Homeಮುಖಪುಟಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

ಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

- Advertisement -
- Advertisement -

| ಬಿ. ಚಂದ್ರೇಗೌಡ |

ಮರಿ ಹಾಕಿದ್ದ ಬೆಕ್ಕಿನಂತೆ ಓಡಾಡುತ್ತಿದ್ದ ಶಾಮಣ್ಣನವರಲ್ಲಿ ಲವಲವಿಕೆ ಸ್ವಲ್ಪ ತಗ್ಗಿದೆ. ಆದ್ದರಿಂದ ಶ್ರೀದೇವಕ್ಕನವರು ಶಾಮಣ್ಣನವರ ಬಗ್ಗೆ ಹಿಂದಿಗಿಂತ ಹೆಚ್ಚು ಕಾಳಜಿವಹಿಸಿ ಯಾವುದೇ ಸಭೆ ಸಮಾರಂಭಕ್ಕೆ ಜೊತೆಯಲ್ಲೇ ಬಂದು ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ದಿನಾಂಕ 14ರಂದು ನಡೆದ ಶಿವಮೊಗ್ಗದ ಕೊಡುಗೈದಾನಿ ಇಬ್ರಾಹಿಂ ಸಾಹೇಬರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮಕ್ಕೆ ಶಾಮಣ್ಣ ಶ್ರೀದೇವಕ್ಕ ಜೊತೆಯಾಗೆ ಬಂದಿದ್ದರು. ಇಬ್ರಾಹಿಂ ಸಾಹೇಬರು ಕನ್ನಡದ ಸಾಂಸ್ಕøತಿಕ ಲೋಕದಲ್ಲಿ ಅಚ್ಚಳಿಯದ ನೆನಪನ್ನ ಬಿಟ್ಟು ಹೋಗಿದ್ದಾರೆ. 1992ರಲ್ಲಿ ಬೆಂಗಳೂರಲ್ಲಿ ನಡೆದ ಲಂಕೇಶ್-ಕಂಬಾರ, ಗಿರೀಶ್ ಕಾರ್ನಾಡರ ನಾಟಕೋತ್ಸವಕ್ಕೆ ಧನಸಹಾಯ ಮಾಡಿದವರು ಇಬ್ರಾಹಿಂ ಸಾಹೇಬರು. ಅಷ್ಟೇ ಅಲ್ಲ ಶಿವಮೊಗ್ಗದ ಅವರ ಮನೆ ಆವರಣ ಯಾಚಕರಿಂದ ತುಂಬಿರುತ್ತಿತ್ತು.

ಮದುವೆ, ಮುಂಜಿ, ದೇವಸ್ಥಾನಕ್ಕೆ ಬಣ್ಣ, ಗಣಪತಿ ಹಬ್ಬದ ಖರ್ಚು ಇದಲ್ಲದೆ ಪುಸ್ತಕ ಪ್ರಕಟಿಸುವ ಸಾಹಿತಿಗಳು, ರಾಜಕಾರಣಿ ನಾನಾ ತರದ ಸಂಸ್ಕøತಿಯವರು ಇಬ್ರಾಹಿಂ ಸಾಹೇಬರನ್ನು ಹೀರಿ ಬಿಸಾಡಿದರು. ಇವರ ಹೊಡೆತ ತಾಳಲಾರದೆ ತೀರ್ಥಹಳ್ಳಿಗೆ ಹೋಗಿ ನೆಲೆಸಿದರು. ಯಾಚಕರು ಅಲ್ಲಿಗೂ ದಾಳಿಯಿಟ್ಟರು. ಅಲ್ಲಿಂದ ಅವರು ತಮ್ಮ ಹುಟ್ಟೂರಾದ ಬಳ್ಳಾರಿ ಜಿಲ್ಲೆಯ ಹಿರೇಹಾಳಕ್ಕೆ ಹೋಗಿ ನೆಲೆಸಿದರು. ಅಲ್ಲಿ ಈ ಕೊಡುಗೈ ಕರ್ಣ ದಾನಮಾಡದ ಸ್ಥಿತಿಗೆ ಬಂದಿದ್ದರು. ಆದರೇನು ಇಬ್ರಾಹಿಂ ಸಾಹೇಬರ ಮನೆಗೆ ಹೋದವರು ಬರಿಗೈಲಿ ಹೋಗುವುದು ಅವರಿಗೇ ಅವಮಾನವೆಂದು ಭಾವಿಸಿ ಸಾಲಮಾಡಿ ದಾನ ಮಾಡತೊಡಗಿದರು. ಇಂತಹ ದಾನಶೂರ ಕರ್ಣನ ನೆನಪಿನ ಸಭೆಗೆ ಮೂವತ್ತು ಜನ ಬಂದರು. ಮನುಷ್ಯರು ಉಪಕಾರ ಸ್ಮರಣೆಯಿಲ್ಲದ ನೀಚರೆಂದು ಲಂಕೇಶ್ ಹೇಳಿದ್ದರು. ಆದರೆ ಇಬ್ರಾಹಿಂ ಸಾಹೇಬರು ಅದರ ಅರಿವಿದ್ದೂ ನಗುತ್ತಲೇ ಸಹಾಯ ಮಾಡಿದರು, ಮಾಡುತ್ತಲೇ ಹೊರಟುಹೋದರು.

ಈ ಸಮಯದಲ್ಲಿ ಕಡಿದಾಳು ಶಾಮಣ್ಣನವರು ಕುತೂಹಲ ಸಂಗತಿಯೊಂದನ್ನ ಹೇಳಿದರು. ಜೆ.ಹೆಚ್.ಪಟೇಲರು ಹಂಪಿ ಯೂನಿವರ್ಸಿಟಿಗೆ ಇಬ್ರಾಹಿಂ ಸಾಹೇಬರು ಮತ್ತು ಕಡಿದಾಳು ಶಾಮಣ್ಣನವರನ್ನ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದರು. ಸತತ ನಾಲ್ಕು ವರ್ಷಗಳ ಕಾಲ ಒಂದು ಸಭೆಗೂ ತಪ್ಪಿಸದಂತೆ ಇಬ್ರಾಹಿಂ ಸಾಹೇಬರು ಶಾಮಣ್ಣನವರನ್ನ ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಶಾಮಣ್ಣ ಸಂಗೀತ ಪ್ರೇಮಿಯೆಂದು ಗೊತ್ತಿದ್ದ ಇಬ್ರಾಹಿಂ ಸಾಹೇಬರು ತಮ್ಮ ಕಾರಿನಲ್ಲಿ ಸಂಗೀತದ ಸೀಡಿಗಳನ್ನು ತುಂಬಿಕೊಂಡು. ಅಲ್ಲದೆ ರಾಗಗಳ ಪರಿಚಯವನ್ನ ಮಾಡಿಸಿದರಂತೆ. ನಾಲ್ಕು ವರ್ಷದ ಹಂಪಿ ಪ್ರಯಾಣ ಅದೊಂದು ಸಂಗೀತದ ರಸದೌತಣದ ಪ್ರಯಾಣವಾಗಿತ್ತಂತೆ. ಮರುದಿನ ಶಾಮಣ್ಣನವರ ಸಹೋದರ ಗೋಪಾಲ್ ಮನೆಯಲ್ಲಿ ಸಿಕ್ಕ ಶಾಮಣ್ಣ ಹಿಂದಿನ ದಿನವನ್ನು ಮುಂದುವರಿಸಿದರು.

ಹಾಗೆ ನೋಡಿದರೆ ಶಾಮಣ್ಣನವರ ಬದುಕಿನಲ್ಲಿ ಸಂಗೀತ ಅಧಿಕೃತವಾಗಿ ಪ್ರವೇಶ ಪಡೆದದ್ದು ಮೈಸೂರಲ್ಲಿ ನಡೆದ ರವಿಶಂಕರ್ ಸಿತಾರ್ ಮತ್ತು ಅಲಿ ಅಕ್ಬರ್ ಖಾನ್‍ರವರ ಜುಗಲ್‍ಬಂದಿ ಕಾರ್ಯಕ್ರಮ ಕೇಳಿದ ನಂತರ. ಅದೇ ದಿನ ರಾಜೀವ ತಾರಾನಾಥ್ ಕೂಡ ಆ ಕಛೇರಿ ಕೇಳಿ ಸಂಗೀತದ ಭಾವಸಮಾದಿಗೆ ಒಳಗಾಗಿ ಜೊತೆಯಲ್ಲಿ ಬಂದವರನ್ನ ಮರೆತದ್ದು ಮತ್ತು ನಂತರ ಸರೋದ್ ಮಾಂತ್ರಿಕನಾದ ಆಲಿ ಅಕ್ಬರ್ ಖಾನ್ ಹುಡುಕುತ್ತ ಬಾಂಬೆಗೆ ಹೋದದ್ದು. ಆಶ್ಚರ್ಯವೆಂದರೆ ಶಾಮಣ್ಣನವರೂ ಹೋಗಿಬಿಟ್ಟರು. ಅದಾಗಲೇ ಸರೋದ್ ಮತ್ತು ಸಿತಾರ್‍ನ ನಾದಮೋಹದೊಳಗೆ ಸಿಲುಕಿದ ತೇಜಸ್ವಿಯವರು ನಾನು ಸಿತಾರ್ ಕಲಿಯುತ್ತೇನೆ, ನೀವು ಸರೋದ್ ಕಲಿಯಿರೆಂದು ಶಾಮಣ್ಣನವರಿಗೆ ಹೇಳಿದ್ದು ಕಾರಣವಾಗಿ ಶಾಮಣ್ಣ ಬಾಂಬೆಗೆ ಹೋದರು. ಅಲ್ಲಿಗೋಗಿ ನೋಡಿದರೆ ಚಿಕ್ಕಮನೆಯೊಂದರಲ್ಲಿ ಮಧ್ಯೆ ಒಂದು ಗೋಡೆ. ಆ ಕಡೆ ಅಡಿಗೆ ಮನೆ ಈ ಕಡೆ ಪುಟ್ಟ ಹಾಲು. ಅದಕ್ಕೆ ಅಟ್ಯಾಚ್ ಆದಂತೆ ಟಾಯ್ಲೆಟ್. ಆ ಮನೆಯಲ್ಲಿ ಆಲಿ ಅಕ್ಬರ್ ಖಾನ್‍ರವರಿಂದ ಸಂಗೀತ ಹೇಳಿಸಿಕೊಳ್ಳಲು ಹುಡುಗರು ಬರುತ್ತಿದ್ದರು. ಅವರೆಲ್ಲಾ ಹೊರಟುಹೋದರೆ ಶಾಮಣ್ಣ ಅಲ್ಲೇ ಉಳಿಯುತ್ತಿದ್ದರು. ತಮ್ಮ ಜಾತಿಯವನಲ್ಲ, ಕಳ್ಳುಬಳ್ಳಿಯವನೂ ಅಲ್ಲದ ಹುಡುಗ ಸಂಗೀತದ ಬೆನ್ನು ಹತ್ತಿ ಬಂದಿದ್ದಾನೆ, ಸರಿಯಾಗಿ ಭಾಷೆಯೂ ಬರುತ್ತಿಲ್ಲ. ಅಂತಹ ಶಾಮಣ್ಣನನ್ನ ತಮಗೇ ಮಲಗಲು ಜಾಗವಿಲ್ಲದ ಮನೆಯಲ್ಲಿ ಆಶ್ರಯ ಕೊಟ್ಟು ಸರೋದ್ ಹೇಳಿಕೊಟ್ಟ ಆಲಿ ಅಕ್ಬರ್‍ಖಾನ್ ಮತ್ತು ಅವರ ಶ್ರೀಮತಿಯವರ ಉದಾತ್ತ ನಡವಳಿಕೆ ನೆನಸಿಕೊಂಡರೆ ಈ ಭರತ ಖಂಡದಲ್ಲಿ ಎಂತೆಂತಹ ಮೇಧಾವಿಗಳು ಆಗಿಹೋದರು ಅನ್ನಿಸುತ್ತದೆ. ಸುದೈವಕ್ಕೆ ಆಲಿ ಅಕ್ಬರ್‍ಖಾನ್‍ರಿಗೆ ಎರಡು ಗಂಡುಮಕ್ಕಳಿದ್ದು, ಅವು ಶಾಮಣ್ಣನವರಿಗೆ ಅಂಟಿಕೊಂಡವು. ಶಾಮಣ್ಣನವರಿಗೆ ಡ್ರೈವಿಂಗ್ ಬರುತ್ತಿದ್ದುದು ಅನುಕೂಲವಾಗಿತ್ತು. ಆಗಾಗ್ಗೆ ರವಿಶಂಕರ್ ಮತ್ತು ಅವರ ಶ್ರೀಮತಿ ಅನ್ನಪೂರ್ಣದೇವಿಯವರನ್ನ ಅವರ ಮನೆಗೆ ತಲುಪಿಸಲು, ಕರೆದುಕೊಂಡು ಬರಲು ಶಾಮಣ್ಣ ಬೇಕಾಗಿತ್ತು. ಅಲ್ಲಾವುದ್ದೀನ್ ಖಾನ್, ಅಲಿ ಅಕ್ಬರ್ ಖಾನರ ತಂದೆ. ತಮ್ಮ ಮಗಳಿಗೆ ಅನ್ನಪೂರ್ಣ ಎಂದು ಹೆಸರಿಟ್ಟು ರವಿಶಂಕರ್‍ಗೆ ಮದುವೆ ಮಾಡಿಕೊಟ್ಟಿದ್ದರು. ಹಾಗೇ ತಮ್ಮ ಮಗ ಅಲಿ ಅಕ್ಬರ್ ಖಾನ್ ಹಿಂದೂ ಹುಡುಗಿಯನ್ನ ಮದುವೆಯಾಗಿದ್ದರು. ಇವರನ್ನೆಲ್ಲಾ ಬಂಧಿಸಿದ್ದು ಸಂಗೀತ. ಹಾಗೆನೋಡಿದರೆ ಈ ಸಂಗೀತ ಲೋಕದಲ್ಲಿ ಮುಳುಗಿದವರಿಗೆ ದೇಶ, ಅದರ ಆಡಳಿತ, ಪ್ರಧಾನಮಂತ್ರಿ, ದೇಶದ ಆಗುಹೋಗು ಇದಾವುದು ಅರಿವಿಗೇ ಬರುವುದಿಲ್ಲ.

ಅಲಿ ಅಕ್ಬರ್ ಖಾನ್ ಸಂಗೀತ ಕಛೇರಿಗೆ ಬಂದರೆ ತಮ್ಮ ಸರೋದ್ ಬಿಟ್ಟು ಇನ್ನೇನೂ ನೋಡುತ್ತಿರಲಿಲ್ಲ. ಬೇರೆ ಮಾತೇ ಆಡದ ಅವರು ಅಗತ್ಯವಿದ್ದಷ್ಟು ಮಾತನಾಡಿ ಒಂದಿಷ್ಟು ಸರೋದ್ ಕಲಿಸಿದರಂತೆ. ಆ ನಂತರ ಅಮೆರಿಕದ ಯೂನಿವರ್ಸಿಟಿಯೊಂದಕ್ಕೆ ಇಂಡಿಯನ್ ಮ್ಯೂಜಿಕ್ ಶಾಖೆಯ ನಿರ್ದೇಶಕರಾಗಿ ಹೊರಟು ಹೋದರು. ಇತ್ತ ಅವರ ಶ್ರೀಮತಿಯವರು ಶಾಮಣ್ಣನವರಿಗೆ ಗುರುಪತ್ನಿಯ ಕಾಣಿಕೆಯಾಗಿ ಎರಡು ಜೊತೆ ಜುಬ್ಬ ಪೈಜಾಮ್ ಹೊಲಿಸಿಕೊಟ್ಟು ನಮ್ಮ ನೆನಪಾಗಿ ಇರಲಿ ಎಂದು ಹೇಳಿ ಊರು ತಲುಪುವಷ್ಟು ಗಾಡಿ ಚಾರ್ಜು ಕೊಟ್ಟು ಕಳಿಸಿದ್ದರು. ಅವರು ಕೊಟ್ಟ ಜುಬ್ಬ ಇನ್ನೂ ಇದೆ ಎಂದು ತಣ್ಣಗೆ ಹೇಳಿದ ಶಾಮಣ್ಣನವರ ಕಣ್ಣು ತೇವವಾದಂತೆ ಕಾಣಿಸಿದವು. ಇಂತಹ ಅನುಭವದ ಮತ್ತು ಶ್ರೀಮಂತಿಕೆಯ ನೆನಪುಗಳನ್ನು ಹೊಂದಿರುವ ಶಾಮಣ್ಣನವರ ಮೇಲೆ ಮೂರು ಪುಸ್ತಕ, ಒಂದು ನಾಟಕ ಬಂದಿದ್ದರೂ ಅವರ ಪಕ್ಕ ಕುಳಿತು ಆಲಿಸಿದರೆ ಇನ್ನಷ್ಟು ಅಪೂರ್ಣ ನೆನಪುಗಳು ಅನಾವರಣಗೊಳ್ಳಬಹುದು. ನ್ಯಾಯಪಥ ಪತ್ರಿಕೆಗೆ ಎರಡು ವರ್ಷದ ಚಂದಾ ಹಣದ ಚೆಕ್ಕನ್ನು ಶ್ರೀದೇವಕ್ಕ ಕೈಗಿತ್ತಾಗ ಶಾಮಣ್ಣ ಮತ್ತು ನಾನು ವಾಸ್ತವಕ್ಕಿಳಿದೆವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...