Homeಮುಖಪುಟಕಮ್ಯುನಿಸ್ಟ್ ಪಕ್ಷಗಳ ವಿಲೀನ ಅಗತ್ಯ. ಆದರೆ, ಅವಸರದ ಹೆರಿಗೆ ಆಗಬಾರದು

ಕಮ್ಯುನಿಸ್ಟ್ ಪಕ್ಷಗಳ ವಿಲೀನ ಅಗತ್ಯ. ಆದರೆ, ಅವಸರದ ಹೆರಿಗೆ ಆಗಬಾರದು

- Advertisement -
- Advertisement -

| ಡಾ. ಬಿ.ಆರ್.ಮಂಜುನಾಥ್ |
(ಲೇಖಕರು, ಸುದೀರ್ಘ ಕಾಲ ಎಡಪಕ್ಷದ ಮುಂಚೂಣಿ ಸ್ಥಾನದಲ್ಲಿದ್ದವರು)

ಮತ್ತೊಮ್ಮೆ ಕಮ್ಯುನಿಸ್ಟ್ ಪಕ್ಷಗಳ ವಿಲೀನದ ಪ್ರಶ್ನೆ ಗಾಳಿಯಲ್ಲಿದೆ. ಸಿಪಿಐ ಪಕ್ಷವು ಇದನ್ನು ಮೂವತ್ತು ವರ್ಷಗಳಿಂದಲೂ ಪ್ರಸ್ತಾಪಿಸುತ್ತಲೇ ಬಂದಿದೆ. ಆದಕ್ಕೆ ಇನ್ನೊಂದು ದೊಡ್ಡ ಪಕ್ಷವಾದ ಸಿಪಿಐ ಎಮ್ ಸ್ಪಂದಿಸಿರಲಿಲ್ಲ. 2015ರಲ್ಲಿ ಆ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಂ ಯಚೂರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ವಿಲೀನದ ಪ್ರಕ್ರಿಯೆಯೇನೂ ಚುರುಕಾಗಿರಲಿಲ್ಲ. ಈ ಬಾರಿ ಚುನಾವಣೆ ಮುಗಿದ ಮೇಲೆ ಸಿಪಿಐ ಮಗದೊಮ್ಮೆ ಪ್ರಸ್ತಾಪಿಸಿದೆ. ಹಾಗಾಗಿ ವಿಷಯ ಮುನ್ನೆಲೆಗೆ ಬಂದಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಡ ಪಕ್ಷಗಳು ವಿಪರೀತ ಪೆಟ್ಟು ತಿಂದಿವೆ. ಅವುಗಳ ಮೂಲ ನೆಲೆಗಳೇ ಧ್ವಂಸವಾಗಿವೆ. ಈ ಬೆಳವಣಿಗೆಯು ಕಾರ್ಯಕರ್ತರಲ್ಲೂ, ಪಕ್ಷದ ಬೆಂಬಲಿಗರಲ್ಲೂ ತೀವ್ರವಾದ ನಿರಾಶೆ, ನೋವುಗಳನ್ನು ಉಂಟು ಮಾಡುವಂಥದ್ದು. ಈ ಹಿನ್ನೆಲೆಯಲ್ಲಿ ಎಲ್ಲರಲ್ಲೂ ಒಂದು ಹೊಸ ಉತ್ಸಾಹ, ಆಶಾವಾದವನ್ನು ಸೃಷ್ಟಿಸಲು ತೆಗೆದುಕೊಳ್ಳಬಹುದಾದ ಅನೇಕ ಕ್ರಮಗಳಲ್ಲಿ ವಿವಿಧ ಪಕ್ಷಗಳನ್ನು ಒಂದುಗೂಡಿಸುವುದೂ ಒಂದು ಎಂಬ ಭಾವನೆ ಮೂಡಿದೆ.

ಸಿಪಿಐ ಪಕ್ಷವು ಅನೇಕ ಬಾರಿ ವಿಲೀನಕ್ಕೆ ಅಡ್ಡಿಯಾಗುವಂಥ ಯಾವ ಸೈದ್ಧಾಂತಿಕ ಪ್ರಶ್ನೆಗಳೂ ಉಳಿದಿಲ್ಲ ಎಂದು ಸಾರುತ್ತಾ ಬಂದಿದೆ. ಈ ಮಾತು ಈಗ ಅನೇಕರಿಗೆ ಒಪ್ಪಿಗೆಯಾಗಬಹುದು. ಸೋವಿಯತ್ ಕಮ್ಯುನಿಸ್ಟ್ ಪಕ್ಷದ ಇಪ್ಪತ್ತನೆಯ ಮಹಾಧಿವೇಶನದ ನಂತರ ಉದ್ಭವಿಸಿದ್ದ ಪರಿಷ್ಕರಣವಾದಿ ತೀರ್ಮಾನಗಳ ಕುರಿತಾದ ಚರ್ಚೆ ಈಗ ಹಿಂದಕ್ಕೆ ಸರಿದಿದೆ. ಇನ್ನೊಂದು ಕಡೆ ಚೀನಾ ಕಮ್ಯುನಿಸ್ಟ್ ಪಕ್ಷ ಸಂಪೂರ್ಣವಾಗಿ ಮಾರುಕಟ್ಟೆ ಆರ್ಥಿಕತೆಗೆ ಒಲಿದು, ತನ್ನ ಸದಸ್ಯತ್ವವನ್ನು ಬಂಡವಾಳಗಾರರಿಗೂ ತೆರೆದನಂತರ ಆ ಪಕ್ಷದ ನಿಲುವಿನೊಂದಿಗೆ ಚರ್ಚೆಗಿಳಿಯುವ ಉತ್ಸಾಹವೂ ಯಾವ ಕಮ್ಯುನಿಸ್ಟರಲ್ಲೂ ಉಳಿದಿರಲಿಕ್ಕಿಲ್ಲ!

ಇನ್ನು ದೇಶದ ಎಡ ವಲಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹೇಗೆ ಗ್ರಹಿಸಬೇಕು ಎಂಬುದನ್ನು ಕುರಿತಂತೆ ವಿಭಿನ್ನ ಅಭಿಪ್ರಾಯಗಳಿವೆ. ಕೇರಳದಲ್ಲಿ ಕಾಂಗ್ರೆಸ್‍ಅನ್ನೇ ಮುಖ್ಯ ಪ್ರತಿಸ್ಪರ್ಧಿಯಾಗಿ ಎದುರಿಸಬೇಕಾದ ಅನಿವಾರ್ಯತೆ ಇರುವುದು ಆ ಪಕ್ಷದೊಂದಿಗಿನ ಮೈತ್ರಿಗೆ ತೊಡಕಾಗುವ ಅಂಶ. ಕಾಂಗ್ರೆಸ್ ಜೊತೆ ಸೇರಿದರೆ ಮುಂದೆ ಅಲ್ಲಿ ಬಿಜೆಪಿ ಬಲವಾಗಬಹುದು ಎಂಬ ಆತಂಕ ಕಾಡುತ್ತದೆ. ಬಂಗಾಳದಲ್ಲಿ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಎಡ ಪಕ್ಷಗಳು ಬದುಕುಳಿಯುವುದೇ ಇಂದು ದೊಡ್ಡ ಸವಾಲು.

ಅರವತ್ತು- ಎಪ್ಪತ್ತರ ದಶಕದಲ್ಲಿ ಎಡಪಕ್ಷಗಳ ಮಧ್ಯದ ಚರ್ಚೆ, ಪಾಲೆಮಿಕ್ಸ್ ಅನವಶ್ಯಕವಾಗಿ ತಾರಕಕ್ಕೆ ಹೋಗುತ್ತಿತ್ತು. ಆಗ “ನೀನು ಟ್ರಾಟ್ಸ್ಕಿ, ನೀನು ಬುಖಾರಿನ್” ಎಂದು, “ನೀನು ಲಿನ್ ಪಿಯಾವೊನಂತಹ ಎಡ ದುಸ್ಸಾಹಸವಾದಿ”, ನೀನು ಲಿಯು ಶಾವೊ ಕಿ ಯಂತಹ ಬಲ ಪರಿಷ್ಕರಣವಾದಿ” ಎಂದು ಬಯ್ಯುವುದು, ಅದನ್ನು ನಂಬುವುದು ಸಾಮಾನ್ಯವಾಗಿತ್ತು! ಈಗ ಆ ಚಾಳಿ ಕೆಲವೊಂದು ತೀವ್ರಪಂಥೀಯವಾದಿಗಳಾದ ಚಿಕ್ಕ ಪುಟ್ಟ ಪಕ್ಷಗಳಲ್ಲಿ ಉಳಿದಿದೆ. ಈ ಪಕ್ಷಗಳು ನಮ್ಮ ಪಕ್ಷ ಮಾತ್ರ ಭಾರತದ ಕಾರ್ಮಿಕ ವರ್ಗದ ಪಕ್ಷ, ಉಳಿದವು ಪೆಟಿ ಬೂಶ್ರ್ವಾ ಪಕ್ಷಗಳು ಎಂಬ ನಿಲುವನ್ನು ತಾಳುತ್ತವೆ. ಅದು ಅವುಗಳ ಅಸ್ತಿತ್ವದ ಕಾರಣ ಮಾತ್ರವಲ್ಲ, ಅವರವರ ಪ್ರಾಮಾಣಿಕ ನಂಬುಗೆ ಸಹ. ಇನ್ನು ಸಶಸ್ತ್ರ ಹೋರಾಟದಲ್ಲಿರುವ ಸಂಘಟನೆಗಳು ಸಹ ಹೀಗೇ ಭಾವಿಸುತ್ತವೆ. ಅಲ್ಲದೆ ಅವರ ಸಂಘಟನಾತ್ಮಕ ವಿಧಾನಗಳೂ ಯಾರೊಡನೆಯೂ ಹೊಂದಿಕೆಯಾಗದಿರುವುದರಿಂದ ಅವರು ಚರ್ಚೆಯ ಪರಿಧಿಯಿಂದ ಹೊರಗೇ ಉಳಿಯುತ್ತಾರೆ.

ಹೀಗಾಗಿ ವಿವಿಧ ಕಮ್ಯುನಿಸ್ಟ್ ಪಕ್ಷಗಳ ವಿಲೀನ ಎಂಬುದು ಅಂತಿಮ ಲೆಕ್ಕಾಚಾರದಲ್ಲಿ ಸಿಪಿಐ ಮತ್ತು ಸಿಪಿಎಮ್ ಪಕ್ಷಗಳ ವಿಲೀನದ ಪ್ರಶ್ನೆಯಾಗಿ ಉಳಿಯುತ್ತದೆ. ಆದರೆ ಅದೂ ಸುಲಭವಲ್ಲ. ದಶಕಗಳಿಂದ ಬೆಳೆದು ಬಂದಿರುವ ನಿರಾಶೆ, ಅಪನಂಬುಗೆ, ತಳಮಟ್ಟದಲ್ಲಿ -ವಿಶೇಷವಾಗಿ ಯೂನಿಯನ್‍ಗಳಲ್ಲಿ – ತಲೆದೋರುವ ನಾಯಕತ್ವದ ಪ್ರಶ್ನೆ ಇವೆಲ್ಲ ಮೇಲೆ ಒಗ್ಗಟ್ಟು ಬಂದೊಡನೆ ಸ್ವಯಂಚಾಲಿತವಾಗಿ ಪರಿಹಾರ ಕಂಡುಕೊಳ್ಳುವ ಸಮಸ್ಯೆಗಳಲ್ಲ. ಇದಲ್ಲದೆ ದೃಷ್ಟಿಕೋನಗಳಲ್ಲೂ, ಕಾರ್ಯಶೈಲಿಯಲ್ಲೂ ಭಿನ್ನತೆಗಳಿರುತ್ತವೆ. ಒಬ್ಬರಿಗೆ ಇನ್ನೊಬ್ಬರ ನಿಲುವು ಗಡುಸು ಎನಿಸಿದರೆ, ಇನ್ನೊಬ್ಬರಿಗೆ ಮೊದಲಿನವರು ಸಡಿಲ ಎನಿಸಬಹುದು! “ಆಶೆಗಳೇ ಸವಾರಿಗೆ ಅಶ್ವಗಳಾಗುವುದಿಲ್ಲ”!!

ಹಾಗಿದ್ದರೆ ಕಾರ್ಯಸಾಧುವಾದ ಹೆಜ್ಜೆ ಯಾವುದು? ಎರಡೂ ಪಕ್ಷಗಳೂ ಎಲ್ಲ ಕಾರ್ಯಕ್ರಮ, ತೀರ್ಮಾನ ನೀತಿ ನಿರೂಪಣೆಗಳನ್ನು ಒಟ್ಟಾಗಿ ತೆಗೆದುಕೊಳ್ಳುವ ನಿರ್ಧಾರ ಮಾಡಬಹುದು. ಅದು ಗಟ್ಟಿಯಾಗುತ್ತಿದ್ದಂತೆ ಮುಂದೆ ವಿಲೀನಕ್ಕೆ ಭೂಮಿಕೆ ಸಿದ್ಧವಾಗುತ್ತದೆ. ಅದು ಅನೇಕ ವರ್ಷಗಳ ಪ್ರಕ್ರಿಯೆಯಾಗಬಹುದು. ಆದರೆ ಸಂಬಂಧಪಟ್ಟ ಪಕ್ಷಗಳ ದೃಷ್ಟಿಯಿಂದ ಅದು ಅತ್ಯಂತ ಮಹತ್ವದ ಹೆಜ್ಜೆ ಆಗುವುದರಲ್ಲಿ ಸಂದೇಹವಿಲ್ಲ.
ಅದೇನೇ ಇರಲಿ ಪ್ರತಿಗಾಮಿ ಪಕ್ಷಗಳು ವಿಜೃಂಭಿಸುತ್ತಿರುವ ಇಂದಿನ ಸಂದರ್ಭದಲ್ಲಿ ಎಡ ಪಕ್ಷಗಳು ಪರಸ್ಪರ ಹತ್ತಿರವಾಗಬೇಕಾದದ್ದು ಎಲ್ಲರಿಗೂ ಜೀವನ್ಮರಣದ ಪ್ರಶ್ನೆಯೇ. ಶೋಷಿತ ಸಮುದಾಯಗಳು ಇದಕ್ಕಾಗಿ ಹಂಬಲಿಸುತ್ತಾರೆ ಎಂಬುದನ್ನು ಮರೆಯಬಾರದು.

ಇದಕ್ಕಾಗಿ ಅನೇಕ ಸಣ್ಣ ಪುಟ್ಟ ಹೆಜ್ಜೆಗಳನ್ನು ಎಲ್ಲರೂ ತೆಗೆದುಕೊಳ್ಳಬೇಕು. ಏನೇ ಭಿನ್ನಾಭಿಪ್ರಾಯಗಳಿರಲಿ ಅದನ್ನು ಸೂಕ್ತವಾದ ವೇದಿಕೆಗಳಲ್ಲಿ ಬಗೆಹರಿಸಿಕೊಳ್ಳುವುದು, ಟೀಕೆ ಅನಗತ್ಯವಾಗಿ ಕಟುವಾಗದಂತೆ ಎಚ್ಚರವಹಿಸುವುದು ಅಗತ್ಯ. ಒಬ್ಬರು ಇನ್ನೊಬ್ಬರ ತ್ಯಾಗ- ಬಲಿದಾನಗಳನ್ನು ಗೌರವಿಸುವುದು, ಪ್ರಯತ್ನಗಳನ್ನು ಮೆಚ್ವಿಕೊಳ್ಳುವುದು, ತಾತ್ವಿಕ ಸಹನೆಯನ್ನು ಹೊಂದಿರುವುದೂ ಸಹ ಅತ್ಯಗತ್ಯ. ಸ್ನೇಹ ವಿಶ್ವಾಸಗಳನ್ನು ಬೆಳೆಸಿಕೊಳ್ಳುತ್ತಾ, ಪರಸ್ಪರ ವಿನಯದಿಂದ ಕಲಿಯುತ್ತಾ ಮುಂದೆ ಸಾಗಬೇಕು. ಇದರ ಅರ್ಥ ಸೈದ್ಧಾಂತಿಕವಾಗಿ ರಾಜಿಯಾಗಬೇಕು ಎಂದಲ್ಲ. ಯಾವ ಭಿನ್ನಾಭಿಪ್ರಾಯವನ್ನು ಎಷ್ಡು ದೂರ ಒಯ್ಯಬೇಕು, ಎಲ್ಲಿಗೆ ನಿಲ್ಲಿಸಬೇಕು ಎಂಬ ಯುಕ್ತಾಯುಕ್ತ ಪರಿಜ್ಞಾನ ಅಷ್ಟೇ. ಸ್ಟಾಲಿನ್ ಅವರು ಲೆನಿನ್ ವ್ಯಕ್ತಿತ್ವವನ್ನು ಮೆಚ್ಚಿಕೊಳ್ಳುತ್ತಾ ಹೇಳಿದ ಮಾತು ಸ್ಮರಣಾರ್ಹ: “ತಾತ್ವಿಕತೆಯಲ್ಲಿ ನಿಷ್ಠೆ, ಅನುಷ್ಠಾನದಲ್ಲಿ ಬಾಗಿ ಬಳುಕುವ ಆಸ್ಥೆ”!

ಒಟ್ಟಿನಲ್ಲಿ ಕ್ರಾಂತಿಕಾರಿ ರಾಜಕೀಯದಲ್ಲಿ ಆದರ್ಶವನ್ನು ಧ್ರುವ ನಕ್ಷತ್ರದಂತೆ ಪರಿಭಾವಿಸುತ್ತಲೇ ದೈನಂದಿನ ಹೋರಾಟದಲ್ಲಿ ಸತತವಾಗಿ ಕಾರ್ಯಕ್ಷಮತೆಗೆ, ಸಾಧ್ಯಾಸಾಧ್ಯತೆಗೆ ಗಮನಕೊಡುತ್ತಾ ಮುನ್ನಡೆಯಬೇಕು. ಬೂಶ್ರ್ವಾ ಪಕ್ಷಗಳೊಂದಿಗೆ ಸಹ ಹೋರಾಟಗಳಲ್ಲಿ ಹೆಜ್ಜೆ ಹಾಕಬೇಕಾಗಬಹುದು. ಗಯಟೆ ಮಹಾ ಕವಿಯ ಈ ಸಾಲುಗಳು ಮಾಕ್ರ್ಸ್‍ಗೆ ತುಂಬಾ ಪ್ರಿಯವಾಗಿತ್ತು:
“ಒಣ ಸಿದ್ಧಾಂತ ಬರಡು ಗೆಳೆಯ! ಬದುಕು ಮಾತ್ರ ನಿತ್ಯ ಹರಿದ್ವರ್ಣ”.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...