Homeಚಳವಳಿಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

ಗೌರಿ ಲಂಕೇಶ್ ಹತ್ಯೆಯ ಕೊಡಗು ನಂಟು ಬಿಚ್ಚಿಟ್ಟ  ಕಾಂಗ್ರೆಸ್‍ನ  ಅಧೋಗತಿ!

- Advertisement -
ಎಸ್‍ಐಟಿ ತಂಡ ತನಿಖೆ ಬಿಗಿಗೊಳಿಸಿದಂತೆಲ್ಲ `ಕ್ಯಾಪ್ಟನ್’ ಗೌರಿ ಹತ್ಯೆಯ ಒಂದೊಂದೇ ಸಿಕ್ಕುಗಳು ಬಿಡಿಸಿಕೊಳ್ಳುತ್ತಿವೆ. ಜೊತೆಗೆ ಕೊಲೆಗಡುಕ ಹಿಂದೂತ್ವವಾದಿಗಳ ಬಯಲಾಟವೂ ಬೆತ್ತಲಾಗುತ್ತಿದೆ. ಅರೆಸ್ಟಾದ ಹನ್ನೊಂದೂ ಜನರ ಬೇರುಗಳು ಒಂದಿಲ್ಲೊಂದು ರೂಪದಲ್ಲಿ ಸಂಘ ಪರಿವಾರದೊಡನೆ ನಂಟು ಹೊಂದಿರುವುದು ಖಾತ್ರಿಯಾಗುತ್ತಿದ್ದಂತೆಯೇ ಎಲ್ಲರ ಊಹೆಗಳು ದಿಟವಾಗುತ್ತಿವೆ. ನೋ ಡೌಟ್, ಸನಾತನಿ ಮನಸ್ಥಿತಿಗಳೇ ಗೌರಿಯನ್ನು ಕೊಂದಿವೆ! ಕೆಲ ಆಪಾದಿತರ ಪರ ವಾದಿಸಲು ಹಿಂದೂ ಸಂಘಟನೆಗಳೇ ವಕೀಲರನ್ನು ನೇಮಕ ಮಾಡೋದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿರೋದು ಇದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡುತ್ತದೆ.
ಆದರೆ, ಅಷ್ಟೂ ಅರೆಸ್ಟುಗಳಲ್ಲಿ ಕೊಡಗಿನ ರಾಜೇಶ್ ಬಂಗೇರಾನ ಬಂಧನವಿದೆಯಲ್ಲ ಅದು, ಕಾಂಗ್ರೆಸ್ ಎಂಬ ಪೊಲಿಟಿಕಲ್ ಪಾರ್ಟಿ ಕೊಡಗಿನ ಮಟ್ಟಿಗೆ ಅದೆಷ್ಟು ಹೊಣೆಗೇಡಿ ಕೂಟದಂತಾಗಿದೆ ಅನ್ನೋದನ್ನೂ ಸಾಬೀತುಮಾಡಿದೆ. ಈ ರಾಜೇಶ್ ಬಂಗೇರಾ ಸಂಘ ಪರಿವಾರದ ಹಿನ್ನೆಲೆಯವ ಅನ್ನೋದು ಎಷ್ಟು ಸತ್ಯವೋ, ಕಾಂಗ್ರೆಸ್‍ನ ಎಂಎಲ್‍ಸಿ ವೀಣಾ ಅಚ್ಚಯ್ಯ ಎಂಬ ಹೆಂಗಸಿನ ಆಪ್ತ ಕಾರ್ಯದರ್ಶಿಯಾಗಿದ್ದವ ಅನ್ನೋದೂ ಅಷ್ಟೇ ಆಘಾತಕಾರಿ ಸಂಗತಿ! ಕೊಡಗಿನ ಕಾಂಗ್ರೆಸ್ಸನ್ನು ಇಡಿಯಾಗಿ ನಿಯಂತ್ರಿಸುತ್ತಿರೋದು ಇದೇ ಹೆಂಗಸು. ಖರ್ಗೆ ಸಾಹೇಬರ ಖಡಕ್ ಕೃಪೆಯೇ ವೀಣಮ್ಮಳನ್ನು ಈ ಪರಿ ಪ್ರಭಾವಿಯಾಗಿ ಬೆಳೆಸಿದೆ. ಇಲ್ಲೇ ಇರೋದು ನೋಡಿ ಕಾಂಗ್ರೆಸ್‍ನ ದುರಂತ. ತನ್ನ ಪಕ್ಷದ ರಾಜಕೀಯ ಸಿದ್ಧಾಂತಕ್ಕೆ ತದ್ವಿರುದ್ಧ ನಿಲುವಿನ ವ್ಯಕ್ತಿಯೊಬ್ಬನನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳುವಷ್ಟು ರಾಜಕೀಯ ಮುಠ್ಠಾಳರು ಅಥವಾ ಅವಕಾಶವಾದಿಗಳ ಕೈಯಲ್ಲಿ ಕಾಂಗ್ರೆಸ್‍ನ ತಳಮಟ್ಟದ ಚುಕ್ಕಾಣಿ ಸಿಕ್ಕಿರೋದೆ ಆ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಹೀಗೆ ಮುಗ್ಗರಿಸಲು ಕಾರಣ.
ರಾಜೇಶ್ ಬಂಗೇರಾನ ಬಂಧನವಾಗುತ್ತಿದ್ದಂತೆಯೇ ತನ್ನ ತಪ್ಪಿನ ಅರಿವಾಗಿರುವ ವೀಣಮ್ಮ ಕಂಡಕಂಡಲ್ಲೆಲ್ಲ ನನಗೂ ಆತನಿಗೂ ಎಂಥ ಸಂಬಂಧವೂ ಇಲ್ಲ, ಕೆಲಕಾಲ ನನ್ನ ಆಪ್ತಸಹಾಯಕ ಆಗಿದ್ದ ಅಷ್ಟೇ ಅಂತ ಸ್ಪಷ್ಟೀಕರಣದ ಪ್ಲೇಕಾರ್ಡ್ ಹಿಡಿದುಕೊಂಡು ಓಡಾಡುವಂತಾಗಿದೆ. ಮೇಲ್ನೋಟಕ್ಕೆ ಅದು ನಿಜದಂತೆಯೇ ಕಂಡುಬರುತ್ತದಾದರು ವೀಣಾ ಅಚ್ಚಯ್ಯ ತಾನೇ ತಾನಾಗಿ ಸೃಷ್ಟಿಸಿಕೊಂಡಿರುವ ಈ ಅವಾಂತರದ ಫಸಲುಗಳನ್ನು ಅನುಭವಿಸಲೇಬೇಕಿದೆ. ಯಾಕೆಂದರೆ ರಾಜೇಶ್ ಬಂಗೇರಾನ ಸೈದ್ಧಾಂತಿಕ ನಿಲುವು ಅದೇನೆ ಆಗಿರಲಿ, ಕನಿಷ್ಠ ಪಕ್ಷ ಅವನ ಪೊಲಿಟಿಕಲ್ ಹಿನ್ನೆಲೆಯನ್ನು ಗಮನಿಸಿದ ಎಂಥದ್ದೇ ರಾಜಕೀಯ ಗಮಾರ ಕೂಡಾ, ಕಾಂಗ್ರೆಸ್ ಎಂಎಲ್‍ಸಿಯೊಬ್ಬರಿಗೆ ಆಪ್ತ ಸಹಾಯಕನಾಗಲು ಈತ ನಾಲಾಯಕ್ಕು ಅಂತ ಹೇಳಿಬಿಡುತ್ತಾನೆ. ಯಾಕೆಂದರೆ ಶಿಕ್ಷಣ ಇಲಾಖೆಯ ಸರ್ಕಾರಿ ನೌಕರನಾಗಿದ್ದರೂ ಈತ ಈ ಹಿಂದೆ ಬಿಜೆಪಿಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿಕುಶಾಲಪ್ಪನಿಗೆ ಪಿಎ ಆಗಿ ಕೆಲಸ ಮಾಡಿದ್ದವ! ತನ್ನ ವಿರೋಧಿ ಪಕ್ಷದ ನಾಯಕನ ಪಿಎ ಆಗಿದ್ದವನನ್ನೇ ತನ್ನ ಆಪ್ತ ಸಹಾಯಕನನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆಂದರೆ ಈ ವೀಣಮ್ಮನ ಕಾಮನ್‍ಸೆನ್ಸು, ಪೊಲಿಟಿಕಲ್ ನಾಲೆಡ್ಜು ಅದಿನ್ನೆಂತದ್ದಿರಬೇಡ.
ಕಾಂಗ್ರೆಸ್‍ನೊಳಗೆ ಕಮಲದ ಕಲರವ
ಕೊಡಗು ಕಾಂಗ್ರೆಸ್ ದುಸ್ಥಿತಿಯ ವಿಚಾರಕ್ಕೆ ಮರಳುವುದಾದರೆ ಕೈ ಪಾರ್ಟಿಯ ಕೀ ಪೊಸೀಷನ್‍ಗಳಲ್ಲಿ ಸಂಘ ಪರಿವಾರದ ಮನಸ್ಸುಗಳೇ ಅಧಿಕೃತವಾಗಿ ಠಳಾಯಿಸಿವೆ! ಕಾಂಗ್ರೆಸಿನಲ್ಲಿ ಸೈದ್ಧಾಂತಿಕ ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಸಂಘ ಪರಿವಾರದವರೇ ಬೇರೂರಿದ್ದಾರೆ. ಮೇಲ್ನೋಟಕ್ಕೆ ಇವರು ಕಾಂಗ್ರೆಸಿಗರು ಅನಿಸಿದರು ಕೂಡ, ಸಂಘ ಪರಿವಾರದ ಅಜೆಂಡಾಗಳು ಸುಲಭವಾಗಿ ಕೊಡಗು ಜಿಲ್ಲೆಯ ಕಾಂಗ್ರೆಸಿನಲ್ಲಿ ಕಾರ್ಯಾಚರಣೆಗೆ ಬರುತ್ತದೆ. ಇದಕ್ಕೊಂದು ಸೂಕ್ತ ನಿದರ್ಶನ ಟಿಪ್ಪು ಜಯಂತಿ. ಸ್ವತಃ ತಮ್ಮದೇ ಕಾಂಗ್ರೆಸ್ ಸರ್ಕಾರ ಪಣತೊಟ್ಟು, ಕೋಮುವಾದಿಗಳಿಗೆ ಸೆಡ್ಡು ಹೊಡೆದು ಟಿಪ್ಪು ಜಯಂತಿಗೆ ಅಡಿಗಲ್ಲು ಹಾಕಿದ್ದರೂ, ಬಿಜೆಪಿ ಹಾಗೂ ಸಂಘ ಪರಿವಾರ ವಿರೋಧಿಸುತ್ತದೆನ್ನುವ ಕಾರಣಕ್ಕೆ ಟಿಪ್ಪು ಜಯಂತಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯೂ ವಿರೋಧಿಸುತ್ತದೆ! ಅದೇರೀತಿ, ಬಿಜೆಪಿ ಬೆಂಬಲಿಸುವ ಕೊಡಗು ಪ್ರತ್ಯೇಕತಾ ಹೋರಾಟವನ್ನು ಕೂಡ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರು ಬೆಂಬಲಿಸುತ್ತಾರೆ!!
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್‍ರ ಒಂದು ವ್ಯಂಗ್ಯೋಕ್ತಿ ಇಡೀ ಕೊಡಗು ಕೈ ಪಾರ್ಟಿಯ ಅಧೋಗತಿಯನ್ನು ಸಮಗ್ರವಾಗಿ ಕಟ್ಟಿಕೊಡುತ್ತೆ. ಜಿಲ್ಲಾ ಕಾಂಗ್ರೆಸ್ಸಿಗೆ ಅಧ್ಯಕ್ಷರು ಯಾರಾಗಬೇಕೆನ್ನುವ ಭರ್ಜರಿ ಚರ್ಚೆ ನಡೆದಿದ್ದ ಸಂದರ್ಭದಲ್ಲಿ ರಮಾನಾಥ್ ಹೀಗೆ ಹೇಳಿದ್ದರು, `ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸಿಗೆ ಪ್ರತ್ಯೇಕ ಅಧ್ಯಕ್ಷರು ಬೇಡ, ಬಿಜೆಪಿಗೂ, ಕಾಂಗ್ರೆಸಿಗೇ ಒಬ್ಬರೇ ಅಧ್ಯಕ್ಷರು ಸಾಕು!’. ಕಳೆದ ಒಂದು ದಶಕದಿಂದ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯನವರು ಕೂಡಾ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್‍ನ ರಾಜ್ಯ ನಾಯಕರ್ಯಾರೂ ತಲೆಕೆಡಿಸಿಕೊಂಡಿಲ್ಲ.
ಪ್ರತ್ಯೇಕತಾ ಹೋರಾಟವನ್ನು ನಡೆಸುತ್ತಿರುವ ಸಿ.ಎನ್.ಸಿ. ಸಂಘಟನೆಯ ಎನ್.ಯು. ನಾಚಪ್ಪ ಬಿಜೆಪಿಯ ಸುಬ್ರಹ್ಮಣ್ಯಸ್ವಾಮಿಯವರನ್ನು ಕರೆಸಿ, ಅವರ ಬಾಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ವಾಚಾಮಗೋಚರ ಟೀಕಿಸುವಂತೆ ಮಾಡಿದ ಕಾರ್ಯಕ್ರಮಗಳಲ್ಲಿ ಕಾಂಗ್ರೆಸಿನ ರಾಷ್ಟ್ರೀಯ ವಕ್ತಾರ ಎನಿಸಿಕೊಳ್ಳುವ ಬ್ರಿಜೇಶ್ ಕಾಳಪ್ಪ ಹಾಗೂ ವೀಣಾ ಅಚ್ಚಯ್ಯ ಸನ್ಮಾನ ಸ್ವೀಕರಿಸಿ ಮರಳುತ್ತಾರೆ. ಹೀಗೆ ಬಿಜೆಪಿಮಯವಾಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಬೆರಳೆಣಿಕೆಯಷ್ಟಿರುವ ಜಾತ್ಯತೀತ ನಿಲುವಿನ ಮುಖಂಡರಿಗೆ ಕವಡೆ ಕಿಮ್ಮತ್ತಿಲ್ಲ. ಅಂತವರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಕಾಂಗ್ರೆಸಿನ ಸಮಸ್ತ ಅಧಿಕಾರ ಕಮಲ-ಕಾಂಗ್ರೆಸಿಗರ ಕೈಯಲ್ಲಿದೆ. ಈ ಕಮಲ-ಕಾಂಗ್ರೆಸಿನ ಚುಕ್ಕಾಣಿ ಹಿಡಿದು ಕೂತಿರೋದು ಇದೇ ವೀಣಾ ಅಚ್ಚಯ್ಯ!
ಇಲ್ಲದೇ ಹೋಗಿದ್ದರೆ, ಸತತವಾಗಿ ಬಿಜೆಪಿ ನಾಯಕರಿಗೇ ಪಿಎ ಆಗುತ್ತಿದ್ದ ವ್ಯಕ್ತಿಯನ್ನು ಕರೆತಂದು ತನ್ನ ಪಿಎ ಆಗಿ ನೇಮಿಸಿಕೊಳ್ಳುತ್ತಿರಲಿಲ್ಲ. ಇವತ್ತು ಗೌರಿ ಲಂಕೇಶ್‍ರ ಹತ್ಯೆಯ ಕೇಸಿನಲ್ಲಿ ಅರೆಸ್ಟಾಗಿರುವ ರಾಜೇಶ್ ಬಂಗೇರಾ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿದ್ದ ರವಿ ಕುಶಾಲಪ್ಪ ಎಂಬ ಖಟ್ಟರ್ ಆರೆಸ್ಸೆಸ್ಸಿಗ-ಕಂ-ಬಿಜೆಪಿ ಆಸಾಮಿಗೆ ಪಿಎ ಆಗಿದ್ದ. ಆ ನೇಮಕಾತಿಯ ಹಿಂದೆ ಸಂಘ ಪರಿವಾರ ಕೆಲಸ ಮಾಡಿತ್ತು. ರವಿ ಕುಶಾಲಪ್ಪನ ನಂತರ ಬಿಜೆಪಿಯ ಶರೀನ್ ಸುಬ್ಬಯ್ಯ ಎಂಬಾತ ಜಿಪಂ ಅಧ್ಯಕ್ಷನಾಗಿದ್ದಾಗಲು ಈ ಬಂಗೇರಾನೆ ಪಿಎ ಆಗಿ ಮುಂದುವರೆದ. ಆದರೆ ಆಮೇಲೆ, ಜಿಪಂ ಚುಕ್ಕಾಣಿ ಕೆ.ಜಿ.ಬೋಪಯ್ಯನ ಆಪ್ತ ಹರೀಶ್ ತೆಕ್ಕೆಗೆ ಜಾರಿದಾಗ ಪಿಎ ಹುದ್ದೆ ಬಂಗೇರಾನ ಪಾಲಿಗೆ ಉಳಿಯಲಿಲ್ಲ. ಯಾಕೆಂದರೆ ಒಂದೇ ಪಕ್ಷದ ಬೋಪಯ್ಯ ಮತ್ತು ರವಿ ಕುಶಾಲಪ್ಪನದು ಹಾವು ಮುಂಗುಸಿ ಸಂಬಂಧ. ಕಳೆದ ಎಲೆಕ್ಷನ್‍ನಲ್ಲೇ ಬೋಪಯ್ಯಗೆ ಟಿಕೆಟ್ ತಪ್ಪಿಸಿ ತಾನೇ ವಿರಾಜಪೇಟೆ ಬಿಜೆಪಿ ಅಭ್ಯರ್ಥಿಯಾಗಲು ರವಿ ಕುಶಾಲಪ್ಪ ತಂತ್ರ ನಡೆಸಿದ್ದ. ಅದೂಅಲ್ಲದೆ, ಯಡ್ಯೂರಪ್ಪನ ಪಕ್ಕಾ ಫಾಲೋವರ್ ಥರಾ ವರ್ತಿಸುವ ಬೋಪಯ್ಯನೆಂದರೆ ಸಂಘ ಪರಿವಾರಕ್ಕೂ ಅಷ್ಟಕ್ಕಷ್ಟೇ. ಬೋಪಯ್ಯನಿಗೂ ಪರಿವಾರದ ಮೇಲೆ ಸೇಮ್-ಟು-ಸೇಮ್ ಮಮಕಾರ! ಆ ಕಾರಣಕ್ಕೆ ರವಿಯ ಆಪ್ತ ಬಳಗದ, ಸಂಘ ಪರಿವಾರ ಲಿಂಕಿನ ರಾಜೇಶ್ ಬಂಗೇರಾಗೆ ಗೇಟ್‍ಪಾಸ್ ಕೊಟ್ಟು ಗದುಮಿದ ಬೋಪಯ್ಯ ತನ್ನ ಭಂಟನ ದೇಖಾರೇಖಿಗೆಂದು ಬೇರೊಬ್ಬ ಸಹಾಯಕನನ್ನು ಗೊತ್ತು ಮಾಡಿದ್ದ.
ತನ್ನ ಚೇಲಾ ಬಂಗೇರಾಗೆ ಹೇಗಾದರು ಸರ್ಕಾರಿ ಸೋಗಿನ ರಾಜಕೀಯ ಪುನರ್ವಸತಿ ಕಲ್ಪಿಸುವ ಅನಿವಾರ್ಯತೆಗೆ ಬಿದ್ದ ರವಿ ಕುಶಾಲಪ್ಪ ಎಡತಾಕಿದ್ದು ತನ್ನದೇ ಶಾಂತೆಯಂಡ ಕುಟುಂಬಸ್ಥೆಯಾದ ಕಾಂಗ್ರೆಸ್‍ನ ವೀಣಾ ಅಚ್ಚಯ್ಯರನ್ನು. ಪಕ್ಷದ ಸಿದ್ಧಾಂತ, ರಾಜಕೀಯ ನಿಲುವು ಯಾವುದೂ ಲೆಕ್ಕಕ್ಕಿರದ ವೀಣಾ ಮೇಡಮ್ಮು ಕಳ್ಳುಬಳ್ಳಿ ಸಂಬಂಧಕ್ಕೆ ಬೆಲೆಕೊಟ್ಟು ರವಿಕುಶಾಲಪ್ಪನ ಭಂಟ ಬಂಗೇರಾನನ್ನು ತನ್ನ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು! ಸಂಘ ಪರಿವಾರದ ಈ ಆಸಾಮಿ ಕಾಂಗ್ರೆಸಿನ ಪದಾಧಿಕಾರಿಗಳ ನೇಮಕಾತಿ ವಿಚಾರದಲ್ಲೂ ಕೈ ಆಡಿಸುತ್ತಿದ್ದುದಲ್ಲದೆ ಅಲ್ಪಸಂಖ್ಯಾತ ವರ್ಗದವರು ಯಾವುದಾದರೂ ಕೆಲಸ ಕಾರ್ಯಗಳಿಗೆ ವೀಣಾ ಅಚ್ಚಯ್ಯಗೆ ಮನವಿ ನೀಡಿದರೆ, ಆ ಮನವಿಯೇ ಕಡತದಿಂದ ನಾಪತ್ತೆಯಾಗುವಂತೆ ಮಾಡಿಬಿಡುತ್ತಿದ್ದನಂತೆ!! ಇನ್ನು ಕಾಂಗ್ರೆಸ್ ಹೇಗೆ ತಾನೆ ಉದ್ದಾರವಾದೀತು….
– ಬಿ.ಎನ್. ಮನುಶೆಣೈ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...