ ಮಗ ಅಲಿ ಅಕ್ಬರ್ ಖಾನ್ ಹಿಂದೂ ಹುಡುಗಿಯನ್ನ ಮದುವೆಯಾಗಿದ್ದರು. ಇವರನ್ನೆಲ್ಲಾ ಬಂಧಿಸಿದ್ದು ಸಂಗೀತ. ಹಾಗೆನೋಡಿದರೆ ಈ ಸಂಗೀತ ಲೋಕದಲ್ಲಿ ಮುಳುಗಿದವರಿಗೆ ದೇಶ, ಅದರ ಆಡಳಿತ, ಪ್ರಧಾನಮಂತ್ರಿ, ದೇಶದ ಆಗುಹೋಗು ಇದಾವುದು ಅರಿವಿಗೇ ಬರುವುದಿಲ್ಲ.

ಅಲಿ ಅಕ್ಬರ್ ಖಾನ್ ಸಂಗೀತ ಕಛೇರಿಗೆ ಬಂದರೆ ತಮ್ಮ ಸರೋದ್ ಬಿಟ್ಟು ಇನ್ನೇನೂ ನೋಡುತ್ತಿರಲಿಲ್ಲ. ಬೇರೆ ಮಾತೇ ಆಡದ ಅವರು ಅಗತ್ಯವಿದ್ದಷ್ಟು ಮಾತನಾಡಿ ಒಂದಿಷ್ಟು ಸರೋದ್ ಕಲಿಸಿದರಂತೆ. ಆ ನಂತರ ಅಮೆರಿಕದ ಯೂನಿವರ್ಸಿಟಿಯೊಂದಕ್ಕೆ ಇಂಡಿಯನ್ ಮ್ಯೂಜಿಕ್ ಶಾಖೆಯ ನಿರ್ದೇಶಕರಾಗಿ ಹೊರಟು ಹೋದರು. ಇತ್ತ ಅವರ ಶ್ರೀಮತಿಯವರು ಶಾಮಣ್ಣನವರಿಗೆ ಗುರುಪತ್ನಿಯ ಕಾಣಿಕೆಯಾಗಿ ಎರಡು ಜೊತೆ ಜುಬ್ಬ ಪೈಜಾಮ್ ಹೊಲಿಸಿಕೊಟ್ಟು ನಮ್ಮ ನೆನಪಾಗಿ ಇರಲಿ ಎಂದು ಹೇಳಿ ಊರು ತಲುಪುವಷ್ಟು ಗಾಡಿ ಚಾರ್ಜು ಕೊಟ್ಟು ಕಳಿಸಿದ್ದರು. ಅವರು ಕೊಟ್ಟ ಜುಬ್ಬ ಇನ್ನೂ ಇದೆ ಎಂದು ತಣ್ಣಗೆ ಹೇಳಿದ ಶಾಮಣ್ಣನವರ ಕಣ್ಣು ತೇವವಾದಂತೆ ಕಾಣಿಸಿದವು. ಇಂತಹ ಅನುಭವದ ಮತ್ತು ಶ್ರೀಮಂತಿಕೆಯ ನೆನಪುಗಳನ್ನು ಹೊಂದಿರುವ ಶಾಮಣ್ಣನವರ ಮೇಲೆ ಮೂರು ಪುಸ್ತಕ, ಒಂದು ನಾಟಕ ಬಂದಿದ್ದರೂ ಅವರ ಪಕ್ಕ ಕುಳಿತು ಆಲಿಸಿದರೆ ಇನ್ನಷ್ಟು ಅಪೂರ್ಣ ನೆನಪುಗಳು ಅನಾವರಣಗೊಳ್ಳಬಹುದು. ನ್ಯಾಯಪಥ ಪತ್ರಿಕೆಗೆ ಎರಡು ವರ್ಷದ ಚಂದಾ ಹಣದ ಚೆಕ್ಕನ್ನು ಶ್ರೀದೇವಕ್ಕ ಕೈಗಿತ್ತಾಗ ಶಾಮಣ್ಣ ಮತ್ತು ನಾನು ವಾಸ್ತವಕ್ಕಿಳಿದೆವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...