Homeಸಾಮಾಜಿಕಇಟ್ಟಿಹರೆಜ್ಜೆ ನಮ್ಮ ಜನ, ಗೆದ್ದೇ ಗೆಲ್ಲುವೆವು ಮುಂದೊಂದು ದಿನ

ಇಟ್ಟಿಹರೆಜ್ಜೆ ನಮ್ಮ ಜನ, ಗೆದ್ದೇ ಗೆಲ್ಲುವೆವು ಮುಂದೊಂದು ದಿನ

- Advertisement -
- Advertisement -

ಕಳೆದ ಒಂದು ದಶಕದಿಂದ ಇಡೀ ರಾಜ್ಯವೇ ಬರಗಾಲದ ಬೇಗೆಯಲ್ಲಿ ನಲುಗುತ್ತಿದೆ. ಇದಕ್ಕೆ ಮರೆಮಲೆನಾಡು ಪ್ರದೇಶವಾಗಿರುವ ಹಾಸನ ಜಿಲ್ಲೆಯೇನೂ ಹೊರತಾಗಿಲ್ಲ. ಹಾಸನವನ್ನೂ ಒಳಗೊಂಡಂತೆ ಜಿಲ್ಲೆಯ 5 ತಾಲ್ಲೂಕುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೋದ ವರ್ಷ ಬರ ಪೀಡಿತ ರಾಜ್ಯಗಳ ಪಟ್ಟಿಗೆ ಸೇರಿಸಿವೆ. ಕಳೆದೆರಡು ವರ್ಷಗಳಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ದಾರುಣತೆಯೂ ಜೊತೆಗೂಡಿದೆ. ಮಳೆ ಬಾರದಿದ್ದಾಗ ನೀರಿನ ಹಾಹಾಕಾರವಿರುವ ನಗರಪ್ರದೇಶಗಳಿಗೆ, ಹಳ್ಳಿಗಳಿಗೆ ಟ್ಯಾಂಕರ್‍ಗಳ ಮೂಲಕ ಒಂದಷ್ಟು ದಿನಗಳ ಕಾಲ ನೀರುಕೊಟ್ಟು ಕೈತೊಳೆದುಕೊಳ್ಳುತ್ತಿದ್ದ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್‍ಗಳ ಮಧ್ಯೆ ಸದ್ದಿಲ್ಲದೆ ಚಿಗುರೊಡೆದದ್ದು ಹಸಿರುಭೂಮಿ ಪ್ರತಿಷ್ಠಾನ.
ಪರಿಸರದ ಬಗೆಗಿನ ಕಾಳಜಿಯುಳ್ಳ ಪರಿಸರ ಸಂಬಂಧಿ ಚಟುವಟಿಕೆಗಳು, ಬರಹಗಳು, ಹೋರಾಟಗಳನ್ನು ಮಾಡುತ್ತಿದ್ದ ಹಾಸನದ ಸಮಾನ ಮನಸ್ಸುಗಳು 2017ರ ಏಪ್ರಿಲ್‍ನಲ್ಲಿ ಒಂದೆಡೆ ಸೇರಿ, ನೀರಿನ ಬಗೆಯ ಅಧ್ಯಯನದೊಂದಿಗೆ, ಬರದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ಮುಂದಡಿ ಇಟ್ಟವರು. ಅಮೀರ್‍ಖಾನ್ ಮಹಾರಾಷ್ಟ್ರದಲ್ಲಿ ಬರದ ವಿರುದ್ಧ ಪಾನೀ ಫೌಂಡೇಶನ್ ಮೂಲಕ ನಡೆಸುತ್ತಿರುವ ಕೆಲಸಗಳ ಸಾಕ್ಷ್ಯಚಿತ್ರ ‘ದಿ ಬ್ಯಾಟಲ್ ಎಗೆನೆಸ್ಟ್ ಡ್ರಾಟ್’ ವೀಕ್ಷಿಸಿ, ನಂತರ ನಡೆಸಿದ ಚರ್ಚೆ ಅಲ್ಲಿ ನೆರೆದಿದ್ದ ಸಾಹಿತಿಗಳು, ಹೋರಾಟಗಾರರು, ಅಧಿಕಾರಿಗಳು, ಪತ್ರಕರ್ತರು, ಪರಿಸರಪ್ರೇಮಿಗಳು, ಕಲಾವಿದರಲ್ಲಿ ಕ್ರಿಯಾಶೀಲತೆಯಿಂದ ನೀರಿನ ಕೆಲಸದಲ್ಲಿ ತೊಡಗಲು ‘ಹಸಿರುಭೂಮಿ ಪ್ರತಿಸ್ಠಾನ’ವನ್ನು ಸ್ಥಾಪಿಸುವಂತೆ ಮಾಡಿತು.
ಪರಿಸರ ಮತ್ತು ಅಂತರ್ಜಲದ ಬಗೆಗೆ ನಾಡಿನ ಖ್ಯಾತ ಜಲ ಮತ್ತು ಅಂತರ್ಜಲ ತಜ್ಞರ ಮೂಲಕ ತರಬೇತಿ ಪಡೆದ ಹಸಿರುಭೂಮಿ ಪ್ರತಿಸ್ಠಾನದ ತಂಡ, ಆನಂತರ ಹೂಳು ತುಂಬಿ ಬತ್ತಿಹೋದ ಕೆರೆಗಳಲ್ಲಿ ಅಂತರ್ಜಲ ಹುಡುಕಿ ಕೆರೆ-ಕಲ್ಯಾಣಿಗಳಲ್ಲಿ ಹೂಳೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಈಗ ಇತಿಹಾಸ. 2017ರ ಮೇ 1ರ ಕಾರ್ಮಿಕ ದಿನದಂದು ಹಾಸನ ತಾಲ್ಲೂಕಿನ ದೊಡ್ಡಕೊಂಡಗುಳ ಗ್ರಾಮದಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಂಡು ಹೋಯ್ಸಳರ ಕಾಲದ 2 ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸುವ ಕೆಲಸವನ್ನು ಆರಂಭಿಸಿತು. ಹೂಳು ತುಂಬಿದ್ದ ಕಲ್ಯಾಣಿಗಳ ತಳಮಟ್ಟಕ್ಕೆ ಹೂಳು ತೆಗೆಯುತ್ತಿದ್ದಂತೆ ಜಲಚಿಲುಮೆ ಪಸರಿಸಿತು. ಆನಂತರ ಅದೇ ಊರಿನ ಕೆರೆಯನ್ನೂ ದಾನಿಗಳ ನೆರವಿನಿಂದ ಸುಮಾರು 6 ಲಕ್ಷ ಹಣವನ್ನು ವಿನಿಯೋಗಿಸಿ 20 ದಿನಗಳಲ್ಲಿ ಯಮತ್ರಗಳ ನೆರವಿನಿಂದ ಪುನಶ್ಚೇತನಗೊಳಿಸಿ ದಾಖಲೆ ಬರೆಯಿತು. ಆರಂಭದ ಮೊದಲನೆಯ ಪ್ರಯೋಗ ಯಶಸ್ಸು ಕಂಡ ಹುಮ್ಮಸ್ಸಿನಲ್ಲಿ ಮುನ್ನಡೆದ ತಂಡ ಹಾಸನ, ಚನ್ನರಾಯಪಟ್ಟಣ, ಅರಕಲಗೂಡು, ಬೇಲೂರು ತಾಲ್ಲೂಕುಗಳ ಹಲವಾರು ಹಳ್ಳಿಗಳಲ್ಲಿ ಸ್ಥಳೀಯರ ನೆರವಿನೊಂದಿಗೆ ತಂಡ ಕಟ್ಟಿ, ಜಲದ ಜಾಡನ್ನು ಹಿಡಿದು 35ಕ್ಕೂ ಹೆಚ್ಚಿನ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಿತು. ಹಾಗೂ ದಾನಿಗಳು, ಖಾಸಗಿ ಸಂಸ್ಥೆಗಳ ಸಾಮಾಜಿಕ ನಿಧಿಯ ನೆರವಿನೊಂದಿಗೆ 5ಕೆರೆಗಳನ್ನು 10ಅಡಿಗಳಷ್ಟು ಆಳಕ್ಕೆ ಹೂಳು ತೆಗೆದು ಪುನಶ್ಚೇತನಗೊಳಿಸುವಲ್ಲಿ ಹಸಿರುಭೂಮಿ ಪ್ರತಿಸ್ಠಾನ ಯಶಸ್ಸು ಕಂಡಿದೆ.
ಮೊದಲ ಯಶಸ್ಸು ಕಂಡ ದೊಡ್ಡಕೊಂಡಗುಳ ಕೆರೆಗೆ ನೀರು ಭರ್ತಿಯಾಗಿ ಸುತ್ತಮುತ್ತಲಿನ ಜಮೀನಿಗೆ, ಜಲಚರಗಳಿಗೆ, ಪ್ರಾಣಿ ಪಕ್ಷಿಗಳಿಗೆ, ಜನಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆಯನ್ನು ನೀಗಿಸಿದೆ. ಅಲ್ಲದೆ ತೆರೆದ ಬಾವಿಗಳು, ಕೊಳವೆಬಾವಿಗಳು ಅಂತರ್ಜಲ ವೃದ್ಧಿಸಿದ ಕಾರಣ ಭರ್ತಿಯಾಗಿವೆ. ಪ್ರತಿಷ್ಠಾನವು ಹಲವು ಗ್ರಾವiಗಳಲ್ಲಿ ಗ್ರಾಮ ಸ್ವರಾಜ್ ಸಮಿತಿಯನ್ನು ರಚನೆ ಮಾಡಿ ಇಂತಹ ಕೆಲಸಗಳಲ್ಲಿ ತೊಡಗಿಸಲು ಶ್ರಮಿಸುತ್ತಿದೆ. ದೊಡ್ಡಕೊಂಡಗುಳ ಗ್ರಾಮಸ್ವರಾಜ್ ಸಮಿತಿಯು ಹೋದ ವರ್ಷ ಕೆರೆಗೆ 15000 ಮೀನಿನ ಮರಿಗಳನ್ನು ಬಿಟ್ಟಿದ್ದು, ಕೆರೆಯನ್ನು ಸ್ವಚ್ಛವಾಗಿಸಿ, ಮೀನುಗಳ ಪೋಷಣೆ ಮಾಡಿದ್ದರ ಫಲವಾಗಿ ಮೀನುಗಳು ಅಭಿವೃದ್ಧಿಗೊಂಡು ಕಳೆದ ತಿಂಗಳು ಈ ಕೆರೆಯಲ್ಲಿ ಮೀನಗಳನ್ನು ಹಿಡಿದು ಕನಿಷ್ಠ ಬೆಲೆಗೆ ಮಾರಾಟ ಮಾಡಿದ್ದು ಒಂದು ಸಂತೋಷದ ವಿಚಾರ. ಈಗ 350 ಕೆ.ಜಿ ಇಂದ 35000 ರೂ ಆದಾಯ ತೊರೆತಿದೆ. ಮುಂದೆ ಒಂದೂವರೆ ಲಕ್ಷ ಆದಾಯದ ನಿರೀಕ್ಷೆಯಿದೆ. ಈ ಹಣವನ್ನು ಸಮಿತಿಯವರು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಬಳೆಸಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಸಮಿತಿಯು ಪ್ರತಿಷ್ಠಾನದೊಂದಿಗೆ ಕೈ ಜೋಡಿಸಿ ಶಾಲಾವರಣ, ಕೆರೆಯ ಸುತ್ತಮುತ್ತ, ಗುಂಡುತೋಪಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದು ಇದೂ ಕೂಡ ಗ್ರಾಮಕ್ಕೆ ಆದಾಯದ ಮೂಲವಾಗಿದ್ದು ಗ್ರಾಮವು ಸ್ವಾವಲಂಬಿ ಹಾಗೂ ಮಾದರಿ ಗ್ರಾವiವಾಗಿ ಪರಿವರ್ತನೆಗೊಳ್ಳಲು ಹಸಿರುಭೂಮಿ ಪ್ರತಿಷ್ಠಾನ ಅಹರ್ನಿಶಿ ಶ್ರಮಿಸುತ್ತಿದೆ.
ಹಾಸನದ ಉಪವಿಭಾಗಾಧಿಕಾರಿಗಳಾದ ಡಾ. ಎಚ್.ಎಲ್.ನಾಗರಾಜ್, ಚಿಂತಕರಾದ ರೂಪ ಹಾಸನ, ಪತ್ರಕರ್ತರಾದ ಆರ್.ಪಿ.ವೆಂಕಟೇಶಮೂರ್ತಿ, ಪರಿಸರಪ್ರಿಯ ಚ.ನಾ.ಅಶೋಕ್, ಇಂಜಿನಿಯರ್ ಸುಬ್ಬಸ್ವಾಮಿ, ವೆಂಕಟೇಗೌಡ, ದಾನಿಗಳಾದ ಡಾ.ಸಾವಿತ್ರಿ, ನಿವೃತ್ತ ಉಪನ್ಯಾಸಕರಾದ ಶಿವಶಂಕರಪ್ಪ, ಅಪ್ಪಾಜಿಗೌಡ, ಹಿರಿಯರಾದ ಪುಟ್ಟಯ್ಯ, ಸದ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೀವೇಗೌಡ, ಅಹರ್ನಿಶಿ ಪ್ರತಿಷ್ಠಾನದ ಕೆಲಸದಲ್ಲಿ ತೊಡಗಿರುವ ಡಾ.ಮಂಜುನಾಥ್, ಮಂಜುನಾಥ್ ಮೋರೆ, ಅಹಮದ್, ಸೌಭಾಗ್ಯ, ಬಿ.ಎಸ್.ದೇಸಾಯಿ, ತಿಮ್ಮೇಶ್‍ಪ್ರಭು, ಚಿನ್ನೇನಹಳ್ಳಿಸ್ವಾಮಿ, ಎಸ್.ಎಸ್.ಪಾಷಾ, ಪ್ರಸನ್ನ….. ಹೀಗೆ ಹಲವು ಪ್ರಜ್ಞಾವಂತ ಸದಸ್ಯರು ತಮ್ಮ ಉಳಿದೆಲ್ಲ ಕಾರ್ಯಗಳು, ಭಾಷಣಗಳನ್ನು ಬಿಟ್ಟು ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರ ಫಲವಾಗಿ ಇಂದು ಹಾಸನ ಜಿಲ್ಲೆಯ ಕೆಲವು ಹಳ್ಳಿಗಳು ಬರದ ಮಧ್ಯೆಯೂ ಜೀವಂತವಾಗಿ ಉಸಿರಾಡಲು ಸಾಧ್ಯವಾಗಿದೆ. ಇಂತಹ ಸ್ಫೂರ್ತಿ ನಾಡಿನ ಉದ್ದಕ್ಕೂ ಹಬ್ಬಲಿ, ರೈತರ ಬದುಕು ಹಸನಾಗಲಿ ಎಂಬುದು ನಮ್ಮ ಹಾರೈಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...