Homeಅಂಕಣಗಳುಕಂಡದ್ದನ್ನು ಕಂಡಹಾಗೆ ಹೇಳಿದವರು....

ಕಂಡದ್ದನ್ನು ಕಂಡಹಾಗೆ ಹೇಳಿದವರು….

- Advertisement -
- Advertisement -

 ಗೌರಿ ಲಂಕೇಶ್
ಅಕ್ಟೋಬರ್ 26, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಅಮೆರಿಕಾ ಸರ್ಕಾರ ಕೊತಕೊತ ಕುದಿಯುತ್ತಿದೆ. ಯಾವ ದೇಶದ ಮೇಲೆ ಬೇಕಾದರು ದಾಳಿ ಮಾಡಿ ಮಾಡುವ ದೈವಾಜ್ಞೆ ತನಗಿದೆ ಎಂದು ಹೇಳುವ ಅದರ ಅಧ್ಯಕ್ಷ ಜಾರ್ಜ್ ಬುಷ್‍ಗೆ ಕಪಾಳಮೋಕ್ಷವಾಗಿದೆ.
ಸ್ವೀಡನ್ ದೇಶದಲ್ಲಿನ ನೊಬೆಲ್ ಸಮಿತಿ ಈ ವರ್ಷ ಮೊಹ್ಮದ್ ಎಲ್‍ಬರದೈಗೆ ಶಾಂತಿ ಪ್ರಶಸ್ತಿ ಪ್ರಕಟಿಸಿ ಬುಷ್‍ಗೆ ಸೆಡ್ಡು ಹೊಡೆದಿತ್ತಲ್ಲದೆ, ಈ ವಾರ ಹೆರಾಲ್ಡ್ ಪಿಂಟರ್ ಎಂಬ ಬ್ರಿಟಿಷ್ ನಾಟಕಕಾರನಿಗೆ ಪ್ರಶಸ್ತಿ ನೀಡಿ ಅಮೆರಿಕಕ್ಕೆ ಅವಮಾನಿಸಿದೆ. ನೊಬೆಲ್ ಪ್ರಶಸ್ತಿಗಳು ರಾಜಕೀಯ ಪ್ರೇರಿತಗೊಂಡು ಹಲವು ದಶಕಗಳೇ ಕಳೆದಿವೆ. ಹಾಗಾಗಿ ಅಮೆರಿಕಾಕ್ಕೆ ಎದುರಾಗಿ ಈ ಪ್ರಶಸ್ತಿಗಳನ್ನು ಘೋಷಿಸಿರುವುದು ರಾಜಕೀಯ ಕಾರಣಕ್ಕೂ ವಿಪರೀತ ಕುತೂಹಲ ಮೂಡಿಸಿವೆ.
2003ರಲ್ಲಿ ಇರಾಕ್‍ನಲ್ಲಿ weapons of mass destruction ಇದೆ ಎಂಬ ನೆಪವೊಡ್ಡಿ, ಸದ್ದಾಂ ಹುಸೇನ್‍ನಿಂದ ಜಗತ್ತನ್ನೇ ರಕ್ಷಿಸಬೇಕಿದೆ ಎಂದುಹೇಳಿ ಆ ದೇಶದ ಮೇಲೆ ಅಮೆರಿಕಾ ಹರಿಹಾಯ್ದುಹೋಗಲು ಸಜ್ಜಾಗುತ್ತಿದ್ದಾಗ, ಇಂಟರ್‍ನ್ಯಾಶನಲ್ ಅಟೋಮಿಕ್ ಎನರ್ಜಿ ಅಸೋಸಿಯೇಷನ್‍ನ ಮುಖ್ಯಸ್ಥರಾಗಿರುವ ಬರದೈರವರು `ಇರಾಕ್‍ನಲ್ಲಿ ಯಾವ weapons of mass destruction ಇಲ್ಲ’ ಎಂದೇಳಿ ಬುಷ್‍ಗೆ ಸವಾಲೊಡ್ಡಿದ್ದರು. ಆದರೂ ಬುಷ್ ಇರಾಕ್ ಮೇಲೆ ದಾಳಿಯಿಟ್ಟು ಬ್ರಿಟಿಷ್ ಸೈನ್ಯದ ಜೊತೆಗೂಡಿ ಸಾವಿರಾರು ಇರಾಕಿಗಳನ್ನು ಕೊಂದುಹಾಕಿ, ಆ ದೇಶದ ಆತ್ಮವನ್ನೇ ಸರ್ವನಾಶ ಮಾಡಿದ ತರುವಾಯ ಬುಷ್ ಮತ್ತು ಬ್ರಿಟನ್ನಿನ ಬ್ಲೇರ್ ಹೇಳಿದ್ದು ಅಪ್ಪಟ ಸುಳ್ಳು, ಬರದೈ ಹೇಳಿದ್ದೇ ಸತ್ಯ ಎಂದು ಇಡೀ ಜಗತ್ತಿಗೇ ಗೊತ್ತಾಗಿತ್ತು. ತನ್ನ ಕಪಟತನವನ್ನು ಬಹಿರಂಗಪಡಿಸಿದ ಬರದೈಗೆ ಶಾಂತಿ ಪ್ರಶಸ್ತಿ ಸಿಕ್ಕರೆ ಬುಷ್ ಸರ್ಕಾರಕ್ಕೆ ಅವಮಾನವಾಗದೇ ಮತ್ತಿನ್ನೇನು?
ಇನ್ನು ತನ್ನ ಬರಹಗಳಲ್ಲಿ ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಅನ್ಯಾಯವನ್ನು ವಿಶ್ಲೇಷಿಸುವ ನಾಟಕಕಾರ ಹೆರಾಲ್ಡ್ ಪಿಂಟರ್ ಅದೆಂತಹ ಅಗ್ರಸ್ಥಾನದಲ್ಲಿದ್ದಾರೆಂದರೆ ಶೇಕ್ಸ್‍ಪಿರಿಯನ್, ಶೆಕಾವಿಯನ್ ಎಂಬ ಪದಗಳು ಗುಣವಾಚಕಗಳಾಗಿವೆಯೋ ಹಾಗೆ ಪಿಂಟರೆಸ್ಕ್ ಎಂಬ ಪದವೂ ಇಂಗ್ಲಿಷ್ ಭಾಷೆಯ ಅಂಗವಾಗಿ ಹೋಗಿದೆ. ಇವರು ಕಳೆದ ಮೂರು ವರ್ಷದಿಂದ ಬುಷ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಬುಷ್ ಹೇಳಿದ್ದಕ್ಕೆಲ್ಲ ತಲೆದೂಗುವ ತನ್ನ ದೇಶದ ಪ್ರಧಾನಿ ಬ್ಲೇರ್‍ಗೂ ಕ್ಯಾಕರಿಸಿ ಉಗಿದಿದ್ದಾರೆ. ಅಮೆರಿಕಾದಲ್ಲಿ ಅಧಿಕಾರ ಹಿಡಿದಿರುವವರನ್ನು ಕ್ರಿಮಿನಲ್‍ಗಳ ಗ್ಯಾಂಗ್ ಎಂದೂ, ಬ್ಲೇರ್ ಅನ್ನು ಅಮೆರಿಕಾ ಸರ್ಕಾರದ ಬಾಡಿಗೆಗೆ ಹಿಡಿದಿರುವ ಕ್ರಿಶ್ಚಿಯನ್ ಗೂಂಡಾ ಎಂದೂ ಲೇವಡಿ ಮಾಡಿದ್ದರು. ಅಮೆರಿಕಾ ಮತ್ತು ಬ್ರಿಟನ್ ಸರ್ಕಾರಗಳಿಗೆ ಕಡಿವಾಣ ಹಾಕದಿದ್ದರೆ ಇಡೀ ಜಗತ್ತನ್ನೇ ಮುಳುಗಿಸಿಬಿಡುತ್ತಾರೆ ಎಂಬುದು ಅವರ ಪ್ರಾಮಾಣಿಕ ಆತಂಕ.
ಇಲ್ಲಿ ಬುಷ್ ಮತ್ತು ಬ್ಲೇರ್ ಬಗ್ಗೆ ಪಿಂಟರ್‍ರವರು ನೀಡಿರುವ ಹೇಳಿಕೆಯ ಸ್ಯಾಂಪಲ್‍ಗಳಿವೆ ನೋಡಿ; “ಇರಾಕ್ ಮೇಲೆ ನಡೆದದ್ದು ಭಯೋತ್ಪಾದನೆ. ಆದ್ದರಿಂದ ಬುಷ್ ಮತ್ತು ಬ್ಲೇರ್ ಭಯೋತ್ಪಾದಕರು. ಅವರಿಬ್ಬರನ್ನು ಬಂಧಿಸಿ ಯುದ್ಧಕೋರರೆಂದು ವಿಚಾರಣೆಗೊಳಪಡಿಸಿ ಶಿಕ್ಷಿಸಬೇಕು…..”, “ಅಮೆರಿಕಾ ಈಗ ನಾಜಿಗಳ ಜರ್ಮನಿಯನ್ನು ಹೋಲುತ್ತಿದೆ”, “ಜಗತ್ತಿನ ಅತಿ ಅನಾಹುತಕಾರಿ ಅಸ್ತ್ರಗಳು ಅತಿ ಅನಾಹುತಕಾರಿ ನಾಯಕರ ಕೈಯಲ್ಲಿರದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾನೆ ಬುಷ್. ಆದ್ದರಿಂದ ಅತಿ ಅನಾಹುತಕಾರಿ ನಾಯಕ ಯಾರೆಂದು ತಿಳಿದುಕೊಳ್ಳಲು ಆತ ಒಮ್ಮೆ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳಲಿ”, “ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಬಿಡುಗಡೆಯ ಬಗ್ಗೆ ಮಾತಾಡುವ ಬುಷ್ ಹಾಗೂ ಬ್ಲೇರ್ ನಿಜವಾಗಲೂ ಹೇಳುತ್ತಿರುವುದು ಸಾವು, ನಾಶ ಮತ್ತು ಅಭದ್ರತೆಯ ಬಗ್ಗೆ”…..
ಇವೆಲ್ಲ ಇಂದು ಅಮೆರಿಕಾ ಸರ್ಕಾರ ಕೊತಕೊತ ಕುದಿಯುವಂತೆ ಮಾಡಿರುವುದು ಅಚ್ಚರಿಯೇನಲ್ಲ. ಭಿನ್ನಮತ, ವಾಕ್ ಸ್ವಾತಂತ್ರ್ಯ, ಮಾನವಹಕ್ಕುಗಳು, ದಬ್ಬಾಳಿಕೆ ವಿರೋಧಗಳು ನಿಜಕ್ಕೂ, `ನೋಬಲ್’, ಅಲ್ಲವೇ!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...