Homeಅಂಕಣಗಳುಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

ಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

- Advertisement -
- Advertisement -

ಭಾರತವನ್ನೂ ಒಳಗೊಂಡಂತೆ ಜಗತ್ತಿನ ಸಾಂಪ್ರದಾಯಿಕ ಸಮಾಜಗಳು ಪರಂಪರೆ, ಧರ್ಮ ಮತ್ತು ಚರಿತ್ರೆಗಳನ್ನು ಪರಿಭಾವಿಸುವ ಪರಿ ಕಾಲದಿಂದ ಕಾಲಕ್ಕೆ ಆತಂಕಗಳನ್ನು ಹುಟ್ಟುಹಾಕುತ್ತಲೇ ಬಂದಿದೆ. ಪರಂಪರೆ, ಸಂಸ್ಕøತಿ, ಚರಿತ್ರೆ, ಧರ್ಮ, ರಾಷ್ಟ್ರೀಯತೆ, ಸಂಪ್ರದಾಯ, ಆಚರಣೆಗಳು ಯಾವತ್ತೂ ಅಬಾಧಿತವಾಗಿರಬೇಕು. ಇವು ಸರ್ವಕಾಲಕ್ಕೂ ಮೂಲರೂಪದಲ್ಲಿಯೇ ಉಳಿಯಬೇಕು. ಬರುವ ತಲೆಮಾರುಗಳು ಇವುಗಳನ್ನು ಖಿಲಗೊಳ್ಳದಂತೆ ಕಾಪಾಡಿಕೊಂಡು ಬರಬೇಕು ಎಂಬ ತಲ್ಲಣರೂಪಿ ಹಪಾಹಪಿ ಈ ಸಮಾಜಗಳಲ್ಲಿ ಉಳಿದುಕೊಂಡು ಬಂದಿದೆ. ಪರಂಪರೆ, ಧರ್ಮ ಇತ್ಯಾದಿಗಳು ನಮ್ಮ ಜೀವನದ ಅನೂಹ್ಯ ಅವಕಾಶದಲ್ಲಿದ್ದು (Sಠಿಚಿಛಿe) ನಮ್ಮ ಬದುಕನ್ನು ರೂಪಿಸುತ್ತಾ ಬಂದಿವೆ ಎಂದು ಈ ಸಮಾಜಗಳು ನಂಬಿಕೊಂಡು ಬಂದಿವೆ. ಈ ಕಾರಣಕ್ಕಾಗಿ ಸಾಂಪ್ರದಾಯಿಕ ಸಮಾಜದ ನಿತ್ಯದ ಬದುಕು ಮತ್ತು ಅದರ ಆಗುಹೋಗುಗಳ ನಿಯಂತ್ರಕ ಶಕ್ತಿಗಳಾಗಿ ಪರಂಪರೆ, ಧರ್ಮ ಮತ್ತು ಚರಿತ್ರೆಗಳು ಭಾವಿಸಲ್ಪಟ್ಟಿವೆ. ವರ್ತಮಾನದ ತಲ್ಲಣಗಳು ಬಾಧಿಸುವಾಗೆಲ್ಲ ಈ ಸಮಾಜಗಳು ಚರಿತ್ರೆಯ ಇಲ್ಲವೆ ಪುರಾಣಗಳ ಆವರಣದಲ್ಲಿ ಪರಿಹಾರಗಳನ್ನು ಹುಡುಕಲು ಧಾವಿಸುತ್ತವೆ. ನಿತ್ಯದ ಬವಣೆಗಳನ್ನು ಮತ್ತು ಹಿಂಜರಿಕೆಗಳನ್ನು ನೀಗಿಕೊಳ್ಳಲು ಈ ಸಮುದಾಯಗಳು ಪುರಾಣಗಳ ಕಡೆ ಮುಖ ಮಾಡುವುದು ಒಂದು ಬಗೆಯ ವ್ಯಸನದಂತೆ ಭಾಸವಾಗುತ್ತಿದೆ. ಪರಂಪರೆ, ಚರಿತ್ರೆ, ಸಂಸೃತಿ ಎಂಬ ಅಮೂರ್ತ ಸಂಗತಿಗಳಿಗೆ ವರ್ತಮಾನವನ್ನು ರೂಪಿಸಿಬಿಡುವ ಇಂತಹ ಅಗಾಧ ಶಕ್ತಿ ಇದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಇಂತಹ ಪ್ರಶ್ನೆಯನ್ನು ಕೇಳಿಕೊಂಡ ಸಮುದಾಯಗಳು ಮಧ್ಯಕಾಲೀನ ಯುರೋಪಿನ ಹಣೆಬರಹವನ್ನೇ ಬದಲಿಸಿದವು. ಕ್ಯಾಥೋಲಿಕ್ ಚರ್ಚ್‍ನ ಮೂಲಭೂತವಾದ ಮತ್ತು ಅದು ಹುಟ್ಟುಹಾಕಿದ್ದ ಅಂದಿನ ಊಳಿಗಮಾನ್ಯ ದುರಾಡಳಿತವನ್ನು ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದ ದುಡಿವ ಜನ ಮೂಲೋತ್ಪಾಟನೆ ಮಾಡಿದರು. ಹೊಸ ಯುರೋಪ್ ಜನ್ಮ ತಾಳಿತು. ಯುರೋಪ್ ಪುನರುಜ್ಜೀವನಗೊಂಡು ಹೊಸ ದಿಕ್ಕಿಗೆ ನಡೆದುಕೊಂಡು ಹೋಯಿತು. ಹೊಸ ಬದುಕು ಅರಳಿ ನಿಂತು ಹಳೆಯ ಪರಂಪರೆ, ಸಂಸ್ಕøತಿಯ ಹೆಸರಲ್ಲಿ ಅಸ್ತಿತ್ವದಲ್ಲಿದ್ದ ಮೂಲಭೂತವಾದ ಮತ್ತು ಊಳಿಗಮಾನ್ಯ ದುರಾಡಳಿತಗಳು ಕೊನೆಗೊಂಡವು. ಹಳೆಯ ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳಿಗಾಗಿ ಮಧ್ಯಕಾಲೀನ ಯುರೋಪಿನ ಸಮುದಾಯಗಳು ತಮ್ಮ ಬದುಕನ್ನು ಅರಳಿಸುವ ಹೊಸ ಕನಸುಗಳನ್ನು ಕಳೆದುಕೊಳ್ಳಲಿಲ್ಲ. ಫ್ರಾನ್ಸ್‍ನಲ್ಲಿ ಆದ ರಾಜಕೀಯ ಬದಲಾವಣೆಗಳು, ರಷ್ಯಾ, ಚೀನಾ, ವಿಯಟ್ನಾಮ್, ಭಾರತ ಮತ್ತು ಕ್ಯೂಬಾಗಳ ಮರುಹುಟ್ಟು ಕೇವಲ ಪರಂಪರೆಯ ರೂಢಿಗತ ಸಂಗತಿಗಳಿಂದ ಆದದ್ದಲ್ಲ. ಬದುಕುವ ಸ್ವಾತಂತ್ರ್ಯವನ್ನು ಹಂಬಲಿಸುವ ಜನ ದೇಶಕಾಲಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಪರಂಪರೆ, ಸಂಸ್ಕøತಿ, ಚರಿತ್ರೆಗಳು ಅಪೌರುಷೇಯವಾದವುಗಳಲ್ಲ. ಅವು ಜನರ ಬದುಕಿನ ಉತ್ಪನ್ನಗಳು. ಮನುಷ್ಯನ ಬದುಕು ಬದಲಾದಂತೆ ಇವೂ ಬದಲಾಗುತ್ತವೆ. ಬದಲಾಗದೇ ಇರುವ ಸಂಗತಿಗಳು ಅವಶೇಷಗಳಂತಿದ್ದು, ಒಂದು ದಿನ ನಶಿಸಿ ಹೋಗುತ್ತವೆ. ಆದರೆ ಬದಲಾವಣೆಗಳನ್ನು ಬಯಸದ ಜನ, ಪರಂಪರೆ, ಸಂಸ್ಕøತಿ ಮತ್ತು ಧರ್ಮಗಳ ಹೆಸರಲ್ಲಿ ಅವಶೇಷಗಳನ್ನೇ ಮೋಹಿಸುತ್ತಾ ಬಂದಿದ್ದಾರೆ. ಭಯೋತ್ಪಾದನೆ, ಜಾತಿವಾದ, ಕೋಮುವಾದ, ಫ್ಯಾಸಿಸಮ್‍ಗಳ ಮೂಲಗಳಿರುವುದು ಪರಂಪರೆಯ ಈ ಮೋಹದಲ್ಲಿ. ಬದಲಾವಣೆಗಳನ್ನು ದ್ವೇಷಿಸುವ ಮೂಲಭೂತವಾದ ಜಗತ್ತಿನ ಎಲ್ಲ ಅಮಾಯಕರ ರಕ್ತದ ರುಚಿ ನೋಡಿದೆ, ನೋಡುತ್ತಲೂ ಇದೆ.
ಶಬರಿಮಲೆಯ ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿರಾಕರಿಸುತ್ತಿರುವ ಜನರ ಮೌಢ್ಯವನ್ನು ನೋಡಿ ಮೇಲಿನ ಟಿಪ್ಪಣಿಯನ್ನು ಬರೆಯಬೇಕಾಯಿತು. ಶಬರಿಮಲೆಯ ದೇವಾಲಯಕ್ಕೆ ಪ್ರವೇಶಿಸುವ ಮಹಿಳೆಯರನ್ನು ತಡೆಯಬಾರದೆಂದೂ, ದೇವಾಲಯ ಪ್ರವೇಶ ಮಹಿಳೆಯರ ಹಕ್ಕು ಎಂದು ಸುಪ್ರಿಮ್ ಕೋರ್ಟ್ ಬಹುಮತದ ತೀರ್ಪು ನೀಡಿದೆ. ಈ ತೀರ್ಪು ಒಂದು ಅರ್ಥದಲ್ಲಿ ಪರಂಪರೆಯನ್ನು ಕುರುಡಾಗಿ ಮೋಹಿಸುವ ಜನರಿಗೆ ಚಾಟಿ ಬೀಸಿದೆ. 1965ರಲ್ಲಿ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಕೇರಳ ಸರ್ಕಾರ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶವನ್ನು ನಿರಾಕರಿಸಿತ್ತು. 10 ರಿಂದ 50 ವರ್ಷಗಳ ವಯಸ್ಸಿನ ಮಹಿಳೆಯರು ಮುಟ್ಟಾಗುವುದರಿಂದ ಅವರು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಅನರ್ಹರು ಎಂಬ ಕೇರಳ ಸರ್ಕಾರದ ನಿರ್ಧಾರ ಈ ತೀರ್ಪಿನಿಂದಾಗಿ ರದ್ದಾದಂತಾಗಿದೆ. ಆದರೆ, ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವುದು ಕೇವಲ ಕೇರಳ ಸರ್ಕಾರದ ನಿರ್ಧಾರವಲ್ಲ. ಆರಾಧನಾ ಸ್ಥಳಗಳ ಪ್ರವೇಶವನ್ನು ನಿರ್ಬಂಧಿಸುವ ವಿಧಿಗಳು ಹಿಂದೂ ಧರ್ಮದಲ್ಲಿ ಹಾಸುಹೊಕ್ಕಾಗಿವೆ. ಯಾರು ತಪಸ್ಸು ಮಾಡಬೇಕು, ಯಾರು ಓದಬೇಕು, ಜ್ಞಾನವನ್ನು ಪಡೆಯಲು ಯಾರು ಅರ್ಹರು, ಯಾರು ದೇವರಿಗೆ ಹತ್ತಿರವಾಗಬೇಕು, ಯಾರು ದೇವರನ್ನು ಸಮೀಪಿಸಬಹುದು ಎಂಬ ವಿಧಿಗಳು ಹಿಂದೂ ಧರ್ಮಶಾಸ್ತ್ರದಲ್ಲಿ ಪದೇಪದೇ ಸ್ಪಷ್ಟಪಡಿಸಲ್ಪಟ್ಟಿವೆ. ಈ ವಿಧಿಗಳನ್ನು ಪರಂಪರೆಯ ವ್ಯಾಮೋಹಿಗಳು

ಕಾಲದಿಂದ ಕಾಲಕ್ಕೆ ಜೀವಂತವಾಗಿಟ್ಟುಕೊಂಡೇ ಬಂದಿದ್ದಾರೆ. ಕೆಳಜಾತಿಯ ದುಡಿವ ಜನರನ್ನು ಮತ್ತು ಮಹಿಳೆಯರನ್ನು ಆರಾಧನಾ ಸ್ಥಳಗಳಿಂದ ಕಟ್ಟುನಿಟ್ಟಾಗಿ ಬಹಿಷ್ಕರಿಸಿದ್ದು ಮತ್ತು ಅದನ್ನು ಪರಂಪರೆಯ ಹೆಸರಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಧರ್ಮವೆಂದರೆ ಅದು ಹಿಂದು ಧರ್ಮ ಮಾತ್ರ. ಹಿಂದೂ ಧರ್ಮದ ಈ ಜೀವವಿರೋಧಿ ಪರಂಪರೆಗೆ ಪರ್ಯಾಯವಾಗಿ ಅನೇಕ ದರ್ಶನಗಳು ಭಾರತದಲ್ಲಿ ಹುಟ್ಟಿವೆ. ಬೌದ್ಧ ದರ್ಶನ ಮತ್ತು ವಚನ ಚಳುವಳಿಯ ಆಶಯಗಳು, ಹಿಂದೂ ಧರ್ಮದ ರೂಢಿಗತ ಚಿಂತನೆಗಳಿಗೆ ಪರ್ಯಾಯಗಳನ್ನು ಮಾತ್ರ ರೂಪಿಸಲಿಲ್ಲ. ಈ ದೇಶದ ಬಹುಸಂಖ್ಯಾತ ದುಡಿವ ಜನರ ಅಂತಃಸ್ಸತ್ವವನ್ನು ನ್ಯಾಯಬದ್ಧಗೊಳಿಸುವ ತತ್ವದರ್ಶನವನ್ನು ರೂಪಿಸಿದವು. ತೀರಾ ಇತ್ತೀಚೆಗೆ, ದೇವಾಲಯ ಪ್ರವೇಶವನ್ನು ಎಲ್ಲ ಜನರ ಹಕ್ಕು ಎಂದು ಪ್ರತಿಪಾದಿಸಿದ್ದು ಅಂಬೇಡ್ಕರ್. ಅದಕ್ಕೂ ಮೊದಲು ನಾರಾಯಣಗುರು ಕೆಳಜಾತಿಗಳ ಮತ್ತು ಮಹಿಳೆಯರ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು. ಆದರೆ ಪೆರಿಯಾರ್ ಹಿಂದೂ ದೈವಗಳನ್ನು ಮಾತ್ರವಲ್ಲ, ದೇವಾಲಯಗಳನ್ನೇ ನಿರಾಕರಿಸಿದರು. ತನ್ನೆಲ್ಲಾ ಮೂರ್ತಿಭಂಜಕ ಚಿಂತನೆಗಳಿಂದ ಪೆರಿಯಾರ್ ದಲಿತರು ಮತ್ತು ಮಹಿಳೆಯರನ್ನೂ ಒಳಗೊಂಡಂತೆ ಬಹಿಷ್ಕøತ ಭಾರತದ ಬಹುಸಂಖ್ಯಾತ `ಹತಭಾಗ್ಯರು’ ನಡೆಯಬಹುದಾದ ಹಾದಿಗೆ ದಿಕ್ಸೂಚಿಯೇ ಆಗಿದ್ದರು, ಆಗಿದ್ದಾರೆ ಸಹ.

ಮಹಿಳೆಯರು, ಶಬರಿಮಲೆಯ ದೇವಾಲಯ ಪ್ರವೇಶದ ಕುರಿತ ನ್ಯಾಯಾಲಯದ ತೀರ್ಪು ಮೇಲ್ನೋಟಕ್ಕೆ ಕ್ರಾಂತಿಕಾರಿ ನಡೆಯಂತೆ ಕಾಣುತ್ತಿದೆ. ಈ ತೀರ್ಪು ಸಾರಾಂಶದಲ್ಲಿ, ಸಂವಿಧಾನದಲ್ಲಿರುವ ಸಹಜ ಹಕ್ಕುಗಳ ಪ್ರತಿಪಾದನೆ ಮಾಡಿದೆಯಷ್ಟೆ. ನ್ಯಾಯಾಲಯದ ಈ ತೀರ್ಪನ್ನು ಸಂಭ್ರಮಿಸುವ ಕಾಲಘಟ್ಟದಲ್ಲಿ ನಾವು ಬದುಕುತ್ತಿಲ್ಲ. ಸಂವಿಧಾನವನ್ನು ಒಪ್ಪದ, ಬಹುಸಂಖ್ಯಾತ ದುಡಿವ ಜನರ ಹಕ್ಕುಗಳನ್ನು ನಿರಾಕರಿಸುವ ಮೂಲಭೂತವಾದಿ ನವಬ್ರಾಹ್ಮಣ್ಯ ಎಲ್ಲೆಡೆ ಸಂಚಯಿಸುತ್ತಿದೆ. ಮುಟ್ಟಾಗುವ ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವ ಮೂಲಭೂತವಾದಿ ಮನಸ್ಥಿತಿಯ ಹಿಂದೆ ಕೇವಲ ಮಡಿಮೈಲಿಗೆಯ ಕರ್ಮಠತೆ ಮಾತ್ರ ಕೆಲಸ ಮಾಡುತ್ತಿಲ್ಲ. ಎಲ್ಲಾ ಜಾತಿಯ ಬಹುಸಂಖ್ಯಾತ ದುಡಿವ ಜನರ ಸಹಜ ಹಕ್ಕುಗಳನ್ನು ದಮನ ಮಾಡುವ ಹುನ್ನಾರು ಈ ಕರ್ಮಠತೆಯ ಹಿಂದೆ ಅಡಗಿ ಕುಳಿತಿದೆ. ಅಂಬೇಡ್ಕರ್, ಅಸ್ಪøಶ್ಯರ ದೇವಾಲಯ ಪ್ರವೇಶವನ್ನು ಅತ್ಯಂತಿಕವೆಂದು ಭಾವಿಸಿರಲಿಲ್ಲ. ಸಾಮಾಜಿಕ ಅಸಮಾನತೆಯನ್ನು ನಿರ್ಲಜ್ಜವಾಗಿ ಸಮರ್ಥಿಸುತ್ತಿದ್ದ ಮತ್ತು ಆಚರಣೆಯಲ್ಲಿಡುತ್ತಿದ್ದ ದೇವಾಲಯಗಳು, ಕೆರೆಗಳು ಮುಂತಾದ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕೆಂದು ಅಂಬೇಡ್ಕರ್ ಬಯಸಿದ್ದರು. ದೇವಾಲಯಗಳು, ದೈವಗಳು, ನಂಬಿಕೆ ಸಂಪ್ರದಾಯಗಳು ಈ ದೇಶದ ಬಹುಸಂಖ್ಯಾತ ದುಡಿವ ಜನರನ್ನು ವಿಮೋಚನೆಗೊಳಿಸಲಾರವು ಎಂಬ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು ‘ಹಿಂದುವಾಗಿ ಸಾಯಲಾರೆ’ ಎಂದು ಬೌದ್ಧ ಧಮ್ಮದ ಕಡೆ ನಡೆದುಹೋದರು. ಅಂಬೇಡ್ಕರ್, ಧರ್ಮವನ್ನು ಮತ್ತು ಅದರ ಕರ್ಮಠ ಆವರಣವನ್ನು ಸಂಪೂರ್ಣವಾಗಿ ನಿರಾಕರಿಸಿದರು. ಅವರು ಬೌದ್ಧ ಧಮ್ಮವನ್ನು ನೆಚ್ಚಿಕೊಳ್ಳುವುದರ ಮೂಲಕ ಹೊಸ ಆಧ್ಯಾತ್ಮಿಕ ಅವಕಾಶವನ್ನು ಶೋಷಿತರ ಮುಂದೆ ತೆರೆದಿಟ್ಟರು. ಕರ್ಮಠ ನಂಬಿಕೆಗಳಿಗೆ, ಮೂಲಭೂತವಾದಕ್ಕೆ, ಸಾಂಸ್ಥಿಕ ಧರ್ಮವೊಂದಕ್ಕೆ ಬುದ್ಧನ ಚಿಂತನೆಗಳ ಮೂಲಕ ಎದುರೇಟು ಕೊಟ್ಟರು. ಹೀಗಾಗಿ, ಅಂಬೇಡ್ಕರ್ ಬುದ್ಧಿಸಮ್‍ನ್ನು ಧರ್ಮವನ್ನಾಗಿ ಮಾತ್ರ ಪರಿಭಾವಿಸಲಿಲ್ಲ. ಬುದ್ಧಿಸಮ್ ಶೋಷಿತರ ವಿಮೋಚನೆಯನ್ನು ಸಾಧ್ಯವಾಗಿಸಬಲ್ಲ, ಅಸಮಾನತೆಯ ಆಚರಣೆಗೆ ಆಸ್ಪದ ನೀಡದ ಒಂದು ಪ್ರತಿದರ್ಶನ ಎಂದೇ ಅಂಬೇಡ್ಕರ್ ಭಾವಿಸಿದ್ದರು. ಈ ಮೂಲಕ, ನಿತ್ಯದ ಬದುಕಲ್ಲಿ ತಮಗೆ ಬೇಕಾದದ್ದನ್ನು ಸ್ವೀಕರಿಸಿ, ಬೇಡವಾದದ್ದನ್ನು ನಿರಾಕರಿಸಿಬಿಡುವ ಮುಕ್ತ ಅವಕಾಶವನ್ನು ಅಂಬೇಡ್ಕರ್ ಶೋಷಿತರ ಮುಂದೆ ತೆರೆದಿಟ್ಟರು.
ಸಾವಿರಾರು ವರ್ಷಗಳಿಂದ ಪೂಜಿಸಲ್ಪಡುತ್ತಿರುವ ದೈವಗಳಿಗೆ ತಮ್ಮ ಸುತ್ತ ನಡೆಯುತ್ತಿರುವ ಕ್ರೂರ ಶೋಷಣೆ ಮತ್ತು ಅಸಮಾನತೆಗಳನ್ನು ತೊಡೆದು ಹಾಕುವ ಸಾಮಥ್ರ್ಯವಿಲ್ಲ ಎಂದಾದ ಮೇಲೆ ಅವುಗಳನ್ನು ನಾವೇಕೆ ಪೂಜಿಸಬೇಕು? ಲಿಂಗಭೇದವನ್ನು, ಅಸ್ಪøಶ್ಯತೆಯನ್ನು ಆಚರಿಸುವ ಕೇಂದ್ರಗಳಂತಿರುವ ದೇವಾಲಯಗಳು ನಮಗೆ ಯಾಕೆ ಬೇಕು? ದೇವಾಲಯ ಪ್ರವೇಶ ನಮಗೆ ವರ್ತಮಾನದ ತುರ್ತಾಗಬೇಕೆ? ಅಂಬೇಡ್ಕರ್ ಹೇಳಿದಂತೆ, ಸಾಮಾಜಿಕ ಗುಲಾಮರಿಗೆ ಅವಕಾಶ ಮಾಡಿಕೊಡುವ ಎಲ್ಲವನ್ನೂ ನಾವು ನಿರಾಕರಿಸುವ ಅಗತ್ಯವಿದೆ. ವಿಮೋಚನೆಗಾಗಿ ಇದು ಸಂಪೂರ್ಣ ನಿರಾಕರಣೆಯ ಹಠಯೋಗ. ನಮಗೀಗ ಬೇಕಿರುವುದು ಲಿಂಗಭೇದ, ಅಸ್ಪøಶ್ಯತೆಯನ್ನ ಆಚರಿಸುವ ಕೂಪಗಳಂತಾಗಿರುವ ದೇವಾಲಯಗಳಲ್ಲ. ನಮ್ಮನ್ನು ಕುಬ್ಜರನ್ನಾಗಿಸುವ ನಂಬಿಕೆ, ಸಂಪ್ರದಾಯ, ಧರ್ಮಗಳು ನಮಗೆ ಬೇಕಿಲ್ಲ. ಮನುಷ್ಯನ ಬದುಕಿನ ಘನತೆಯನ್ನು ಎತ್ತಿಹಿಡಿಯದಿದ್ದಲ್ಲಿ ಅವುಗಳ ವರ್ತಮಾನದ ಅಗತ್ಯವನ್ನು ಪ್ರಶ್ನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾವುದೇ ಪರಂಪರೆಗೆ ಎಷ್ಟೇ ಸಾವಿರ ವರ್ಷದ ಇತಿಹಾಸವಿರಲಿ, ಆ ಪರಂಪರೆ ವರ್ತಮಾನವನ್ನು ನಿನ್ನೆಗಳಿಗೆ ಬಲಿಕೊಡುವಂತಿದ್ದರೆ ಅದು ನಮಗೆ ಬೇಡ. ಅಂತಹ ಪರಂಪರೆ ನಮ್ಮ ಬದುಕಿಗಿಂತ ಘನವಾದದ್ದೇನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋವಾ ನೈಟ್ ಕ್ಲಬ್ ಮಾಲೀಕರ ಮಧ್ಯಂತರ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ: ಥೈಲ್ಯಾಂಡ್‌ನಿಂದಲೂ ಗಡಿಪಾರು ಪ್ರಕ್ರಿಯೆ ಆರಂಭ 

ನವದೆಹಲಿ: ಕಳೆದ ವಾರ ಕನಿಷ್ಠ 25 ಜನರ ಸಾವಿಗೆ ಕಾರಣವಾಗಿದ್ದ, ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲುಥ್ರಾಸ್ ಅವರ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು...

ಮಾದಕ ದ್ರವ್ಯ ಬಳಕೆ-ಮಾರಾಟದ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ: ಪರಮೇಶ್ವರ್

ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ, ಮಾರಾಟದ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿರುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಗುರುವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ...

ದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು ‘ಟ್ರಂಪ್ ಗೋಲ್ಡ್ ಕಾರ್ಡ್’

ಟ್ರಂಪ್ ಆಡಳಿತವು ಬುಧವಾರ (ಡಿಸೆಂಬರ್ 10) ಔಪಚಾರಿಕವಾಗಿ 'ಟ್ರಂಪ್ ಗೋಲ್ಡ್ ಕಾರ್ಡ್'ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದನ್ನು ಅಮೆರಿಕ ಸರ್ಕಾರ ಕನಿಷ್ಠ 1 ಮಿಲಿಯನ್ ಡಾಲರ್ ಪಾವತಿಸುವ ಜನರಿಗೆ ನೀಡಲು ಯೋಜಿಸಿದೆ. 'ಟ್ರಂಪ್ ಗೋಲ್ಡ್...

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜೈಲು ಶಿಕ್ಷೆ ಅಮಾನತು ಮನವಿ ನಿರಾಕರಿಸಿದ ಸುಪ್ರೀಂ ಕೋರ್ಟ್

1996 ರ ಮಾದಕ ದ್ರವ್ಯ ವಶ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ 20 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ಗುರುವಾರ ಅವರ ಬಿಡುಗಡೆಗಾಗಿನ ಪ್ರಯತ್ನ...

ಅರುಣಾಚಲ ಪ್ರದೇಶ: ಟ್ರಕ್ ಕಂದಕಕ್ಕೆ ಉರುಳಿ ಅಸ್ಸಾಂ ಮೂಲದ 21 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ, 18 ಮೃತದೇಹಗಳು ಪತ್ತೆ

ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಅಸ್ಸಾಂನಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಆಳವಾದ ಕಂದಕಕ್ಕೆ ಉರುಳಿದ್ದು, 21 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಲ್ಲಿಯವರೆಗೆ 18 ಶವಗಳನ್ನು ಹೊರತೆಗೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.  ಡಿಸೆಂಬರ್ 8ನೇ...

ಜಾರ್ಖಂಡ್‌ನ 27 ಮಕ್ಕಳು ನೇಪಾಳಕ್ಕೆ ಕಳ್ಳಸಾಗಣೆ; ತನಿಖೆ ಆರಂಭಿಸಿದ ಪೊಲೀಸರು

ಉತ್ತಮ ಶಿಕ್ಷಣ ಒದಗಿಸುವ ನೆಪದಲ್ಲಿ 27 ಮಕ್ಕಳನ್ನು ನೇಪಾಳಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಪೊಲೀಸರು ಗುರುವಾರ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಕ್ಕಳನ್ನು...

ಉಮರ್ ಖಾಲಿದ್‌ಗೆ 14 ದಿನಗಳ ಮಧ್ಯಂತರ ಜಾಮೀನು; ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ

ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರಿಗೆ ಡಿಸೆಂಬರ್ 27 ರಂದು ನಿಗದಿಯಾಗಿದ್ದ ತಮ್ಮ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 16 ರಿಂದ 29 ರವರೆಗೆ 14 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಲಾಯಿತು....

ಜಾತ್ಯತೀತತೆಯನ್ನು ಮಾತ್ರ ನಂಬುತ್ತೇನೆ; ಕೋಮುವಾದವನ್ನಲ್ಲ: ಮಮತಾ ಬ್ಯಾನರ್ಜಿ

ನಾನು ಕೋಮುವಾದದಲ್ಲಿ ನಂಬಿಕೆ ಇಡುವುದಿಲ್ಲ. ಜಾತ್ಯತೀತತೆಯನ್ನು ಮಾತ್ರ ನಂಬುತ್ತೇನೆ. ಚುನಾವಣೆ ಸಮೀಪಿಸಿದಾಗಲೆಲ್ಲಾ, ಬಿಜೆಪಿ ಹಣವನ್ನು ಬಳಸಿ ಇತರ ರಾಜ್ಯಗಳಿಂದ ಜನರನ್ನು ಕರೆತಂದು ಸಾರ್ವಜನಿಕರನ್ನು ವಿಭಜಿಸಲು ಪ್ರಯತ್ನಿಸುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ...

ಅತ್ಯಾಚಾರ ಪ್ರಕರಣದ ವಿಚಾರಣೆ ವರ್ಗಾವಣೆ ಕೋರಿ ಪ್ರಜ್ವಲ್ ರೇವಣ್ಣ ಮನವಿ : ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿರುವ ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳನ್ನು ಬೇರೆ ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್‌...

ಭಗವದ್ಗೀತೆ ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಮುಸ್ಲಿಂ ವ್ಯಾಪಾರಿಗೆ ಥಳಿತ : ಮೂವರ ಬಂಧನ

ಲಕ್ಷ ಕಂಠ ಗೀತಾ ಪಾರಾಯಣ (ಸುಮಾರು 5 ಲಕ್ಷ ಜನರಿಂದ ಭಗವದ್ಗೀತೆ ಪಾರಾಯಣ) ಕಾರ್ಯಕ್ರಮದಲ್ಲಿ ಚಿಕನ್ ಪಫ್ಸ್ ಮಾರಿದ ಬಡ ಮುಸ್ಲಿಂ ವ್ಯಾಪಾರಿಗೆ ಥಳಿಸಿದ ಘಟನೆ ಭಾನುವಾರ (ಡಿಸೆಂಬರ್ 7) ಕೋಲ್ಕತ್ತಾದ ಬ್ರಿಗೇಡ್...