Homeಸಾಮಾಜಿಕಇಟ್ಟಿಹರೆಜ್ಜೆ ನಮ್ಮ ಜನ, ಗೆದ್ದೇ ಗೆಲ್ಲುವೆವು ಮುಂದೊಂದು ದಿನ

ಇಟ್ಟಿಹರೆಜ್ಜೆ ನಮ್ಮ ಜನ, ಗೆದ್ದೇ ಗೆಲ್ಲುವೆವು ಮುಂದೊಂದು ದಿನ

- Advertisement -
- Advertisement -

ಕಳೆದ ಒಂದು ದಶಕದಿಂದ ಇಡೀ ರಾಜ್ಯವೇ ಬರಗಾಲದ ಬೇಗೆಯಲ್ಲಿ ನಲುಗುತ್ತಿದೆ. ಇದಕ್ಕೆ ಮರೆಮಲೆನಾಡು ಪ್ರದೇಶವಾಗಿರುವ ಹಾಸನ ಜಿಲ್ಲೆಯೇನೂ ಹೊರತಾಗಿಲ್ಲ. ಹಾಸನವನ್ನೂ ಒಳಗೊಂಡಂತೆ ಜಿಲ್ಲೆಯ 5 ತಾಲ್ಲೂಕುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೋದ ವರ್ಷ ಬರ ಪೀಡಿತ ರಾಜ್ಯಗಳ ಪಟ್ಟಿಗೆ ಸೇರಿಸಿವೆ. ಕಳೆದೆರಡು ವರ್ಷಗಳಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ದಾರುಣತೆಯೂ ಜೊತೆಗೂಡಿದೆ. ಮಳೆ ಬಾರದಿದ್ದಾಗ ನೀರಿನ ಹಾಹಾಕಾರವಿರುವ ನಗರಪ್ರದೇಶಗಳಿಗೆ, ಹಳ್ಳಿಗಳಿಗೆ ಟ್ಯಾಂಕರ್‍ಗಳ ಮೂಲಕ ಒಂದಷ್ಟು ದಿನಗಳ ಕಾಲ ನೀರುಕೊಟ್ಟು ಕೈತೊಳೆದುಕೊಳ್ಳುತ್ತಿದ್ದ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್‍ಗಳ ಮಧ್ಯೆ ಸದ್ದಿಲ್ಲದೆ ಚಿಗುರೊಡೆದದ್ದು ಹಸಿರುಭೂಮಿ ಪ್ರತಿಷ್ಠಾನ.
ಪರಿಸರದ ಬಗೆಗಿನ ಕಾಳಜಿಯುಳ್ಳ ಪರಿಸರ ಸಂಬಂಧಿ ಚಟುವಟಿಕೆಗಳು, ಬರಹಗಳು, ಹೋರಾಟಗಳನ್ನು ಮಾಡುತ್ತಿದ್ದ ಹಾಸನದ ಸಮಾನ ಮನಸ್ಸುಗಳು 2017ರ ಏಪ್ರಿಲ್‍ನಲ್ಲಿ ಒಂದೆಡೆ ಸೇರಿ, ನೀರಿನ ಬಗೆಯ ಅಧ್ಯಯನದೊಂದಿಗೆ, ಬರದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ಮುಂದಡಿ ಇಟ್ಟವರು. ಅಮೀರ್‍ಖಾನ್ ಮಹಾರಾಷ್ಟ್ರದಲ್ಲಿ ಬರದ ವಿರುದ್ಧ ಪಾನೀ ಫೌಂಡೇಶನ್ ಮೂಲಕ ನಡೆಸುತ್ತಿರುವ ಕೆಲಸಗಳ ಸಾಕ್ಷ್ಯಚಿತ್ರ ‘ದಿ ಬ್ಯಾಟಲ್ ಎಗೆನೆಸ್ಟ್ ಡ್ರಾಟ್’ ವೀಕ್ಷಿಸಿ, ನಂತರ ನಡೆಸಿದ ಚರ್ಚೆ ಅಲ್ಲಿ ನೆರೆದಿದ್ದ ಸಾಹಿತಿಗಳು, ಹೋರಾಟಗಾರರು, ಅಧಿಕಾರಿಗಳು, ಪತ್ರಕರ್ತರು, ಪರಿಸರಪ್ರೇಮಿಗಳು, ಕಲಾವಿದರಲ್ಲಿ ಕ್ರಿಯಾಶೀಲತೆಯಿಂದ ನೀರಿನ ಕೆಲಸದಲ್ಲಿ ತೊಡಗಲು ‘ಹಸಿರುಭೂಮಿ ಪ್ರತಿಸ್ಠಾನ’ವನ್ನು ಸ್ಥಾಪಿಸುವಂತೆ ಮಾಡಿತು.
ಪರಿಸರ ಮತ್ತು ಅಂತರ್ಜಲದ ಬಗೆಗೆ ನಾಡಿನ ಖ್ಯಾತ ಜಲ ಮತ್ತು ಅಂತರ್ಜಲ ತಜ್ಞರ ಮೂಲಕ ತರಬೇತಿ ಪಡೆದ ಹಸಿರುಭೂಮಿ ಪ್ರತಿಸ್ಠಾನದ ತಂಡ, ಆನಂತರ ಹೂಳು ತುಂಬಿ ಬತ್ತಿಹೋದ ಕೆರೆಗಳಲ್ಲಿ ಅಂತರ್ಜಲ ಹುಡುಕಿ ಕೆರೆ-ಕಲ್ಯಾಣಿಗಳಲ್ಲಿ ಹೂಳೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಈಗ ಇತಿಹಾಸ. 2017ರ ಮೇ 1ರ ಕಾರ್ಮಿಕ ದಿನದಂದು ಹಾಸನ ತಾಲ್ಲೂಕಿನ ದೊಡ್ಡಕೊಂಡಗುಳ ಗ್ರಾಮದಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಂಡು ಹೋಯ್ಸಳರ ಕಾಲದ 2 ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸುವ ಕೆಲಸವನ್ನು ಆರಂಭಿಸಿತು. ಹೂಳು ತುಂಬಿದ್ದ ಕಲ್ಯಾಣಿಗಳ ತಳಮಟ್ಟಕ್ಕೆ ಹೂಳು ತೆಗೆಯುತ್ತಿದ್ದಂತೆ ಜಲಚಿಲುಮೆ ಪಸರಿಸಿತು. ಆನಂತರ ಅದೇ ಊರಿನ ಕೆರೆಯನ್ನೂ ದಾನಿಗಳ ನೆರವಿನಿಂದ ಸುಮಾರು 6 ಲಕ್ಷ ಹಣವನ್ನು ವಿನಿಯೋಗಿಸಿ 20 ದಿನಗಳಲ್ಲಿ ಯಮತ್ರಗಳ ನೆರವಿನಿಂದ ಪುನಶ್ಚೇತನಗೊಳಿಸಿ ದಾಖಲೆ ಬರೆಯಿತು. ಆರಂಭದ ಮೊದಲನೆಯ ಪ್ರಯೋಗ ಯಶಸ್ಸು ಕಂಡ ಹುಮ್ಮಸ್ಸಿನಲ್ಲಿ ಮುನ್ನಡೆದ ತಂಡ ಹಾಸನ, ಚನ್ನರಾಯಪಟ್ಟಣ, ಅರಕಲಗೂಡು, ಬೇಲೂರು ತಾಲ್ಲೂಕುಗಳ ಹಲವಾರು ಹಳ್ಳಿಗಳಲ್ಲಿ ಸ್ಥಳೀಯರ ನೆರವಿನೊಂದಿಗೆ ತಂಡ ಕಟ್ಟಿ, ಜಲದ ಜಾಡನ್ನು ಹಿಡಿದು 35ಕ್ಕೂ ಹೆಚ್ಚಿನ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಿತು. ಹಾಗೂ ದಾನಿಗಳು, ಖಾಸಗಿ ಸಂಸ್ಥೆಗಳ ಸಾಮಾಜಿಕ ನಿಧಿಯ ನೆರವಿನೊಂದಿಗೆ 5ಕೆರೆಗಳನ್ನು 10ಅಡಿಗಳಷ್ಟು ಆಳಕ್ಕೆ ಹೂಳು ತೆಗೆದು ಪುನಶ್ಚೇತನಗೊಳಿಸುವಲ್ಲಿ ಹಸಿರುಭೂಮಿ ಪ್ರತಿಸ್ಠಾನ ಯಶಸ್ಸು ಕಂಡಿದೆ.
ಮೊದಲ ಯಶಸ್ಸು ಕಂಡ ದೊಡ್ಡಕೊಂಡಗುಳ ಕೆರೆಗೆ ನೀರು ಭರ್ತಿಯಾಗಿ ಸುತ್ತಮುತ್ತಲಿನ ಜಮೀನಿಗೆ, ಜಲಚರಗಳಿಗೆ, ಪ್ರಾಣಿ ಪಕ್ಷಿಗಳಿಗೆ, ಜನಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆಯನ್ನು ನೀಗಿಸಿದೆ. ಅಲ್ಲದೆ ತೆರೆದ ಬಾವಿಗಳು, ಕೊಳವೆಬಾವಿಗಳು ಅಂತರ್ಜಲ ವೃದ್ಧಿಸಿದ ಕಾರಣ ಭರ್ತಿಯಾಗಿವೆ. ಪ್ರತಿಷ್ಠಾನವು ಹಲವು ಗ್ರಾವiಗಳಲ್ಲಿ ಗ್ರಾಮ ಸ್ವರಾಜ್ ಸಮಿತಿಯನ್ನು ರಚನೆ ಮಾಡಿ ಇಂತಹ ಕೆಲಸಗಳಲ್ಲಿ ತೊಡಗಿಸಲು ಶ್ರಮಿಸುತ್ತಿದೆ. ದೊಡ್ಡಕೊಂಡಗುಳ ಗ್ರಾಮಸ್ವರಾಜ್ ಸಮಿತಿಯು ಹೋದ ವರ್ಷ ಕೆರೆಗೆ 15000 ಮೀನಿನ ಮರಿಗಳನ್ನು ಬಿಟ್ಟಿದ್ದು, ಕೆರೆಯನ್ನು ಸ್ವಚ್ಛವಾಗಿಸಿ, ಮೀನುಗಳ ಪೋಷಣೆ ಮಾಡಿದ್ದರ ಫಲವಾಗಿ ಮೀನುಗಳು ಅಭಿವೃದ್ಧಿಗೊಂಡು ಕಳೆದ ತಿಂಗಳು ಈ ಕೆರೆಯಲ್ಲಿ ಮೀನಗಳನ್ನು ಹಿಡಿದು ಕನಿಷ್ಠ ಬೆಲೆಗೆ ಮಾರಾಟ ಮಾಡಿದ್ದು ಒಂದು ಸಂತೋಷದ ವಿಚಾರ. ಈಗ 350 ಕೆ.ಜಿ ಇಂದ 35000 ರೂ ಆದಾಯ ತೊರೆತಿದೆ. ಮುಂದೆ ಒಂದೂವರೆ ಲಕ್ಷ ಆದಾಯದ ನಿರೀಕ್ಷೆಯಿದೆ. ಈ ಹಣವನ್ನು ಸಮಿತಿಯವರು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಬಳೆಸಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಸಮಿತಿಯು ಪ್ರತಿಷ್ಠಾನದೊಂದಿಗೆ ಕೈ ಜೋಡಿಸಿ ಶಾಲಾವರಣ, ಕೆರೆಯ ಸುತ್ತಮುತ್ತ, ಗುಂಡುತೋಪಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದು ಇದೂ ಕೂಡ ಗ್ರಾಮಕ್ಕೆ ಆದಾಯದ ಮೂಲವಾಗಿದ್ದು ಗ್ರಾಮವು ಸ್ವಾವಲಂಬಿ ಹಾಗೂ ಮಾದರಿ ಗ್ರಾವiವಾಗಿ ಪರಿವರ್ತನೆಗೊಳ್ಳಲು ಹಸಿರುಭೂಮಿ ಪ್ರತಿಷ್ಠಾನ ಅಹರ್ನಿಶಿ ಶ್ರಮಿಸುತ್ತಿದೆ.
ಹಾಸನದ ಉಪವಿಭಾಗಾಧಿಕಾರಿಗಳಾದ ಡಾ. ಎಚ್.ಎಲ್.ನಾಗರಾಜ್, ಚಿಂತಕರಾದ ರೂಪ ಹಾಸನ, ಪತ್ರಕರ್ತರಾದ ಆರ್.ಪಿ.ವೆಂಕಟೇಶಮೂರ್ತಿ, ಪರಿಸರಪ್ರಿಯ ಚ.ನಾ.ಅಶೋಕ್, ಇಂಜಿನಿಯರ್ ಸುಬ್ಬಸ್ವಾಮಿ, ವೆಂಕಟೇಗೌಡ, ದಾನಿಗಳಾದ ಡಾ.ಸಾವಿತ್ರಿ, ನಿವೃತ್ತ ಉಪನ್ಯಾಸಕರಾದ ಶಿವಶಂಕರಪ್ಪ, ಅಪ್ಪಾಜಿಗೌಡ, ಹಿರಿಯರಾದ ಪುಟ್ಟಯ್ಯ, ಸದ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೀವೇಗೌಡ, ಅಹರ್ನಿಶಿ ಪ್ರತಿಷ್ಠಾನದ ಕೆಲಸದಲ್ಲಿ ತೊಡಗಿರುವ ಡಾ.ಮಂಜುನಾಥ್, ಮಂಜುನಾಥ್ ಮೋರೆ, ಅಹಮದ್, ಸೌಭಾಗ್ಯ, ಬಿ.ಎಸ್.ದೇಸಾಯಿ, ತಿಮ್ಮೇಶ್‍ಪ್ರಭು, ಚಿನ್ನೇನಹಳ್ಳಿಸ್ವಾಮಿ, ಎಸ್.ಎಸ್.ಪಾಷಾ, ಪ್ರಸನ್ನ….. ಹೀಗೆ ಹಲವು ಪ್ರಜ್ಞಾವಂತ ಸದಸ್ಯರು ತಮ್ಮ ಉಳಿದೆಲ್ಲ ಕಾರ್ಯಗಳು, ಭಾಷಣಗಳನ್ನು ಬಿಟ್ಟು ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರ ಫಲವಾಗಿ ಇಂದು ಹಾಸನ ಜಿಲ್ಲೆಯ ಕೆಲವು ಹಳ್ಳಿಗಳು ಬರದ ಮಧ್ಯೆಯೂ ಜೀವಂತವಾಗಿ ಉಸಿರಾಡಲು ಸಾಧ್ಯವಾಗಿದೆ. ಇಂತಹ ಸ್ಫೂರ್ತಿ ನಾಡಿನ ಉದ್ದಕ್ಕೂ ಹಬ್ಬಲಿ, ರೈತರ ಬದುಕು ಹಸನಾಗಲಿ ಎಂಬುದು ನಮ್ಮ ಹಾರೈಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...