Homeಸಾಮಾಜಿಕಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

ಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು |

ಇದುವರೆಗೆ ನಾವು ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಬಯಾಲಾಜಿಕಲ್ ಆಧಾರದ ಬಗ್ಗೆ ಮಾತನಾಡಿದ್ದೇವೆ, ಅದರೊಂದಿಗೆ ಟ್ರಾನ್ಸ್ಜೆಂಡರ್ ಮತ್ತು ಇಂಟರ್‌ಸೆಕ್ಸ್ ಮಧ್ಯೆ ಇರುವ ವ್ಯತ್ಯಾಸ ಹಾಗೂ ಹೋಲಿಕೆಗಳ ಬಗ್ಗೆಯೂ ಚರ್ಚಿಸಿದ್ದೇವೆ. ಈಗ ಆ ವ್ಯಕ್ತಿಗಳು ಬಾಲ್ಯದಿಂದ ಹಿಡಿದು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಎಂತಹ ಸಾಮಾಜಿಕ ಮತ್ತು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತೆ ಎನ್ನುವುದನ್ನು ಚರ್ಚಿಸೋಣ. ಇಂಟರ್‌ಸೆಕ್ಸ್ ಆಗಿರಲು ಜೈವಿಕವಾದ ಕಾರಣವಿದೆ ಎಂಬುದನ್ನು ನೋಡಿದ್ದೇವೆ. ಅದರಲ್ಲೂ ಈ ವ್ಯಕ್ತಿಗಳಲ್ಲಿ ಮೇಲ್ತೋರಿಕೆಗೇ ಅದು ಕಂಡುಬಂದರೂ ಸಹ ಅವರ ಸಾಮಾಜಿಕ ಅನುಭವದಲ್ಲಿ ಸಮಸ್ಯೆಗಳು ಏಕೆ ತಲೆದೋರುತ್ತವೆ? ಏಕೆಂದರೆ, ಗಂಡು ಅಥವಾ ಹೆಣ್ಣಿನ ದೇಹಕ್ಕಿರುವ ಸಾಮಾಜಿಕ ನಿರೀಕ್ಷೆಗಳಿಗಿಂತ ಅವರು ಭಿನ್ನವಾಗಿರುತ್ತಾರೆ ಮತ್ತು ನೀವು ನಿರ್ದಿಷ್ಟ ಜೆಂಡರ್‌ನ ಗುರುತಿನೊಂದಿಗೇ ಇರಬೇಕು ಎಂದು ಒತ್ತಾಯಿಸುವ ಸಾಮಾಜಿಕ ಮತ್ತು ವೈದ್ಯಕೀಯ ಒತ್ತಡಗಳು ಅವರನ್ನು ಕಾಡುತ್ತವೆ.

ವೈದ್ಯರು ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ ಪೋಷಕರಿಗೆ ನೀಡುವ ಸಲಹೆಯೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಅವರು ಆ ಮಗುವನ್ನು ಒಂದು ನಿರ್ದಿಷ್ಟ ಜೆಂಡರ್‌ಗೆ (ಜನನದ ಸಮಯದಲ್ಲಿ ವೈದ್ಯರು ನಿರ್ಧರಿಸಿದ ಜೆಂಡರ್) ಒತ್ತಾಯಪೂರ್ವಕವಾಗಿ ಒಳಗೊಳ್ಳುವಂತೆ ಸೂಚಿಸುತ್ತಾರೆ. ಹಾಗೂ ಕೆಲಸಲ ಅದಕ್ಕಿಂತ ಮುಂದೆ ಹೋಗಿ ಆ ಮಕ್ಕಳ ಜೀವನವನ್ನೇ ಬದಲಿಸಬಹುದಾದಂತಹ ಯಾತನಾಮಯ ಹಾಗೂ ಜೀವನದುದ್ದಕ್ಕೂ ಗಾಯದ ಕಲೆಗಳನ್ನು ಮಾಡಬಹುದಾದ ಶಸ್ತ್ರಚಿಕಿತ್ಸೆ ಮಾಡುವಂತೆಯೂ ಸೂಚಿಸುತ್ತಾರೆ. ಶಸ್ತ್ರಚಿಕಿತ್ಸೆಯಿಂದ ಆ ಮಕ್ಕಳ ದೇಹಗಳು ಅವರಿಗೆ ನೀಡಿದ ಜೆಂಡರ್‌ಗೆ ಅನುಗುಣವಾಗಿ ಬದಲಿಸಬಹುದು ಎನ್ನುವ ನಂಬಿಕೆಯಲ್ಲಿ ಈ ಶಸ್ತ್ರಚಿಕಿತ್ಸೆಗಳನ್ನು ಸೂಚಿಸಲಾಗುತ್ತದೆ. ಉದಾಹರಣೆಗೆ ಇತ್ತೀಚಿಗೆ ಮುಂಬಯಿಯಲ್ಲಿ ಇಂಟರ್‌ಸೆಕ್ಸ್ ಮಗುವಿನ ಮೇಲೆ ಇಂತಹ ಒಂದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎನ್ನುವ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇಂಟರ್‌ಸೆಕ್ಸ್ ಆಗಿರುವ ವಯಸ್ಕರು ಇದರ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಇಂತಹ ಶಸ್ತ್ರಚಿಕಿತ್ಸೆಗಳಿಗೆ ಒಳಗೊಳ್ಳುವಂತೆ ಮಾಡುವುದನ್ನು ತಾವು ಒಪ್ಪುವುದಿಲ್ಲ ಹಾಗೂ ತಂದೆತಾಯಿಗಳು ತಮ್ಮ ಇಂಟರ್‌ಸೆಕ್ಸ್ ಮಕ್ಕಳಿಗೆ ಅವರ ವಾಸ್ತವವನ್ನು ಮುಚ್ಚುಮರೆಯಿಲ್ಲದೇ ಹೇಳಬೇಕು ಹಾಗೂ ಅದರಿಂದ ಮಕ್ಕಳಿಗೆ ತಮ್ಮ ದೇಹದ ಬಗ್ಗೆ ಅರಿವು ಮೂಡಬಹುದು ಹಾಗೂ ತಮ್ಮ ಮನಸ್ಸನ್ನೂ ಅರ್ಥೈಸಿಕೊಳ್ಳಬಹುದು ಹಾಗೂ ತಾವು ಇತರರಿಗಿಂತ ಹೇಗೆ ಭಿನ್ನ ಮತ್ತು ಹೇಗೆ ಸಮಾನ ಎನ್ನುವುದನ್ನು ತಿಳಿಯಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಆ ಮಕ್ಕಳು ಬೆಳೆದ ನಂತರ ಯಾವ ಜೆಂಡರ್‌ನೊಂದಿಗೆ ತಮ್ಮನ್ನು ತಾವು ಜೆಂಡರ್‌ನೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವರು ಎಂದು, ಅದು ಸ್ಪಷ್ಟವಾಗಿ ವ್ಯಕ್ತವಾಗುವ ಸಮಯಕ್ಕೆ ಮುಂಚೆಯೇ ಯಾರಿಗೂ ಹೇಳಲಾಗುವುದಿಲ್ಲ.

ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳ ಪೋಷಕರು ಮತ್ತು ವೈದ್ಯರು ಗಮನಿಸಬೇಕಾದ ಮುಖ್ಯವಾದ ಸಂಗತಿ ಏನೆಂದರೆ, ತಪ್ಪು ಮಾಹಿತಿಯ ಆಧಾರದ ಮೇಲೆ ಆ ಇಂಟರ್‌ಸೆಕ್ಸ್ ಮಕ್ಕಳ ಮೇಲೆ ಜನನೇಂದ್ರೀಯದ ಶಸ್ತ್ರಚಿಕಿತ್ಸೆ ಮಾಡಲು ಆತುರಪಡಬಾರದು. ಹಾಗೆ ಮಾಡಿ ಆ ಮಗುವಿನ ಜೆಂಡರ್ ಅನ್ನು ಬದಲಿಸಲು ಪ್ರಯತ್ನ ಮಾಡಬಾರದು. ನೀವು ನಿಮ್ಮ ಇಂಟರ್‌ಸೆಕ್ಸ್ ಮಗುವನ್ನೂ ಇತರೆ ಮಕ್ಕಳಂತೆ ಒಪ್ಪಿಕೊಳ್ಳಿ, ಅಷ್ಟೇ ಪ್ರೀತಿಸಿ ಹಾಗೂ ಅವರನ್ನು ವಯಸ್ಕರಾಗಲು ಬಿಡಿ. ಆಗ ಮಾತ್ರ ಅವರು ತಾವು ಗುರುತಿಸಿಕೊಳ್ಳಲು ಇಚ್ಛಿಸುವ ಜೆಂಡರ್ ಬಗ್ಗೆ ನಿರ್ಣಯ ತಾವೇ ತೆಗೆದುಕೊಳ್ಳುವರು. ಅದರೊಂದಿಗೆ ತಮ್ಮ ದೇಹವನ್ನು ಮಾರ್ಪಡಿಸಲು ವೈದ್ಯಕೀಯ ನೆರವು ಅಗತ್ಯವೋ ಇಲ್ಲವೋ ಎಂತಲೂ ತಾವೇ ನಿರ್ಣಯಿಸಬಹುದು. ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ, ಅಂದರೆ ಯಾರ ದೇಹ ಪುರುಷ ಅಥವಾ ಸ್ತ್ರೀಯರ ದೇಹಕ್ಕೆ ಪೂರಕವಾಗಿರುವುದಿಲ್ಲವೋ ಅಂತಹ ಮಕ್ಕಳ ತಂದೆತಾಯಿಗಳು ಆ ಮಕ್ಕಳನ್ನು ಪರಿತ್ಯಜಿಸಿ ಬಿಡುತ್ತಾರೆ. ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಇಂತಹ ಒಂದು ಮಗುವನ್ನು ಯಾರಾದರೂ ದತ್ತು ತೆಗೆದುಕೊಳ್ಳಲಿ ಎಂದು ಆ ಮಗುವಿನ ಪೋಷಕರು ಬಿಟ್ಟಿದ್ದು ವರದಿಯಾಗಿತ್ತು. ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳಿಗೆ ತಮ್ಮ ಉಳಿವಿಗಾಗಿ ಹಾಗೂ ತಾರತಮ್ಯದ ವಿರುದ್ಧದ ಹೆಣಗಾಟ ಹುಟ್ಟಿದ ಸಮಯದಿಂದಲೇ ಪ್ರಾರಂಭವಾಗುವುದು ಅತ್ಯಂತ ದುಃಖಕರ ಸಂಗತಿ.

ವೈದ್ಯರು ಇಂಟರ್‌ಸೆಕ್ಸ್ ಮಕ್ಕಳಿಗೆ ಗಂಡು ಅಥವಾ ಹೆಣ್ಣು ಎನ್ನುವ ಒಂದು ಜೆಂಡರ್ ಅನ್ನು ನಿರ್ಣಯಿಸಿಬಿಡುತ್ತಾರೆ. ಆದರೆ ಇಂಟರ್‌ಸೆಕ್ಸ್ ಆಗಲು ಒಂದು ನಿರ್ದಿಷ್ಟ ಮೂಲಕಾರಣ ಹೊಂದಿದ ಮಕ್ಕಳು, ಹುಟ್ಟಿನ ಸಂದರ್ಭದಲ್ಲಿ ತಮಗೆ ಆರೋಪಿಸಲಾದ ಜೆಂಡರ್‌ಗೆ ಅನುಗುಣವಾಗಿ ಬೆಳೆಯದೇ ಇರಬಹುದು ಎನ್ನುವುದನ್ನು ಪರಿಗಣಿಸದೇ ಮಗುವಿನ ಜೆಂಡರ್ ನಿರ್ಣಯಿಸುತ್ತಾರೆ. ಒಂದು ವೇಳೆ ಆ ಇಂಟರ್‌ಸೆಕ್ಸ್ ಮಕ್ಕಳು ತಮಗೆ ವಹಿಸಿರುವ ಜೆಂಡರ್‌ದೊಂದಿಗೆ ಹೊಂದಾಣಿಕೆಯಾದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುವುದಿಲ್ಲ, ಅವರು ಸಿಸ್‌ಜೆಂಡರ್ ಆಗುತ್ತಾರೆ. ಹಾಗೂ ಒಂದು ವೇಳೆ ತಮಗೆ ನೀಡಿರುವ ಜೆಂಡರ್‌ನೊಂದಿಗೆ ಹೊಂದಾಣಿಕೆ ಆಗದಿದ್ದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುತ್ತಾರೆ. ಹಾಗಾಗಿ ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎನ್ನುವ ಎರಡೂ ಬೇರೆಯ ಬಗೆಗಳೇ ಆಗಿದ್ದು, ಎರಡೂ ತನ್ನದೇ ಆದ ಆರ್ಥ ಮತ್ತು ಸಾಮಾಜಿಕ ಪಯಣಗಳನ್ನು ಹೊಂದಿರುತ್ತವೆ. ಆದರೆ ಕೆಲವರು ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎರಡೂ ಒಟ್ಟಿಗೇ ಆಗಿರಲೂ ಸಾಧ್ಯ.

ಟ್ರಾನ್ಸ್ಜೆಂಡರ್ ಮಕ್ಕಳ ಅನುಭವಗಳೇನು? ಕೆಲವು ಟ್ರಾನ್ಸ್ಜೆಂಡರ್ ಮಕ್ಕಳು ತಮಗೆ ವಹಿಸಿದ ಜೆಂಡರ್‌ಗಿಂತ ತಾವು ಭಿನ್ನ ಎಂದು 3 ವರ್ಷದ ಚಿಕ್ಕ ವಯಸ್ಸಿನಲ್ಲೇ ಗುರುತಿಸಿಬಿಡುತ್ತಾರೆ. ಇನ್ನಿತರರು ತಾವು ಪ್ರೌಢಾವಸ್ಥೆಗೆ ಬಂದಾಗ ಗುರುತಿಸುತ್ತಾರೆ ಹಾಗೂ ಇನ್ನೂ ಕೆಲವರು ಇನ್ನಷ್ಟು ತಡವಾಗಿಯೂ ಗುರುತಿಸುವುದುಂಟು. ಇಂತಹ ಒಂದು ಪ್ರಸಂಗವನ್ನು ಊಹಿಸಿ, ಒಬ್ಬ ಟ್ರಾನ್ಸ್ಜೆಂಡರ್ ಮಗು, ಆ ಮಗುವನ್ನು ಪೋಷಕರು ಗಂಡು ಎಂದು ನೋಡುತ್ತಿರುವ ಆ ಮಗು ಅಳುತ್ತ ಬಂದು ತನ್ನ ತಂದೆತಾಯಿಗಳಿಗೆ ತನ್ನ ಶಿಶ್ನವನ್ನು ತೆಗೆದುಹಾಕಬಹುದೇ ಎಂದು ಕೇಳುತ್ತದೆ ಅಥವಾ, ಹೆಣ್ಣುಮಗು ಎಂದು ನಿರ್ಧರಿಸಲಾದ ಆ ಮಗು, ತನ್ನ ತಂದೆತಾಯಿಗೆ ನಾಳೆ ನಾನು ನಿದ್ರೆಯಿಂದ ಎದ್ದಾಗ ಒಬ್ಬ ಹುಡುಗನಾಗಿ ಏಳಬಹುದೇ ಎಂದು ಕೇಳುತ್ತದೆ. ಇದರಿಂದ ತಂದೆತಾಯಿಗಳಿಗೆ ತುಂಬಾ ಗೊಂದಲವುಂಟಾಗಬಹುದು ಹಾಗೂ ಆ ಮಗುವಿನ ಬೆಳವಣಿಗೆಯ ಒಂದು ಹಂತ ಎಂತಲೋ ಅಥವಾ ಆ ಮಗುವಿನ ‘ಜೆಂಟರ್ ಐಡೆಂಟಿಟಿ ಡಿಸ್‌ಫೋರಿಯಾ’ ಎಂದು ಕರೆಯಲಾಗುವ ಕ್ಷೋಭೆ ತನ್ನಿಂತಾನೆ ಕಡಿಮೆಯಾಗಬಹುದು ಎಂದು ಭಾವಿಸುತ್ತಾರೆ. ತನ್ನ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಸರಿಯಾದ ವಾತಾವರಣ ಸಿಗದಾಗ ಆ ಮಕ್ಕಳು ತಮ್ಮ ಭಾವನೆಗಳನ್ನು ಪ್ರಕಟಿಸಿದೇ ತಮ್ಮಲ್ಲೇ ಹುದುಗಿಸಿಡಲು ಪ್ರಯತ್ನಿಸುತ್ತಾರೆ. ಹಾಗೂ ಅದರ ಬಗ್ಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಾರೆ. ಡಿಸ್‌ಫೋರಿಯಾ ಹೊಂದಿರುವ ಕೆಲವು ಮಕ್ಕಳು ತಾವು ಗುರುತಿಸಿಕೊಳ್ಳಲಿಚ್ಛಿಸುವ ಜೆಂಡರ್‌ನಂತೆ ತುಂಬಾ ತೀವ್ರವಾಗಿ ವರ್ತಿಸುತ್ತಾರೆ, ಹಾಗಾದಾಗ ಕೆಲವು ಪೋಷಕರು ಆ ಮಗುವಿನ ಜೆಂಡರ್ ಇದೇ ಇರಬಹುದು ಎಂದು ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಪೋಷಕರು ಮಗುವಿನೊಂದಿಗೆ ತುಂಬಾ ಅಹಿತವಾಗಿ ಹಾಗೂ ಕೆಲವು ಸಲ ಹಿಂಸಾತ್ಮಕವಾಗಿ ವರ್ತಿಸುತ್ತಾರೆ.

ಟ್ರಾನ್ಸ್ಜೆಂಡರ್ ಮಗುವೊಂದು ವಯಸ್ಕರಾಗುವ ಅನುಭವವನ್ನು ತಿಳಿದುಕೊಳ್ಳಲು ನಾವು ಈ ಡಿಸ್‌ಫೋರಿಯಾ ಅನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ, ವಿಶೇಷವಾಗಿ ಪ್ರೌಢಾವಸ್ಥೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದಾಗ. ಡಿಸ್‌ಫೋರಿಯಾ ಅಂದರೆ, ತನಗೆ ನೀಡಿರುವ ಜೆಂಡರ್‌ನೊಂದಿಗಿರುವ ಕ್ಷೋಭೆಯ ಭಾವನೆ ಅಥವಾ ಬೇರ್ಪಡಿಕೆ. ಈ ಡಿಸ್‌ಫೋರಿಯಾ ವಿವಿಧ ಸ್ವರೂಪಗಳನ್ನು ಪಡೆದುಕೊಳ್ಳಬಹುದು ಹಾಗೂ ಟ್ರಾನ್ಸ್ಜೆಂಡರ್ ಆಗಿ ಜೀವನ ಸಾಗಿಸುವ ಒಬ್ಬ ವ್ಯಕ್ತಿಯ ಅನುಭವ ಈ ಡಿಸ್‌ಫೋರಿಯಾದ ಅನುಭವವೇ ಆಗಿರುತ್ತದೆ. ನಮ್ಮ ಸಮಾಜವು ಟ್ರಾನ್ಸ್ಜೆಂಡರ್ ವ್ಯಕ್ತಿಗಳಿಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸದೇ ಈ ಸಮುದಾಯಕ್ಕೆ ಹೇಗೆ ಸಹಕಾರಿಯಾಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಚಿಂತಿಸಬೇಕಿದೆ.

(ಅನುವಾದ: ಡಾ.ರಾಜಶೇಖರ್ ಅಕ್ಕಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...