Homeಅಂಕಣಗಳುಸಾರ್ವಜನಿಕ ನೀತಿಗಳು ಮತ್ತು ಕಪ್ಪುಹಣ

ಸಾರ್ವಜನಿಕ ನೀತಿಗಳು ಮತ್ತು ಕಪ್ಪುಹಣ

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

ಪ್ರಜಾಪ್ರಭುತ್ವದಲ್ಲಿ ಜನರ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಬೇಕು. ನಮ್ಮ ಸಂವಿಧಾನದಲ್ಲಿ ಪಕ್ಷಗಳ ಪ್ರಸ್ತಾಪವೇ ಇಲ್ಲದಿದ್ದರೂ ರಾಜಕೀಯ ಪಕ್ಷಗಳು ಎಲ್ಲೆಡೆ ವೃದ್ಧಿಯಾಗುತ್ತಲೇ ಇವೆ. ಜನರ ಪ್ರತಿನಿಧಿಯಾರೂ ಆಯ್ಕೆಯಾಗುತ್ತಿಲ್ಲ; ರಾಜಕೀಯ ಪಕ್ಷದ ಅಭ್ಯರ್ಥಿಗಳೆ ಸ್ಪರ್ಧಿಸಿ ಆಯ್ಕೆಯಾಗುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಹೀಗೆ ಇತರೆ ಪಕ್ಷಗಳ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಜನರ ಪ್ರತಿನಿಧಿಗಳು ಎಲ್ಲಿ? ಜನರ ಮತಗಳಿಂದಲೇ ಆಯ್ಕೆಯಾದರೂ ಪಕ್ಷಗಳ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಿದ್ದಾರೆ. ಹಾಗಾಗಿ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಜನರ ಪ್ರತಿನಿಧಿಗಳೇ ಇಲ್ಲ.
ಒಂದು, ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ರಾಜಕೀಯ ಪಕ್ಷಗಳನ್ನು ನಿರ್ಬಂಧಿಸಬೇಕು ಇಲ್ಲವೇ ಪರ್ಯಾಯವಾಗಿ ಅಥವಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ಮತದಾರರ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮತದಾರರ ಕೌನ್ಸಿಲ್‍ಗಳ ರಚನೆಯಾಗಬೇಕು.
ಪಂಚವಾರ್ಷಿಕ ಯೋಜನೆಗಳು
ದೇಶದ ಮೊದಲ ಪ್ರಧಾನಿ ನೆಹರು ಅವರು ಪರಿಚಯಿಸಿದ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾಗಲಿಲ್ಲ. ಈ ಯೋಜನೆಗಳು ಸಾರ್ವಜನಿಕ ನೀತಿಗಳ ಚೈತನ್ಯದ ವಿರುದ್ಧವಾಗಿದ್ದವು. 65 ವರ್ಷಗಳಲ್ಲಿ 13 ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಒಂದೊಂದು ಪಂಚವಾರ್ಷಿಕ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಲಾಯಿತು. ಆದರೆ ಅದರ ಫಲಿತಾಂಶ : ಶ್ರೀಮಂತರು ಇನ್ನಷ್ಟು ಶ್ರೀಮಂತರಾದರೆ ಬಡವರು ಹೆಚ್ಚಿನ ಬಡತನಕ್ಕೆ ದೂಡಲ್ಪಟ್ಟರು. ಈ ಪ್ರಯೋಗ ಬಡತನದ ರೇಖೆಯ ಕೆಳಗೆ 33% ಜನರನ್ನು ಸೃಷ್ಟಿಸಿತು. ದೇಶಕ್ಕೆ ಸ್ವಾತಂತ್ರ ಬಂದಕೂಡಲೇ ಬಡತನವನ್ನು ನಿರ್ಮೂಲನೆ ಮಾಡಬೇಕು ಎಂದು ಗಾಂಧೀಜಿಯವರು ಪಣತೊಟ್ಟಿದ್ದರು. ಆದರೆ ಸ್ವಾತಂತ್ರಾನಂತರ ಬಂದ ಸರಕಾರಗಳ ನೀತಿಗಳಿಂದಾಗಿ ಇದು ಆಗಲಿಲ್ಲ. ಸ್ವಾತಂತ್ರ ಸಿಕ್ಕ ಕೂಡಲೇ ಬಡತನ ನಿರ್ಮೂಲನೆಗಾಗಿ ಸಾರ್ವಜನಿಕ ನೀತಿಯೊಂದನ್ನು ರೂಪಿಸಿದ್ದರೆ, ಇಂದು ನಾವು ಒಂದು ಸಮಾನಾವಕಾಶವುಳ್ಳ (egಚಿಟiಣಚಿಡಿiಚಿಟಿ) ಸಮಾಜವನ್ನು ಸೃಷ್ಟಿಸಿರುತ್ತಿದ್ದೆವು.
13 ಪಂಚವಾರ್ಷಿಕ ಯೋಜನೆಗಳಲ್ಲಿ ಎರಡು ಅಥವಾ ಮೂರು ಯೋಜನೆಗಳನ್ನಷ್ಟೇ ಬಡತನ ನಿರ್ಮೂಲನೆಗಾಗಿ ಮೀಸಲಿಟ್ಟಿದ್ದರೂ, ಭಾರತದ ಪರಿಸ್ಥಿತಿ ಬೇರಯೇ ಆಗಿರುತ್ತಿತ್ತು.
ಸಾರ್ವಜನಿಕ ನೀತಿಗಳೆಂದರೆ, ಸಂವಿಧಾನದ ನಿಬಂಧನೆಗಳ ವಿರುದ್ಧವಿರದ, ಸಾರ್ವಜನಿಕರಿಗೆ ಒಪ್ಪಿಗೆಯಾಗುವ ಸರಕಾರದ ನೀತಿಗಳು ಎಂದು ವ್ಯಾಖ್ಯಾನಿಸಬಹುದು.
ಸಾರ್ವಜನಿಕ ನೀತಿ ಎಂದರೆ, ಕಾನೂನು ಮತ್ತು ಸಾಂಸ್ಥಿಕ ಪದ್ಧತಿಗಳೊಂದಿಗೆ ಅನುಗುಣವಾಗಿರುವಂತೆ, ಎದುರಿಗಿರುವ ಸಮಸ್ಯೆ/ವಿಷಯಗಳನ್ನು ನಿವಾರಿಸಲು ಸರಕಾರದ ಆಡಳಿತದ ಕಾರ್ಯಾಂಗಗಳು ತೆಗೆದುಕೊಳ್ಳುವ ಕ್ರಮಗಳಿಗೆ ಇರಬೇಕಾದ ತತ್ವಾಧಾರಿತ ಮಾರ್ಗದರ್ಶಿ ಎನ್ನಬಹುದು.
ಇನ್ನೂ ಕೆಲವು ವಿದ್ವಾಂಸರು ಸಾರ್ವಜನಿಕ ನೀತಿ ಎಂದರೆ,, a system of courses of actions, regulatory measures, laws and funding priorities, concerning a given topic promulgated by government entity or it’s representatives’ . ಸರಕಾರ ಅಥವಾ ಅದರ ಪ್ರತಿನಿಧಿಗಳಿಂದ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಅನುಸರಿಸುವ ಕ್ರಮಗಳು, ನಿಯಂತ್ರಕ ಕ್ರಮಗಳು ಹಾಗೂ ಬಂಡವಾಳ ಒದಗಿಸುವ ವ್ಯವಸ್ಥೆ. ಸಂವಿಧಾನದಲ್ಲಿ, ಶಾಸನಬದ್ಧ ಕ್ರಮಗಳಲ್ಲಿ ಹಾಗೂ ನ್ಯಾಯಾಂಗದಲ್ಲಿ ಸಾರ್ವಜನಿಕ ನೀತಿಗಳು ಸಾಮಾನ್ಯವಾಗಿ ಸಾಕಾರಗೊಳ್ಳುತ್ತವೆ.
ನಮ್ಮೆದುರಿಗೆ ಈಗ ಇನ್ನೊಂದು ಸಮಸ್ಯೆಯಿದೆ, ಲೋಕಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿಯ ಕಾರ್ಯಕಲಾಪಗಳು ನಾಚಿಕೆ ಹುಟ್ಟಿಸುವಂತಿವೆ. ವಿರೋಧ ಪಕ್ಷಗಳು ನಡೆದುಕೊಳ್ಳುವ ರೀತಿ ಅಸಹ್ಯವಾಗಿದೆ. ತಮ್ಮನ್ನು ಜನರ ಸೇವೆಗಾಗಿ ಆಯ್ಕೆ ಮಾಡಲಾಗಿದೆ ಎನ್ನುವುದು ಅವರುಗಳು ಮರೆತಂತಿದೆ. ಸಭೆಯಲ್ಲಿ ಅವರು ಗೊಂದಲ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲು ಇವರುಗಳು ಅವಕಾಶವೇ ನೀಡುತ್ತಿಲ್ಲ. ಅವರೆದುರಿಗಿರಿಸಿದ ಬಿಲ್‍ಗಳನ್ನು ಯಾವುದೇ ಚರ್ಚೆಯಿಲ್ಲದೇ ಪಾಸ್ ಮಾಡುತ್ತಿದ್ದಾರೆ. ವಿಧೇಯಕವನ್ನು ಅಂಗೀಕರಿಸುವ ಸಮಯದಲ್ಲಿ, ಸದನದಿಂದ ಹೊರನಡೆಯುತ್ತಾರೆ ಹಾಗೂ ಆಗ ಆಡಳಿತ ಪಕ್ಷದ ಸದಸ್ಯರು ವಿಧೇಯಕದ ಪರವಾಗಿ ತಮ್ಮ ಧ್ವನಿಯೆತ್ತುತ್ತಾರೆ ಆಗ ಸದನದ ಸ್ಪೀಕರ್ ವಿಧಾಯಕ ಅಂಗೀಕರಿಸಲಾಗಿದೆ ಎಂದು ಘೋಷಿಸುತ್ತಾರೆ. ಕಳೆದ 10-15 ವರ್ಷದಿಂದ ಈ ಪ್ರಹಸನ ನಡೆಯುತ್ತಲೇ ಇದೆ. ಹಿರಿಯ ಸಭಾಪತಿಗಳಾದ ಸೋಮನಾಥ್ ಚಟರ್ಜಿಗೆ ಕೂಡ ಎಮ್‍ಪಿಗಳ ಮಾಬ್ ಮನಸ್ಥಿತಿಯನ್ನು ಹದ್ದುಬಸ್ತಿನಲ್ಲಿಡಲು ಆಗಲಿಲ್ಲ. ಇಂತಹ ಅವ್ಯವಸ್ಥೆಗಳಲ್ಲಿ ತೊಡಗಿದ್ದಾಗಲೇ, ತಮ್ಮ ಸಂಬಳ ಮತ್ತು ಸವಲತ್ತುಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಏಳು ಸಲ ಏರಿಸಿಕೊಂಡರು. ಅದೂ ಯಾವುದೇ ಚರ್ಚೆ, ವಿರೋಧವಿಲ್ಲದೇ.
1935 ರಲ್ಲಿ ಗಾಂಧೀಜಿಯವರು ಸ್ವದೇಶಿ ಆಂದೋಲನ ಶುರುಮಾಡಿದಾಗ ಭಾರತದಲ್ಲಿ ಬರೀ ಒಂದು ವಿದೇಶಿ ಕಂಪನಿ ಇತ್ತು; ಈಸ್ಟ್ ಇಂಡಿಯಾ ಕಂಪನಿ. ಅವರು ಹಡಗುಗಳಲ್ಲಿ ತುಂಬಿಸಿ ಹತ್ತಿಯನ್ನು ಇಂಗ್ಲೆಂಡಿಗೆ ಒಯ್ದು, ಭಾರತೀಯರಿಗೆ ಮಾರಲು ಹತ್ತಿಯ ಬಟ್ಟೆಯನ್ನು ಮರಳಿ ತರುತ್ತಿದ್ದರು. ಒಂದು ವೇಳೆ ಬ್ರಿಟಿಷರಿಗೆ ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಮಾರಲು ಅವಕಾಶ ನೀಡಿದಲ್ಲಿ, ಅವರು ತಮ್ಮ ಯಂತ್ರಗಳೊಂದಿಗೆ ಇಲ್ಲಿಗೆ ಬಂದು ಕಾರ್ಖಾನೆಗಳನ್ನು ಪ್ರಾರಂಭಿಸುವ ದಿನಗಳು ದೂರವಿಲ್ಲ ಎಂದು ಗಾಂಧೀಜಿ ಭವಿಷ್ಯ ನುಡಿದಿದ್ದರು. ಹಾಗಾಗಿ ಅವರ ವಸ್ತುಗಳಿಗೆ ಇಂದೇ ಬಹಿಷ್ಕಾರ ಹಾಕಬೇಕು ಎಂದರು. ಹೊರದೇಶದಿಂದ ಭಾರತಕ್ಕೆ ಬರುವ ವಸ್ತುಗಳನ್ನು ಸುಟ್ಟುಹಾಕುವ ಅತ್ಯಂತ ಯಶಸ್ವೀ ಚಳವಳಿಯನ್ನು ಗಾಂಧೀಜಿ ಪ್ರಾರಂಭಿಸಿದರು. ಈ ಚಳವಳಿ ಕಾಳ್ಗಿಚ್ಚಿನಂತೆ ಭಾರತದೆಲ್ಲೆಡೆ ಹಬ್ಬಿತು. ಒಂದೇ ಒಂದು ವಿದೇಶಿ ಕಂಪನಿ ಕೂಡ ಭಾರತಕ್ಕೆ ಬಂದು, ಇಲ್ಲಿಯ ಜನರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಗಾಂಧೀಜಿ ಹೇಳಿದ್ದರು.
ಯಾವುದೇ ಅನುಮಾನವಿಲ್ಲದೆ ವೇಗವಾಗಿ ಆರ್ಥಿಕ ಬೆಳವಣಿಗೆ ಆಗುತ್ತಿದೆ ಆದರೆ ಅದರ ಜೊತೆಜೊತೆಗೆ ಬಡವರು ಮತ್ತು ಶ್ರೀಮಂತರ ಅಂತರವೂ ಸಹ ಬೆಳೆಯುತ್ತಲೇ ಇದೆ. ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಇಂತಹ ಅನಾರೋಗ್ಯಕರ ಬೆಳವಣಿಗೆ ಆಗುತ್ತಿರುವ ಈ ಕಾಲಘಟ್ಟದಲ್ಲಿ ವಿಶೇಷವಾಗಿ ಮೋದಿ ಸರ್ಕಾರವು ಕೋಟ್ಯಾಧಿಪತಿಗಳ ಪೋಷಣೆ ಮಾಡುತ್ತಿದ್ದಾರೆ ಇದು ಸಾಮಾನ್ಯ ಜನರ ಗಂಡಾಂತರಕ್ಕೆ ಕಾರಣವಾಗಬಹುದೇ?
ಹಣಬಲ: ನಿಯಂತ್ರಿಸುವುದು ಹೇಗೆ?
ಹಣಬಲ- ಒಂದು ಜಾಗತಿಕ ವಿದ್ಯಮಾನ. ಹಣವು ಒಂದು ನಿರ್ಜೀವ ವಸ್ತುವಾಗಿದೆ. ಅದಕ್ಕೆ ನಾವು ಜೀವ ಮತ್ತು ಚಲನೆಯನ್ನು ನೀಡುತ್ತೇವೆ. ಹಣವನ್ನು ಜನರು ಮತ್ತು ಸರ್ಕಾರಗಳೂ ನಿಯಂತ್ರಿಸುವಂತಿರಬೇಕಿತ್ತು. ಆದರೆ ಇಂದು ಹಣ ಮತ್ತು ಹಣವಂತರು ಜನರನ್ನು ಹಾಗೂ ಸಮುದಾಯಗಳನ್ನು ನಿಯಂತ್ರಿಸುತ್ತಿದೆ. ಅಷ್ಟೇ ಅಲ್ಲದೆ ಮಂತ್ರಿಗಳನ್ನು, ಸರ್ಕಾರದ ಬೇರೆ ಬೇರೆ ಪ್ರತಿನಿಧಿಗಳನ್ನು ನಿಭಾಯಿಸುತ್ತಿದೆ. ನಾಯಿ ಬಾಲವನ್ನು ಅಲುಗಾಡಿಸುವ ಬದಲಿಗೆ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿರುವಂತಿದೆ.
ಹಣವು ವ್ಯಕ್ತಿಗಳನ್ನು ಮತ್ತು ಸರ್ಕಾರವನ್ನು ಕೊಂಡುಕೊಳ್ಳಬಹುದಾಗಿದೆ. ನಾವುಗಳು ಹಣ ಮತ್ತು ಹಣವಂತ ವರ್ಗಕ್ಕೆ ಗುಲಾಮರಾಗಿದ್ದೇವೆ. ಇದರಿಂದ ಹೇಗೆ ಹೊರಬರಬೇಕು ಅನ್ನುವುದೇ ಇಡೀ ಜಗತ್ತಿಗೆ ದೊಡ್ಡ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ನಾನು ಕಪ್ಪು ಹಣದ ಉತ್ಪತ್ತಿಯ ಬಗ್ಗೆ ಒಂದು ಉದಾಹರಣೆ ಕೊಡುತ್ತೇನೆ. ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿವೆ ಎಂಬುದು ನಿಮಗೆ ಗೊತ್ತಿದೆ; ಕೆಲವು ಗುಂಡಿಗಳು ಚಿಕ್ಕವು, ಕೆಲವು ಆಳವಾದವು, ಭಯಂಕರವಾದವು. ಮಳೆ ಬಂದಾಗ ಈ ಗುಂಡಿಗಳೆಲ್ಲ ನೀರಿನಿಂದ ತುಂಬಿಹೋಗುತ್ತವೆ. ಕೆಲವು ದಿನಗಳ ನಂತರ ಈ ನೀರು ಕಲುಷಿತಗೊಳ್ಳುತ್ತದೆ, ಅದರಲ್ಲಿ ರೋಗಾಣುಗಳು ಸೇರಿಕೊಳ್ಳುತ್ತವೆ ಮತ್ತು ಅದರಿಂದ ಇಡೀ ಬೆಂಗಳೂರಿಗೆ ಕಾಯಿಲೆ ಹರಡುತ್ತದೆ. ಕಪ್ಪು ಹಣದ ವಿಚಾರವೂ ಹೀಗೆಯೇ. ಯಾವಾಗ ಹಣವು ಹರಿವಿನಲ್ಲಿಲ್ಲದೆ ನಿಂತಲ್ಲೇ ನಿಲ್ಲುತ್ತದೋ ಆಗ ಅದು ಕಪ್ಪು ಹಣವಾಗುತ್ತದೆ. ಹಣ ಇರುವುದೇ ಹರಿಯುವುದಕ್ಕಾಗಿ. ಅದು ಕೈಯಿಂದ ಕೈಗೆ ನಿರಂತರವಾಗಿ ಹರಿದಾಡುತ್ತಲೇ ಇರಬೇಕು. ಅದಕ್ಕಾಗಿಯೇ ಹಣವನ್ನು ಕರೆನ್ಸಿ ಎಂದು ಕರೆದಿರುವುದು. ಹಣವನ್ನು ಈ ರೀತಿ ಕರೆಂಟಿನಂತೆ ಹರಿದಾಡುವ ಹಾಗೆ ಮಾಡುವುದು ಹೇಗೆ? ಸಾರ್ವಜನಿಕ ನೀತಿ ನಿರೂಪಣೆಯ ಕೇಂದ್ರಗಳು ಈ ಸಂಕೀರ್ಣ ವಿಚಾರದ ಬಗ್ಗೆ ಗಂಭೀರವಾದ ಚಿಂತನೆ ನಡೆಸಿ, ಸೂಕ್ತ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕು. ಇದು ಸಾಧ್ಯವಾದಾಗಲೇ ಹಣವನ್ನು ನಿಯಂತ್ರಣಕ್ಕೆ ತರಬಹುದು ಮತ್ತು ನಾವು ಅದನ್ನು ಬೇಕಾದಂತೆ ಆಡಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...