Homeಅಂಕಣಗಳುಕಂಡದ್ದನ್ನು ಕಂಡಹಾಗೆ ಹೇಳಿದವರು....

ಕಂಡದ್ದನ್ನು ಕಂಡಹಾಗೆ ಹೇಳಿದವರು….

- Advertisement -
- Advertisement -

 ಗೌರಿ ಲಂಕೇಶ್
ಅಕ್ಟೋಬರ್ 26, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಅಮೆರಿಕಾ ಸರ್ಕಾರ ಕೊತಕೊತ ಕುದಿಯುತ್ತಿದೆ. ಯಾವ ದೇಶದ ಮೇಲೆ ಬೇಕಾದರು ದಾಳಿ ಮಾಡಿ ಮಾಡುವ ದೈವಾಜ್ಞೆ ತನಗಿದೆ ಎಂದು ಹೇಳುವ ಅದರ ಅಧ್ಯಕ್ಷ ಜಾರ್ಜ್ ಬುಷ್‍ಗೆ ಕಪಾಳಮೋಕ್ಷವಾಗಿದೆ.
ಸ್ವೀಡನ್ ದೇಶದಲ್ಲಿನ ನೊಬೆಲ್ ಸಮಿತಿ ಈ ವರ್ಷ ಮೊಹ್ಮದ್ ಎಲ್‍ಬರದೈಗೆ ಶಾಂತಿ ಪ್ರಶಸ್ತಿ ಪ್ರಕಟಿಸಿ ಬುಷ್‍ಗೆ ಸೆಡ್ಡು ಹೊಡೆದಿತ್ತಲ್ಲದೆ, ಈ ವಾರ ಹೆರಾಲ್ಡ್ ಪಿಂಟರ್ ಎಂಬ ಬ್ರಿಟಿಷ್ ನಾಟಕಕಾರನಿಗೆ ಪ್ರಶಸ್ತಿ ನೀಡಿ ಅಮೆರಿಕಕ್ಕೆ ಅವಮಾನಿಸಿದೆ. ನೊಬೆಲ್ ಪ್ರಶಸ್ತಿಗಳು ರಾಜಕೀಯ ಪ್ರೇರಿತಗೊಂಡು ಹಲವು ದಶಕಗಳೇ ಕಳೆದಿವೆ. ಹಾಗಾಗಿ ಅಮೆರಿಕಾಕ್ಕೆ ಎದುರಾಗಿ ಈ ಪ್ರಶಸ್ತಿಗಳನ್ನು ಘೋಷಿಸಿರುವುದು ರಾಜಕೀಯ ಕಾರಣಕ್ಕೂ ವಿಪರೀತ ಕುತೂಹಲ ಮೂಡಿಸಿವೆ.
2003ರಲ್ಲಿ ಇರಾಕ್‍ನಲ್ಲಿ weapons of mass destruction ಇದೆ ಎಂಬ ನೆಪವೊಡ್ಡಿ, ಸದ್ದಾಂ ಹುಸೇನ್‍ನಿಂದ ಜಗತ್ತನ್ನೇ ರಕ್ಷಿಸಬೇಕಿದೆ ಎಂದುಹೇಳಿ ಆ ದೇಶದ ಮೇಲೆ ಅಮೆರಿಕಾ ಹರಿಹಾಯ್ದುಹೋಗಲು ಸಜ್ಜಾಗುತ್ತಿದ್ದಾಗ, ಇಂಟರ್‍ನ್ಯಾಶನಲ್ ಅಟೋಮಿಕ್ ಎನರ್ಜಿ ಅಸೋಸಿಯೇಷನ್‍ನ ಮುಖ್ಯಸ್ಥರಾಗಿರುವ ಬರದೈರವರು `ಇರಾಕ್‍ನಲ್ಲಿ ಯಾವ weapons of mass destruction ಇಲ್ಲ’ ಎಂದೇಳಿ ಬುಷ್‍ಗೆ ಸವಾಲೊಡ್ಡಿದ್ದರು. ಆದರೂ ಬುಷ್ ಇರಾಕ್ ಮೇಲೆ ದಾಳಿಯಿಟ್ಟು ಬ್ರಿಟಿಷ್ ಸೈನ್ಯದ ಜೊತೆಗೂಡಿ ಸಾವಿರಾರು ಇರಾಕಿಗಳನ್ನು ಕೊಂದುಹಾಕಿ, ಆ ದೇಶದ ಆತ್ಮವನ್ನೇ ಸರ್ವನಾಶ ಮಾಡಿದ ತರುವಾಯ ಬುಷ್ ಮತ್ತು ಬ್ರಿಟನ್ನಿನ ಬ್ಲೇರ್ ಹೇಳಿದ್ದು ಅಪ್ಪಟ ಸುಳ್ಳು, ಬರದೈ ಹೇಳಿದ್ದೇ ಸತ್ಯ ಎಂದು ಇಡೀ ಜಗತ್ತಿಗೇ ಗೊತ್ತಾಗಿತ್ತು. ತನ್ನ ಕಪಟತನವನ್ನು ಬಹಿರಂಗಪಡಿಸಿದ ಬರದೈಗೆ ಶಾಂತಿ ಪ್ರಶಸ್ತಿ ಸಿಕ್ಕರೆ ಬುಷ್ ಸರ್ಕಾರಕ್ಕೆ ಅವಮಾನವಾಗದೇ ಮತ್ತಿನ್ನೇನು?
ಇನ್ನು ತನ್ನ ಬರಹಗಳಲ್ಲಿ ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಅನ್ಯಾಯವನ್ನು ವಿಶ್ಲೇಷಿಸುವ ನಾಟಕಕಾರ ಹೆರಾಲ್ಡ್ ಪಿಂಟರ್ ಅದೆಂತಹ ಅಗ್ರಸ್ಥಾನದಲ್ಲಿದ್ದಾರೆಂದರೆ ಶೇಕ್ಸ್‍ಪಿರಿಯನ್, ಶೆಕಾವಿಯನ್ ಎಂಬ ಪದಗಳು ಗುಣವಾಚಕಗಳಾಗಿವೆಯೋ ಹಾಗೆ ಪಿಂಟರೆಸ್ಕ್ ಎಂಬ ಪದವೂ ಇಂಗ್ಲಿಷ್ ಭಾಷೆಯ ಅಂಗವಾಗಿ ಹೋಗಿದೆ. ಇವರು ಕಳೆದ ಮೂರು ವರ್ಷದಿಂದ ಬುಷ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಬುಷ್ ಹೇಳಿದ್ದಕ್ಕೆಲ್ಲ ತಲೆದೂಗುವ ತನ್ನ ದೇಶದ ಪ್ರಧಾನಿ ಬ್ಲೇರ್‍ಗೂ ಕ್ಯಾಕರಿಸಿ ಉಗಿದಿದ್ದಾರೆ. ಅಮೆರಿಕಾದಲ್ಲಿ ಅಧಿಕಾರ ಹಿಡಿದಿರುವವರನ್ನು ಕ್ರಿಮಿನಲ್‍ಗಳ ಗ್ಯಾಂಗ್ ಎಂದೂ, ಬ್ಲೇರ್ ಅನ್ನು ಅಮೆರಿಕಾ ಸರ್ಕಾರದ ಬಾಡಿಗೆಗೆ ಹಿಡಿದಿರುವ ಕ್ರಿಶ್ಚಿಯನ್ ಗೂಂಡಾ ಎಂದೂ ಲೇವಡಿ ಮಾಡಿದ್ದರು. ಅಮೆರಿಕಾ ಮತ್ತು ಬ್ರಿಟನ್ ಸರ್ಕಾರಗಳಿಗೆ ಕಡಿವಾಣ ಹಾಕದಿದ್ದರೆ ಇಡೀ ಜಗತ್ತನ್ನೇ ಮುಳುಗಿಸಿಬಿಡುತ್ತಾರೆ ಎಂಬುದು ಅವರ ಪ್ರಾಮಾಣಿಕ ಆತಂಕ.
ಇಲ್ಲಿ ಬುಷ್ ಮತ್ತು ಬ್ಲೇರ್ ಬಗ್ಗೆ ಪಿಂಟರ್‍ರವರು ನೀಡಿರುವ ಹೇಳಿಕೆಯ ಸ್ಯಾಂಪಲ್‍ಗಳಿವೆ ನೋಡಿ; “ಇರಾಕ್ ಮೇಲೆ ನಡೆದದ್ದು ಭಯೋತ್ಪಾದನೆ. ಆದ್ದರಿಂದ ಬುಷ್ ಮತ್ತು ಬ್ಲೇರ್ ಭಯೋತ್ಪಾದಕರು. ಅವರಿಬ್ಬರನ್ನು ಬಂಧಿಸಿ ಯುದ್ಧಕೋರರೆಂದು ವಿಚಾರಣೆಗೊಳಪಡಿಸಿ ಶಿಕ್ಷಿಸಬೇಕು…..”, “ಅಮೆರಿಕಾ ಈಗ ನಾಜಿಗಳ ಜರ್ಮನಿಯನ್ನು ಹೋಲುತ್ತಿದೆ”, “ಜಗತ್ತಿನ ಅತಿ ಅನಾಹುತಕಾರಿ ಅಸ್ತ್ರಗಳು ಅತಿ ಅನಾಹುತಕಾರಿ ನಾಯಕರ ಕೈಯಲ್ಲಿರದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾನೆ ಬುಷ್. ಆದ್ದರಿಂದ ಅತಿ ಅನಾಹುತಕಾರಿ ನಾಯಕ ಯಾರೆಂದು ತಿಳಿದುಕೊಳ್ಳಲು ಆತ ಒಮ್ಮೆ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳಲಿ”, “ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಬಿಡುಗಡೆಯ ಬಗ್ಗೆ ಮಾತಾಡುವ ಬುಷ್ ಹಾಗೂ ಬ್ಲೇರ್ ನಿಜವಾಗಲೂ ಹೇಳುತ್ತಿರುವುದು ಸಾವು, ನಾಶ ಮತ್ತು ಅಭದ್ರತೆಯ ಬಗ್ಗೆ”…..
ಇವೆಲ್ಲ ಇಂದು ಅಮೆರಿಕಾ ಸರ್ಕಾರ ಕೊತಕೊತ ಕುದಿಯುವಂತೆ ಮಾಡಿರುವುದು ಅಚ್ಚರಿಯೇನಲ್ಲ. ಭಿನ್ನಮತ, ವಾಕ್ ಸ್ವಾತಂತ್ರ್ಯ, ಮಾನವಹಕ್ಕುಗಳು, ದಬ್ಬಾಳಿಕೆ ವಿರೋಧಗಳು ನಿಜಕ್ಕೂ, `ನೋಬಲ್’, ಅಲ್ಲವೇ!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...