Homeಸಾಮಾಜಿಕಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

ಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು |

ಇದುವರೆಗೆ ನಾವು ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಬಯಾಲಾಜಿಕಲ್ ಆಧಾರದ ಬಗ್ಗೆ ಮಾತನಾಡಿದ್ದೇವೆ, ಅದರೊಂದಿಗೆ ಟ್ರಾನ್ಸ್ಜೆಂಡರ್ ಮತ್ತು ಇಂಟರ್‌ಸೆಕ್ಸ್ ಮಧ್ಯೆ ಇರುವ ವ್ಯತ್ಯಾಸ ಹಾಗೂ ಹೋಲಿಕೆಗಳ ಬಗ್ಗೆಯೂ ಚರ್ಚಿಸಿದ್ದೇವೆ. ಈಗ ಆ ವ್ಯಕ್ತಿಗಳು ಬಾಲ್ಯದಿಂದ ಹಿಡಿದು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಎಂತಹ ಸಾಮಾಜಿಕ ಮತ್ತು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತೆ ಎನ್ನುವುದನ್ನು ಚರ್ಚಿಸೋಣ. ಇಂಟರ್‌ಸೆಕ್ಸ್ ಆಗಿರಲು ಜೈವಿಕವಾದ ಕಾರಣವಿದೆ ಎಂಬುದನ್ನು ನೋಡಿದ್ದೇವೆ. ಅದರಲ್ಲೂ ಈ ವ್ಯಕ್ತಿಗಳಲ್ಲಿ ಮೇಲ್ತೋರಿಕೆಗೇ ಅದು ಕಂಡುಬಂದರೂ ಸಹ ಅವರ ಸಾಮಾಜಿಕ ಅನುಭವದಲ್ಲಿ ಸಮಸ್ಯೆಗಳು ಏಕೆ ತಲೆದೋರುತ್ತವೆ? ಏಕೆಂದರೆ, ಗಂಡು ಅಥವಾ ಹೆಣ್ಣಿನ ದೇಹಕ್ಕಿರುವ ಸಾಮಾಜಿಕ ನಿರೀಕ್ಷೆಗಳಿಗಿಂತ ಅವರು ಭಿನ್ನವಾಗಿರುತ್ತಾರೆ ಮತ್ತು ನೀವು ನಿರ್ದಿಷ್ಟ ಜೆಂಡರ್‌ನ ಗುರುತಿನೊಂದಿಗೇ ಇರಬೇಕು ಎಂದು ಒತ್ತಾಯಿಸುವ ಸಾಮಾಜಿಕ ಮತ್ತು ವೈದ್ಯಕೀಯ ಒತ್ತಡಗಳು ಅವರನ್ನು ಕಾಡುತ್ತವೆ.

ವೈದ್ಯರು ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ ಪೋಷಕರಿಗೆ ನೀಡುವ ಸಲಹೆಯೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಅವರು ಆ ಮಗುವನ್ನು ಒಂದು ನಿರ್ದಿಷ್ಟ ಜೆಂಡರ್‌ಗೆ (ಜನನದ ಸಮಯದಲ್ಲಿ ವೈದ್ಯರು ನಿರ್ಧರಿಸಿದ ಜೆಂಡರ್) ಒತ್ತಾಯಪೂರ್ವಕವಾಗಿ ಒಳಗೊಳ್ಳುವಂತೆ ಸೂಚಿಸುತ್ತಾರೆ. ಹಾಗೂ ಕೆಲಸಲ ಅದಕ್ಕಿಂತ ಮುಂದೆ ಹೋಗಿ ಆ ಮಕ್ಕಳ ಜೀವನವನ್ನೇ ಬದಲಿಸಬಹುದಾದಂತಹ ಯಾತನಾಮಯ ಹಾಗೂ ಜೀವನದುದ್ದಕ್ಕೂ ಗಾಯದ ಕಲೆಗಳನ್ನು ಮಾಡಬಹುದಾದ ಶಸ್ತ್ರಚಿಕಿತ್ಸೆ ಮಾಡುವಂತೆಯೂ ಸೂಚಿಸುತ್ತಾರೆ. ಶಸ್ತ್ರಚಿಕಿತ್ಸೆಯಿಂದ ಆ ಮಕ್ಕಳ ದೇಹಗಳು ಅವರಿಗೆ ನೀಡಿದ ಜೆಂಡರ್‌ಗೆ ಅನುಗುಣವಾಗಿ ಬದಲಿಸಬಹುದು ಎನ್ನುವ ನಂಬಿಕೆಯಲ್ಲಿ ಈ ಶಸ್ತ್ರಚಿಕಿತ್ಸೆಗಳನ್ನು ಸೂಚಿಸಲಾಗುತ್ತದೆ. ಉದಾಹರಣೆಗೆ ಇತ್ತೀಚಿಗೆ ಮುಂಬಯಿಯಲ್ಲಿ ಇಂಟರ್‌ಸೆಕ್ಸ್ ಮಗುವಿನ ಮೇಲೆ ಇಂತಹ ಒಂದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎನ್ನುವ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇಂಟರ್‌ಸೆಕ್ಸ್ ಆಗಿರುವ ವಯಸ್ಕರು ಇದರ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಇಂತಹ ಶಸ್ತ್ರಚಿಕಿತ್ಸೆಗಳಿಗೆ ಒಳಗೊಳ್ಳುವಂತೆ ಮಾಡುವುದನ್ನು ತಾವು ಒಪ್ಪುವುದಿಲ್ಲ ಹಾಗೂ ತಂದೆತಾಯಿಗಳು ತಮ್ಮ ಇಂಟರ್‌ಸೆಕ್ಸ್ ಮಕ್ಕಳಿಗೆ ಅವರ ವಾಸ್ತವವನ್ನು ಮುಚ್ಚುಮರೆಯಿಲ್ಲದೇ ಹೇಳಬೇಕು ಹಾಗೂ ಅದರಿಂದ ಮಕ್ಕಳಿಗೆ ತಮ್ಮ ದೇಹದ ಬಗ್ಗೆ ಅರಿವು ಮೂಡಬಹುದು ಹಾಗೂ ತಮ್ಮ ಮನಸ್ಸನ್ನೂ ಅರ್ಥೈಸಿಕೊಳ್ಳಬಹುದು ಹಾಗೂ ತಾವು ಇತರರಿಗಿಂತ ಹೇಗೆ ಭಿನ್ನ ಮತ್ತು ಹೇಗೆ ಸಮಾನ ಎನ್ನುವುದನ್ನು ತಿಳಿಯಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಆ ಮಕ್ಕಳು ಬೆಳೆದ ನಂತರ ಯಾವ ಜೆಂಡರ್‌ನೊಂದಿಗೆ ತಮ್ಮನ್ನು ತಾವು ಜೆಂಡರ್‌ನೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವರು ಎಂದು, ಅದು ಸ್ಪಷ್ಟವಾಗಿ ವ್ಯಕ್ತವಾಗುವ ಸಮಯಕ್ಕೆ ಮುಂಚೆಯೇ ಯಾರಿಗೂ ಹೇಳಲಾಗುವುದಿಲ್ಲ.

ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳ ಪೋಷಕರು ಮತ್ತು ವೈದ್ಯರು ಗಮನಿಸಬೇಕಾದ ಮುಖ್ಯವಾದ ಸಂಗತಿ ಏನೆಂದರೆ, ತಪ್ಪು ಮಾಹಿತಿಯ ಆಧಾರದ ಮೇಲೆ ಆ ಇಂಟರ್‌ಸೆಕ್ಸ್ ಮಕ್ಕಳ ಮೇಲೆ ಜನನೇಂದ್ರೀಯದ ಶಸ್ತ್ರಚಿಕಿತ್ಸೆ ಮಾಡಲು ಆತುರಪಡಬಾರದು. ಹಾಗೆ ಮಾಡಿ ಆ ಮಗುವಿನ ಜೆಂಡರ್ ಅನ್ನು ಬದಲಿಸಲು ಪ್ರಯತ್ನ ಮಾಡಬಾರದು. ನೀವು ನಿಮ್ಮ ಇಂಟರ್‌ಸೆಕ್ಸ್ ಮಗುವನ್ನೂ ಇತರೆ ಮಕ್ಕಳಂತೆ ಒಪ್ಪಿಕೊಳ್ಳಿ, ಅಷ್ಟೇ ಪ್ರೀತಿಸಿ ಹಾಗೂ ಅವರನ್ನು ವಯಸ್ಕರಾಗಲು ಬಿಡಿ. ಆಗ ಮಾತ್ರ ಅವರು ತಾವು ಗುರುತಿಸಿಕೊಳ್ಳಲು ಇಚ್ಛಿಸುವ ಜೆಂಡರ್ ಬಗ್ಗೆ ನಿರ್ಣಯ ತಾವೇ ತೆಗೆದುಕೊಳ್ಳುವರು. ಅದರೊಂದಿಗೆ ತಮ್ಮ ದೇಹವನ್ನು ಮಾರ್ಪಡಿಸಲು ವೈದ್ಯಕೀಯ ನೆರವು ಅಗತ್ಯವೋ ಇಲ್ಲವೋ ಎಂತಲೂ ತಾವೇ ನಿರ್ಣಯಿಸಬಹುದು. ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ, ಅಂದರೆ ಯಾರ ದೇಹ ಪುರುಷ ಅಥವಾ ಸ್ತ್ರೀಯರ ದೇಹಕ್ಕೆ ಪೂರಕವಾಗಿರುವುದಿಲ್ಲವೋ ಅಂತಹ ಮಕ್ಕಳ ತಂದೆತಾಯಿಗಳು ಆ ಮಕ್ಕಳನ್ನು ಪರಿತ್ಯಜಿಸಿ ಬಿಡುತ್ತಾರೆ. ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಇಂತಹ ಒಂದು ಮಗುವನ್ನು ಯಾರಾದರೂ ದತ್ತು ತೆಗೆದುಕೊಳ್ಳಲಿ ಎಂದು ಆ ಮಗುವಿನ ಪೋಷಕರು ಬಿಟ್ಟಿದ್ದು ವರದಿಯಾಗಿತ್ತು. ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳಿಗೆ ತಮ್ಮ ಉಳಿವಿಗಾಗಿ ಹಾಗೂ ತಾರತಮ್ಯದ ವಿರುದ್ಧದ ಹೆಣಗಾಟ ಹುಟ್ಟಿದ ಸಮಯದಿಂದಲೇ ಪ್ರಾರಂಭವಾಗುವುದು ಅತ್ಯಂತ ದುಃಖಕರ ಸಂಗತಿ.

ವೈದ್ಯರು ಇಂಟರ್‌ಸೆಕ್ಸ್ ಮಕ್ಕಳಿಗೆ ಗಂಡು ಅಥವಾ ಹೆಣ್ಣು ಎನ್ನುವ ಒಂದು ಜೆಂಡರ್ ಅನ್ನು ನಿರ್ಣಯಿಸಿಬಿಡುತ್ತಾರೆ. ಆದರೆ ಇಂಟರ್‌ಸೆಕ್ಸ್ ಆಗಲು ಒಂದು ನಿರ್ದಿಷ್ಟ ಮೂಲಕಾರಣ ಹೊಂದಿದ ಮಕ್ಕಳು, ಹುಟ್ಟಿನ ಸಂದರ್ಭದಲ್ಲಿ ತಮಗೆ ಆರೋಪಿಸಲಾದ ಜೆಂಡರ್‌ಗೆ ಅನುಗುಣವಾಗಿ ಬೆಳೆಯದೇ ಇರಬಹುದು ಎನ್ನುವುದನ್ನು ಪರಿಗಣಿಸದೇ ಮಗುವಿನ ಜೆಂಡರ್ ನಿರ್ಣಯಿಸುತ್ತಾರೆ. ಒಂದು ವೇಳೆ ಆ ಇಂಟರ್‌ಸೆಕ್ಸ್ ಮಕ್ಕಳು ತಮಗೆ ವಹಿಸಿರುವ ಜೆಂಡರ್‌ದೊಂದಿಗೆ ಹೊಂದಾಣಿಕೆಯಾದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುವುದಿಲ್ಲ, ಅವರು ಸಿಸ್‌ಜೆಂಡರ್ ಆಗುತ್ತಾರೆ. ಹಾಗೂ ಒಂದು ವೇಳೆ ತಮಗೆ ನೀಡಿರುವ ಜೆಂಡರ್‌ನೊಂದಿಗೆ ಹೊಂದಾಣಿಕೆ ಆಗದಿದ್ದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುತ್ತಾರೆ. ಹಾಗಾಗಿ ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎನ್ನುವ ಎರಡೂ ಬೇರೆಯ ಬಗೆಗಳೇ ಆಗಿದ್ದು, ಎರಡೂ ತನ್ನದೇ ಆದ ಆರ್ಥ ಮತ್ತು ಸಾಮಾಜಿಕ ಪಯಣಗಳನ್ನು ಹೊಂದಿರುತ್ತವೆ. ಆದರೆ ಕೆಲವರು ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎರಡೂ ಒಟ್ಟಿಗೇ ಆಗಿರಲೂ ಸಾಧ್ಯ.

ಟ್ರಾನ್ಸ್ಜೆಂಡರ್ ಮಕ್ಕಳ ಅನುಭವಗಳೇನು? ಕೆಲವು ಟ್ರಾನ್ಸ್ಜೆಂಡರ್ ಮಕ್ಕಳು ತಮಗೆ ವಹಿಸಿದ ಜೆಂಡರ್‌ಗಿಂತ ತಾವು ಭಿನ್ನ ಎಂದು 3 ವರ್ಷದ ಚಿಕ್ಕ ವಯಸ್ಸಿನಲ್ಲೇ ಗುರುತಿಸಿಬಿಡುತ್ತಾರೆ. ಇನ್ನಿತರರು ತಾವು ಪ್ರೌಢಾವಸ್ಥೆಗೆ ಬಂದಾಗ ಗುರುತಿಸುತ್ತಾರೆ ಹಾಗೂ ಇನ್ನೂ ಕೆಲವರು ಇನ್ನಷ್ಟು ತಡವಾಗಿಯೂ ಗುರುತಿಸುವುದುಂಟು. ಇಂತಹ ಒಂದು ಪ್ರಸಂಗವನ್ನು ಊಹಿಸಿ, ಒಬ್ಬ ಟ್ರಾನ್ಸ್ಜೆಂಡರ್ ಮಗು, ಆ ಮಗುವನ್ನು ಪೋಷಕರು ಗಂಡು ಎಂದು ನೋಡುತ್ತಿರುವ ಆ ಮಗು ಅಳುತ್ತ ಬಂದು ತನ್ನ ತಂದೆತಾಯಿಗಳಿಗೆ ತನ್ನ ಶಿಶ್ನವನ್ನು ತೆಗೆದುಹಾಕಬಹುದೇ ಎಂದು ಕೇಳುತ್ತದೆ ಅಥವಾ, ಹೆಣ್ಣುಮಗು ಎಂದು ನಿರ್ಧರಿಸಲಾದ ಆ ಮಗು, ತನ್ನ ತಂದೆತಾಯಿಗೆ ನಾಳೆ ನಾನು ನಿದ್ರೆಯಿಂದ ಎದ್ದಾಗ ಒಬ್ಬ ಹುಡುಗನಾಗಿ ಏಳಬಹುದೇ ಎಂದು ಕೇಳುತ್ತದೆ. ಇದರಿಂದ ತಂದೆತಾಯಿಗಳಿಗೆ ತುಂಬಾ ಗೊಂದಲವುಂಟಾಗಬಹುದು ಹಾಗೂ ಆ ಮಗುವಿನ ಬೆಳವಣಿಗೆಯ ಒಂದು ಹಂತ ಎಂತಲೋ ಅಥವಾ ಆ ಮಗುವಿನ ‘ಜೆಂಟರ್ ಐಡೆಂಟಿಟಿ ಡಿಸ್‌ಫೋರಿಯಾ’ ಎಂದು ಕರೆಯಲಾಗುವ ಕ್ಷೋಭೆ ತನ್ನಿಂತಾನೆ ಕಡಿಮೆಯಾಗಬಹುದು ಎಂದು ಭಾವಿಸುತ್ತಾರೆ. ತನ್ನ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಸರಿಯಾದ ವಾತಾವರಣ ಸಿಗದಾಗ ಆ ಮಕ್ಕಳು ತಮ್ಮ ಭಾವನೆಗಳನ್ನು ಪ್ರಕಟಿಸಿದೇ ತಮ್ಮಲ್ಲೇ ಹುದುಗಿಸಿಡಲು ಪ್ರಯತ್ನಿಸುತ್ತಾರೆ. ಹಾಗೂ ಅದರ ಬಗ್ಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಾರೆ. ಡಿಸ್‌ಫೋರಿಯಾ ಹೊಂದಿರುವ ಕೆಲವು ಮಕ್ಕಳು ತಾವು ಗುರುತಿಸಿಕೊಳ್ಳಲಿಚ್ಛಿಸುವ ಜೆಂಡರ್‌ನಂತೆ ತುಂಬಾ ತೀವ್ರವಾಗಿ ವರ್ತಿಸುತ್ತಾರೆ, ಹಾಗಾದಾಗ ಕೆಲವು ಪೋಷಕರು ಆ ಮಗುವಿನ ಜೆಂಡರ್ ಇದೇ ಇರಬಹುದು ಎಂದು ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಪೋಷಕರು ಮಗುವಿನೊಂದಿಗೆ ತುಂಬಾ ಅಹಿತವಾಗಿ ಹಾಗೂ ಕೆಲವು ಸಲ ಹಿಂಸಾತ್ಮಕವಾಗಿ ವರ್ತಿಸುತ್ತಾರೆ.

ಟ್ರಾನ್ಸ್ಜೆಂಡರ್ ಮಗುವೊಂದು ವಯಸ್ಕರಾಗುವ ಅನುಭವವನ್ನು ತಿಳಿದುಕೊಳ್ಳಲು ನಾವು ಈ ಡಿಸ್‌ಫೋರಿಯಾ ಅನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ, ವಿಶೇಷವಾಗಿ ಪ್ರೌಢಾವಸ್ಥೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದಾಗ. ಡಿಸ್‌ಫೋರಿಯಾ ಅಂದರೆ, ತನಗೆ ನೀಡಿರುವ ಜೆಂಡರ್‌ನೊಂದಿಗಿರುವ ಕ್ಷೋಭೆಯ ಭಾವನೆ ಅಥವಾ ಬೇರ್ಪಡಿಕೆ. ಈ ಡಿಸ್‌ಫೋರಿಯಾ ವಿವಿಧ ಸ್ವರೂಪಗಳನ್ನು ಪಡೆದುಕೊಳ್ಳಬಹುದು ಹಾಗೂ ಟ್ರಾನ್ಸ್ಜೆಂಡರ್ ಆಗಿ ಜೀವನ ಸಾಗಿಸುವ ಒಬ್ಬ ವ್ಯಕ್ತಿಯ ಅನುಭವ ಈ ಡಿಸ್‌ಫೋರಿಯಾದ ಅನುಭವವೇ ಆಗಿರುತ್ತದೆ. ನಮ್ಮ ಸಮಾಜವು ಟ್ರಾನ್ಸ್ಜೆಂಡರ್ ವ್ಯಕ್ತಿಗಳಿಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸದೇ ಈ ಸಮುದಾಯಕ್ಕೆ ಹೇಗೆ ಸಹಕಾರಿಯಾಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಚಿಂತಿಸಬೇಕಿದೆ.

(ಅನುವಾದ: ಡಾ.ರಾಜಶೇಖರ್ ಅಕ್ಕಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...