Homeರಾಜಕೀಯಫಲಿತಾಂಶ 2018: ಒಂದು ಪೊಲಿಟಿಕಲ್ ಪೋಸ್ಟ್ ಮಾರ್ಟಂ

ಫಲಿತಾಂಶ 2018: ಒಂದು ಪೊಲಿಟಿಕಲ್ ಪೋಸ್ಟ್ ಮಾರ್ಟಂ

- Advertisement -
- Advertisement -

ಸು-NIL |

2018 ರ ಚುನಾವಣೆ ಫಲಿತಾಂಶ ಅತಂತ್ರವಾಗುತ್ತಿದ್ದಂತೆಯೇ ತಂತ್ರ-ಕುತಂತ್ರಗಳು ಆರಂಭವಾಗಿವೆ. ಬಿಜೆಪಿ ಡೆಮಾಕ್ರಸಿಯನ್ನು ಹರಿದು ಮುಕ್ಕುವ ರಭಸಕ್ಕೆ ಬೆದರಿದ ಕಾಂಗ್ರೆಸ್, ಜೆಡಿಎಸ್ ಪಾರ್ಟಿಗಳು ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ರೆಸಾರ್ಟ್ ರಾಜಕಾರಣದ ಮೊರೆ ಹೋಗಬೇಕಾಗಿ ಬಂದಿದೆ. ಇತ್ತ ಕುದುರೆ ವ್ಯಾಪಾರಕ್ಕೆ ಬೇಕಾದ ವೇದಿಕೆಯನ್ನು ಬಿಜೆಪಿ ಸಜ್ಜುಗೊಳಿಸಿಕೊಳ್ಳುತ್ತಿದೆ. ಕೇಸರಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಅಖಾಡಕ್ಕೆ ಇಳಿದಾಗಿದೆ. ಪ್ರಧಾನ ಮಂತ್ರಿ ಸ್ಥಾನವನ್ನೇ ಕೆಳ ಮಟ್ಟಕ್ಕೆ ಇಳಿಸಿಕೊಂಡಿರುವ, ಸುಳ್ಳುಗಳನ್ನೇ ಸತ್ಯವೆಂದು ನಂಬಿಸುವ ಜಾದುಗಾರ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ತೊಡೆ ತಟ್ಟಿದ್ದಾರೆ.

ಜನರಿಂದ ಜನರಿಗೋಸ್ಕರ ಜನರೇ ಸೇರಿ ಕೊಳ್ಳೆ ಹೊಡೆಯುವ ಪ್ರಜಾಪ್ರಭುತ್ವದಲ್ಲಿ ನಡೆಯುವುದು ನಂಬರ್ ಗೇಮ್ ಆದ್ರೂ ಸಹ ಸಾಂವಿಧಾನಿಕ ಸ್ಥಾನಗಳಾದ ರಾಜಭವನದ ಮೂಲಕ ಅಧಿಕಾರ ಪಡೆಯುವ ಹುನ್ನಾರ ಭಾರತೀಯ ಜನತಾ ಪಕ್ಷದ್ದಾಗಿದೆ. ತಳ ಸಮುದಾಯದ, ಬಹುಜನರ ಹಿತ ಕಾಯಲು ಹೊರಟ ಸಿದ್ದರಾಮಯ್ಯ ಇನ್ನಿಲ್ಲದಂತೆ ನೆಲಕಚ್ಚಿದ್ದಾರೆ. ಅಹಿಂದದ ತಳ ಸಮುದಾಯದ ಮತ್ತು ಅಲ್ಪಸಂಖ್ಯಾತರನ್ನು ಉದ್ಧಾರ ಮಾಡುತ್ತೇನೆಂಬ ಧಾವಂತದಲ್ಲಿ ವಾಸ್ತವಿಕ ಸಂತುಲನೆಯನ್ನು ಕಳೆದುಕೊಂಡು ಚುನಾವಣೆ ಗೆಲ್ಲಲಾಗುವುದಿಲ್ಲ ಎಂಬ ಕಟು ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದ ಸಿದ್ದರಾಮಯ್ಯ ಜಾರಿಗೆ ತಂದ ಅನ್ನಭಾಗ್ಯ ಅವರ ಕೈ ಹಿಡಿಯಲಿಲ್ಲ, ಜನಪ್ರಿಯ ಇಂದಿರಾ ಕ್ಯಾಂಟೀನ್, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಮತ್ತು ಕನ್ನಡದ ಅಸ್ಮಿತೆ ಯಾವುದೂ ಕೂಡ ಅಹಿಂದ ನಾಯಕನನ್ನು ಕೈ ಹಿಡಿಯಲಿಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಅಧಿಕಾರ ತಂದುಕೊಡಲಿಲ್ಲ. ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದ್ದು 2018ರ ಚುನಾವಣೆಯಲ್ಲಿ ಕೋಮು ಶಕ್ತಿಗಳನ್ನು ಹಿಂದಿಕ್ಕುವಲ್ಲಿ ಕನ್ನಡ ನಾಡು ಸಂಪೂರ್ಣ ವಿಫಲವಾಗಿದೆ. `ಭಾಗ್ಯ’ಗಳನ್ನು ನಂಬಿಕೊಂಡು ಅತಿ ಆತ್ಮವಿಶ್ವಾಸದಲ್ಲಿ ಹೊರಟಿದ್ದ ಕಾಂಗ್ರೆಸ್ ಗಾಡಿ ಹಳಿ ತಪ್ಪಿದ್ದೆಲ್ಲಿ ಅಂತ ನೋಡಲು ಹೊರಟರೆ ಕಾಣುವ ಸಂಗತಿಗಳು ಇಲ್ಲಿವೆ.

ಕರಾವಳಿ ಕರ್ನಾಟಕ

ಅಭಯ್ ಚಂದ್ರ ಜೈನ್

2013ರಲ್ಲಿ ಬಲಪಂಥೀಯ ಕೋಮುವಾದದ ಪ್ರಯೋಗ ಶಾಲೆಯಾದ ಕರಾವಳಿಯಲ್ಲಿ, ಹದಿಮೂರು ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಈಗ ಕೇವಲ ಮೂರು ಸ್ಥಾನಗಳಿಗೆ ಕುಸಿದಿದೆ. ಎಲ್ಲಾ ಸಮೀಕ್ಷೆಗಳಲ್ಲಿ ಮುಂದಿದ್ದ ಹಲವು ನಾಯಕರು ಹೇಳಹೆಸರಿಲ್ಲದೇ ಕೊಚ್ಚಿಹೋಗಿದ್ದಾರೆ. ದುರ್ಬಲ ಅಭ್ಯರ್ಥಿಗಳ ಎದುರು ಖಾದರ್ ಬಿಟ್ಟರೆ ಉಳಿದ ಘಟಾನುಘಟಿ ಮಂತ್ರಿಗಳು ಮಂಡಿಯೂರಿದ್ದಾರೆ. ಮೇಲ್ವರ್ಗದ ಜನರ ಪೋಲರೈಜೇಶನ್, ಇದನ್ನು ಅರಿಯದ ತಳಸಮುದಾಯ ಅವರ ಸಂಚಿಗೆ ಬಲಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಶಕ್ತಿಶಾಲಿ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಮೊಗವೀರ ಮತ್ತು ಪೂಜಾರ್ ಸಮುದಾಯದ ಸಂಪೂರ್ಣ ಬೆಂಬಲ ಮತ್ತು ಆರೆಸ್ಸೆಸ್‍ನ ಕಾರ್ಯತಂತ್ರ ಜನಪರವಾಗಿರುವ ಅಭಯಚಂದ್ರ ಜೈನ್ ಮೋಹಿನುದ್ದಿನ ಭಾವಾ, ಲೋಬೋ ಮತ್ತು ರಮಾನಾಥ ರೈರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಎಸ್.ಎಸ್.ಮಲ್ಲಿಕಾರ್ಜುನ್

ಮಧ್ಯ ಕರ್ನಾಟಕ
ಈ ಬಾರಿ ಭಾರತೀಯ ಜನತಾ ಪಕ್ಷ ನೂರರ ಗಡಿ ದಾಟಲು ಮಹತ್ವದ ಕೊಡುಗೆ ನೀಡಿದ ಭಾಗವೆಂದರೆ ಅದು ಮಧ್ಯ ಕರ್ನಾಟಕ. 2013ರಲ್ಲಿ ಎರಡು ಸ್ಥಾನಕ್ಕೆ ಕುಸಿದಿದ್ದ ಕೇಸರಿ ಪಕ್ಷ 2018ಕ್ಕೆ 21ಕ್ಕೆ ಲಾಂಗ್‍ಜಂಪ್ ಮಾಡಿದೆ. ಕಾಂಗ್ರೆಸ್ 18ರಿಂದ 7ಕ್ಕೆ ಕುಸಿದರೆ ಜೆಡಿಎಸ್ ಹತ್ತರಿಂದ 4ಕ್ಕೆ ಇಳಿದಿದೆ. ಆಂಜನೇಯ, ಎಸ್.ಎಸ್.ಮಲ್ಲಿಕಾರ್ಜುನ್‍ನಂತಹ ಸಚಿವರುಗಳೇ ಇಲ್ಲಿ ನೆಲ ಕಚ್ಚಿದ್ದಾರೆ. ಕೈ ನಾಯಕರ ದರ್ಪ, ಲಿಂಗಾಯತರ ಪೋಲರೈಜೇಶನ್ ಮತ್ತು ಕೇಸರಿ ಪಕ್ಷಗಳ ಪರ ಮಠಗಳ ವಕಾಲತ್ತು ಜನ ಕೈ ಪಾಳಯದಿಂದ ಕಮಲ ಕಡೆ ಜಾರುವಂತೆ ಮಾಡಿದೆ.

ಹಳೇ ಮೈಸೂರು
ಮುಖ್ಯಮಂತ್ರಿಯವರ ತವರು ಭಾಗದಲ್ಲಿ ಕಾಂಗ್ರೆಸ್‍ಗೆ 2013ಕ್ಕಿಂತ ಹೆಚ್ಚಿನ ಬಲ ಬರಬೇಕಾಗಿತ್ತು. ಆದರೆ ಅದು 24ರಿಂದ 17ಕ್ಕೆ ಕುಸಿತ ಕಂಡಿದೆ. ಇಲ್ಲಿ ಉಪ ಚುನಾವಣೆಯಲ್ಲಿ ಗೆದ್ದ ಎರಡು ಕ್ಷೇತ್ರಗಳು ಸೇರಿದಂತೆ ಮಹದೇವಪ್ಪ, ಜಯಚಂದ್ರ, ಮಂಜುರಂತಹ ಸಚಿವರು ಮಾತ್ರವಲ್ಲದೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನೇ ಸೋತಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರ ಪುತ್ರ ವ್ಯಾಮೋಹ ಒಂದು ಕಾರಣವಾದರೆ, ಕೆಳಜಾತಿಯ ನಾಯಕತ್ವದ ವಿರುದ್ಧ ಕುದಿಯುತ್ತಿರುವ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಗಳು ಒಂದಾದ ಸಮೀಕರಣವೂ ಇನ್ನೊಂದು ಕಾರಣ,

ಮಂಬೈ ಕರ್ನಾಟಕ
ಕರಾವಳಿ ಕೋಮುವಾದದ ಪ್ರಯೋಗಶಾಲೆ, ಆದರೆ ಮುಂಬೈ ಕರ್ನಾಟಕ ಪ್ರಾಂತ್ಯ ಕೇಸರಿ ಪಕ್ಷದ ಭದ್ರಕೋಟೆ. ಲಿಂಗಾಯತರ ಪ್ರಾಬಲ್ಯವಿರುವ ಇಲ್ಲಿ ಕಳೆದ ಬಾರಿ ಕಾಂಗ್ರೆಸ್ 31 ಸ್ಥಾನ ಗೆದ್ದು ಹೊಸ ಅಲೆ ಹುಟ್ಟು ಹಾಕಿತ್ತು. ಈ ಬಾರಿ ಅದು ಕೇವಲ ಹದಿನೇಳಕ್ಕೆ ಕುಸಿತ ಕಂಡಿದೆ. ಬಿಜೆಪಿ ಹದಿಮೂರರಿಂದ ಮೂವತ್ತಕ್ಕೆ ಏರಿಕೆ ಕಂಡಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೊಡೆತ ಕೈ ಪಕ್ಷಕ್ಕೆ ಬಿದ್ದಿದೆ. ಮಹಾದಾಯಿ ವಿಚಾರವನ್ನು ಬಳಸಿಕೊಳ್ಳುವಲ್ಲಿ ಕೈ ನಾಯಕರು ವಿಫಲರಾಗಿದ್ದಾರೆ. ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಠಗಳ ತಟಸ್ಥ ನಿಲುವು ಕೈ ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ. ಪಂಚಪೀಠಗಳ ಬಹಿರಂಗ ಕಾರ್ಯಾಚರಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.

ಹೈದ್ರಾಬಾದ್ ಕರ್ನಾಟಕ
ಕಾಂಗ್ರೆಸ್‍ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಿಂದಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕೈ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿಲ್ಲ. ಕೇವಲ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಆದರೆ ಕೆಜೆಪಿ ಮತ್ತು ಬಿಅಸ್ ಆರ್ ಪಕ್ಷಗಳಿಂದ ಹರಿದು ಹಂಚಿ ಹೋಗಿದ್ದ ಸ್ಥಾನಗಳನ್ನು ಮರಳಿ ಪಡೆದ ಬಿಜೆಪಿ ಪಕ್ಷ ಐದು ಸ್ಥಾನಗಳಿಂದ ಹದಿನೈದಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಇಲ್ಲಿಯೂ ಸಹ ಮೇಲ್ಜಾತಿಗಳ ಒಂದುಗೂಡುವಿಕೆ ಕೆಲಸ ಮಾಡಿದೆ.

ಬೆಂಗಳೂರು ಮಹಾನಗರ
ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಹೆಚ್ಚಿನ ಬಲ ಬಂದಿದ್ದರೆ ಅದು ಮಹಾನಗರದಲ್ಲಿ ಮಾತ್ರ.. ಕಳೆದ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಹದಿಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಕೇವಲ ಇಪ್ಪತ್ತಾರು ಸ್ಥಾನಗಳಲ್ಲಿ ಚುನಾವಣೆ ನಡೆದರೂ ಅದರಲ್ಲಿ ಹದಿಮೂರು ಸ್ಥಾನವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಡಿಮೆ ಪ್ರಮಾಣದ ವೋಟಿಂಗ್ ಸಹ ಕಾಂಗ್ರೆಸ್ ಗೆಲುವನ್ನು ತಡೆಯುವಲ್ಲಿ ವಿಫಲವಾಗಿದೆ. ನಗರದ ಜನರು, ಮಧ್ಯಮ ವರ್ಗದವರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಕೊಡುತ್ತಾರೆ ಎಂಬ ಈವರೆಗಿನ ನಂಬಿಕೆಯನ್ನು ಈ ಇಲೆಕ್ಷನ್ ಸುಳ್ಳು ಮಾಡಿದೆ. ಇಲ್ಲಿ ಭಾರತೀಯ ಜನತಾ ಪಕ್ಷ ಕೇವಲ ಹನ್ನೊಂದು ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಒಟ್ಟಾರೆ ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹೀಗೆ ವಿಶ್ಲೇಷಿಸಬಹುದು. 1. ಕರ್ನಾಟಕ ಸರಕಾರದ ಕಳೆದ ಐದು ವರ್ಷಗಳ ಸಫಲತೆ ಮತ್ತು ವೈಫಲ್ಯಗಳು ಜನರ ಆದ್ಯತೆಯೇ ಆಗಿಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರ ಹಗರಣಗಳಿಲ್ಲದೆ, ಭ್ರಷ್ಟಾಚಾರದ ಪ್ರಕರಣಗಳಿಲ್ಲದೆ, ಜಾರಿ ಮಾಡಿದ ಹಲವು ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನ ಪರಾಮರ್ಶೆ ಮಾಡಲು ಹೋಗಿಲ್ಲ. 2. ದೇಶದ ವರ್ತಮಾನದ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳು ಜನರ ಮೇಲೆ ಯಾವ ಪರಿಣಾಮ ಬೀರಿಲ್ಲ. 3. ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಮನುಷ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ್ದು ಮತ್ತು ಆತ ಜನಪ್ರಿಯನಾಗಿದ್ದು ಹಲವು ಪಾಳೇಗಾರಿ ಮನಸ್ಥಿತಿಯ ಜನಸಮುದಾಯಗಳಿಗೆ ಇರಸುಮುರುಸು ಉಂಟು ಮಾಡಿತ್ತು. 4. ಲಿಂಗಾಯ್ತ ಪ್ರತ್ಯೇಕ ಧರ್ಮ ಮತ್ತು ಒಳಮೀಸಲಾತಿ ವಿಷಯಗಳು ಭೂತಾಕಾರ ತಾಳಿ ಜನರ ಮನಸ್ಸಿನಾಳಕ್ಕಿಳಿದವು. ದಲಿತರನ್ನು, ಶೂದ್ರರನ್ನು ನಾಯಿ ನರಿಗಳಿಗೆ ಹೋಲಿಸದ್ದು, ಮುಸ್ಲಿಮರ ಓಟನ್ನೇ ನಿರಾಕರಿಸಿದ್ದು, ಬೆಂಕಿ ಹಚ್ಚುವ, ದಾಂದಲೆ ಮಾಡುತ್ತೇವೆಂದ ಪಕ್ಷಗಳ ಗುಂಡಾ ವರ್ತನೆಗಳು ಜನರನ್ನು ಒಂದಿಂಚೂ ಕದಲಿಸಲಿಲ್ಲ. 5. ರಾಜ್ಯದ ಎರಡು ಪ್ರಬಲ ಜಾತಿಗಳು, ಮುಖ್ಯಮಂತ್ರಿಯಾದರೆ ಅದು `ನಮ್ಮ’ ಸಮುದಾಯದವರೇ ಆಗಬೇಕು ಎಂದು ಹಠ ಹಿಡಿದವರಂತೆ ಹಳೆಮೈಸೂರು ಮತ್ತು ಉತ್ತರ ಕರ್ನಾಕಟದಲ್ಲಿ ಓಟು ಮಾಡಿದವು. ಈ ಪ್ರಬಲ ಸಮುದಾಯಗಳ ಕುರುಡು ನಡೆಯು ಚುನಾವಣೆಯನ್ನು ಮತ್ತೆಲ್ಲಿಗೋ ನಡೆಸಿಕೊಂಡು ಹೋಯಿತು. 6. ಅತಂತ್ರ ಫಲಿತಾಂಶ ಬಂದಿದೆ. ಮತ್ತೆ ರಾಜ್ಯದ ಪ್ರಬಲ ಜಾತಿಗಳ ರಾಜಕಾರಣಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಗಳನ್ನು ಹಂಚಿಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿವೆ. ಈ ಚುನಾವಣೆ ಮತ್ತೆ ಪ್ರಬಲ ಜಾತಿಗಳ ದೃವೀಕರಣಕ್ಕೆ ದಾರಿ ಮಾಡಿಕೊಟ್ಟಿಡಿದ್ದನ್ನು ಬಿಟ್ಟರೆ, ಜಾತ್ಯಾತೀತ ಪ್ರಜಾಪ್ರಭುತ್ವದ ಸಾಧ್ಯತೆಯನ್ನು ನಾಶ ಮಾಡಿದೆ. ಮರೆತಿದ್ದೆ, ಈ ಚುನಾವಣಾ ಫಲಿತಾಂಶ 24/7 ಟಿವಿ ನ್ಯೂಸ್ ಚಾನಲ್ ಗಳಿಗೆ ಯಥೇಚ್ಚ ಆಹಾರವನ್ನು ತಿಂಗಳುಗಟ್ಟಲೆ ತಿನ್ನಲು ಮತ್ತು ಮೆಲುಕು ಹಾಕಲು ಉತ್ಪಾದನೆ ಮಾಡಿಕೊಟ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...