Homeಅಂಕಣಗಳುಸ್ವಾತಂತ್ರ್ಯ ಸಿಗಲು ನೆಹರು ಕೊಡುಗೆಯೇ ಇಲ್ಲವೇ ಮೋದೀಜಿ?

ಸ್ವಾತಂತ್ರ್ಯ ಸಿಗಲು ನೆಹರು ಕೊಡುಗೆಯೇ ಇಲ್ಲವೇ ಮೋದೀಜಿ?

- Advertisement -
- Advertisement -

ಮಿಥ್ಯ: ಸ್ವಾತಂತ್ರಯ ಸಿಗಲು ನೆಹರೂ ಕೊಡುಗೆ ಏನಿಲ್ಲ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿದ್ದರು. ಬಿಜೆಪಿಯ ಐಟಿ ಸೆಲ್ ಕೂಡ ನೆಹರು ಕುರಿತು ಸಾಕಷ್ಟು ಫೇಕ್ ಸ್ಟೋರಿಗಳನ್ನು ಹರಡುತ್ತಲೇ ಬಂದಿದೆ.

ಸತ್ಯ: ಇವತ್ತು ಖರೀದಿಸಿದ ಮಾಧ್ಯಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು, ಜವಾಹರಲಾಲ್ ನೆಹರೂ ಕುರಿತು ಏನೆಲ್ಲ ಸುಳ್ಳುಗಳನ್ನು ಹಬ್ಬಿಸಲು ಯತ್ನಿಸುತ್ತಿದ್ದರೂ, ನೆಹರೂ ಕೊಡುಗೆ ಈ ದೇಶಕ್ಕೆ ಅಪಾರ ಎಂಬುದನ್ನು ಅವರಿಂದ ಮುಚ್ಚಿಡಲಾಗುತ್ತಿಲ್ಲ. 1964ರಲ್ಲಿ ನೆಹರೂ ಮಡಿದಾಗ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ‘ಆಧುನಿಕ ಭಾರತದ ನಿಮ್ರಾತೃ’ ಎಂದು ಬಣ್ಣಿಸುತ್ತದೆ. ‘ದಿ ಎಕನಾಮಿಸ್ಟ್’ ಪತ್ರಿಕೆಯು ‘ನೆಹರೂ ಇಲ್ಲದ ಜಗತ್ತು’ ಎಂಬ ಕವರ್ಸ್ಟೋರಿಯನ್ನು ಪ್ರಕಟಿಸುತ್ತದೆ. ಆ ಹೊತ್ತಿಗಾಗಲೇ ನೆಹರೂ ತೃತೀಯ ರಾಷ್ಟ್ರಗಳಲ್ಲಿ ಹೊಸ ಭರವಸೆ ಮೂಡಿಸಿದ್ದರು.

ಸಂಸತ್ತಿನಲ್ಲಿ ಇಂತಹ ನೆಹರೂ ಕುರಿತು ಮಾತನಾಡುವ ನಮ್ಮ ದಿ ಗ್ರೇಟ್ ಪ್ರಧಾನ ಮಂತ್ರಿಯವರು, ‘ಸ್ವಾಂತಂತ್ರ್ಯ ಹೋರಾಟಕ್ಕೆ ನೆಹರೂ ಕೊಡುಗೆ ಏನಿಲ್ಲ’ ಎಂದು ಮೂರ್ಖನಂತೆ ಮಾತಾಡುತ್ತಾರೆ. ಹಾಗಾದರೆ ಮೋದಿಯವರ ಆದರ್ಶಗಳಾದ ಹೆಡಗೆವಾರ್, ಸಾವರ್ಕರ್, ಗೋಳ್ವಾಲ್ಕರ್-ಈ ತರಿವಳಿಗಳ ಕೊಡುಗೆ ಏನು? ಇವರು ಪುಟ್ಟಾಪೂರಾ ಬ್ರಿಟಿಷರ ಚೇಲಾಗಳಂತೆ ವರ್ತಿಸಿದ್ದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಅದಿರಲಿ, ಇವರ ಕುರಿತು ಮೋದಿ ಸಾಹೇಬರೇಕೆ ಮಾತೇ ಆಡಲ್ಲ? ಈ ತ್ರಿವಳಿಗಳನ್ನು ಆರೆಸ್ಸೆಸ್ ಆರಾಧಿಸುತ್ತದೆ, ಮೋದಿಗೂ ಕೂಡ ಈ ಮೂವರು ಆದರ್ಶರೇ. ಬಟ್, ಬಾಹ್ಯವಾಗಿ ಮೋದಿ ಎಂದೂ ಇವರ ಪರ ಮಾತಾಡುತ್ತಿಲ್ಲ. ಮಾತಾಡುವ ಧಮ್ಮೂ ಇಲ್ಲ. ಯಾಕೆಂದರೆ ಈ ಮೂವರೂ ಮೋದಿಯಷ್ಟೇ ದೇಶದ್ರೋಹಿಗಳಾಗಿದ್ದರು!

ಹೀಗಾಗಿ ಐದು ವರ್ಷಗಳಲ್ಲಿ ನೀವೇನು ಮಾಡಿದಿರಾ ಎಂಬ ಪ್ರಶ್ನೆಗೆ ಉತ್ತರಿಸುವ ಯೋಗ್ಯತೆಯನ್ನೇ ಕಳೆದುಕೊಂಡಿರುವ ಪ್ರಧಾನಿ, ನೆಹರೂ ಈ ದೇಶಕ್ಕೆ ಏನು ಮಾಡಿದರು, ಕಾಂಗ್ರೆಸ್ ಈ ದೇಶಕ್ಕೆ ಏನು ಮಾಡಿತು ಎಂದು ವಿಷಯಾಂತರ ಮಾಡುತ್ತಿದ್ದಾರೆ. ನೆಹರು ವ್ಯಕ್ತಿತ್ವವನ್ನು ಮಸುಕಾಗಿಸುವ ಉದ್ದೇಶದಿಂದಲೇ ಹಲವಾರು ಮಿಥ್ಯಗಳನ್ನು, ಮತ್ತೆ ಕೆಲವು ತಪ್ಪು ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಪಾಲು ಏನಿಲ್ಲ ಎಂಬುದು ತೀರಾ ಬಾಲಿಶತನದ ಹೇಳಿಕೆಯಷ್ಟೇ. 1921ರಿಂದ 1945ರ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕಾರಣಕ್ಕೆ ನೆಹರು 9 ಸಲ ಜೈಲಿಗೆ ತಳ್ಳಲ್ಪಡುತ್ತಾರೆ. 12 ದಿನಗಳಿಂದ ಹಿಡಿದು, 1041ಗಳ ಅವಧಿಯ ಜೈಲು ಶಿಕ್ಷೆ ಅನುಭವಿಸಿದರು. ಒಟ್ಟು 3,259 ದಿನಗಳನ್ನು ನೆಹರು ಜೈಲಿನಲ್ಲಿ ಕಳೆದರು. ಅಂದರೆ ತಮ್ಮ ಜೀವನದ ಒಂಭತ್ತು ವರ್ಷಗಳಷ್ಟು ಅವಧಿಯನ್ನು ನೆಹರು ಜೈಲಿನಲ್ಲೇ ಕಳೆದರು. ಜೈಲು ಶಿಕ್ಷೆಯನ್ನು ನೆಹರು ತಮ್ಮ ಓದಿಗೆ ಬಳಸಿಕೊಂಡರು. ಸಾಕಷ್ಟು ವೈವಿಧ್ಯಮಯ ಪುಸ್ತಕಗಳನ್ನು ಓದುತ್ತ ನಿಜವಾದ ಭಾರತದ ರೂಪುರೇಷೆ ಹೇಗಿರಬೇಕೆಂಬುದನ್ನು ಅರಿಯುತ್ತ ಹೋದರು. ಫೆಬ್ರುವರಿ 1934 ಮತ್ತು ಸೆಪ್ಟೆಂಬರ್ 1935- ಈ ಅವಧಿಯಲ್ಲಿ ನೆಹರು 188 ಪುಸ್ತಕಗಳನ್ನು ಜೈಲಿನಲ್ಲಿ ಓದಿದ್ದರು.

ಆದರೆ ಸಂಘ ಪರಿವಾರದ ಕೇಂದ್ರಸ್ಥಾನದಲ್ಲಿರುವ ಮತ್ತು ಇಡೀ ಸಂಘ ಪರಿವಾರವನ್ನು ನಿರ್ದೇಶಿಸುವ, ನಿಯಂತ್ರಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮಾತ್ರ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದಿದ್ದಷ್ಟೇ ಅಲ್ಲ, ಅದು ಬ್ರಿಟಿಷರ ಪರವಾದ ನಿಲುವುಗಳನ್ನು ಹೊಂದಿತ್ತು. ಅದರ ನಾಯಕ ಕೇಶವ ಹೆಡಗೆವಾರ್ ಸ್ವಾತಂತ್ರ್ಯ ಚಳುವಳಿಯಿಂದ ದೂರ ಇರುವಂತೆ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದರು. ಹಿಂದೂತ್ವದ ಇನ್ನೊಬ್ಬ ನಾಯಕ ಸಾವರ್ಕರ್ ಆರಂಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ, ಅಂಡಮಾನ್ ಜೈಲು ಸೇರಿದ್ದು ನಿಜ. ಹಾಗೆಯೇ ಬ್ರಿಟಿಷರೊಂದಿಗೆ ರಾಜಿಯಾಗಿ ಶಿಕ್ಷೆಯಿಂದ ಮುಕ್ತಿ ಪಡೆದಿದ್ದೂ ನಿಜ.

ಸ್ವಾತಂತ್ರ್ಯ ಚಳುವಳಿಯಿಂದ ದೂರವೇ ಉಳಿದ ಸಂಘಟನೆಯಿಂದ ರೂಪುಗೊಂಡ ನರೇಂದ್ರ ಮೋದಿಯವರು, ಸುಮಾರು 9 ವರ್ಷಗಳಷ್ಟು ಕಾಲ ಜೈಲಿನಲ್ಲಿ ಕಳೆದ ನೆಹರುರ ಹೋರಾಟದ ಪಾತ್ರವನ್ನು ಕಡೆಗಣಿಸಿ ಮಾತಾಡುತ್ತಿರುವುದೇ ಹಾಸ್ಯಾಸ್ಪದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...