Homeಚಳವಳಿಓ ಸರ್ಕಾರವೇ, ಇತ್ತ ಗಮನ ಕೊಡು

ಓ ಸರ್ಕಾರವೇ, ಇತ್ತ ಗಮನ ಕೊಡು

- Advertisement -
ನೂರ್ ಶ್ರೀಧರ್  |
ಫಲಿತಾಂಶ ಹೊರಬಿದ್ದಿದೆ. ಮತಾಂಧ ಶಕ್ತಿಗಳು ಮೊದಲ ಸ್ಥಾನದಲ್ಲಿ ಬಂದು ನಿಂತಿವೆ. ‘ಜಾತ್ಯತೀತ’ ಎಂದು ಕರೆದುಕೊಳ್ಳುವ ಮಿಶ್ರ ಸರ್ಕಾರದ ರಚನೆಯ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಲೋಕಸಭಾ ಚುನಾವಣೆಗಳು ಕೂಗಳತೆಯ ದೂರದಲ್ಲಿವೆ.  ಕಳೆದ 4 ವರ್ಷಗಳಲ್ಲಿ ಬಿಜೆಪಿ ಪಕ್ಷ ಕೇಂದ್ರ ಸರ್ಕಾರದ ಮೂಲಕ ನೀಡಿರುವ ಆಳ್ವಿಕೆ ಮತ್ತು 2009 – 2013ರ ಅವಧಿಯ ಅದರ ಕರ್ನಾಟಕ ಆಳ್ವಿಕೆ ಭಾರತದ ಇತಿಹಾಸದಲ್ಲೇ ಅತ್ಯಂತ ಜನವಿರೋಧಿ ಆಳ್ವಿಕೆಗಳಾಗಿವೆ. ನಾಡಿನ ಸಂಪತ್ತನ್ನು ಬಾಚಲು ಗಣಿದಣಿಗಳಿಗೆ ನೆರವಾಗುವ, ಜನ ಸಾಮಾನ್ಯರ ದುಡಿಮೆಯ ಫಲವನ್ನು ದೋಚಲು ಕಾರ್ಪೋರೇಟ್ ಶಕ್ತಿಗಳಿಗೆ ರತ್ನಗಂಬಳಿ ಹಾಕಿಕೊಟ್ಟಿದೆ. ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಆರ್ಥಿಕ ನೀತಿಗಳಲ್ಲಿ ಒಂದಷ್ಟು ಸಾಮ್ಯತೆಗಳಿದ್ದರೂ ಕಾಂಗ್ರೆಸ್ ಜನಸಾಮಾನ್ಯರ ವಿಚಾರದಲ್ಲಿ ಒಂದಷ್ಟು ಮೃದು ಧೋರಣೆಯನ್ನು ಅಳವಡಿಸಿದೆ ಹಾಗೂ ಒಂದಿಷ್ಟು ಸಮಾಜ ಕಲ್ಯಾಣದ ಯೋಜನೆಗಳನ್ನು ಜಾರಿಗೆ ತಂದಿದೆ. ವಾಸ್ತವ ಹೀಗಿದ್ದರೂ ಕಾಂಗ್ರೆಸ್ ಪಕ್ಷವನ್ನು ಭ್ರಷ್ಟ, ಜಾತಿವಾದಿ, ಸ್ವಜನ ಪಕ್ಷಪಾತಿ ಪಕ್ಷ ಎಂಬಂತೆ ಬಿಂಬಿಸಲು ಮಾಧ್ಯಮಗಳು ಪೈಪೋಟಿ ನಡೆಸಿವೆ. ಅದೇ ಸಂದರ್ಭದಲ್ಲಿ ಬಿಜೆಪಿ ಅಭಿವೃದ್ಧಿಪರ, ದೇಶಪರ, ಹಿಂದುಪರ ಪಕ್ಷದಂತೆಯೂ ಸುಳ್ಳನ್ನು ಸತ್ಯವೆಂಬಂತೆ ನಂಬಿಸುವ ಸಂಘ ಪರಿವಾರದ ಪ್ರಚಾರಕ್ಕೆ ಮಾಧ್ಯಮಗಳೂ ದೊಡ್ಡ ದನಿಯ ಪ್ರಚಾರ ಕೊಟ್ಟಿವೆ. ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವುದರಲ್ಲಿ ಕಾಂಗ್ರೆಸ್‍ನ ವೈಫಲ್ಯ ಕೂಡ ಎದ್ದು ಕಾಣುತ್ತಿದೆ.
ಹೊಸ ಸರ್ಕಾರ ರಚಿಸುವುದರಲ್ಲಿ ನಾಟಕೀಯ ರಾಜಕೀಯ ಬೆಳವಣಿಗೆಗಳು ನಡೆದಿವೆ. ಬಿಜೆಪಿ ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು, ಹುದ್ದೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಅಂತೂ ಯಾವುದೋ ಒಂದು ಸರ್ಕಾರ ಬರಲಿದೆ. ಯಾವುದೇ ಸರ್ಕಾರ ಬಂದರೂ ರಾಜ್ಯದ ಜನತೆಯ ಹಿತಾಸಕ್ತಿಯ ದೃಷ್ಟಿಯಿಂದ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕಾದ ಪ್ರಮುಖ ಅಂಶಗಳು ಯಾವುವು ಎಂಬುದು ನಮ್ಮ ಮುಂದಿರುವ ಪ್ರಶ್ನೆ.
1. ಕೃಷಿ ಬಿಕ್ಕಟ್ಟಿಗೆ ಪರಿಹಾರವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನವಾಗಬೇಕು. ಕೃಷಿ ಬಿಕ್ಕಟ್ಟು ಪರಿಹಾರವಾಗಬೇಕಾದರೆ ಕೃಷಿ ವೆಚ್ಚ ಕಡಿಮೆಯಾಗಬೇಕು, ಕೃಷಿ ಆದಾಯ ನಿಶ್ಚಿತಗೊಳ್ಳಬೇಕು. ಕೃಷಿ ವೆಚ್ಚ ತಗ್ಗಿಸಬೇಕಾದರೆ ಸಹಕಾರಿ ಹಾಗೂ ಸಹಜ ಕೃಷಿಯನ್ನು ಉತ್ತೇಜಿಸಲು ವಿಶೇಷ ಪ್ಯಾಕೇಜನ್ನು ಜಾರಿಗೆ ತರಬೇಕು. ಅಲ್ಲದೆ ಬೀಜ, ಗೊಬ್ಬರ, ರಾಸಾಯನಿಕ ಇತ್ಯಾದಿ ಒಳಸುರಿಗಳ ಮೇಲಿನ, ಕೃಷಿ ಯಂತ್ರೋಪಕರಣಗಳ ಮೇಲಿನ ಹಾಗೂ ಕೃಷಿ ಮಾರುಕಟ್ಟೆ ಮೇಲಿನ ಕಾರ್ಪೋರೇಟ್ – ದಲ್ಲಾಳಿ ಹಿಡಿತ ತಪ್ಪಿ ಬೆಲೆಗಳು ನಿಯಂತ್ರಣಕ್ಕೆ ಬರಬೇಕು. ಜೊತೆಗೆ ಇದುವರೆತನಕ ಸರ್ಕಾರಗಳು ಅಳವಡಿಸಿದ ರೈತ ವಿರೋಧಿ – ಕಾರ್ಪೋರೇಟ್ ಪರ ನೀತಿಗಳಿಂದಾಗಿ ರೈತರಿಗೆ ಆಗಿರುವ ನಷ್ಟವನ್ನು ಸಂಪೂರ್ಣ ಸಾಲ ಮನ್ನಾದ ರೂಪದಲ್ಲಾದರೂ ತುಂಬಿಕೊಡಬೇಕು.
2. ಓದಿದರೂ ಉದ್ಯೋಗವಿಲ್ಲದ ಕಡೆ ಸಾಗುತ್ತಿರುವ ಅಂಧಕಾರಿ ಭವಿಷ್ಯದಲ್ಲಿ ದೀಪ ಬೆಳಗುವಂತೆ ಮಾಡಬೇಕು. ಉದ್ಯೋಗ ಸೃಷ್ಟಿ ಸರ್ಕಾರದ ಎರಡನೇ ಪರಮೋಚ್ಛ ಕರ್ತವ್ಯವಾಗಬೇಕು. “ಉದ್ಯೋಗಕ್ಕಾಗಿ ಯುವಜನರು” ಮುಂದಿಟ್ಟ ಯುವ ಪ್ರಣಾಳಿಕೆ ಸೂಚಿಸುವ ರೀತಿಯಲ್ಲಿ “ಉದ್ಯೋಗ ಆಯೋಗ”ವೊಂದನ್ನು ರಚಿಸಬೇಕು. ಅದರ ಶಿಫಾರಸುಗಳನ್ನು ವಿಧಾನ ಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲೇಬೇಕಾದ ಅಧಿಕಾರ ಇರಬೇಕು. ಹಾಲಿ ಚಾಲ್ತಿಯಲ್ಲಿರುವ ಉದ್ಯೋಗ ಕಡಿತದ ಮಾದರಿಯ ಬದಲು ಉದ್ಯೋಗ ಸೃಷ್ಟಿಯ ಮಾದರಿ ಅಭಿವೃದ್ಧಿಗೊಳ್ಳುವಂತೆ ಮಾಡಬೇಕು.
3. ಕೆಲಸ ಸಿಕ್ಕರೆ ಸಾಲದು, ನೆಮ್ಮದಿಯ ಬದುಕಿಗೆ ಉದ್ಯೋಗ ಭದ್ರತೆ ಖಾತ್ರಿಯಾಗಬೇಕು, ದುಡಿಮೆಗೆ ತಕ್ಕ ಪ್ರತಿಫಲ ಲಭ್ಯವಾಗಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಂಟ್ರಾಕ್ಟ್ ಪದ್ದತಿ ಶಾಶ್ವತೀಕರಣವನ್ನು ರದ್ದುಗೊಳಿಸಲು ರಾಜ್ಯ ಸರ್ಕಾರವೂ ಹೋರಾಡಬೇಕು. ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕಂಟ್ರಾಕ್ಟ್ ಪದ್ದತಿಯನ್ನು ತೆಗೆದುಹಾಕಬೇಕು. ಉಚ್ಛ ನ್ಯಾಯಾಲಯವೇ ಅನೇಕ ಬಾರಿ ಎಚ್ಚರಿಸಿರುವ ಕನಿಷ್ಟ ವೇತನವನ್ನು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಜಾರಿಗೆ ತರಬೇಕು.
4. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಖಾಸಗೀ ಹಿಡಿತ ಹಾಗೂ ಸುಲಿಗೆಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಮತ್ತು ಉಚಿತ ಹಾಗೂ ಉಚ್ಛ ಸರ್ಕಾರಿ ಶಿಕ್ಷಣ ಮತ್ತು ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕು.
5. ಬಡವರ ಬಹುತೇಕ ದುಡಿಮೆಯನ್ನೆಲ್ಲಾ ಬಾಟಲಿ ದಣಿಗಳ ಪಾಲಾಗಿಸುತ್ತಿರುವ ಹಾಗೂ ಯುವಜನರನ್ನು ದುಷ್ಟಚಟದ ದಾಸರನ್ನಾಗಿಸುತ್ತಿರುವ ಮಧ್ಯಪಾನವನ್ನು ನಿಶೇಧಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಕ್ಕಬೇಕು. ಕನಿಷ್ಟ ಮೊದಲ ಹಂತವಾಗಿ ಮಧ್ಯವ್ಯಸನ ತಗ್ಗಿಸುವ ಟಾರ್ಗೆಟ್ ಹಾಕಿ ಫಲಿತಾಂಶ ತೋರಬೇಕು. ಇಡೀ ದೇಶದಲ್ಲಿ ಏಕ ಕಾಲದಲ್ಲಿ ಮಧ್ಯಪಾನ ನಿಷೇಧಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.
6. ಧಾರ್ಮಿಕ ಸಹಬಾಳ್ವೆಯನ್ನು ಉತ್ತೇಜಿಸಬೇಕು. ಧಾರ್ಮಿಕ ದ್ವೇಷ, ಸಾಂಸ್ಕøತಿಕ ಅಸಹನೆ, ಆಹಾರ ಪದ್ದತಿಗಳ ಹೇರಿಕೆಯಂತಹ ಕ್ರಮಗಳನ್ನು ಪ್ರಚೋದಿಸುವ ಸಂಘ ಸಂಸ್ಥೆಗಳನ್ನು ನಿಷೇಧಿಸಬೇಕು.
7. ಮೀಸಲಾತಿಯಂತಹ ಸಂಕೀರ್ಣ ಸಮಸ್ಯೆಗಳಿಗೆ ಸಮಗ್ರ ಉತ್ತರ ಕಂಡುಕೊಳ್ಳಲು ಕಾಲಮಿತಿಯೊಳಗೆ ಪರಿಹಾರ ಸೂಚಿಸುವ ಸಾಮಾಜಿಕ ಮನ್ನಣೆ ಹೊಂದಿರುವ ಸಮಿತಿಯನ್ನು ರಚಿಸಬೇಕು. ಅದರ ಶಿಫಾರಸುಗಳನ್ನು ದಿಟ್ಟವಾಗಿ ಜಾರಿ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಖಾತ್ರಿಗೊಳಸಿಬೇಕು ಮತ್ತು ಸಾಮಾಜಿಕ ಕಲಹಕ್ಕೆ ಕೊನೆ ಹಾಡಬೇಕು.
8. ಅಲ್ಪಸಂಖ್ಯಾತರ ಸ್ಥಿತಿಗತಿಯಲ್ಲಿ ಬದಲಾವಣೆ ತರಲು ಈಗಾಗಲೇ ಸಾಚಾರ್ ಕಮಿಟಿಯ ಸೂಕ್ಷ್ಮಮತಿ ಶಿಫಾರಸುಗಳು ಇರುವುದರಿಂದ ಅವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.
9. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಅಭಿಯಾನ ಆರಂಭಿಸಬೇಕು. ಅವರ ಸ್ವಾವಲಂಬಿ ಶಕ್ತಿ ವೃದ್ಧಿಸುವಂತೆ ಮಾಡಲು ಹಾಗೂ ಅವರ ಸ್ಥಾನ ಮತ್ತು ಹಕ್ಕಿನ ಬಗ್ಗೆ ಪ್ರಜ್ಞೆ ಸಾಮಾಜಿಕ ಪ್ರಜ್ಞೆ ಹೆಚ್ಚಾಗುವಂತೆ ಮಾಡಲು ಸಾಮಾಜಿಕ ಅಭಿಯಾನ ಆರಂಭಿಸಬೇಕು. ಸಾಮಾಜಿಕ ಸಂಘ ಸಂಸ್ಥೆಗಳನ್ನು ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.
10. ನಿರ್ಲಕ್ಷಿತರಲ್ಲಿ ನಿರ್ಲಕ್ಷಿತರಾಗಿ ಬದುಕುತ್ತಿರುವ ತೃತೀಯ ಲಿಂಗೀಯರು, ವಿಕಲಚೇತನರು, ವೇಶ್ಯೆಯರು, ವೃದ್ಧರು ಹಾಗೂ ನಿರಾಶ್ರಿತರ ಬಗ್ಗೆ ಅಂತಃಕರಣವುಳ್ಳ ಪುನರ್ವಸತಿ ಕ್ರಮಗಳನ್ನು ಆಚರಣೆಗೆ ತರಬೇಕು.
ಇದೆಲ್ಲವನ್ನು ಮಾಡಲೇಬೇಕು. ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲವು ಹೆಜ್ಜೆಗಳನ್ನಾದರೂ ಇಡುವಂತೆ ಮಾಡುವ ನಿಟ್ಟಿನಲ್ಲಿ ನಮ್ಮ ಹೋರಾಟಗಳು  ನಡೆಯಬೇಕಿದೆ.   ಜನಪರ ಆಳ್ವಿಕೆ ನೀಡುವುದು ಜಾತ್ಯತೀತ ಪಕ್ಷಗಳ ಉಳಿವು ಮತ್ತು ಬೆಳವಣಿಗೆಗೆ ಹೇಗೆ ಪೂರ್ವ ಶರತ್ತೋ ಹಾಗೆಯೇ ನಿಜವಾದ ಜನಪರ ಶಕ್ತಿಗಳು ಪರ್ಯಾಯ ಪಕ್ಷಗಳನ್ನು ಕಟ್ಟಿದರೆ ಸಾಲದು, ಪರ್ಯಾಯ ಜನ ಚಳವಳಿಯನ್ನು ಕಟ್ಟಿಬೆಳೆಸಬೇಕು. ವಿಶಾಲ ತಳಹದಿಯ ಪ್ರಬಲ ಜನಾಂದೋಲನಗಳನ್ನು ರೂಪಿಸಬೇಕಾದ ಕರ್ತವ್ಯ ನಮ್ಮ ಮುಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಬಿ-ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯ (ಎಂಜಿಎನ್‌ಆರ್‌ಇಜಿಎ) ಹೆಸರು ಮತ್ತು ನಿಬಂಧನಗೆಳನ್ನು ಬದಲಿಸುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್),2025 (ವಿಬಿ-ಜಿ ರಾಮ್‌ ಜಿ) ಮಸೂದೆಗೆ...

ಪ್ರೀತಿಸಿ ಮದುವೆಯಾಗಿ ಕೇವಲ 8 ತಿಂಗಳು : ವರದಕ್ಷಿಣೆಗಾಗಿ ಹೆಂಡತಿಯನ್ನು ಹೊಡೆದು ಕೊಂದ ಗಂಡ!

ಮದುವೆಯಾಗಿ ಎಂಟು ತಿಂಗಳಿಗೆ ಗಂಡ ಹೆಂಡತಿಯನ್ನು ಮನೆ ಅಂಗಳದಲ್ಲೇ ಹೊಡೆದು ಕೊಂದ ಹೃದಯವಿದ್ರಾವಕ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ತಂಡೂರ್‌ನಲ್ಲಿ ನಡೆದಿದೆ. ಅನುಷಾ (22) ಕೊಲೆಯಾದ ಹೆಣ್ಣು ಮಗಳು. ಗಂಡ ಪರಮೇಶ್ (28) ವಿರುದ್ದ...

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಭಾರತೀಯ ವೀಸಾ ಅರ್ಜಿಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ

ಢಾಕಾ: ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ನಂತರ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಎರಡನೇ ಅತಿದೊಡ್ಡ ನಗರ ಚಿತ್ತಗಾಂಗ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ವೀಸಾ...

ತೀವ್ರ ವಿರೋಧಗಳ ನಡುವೆ ಗಣರಾಜ್ಯೋತ್ಸವ ಆಚರಣೆಯಲ್ಲಿ ‘ವಂದೇ ಮಾತರಂ’ ಹಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ 

ಗಣರಾಜ್ಯೋತ್ಸವದ ಸಂದರ್ಭದಲ್ಲಿ 'ವಂದೇ ಮಾತರಂ' ಗೀತೆಯನ್ನು ಪ್ರಧಾನವಾಗಿ ಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯುರೋಪಿಯನ್ ಒಕ್ಕೂಟದ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಮುಂದಿನ ತಿಂಗಳು ಭಾರತಕ್ಕೆ ಆಗಮಿಸುವ...

ಅಣು ವಿದ್ಯುತ್ ಯೋಜನೆ ಕುರಿತು ಯುಪಿ ಸರ್ಕಾರದೊಂದಿಗೆ ಅದಾನಿ ಗ್ರೂಪ್ ಮಾತುಕತೆ: ವರದಿ

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿದೆ. ಈ ಬೆನ್ನಲ್ಲೇ...

ಅನಧಿಕೃತ ಬುದ್ಧಿಮಾಂದ್ಯ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನವೀಯ ಹಲ್ಲೆ: ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು

ಬಾಗಲಕೋಟೆ: ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ ಶಿಕ್ಷಕ ದಂಪತಿ ಬುದ್ಧಿಮಾಂದ್ಯನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದ 16...

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಿಂದ ಟ್ರಂಪ್ ಫೋಟೋ ಸೇರಿದಂತೆ 16 ದಾಖಲೆಗಳು ಕಣ್ಮರೆ 

ನ್ಯೂಯಾರ್ಕ್: ಜೆಫ್ರಿ ಎಪ್‌ಸ್ಟೀನ್ ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ (Justice Department) ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತ...

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ| ಬಿಎನ್‌ಪಿ ನಾಯಕನ ಮನೆಗೆ ಬೆಂಕಿ : 7 ವರ್ಷದ ಮಗಳು ಸಜೀವ ದಹನ

ವಿದ್ಯಾರ್ಥಿ ನಾಯಕ ಹಾಗೂ ಸ್ವತಂತ್ರ ರಾಜಕಾರಣಿ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಯ ಮೂರನೇ ದಿನವಾದ ಶನಿವಾರ, ಪ್ರತಿಭಟನಾಕಾರರು ಬಾಂಗ್ಲಾದೇಶ್...

ದಕ್ಷಿಣ ಆಫ್ರಿಕಾದಲ್ಲಿ ಸಾರ್ವಜನಿಕರ ಮೇಲೆ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 9 ಜನರ ಸಾವು 

ಜೋಹಾನ್ಸ್‌ಬರ್ಗ್‌ನ ಹೊರಗಿನ ಬಾರ್‌ನಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಗುಂಡಿನ ದಾಳಿ...

ಬೆಂಗಳೂರು : ಜಿಬಿಎ ಅಧಿಕಾರಿಗಳಿಂದ 200ರಷ್ಟು ಮನೆಗಳ ನೆಲಸಮ : ಬೀದಿಗೆ ಬಿದ್ದ ಬಡ ಜನರು

ಅತಿಕ್ರಮಣ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿಯ 5 ಎಕರೆ ಜಾಗದಲ್ಲಿದ್ದ ಸುಮಾರು 200ರಷ್ಟು ಮನೆಗಳನ್ನು ಶನಿವಾರ (ಡಿ.20)...