Homeಅಂಕಣಗಳುಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

ಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

- Advertisement -
- Advertisement -

ಭಾರತವನ್ನೂ ಒಳಗೊಂಡಂತೆ ಜಗತ್ತಿನ ಸಾಂಪ್ರದಾಯಿಕ ಸಮಾಜಗಳು ಪರಂಪರೆ, ಧರ್ಮ ಮತ್ತು ಚರಿತ್ರೆಗಳನ್ನು ಪರಿಭಾವಿಸುವ ಪರಿ ಕಾಲದಿಂದ ಕಾಲಕ್ಕೆ ಆತಂಕಗಳನ್ನು ಹುಟ್ಟುಹಾಕುತ್ತಲೇ ಬಂದಿದೆ. ಪರಂಪರೆ, ಸಂಸ್ಕøತಿ, ಚರಿತ್ರೆ, ಧರ್ಮ, ರಾಷ್ಟ್ರೀಯತೆ, ಸಂಪ್ರದಾಯ, ಆಚರಣೆಗಳು ಯಾವತ್ತೂ ಅಬಾಧಿತವಾಗಿರಬೇಕು. ಇವು ಸರ್ವಕಾಲಕ್ಕೂ ಮೂಲರೂಪದಲ್ಲಿಯೇ ಉಳಿಯಬೇಕು. ಬರುವ ತಲೆಮಾರುಗಳು ಇವುಗಳನ್ನು ಖಿಲಗೊಳ್ಳದಂತೆ ಕಾಪಾಡಿಕೊಂಡು ಬರಬೇಕು ಎಂಬ ತಲ್ಲಣರೂಪಿ ಹಪಾಹಪಿ ಈ ಸಮಾಜಗಳಲ್ಲಿ ಉಳಿದುಕೊಂಡು ಬಂದಿದೆ. ಪರಂಪರೆ, ಧರ್ಮ ಇತ್ಯಾದಿಗಳು ನಮ್ಮ ಜೀವನದ ಅನೂಹ್ಯ ಅವಕಾಶದಲ್ಲಿದ್ದು (Sಠಿಚಿಛಿe) ನಮ್ಮ ಬದುಕನ್ನು ರೂಪಿಸುತ್ತಾ ಬಂದಿವೆ ಎಂದು ಈ ಸಮಾಜಗಳು ನಂಬಿಕೊಂಡು ಬಂದಿವೆ. ಈ ಕಾರಣಕ್ಕಾಗಿ ಸಾಂಪ್ರದಾಯಿಕ ಸಮಾಜದ ನಿತ್ಯದ ಬದುಕು ಮತ್ತು ಅದರ ಆಗುಹೋಗುಗಳ ನಿಯಂತ್ರಕ ಶಕ್ತಿಗಳಾಗಿ ಪರಂಪರೆ, ಧರ್ಮ ಮತ್ತು ಚರಿತ್ರೆಗಳು ಭಾವಿಸಲ್ಪಟ್ಟಿವೆ. ವರ್ತಮಾನದ ತಲ್ಲಣಗಳು ಬಾಧಿಸುವಾಗೆಲ್ಲ ಈ ಸಮಾಜಗಳು ಚರಿತ್ರೆಯ ಇಲ್ಲವೆ ಪುರಾಣಗಳ ಆವರಣದಲ್ಲಿ ಪರಿಹಾರಗಳನ್ನು ಹುಡುಕಲು ಧಾವಿಸುತ್ತವೆ. ನಿತ್ಯದ ಬವಣೆಗಳನ್ನು ಮತ್ತು ಹಿಂಜರಿಕೆಗಳನ್ನು ನೀಗಿಕೊಳ್ಳಲು ಈ ಸಮುದಾಯಗಳು ಪುರಾಣಗಳ ಕಡೆ ಮುಖ ಮಾಡುವುದು ಒಂದು ಬಗೆಯ ವ್ಯಸನದಂತೆ ಭಾಸವಾಗುತ್ತಿದೆ. ಪರಂಪರೆ, ಚರಿತ್ರೆ, ಸಂಸೃತಿ ಎಂಬ ಅಮೂರ್ತ ಸಂಗತಿಗಳಿಗೆ ವರ್ತಮಾನವನ್ನು ರೂಪಿಸಿಬಿಡುವ ಇಂತಹ ಅಗಾಧ ಶಕ್ತಿ ಇದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಇಂತಹ ಪ್ರಶ್ನೆಯನ್ನು ಕೇಳಿಕೊಂಡ ಸಮುದಾಯಗಳು ಮಧ್ಯಕಾಲೀನ ಯುರೋಪಿನ ಹಣೆಬರಹವನ್ನೇ ಬದಲಿಸಿದವು. ಕ್ಯಾಥೋಲಿಕ್ ಚರ್ಚ್‍ನ ಮೂಲಭೂತವಾದ ಮತ್ತು ಅದು ಹುಟ್ಟುಹಾಕಿದ್ದ ಅಂದಿನ ಊಳಿಗಮಾನ್ಯ ದುರಾಡಳಿತವನ್ನು ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದ ದುಡಿವ ಜನ ಮೂಲೋತ್ಪಾಟನೆ ಮಾಡಿದರು. ಹೊಸ ಯುರೋಪ್ ಜನ್ಮ ತಾಳಿತು. ಯುರೋಪ್ ಪುನರುಜ್ಜೀವನಗೊಂಡು ಹೊಸ ದಿಕ್ಕಿಗೆ ನಡೆದುಕೊಂಡು ಹೋಯಿತು. ಹೊಸ ಬದುಕು ಅರಳಿ ನಿಂತು ಹಳೆಯ ಪರಂಪರೆ, ಸಂಸ್ಕøತಿಯ ಹೆಸರಲ್ಲಿ ಅಸ್ತಿತ್ವದಲ್ಲಿದ್ದ ಮೂಲಭೂತವಾದ ಮತ್ತು ಊಳಿಗಮಾನ್ಯ ದುರಾಡಳಿತಗಳು ಕೊನೆಗೊಂಡವು. ಹಳೆಯ ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳಿಗಾಗಿ ಮಧ್ಯಕಾಲೀನ ಯುರೋಪಿನ ಸಮುದಾಯಗಳು ತಮ್ಮ ಬದುಕನ್ನು ಅರಳಿಸುವ ಹೊಸ ಕನಸುಗಳನ್ನು ಕಳೆದುಕೊಳ್ಳಲಿಲ್ಲ. ಫ್ರಾನ್ಸ್‍ನಲ್ಲಿ ಆದ ರಾಜಕೀಯ ಬದಲಾವಣೆಗಳು, ರಷ್ಯಾ, ಚೀನಾ, ವಿಯಟ್ನಾಮ್, ಭಾರತ ಮತ್ತು ಕ್ಯೂಬಾಗಳ ಮರುಹುಟ್ಟು ಕೇವಲ ಪರಂಪರೆಯ ರೂಢಿಗತ ಸಂಗತಿಗಳಿಂದ ಆದದ್ದಲ್ಲ. ಬದುಕುವ ಸ್ವಾತಂತ್ರ್ಯವನ್ನು ಹಂಬಲಿಸುವ ಜನ ದೇಶಕಾಲಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಪರಂಪರೆ, ಸಂಸ್ಕøತಿ, ಚರಿತ್ರೆಗಳು ಅಪೌರುಷೇಯವಾದವುಗಳಲ್ಲ. ಅವು ಜನರ ಬದುಕಿನ ಉತ್ಪನ್ನಗಳು. ಮನುಷ್ಯನ ಬದುಕು ಬದಲಾದಂತೆ ಇವೂ ಬದಲಾಗುತ್ತವೆ. ಬದಲಾಗದೇ ಇರುವ ಸಂಗತಿಗಳು ಅವಶೇಷಗಳಂತಿದ್ದು, ಒಂದು ದಿನ ನಶಿಸಿ ಹೋಗುತ್ತವೆ. ಆದರೆ ಬದಲಾವಣೆಗಳನ್ನು ಬಯಸದ ಜನ, ಪರಂಪರೆ, ಸಂಸ್ಕøತಿ ಮತ್ತು ಧರ್ಮಗಳ ಹೆಸರಲ್ಲಿ ಅವಶೇಷಗಳನ್ನೇ ಮೋಹಿಸುತ್ತಾ ಬಂದಿದ್ದಾರೆ. ಭಯೋತ್ಪಾದನೆ, ಜಾತಿವಾದ, ಕೋಮುವಾದ, ಫ್ಯಾಸಿಸಮ್‍ಗಳ ಮೂಲಗಳಿರುವುದು ಪರಂಪರೆಯ ಈ ಮೋಹದಲ್ಲಿ. ಬದಲಾವಣೆಗಳನ್ನು ದ್ವೇಷಿಸುವ ಮೂಲಭೂತವಾದ ಜಗತ್ತಿನ ಎಲ್ಲ ಅಮಾಯಕರ ರಕ್ತದ ರುಚಿ ನೋಡಿದೆ, ನೋಡುತ್ತಲೂ ಇದೆ.
ಶಬರಿಮಲೆಯ ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿರಾಕರಿಸುತ್ತಿರುವ ಜನರ ಮೌಢ್ಯವನ್ನು ನೋಡಿ ಮೇಲಿನ ಟಿಪ್ಪಣಿಯನ್ನು ಬರೆಯಬೇಕಾಯಿತು. ಶಬರಿಮಲೆಯ ದೇವಾಲಯಕ್ಕೆ ಪ್ರವೇಶಿಸುವ ಮಹಿಳೆಯರನ್ನು ತಡೆಯಬಾರದೆಂದೂ, ದೇವಾಲಯ ಪ್ರವೇಶ ಮಹಿಳೆಯರ ಹಕ್ಕು ಎಂದು ಸುಪ್ರಿಮ್ ಕೋರ್ಟ್ ಬಹುಮತದ ತೀರ್ಪು ನೀಡಿದೆ. ಈ ತೀರ್ಪು ಒಂದು ಅರ್ಥದಲ್ಲಿ ಪರಂಪರೆಯನ್ನು ಕುರುಡಾಗಿ ಮೋಹಿಸುವ ಜನರಿಗೆ ಚಾಟಿ ಬೀಸಿದೆ. 1965ರಲ್ಲಿ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಕೇರಳ ಸರ್ಕಾರ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶವನ್ನು ನಿರಾಕರಿಸಿತ್ತು. 10 ರಿಂದ 50 ವರ್ಷಗಳ ವಯಸ್ಸಿನ ಮಹಿಳೆಯರು ಮುಟ್ಟಾಗುವುದರಿಂದ ಅವರು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಅನರ್ಹರು ಎಂಬ ಕೇರಳ ಸರ್ಕಾರದ ನಿರ್ಧಾರ ಈ ತೀರ್ಪಿನಿಂದಾಗಿ ರದ್ದಾದಂತಾಗಿದೆ. ಆದರೆ, ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವುದು ಕೇವಲ ಕೇರಳ ಸರ್ಕಾರದ ನಿರ್ಧಾರವಲ್ಲ. ಆರಾಧನಾ ಸ್ಥಳಗಳ ಪ್ರವೇಶವನ್ನು ನಿರ್ಬಂಧಿಸುವ ವಿಧಿಗಳು ಹಿಂದೂ ಧರ್ಮದಲ್ಲಿ ಹಾಸುಹೊಕ್ಕಾಗಿವೆ. ಯಾರು ತಪಸ್ಸು ಮಾಡಬೇಕು, ಯಾರು ಓದಬೇಕು, ಜ್ಞಾನವನ್ನು ಪಡೆಯಲು ಯಾರು ಅರ್ಹರು, ಯಾರು ದೇವರಿಗೆ ಹತ್ತಿರವಾಗಬೇಕು, ಯಾರು ದೇವರನ್ನು ಸಮೀಪಿಸಬಹುದು ಎಂಬ ವಿಧಿಗಳು ಹಿಂದೂ ಧರ್ಮಶಾಸ್ತ್ರದಲ್ಲಿ ಪದೇಪದೇ ಸ್ಪಷ್ಟಪಡಿಸಲ್ಪಟ್ಟಿವೆ. ಈ ವಿಧಿಗಳನ್ನು ಪರಂಪರೆಯ ವ್ಯಾಮೋಹಿಗಳು

ಕಾಲದಿಂದ ಕಾಲಕ್ಕೆ ಜೀವಂತವಾಗಿಟ್ಟುಕೊಂಡೇ ಬಂದಿದ್ದಾರೆ. ಕೆಳಜಾತಿಯ ದುಡಿವ ಜನರನ್ನು ಮತ್ತು ಮಹಿಳೆಯರನ್ನು ಆರಾಧನಾ ಸ್ಥಳಗಳಿಂದ ಕಟ್ಟುನಿಟ್ಟಾಗಿ ಬಹಿಷ್ಕರಿಸಿದ್ದು ಮತ್ತು ಅದನ್ನು ಪರಂಪರೆಯ ಹೆಸರಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಧರ್ಮವೆಂದರೆ ಅದು ಹಿಂದು ಧರ್ಮ ಮಾತ್ರ. ಹಿಂದೂ ಧರ್ಮದ ಈ ಜೀವವಿರೋಧಿ ಪರಂಪರೆಗೆ ಪರ್ಯಾಯವಾಗಿ ಅನೇಕ ದರ್ಶನಗಳು ಭಾರತದಲ್ಲಿ ಹುಟ್ಟಿವೆ. ಬೌದ್ಧ ದರ್ಶನ ಮತ್ತು ವಚನ ಚಳುವಳಿಯ ಆಶಯಗಳು, ಹಿಂದೂ ಧರ್ಮದ ರೂಢಿಗತ ಚಿಂತನೆಗಳಿಗೆ ಪರ್ಯಾಯಗಳನ್ನು ಮಾತ್ರ ರೂಪಿಸಲಿಲ್ಲ. ಈ ದೇಶದ ಬಹುಸಂಖ್ಯಾತ ದುಡಿವ ಜನರ ಅಂತಃಸ್ಸತ್ವವನ್ನು ನ್ಯಾಯಬದ್ಧಗೊಳಿಸುವ ತತ್ವದರ್ಶನವನ್ನು ರೂಪಿಸಿದವು. ತೀರಾ ಇತ್ತೀಚೆಗೆ, ದೇವಾಲಯ ಪ್ರವೇಶವನ್ನು ಎಲ್ಲ ಜನರ ಹಕ್ಕು ಎಂದು ಪ್ರತಿಪಾದಿಸಿದ್ದು ಅಂಬೇಡ್ಕರ್. ಅದಕ್ಕೂ ಮೊದಲು ನಾರಾಯಣಗುರು ಕೆಳಜಾತಿಗಳ ಮತ್ತು ಮಹಿಳೆಯರ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು. ಆದರೆ ಪೆರಿಯಾರ್ ಹಿಂದೂ ದೈವಗಳನ್ನು ಮಾತ್ರವಲ್ಲ, ದೇವಾಲಯಗಳನ್ನೇ ನಿರಾಕರಿಸಿದರು. ತನ್ನೆಲ್ಲಾ ಮೂರ್ತಿಭಂಜಕ ಚಿಂತನೆಗಳಿಂದ ಪೆರಿಯಾರ್ ದಲಿತರು ಮತ್ತು ಮಹಿಳೆಯರನ್ನೂ ಒಳಗೊಂಡಂತೆ ಬಹಿಷ್ಕøತ ಭಾರತದ ಬಹುಸಂಖ್ಯಾತ `ಹತಭಾಗ್ಯರು’ ನಡೆಯಬಹುದಾದ ಹಾದಿಗೆ ದಿಕ್ಸೂಚಿಯೇ ಆಗಿದ್ದರು, ಆಗಿದ್ದಾರೆ ಸಹ.

ಮಹಿಳೆಯರು, ಶಬರಿಮಲೆಯ ದೇವಾಲಯ ಪ್ರವೇಶದ ಕುರಿತ ನ್ಯಾಯಾಲಯದ ತೀರ್ಪು ಮೇಲ್ನೋಟಕ್ಕೆ ಕ್ರಾಂತಿಕಾರಿ ನಡೆಯಂತೆ ಕಾಣುತ್ತಿದೆ. ಈ ತೀರ್ಪು ಸಾರಾಂಶದಲ್ಲಿ, ಸಂವಿಧಾನದಲ್ಲಿರುವ ಸಹಜ ಹಕ್ಕುಗಳ ಪ್ರತಿಪಾದನೆ ಮಾಡಿದೆಯಷ್ಟೆ. ನ್ಯಾಯಾಲಯದ ಈ ತೀರ್ಪನ್ನು ಸಂಭ್ರಮಿಸುವ ಕಾಲಘಟ್ಟದಲ್ಲಿ ನಾವು ಬದುಕುತ್ತಿಲ್ಲ. ಸಂವಿಧಾನವನ್ನು ಒಪ್ಪದ, ಬಹುಸಂಖ್ಯಾತ ದುಡಿವ ಜನರ ಹಕ್ಕುಗಳನ್ನು ನಿರಾಕರಿಸುವ ಮೂಲಭೂತವಾದಿ ನವಬ್ರಾಹ್ಮಣ್ಯ ಎಲ್ಲೆಡೆ ಸಂಚಯಿಸುತ್ತಿದೆ. ಮುಟ್ಟಾಗುವ ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವ ಮೂಲಭೂತವಾದಿ ಮನಸ್ಥಿತಿಯ ಹಿಂದೆ ಕೇವಲ ಮಡಿಮೈಲಿಗೆಯ ಕರ್ಮಠತೆ ಮಾತ್ರ ಕೆಲಸ ಮಾಡುತ್ತಿಲ್ಲ. ಎಲ್ಲಾ ಜಾತಿಯ ಬಹುಸಂಖ್ಯಾತ ದುಡಿವ ಜನರ ಸಹಜ ಹಕ್ಕುಗಳನ್ನು ದಮನ ಮಾಡುವ ಹುನ್ನಾರು ಈ ಕರ್ಮಠತೆಯ ಹಿಂದೆ ಅಡಗಿ ಕುಳಿತಿದೆ. ಅಂಬೇಡ್ಕರ್, ಅಸ್ಪøಶ್ಯರ ದೇವಾಲಯ ಪ್ರವೇಶವನ್ನು ಅತ್ಯಂತಿಕವೆಂದು ಭಾವಿಸಿರಲಿಲ್ಲ. ಸಾಮಾಜಿಕ ಅಸಮಾನತೆಯನ್ನು ನಿರ್ಲಜ್ಜವಾಗಿ ಸಮರ್ಥಿಸುತ್ತಿದ್ದ ಮತ್ತು ಆಚರಣೆಯಲ್ಲಿಡುತ್ತಿದ್ದ ದೇವಾಲಯಗಳು, ಕೆರೆಗಳು ಮುಂತಾದ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕೆಂದು ಅಂಬೇಡ್ಕರ್ ಬಯಸಿದ್ದರು. ದೇವಾಲಯಗಳು, ದೈವಗಳು, ನಂಬಿಕೆ ಸಂಪ್ರದಾಯಗಳು ಈ ದೇಶದ ಬಹುಸಂಖ್ಯಾತ ದುಡಿವ ಜನರನ್ನು ವಿಮೋಚನೆಗೊಳಿಸಲಾರವು ಎಂಬ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು ‘ಹಿಂದುವಾಗಿ ಸಾಯಲಾರೆ’ ಎಂದು ಬೌದ್ಧ ಧಮ್ಮದ ಕಡೆ ನಡೆದುಹೋದರು. ಅಂಬೇಡ್ಕರ್, ಧರ್ಮವನ್ನು ಮತ್ತು ಅದರ ಕರ್ಮಠ ಆವರಣವನ್ನು ಸಂಪೂರ್ಣವಾಗಿ ನಿರಾಕರಿಸಿದರು. ಅವರು ಬೌದ್ಧ ಧಮ್ಮವನ್ನು ನೆಚ್ಚಿಕೊಳ್ಳುವುದರ ಮೂಲಕ ಹೊಸ ಆಧ್ಯಾತ್ಮಿಕ ಅವಕಾಶವನ್ನು ಶೋಷಿತರ ಮುಂದೆ ತೆರೆದಿಟ್ಟರು. ಕರ್ಮಠ ನಂಬಿಕೆಗಳಿಗೆ, ಮೂಲಭೂತವಾದಕ್ಕೆ, ಸಾಂಸ್ಥಿಕ ಧರ್ಮವೊಂದಕ್ಕೆ ಬುದ್ಧನ ಚಿಂತನೆಗಳ ಮೂಲಕ ಎದುರೇಟು ಕೊಟ್ಟರು. ಹೀಗಾಗಿ, ಅಂಬೇಡ್ಕರ್ ಬುದ್ಧಿಸಮ್‍ನ್ನು ಧರ್ಮವನ್ನಾಗಿ ಮಾತ್ರ ಪರಿಭಾವಿಸಲಿಲ್ಲ. ಬುದ್ಧಿಸಮ್ ಶೋಷಿತರ ವಿಮೋಚನೆಯನ್ನು ಸಾಧ್ಯವಾಗಿಸಬಲ್ಲ, ಅಸಮಾನತೆಯ ಆಚರಣೆಗೆ ಆಸ್ಪದ ನೀಡದ ಒಂದು ಪ್ರತಿದರ್ಶನ ಎಂದೇ ಅಂಬೇಡ್ಕರ್ ಭಾವಿಸಿದ್ದರು. ಈ ಮೂಲಕ, ನಿತ್ಯದ ಬದುಕಲ್ಲಿ ತಮಗೆ ಬೇಕಾದದ್ದನ್ನು ಸ್ವೀಕರಿಸಿ, ಬೇಡವಾದದ್ದನ್ನು ನಿರಾಕರಿಸಿಬಿಡುವ ಮುಕ್ತ ಅವಕಾಶವನ್ನು ಅಂಬೇಡ್ಕರ್ ಶೋಷಿತರ ಮುಂದೆ ತೆರೆದಿಟ್ಟರು.
ಸಾವಿರಾರು ವರ್ಷಗಳಿಂದ ಪೂಜಿಸಲ್ಪಡುತ್ತಿರುವ ದೈವಗಳಿಗೆ ತಮ್ಮ ಸುತ್ತ ನಡೆಯುತ್ತಿರುವ ಕ್ರೂರ ಶೋಷಣೆ ಮತ್ತು ಅಸಮಾನತೆಗಳನ್ನು ತೊಡೆದು ಹಾಕುವ ಸಾಮಥ್ರ್ಯವಿಲ್ಲ ಎಂದಾದ ಮೇಲೆ ಅವುಗಳನ್ನು ನಾವೇಕೆ ಪೂಜಿಸಬೇಕು? ಲಿಂಗಭೇದವನ್ನು, ಅಸ್ಪøಶ್ಯತೆಯನ್ನು ಆಚರಿಸುವ ಕೇಂದ್ರಗಳಂತಿರುವ ದೇವಾಲಯಗಳು ನಮಗೆ ಯಾಕೆ ಬೇಕು? ದೇವಾಲಯ ಪ್ರವೇಶ ನಮಗೆ ವರ್ತಮಾನದ ತುರ್ತಾಗಬೇಕೆ? ಅಂಬೇಡ್ಕರ್ ಹೇಳಿದಂತೆ, ಸಾಮಾಜಿಕ ಗುಲಾಮರಿಗೆ ಅವಕಾಶ ಮಾಡಿಕೊಡುವ ಎಲ್ಲವನ್ನೂ ನಾವು ನಿರಾಕರಿಸುವ ಅಗತ್ಯವಿದೆ. ವಿಮೋಚನೆಗಾಗಿ ಇದು ಸಂಪೂರ್ಣ ನಿರಾಕರಣೆಯ ಹಠಯೋಗ. ನಮಗೀಗ ಬೇಕಿರುವುದು ಲಿಂಗಭೇದ, ಅಸ್ಪøಶ್ಯತೆಯನ್ನ ಆಚರಿಸುವ ಕೂಪಗಳಂತಾಗಿರುವ ದೇವಾಲಯಗಳಲ್ಲ. ನಮ್ಮನ್ನು ಕುಬ್ಜರನ್ನಾಗಿಸುವ ನಂಬಿಕೆ, ಸಂಪ್ರದಾಯ, ಧರ್ಮಗಳು ನಮಗೆ ಬೇಕಿಲ್ಲ. ಮನುಷ್ಯನ ಬದುಕಿನ ಘನತೆಯನ್ನು ಎತ್ತಿಹಿಡಿಯದಿದ್ದಲ್ಲಿ ಅವುಗಳ ವರ್ತಮಾನದ ಅಗತ್ಯವನ್ನು ಪ್ರಶ್ನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾವುದೇ ಪರಂಪರೆಗೆ ಎಷ್ಟೇ ಸಾವಿರ ವರ್ಷದ ಇತಿಹಾಸವಿರಲಿ, ಆ ಪರಂಪರೆ ವರ್ತಮಾನವನ್ನು ನಿನ್ನೆಗಳಿಗೆ ಬಲಿಕೊಡುವಂತಿದ್ದರೆ ಅದು ನಮಗೆ ಬೇಡ. ಅಂತಹ ಪರಂಪರೆ ನಮ್ಮ ಬದುಕಿಗಿಂತ ಘನವಾದದ್ದೇನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...