Homeಅಂಕಣಗಳುಚುಕುಬುಕು ಚುಕುಬುಕು ರೈಲು; ರೈಲ್ವೆ ಸಚಿವ ಸುತ್ತಿದರು ರೀಲು!

ಚುಕುಬುಕು ಚುಕುಬುಕು ರೈಲು; ರೈಲ್ವೆ ಸಚಿವ ಸುತ್ತಿದರು ರೀಲು!

- Advertisement -
- Advertisement -

ಮಿಥ್ಯ: ‘ಅದು ಹಕ್ಕಿ…ಅದು ವಿಮಾನ…ವೀಕ್ಷಿಸಿ, ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ನಿರ್ಮಿಸಿರುವ ಭಾರತದ ಮೊದಲ ಅರೆ-ವೇಗವಾಹಿನಿ (ಸೆಮಿ-ಸ್ಪೀಡ್) ರೈಲು ವಂದೇ ಮಾತರಂ ಎಕ್ಸಪ್ರೆಸ್ ಅನ್ನು. ಇದು ಬೆಳಕಿನ ವೇಗದಲ್ಲಿ ಓಡುತ್ತದೆ…’

ರೈಲ್ವೆ ಸಚಿವ ಗೋಯಲ್ ಪೋಸ್ಟ್.

ಫೆಬ್ರುವರಿ 9ರಂದು ಈ ಮೇಲಿನ ಪೋಸ್ಟ್ ಹಾಕಿರುವ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಇದರ ಜೊತೆಗೆ ಒಂದು ಚಲಿಸುವ ರೈಲಿನ ವಿಡಿಯೋವನ್ನೂ ಹಾಕಿದ್ದಾರೆ. ಗೋಯಲ್ ಅವರ ಅಧಿಕೃತ ಟ್ವಿಟರ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲೂ ಇದನ್ನು ಹಾಕಲಾಗಿದೆ. ಇದನ್ನೇ ನಂಬಿದ ‘ಭಕ್ತರು’ ಈ ವಿಷಯವನ್ನು ಜಾಲತಾಣದಲ್ಲಿ ಹರಡಿದ್ದೇ ಹರಡಿದ್ದು.
ಸಚಿವರು ಹಾಕಿದ ವಿಡಿಯೋ ಲಿಂಕ್: https://twitter.com/PiyushGoyal/status/1094496373410615296
ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಕೂಡ ಇದೇ ವಿಡಿಯೋವನ್ನು ರಿಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಇಂತಹ ವಿಷಯಗಳನ್ನು ಬೆಳಕಿನ ವೇಗದಲ್ಲಿ ಕ್ಯಾಚ್ ಮಾಡುವ ‘ರಿಪಬ್ಲಿಕ್’ ಟಿವಿಯವರು ತಮ್ಮ ವೆಬ್‌ಸೈಟಿನಲ್ಲಿ ಈ ವಿಡಿಯೋ ಒಗೆದು, ‘ವಾವ್, ಮೇಕ್ ಇನ್ ಇಂಡಿಯಾ’ ಎಂದಿದ್ದಾರೆ!

ಸತ್ಯ: ರೈಲು ಸಚಿವ ರೀಲು ಬಿಟ್ಟಿದ್ದು ಅವರು ಪೋಸ್ಟ್ ಹಾಕಿದ ಸ್ವಲ್ಪ ಹೊತ್ತಿನಲ್ಲೇ ಬಯಲಾಗಿತ್ತು. ಅವರ ಫೇಸ್‌ಬುಕ್ ಪೇಜ್‌ನಲ್ಲಿ ಕಮೆಂಟ್ ಮಾಡಿದ ಹಲವರು ಇದು ಒರಿಜಿನಲ್ ವಿಡಿಯೋ ಅಲ್ಲ ಎಂದು ಟೀಕಿಸಿದ್ದರು. ‘ಆರ್‌ಎಫ್ ಎಜೆ’ ಹೆಸರಿನ ಒಬ್ಬರು, ಇದು ನನ್ನ ವಿಡಿಯೋ. ಗೋಯಲ್ ಇದರ ವೇಗವನ್ನು (ವಿಡಿಯೋದಲ್ಲಿ) ದುಪ್ಪಟ್ಟು ಮಾಡಿ ಸುಳ್ಳು ಹರಡುತ್ತಿದ್ದಾರೆ ಎಂದು ಕಮೇಂಟ್ ಮಾಡಿದ್ದಲ್ಲದೇ, ಒರಿಜಿನಲ್ ವಿಡಿಯೊದ ಯು-ಟ್ಯೂಬ್ ವಿಳಾಸವನ್ನೂ ನೀಡಿದ್ದರು.

ಓರಿಜಿನಿಲ್ ವಿಡಿಯೋ ಮಾಡಿದವರ ಕಮೆಂಟ್

ಯು-ಟ್ಯೂಬ್ ಪರೀಕ್ಷಿಸಿದಾಗ ‘ರೈಲ್ ಮೇಲ್’ ಎಂಬ ಚಾನೆಲ್ ಒಂದಿದ್ದು, ಇದರ ಸದಸ್ಯರು ರೈಲು, ರೈಲು ಪ್ರಯಾಣ ಕುರಿತು ಆಸಕ್ತಿ ಇರುವ ಜನರಾಗಿದ್ದಾರೆ. ‘ಆರ್‌ಎಫ್ ಎಜೆ’ ಅವರೇ ಅಡ್ಮಿನ್ ಆಗಿರುವ ‘ರೈಲ್‌ಮೇಲ್’ ಹೆಸರಿನ ಫೇಸ್‌ಬುಕ್ ಪೇಜ್ ಕೂಡ ಇದೆ.
ಮೂಲ ವಿಡಿಯೋದಲ್ಲಿನ ರೈಲಿನ ವೇಗವನ್ನು ವಿಡಿಯೋದಲ್ಲಿ ಡಬಲ್ ಮಾಡಿರುವ (ಮಾಡಿಸಿರುವ!) ರೈಲು ಸಚಿವರು, ಮೇಕ್ ಇನ್ ಇಂಡಿಯಾ ಅಂತೆಲ್ಲ ರೈಲು ಬಿಟ್ಟಿದ್ದು, ರೀಲು ಸುತ್ತಿದ್ದು ಪಕ್ಕಾ ಆಗಿತು. ಇವೆರಡೂ ವಿಡಿಯೋಗಳನ್ನು ಪಕ್ಕಕ್ಕಿಟ್ಟು ಪರೀಕ್ಷಿಸಿದಾಗ ಸತ್ಯ ಇನ್ನಷ್ಟು ನಿಚ್ಚಳವಾಯಿತು. ಮೂಲ ವಿಡಿಯೋವನ್ನು ಹರಿಯಾಣದ ಅಸೌಟಿ ರೈಲು ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದ್ದು, ಆ ವಿಡಿಯೋ ಮೇಲೆ ವಾಟರ್ ಟ್ರೇಡ್‌ಮಾರ್ಕ್ ಕೂಡ ಇದೆ.

ಪಿಯುಷ್ ಗೋಯಲ್

ಎರಡೂ ವಿಡಿಯೋ ಪರೀಕ್ಷಿಸಿದ ಲಿಂಕ್:
https://vimeo.com/316395038
ಇದೇನೂ ಮೊದಲ ಬಾರಿ ಅಲ್ಲ, ಹಲವಾರು ಸಲ ರೈಲ್ವೆ ಸಚಿವ ಕೇಂದ್ರ ಸರ್ಕಾರವನ್ನು ಹೊಗಳಿಕೊಳ್ಳಲು ಸುಳ್ಳು ಟ್ವೀಟ್, ಸುಳ್ಳು ಪೋಸ್ಟ್ಗಳನ್ನು ಹಾಕುತ್ತಲೇ ಬಂದಿದ್ದಾರೆ.
ರೈಲು ಬಿಡೋ ಮಾರಾಯ ಅಂದರೆ ರೀಲು ಸುತ್ತುತ್ತ ಕುಳಿತಿದ್ದಾರೆ ಪಿಯುಷ್ ಗೋಯಲ್.

( ಕೃಪೆ: ಅಲ್ಟ್ ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...