Homeಕರ್ನಾಟಕಸದನದಲ್ಲಿ ಮಿಂಚಿದ ಬಸವ ಪ್ರಣೀತ ಶಾಸಕ ನಾರಾಯಣರಾವ್

ಸದನದಲ್ಲಿ ಮಿಂಚಿದ ಬಸವ ಪ್ರಣೀತ ಶಾಸಕ ನಾರಾಯಣರಾವ್

- Advertisement -
- Advertisement -

ಬಸವ ಪ್ರಣೀತ ಲಿಂಗಾಯತನಾದ ಶಾಸಕ ನಾರಾಯಣರಾವ್

ಬಸವ ಕಲ್ಯಾಣದ ಶಾಸರ ಬಿ.ನಾರಾಯಣರಾವ್ ನಿನ್ನೆ ದಿನ ವಿಧಾನಸೌಧದಲ್ಲಿ ಆಡಿದ ಮನಪೂರ್ವಕವಾದ ಮಾತುಗಳಿಗೆ ಎಲ್ಲಿಲ್ಲದ ಪ್ರಶಂಸೆಯ ಸುರಿಮಳೆ ನಡೆದಿದೆ. ಮೂಲತಃ ಶರಣರ ಅಂಬಿಗರ ಚೌಡಯ್ಯನವರ ಚಾಟಿ ಏಟು, ಒಳ ಹೊಡೆತಗಳು ಅವರ ಮಾತುಗಳಲ್ಲಿ ನಾವು ಧಾರಾಳವಾಗಿ ಕಾಣಬಹುದು. ಶಾಸಕ ಬಿ.ನಾರಾಯಣರಾವ್ ಬಸವಕಲ್ಯಾಣದ ಜನತೆಯೆ ಬಲ್ಲಂತೆ ಸಾದಾ ಸೀದಾ ಜೀವನ ನಿರ್ವಹಿಸುವ, ನಿಗರ್ವಿ ಶಾಸಕ. ಯಾರಾದರೂ ಮಾತಾಡಿಸಬಹುದಾಗಿ, ಮತ್ತಾರಾದರೂ ತಕರಾರು ತೆಗೆಯಬಹುದಾದ ಸರಳತೆಯನ್ನು ಮೈಗೂಡಿಸಿಕೊಂಡವರು.

ಶರಣರ ವಿಚಾರಗಳೆ ಹಾಗೆ. ಒಂದು ಒಂದು ಸಲ ಅವುಗಳ ಸಮೀಪಕ್ಕೆ ಬರಬೇಕು ಅಷ್ಟೇ : ಅನಂತರ ಅವರಿಗೆ ಅರಿವಿಲ್ಲದೆ ಅವರೊಳಗೆ ಚಿಂತನೆ, ಸಾಮಾಜಿಕ ಕಾಳಜಿ, ನಿಜವಾದ ಧಾರ್ಮಿಕ ಪ್ರಜ್ಞೆಗಳು ಹುಟ್ಟಿಕೊಳ್ಳಲು ಆರಂಭವಾಗುತ್ತವೆ. ನಮಗೆ ಗೊತ್ತಿಲ್ಲದೆ ಪ್ರತಿಭಟಿಸುವ ಮನಸ್ಸು, ವಸ್ತು ಸ್ಥಿತಿಯನ್ನು ಅವಲೋಕಿಸಿ ಸೂಕ್ತ ಸಮಯದಲ್ಲಿ ಸರಿಯಾದ ಮಾತನಾಡುವ ಕಸುವು ತಂತಾನೆ ಉಂಟಾಗುತ್ತದೆ.

ಕುಂಡಲಿ ಬಂದು ಕೀಡಿಯನು ಕುಂಡಲಿಯ ಮಾಡಿತ್ತಯ್ಯಾ

ಅಗ್ನಿ ಬಂದು ಕಾಷ್ಠವ ಅಗ್ನಿಯ ಮಾಡಿತ್ತಯ್ಯಾ

ಮಹೇಶ ಬಂದು ಭಕ್ತನ ಮಹೇಶನ ಮಾಡಿ

ಗಮನಿಸಿದನಯ್ಯಾ ಕಪಿಸಿದ್ಧ ಮಲ್ಲಿಕಾರ್ಜುನಾ

ಎಂಬಂತೆ ಒಂದೆ ಒಂದು ಸಲ ಶರಣರ ವಿಚಾರಧಾರೆಯತ್ತ ಇಣುಕಿ ನೋಡಿದರೂ ಸಾಕು. ಖಂಡಿತವಾಗಿ ಕೀಡೆ ಕುಂಡಲಿಯಾಗುತ್ತದೆ. ಬೆಂಕಿ ಕಟ್ಟಿಗೆಯ ಸಮೀಪ ಬಂದು ಕಟ್ಟಿಗೆಯನ್ನು ಹೇಗೆ ಬೆಂಕಿ ಮಾಡಬಲ್ಲುದೋ ಹಾಗೆ. ಮಹೇಶ ಬಂದು ಭಕ್ತನ ಮಹೇಶ ಸ್ಥಲಕ್ಕೆ ಕರೆದುಕೊಂಡು ಹೋಗುವಂತೆ ಎಂಬ ಸೊನ್ನಲಾಪುರದ ಶರಣ ಸಿದ್ಧರಾಮಯ್ಯನ ಮಾತಿನಲ್ಲಿ ಬಹುದೊಡ್ಡ ಇತಿಹಾಸವಿದೆ.

ಬಸವರಾಜ ಪಾಟೀಲ ಅಷ್ಟೂರೆ, ಖೂಬಾ ಅವರ ನಡುವೆ ಗೆದ್ದು ಬರುವುದು ಅಷ್ಟು ಸುಲಭದ ಮಾತಲ್ಲ. ಶಾಸಕ ನಾರಾಣಯರಾವ್ ರಾಜಕೀಯ ಘಟಾನು ಘಟಿಗಳ ನಡುವೆಯೂ ಗೆದ್ದು ಬರುವ ಛಾತಿಯನ್ನು ಇಟ್ಟುಕೊಳ್ಳಲು ಸಾಧ್ಯವಾದುದು ಅವರ ಬದ್ಧತೆಗೆ. ಜನ ಸಾಮಾನ್ಯನೊಂದಿಗೆ ಬೆರೆತು ಅವರೊಳಗೆ ಒಂದಾಗುವ ಕ್ರಿಯೆಗೆ. ಬಹುತೇಕ ರಾಜಕಾರಣಿಗಳಿಗೆ ವಿಚಾರವೆಂಬುದು ಇರುವುದಿಲ್ಲ. ಆ ವಿಚಾರಗಳನ್ನು ಅವರಲ್ಲಿ ದೀಪ ಹಚ್ಚಿ ಹುಡುಕಬೇಕು. ಆದರೆ ಈ ನಾರಾಯಣರಾವ್ ಮಾತ್ರ ಬಸವಾದಿ ಶಿವಶರಣರ ವಿಚಾರಗಳನ್ನು ಅರಿತುಕೊಂಡು ಅವುಗಳನ್ನು ಆಚರಿಸುವತ್ತ ಆಸಕ್ತಿ ತೋರಿಸಿದ್ದಾರೆ.

ಹೀಗಾಗಿಯೇ ವಿಧಾನಸೌಧದಲ್ಲಿ ಎಲ್ಲಾ ಸದಸ್ಯರಿಗೂ ಅರಿವು ಮೂಡಿಸುವ ಅನುಭಾವದ ಮಾತುಗಳನ್ನು ಹೇಳಿದ್ದಾರೆ. ಜಗತ್ತಿಗೆ ಮೊಟ್ಟ ಮೊದಲು ಪ್ರಜಾಪ್ರಭುತ್ವದ ಆಡಳಿತ ತಂದದ್ದು ಬ್ರಿಟನ್ ದೇಶ ಅಲ್ಲ, ನಮ್ಮ ರಾಜ್ಯದ ಬಸವ ಕಲ್ಯಾಣ ಎಂಬುದುನ್ನು ಅವರು ಒತ್ತಿ ಒತ್ತಿ ಹೇಳಿದ್ದಾರೆ. ತನ್ನ ರಾಜ್ಯದಲ್ಲಿ ಯಾರೂ ಹಸಿವಿನಿಂದ ಕಂಗಾಲಾಗಿ ಸಾಯಬಾರದು ಎಂದು ಅರಿತುಕೊಂಡ ಬಸವಣ್ಣನವರು ದಾಸೋಹ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂದು ನೆನಪಿಸಿಕೊಂಡಿದ್ದಾರೆ. ಜಾತಿ ಮತ ಪಂಥವೆನ್ನದೆ, ಗಂಡು ಹೆಣ್ಣು ಎಂಬ ತರತಮಭಾವನೆ ಇಟ್ಟುಕೊಳ್ಳದೆ ಅಂದು ಕಲ್ಯಾಣದಲ್ಲಿ ಬಸವಣ್ಣ ಅನುಭವ ಮಂಟಪ ಕಟ್ಟಿದರು. ಈ ಅನುಭವ ಮಂಟಪವನ್ನು ಮತ್ತೆ ಪುನರ್ ನಿರ್ಮಿಸುವ ಮೂಲಕ ಜನ ಸಾಮಾನ್ಯರಿಗೆ ಪ್ರೇರಣೆ ಒದಗಿಸುವುದು ಸರಕಾರದ ಕರ್ತವ್ಯ ಎಂದು ನಾರಾಯಣರಾವ್ ಒತ್ತಿ ಹೇಳಿದರು.

ಜೊತೆಗೆ ಇಂದಿನ ರಾಜಕೀಯ ತೀರಾ ಬಗ್ಗಡಗೊಂಡು ಹೋಗಿದೆ. ಕೋಟಿ ಕೋಟಿಗಳನ್ನು ಖರ್ಚು ಮಾಡಿ ಗೆದ್ದು ಬರುವ ಸ್ಥಿತಿ ನಿರ್ಮಾಣವಾಗಿದೆ. ಶ್ರೀಸಾಮಾನ್ಯ ಹೀಗೆ ಗೆದ್ದು ಬರಲು ಸಾಧ್ಯವೆ ? ಎಂಬ ಆತ್ಮಾವಲೋಕನದ ನುಡಿಗಳನ್ನು ಆಡುವ ಮೂಲಕ ವಿಧಾನಸಭೆಯ ಸದಸ್ಯರ ಮನವನ್ನು ಅಲ್ಲಾಡಿಸಿಬಿಟ್ಟಿದ್ದಾರೆ.

ಬಸವಣ್ಣನವರ ಬಗೆಗೆ ಮಾತಾಡುವುದೆ ಒಂದು ಸಾಹಸ ಎಂದು ಜಾತಿ ಲಿಂಗಾಯತರು ಅವಲತ್ತುಕೊಳ್ಳುವ ಈ ಸಂದರ್ಭದಲ್ಲಿ ನಿಜವಾದ ಬಸವ ಪ್ರಣೀತ ಲಿಂಗಾಯತನಾದ ನಾರಾಣರಾವ್ ಮಾತಾಡುವುದು ಹೆಚ್ಚು ಸೂಕ್ತವಾಗಿದೆ. ಇದಲ್ಲದೆ ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗಲೂ ಸಹ ಬಸವಾದಿ ಶರಣರ ಕುರಿತು, ಅವರ ವಚನಗಳ ಕುರಿತು ಆಸಕ್ತಿ ತಳೆದವರು ಅನ್ಯ ಮತದವರು. ಹರ್ಡೇಕರ ಮಂಜಪ್ಪ, ಫ.ಗು. ಹಳಕಟ್ಟಿ, ಅನಕೃ, ಆರ್.ಆರ್.ದಿವಾಕರ್, ಎಂ.ಆರ್.ಶ್ರೀನಿವಾಸ ಮೂರ್ತಿ ಮೊದಲಾದವರು ಆಸಕ್ತಿ ತಳೆದರೆಂದೆ ನಮಗಿಂದು ವಚನ ಸಾಹಿತ್ಯವೆಂಬ ಸಕಲ ಜೀವಪ್ರೇಮದ, ವಿಶ್ವ ಹೃದಯಿಯಾದ ವಚನ ಸಾಹಿತ್ಯ ದಕ್ಕಿದೆ.

ನಾರಾಯಣರಾವ್‍ರ ಕೌಟುಂಬಿಕ ಕಲಹಗಳೇನೇ ಇದ್ದರೂ ಸಾಮಾಜಿಕವಾಗಿ ಅವರ ಬದ್ಧತೆ, ವೈಚಾರಿಕ ನಿಲುವುಗಳನ್ನು ಕರ್ನಾಟಕದ ಜನತೆ ಭರವಸೆಯಿಂದ ನೋಡುತ್ತಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Basavaraj patil ashture alla. Basavaraj patil attur. Dr Basavaraj patil ashtur ennuva mattobba BJP leader. In last assembly election he (ashture) contested from Bidar (south) constituency on BJP ticket. Attur is ex minister.

  2. Basavaraj patil ashture alla. Basavaraj patil attur. Dr Basavaraj patil ashtur ennuva mattobba BJP leader. In last assembly election he (ashture) contested from Bidar (south) constituency on BJP ticket. Attur is ex minister.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...