Homeಅಂಕಣಗಳುಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

ಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

- Advertisement -
- Advertisement -

ಭಾರತವನ್ನೂ ಒಳಗೊಂಡಂತೆ ಜಗತ್ತಿನ ಸಾಂಪ್ರದಾಯಿಕ ಸಮಾಜಗಳು ಪರಂಪರೆ, ಧರ್ಮ ಮತ್ತು ಚರಿತ್ರೆಗಳನ್ನು ಪರಿಭಾವಿಸುವ ಪರಿ ಕಾಲದಿಂದ ಕಾಲಕ್ಕೆ ಆತಂಕಗಳನ್ನು ಹುಟ್ಟುಹಾಕುತ್ತಲೇ ಬಂದಿದೆ. ಪರಂಪರೆ, ಸಂಸ್ಕøತಿ, ಚರಿತ್ರೆ, ಧರ್ಮ, ರಾಷ್ಟ್ರೀಯತೆ, ಸಂಪ್ರದಾಯ, ಆಚರಣೆಗಳು ಯಾವತ್ತೂ ಅಬಾಧಿತವಾಗಿರಬೇಕು. ಇವು ಸರ್ವಕಾಲಕ್ಕೂ ಮೂಲರೂಪದಲ್ಲಿಯೇ ಉಳಿಯಬೇಕು. ಬರುವ ತಲೆಮಾರುಗಳು ಇವುಗಳನ್ನು ಖಿಲಗೊಳ್ಳದಂತೆ ಕಾಪಾಡಿಕೊಂಡು ಬರಬೇಕು ಎಂಬ ತಲ್ಲಣರೂಪಿ ಹಪಾಹಪಿ ಈ ಸಮಾಜಗಳಲ್ಲಿ ಉಳಿದುಕೊಂಡು ಬಂದಿದೆ. ಪರಂಪರೆ, ಧರ್ಮ ಇತ್ಯಾದಿಗಳು ನಮ್ಮ ಜೀವನದ ಅನೂಹ್ಯ ಅವಕಾಶದಲ್ಲಿದ್ದು (Sಠಿಚಿಛಿe) ನಮ್ಮ ಬದುಕನ್ನು ರೂಪಿಸುತ್ತಾ ಬಂದಿವೆ ಎಂದು ಈ ಸಮಾಜಗಳು ನಂಬಿಕೊಂಡು ಬಂದಿವೆ. ಈ ಕಾರಣಕ್ಕಾಗಿ ಸಾಂಪ್ರದಾಯಿಕ ಸಮಾಜದ ನಿತ್ಯದ ಬದುಕು ಮತ್ತು ಅದರ ಆಗುಹೋಗುಗಳ ನಿಯಂತ್ರಕ ಶಕ್ತಿಗಳಾಗಿ ಪರಂಪರೆ, ಧರ್ಮ ಮತ್ತು ಚರಿತ್ರೆಗಳು ಭಾವಿಸಲ್ಪಟ್ಟಿವೆ. ವರ್ತಮಾನದ ತಲ್ಲಣಗಳು ಬಾಧಿಸುವಾಗೆಲ್ಲ ಈ ಸಮಾಜಗಳು ಚರಿತ್ರೆಯ ಇಲ್ಲವೆ ಪುರಾಣಗಳ ಆವರಣದಲ್ಲಿ ಪರಿಹಾರಗಳನ್ನು ಹುಡುಕಲು ಧಾವಿಸುತ್ತವೆ. ನಿತ್ಯದ ಬವಣೆಗಳನ್ನು ಮತ್ತು ಹಿಂಜರಿಕೆಗಳನ್ನು ನೀಗಿಕೊಳ್ಳಲು ಈ ಸಮುದಾಯಗಳು ಪುರಾಣಗಳ ಕಡೆ ಮುಖ ಮಾಡುವುದು ಒಂದು ಬಗೆಯ ವ್ಯಸನದಂತೆ ಭಾಸವಾಗುತ್ತಿದೆ. ಪರಂಪರೆ, ಚರಿತ್ರೆ, ಸಂಸೃತಿ ಎಂಬ ಅಮೂರ್ತ ಸಂಗತಿಗಳಿಗೆ ವರ್ತಮಾನವನ್ನು ರೂಪಿಸಿಬಿಡುವ ಇಂತಹ ಅಗಾಧ ಶಕ್ತಿ ಇದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಇಂತಹ ಪ್ರಶ್ನೆಯನ್ನು ಕೇಳಿಕೊಂಡ ಸಮುದಾಯಗಳು ಮಧ್ಯಕಾಲೀನ ಯುರೋಪಿನ ಹಣೆಬರಹವನ್ನೇ ಬದಲಿಸಿದವು. ಕ್ಯಾಥೋಲಿಕ್ ಚರ್ಚ್‍ನ ಮೂಲಭೂತವಾದ ಮತ್ತು ಅದು ಹುಟ್ಟುಹಾಕಿದ್ದ ಅಂದಿನ ಊಳಿಗಮಾನ್ಯ ದುರಾಡಳಿತವನ್ನು ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದ ದುಡಿವ ಜನ ಮೂಲೋತ್ಪಾಟನೆ ಮಾಡಿದರು. ಹೊಸ ಯುರೋಪ್ ಜನ್ಮ ತಾಳಿತು. ಯುರೋಪ್ ಪುನರುಜ್ಜೀವನಗೊಂಡು ಹೊಸ ದಿಕ್ಕಿಗೆ ನಡೆದುಕೊಂಡು ಹೋಯಿತು. ಹೊಸ ಬದುಕು ಅರಳಿ ನಿಂತು ಹಳೆಯ ಪರಂಪರೆ, ಸಂಸ್ಕøತಿಯ ಹೆಸರಲ್ಲಿ ಅಸ್ತಿತ್ವದಲ್ಲಿದ್ದ ಮೂಲಭೂತವಾದ ಮತ್ತು ಊಳಿಗಮಾನ್ಯ ದುರಾಡಳಿತಗಳು ಕೊನೆಗೊಂಡವು. ಹಳೆಯ ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳಿಗಾಗಿ ಮಧ್ಯಕಾಲೀನ ಯುರೋಪಿನ ಸಮುದಾಯಗಳು ತಮ್ಮ ಬದುಕನ್ನು ಅರಳಿಸುವ ಹೊಸ ಕನಸುಗಳನ್ನು ಕಳೆದುಕೊಳ್ಳಲಿಲ್ಲ. ಫ್ರಾನ್ಸ್‍ನಲ್ಲಿ ಆದ ರಾಜಕೀಯ ಬದಲಾವಣೆಗಳು, ರಷ್ಯಾ, ಚೀನಾ, ವಿಯಟ್ನಾಮ್, ಭಾರತ ಮತ್ತು ಕ್ಯೂಬಾಗಳ ಮರುಹುಟ್ಟು ಕೇವಲ ಪರಂಪರೆಯ ರೂಢಿಗತ ಸಂಗತಿಗಳಿಂದ ಆದದ್ದಲ್ಲ. ಬದುಕುವ ಸ್ವಾತಂತ್ರ್ಯವನ್ನು ಹಂಬಲಿಸುವ ಜನ ದೇಶಕಾಲಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಪರಂಪರೆ, ಸಂಸ್ಕøತಿ, ಚರಿತ್ರೆಗಳು ಅಪೌರುಷೇಯವಾದವುಗಳಲ್ಲ. ಅವು ಜನರ ಬದುಕಿನ ಉತ್ಪನ್ನಗಳು. ಮನುಷ್ಯನ ಬದುಕು ಬದಲಾದಂತೆ ಇವೂ ಬದಲಾಗುತ್ತವೆ. ಬದಲಾಗದೇ ಇರುವ ಸಂಗತಿಗಳು ಅವಶೇಷಗಳಂತಿದ್ದು, ಒಂದು ದಿನ ನಶಿಸಿ ಹೋಗುತ್ತವೆ. ಆದರೆ ಬದಲಾವಣೆಗಳನ್ನು ಬಯಸದ ಜನ, ಪರಂಪರೆ, ಸಂಸ್ಕøತಿ ಮತ್ತು ಧರ್ಮಗಳ ಹೆಸರಲ್ಲಿ ಅವಶೇಷಗಳನ್ನೇ ಮೋಹಿಸುತ್ತಾ ಬಂದಿದ್ದಾರೆ. ಭಯೋತ್ಪಾದನೆ, ಜಾತಿವಾದ, ಕೋಮುವಾದ, ಫ್ಯಾಸಿಸಮ್‍ಗಳ ಮೂಲಗಳಿರುವುದು ಪರಂಪರೆಯ ಈ ಮೋಹದಲ್ಲಿ. ಬದಲಾವಣೆಗಳನ್ನು ದ್ವೇಷಿಸುವ ಮೂಲಭೂತವಾದ ಜಗತ್ತಿನ ಎಲ್ಲ ಅಮಾಯಕರ ರಕ್ತದ ರುಚಿ ನೋಡಿದೆ, ನೋಡುತ್ತಲೂ ಇದೆ.
ಶಬರಿಮಲೆಯ ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿರಾಕರಿಸುತ್ತಿರುವ ಜನರ ಮೌಢ್ಯವನ್ನು ನೋಡಿ ಮೇಲಿನ ಟಿಪ್ಪಣಿಯನ್ನು ಬರೆಯಬೇಕಾಯಿತು. ಶಬರಿಮಲೆಯ ದೇವಾಲಯಕ್ಕೆ ಪ್ರವೇಶಿಸುವ ಮಹಿಳೆಯರನ್ನು ತಡೆಯಬಾರದೆಂದೂ, ದೇವಾಲಯ ಪ್ರವೇಶ ಮಹಿಳೆಯರ ಹಕ್ಕು ಎಂದು ಸುಪ್ರಿಮ್ ಕೋರ್ಟ್ ಬಹುಮತದ ತೀರ್ಪು ನೀಡಿದೆ. ಈ ತೀರ್ಪು ಒಂದು ಅರ್ಥದಲ್ಲಿ ಪರಂಪರೆಯನ್ನು ಕುರುಡಾಗಿ ಮೋಹಿಸುವ ಜನರಿಗೆ ಚಾಟಿ ಬೀಸಿದೆ. 1965ರಲ್ಲಿ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಕೇರಳ ಸರ್ಕಾರ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶವನ್ನು ನಿರಾಕರಿಸಿತ್ತು. 10 ರಿಂದ 50 ವರ್ಷಗಳ ವಯಸ್ಸಿನ ಮಹಿಳೆಯರು ಮುಟ್ಟಾಗುವುದರಿಂದ ಅವರು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಅನರ್ಹರು ಎಂಬ ಕೇರಳ ಸರ್ಕಾರದ ನಿರ್ಧಾರ ಈ ತೀರ್ಪಿನಿಂದಾಗಿ ರದ್ದಾದಂತಾಗಿದೆ. ಆದರೆ, ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವುದು ಕೇವಲ ಕೇರಳ ಸರ್ಕಾರದ ನಿರ್ಧಾರವಲ್ಲ. ಆರಾಧನಾ ಸ್ಥಳಗಳ ಪ್ರವೇಶವನ್ನು ನಿರ್ಬಂಧಿಸುವ ವಿಧಿಗಳು ಹಿಂದೂ ಧರ್ಮದಲ್ಲಿ ಹಾಸುಹೊಕ್ಕಾಗಿವೆ. ಯಾರು ತಪಸ್ಸು ಮಾಡಬೇಕು, ಯಾರು ಓದಬೇಕು, ಜ್ಞಾನವನ್ನು ಪಡೆಯಲು ಯಾರು ಅರ್ಹರು, ಯಾರು ದೇವರಿಗೆ ಹತ್ತಿರವಾಗಬೇಕು, ಯಾರು ದೇವರನ್ನು ಸಮೀಪಿಸಬಹುದು ಎಂಬ ವಿಧಿಗಳು ಹಿಂದೂ ಧರ್ಮಶಾಸ್ತ್ರದಲ್ಲಿ ಪದೇಪದೇ ಸ್ಪಷ್ಟಪಡಿಸಲ್ಪಟ್ಟಿವೆ. ಈ ವಿಧಿಗಳನ್ನು ಪರಂಪರೆಯ ವ್ಯಾಮೋಹಿಗಳು

ಕಾಲದಿಂದ ಕಾಲಕ್ಕೆ ಜೀವಂತವಾಗಿಟ್ಟುಕೊಂಡೇ ಬಂದಿದ್ದಾರೆ. ಕೆಳಜಾತಿಯ ದುಡಿವ ಜನರನ್ನು ಮತ್ತು ಮಹಿಳೆಯರನ್ನು ಆರಾಧನಾ ಸ್ಥಳಗಳಿಂದ ಕಟ್ಟುನಿಟ್ಟಾಗಿ ಬಹಿಷ್ಕರಿಸಿದ್ದು ಮತ್ತು ಅದನ್ನು ಪರಂಪರೆಯ ಹೆಸರಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಧರ್ಮವೆಂದರೆ ಅದು ಹಿಂದು ಧರ್ಮ ಮಾತ್ರ. ಹಿಂದೂ ಧರ್ಮದ ಈ ಜೀವವಿರೋಧಿ ಪರಂಪರೆಗೆ ಪರ್ಯಾಯವಾಗಿ ಅನೇಕ ದರ್ಶನಗಳು ಭಾರತದಲ್ಲಿ ಹುಟ್ಟಿವೆ. ಬೌದ್ಧ ದರ್ಶನ ಮತ್ತು ವಚನ ಚಳುವಳಿಯ ಆಶಯಗಳು, ಹಿಂದೂ ಧರ್ಮದ ರೂಢಿಗತ ಚಿಂತನೆಗಳಿಗೆ ಪರ್ಯಾಯಗಳನ್ನು ಮಾತ್ರ ರೂಪಿಸಲಿಲ್ಲ. ಈ ದೇಶದ ಬಹುಸಂಖ್ಯಾತ ದುಡಿವ ಜನರ ಅಂತಃಸ್ಸತ್ವವನ್ನು ನ್ಯಾಯಬದ್ಧಗೊಳಿಸುವ ತತ್ವದರ್ಶನವನ್ನು ರೂಪಿಸಿದವು. ತೀರಾ ಇತ್ತೀಚೆಗೆ, ದೇವಾಲಯ ಪ್ರವೇಶವನ್ನು ಎಲ್ಲ ಜನರ ಹಕ್ಕು ಎಂದು ಪ್ರತಿಪಾದಿಸಿದ್ದು ಅಂಬೇಡ್ಕರ್. ಅದಕ್ಕೂ ಮೊದಲು ನಾರಾಯಣಗುರು ಕೆಳಜಾತಿಗಳ ಮತ್ತು ಮಹಿಳೆಯರ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು. ಆದರೆ ಪೆರಿಯಾರ್ ಹಿಂದೂ ದೈವಗಳನ್ನು ಮಾತ್ರವಲ್ಲ, ದೇವಾಲಯಗಳನ್ನೇ ನಿರಾಕರಿಸಿದರು. ತನ್ನೆಲ್ಲಾ ಮೂರ್ತಿಭಂಜಕ ಚಿಂತನೆಗಳಿಂದ ಪೆರಿಯಾರ್ ದಲಿತರು ಮತ್ತು ಮಹಿಳೆಯರನ್ನೂ ಒಳಗೊಂಡಂತೆ ಬಹಿಷ್ಕøತ ಭಾರತದ ಬಹುಸಂಖ್ಯಾತ `ಹತಭಾಗ್ಯರು’ ನಡೆಯಬಹುದಾದ ಹಾದಿಗೆ ದಿಕ್ಸೂಚಿಯೇ ಆಗಿದ್ದರು, ಆಗಿದ್ದಾರೆ ಸಹ.

ಮಹಿಳೆಯರು, ಶಬರಿಮಲೆಯ ದೇವಾಲಯ ಪ್ರವೇಶದ ಕುರಿತ ನ್ಯಾಯಾಲಯದ ತೀರ್ಪು ಮೇಲ್ನೋಟಕ್ಕೆ ಕ್ರಾಂತಿಕಾರಿ ನಡೆಯಂತೆ ಕಾಣುತ್ತಿದೆ. ಈ ತೀರ್ಪು ಸಾರಾಂಶದಲ್ಲಿ, ಸಂವಿಧಾನದಲ್ಲಿರುವ ಸಹಜ ಹಕ್ಕುಗಳ ಪ್ರತಿಪಾದನೆ ಮಾಡಿದೆಯಷ್ಟೆ. ನ್ಯಾಯಾಲಯದ ಈ ತೀರ್ಪನ್ನು ಸಂಭ್ರಮಿಸುವ ಕಾಲಘಟ್ಟದಲ್ಲಿ ನಾವು ಬದುಕುತ್ತಿಲ್ಲ. ಸಂವಿಧಾನವನ್ನು ಒಪ್ಪದ, ಬಹುಸಂಖ್ಯಾತ ದುಡಿವ ಜನರ ಹಕ್ಕುಗಳನ್ನು ನಿರಾಕರಿಸುವ ಮೂಲಭೂತವಾದಿ ನವಬ್ರಾಹ್ಮಣ್ಯ ಎಲ್ಲೆಡೆ ಸಂಚಯಿಸುತ್ತಿದೆ. ಮುಟ್ಟಾಗುವ ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವ ಮೂಲಭೂತವಾದಿ ಮನಸ್ಥಿತಿಯ ಹಿಂದೆ ಕೇವಲ ಮಡಿಮೈಲಿಗೆಯ ಕರ್ಮಠತೆ ಮಾತ್ರ ಕೆಲಸ ಮಾಡುತ್ತಿಲ್ಲ. ಎಲ್ಲಾ ಜಾತಿಯ ಬಹುಸಂಖ್ಯಾತ ದುಡಿವ ಜನರ ಸಹಜ ಹಕ್ಕುಗಳನ್ನು ದಮನ ಮಾಡುವ ಹುನ್ನಾರು ಈ ಕರ್ಮಠತೆಯ ಹಿಂದೆ ಅಡಗಿ ಕುಳಿತಿದೆ. ಅಂಬೇಡ್ಕರ್, ಅಸ್ಪøಶ್ಯರ ದೇವಾಲಯ ಪ್ರವೇಶವನ್ನು ಅತ್ಯಂತಿಕವೆಂದು ಭಾವಿಸಿರಲಿಲ್ಲ. ಸಾಮಾಜಿಕ ಅಸಮಾನತೆಯನ್ನು ನಿರ್ಲಜ್ಜವಾಗಿ ಸಮರ್ಥಿಸುತ್ತಿದ್ದ ಮತ್ತು ಆಚರಣೆಯಲ್ಲಿಡುತ್ತಿದ್ದ ದೇವಾಲಯಗಳು, ಕೆರೆಗಳು ಮುಂತಾದ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕೆಂದು ಅಂಬೇಡ್ಕರ್ ಬಯಸಿದ್ದರು. ದೇವಾಲಯಗಳು, ದೈವಗಳು, ನಂಬಿಕೆ ಸಂಪ್ರದಾಯಗಳು ಈ ದೇಶದ ಬಹುಸಂಖ್ಯಾತ ದುಡಿವ ಜನರನ್ನು ವಿಮೋಚನೆಗೊಳಿಸಲಾರವು ಎಂಬ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು ‘ಹಿಂದುವಾಗಿ ಸಾಯಲಾರೆ’ ಎಂದು ಬೌದ್ಧ ಧಮ್ಮದ ಕಡೆ ನಡೆದುಹೋದರು. ಅಂಬೇಡ್ಕರ್, ಧರ್ಮವನ್ನು ಮತ್ತು ಅದರ ಕರ್ಮಠ ಆವರಣವನ್ನು ಸಂಪೂರ್ಣವಾಗಿ ನಿರಾಕರಿಸಿದರು. ಅವರು ಬೌದ್ಧ ಧಮ್ಮವನ್ನು ನೆಚ್ಚಿಕೊಳ್ಳುವುದರ ಮೂಲಕ ಹೊಸ ಆಧ್ಯಾತ್ಮಿಕ ಅವಕಾಶವನ್ನು ಶೋಷಿತರ ಮುಂದೆ ತೆರೆದಿಟ್ಟರು. ಕರ್ಮಠ ನಂಬಿಕೆಗಳಿಗೆ, ಮೂಲಭೂತವಾದಕ್ಕೆ, ಸಾಂಸ್ಥಿಕ ಧರ್ಮವೊಂದಕ್ಕೆ ಬುದ್ಧನ ಚಿಂತನೆಗಳ ಮೂಲಕ ಎದುರೇಟು ಕೊಟ್ಟರು. ಹೀಗಾಗಿ, ಅಂಬೇಡ್ಕರ್ ಬುದ್ಧಿಸಮ್‍ನ್ನು ಧರ್ಮವನ್ನಾಗಿ ಮಾತ್ರ ಪರಿಭಾವಿಸಲಿಲ್ಲ. ಬುದ್ಧಿಸಮ್ ಶೋಷಿತರ ವಿಮೋಚನೆಯನ್ನು ಸಾಧ್ಯವಾಗಿಸಬಲ್ಲ, ಅಸಮಾನತೆಯ ಆಚರಣೆಗೆ ಆಸ್ಪದ ನೀಡದ ಒಂದು ಪ್ರತಿದರ್ಶನ ಎಂದೇ ಅಂಬೇಡ್ಕರ್ ಭಾವಿಸಿದ್ದರು. ಈ ಮೂಲಕ, ನಿತ್ಯದ ಬದುಕಲ್ಲಿ ತಮಗೆ ಬೇಕಾದದ್ದನ್ನು ಸ್ವೀಕರಿಸಿ, ಬೇಡವಾದದ್ದನ್ನು ನಿರಾಕರಿಸಿಬಿಡುವ ಮುಕ್ತ ಅವಕಾಶವನ್ನು ಅಂಬೇಡ್ಕರ್ ಶೋಷಿತರ ಮುಂದೆ ತೆರೆದಿಟ್ಟರು.
ಸಾವಿರಾರು ವರ್ಷಗಳಿಂದ ಪೂಜಿಸಲ್ಪಡುತ್ತಿರುವ ದೈವಗಳಿಗೆ ತಮ್ಮ ಸುತ್ತ ನಡೆಯುತ್ತಿರುವ ಕ್ರೂರ ಶೋಷಣೆ ಮತ್ತು ಅಸಮಾನತೆಗಳನ್ನು ತೊಡೆದು ಹಾಕುವ ಸಾಮಥ್ರ್ಯವಿಲ್ಲ ಎಂದಾದ ಮೇಲೆ ಅವುಗಳನ್ನು ನಾವೇಕೆ ಪೂಜಿಸಬೇಕು? ಲಿಂಗಭೇದವನ್ನು, ಅಸ್ಪøಶ್ಯತೆಯನ್ನು ಆಚರಿಸುವ ಕೇಂದ್ರಗಳಂತಿರುವ ದೇವಾಲಯಗಳು ನಮಗೆ ಯಾಕೆ ಬೇಕು? ದೇವಾಲಯ ಪ್ರವೇಶ ನಮಗೆ ವರ್ತಮಾನದ ತುರ್ತಾಗಬೇಕೆ? ಅಂಬೇಡ್ಕರ್ ಹೇಳಿದಂತೆ, ಸಾಮಾಜಿಕ ಗುಲಾಮರಿಗೆ ಅವಕಾಶ ಮಾಡಿಕೊಡುವ ಎಲ್ಲವನ್ನೂ ನಾವು ನಿರಾಕರಿಸುವ ಅಗತ್ಯವಿದೆ. ವಿಮೋಚನೆಗಾಗಿ ಇದು ಸಂಪೂರ್ಣ ನಿರಾಕರಣೆಯ ಹಠಯೋಗ. ನಮಗೀಗ ಬೇಕಿರುವುದು ಲಿಂಗಭೇದ, ಅಸ್ಪøಶ್ಯತೆಯನ್ನ ಆಚರಿಸುವ ಕೂಪಗಳಂತಾಗಿರುವ ದೇವಾಲಯಗಳಲ್ಲ. ನಮ್ಮನ್ನು ಕುಬ್ಜರನ್ನಾಗಿಸುವ ನಂಬಿಕೆ, ಸಂಪ್ರದಾಯ, ಧರ್ಮಗಳು ನಮಗೆ ಬೇಕಿಲ್ಲ. ಮನುಷ್ಯನ ಬದುಕಿನ ಘನತೆಯನ್ನು ಎತ್ತಿಹಿಡಿಯದಿದ್ದಲ್ಲಿ ಅವುಗಳ ವರ್ತಮಾನದ ಅಗತ್ಯವನ್ನು ಪ್ರಶ್ನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾವುದೇ ಪರಂಪರೆಗೆ ಎಷ್ಟೇ ಸಾವಿರ ವರ್ಷದ ಇತಿಹಾಸವಿರಲಿ, ಆ ಪರಂಪರೆ ವರ್ತಮಾನವನ್ನು ನಿನ್ನೆಗಳಿಗೆ ಬಲಿಕೊಡುವಂತಿದ್ದರೆ ಅದು ನಮಗೆ ಬೇಡ. ಅಂತಹ ಪರಂಪರೆ ನಮ್ಮ ಬದುಕಿಗಿಂತ ಘನವಾದದ್ದೇನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...