Homeಮುಖಪುಟಎಕ್ಸಿಟ್ ಪೋಲ್‍ಗಳ ಬಗ್ಗೆ ನಾವು ನಡೆಸಿದ ಆನ್‍ಲೈನ್ ಪೋಲ್ ಏನು ಹೇಳುತ್ತಿದೆ?

ಎಕ್ಸಿಟ್ ಪೋಲ್‍ಗಳ ಬಗ್ಗೆ ನಾವು ನಡೆಸಿದ ಆನ್‍ಲೈನ್ ಪೋಲ್ ಏನು ಹೇಳುತ್ತಿದೆ?

- Advertisement -
- Advertisement -

`ನಾನು ಗೌರಿ’ ವೆಬ್‍ಸೈಟ್ ನಿನ್ನೆ ಒಂದು ಆನ್‍ಲೈನ್ ಪೋಲಿಂಗ್ ನಡೆಸಿತ್ತು. ಅದು ಮೊನ್ನೆಯಷ್ಟೇ, ಅಂದರೆ ಏಳನೇ ಹಂತದ ಲೋಕಸಭಾ ಮತದಾನ ಮುಗಿದ ಭಾನುವಾರ ಸಂಜೆಯ ಹೊತ್ತಿಗೆ ಟಿವಿ ಚಾನೆಲ್‍ಗಳಲ್ಲಿ ಬಿತ್ತರಗೊಂಡು ದೊಡ್ಡ ಚರ್ಚೆಗೆ ಕಾರಣವಾದ ಮತಗಟ್ಟೆ ಸಮೀಕ್ಷೆ ಅಲಿಯಾಸ್ ಎಕ್ಸಿಟ್ ಪೋಲ್‍ಗಳ ಕುರಿತು ನಡೆಸಿದ್ದ ಓದುಗರ ಅಭಿಮತ ಸಂಗ್ರಹದ ಪೋಲಿಂಗ್. ನಿನ್ನೆ ಮಧ್ಯಾಹ್ನದಿಂದ ಇವತ್ತು ಮಧ್ಯಾಹ್ನದವರೆಗೆ ಒಟ್ಟು 24 ಗಂಟೆಗಳ ಅವಧಿಗೆ ಓಪನ್ ಇದ್ದ ಈ ಪೋಲಿಂಗ್‍ನಲ್ಲಿ ಕೆಳಗಿನ ಒಂದು ಸರಳ ಪ್ರಶ್ನೆ ಕೇಳಲಾಗಿತ್ತು.

“2019ರ ಚುನಾವಣೆಯಲ್ಲಿ ನೀವು ಮತದಾನ ಮಾಡಿದ ನಂತರ ಮತಗಟ್ಟೆ ಸಮೀಕ್ಷೆ (ಎಕ್ಸಿಟ್ ಪೋಲ್) ಮಾಡುವವರು ನಿಮ್ಮನ್ನು ಮಾತಾಡಿಸಿದ್ದರಾ?” ಎಂಬುದು ಆ ಪ್ರಶ್ನೆ.

ಚುನಾವಣೆಗಳು ನಡೆದ ಪ್ರತಿಬಾರಿ ಹೊರಬೀಳುವ ಈ ಮತಗಟ್ಟೆ ಸಮೀಕ್ಷೆಗಳು 1999ರ ನಂತರದಲ್ಲಿ ನಿಜವಾದ ನಿದರ್ಶನ ತುಂಬಾ ಕಡಿಮೆ. 2014ರಲ್ಲಿ ಮೋದಿ ಅಲೆಯಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಸ್ವಲ್ಪ ವಾಸ್ತವಕ್ಕೆ ಹತ್ತಿರವಿದ್ದ ಮತಗಟ್ಟೆ ಸಮೀಕ್ಷೆಗಳು, ಅದಕ್ಕೂ ಮೊದಲು 2004 ಮತ್ತು 2009ರ ಚುನಾವಣೆಗಳಲ್ಲಿ ಹೊರಬಿದ್ದ ವಾಸ್ತವ ಫಲಿತಾಂಶಕ್ಕೆ ತದ್ವಿರುದ್ಧವಾದ ಅಂಕಿಸಂಕಿಗಳನ್ನು ನೀಡಿದ್ದವು. ಇಲ್ಲಿರುವ ಪ್ರಶ್ನೆ ಇವು ಎಷ್ಟು ಸರಿ, ಎಷ್ಟು ತಪ್ಪು ಎಂಬುದಲ್ಲ. ಬದಲಿಗೆ ಮತದಾರರನ್ನು ಮಾತಾಡಿಸಿ ಅಂಕಿಅಂಶ ನೀಡುತ್ತಿದ್ದೇವೆ ಎನ್ನುವ ಈ ಸಮೀಕ್ಷೆಗಳು ನಿಜಕ್ಕೂ ಜನರನ್ನು ಎಷ್ಟರಮಟ್ಟಿಗೆ ಮಾತಾಡಿಸುತ್ತವೆ ಎಂಬುದು. ಯಾಕೆಂದರೆ ನಮ್ಮ ಸಂಪರ್ಕ ವಲಯದಲ್ಲಿ ಯಾರೊಬ್ಬರು ಇಂಥಾ ಸಮೀಕ್ಷೆಗಳನ್ನು ನಡೆಸುವವರು ಬಂದು ತಮ್ಮನ್ನು ಮಾತಾಡಿಸಿದ್ದಾಗಿ ಹೇಳಿಕೊಂಡ ನಿದರ್ಶನಗಳು ಹುಡುಕಿದರೂ ಸಿಗುವುದಿಲ್ಲ. ಹಾಗಾಗಿ ಇವರು ನಿಜಕ್ಕೂ ಎಷ್ಟರಮಟ್ಟಿಗೆ ಜನರನ್ನು ಮಾತಾಡಿಸಿರುತ್ತಾರೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಈ ಪೋಲಿಂಗ್ ನಡೆಸಲಾಗಿತ್ತು.

ಈ ಪೋಲಿಂಗ್‍ನಲ್ಲಿ ಒಟ್ಟು 6800 ಜನ ಭಾಗವಹಿಸಿದ್ದರು. ಅದರಲ್ಲಿ 5500 (ಶೇ.81) ಜನ ತಮ್ಮನ್ನು ಇದುವರೆಗೆ ಯಾವ ಸಮೀಕ್ಷೆಯವರೂ ಮಾತಾಡಿಸಿಲ್ಲ ಎಂದಿದ್ದರೆ, 1300 (ಶೇ.19) ಜನ ಹೌದು ಎಂದು ಪ್ರತಿಕ್ರಿಯಿಸಿದ್ದಾರೆ.

ಇವತ್ತಿನ ಸೋಶಿಯಲ್ ಮೀಡಿಯಾ ರಾಜಕಾರಣವನ್ನೂ ಪ್ರಭಾವಿಸುವಷ್ಟು ಸಂಕೀರ್ಣಗೊಂಡಿದ್ದು, ಒಂದು ನಿರ್ದಿಷ್ಟ ಐಡಿಯಾಲಜಿಕಲ್ ಓರಿಯೆಂಟೇಷನ್‍ಗೆ ತುತ್ತಾದವರು ಫೇಕ್ ಅಕೌಂಟ್‍ಗಳ ಮೂಲಕ ಸಾರ್ವಜನಿಕ ಅಭಿಪ್ರಾಯಗಳನ್ನು ಭ್ರಷ್ಟಗೊಳಿಸುವ ಯತ್ನ ಮಾಡುತ್ತಿರೋದು ಹೊಸ ಸಂಗತಿಯಲ್ಲ. ಇದು ನಮ್ಮ ತಂಡಕ್ಕೂ ಗೊತ್ತಿದೆ. ಅಂತವರು ಈ ಪೋಲಿಂಗ್‍ನ ಉದ್ದೇಶವನ್ನು ಹಾಳುಮಾಡಬಾರದೆಂಬ ಕಾರಣಕ್ಕೆ `ಹೌದು ಮತಗಟ್ಟೆ ಸಮೀಕ್ಷೆ ಮಾಡುವವರು ತಮ್ಮನ್ನು ಮಾತಾಡಿಸಿದ್ದಾರೆ’ ಎನ್ನುವವರು ಕಮೆಂಟ್‍ನಲ್ಲಿ ತಮ್ಮ ಮೊಬೈಲ್ ನಂಬರ್ ನೀಡುವಂತೆ ಸೂಚಿಸಿದ್ದೆವು.

ಫೇಕ್ ಅಕೌಂಟ್‍ಗಳ ಹಾವಳಿಯನ್ನು ತಡೆಯುವುದರ ಜೊತೆಗೆ, ಅಂತವರನ್ನು ಮಾತಾಡಿಸುವ ಮೂಲಕ ಈ ಸಮೀಕ್ಷೆಗಳು ನಿಜಕ್ಕೂ ಹೇಗೆ ನಡೆಯುತ್ತವೆ, ಯಾವ ಬಗೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಯಾವ ಆಧಾರದಲ್ಲಿ ಸ್ಯಾಂಪಲ್ ಮತಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಅಧ್ಯಯನ ಮಾಡುವುದು ನಮ್ಮ ಇರಾದೆಯಾಗಿತ್ತು. ಆದರೆ, ಕೇವಲ 14 ಜನರು ಮಾತ್ರ ತಮ್ಮ ಫೋನ್ ನಂಬರ್ ಕೊಟ್ಟಿದ್ದರು! ಇದಲ್ಲದೇ ಹೌದು, ನನ್ನನ್ನು ಮಾತಾಡಿಸಿದ್ದರು ಎಂದು ಹೇಳಿದ ಮೊದಲ 20 ಜನರಲ್ಲಿ 9 ಫೇಕ್ ಅಕೌಂಟ್‍ಗಳಾಗಿದ್ದವು!!

`ಹೌದು ಮಾತನಾಡಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿ, ಫೋನ್ ನಂಬರ್ ಕೊಟ್ಟಿದ್ದ ಒಬ್ಬ ವ್ಯಕ್ತಿಯನ್ನು ಮಾತಾಡಿಸಿದಾಗ ಅವರು ತಾವು ದಾಖಲಿಸಿದ್ದ ಅಭಿಪ್ರಾಯಕ್ಕಿಂತ ವಿಭಿನ್ನವಾಗಿ ಪ್ರತಿಕ್ರಿಯಿಸಿ “ಇಲ್ಲ ಸಾರ್, ನನ್ನನ್ನು ಯಾರೂ ಮಾತಾಡಿಸಿಲ್ಲ. ಈ ಎಕ್ಸಿಟ್ ಪೋಲ್‍ಗಳನ್ನು ನಂಬಬಾರದು. ಗೊತ್ತಾಗದೆ ನಾನು ಹೌದು ಅಂತ ಒತ್ತಿಬಿಟ್ಟಿದ್ದೇನೆ. ನೀವೀಗ ಕೇಳಿದಾಗಲೇ ನನಗೆ ನನ್ನ ತಪ್ಪು ಅರ್ಥವಾದದ್ದು” ಎಂದರು. ಇಂತಹದೇ ಅಭಿಪ್ರಾಯವನ್ನು ಇನ್ನೂ ಇಬ್ಬರು ವ್ಯಕ್ತಪಡಿಸಿದರು. ಆ ಶೇ.19ರಲ್ಲಿ ಇಂಥಾ ಗೊಂದಲಕ್ಕೀಡಾದವರು ಇರಬಹುದಾದ ಸಾಧ್ಯತೆ ಇದೆ. ಮೇಲಿನ ಕಾರಣಗಳಿಂದ ‘ಹೌದು ನನ್ನನ್ನು ಮಾತಾಡಿಸಿದ್ದರು’ ಎಂಬ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ಇಲ್ಲ.

ಇನ್ನು ಯಥಾ ಪ್ರಕಾರ `ಮೋದಿ ಭಕ್ತ ಮಂಡಳಿ’ಯಿಂದ ಅವಾಚ್ಯ, ಅರ್ಥಹೀನ ಕಮೆಂಟುಗಳು ಹರಿದುಬಂದವು (ಈ ಅಭಿಪ್ರಾಯವನ್ನು ಜವಾಬ್ದಾರಿಯಿಂದಲೇ ಮುಂದಿಡುತ್ತಿದ್ದೇವೆ. ಆಸಕ್ತಿ ಇರುವವರಿಗೆ ಎಲ್ಲಾ ಸ್ಕ್ರೀನ್‍ಷಾಟ್‍ಗಳನ್ನು ಒದಗಿಸುತ್ತೇವೆ). ಅಂಥವರಲ್ಲಿ ವಿನಯ್ ಸೋನು ಸಾಗರ್ ಎಂಬ `ಚೌಕಿದಾರ’ರು ಒಂದು ಪ್ರಶ್ನೆ ಎತ್ತಿದ್ದರು. ಶೈಲಿ ಅಸಹ್ಯಕರವಾಗಿದ್ದರು ಅವರ ಪ್ರಶ್ನೆ ಚರ್ಚಿಸಬೇಕಾದ್ದಾಗಿತ್ತು. `ಸರ್ವೇ ಅಂದ್ರೆ ಎಲ್ಲರನ್ನೂ ಹೋಗಿ ಮಾತಾಡಿಸ್ಲಿಕ್ಕೆ ಆಗಲ್ಲ, ರ್ಯಾಂಡಮ್ ಆಗಿ ಕೆಲವರನ್ನ ಮಾತಾಡಿಸಿರ್ತಾರೆ. ನೀವು ಕೇಳ್ತಾ ಇರೋದು ನೋಡಿದ್ರೆ ಎಲ್ಲರನ್ನೂ ಮಾತಾಡಿಸಿರಲೇಬೇಕು ಎನ್ನುವಂತಿದೆ’ ಎಂಬುದು ಅವರ ಪ್ರಶ್ನೆಯ ಸಾ ರಾಂಶ. ನಮ್ಮ ಕುತೂಹಲ ಕೂಡಾ ಇದೇ ಆಗಿದೆ. ಸಮೀಕ್ಷೆ ಎನ್ನುವುದೇ ಪ್ರತಿಯೊಬ್ಬರನ್ನು ಮಾತಾಡಿಸಲು ಸಾಧ್ಯವಾಗದ ಸ್ಯಾಂಪಲಿಂಗ್ ಸೈಂಟಿಫಿಕ್ ಮೆಥೆಡಾಲಜಿ. ಹೀಗೆ ಸ್ಯಾಂಪಲಿಂಗ್ ಮಾಡುವಾಗ ಇಷ್ಟು ವರ್ಷಗಳಲ್ಲಿ ಎಷ್ಟೆಲ್ಲ ಚುನಾವಣೆಗಳು ನಡೆದಿವೆ, ಅಪರೂಪಕ್ಕಾದರು ನಮ್ಮ ಗಮನಕ್ಕೆ ಬರುವಂತೆ ಒಂದಷ್ಟು ಬೂತ್‍ಗಳು, ವ್ಯಕ್ತಿಗಳು ಸಮೀಕ್ಷೆಗೆ ಒಳಗಾಗಿರುವುದು ಗಮನಕ್ಕೆ ಬರಬೇಕಲ್ಲವೇ? ಕಡೇಪಕ್ಷ ಈ ಚುನಾವಣೆಯಲ್ಲಾದರು ಹಾಗೆ ಮಾತನಾಡಿಸಿದವರು ಸಿಗುತ್ತಾರಾ? ಎಂಬ ಕುತೂಹಲದಿಂದಲೇ ಈ ಪೋಲಿಂಗ್ ನಡೆಸಿದ್ದು.

ಸೋನು ಸಾಗರ್‍ರ ಕಮೆಂಟ್‍ಗೆ ವ್ಯತಿರಿಕ್ತವಾಗಿ ಪಿ.ಕೆ.ದಾಸ್ ಎಂಬುವವರು ತಮ್ಮ ಕಮೆಂಟ್ ದಾಖಲಿಸಿದ್ದು, “25 ವರ್ಷದಿಂದ ಮತದಾನ ಮಾಡಿದ್ದೇನೆ… ಅಷ್ಟೇ ಏಕೆ, ಈವರೆಗೂ ಬೂತ್ ಮೇಂಟೇನರ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ. ಇದುವರೆಗೂ ಯಾವೊಬ್ಬನನ್ನೂ ಕೇಳಿದ್ದು ನೋಡಿಲ್ಲ” ಎನ್ನುತ್ತಾರೆ. ವಿರೂಪಾಕ್ಷಗೌಡ ತುಂಬದ್ ಎನ್ನುವ ಮತ್ತೊಬ್ಬರು “ಎಕ್ಸಿಟ್ ಪೋಲ್ ಸರ್ವೇಗಳು ನಡೆಯೋದು ನಗರಗಳಲ್ಲಿ ಮಾತ್ರ. ಅಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ಇಂಥಾ ಎಕ್ಸಿಟ್ ಪೋಲ್‍ಗಳು ಬಿಜೆಪಿಗೆ ಬಹುಮತ ತೋರಿಸೋದು ಸಹಜ” ಎಂದು ಕಮೆಂಟ್ ಮಾಡಿದ್ದಾರೆ.

ಸಂತೋಷ್ ಎಚ್.ಆರ್. ಎಂಬ ಫೇಸ್ಬುಕ್ಕಿಗರ ಅಭಿಪ್ರಾಯವಾದ “ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಅತ್ಯುತ್ತಮ ಸಮೀಕ್ಷೆ (ಪೋಲಿಂಗ್) ಮಾಡ್ತಾ ಇದ್ದೀರಿ. ಇದರ ಅವಶ್ಯಕತೆ ತುಂಬಾ ಇತ್ತು” ಎಂಬ ಅಭಿಮತವೇ  ನಮ್ಮ ತಂಡವನ್ನೂ ಒಳಗೊಂಡು ಸುಮಾರು ಜನರದ್ದಾಗಿತ್ತು. ಜನರನ್ನು ಮಾತಾಡಿಸಿದ ನಿದರ್ಶನಗಳೇ ಕಾಣದೆ ಹೊರಬರುತ್ತಿರುವ ಎಕ್ಸಿಟ್ ಪೋಲ್‍ಗಳ ಕುರಿತ ಚರ್ಚೆಯನ್ನು ವಿಸ್ತರಿಸುವ ಸಲುವಾಗಿ ಈ ಪೋಲಿಂಗ್ ನಡೆಸಿದ್ದೇವಷ್ಟೆ.

ಸಾಮಾಜಿಕ ಜಾಲತಾಣಗಳಲ್ಲೂ ಒಂದು ಕಡೆಗೆ ಅಭಿಪ್ರಾಯ ಮೂಡಿಸಲು ಪಡೆಗಳು ಸಜ್ಜಾಗಿರುವಾಗ, ಇಂತಹ ಪೋಲ್‍ಗಳು ವಾಸ್ತವವನ್ನೇ ಬಿಂಬಿಸಬೇಕೆಂದೇನಿಲ್ಲ. ಆದರೆ, ಒಟ್ಟಾರೆ ಮೂಡ್‍ನ ದಿಕ್ಕು ಗೊತ್ತಾಗಬಹುದು ಅಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...