Homeಸಾಮಾಜಿಕಈ ನೆಲದ ಶೋಷಿತರು ಕಲಿಯಬೇಕಾದದ್ದು ಸಾಕಷ್ಟಿದೆ 

ಈ ನೆಲದ ಶೋಷಿತರು ಕಲಿಯಬೇಕಾದದ್ದು ಸಾಕಷ್ಟಿದೆ 

- Advertisement -
ನಗರಗೆರೆ ರಮೇಶ್ |
ಈ ಸಂಭಾಷಣೆಯ ತುಣುಕುಗಳನ್ನು ಗಮನಿಸಿ:
1) ನಮ್ಮ ಮನೆಯ ಮುಂದೆ ನಮ್ಮ ಬೀದಿಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದ ಗುಂಪು. ಅದರ ನಾಯಕ ಕೆಲವು ವರ್ಷಗಳ ಹಿಂದೆ ಜೆಡಿಎಸ್‍ನಲ್ಲಿದ್ದು ನಂತರ ಬಿಜೆಪಿ ಸೇರಿ ತನ್ನ ಪತ್ನಿಯನ್ನು ವಾರ್ಡಿನ ಕಾರ್ಪೊರೇಟರ್ ಆಗಿಸಿದ ಒಬ್ಬ ಪುಢಾರಿ.
`ನಮಸ್ಕಾರ ಸಾರ್!’
`ನಮಸ್ಕಾರ?’
ಕರಪತ್ರವನ್ನು ನನ್ನ ಕೈಗೆ ಕೊಡುತ್ತಾ, `ಈ ಬಾರಿ ಬಿಜೆಪಿಗೆ ಓಟ್ ಹಾಕಬೇಕು ಸಾರ್. ಈ ಏರಿಯಾದವರೆಲ್ಲಾ ನಮಗೇ ಓಟ್ ಹಾಕ್ತಾ ಇದಾರೆ.’
`ಆಯ್ತು, ಹಾಕೋಣ. ಆದ್ರೆ ಬಿಜೆಪಿಗೆ ಯಾಕೆ ಓಟ್ ಹಾಕಬೇಕು?’
`ನಮ್ಮ ಹಿಂದೂ ಧರ್ಮಕ್ಕೋಸ್ಕರ.’
`ಹಿಂದೂ ಧರ್ಮಕ್ಕೆ ಈಗ ಏನಾಗಿದೆ.’
`ಏನ್ಸಾರ್ ಹೀಗೆ ಹೇಳ್ತೀರ? ಅವರು ನೋಡಿ ಎಲ್ಲಾ ಕಡೆ ಹೇಗೆ ಬೆಳೀತಾ ಇದಾರೆ!’
`ಏನು, ಈ ದೇಶದಲ್ಲಿ ಬರೀ ಹಿಂದೂಗಳು ಮಾತ್ರ ಇರಬೇಕಾ? ನಿಮ್ಮ ಪಾಡಿಗೆ ನೀವು ಪೂಜೆ ಮಾಡಿ. ಅವರು ನಮಾಜೋ, ಮತ್ತೊಂದೋ ಮಾಡ್ಕೋತಾರೆ. ನಿಮಗೇನು ಕಷ್ಟ?’
`ಆದ್ರೂ, ನಾವು ಹುಷಾರಾಗಿರಬೇಕು ಅಲ್ವಾ ಸಾರ್! ದೇವೇಗೌಡ್ರು ನೋಡಿ, ಒಂದು ಸಲ ಹೇಳಿದ್ರು: ಮುಂದಿನ ಜನ್ಮ ಅನ್ನೋದಿದ್ರೆ ನಾನು ಮುಸ್ಲಿಮರ ಮನೇಲಿ ಹುಟ್ಟೋಕೆ ಬಯಸ್ತೀನಿ ಅಂತ.’
`ನೋಡ್ರಿ! ಕೆಲವು ವರ್ಷಗಳ ಹಿಂದೆ ನೀವು ಅವರ ಜತೆಯಲ್ಲಿದ್ರಿ. ಈಗ ಈ ರೀತಿ ಮಾತಾಡ್ತಾ ಇದೀರಲ್ರೀ! ಅಷ್ಟೇ ಅಲ್ಲದೆ ಒಂದು ಧರ್ಮದ ಹೆಸರಿನಲ್ಲಿ ಮತ ಕೇಳೋದು ತಪ್ಪು ಅಂತ ನಿಮಗೆ ಗೊತ್ತಿಲ್ವಾ?’
“ಅದು ಬಿಡಿ ಸಾರ್. ನಾವು ಅಭಿವೃದ್ಧಿ ಮಾಡ್ತಾ ಇದೀವಿ. ರೋಡುಗಳಿಗೆ ಟಾರ್ ಹಾಕಿಸ್ತಾ ಇದೀವಿ.”
“ಹೌದಾ! ಸ್ವಲ್ಪ ನಮ್ಮ ಬೀದಿ ಕಡೆ ನೋಡಿ. ಇಲ್ಲಿ ಟಾರ್ ಹಾಕಿ ಅದೆಷ್ಟೋ ಕಾಲ ಆಗ್ಹೋಗಿದೆ. ಇದು ಅಭಿವೃದ್ಧಿನಾ?”
“ನಿಮ್ಮಿಷ್ಟ ಸಾರ್, ಯಾರಿಗಾದ್ರೂ ಹಾಕ್ಕೊಳ್ಳಿ.”
ಎಂದ ಆ ವ್ಯಕ್ತಿ ಮತ್ತೊಂದು ಬಾರಿ ನಮಸ್ಕರಿಸಿ ತನ್ನ ಹಿಂಬಾಲಕರ ಜತೆ ಓಟ ಕಿತ್ತ.
* * * *
2) ದೂರವಾಣಿ ಸಂಭಾಷಣೆ:
“ನಮಸ್ಕಾರ ಸಾರ್! ರಮೇಶ್ ಅವರಾ?”
“ಹೌದು, ನೀವೂ?”
“ನಾನು ಈ ಏರಿಯಾದ ಬ್ರಾಹ್ಮಣ ಸಂಘದಿಂದ ಮಾತಾಡ್ತಾ ಇದೀನಿ ಈ ಬಾರಿ ಎಲೆಕ್ಷನ್‍ನಲ್ಲಿ ಬ್ರಾಹ್ಮಣರೆಲ್ಲಾ ಬಿಜೆಪಿಗೆ ಓಟು ಹಾಕಬೇಕು.”
“ನಾನು ಆ ರೀತಿ ಯೋಚನೆ ಮಾಡೋನಲ್ಲ. ನೇರವಾಗಿ ಹೇಳ್ತೀನಿ ಕೇಳಿ. ನಾನು ಬಿಜೆಪಿ ವಿರೋಧಿ.”
“ತುಂಬಾ ಬೇಜಾರಾಯ್ತು ಸಾರ್, ನಿಮ್ಮ ಮಾತು ಕೇಳಿ!”
“ಯಾಕೆ?”
“ನಾನು ಬಿಜೆಪಿ, ಅರ್‍ಎಸ್‍ಎಸ್. ನೀವು ಬಿಜೆಪಿನ ವಿರೋಧಿಸ್ತೀನಿ ಅಂದ್ರಿ. ಅದಕ್ಕೇ ಬೇಜಾರು.”
“ನಾನೇನೂ ಮಾಡೋಕಾಗಲ್ಲ”
* * * *
3) ಅಂಗಡಿಯೊಂದರಲ್ಲಿ ಒಬ್ಬ ಮಹಿಳೆ:
ಅಂಗಡಿಯವನನ್ನುದ್ದೇಶಿಸಿ: “ ನಾಳೆ ಎಲೆಕ್ಷನ್ ಅಲ್ವಾ! ಬಿಜೆಪಿಗೆ ಹಾಕ್ತಿರಿ ತಾನೇ!”
“ಹಾಕ್ಲೇ ಬೇಕಾಲ್ಲಾ ಇಲ್ದಿದ್ರೆ ನಾವು ಉಳಿಯೋದು ಹೇಗೆ?”
ಮಹಿಳೆ ಈಗ ನನ್ನನ್ನುದ್ದೇಶಿಸಿ;
“ಇಲ್ಲೆಲ್ಲಾ ಬಿಜೆಪಿಗೇ ಓಟು ಸಾರ್, ನೀವೇನಂತೀರಾ ಸಾರ್?”
“ಬಿಜೆಪಿಗೆ ಯಾಕೆ ಓಟು ಹಾಕಬೇಕಮ್ಮಾ?”
“ಯಾಕೆ ಸಾರ್? ಮೋದಿ ನೋಡಿ. ಪ್ರಪಂಚದಲ್ಲೆಲ್ಲಾ ಜನ ನಮ್ಮ ದೇಶನಾ ಗಮನಿಸೋತರ ಮಾಡಿದಾನೆ.”
“ಅಂದ್ರೆ ಅದಕ್ಕೆ ಮೊದಲು ಯಾರಿಗೂ ನಮ್ಮ ದೇಶದ ಬಗ್ಗೆ ಗೊತ್ತೇ ಇರಲಿಲ್ವಾ? ಗಾಂಧಿ, ನೆಹರೂ ಎಲ್ಲಾ ಇದ್ರಲ್ಲಾ!”
“ಇದ್ರು ಸಾರ್. ಆದ್ರೆ ಈಗ ಮೋದಿ ನಮ್ಮನ್ನ ಹೆಚ್ಚು ಫೇಮಸ್ ಮಾಡಿದಾನೆ”
“ಗಾಂಧಿನ ಕೊಂದ ಗುಂಪಿಗೆ ಸೇರಿದ ಮೋದಿಗೂ, ಇವರಿಗೂ ಹೋಲಿಕೆ ಇದೆಯೇನಮ್ಮಾ!”
“ಏನೋ ಸಾರ್! ಇಲ್ಲಿನ ಬ್ರಾಹ್ಮಣರಂತೂ ಎಲ್ಲಾ ಬಿಜೆಪಿನೇ. ಇಲ್ದೇ ಇದ್ರೆ ಇನ್ನು ಮುಂದೆ ಸಾಬರು ನಮ್ಮ ಮನೆಗಳಿಗೇ ನುಗ್ಗಿ ನಮಾಜ್ ಮಾಡ್ತಾರಷ್ಟೇ!”
“ನೋಡೀಮ್ಮಾ. ನಿಮಗಿಷ್ಟ ಆದ್ರೆ ಬಿಜೆಪಿಗೆ ಓಟು ಹಾಕ್ಕೋಳ್ಳಿ. ಆದರೆ, ಇಂಥ ಸುಳ್ಳುಗಳನ್ನು ತಲೀಲಿ ತುಂಬಿಕೊಂಡಿರಬೇಡಿ.”
ಮೇಲಿನ ಸಂಭಾಷಣೆಗಳ ತುಣುಕುಗಳು ಕಲ್ಪನೆಯಲ್ಲ. ಅವು ನನ್ನ ಮತ್ತು ಆ ಮೂವರು ವ್ಯಕ್ತಿಗಳ ನಡುವೆ ನಡೆದ ಮಾತುಗಳು.
ಸಂಘ ಪರಿವಾರದ ರಾಜಕೀಯ ಘಟಕವಾದ ಬಿಜೆಪಿಯ ಬೆಂಬಲದ ಮೂಲ (Support Base) ಪ್ರಮುಖವಾಗಿ ಯಾವುದು ಮತ್ತು ಆ ಬೆಂಬಲದ ಹಿಂದಿನ ಪ್ರಧಾನ ಕಾರಣಗಳು ಯಾವು ಅನ್ನುವುದು ಅವರುಗಳ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ದೇಶದ ಪ್ರಧಾನ ಸೇವಕ ಮತ್ತೆ ಮತ್ತೆ ಕೂಗಿಕೊಂಡರೂ, ಅದು ಎಷ್ಟು ಪೊಳ್ಳು ಎನ್ನುವುದು ಆತನಿಗೂ ಮತ್ತು ಆತನ ಆರಾಧಕರಿಗೂ ಗೊತ್ತು. ಬಿಜೆಪಿಯ ಹಲವರು ನಾಯಕರು, ಮಂತ್ರಿಗಳೂ ಸೇರಿದಂತೆ ನಿರ್ಭಿಡೆಯಿಂದ ಇಲ್ಲಿನ ಮುಸಲ್ಮಾನರ ವಿರುದ್ಧ ಕೆಂಡ ಕಾರುವುದನ್ನು, ಅದಕ್ಕೆ ಆಪ್ರಧಾನ ಸೇವಕ ಅಡ್ಡಿಪಡಿಸಿರುವುದನ್ನು ಕಂಡ ಯಾರಿಗಾದರೂ ಅವರೆಲ್ಲರೂ ತಮ್ಮ ಗುರೂಜಿಯ ‘ಚಿಂತನಗಂಗಾ’ದ ವಿಚಾರಧಾರೆಗೇ ಜೋತು ಬಿದ್ದಿರುವುದು ಸ್ಪಷ್ಟವಾಗಬೇಕು.
ಇನ್ನೂ ಬ್ರಾಹ್ಮಣರೆಲ್ಲಾ ಬಿಜೆಪಿಗೆ ಮತ ನೀಡಬೇಕು ಎನ್ನುವ ಮಾತಂತೂ ಆ ಪಕ್ಷ ತೋರಿಕೆಗಾಗಿಯಾದರೂ ಎಷ್ಟೇ ಹೆಣಗಿದರೂ ‘ಬ್ರಾಹ್ಮಣರ ಪಕ್ಷ’ ಎನ್ನುವ ಹಣೆ ಪಟ್ಟಿಯಿಂದ ದೂರಬರುವುದಂತೂ ಸಾಧ್ಯವೇ ಇಲ್ಲ. ಬ್ರಾಹ್ಮಣರೆನಿಸಿಕೊಂಡವರು ಒಂದು ಕಡೆ ಸೇರಿದಾಗ ವ್ಯಕ್ತವಾಗುವ ಅಭಿಪ್ರಾಯ ಅದು. ಯಾರಾದರೂ ಆ ಮಾತನ್ನು ಒಪ್ಪದಿದ್ದರೆ, ‘ತಲೆಕೆಟ್ಟವ’ ಎನ್ನುವ ಬಿರುದಿಗೆ ಸಿದ್ಧವಾಗಿರಬೇಕು. ಆದರೆ ಅಂಥವರಿಂದ ಬ್ರಾಹ್ಮಣರ ಬಿಜೆಪಿ ಒಲವಿಗೆ ಧಕ್ಕೆಯಾಗದು.
ಬಿಜೆಪಿ ನಮ್ಮ ದೇಶಕ್ಕೆ ಏನೋ ತಂದು ಕೊಡುತ್ತದೆ, ಅಭಿವೃದ್ಧಿ ಪಥದಲ್ಲಿ ನಡೆಸುತ್ತದೆ ಎಂದು ನಂಬುವ, ನಂಬಿದಂತೆ ನಟಿಸುತ್ತಿರುವ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ಕಲಿಯಬೇಕಾದದ್ದು ಸಾಕಷ್ಟಿದೆ. ಈ ಮಾತನ್ನು ಹೇಳಲು ಮುಖ್ಯ ಕಾರಣವೆಂದರೆ ಎಷ್ಟೇ ನಿದರ್ಶನಗಳು ನಮ್ಮ ಮುಂದಿದ್ದರೂ ಈಗಲೂ ಹಿಂದುಳಿದ ಜಾತಿಗಳ, ದಲಿತರ, ಸ್ವಲ್ಪಮಟ್ಟಿಗೆ ಅಲ್ಪಸಂಖ್ಯಾಂತರ ಬೆಂಬಲ ಬಿಜೆಪಿಗೆ ದೊರೆತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಕಂಡುಬಂದಿದೆ. ಇನ್ನು ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ(ವೀರಶೈವರೂ ಸೇರಿ)ರ ಬಲವಂತೂ ಬಿಜೆಪಿಯ ಕಡೆಗೇ ಇದೆ ಎನ್ನುವುದಂತೂ ಸೂರ್ಯ ಸ್ಪಷ್ಟೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಿಗಬೇಕೆಂಬ ಒತ್ತಾಯದ ನಡುವೆಯೂ, ಅವರ ಬಿಜೆಪಿ ಪ್ರೇಮ ಕುಂಠಿತಗೊಂಡಿಲ್ಲ. ಅಲ್ಪಸಂಖ್ಯಾತ ಹಣೆಪಟ್ಟಿಯೂ ಬೇಕು, ನಮ್ಮವನೇ ಮುಖ್ಯಮಂತ್ರಿಯೂ ಆಗಬೇಕು ಎನ್ನುವ ಧೋರಣೆ ಅವರದು.
ಪ್ರತಿದಿನವೂ ನಡೆಯುತ್ತಿರುವ ತಂತ್ರ-ಪ್ರತಿತಂತ್ರಗಳನ್ನು ಗಮನಿಸಿದರೆ ನಮ್ಮಾ ಸಮಾಜ ಪ್ರಜಾ ತಾಂತ್ರಿಕತೆ ಎಂದರೆ ಏನು ಎನ್ನುವುದರ ಬಗ್ಗೆ ಇನ್ನೂ ಪ್ರಾಥಮಿಕ ಪಾಠಗಳೇ ಕಲಿತಿಲ್ಲ ಎನ್ನುವುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ಜನರು ಮತ್ತು ಅವರಿಂದ ಆರಿಸಿಬಂದ ಜನಪ್ರತಿನಿಧಿಗಳು, ಅವರ ನಾಯಕರುಗಳು ಯಾರಿಗೂ ಪ್ರಜಾತಂತ್ರ, ಸಂವಿಧಾನ ಇವು ಯಾವುದರ ಬಗ್ಗೆಯೂ ಕಿಂಚಿತ್ತೂ ಕಾಳಜಿ ಇಲ್ಲ. ಅವೆಲ್ಲವೂ ಕೇವಲ ಜನರನ್ನು ಮರಳು ಮಾಡಲು ಬಳಸುವ ಪದಗಳು ಆ ವಿಷಯ ಜನರಿಗೂ ಗೊತ್ತು.
ಇಂಥ ಸನ್ನಿವೇಶದಲ್ಲಿಯೇ ಪ್ರಗತಿಪರವಾಗಿ, ಮೌಲ್ಯಗಳ ಬಗ್ಗೆ, ಅವುಗಳ ನಾಶದ ಬಗ್ಗೆ ಗಮನ ಹರಿಸುವವರ ಜವಾಬ್ಧಾರಿ ಇನ್ನೂ ಹೆಚ್ಚು. ಬಹಳ ಬೇಗ ಸಿನಿಕತನಕ್ಕೆ ನಮ್ಮನ್ನುದೂಡುವ ಇಂಥ ಬೆಳವಣಿಗೆಗಳನ್ನು ಅರ್ಥಮಾಡಿಕೊಂಡು ಸಮಾಜವನ್ನು ಸರಿಯಾದ ಮಾರ್ಗದ ಕಡೆ ಕರೆದೊಯ್ಯುವ ಪ್ರಯತ್ನಗಳು ನಡೆದರೆ ದೇಶಕ್ಕೆ ಸದ್ಗತಿ ಇಲ್ಲವೇ ದುರ್ಗತಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...