Homeಸಾಮಾಜಿಕಈ ನೆಲದ ಶೋಷಿತರು ಕಲಿಯಬೇಕಾದದ್ದು ಸಾಕಷ್ಟಿದೆ 

ಈ ನೆಲದ ಶೋಷಿತರು ಕಲಿಯಬೇಕಾದದ್ದು ಸಾಕಷ್ಟಿದೆ 

- Advertisement -
ನಗರಗೆರೆ ರಮೇಶ್ |
ಈ ಸಂಭಾಷಣೆಯ ತುಣುಕುಗಳನ್ನು ಗಮನಿಸಿ:
1) ನಮ್ಮ ಮನೆಯ ಮುಂದೆ ನಮ್ಮ ಬೀದಿಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದ ಗುಂಪು. ಅದರ ನಾಯಕ ಕೆಲವು ವರ್ಷಗಳ ಹಿಂದೆ ಜೆಡಿಎಸ್‍ನಲ್ಲಿದ್ದು ನಂತರ ಬಿಜೆಪಿ ಸೇರಿ ತನ್ನ ಪತ್ನಿಯನ್ನು ವಾರ್ಡಿನ ಕಾರ್ಪೊರೇಟರ್ ಆಗಿಸಿದ ಒಬ್ಬ ಪುಢಾರಿ.
`ನಮಸ್ಕಾರ ಸಾರ್!’
`ನಮಸ್ಕಾರ?’
ಕರಪತ್ರವನ್ನು ನನ್ನ ಕೈಗೆ ಕೊಡುತ್ತಾ, `ಈ ಬಾರಿ ಬಿಜೆಪಿಗೆ ಓಟ್ ಹಾಕಬೇಕು ಸಾರ್. ಈ ಏರಿಯಾದವರೆಲ್ಲಾ ನಮಗೇ ಓಟ್ ಹಾಕ್ತಾ ಇದಾರೆ.’
`ಆಯ್ತು, ಹಾಕೋಣ. ಆದ್ರೆ ಬಿಜೆಪಿಗೆ ಯಾಕೆ ಓಟ್ ಹಾಕಬೇಕು?’
`ನಮ್ಮ ಹಿಂದೂ ಧರ್ಮಕ್ಕೋಸ್ಕರ.’
`ಹಿಂದೂ ಧರ್ಮಕ್ಕೆ ಈಗ ಏನಾಗಿದೆ.’
`ಏನ್ಸಾರ್ ಹೀಗೆ ಹೇಳ್ತೀರ? ಅವರು ನೋಡಿ ಎಲ್ಲಾ ಕಡೆ ಹೇಗೆ ಬೆಳೀತಾ ಇದಾರೆ!’
`ಏನು, ಈ ದೇಶದಲ್ಲಿ ಬರೀ ಹಿಂದೂಗಳು ಮಾತ್ರ ಇರಬೇಕಾ? ನಿಮ್ಮ ಪಾಡಿಗೆ ನೀವು ಪೂಜೆ ಮಾಡಿ. ಅವರು ನಮಾಜೋ, ಮತ್ತೊಂದೋ ಮಾಡ್ಕೋತಾರೆ. ನಿಮಗೇನು ಕಷ್ಟ?’
`ಆದ್ರೂ, ನಾವು ಹುಷಾರಾಗಿರಬೇಕು ಅಲ್ವಾ ಸಾರ್! ದೇವೇಗೌಡ್ರು ನೋಡಿ, ಒಂದು ಸಲ ಹೇಳಿದ್ರು: ಮುಂದಿನ ಜನ್ಮ ಅನ್ನೋದಿದ್ರೆ ನಾನು ಮುಸ್ಲಿಮರ ಮನೇಲಿ ಹುಟ್ಟೋಕೆ ಬಯಸ್ತೀನಿ ಅಂತ.’
`ನೋಡ್ರಿ! ಕೆಲವು ವರ್ಷಗಳ ಹಿಂದೆ ನೀವು ಅವರ ಜತೆಯಲ್ಲಿದ್ರಿ. ಈಗ ಈ ರೀತಿ ಮಾತಾಡ್ತಾ ಇದೀರಲ್ರೀ! ಅಷ್ಟೇ ಅಲ್ಲದೆ ಒಂದು ಧರ್ಮದ ಹೆಸರಿನಲ್ಲಿ ಮತ ಕೇಳೋದು ತಪ್ಪು ಅಂತ ನಿಮಗೆ ಗೊತ್ತಿಲ್ವಾ?’
“ಅದು ಬಿಡಿ ಸಾರ್. ನಾವು ಅಭಿವೃದ್ಧಿ ಮಾಡ್ತಾ ಇದೀವಿ. ರೋಡುಗಳಿಗೆ ಟಾರ್ ಹಾಕಿಸ್ತಾ ಇದೀವಿ.”
“ಹೌದಾ! ಸ್ವಲ್ಪ ನಮ್ಮ ಬೀದಿ ಕಡೆ ನೋಡಿ. ಇಲ್ಲಿ ಟಾರ್ ಹಾಕಿ ಅದೆಷ್ಟೋ ಕಾಲ ಆಗ್ಹೋಗಿದೆ. ಇದು ಅಭಿವೃದ್ಧಿನಾ?”
“ನಿಮ್ಮಿಷ್ಟ ಸಾರ್, ಯಾರಿಗಾದ್ರೂ ಹಾಕ್ಕೊಳ್ಳಿ.”
ಎಂದ ಆ ವ್ಯಕ್ತಿ ಮತ್ತೊಂದು ಬಾರಿ ನಮಸ್ಕರಿಸಿ ತನ್ನ ಹಿಂಬಾಲಕರ ಜತೆ ಓಟ ಕಿತ್ತ.
* * * *
2) ದೂರವಾಣಿ ಸಂಭಾಷಣೆ:
“ನಮಸ್ಕಾರ ಸಾರ್! ರಮೇಶ್ ಅವರಾ?”
“ಹೌದು, ನೀವೂ?”
“ನಾನು ಈ ಏರಿಯಾದ ಬ್ರಾಹ್ಮಣ ಸಂಘದಿಂದ ಮಾತಾಡ್ತಾ ಇದೀನಿ ಈ ಬಾರಿ ಎಲೆಕ್ಷನ್‍ನಲ್ಲಿ ಬ್ರಾಹ್ಮಣರೆಲ್ಲಾ ಬಿಜೆಪಿಗೆ ಓಟು ಹಾಕಬೇಕು.”
“ನಾನು ಆ ರೀತಿ ಯೋಚನೆ ಮಾಡೋನಲ್ಲ. ನೇರವಾಗಿ ಹೇಳ್ತೀನಿ ಕೇಳಿ. ನಾನು ಬಿಜೆಪಿ ವಿರೋಧಿ.”
“ತುಂಬಾ ಬೇಜಾರಾಯ್ತು ಸಾರ್, ನಿಮ್ಮ ಮಾತು ಕೇಳಿ!”
“ಯಾಕೆ?”
“ನಾನು ಬಿಜೆಪಿ, ಅರ್‍ಎಸ್‍ಎಸ್. ನೀವು ಬಿಜೆಪಿನ ವಿರೋಧಿಸ್ತೀನಿ ಅಂದ್ರಿ. ಅದಕ್ಕೇ ಬೇಜಾರು.”
“ನಾನೇನೂ ಮಾಡೋಕಾಗಲ್ಲ”
* * * *
3) ಅಂಗಡಿಯೊಂದರಲ್ಲಿ ಒಬ್ಬ ಮಹಿಳೆ:
ಅಂಗಡಿಯವನನ್ನುದ್ದೇಶಿಸಿ: “ ನಾಳೆ ಎಲೆಕ್ಷನ್ ಅಲ್ವಾ! ಬಿಜೆಪಿಗೆ ಹಾಕ್ತಿರಿ ತಾನೇ!”
“ಹಾಕ್ಲೇ ಬೇಕಾಲ್ಲಾ ಇಲ್ದಿದ್ರೆ ನಾವು ಉಳಿಯೋದು ಹೇಗೆ?”
ಮಹಿಳೆ ಈಗ ನನ್ನನ್ನುದ್ದೇಶಿಸಿ;
“ಇಲ್ಲೆಲ್ಲಾ ಬಿಜೆಪಿಗೇ ಓಟು ಸಾರ್, ನೀವೇನಂತೀರಾ ಸಾರ್?”
“ಬಿಜೆಪಿಗೆ ಯಾಕೆ ಓಟು ಹಾಕಬೇಕಮ್ಮಾ?”
“ಯಾಕೆ ಸಾರ್? ಮೋದಿ ನೋಡಿ. ಪ್ರಪಂಚದಲ್ಲೆಲ್ಲಾ ಜನ ನಮ್ಮ ದೇಶನಾ ಗಮನಿಸೋತರ ಮಾಡಿದಾನೆ.”
“ಅಂದ್ರೆ ಅದಕ್ಕೆ ಮೊದಲು ಯಾರಿಗೂ ನಮ್ಮ ದೇಶದ ಬಗ್ಗೆ ಗೊತ್ತೇ ಇರಲಿಲ್ವಾ? ಗಾಂಧಿ, ನೆಹರೂ ಎಲ್ಲಾ ಇದ್ರಲ್ಲಾ!”
“ಇದ್ರು ಸಾರ್. ಆದ್ರೆ ಈಗ ಮೋದಿ ನಮ್ಮನ್ನ ಹೆಚ್ಚು ಫೇಮಸ್ ಮಾಡಿದಾನೆ”
“ಗಾಂಧಿನ ಕೊಂದ ಗುಂಪಿಗೆ ಸೇರಿದ ಮೋದಿಗೂ, ಇವರಿಗೂ ಹೋಲಿಕೆ ಇದೆಯೇನಮ್ಮಾ!”
“ಏನೋ ಸಾರ್! ಇಲ್ಲಿನ ಬ್ರಾಹ್ಮಣರಂತೂ ಎಲ್ಲಾ ಬಿಜೆಪಿನೇ. ಇಲ್ದೇ ಇದ್ರೆ ಇನ್ನು ಮುಂದೆ ಸಾಬರು ನಮ್ಮ ಮನೆಗಳಿಗೇ ನುಗ್ಗಿ ನಮಾಜ್ ಮಾಡ್ತಾರಷ್ಟೇ!”
“ನೋಡೀಮ್ಮಾ. ನಿಮಗಿಷ್ಟ ಆದ್ರೆ ಬಿಜೆಪಿಗೆ ಓಟು ಹಾಕ್ಕೋಳ್ಳಿ. ಆದರೆ, ಇಂಥ ಸುಳ್ಳುಗಳನ್ನು ತಲೀಲಿ ತುಂಬಿಕೊಂಡಿರಬೇಡಿ.”
ಮೇಲಿನ ಸಂಭಾಷಣೆಗಳ ತುಣುಕುಗಳು ಕಲ್ಪನೆಯಲ್ಲ. ಅವು ನನ್ನ ಮತ್ತು ಆ ಮೂವರು ವ್ಯಕ್ತಿಗಳ ನಡುವೆ ನಡೆದ ಮಾತುಗಳು.
ಸಂಘ ಪರಿವಾರದ ರಾಜಕೀಯ ಘಟಕವಾದ ಬಿಜೆಪಿಯ ಬೆಂಬಲದ ಮೂಲ (Support Base) ಪ್ರಮುಖವಾಗಿ ಯಾವುದು ಮತ್ತು ಆ ಬೆಂಬಲದ ಹಿಂದಿನ ಪ್ರಧಾನ ಕಾರಣಗಳು ಯಾವು ಅನ್ನುವುದು ಅವರುಗಳ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ದೇಶದ ಪ್ರಧಾನ ಸೇವಕ ಮತ್ತೆ ಮತ್ತೆ ಕೂಗಿಕೊಂಡರೂ, ಅದು ಎಷ್ಟು ಪೊಳ್ಳು ಎನ್ನುವುದು ಆತನಿಗೂ ಮತ್ತು ಆತನ ಆರಾಧಕರಿಗೂ ಗೊತ್ತು. ಬಿಜೆಪಿಯ ಹಲವರು ನಾಯಕರು, ಮಂತ್ರಿಗಳೂ ಸೇರಿದಂತೆ ನಿರ್ಭಿಡೆಯಿಂದ ಇಲ್ಲಿನ ಮುಸಲ್ಮಾನರ ವಿರುದ್ಧ ಕೆಂಡ ಕಾರುವುದನ್ನು, ಅದಕ್ಕೆ ಆಪ್ರಧಾನ ಸೇವಕ ಅಡ್ಡಿಪಡಿಸಿರುವುದನ್ನು ಕಂಡ ಯಾರಿಗಾದರೂ ಅವರೆಲ್ಲರೂ ತಮ್ಮ ಗುರೂಜಿಯ ‘ಚಿಂತನಗಂಗಾ’ದ ವಿಚಾರಧಾರೆಗೇ ಜೋತು ಬಿದ್ದಿರುವುದು ಸ್ಪಷ್ಟವಾಗಬೇಕು.
ಇನ್ನೂ ಬ್ರಾಹ್ಮಣರೆಲ್ಲಾ ಬಿಜೆಪಿಗೆ ಮತ ನೀಡಬೇಕು ಎನ್ನುವ ಮಾತಂತೂ ಆ ಪಕ್ಷ ತೋರಿಕೆಗಾಗಿಯಾದರೂ ಎಷ್ಟೇ ಹೆಣಗಿದರೂ ‘ಬ್ರಾಹ್ಮಣರ ಪಕ್ಷ’ ಎನ್ನುವ ಹಣೆ ಪಟ್ಟಿಯಿಂದ ದೂರಬರುವುದಂತೂ ಸಾಧ್ಯವೇ ಇಲ್ಲ. ಬ್ರಾಹ್ಮಣರೆನಿಸಿಕೊಂಡವರು ಒಂದು ಕಡೆ ಸೇರಿದಾಗ ವ್ಯಕ್ತವಾಗುವ ಅಭಿಪ್ರಾಯ ಅದು. ಯಾರಾದರೂ ಆ ಮಾತನ್ನು ಒಪ್ಪದಿದ್ದರೆ, ‘ತಲೆಕೆಟ್ಟವ’ ಎನ್ನುವ ಬಿರುದಿಗೆ ಸಿದ್ಧವಾಗಿರಬೇಕು. ಆದರೆ ಅಂಥವರಿಂದ ಬ್ರಾಹ್ಮಣರ ಬಿಜೆಪಿ ಒಲವಿಗೆ ಧಕ್ಕೆಯಾಗದು.
ಬಿಜೆಪಿ ನಮ್ಮ ದೇಶಕ್ಕೆ ಏನೋ ತಂದು ಕೊಡುತ್ತದೆ, ಅಭಿವೃದ್ಧಿ ಪಥದಲ್ಲಿ ನಡೆಸುತ್ತದೆ ಎಂದು ನಂಬುವ, ನಂಬಿದಂತೆ ನಟಿಸುತ್ತಿರುವ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ಕಲಿಯಬೇಕಾದದ್ದು ಸಾಕಷ್ಟಿದೆ. ಈ ಮಾತನ್ನು ಹೇಳಲು ಮುಖ್ಯ ಕಾರಣವೆಂದರೆ ಎಷ್ಟೇ ನಿದರ್ಶನಗಳು ನಮ್ಮ ಮುಂದಿದ್ದರೂ ಈಗಲೂ ಹಿಂದುಳಿದ ಜಾತಿಗಳ, ದಲಿತರ, ಸ್ವಲ್ಪಮಟ್ಟಿಗೆ ಅಲ್ಪಸಂಖ್ಯಾಂತರ ಬೆಂಬಲ ಬಿಜೆಪಿಗೆ ದೊರೆತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಕಂಡುಬಂದಿದೆ. ಇನ್ನು ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ(ವೀರಶೈವರೂ ಸೇರಿ)ರ ಬಲವಂತೂ ಬಿಜೆಪಿಯ ಕಡೆಗೇ ಇದೆ ಎನ್ನುವುದಂತೂ ಸೂರ್ಯ ಸ್ಪಷ್ಟೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಿಗಬೇಕೆಂಬ ಒತ್ತಾಯದ ನಡುವೆಯೂ, ಅವರ ಬಿಜೆಪಿ ಪ್ರೇಮ ಕುಂಠಿತಗೊಂಡಿಲ್ಲ. ಅಲ್ಪಸಂಖ್ಯಾತ ಹಣೆಪಟ್ಟಿಯೂ ಬೇಕು, ನಮ್ಮವನೇ ಮುಖ್ಯಮಂತ್ರಿಯೂ ಆಗಬೇಕು ಎನ್ನುವ ಧೋರಣೆ ಅವರದು.
ಪ್ರತಿದಿನವೂ ನಡೆಯುತ್ತಿರುವ ತಂತ್ರ-ಪ್ರತಿತಂತ್ರಗಳನ್ನು ಗಮನಿಸಿದರೆ ನಮ್ಮಾ ಸಮಾಜ ಪ್ರಜಾ ತಾಂತ್ರಿಕತೆ ಎಂದರೆ ಏನು ಎನ್ನುವುದರ ಬಗ್ಗೆ ಇನ್ನೂ ಪ್ರಾಥಮಿಕ ಪಾಠಗಳೇ ಕಲಿತಿಲ್ಲ ಎನ್ನುವುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ಜನರು ಮತ್ತು ಅವರಿಂದ ಆರಿಸಿಬಂದ ಜನಪ್ರತಿನಿಧಿಗಳು, ಅವರ ನಾಯಕರುಗಳು ಯಾರಿಗೂ ಪ್ರಜಾತಂತ್ರ, ಸಂವಿಧಾನ ಇವು ಯಾವುದರ ಬಗ್ಗೆಯೂ ಕಿಂಚಿತ್ತೂ ಕಾಳಜಿ ಇಲ್ಲ. ಅವೆಲ್ಲವೂ ಕೇವಲ ಜನರನ್ನು ಮರಳು ಮಾಡಲು ಬಳಸುವ ಪದಗಳು ಆ ವಿಷಯ ಜನರಿಗೂ ಗೊತ್ತು.
ಇಂಥ ಸನ್ನಿವೇಶದಲ್ಲಿಯೇ ಪ್ರಗತಿಪರವಾಗಿ, ಮೌಲ್ಯಗಳ ಬಗ್ಗೆ, ಅವುಗಳ ನಾಶದ ಬಗ್ಗೆ ಗಮನ ಹರಿಸುವವರ ಜವಾಬ್ಧಾರಿ ಇನ್ನೂ ಹೆಚ್ಚು. ಬಹಳ ಬೇಗ ಸಿನಿಕತನಕ್ಕೆ ನಮ್ಮನ್ನುದೂಡುವ ಇಂಥ ಬೆಳವಣಿಗೆಗಳನ್ನು ಅರ್ಥಮಾಡಿಕೊಂಡು ಸಮಾಜವನ್ನು ಸರಿಯಾದ ಮಾರ್ಗದ ಕಡೆ ಕರೆದೊಯ್ಯುವ ಪ್ರಯತ್ನಗಳು ನಡೆದರೆ ದೇಶಕ್ಕೆ ಸದ್ಗತಿ ಇಲ್ಲವೇ ದುರ್ಗತಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...