Homeಎಲೆಮರೆಅಲೆಮಾರಿ ಮೇಡಂ: ಶಾರದ

ಅಲೆಮಾರಿ ಮೇಡಂ: ಶಾರದ

- Advertisement -
- Advertisement -

ಬೀದರಿನ ವಾರ್ತಾಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜಿಲ್ಲಾಧಿಕಾರಿಗಳ ಕಚೇರಿ ಮುಂತಾದ ಇಲಾಖೆಗಳ ಅಧಿಕಾರಿಗಳ ಬಳಿ ಮತ್ತು ಬೀದರ್ ಜಿಲ್ಲೆಯ ಯಾವುದೇ ಬುಡಕಟ್ಟು ಅಲೆಮಾರಿ ಜನರ ಬಳಿ `ಅಲೆಮಾರಿ ಮೇಡಂ’ ಯಾರು ಎಂದು ಕೇಳಿದರೆ ಅವರುಗಳು ಶಾರದ ಅವರ ಬಗ್ಗೆ ಹೇಳುತ್ತಾರೆ. ಕೆಲವು ಅಧಿಕಾರಿಗಳು ಮುಖ ಗಂಟಿಕ್ಕಿ ಚೂರು ಸಿಡುಕಿನಿಂದಲೆ ಹೇಳಿದರೆ, ಅಲೆಮಾರಿ ಬುಡಕಟ್ಟಿನ ಜನರು ಮುಖ ಅರಳಿಸಿ `ಓಹ್ ನಮ್ ಮೇಡಂ ಸರ್, ಗೊತ್ತವ್ರು, ಅವರ ನಂಬರ್.. ನಮ್ಮ ಆಧಾರ ಕಾರ್ಡ್ ಮೇಲಿದೆ’ ಎಂದು ನಿಮಗೆ ಶಾರದ ಅವರ ಫೋನ್ ನಂಬರ್ ಕೊಡುತ್ತಾರೆ.

ಹೀಗೆ ಬೀದರ್ ಜಿಲ್ಲೆಯಾದ್ಯಂತ ಅಲೆಮಾರಿ ಮೇಡಂ ಎಂದೇ ಗುರುತಿಸಲ್ಪಡುವ ಶಾರದ ಒಬ್ಬ ಸಾಮಾನ್ಯ ಪದವೀಧರ ಗೃಹಿಣಿ. ಅರೆ ಶಾರದ ಅವರನ್ನು ಯಾಕೆ ಅಲೆಮಾರಿ ಮೇಡಂ ಎಂದು ಕರೆಯುತ್ತಾರೆ..? ಏಕೆಂದರೆ 2013 ರಿಂದಲೂ ಬುಡಕಟ್ಟು ಅಲೆಮಾರಿ ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಲು, ಅವರಿಗೊಂದು ಗುರುತು ಕೊಡಿಸಲು, ನೆಲೆ ಒದಗಿಸಲು, ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಯಾವುದೇ ಅಧಿಕಾರವಿಲ್ಲದೆ, ಲಾಭನಷ್ಟದ ಲೆಕ್ಕಾಚಾರಗಳಿಲ್ಲದೆ, ಉತ್ತಮ ಆರ್ಥಿಕ ಸ್ಥಿತಿಯೂ ಇಲ್ಲದೆ, ಮೇಲ್ಜಾತಿಯೂ ಅಲ್ಲದ ಪರಿಶಿಷ್ಟ ಜಾತಿಯ ಛಲವಾದಿ ಸಮುದಾಯಕ್ಕೆ ಸೇರಿದ, ಎಂ.ಎಸ್.ಡಬ್ಲು ಬಿಇಡಿ ಮಾಡಿದ ಒಬ್ಬ ಸಾಮಾನ್ಯ ಮಹಿಳೆಗೆ ಬುಡಕಟ್ಟು ಅಲೆಮಾರಿಗಳ ಒಳಿತಿಗಾಗಿ ದುಡಿವ ಮನಸ್ಸು ಹದಗೊಂಡದ್ದು ಹೇಗೆ ಎಂದು ನೋಡಿದರೆ, ಅದೊಂದು ಕುತೂಹಲಕರ ಸಂಗತಿ.

ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಬಾಗಲವಾಡ ಹಳ್ಳಿಯ ಶಾರದ ಮನೆಯ ಬಡತನದ ಕಾರಣ ಹೈಸ್ಕೂಲಿನಿಂದಲೂ ಮಾನವಿ, ರಾಯಚೂರಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲುಗಳಲ್ಲಿ ಓದುತ್ತಾರೆ. ಹೀಗೆ ಓದುವಾಗ ತಮ್ಮ ಹಾಸ್ಟೆಲುಗಳ ಹೊರವಲಯದಲ್ಲಿ ಆಗಾಗ ಅಲೆಮಾರಿಗಳು ಬಟ್ಟೆಯ ಟೆಂಟ್ ಹಾಕಿ ವಾಸಿಸುತ್ತಿದ್ದರು. ಹಿರಿಯರು ಚಿಕ್ಕಪುಟ್ಟ ವ್ಯಾಪಾರ, ಬೇಟೆ, ಭಿಕ್ಷೆ ಅಂತೆಲ್ಲಾ ನಗರ ಮತ್ತು ಕಾಡು ಪ್ರವೇಶಿಸಿದರೆ, ಇವರ ಮಕ್ಕಳು ಬಟ್ಟೆಯಿಲ್ಲದೆ ಸ್ನಾನವಿಲ್ಲದೆ ಕೆದರಿದ ಕೂದಲಿನಲ್ಲಿ ಟೆಂಟಿನ ಮುಂದೆ ಮಣ್ಣಲ್ಲಿ ಆಟವಾಡುತ್ತಿದ್ದರು. ಶಾರದ ಹಾಸ್ಟೆಲ್ ಕಿಟಕಿಗಳಿಂದ ಈ ಮಕ್ಕಳನ್ನು ನೋಡುತ್ತಿದ್ದಾಗ ಅರೆ ಇವರ್ಯಾಕೆ ಹೀಗೆ ? ಇವರಿಗೆ ನಮ್ಮಂತೆ ಮನೆಗಳೇಕಿಲ್ಲ? ಎನ್ನುವ ಪ್ರಶ್ನೆಯೊಂದು ಮಿಂಚಿ ಮರೆಯಾಗುತ್ತಿತ್ತು. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಆ ಸ್ಥಳದಿಂದ ಮಾಯವಾಗಿ ಎಷ್ಟೋ ದಿನಗಳ ಕಾಲ ಅವರು ಇತ್ತ ತಲೆ ಹಾಕುತ್ತಲೂ ಇರಲಿಲ್ಲ. ಒಮ್ಮೊಮ್ಮೆ ದಿಢೀರ್ ಟೆಂಟ್‍ಗಳು ಪ್ರತ್ಯಕ್ಷವಾಗುತ್ತಿದ್ದವು. ಈ ಕಣ್ಣೋಟದ ಅಲೆಮಾರಿಗಳ ಚಿತ್ರ ಶಾರದ ಅವರಲ್ಲಿ ಸುಪ್ತವಾಗಿತ್ತು.

ಬಿ.ಎ. ಎರಡನೆ ವರ್ಷ ಕಲಿಯುವಾಗಲೆ ಶಾರದ 2011 ರಲ್ಲಿ ಮದುವೆಯಾಗಿ ಬೀದರಿಗೆ ಬರುತ್ತಾರೆ. ಗಂಡ ಮತ್ತು ಮನೆಯವರ ಬೆಂಬಲದಿಂದ ಅರ್ಧಕ್ಕೆ ನಿಂತ ಓದನ್ನು ಮುಂದುವರಿಸುತ್ತಾರೆ. ಬಿ.ಎ., ಎಮ್.ಎಸ್.ಡಬ್ಲು, ಬಿಎಡ್ ಮಾಡುತ್ತಾರೆ. ಎಮ್.ಎಸ್.ಡಬ್ಲು ಮಾಡುವಾಗ ಸಮಾಜಸೇವೆಯ ಬಗ್ಗೆ ಗಮನ ಹರಿಯುತ್ತದೆ. ಹೈಸ್ಕೂಲಲ್ಲಿ ಕಂಡ ಅಲೆಮಾರಿಗಳ ಚಿತ್ರಗಳು ತರಗತಿಗಳಲ್ಲಿ ಮರುಕಳಿಸತೊಡಗುತ್ತವೆ. ಹೀಗೆ ಬಿಎಡ್ ಮುಗಿಸಿ ಬೀದರಿನ ಸೆಂಟ್ ಜೋಸೆಫ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುತ್ತಾರೆ. ಶಾಲೆಗೆ ಹೋಗಿ ಬಂದು ಮಾಡುವ ಮಾರ್ಗಮಧ್ಯದಲ್ಲಿ ಒಮ್ಮೆ ಅರ್ಧಮುಚ್ಚಿದ ಬಾವಿಯೊಂದರಲ್ಲಿ ಅಲೆಮಾರಿ ಮಗು ಆಯತಪ್ಪಿ ಬಿದ್ದು ಅಳುತ್ತಿರುತ್ತದೆ. ಇದನ್ನು ನೋಡಿ ಶಾರದ ಆ ಮಗುವನ್ನು ಮೇಲಕ್ಕೆತ್ತಿ ಅವರ ತಂದೆತಾಯಿಗೆ ತಲುಪಿಸುತ್ತಾರೆ. ಆಗ ಅಲೆಮಾರಿಗಳ ಪರಿಚಯವಾಗುತ್ತದೆ.

ಸೋಷಿಯಲ್ ವರ್ಕ್ ಎನ್ನುವ ಕೆಲಸದಲ್ಲಿ ಡಾನ್‍ಬಾಸ್ಕೋ ಸಂಸ್ಥೆಯಲ್ಲಿ ಕೆಲದಿನ ಕೆಲಸ ಮಾಡುತ್ತಾರೆ. ಆಗ ಮಗುವಿಗೆ ಹೆರಿಗೆಯಾದ ಕಾರಣ ಡಾನ್‍ಬಾಸ್ಕೋ ಸಂಸ್ಥೆಯ ಕೆಲಸವನ್ನು ಬಿಡುತ್ತಾರೆ. ತಾಯಿ, ಮಗುವಿನ ಜತೆ ಕಾಲ ಕಳೆಯುವಾಗ ತನ್ನ ಮನೆಗೆ ಹತ್ತಿರದಲ್ಲಿರುವ ಅಲೆಮಾರಿಗಳ ಜತೆ ಸಂಪರ್ಕ ಬೆಳೆಯುತ್ತದೆ. ಓದುಬರಹವಿಲ್ಲದ ಅವರ ಮಕ್ಕಳನ್ನು ನೋಡಿ, ನಿಮ್ಮ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದಾಗ ಅಲೆಮಾರಿಗಳು ಒಪ್ಪುವುದಿಲ್ಲ. ದಿನಾಲು ಅಲೆಮಾರಿಗಳ ಗುಡಿಸಲುಗಳ ಎದುರು ಅವರ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೂ ಅಲೆಮಾರಿಗಳು ಇವರನ್ನು ನಂಬುವುದಿಲ್ಲ. ನಾನಾಗೆ ಇವರ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದರೂ ಇವರು ನನ್ನನ್ನು ನಂಬುತ್ತಿಲ್ಲವಲ್ಲ ಎಂದು ಎಷ್ಟೋ ಬಾರಿ ಶಾರದ ಅಳುತ್ತಾ ಮನೆಗೆ ಮರಳಿದ್ದರು. ಇಷ್ಟಾಗಿಯೂ ಅಲೆಮಾರಿಗಳನ್ನು ಬಗೆಬಗೆಯ ರೀತಿಯಲ್ಲಿ ಆಪ್ತವಾಗಿ ಒಪ್ಪಿಸಲು ಪ್ರಯತ್ನಿಸಿದರು. ಒಂದೆರಡು ವರ್ಷದ ನಂತರ ನಿಧಾನಕ್ಕೆ ಅಲೆಮಾರಿಗಳಿಗೆ ಶಾರದ ಅವರಲ್ಲಿ ವಿಶ್ವಾಸ ಮೂಡುತ್ತದೆ.

`ನಮಗೆ ಮನಿಯಿಲ್ಲ ಮಠವಿಲ್ಲ ನೀವು ಬಂದ್ ಶಾಲಿ ಕಲಿಸ್ತೀನಿ ಅಂತೀರಿ, ನಾವು ಇವತ್ ಇಲ್ಲಿದ್ರೆ ನಾಳೆ ಅಲ್ಲಿರ್ತೀವಿ, ನಮ್ಮನ್ನ ಸರಕಾರದವರು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಓಡಿಸ್ತಾನ ಇರ್ತಾರೆ. ನಮಗೆ ಉಳಿಯೋಕೆ ಒಂದು ನೆಲೆ ಅಂತ ಇಲ್ದಿರೋವಾಗ ನಮ್ಮ ಮಕ್ಕಳು ಶಾಲಿ ಕಲಿತು ಏನ್ ಮಾಡ್ತಾವೆ’ ಎನ್ನುತ್ತಾರೆ. ಆಗ ಶಾರದಾಗೆ ಹೊಳೆದ ಸಂಗತಿಯೆಂದರೆ, ಇವರಿಗೆ ಸರಕಾರದಿಂದ ಒಂದು ಮನೆ ಕಟ್ಟಿಸಿಕೊಟ್ಟರೆ ಒಂದೆಡೆ ಉಳಿಯುತ್ತಾರೆ ಎಂದು ಅನ್ನಿಸುತ್ತದೆ. ಅದಕ್ಕಾಗಿ `ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ, ನಾನು ಹೇಗಾದರೂ ಮಾಡಿ ನಿಮಗೆ ಮನೆಗಳನ್ನು ಕೊಡಿಸ್ತೀನಿ’ ಎನ್ನುವ ಸುಳ್ಳು ಭರವಸೆ ಕೊಡುತ್ತಾರೆ. ಈ ಒಂದು ಭರವಸೆಯಿಂದ ಅಲೆಮಾರಿಗಳು ತಮ್ಮ ಮಕ್ಕಳನ್ನು ಶಾರದ ಬಳಿ ಅಕ್ಷರ ಕಲಿಯಲು ಕಳಿಸುತ್ತಾರೆ. ಆಗ ಶಾರದ ಅವರು ಅಲೆಮಾರಿಗಳ ಜಾಗವನ್ನೆ ಶಾಲೆಯ ಆವರಣವನ್ನಾಗಿಸಿಕೊಂಡು ಅವರಿಗೆ ಅಕ್ಷರ ಕಲಿಸತೊಡಗುತ್ತಾರೆ.

ಇದೇ ಹೊತ್ತಿಗೆ ಬೀದರ್ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯು ಬೀದರಿನಲ್ಲಿ ಅಲೆಮಾರಿಗಳಿಲ್ಲ ಎಂದು ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಸ್ವತಃ ಅಲೆಮಾರಿಗಳ ಜತೆ ಬದುಕುತ್ತಿದ್ದ ಶಾರದ ಅವರಿಗೆ ಈ ವರದಿ ಅಚ್ಚರಿ ಹುಟ್ಟಿಸಿ ಇಲಾಖೆಯ ಗಮನಕ್ಕೆ ತರುತ್ತಾರೆ. ಆಗ ಇಲಾಖೆಯು ಅಲೆಮಾರಿಗಳು ಇದ್ದರೆ ಅವರನ್ನು ಗುರುತಿಸಲು ಶಾರದಾ ಅವರಿಗೆ ಸಹಕಾರ ನೀಡುತ್ತದೆ. ಈ ನಡುವೆ ತಾನು ಅಕ್ಷರ ಕಲಿಸುವ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಆದರೆ ಆ ಮಕ್ಕಳಿಗೆ ಯಾವುದೇ ಗುರುತಿಲ್ಲ. ಮೊದಲನೆಯದಾಗಿ ಆಧಾರ ಕಾರ್ಡ್ ಮಾಡಿಸಬೇಕಾದ ಅನಿವಾರ್ಯ ಬರುತ್ತದೆ. ಮಕ್ಕಳಿಗೆ ಆಧಾರ್ ಮಾಡಿಸಲು ತಂದೆತಾಯಿಯರ ಆಧಾರ್ ಬೇಕು.

ಆದರೆ ಈ ಯಾವ ಕುಟುಂಬಗಳಿಗೂ ಆಧಾರ ಕಾರ್ಡ್ ಕೊಟ್ಟಿರಲಿಲ್ಲ. ಈಗ ಮತ್ತೊಂದು ಸಮಸ್ಯೆ ಶುರುವಾಯಿತು. ಮಕ್ಕಳ ತಂದೆತಾಯಿಯರಿಗೆ ಆಧಾರ್ ಕಾರ್ಡ್ ಮಾಡಿಸುವುದು. ಯಾವುದೇ ದಾಖಲೆಗಳಿಲ್ಲದ ಈ ಅಲೆಮಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದು, ಅಲೆದಲೆದು ಶಾರದ ಅವರೆ ಸ್ವತಃ ಎಲ್ಲರಿಗೂ ಸಾಕ್ಷಿಯಾಗಿದ್ದು ಆಧಾರ್ ಕಾರ್ಡ ಮಾಡಿಸುತ್ತಾರೆ. ಹೀಗೆ ನಿರಂತರವಾಗಿ ನಾಲ್ಕೈದು ವರ್ಷದಲ್ಲಿ ಅಲೆಮಾರಿ ಸಮುದಾಯದ 500ಕ್ಕೂ ಹೆಚ್ಚು ಜನರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಐಡಿ ಮಾಡಿಸಿದ್ದಾರೆ. ಇದೀಗ 63 ಅಲೆಮಾರಿ ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಅಲೆಮಾರಿಗಳ ಮನೆ ಕಟ್ಟಿಸಲಿಕ್ಕಾಗಿ ನಾಲ್ಕು ಎಕರೆ ಜಮೀನು ಮಂಜೂರಾಗಿದೆ. ಇದೀಗ ಅಲೆಮಾರಿಗಳ ಸ್ವಂತ ಉದ್ಯೋಗಕ್ಕಾಗಿ ಸಣ್ಣಮಟ್ಟದಲ್ಲಿ ಸಾಲಸೌಲಭ್ಯಗಳು ಸಿಗತೊಡಗಿವೆ. ಇದೆಲ್ಲವೂ ಸುಲಭವಾಗಿ ದಕ್ಕಿರುವುದಲ್ಲ ಶಾರದ ಅವರು ನಾಲ್ಕೈದು ವರ್ಷಗಳ ಕಾಲ ಸರಕಾರಿ ಇಲಾಖೆಗಳ ಜತೆ, ಅಧಿಕಾರಿಗಳ ಜತೆ ನಿರಂತರ ಜಗಳ, ಹಕ್ಕೊತ್ತಾಯ, ಚರ್ಚೆ ಸಂವಾದಗಳ ಮೂಲಕ ಇದನ್ನೆಲ್ಲಾ ಆಗುಮಾಡಿದ್ದಾರೆ.

ಈ ಎಲ್ಲಾ ಹೋರಾಟ ಹಕ್ಕೊತ್ತಾಯಗಳ ಜೊತೆಜೊತೆಗೆ ಇದೀಗ ಗುತ್ತಿಗೆ ಆಧಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಶಕ್ತಿ ಕೇಂದ್ರ ಯೋಜನೆಯ ಜಿಲ್ಲಾ ಮಹಿಳಾ ಕಲ್ಯಾಣಾಧಿಕಾರಿಯಾಗಿ ಇದೇ ಜನವರಿ 13, 2020 ರಿಂದ ಕೆಲಸಕ್ಕೆ ಸೇರಿದ್ದಾರೆ. `ನಮ್ ಮನೆಯವ್ರ ಬೆಂಬಲ ಇರದಿದ್ರ ಇದನ್ನೆಲ್ಲ ಮಾಡೋಕೆ ಆಗ್ತಿರಲಿಲ್ಲ ಸರ್, ಈಗ ಸಿ.ಎ.ಎ ಎನ್.ಆರ್.ಸಿ ಬಂದದಲ್ಲ ಮತ್ತೆ ನನಗೆ ಭಯ ಶುರು ಆಗ್ಯಾತಿ. ಇವರಿಗೆ ಈಗಿರೋದನ್ನು ಬಿಟ್ಟರೆ ಇವರ ಹಿರೇರು ಎಲ್ಲಿದ್ರು ಅನ್ನೋಕೆ ಏನೂ ದಾಖಲೆ ಇಲ್ಲ. ಅದೇನು ಆಗ್ತಾತೋ ಅಂತ ಭಯ ಆಗೇತಿ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಯಾವುದೇ ಆಕಾಡೆಮಿಕ್ ಸಂಶೋಧಕರಿಗಿಂತಲೂ ಸೂಕ್ಷ್ಮವಾಗಿ ಅಲೆಮಾರಿ ಬುಡಕಟ್ಟು ಸಮುದಾಯದ ನಾಡಿಮಿಡಿತ ಗುರುತಿಸುವ ಶಾರದ ಅವರು ನಿಜಕ್ಕೂ ಈ ಕಾಲಕ್ಕೆ ಮಾದರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಶಾರದಾ ಅವರ ಸಮಾಜಸೇವೆ ಜೋತೆ… ವಿದ್ಯೆ ದಾನವನ್ನು ಮಾಡಿದ್ದಾರೆ. ಅವರಿಗಿ ಅಭಿನಂದನೆಗಳು

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...