Homeಅಂಕಣಗಳುಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

ಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

- Advertisement -
ತಿಜಾಡ್ಯದ ವಿರುದ್ಧ ಬಹುಕಾಲದಿಂದಲೂ ಸಂತರು, ಸಮಾಜಸುಧಾರಕರು ಎಷ್ಟೇ ಮಾತನಾಡಿದ್ದರೂ ಅವರುಗಳ ಜಾತಿ ಮೂಲವನ್ನೇ ಎತ್ತಿ ಹಿಡಿದು ಅವರನ್ನು ಅವರವರ ಜಾತಿಗಳ ಐಕಾನುಗಳನ್ನಾಗಿಸಿದ ಹಿರಿಮೆ ನಮ್ಮದು. ಈ ಮನೋಧರ್ಮದ ಬಲಿಪಶುಗಳಾಗಿರುವವರು ಇಲ್ಲಿನ ಅಸ್ಪøಶ್ಯರು. ಆರ್ಥಿಕವಾಗಿ ಸ್ವಲ್ಪ ಮಟ್ಟಿಗಾದರೂ ಸಬಲರಾದರೂ ಇವರನ್ನು ಸಾಮಾಜಿಕವಾಗಿ ತಮ್ಮ ಸಮಾನರೆಂದು ಒಪ್ಪಿಕೊಳ್ಳುವುದಕ್ಕೆ ಮೇಲ್ಜಾತಿ ಮನಸ್ಥಿತಿಯವರು ಸಿದ್ಧರಿಲ್ಲ. ಈ ಮನಸ್ಥಿತಿ ಆಗಾಗ ತನ್ನ ವಿಕೃತ ರೂಪವನ್ನು ಪ್ರದರ್ಶಿಸಿ ಸಮಾಜವನ್ನೇ ಕದಡುತ್ತದೆ.
ಈ ಮಾತಿಗೊಂದು ತಾಜಾ ಉದಾಹರಣೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೂಲೆಯಲ್ಲಿರುವ ಗೋನಾಳ ಗ್ರಾಮ. ಕುರುಬ ಸಮುದಾಯದ ಸುಮಾರು 70, ಮಾದಿಗ ಸಮುದಾಯದ ಸುಮಾರು 50, ಲಿಂಗಾಯತ, ನಾಯಕ, ಮುಸ್ಲಿಂ ಸಮುದಾಯದ ತಲಾ 10 – 15 ಮನೆಗಳಿರುವ ಈ ಹಳ್ಳಿ. ಇಲ್ಲಿ ಆರ್ಥಿಕವಾಗಿ ಹೇಳಿಕೊಳ್ಳುವಂಥ ಅಂತರ ಕಂಡು ಬರುವುದಿಲ್ಲ. ಕುರುಬರಲ್ಲಿರುವಂತೆಯೇ ಮಾದಿಗರಲ್ಲಿಯೂ ಸ್ಥಿತಿವಂತರು, ಸಣ್ಣ ಭೂಹಿಡುವಳಿದಾರರು, ಭೂಹೀನರು ಇದ್ದಾರೆ. ಎಲ್ಲ ಮನೆಗಳಲ್ಲಿಯೂ ಬಸವಣ್ಣನವರ ಪಟಗಳು ರಾರಾಜಿಸುತ್ತವೆ. ಆದರೆ ದೇವರ ಸ್ಥಾದಲ್ಲಿರುವ ಬಸವೇಶ್ವರರ ಬೋಧನೆಗಳು ಸಾಮಾಜಿಕವಾಗಿ ನೆಲೆನಿಂತಿರುವ ಸಂಬಂಧಗಳನ್ನು ಬದಲಾಯಿಸುವಷ್ಟು ಶಕ್ತನಾಗಿಲ್ಲದಿರುವುದೊಂದು ದುರಂತ.
ತಾವು ಮೇಲ್‍ಸ್ತರದವರು ಎಂದು ಕೊಳ್ಳುವ ಕುರುಬ ಸಮುದಾಯದವರು, ತಮ್ಮ ಕಣ್ಣ ಮುಂದೆಯೇ ಅಸ್ಪøಶ್ಯರೆನಿಸಿಕೊಂಡವರು ಬೆಳೆಯುವುದನ್ನು ಸಹಿಸಲಾರದೇ ಹೋದರು. ಆ ಊರಿನ ಬಹುತೇಕರು ಕಂಪ್ಲಿ, ಹೊಸಪೇಟೆಗಳಂಥಾ ಊರುಗಳಲ್ಲಿ ಶಿಕ್ಷಣವನ್ನು ಪಡೆದಿದ್ದರೂ ಆ ಶಿಕ್ಷಣ ಕೇವಲ ಸರ್ಟಿಫಿಕೇಟುಗಳಿಗೆ ಸೀಮಿತವಾಗಿದೆ. ಮನೋಭಾವಗಳಂತೂ ಹಳೆಯ ಮಾದರಿಯವೇ ಆಗಿವೆ. ಕೆಳಜಾತಿಗಳ ಬಗೆಗಿನ ಅಸಹನೆಯ ಕಿಚ್ಚು ಮೇಲ್ಜಾತಿ ಎನಿಸಿಕೊಂಡವರನ್ನು ಒಳಗೊಳಗೇ ಸುಡುತ್ತಿರುವುದನ್ನು ಕಾಣಬಹುದು.
ಜೂನ್ 19ರಂದು ಆ ಹಳ್ಳಿಗೆ ಬೇಟಿ ನೀಡಿದ ಸತ್ಯಶೋಧನ ಸಮಿತಿಗೆ ತಿಳಿದು ಬಂದಂತೆ 2012ರಿಂದ ಎರಡೂ ಸಮುದಾಯಗಳ ನಡುವೆ ಆಗಾಗ ಆಡಳಿತ ಕೈಗೊಳ್ಳುವ ಶಾಂತಿ ಸಭೆಗಳಂಥಾ ಕಾರ್ಯಕ್ರಮಗಳು ತೇಪೆ ಹಚ್ಚುವುದನ್ನು ಬಿಟ್ಟರೆ ಮತ್ತೇನೂ ಸಾಧಿಸಲಿಲ್ಲ. ಇಂಥ ತಿಕ್ಕಾಟಗಳು ಒಂದು ಕದನವಾಗಿ ಪ್ರಕಟಗೊಂಡಿದ್ದು 2018ರ ಮೇ 25ರಂದು. ಬನ್ನೆಪ್ಪ ಮಾದಿಗ ಸಮುದಾಯದ ಹಣವಂತನಾಗಿದ್ದು, ಆತನೇ ಸಮುದಾಯದ ನಾಯಕ. ಗ್ರಾಮಪಂಚಾಯತಿಯ ಸದಸ್ಯನೂ ಆಗಿರುವ ಈತನ ಮಾತೇ ಆ ಸಮುದಾಯದ ಇತರರಿಗೆ ಅಂತಿಮ. ಅದೇರೀತಿ ಹೊಸಕೆರಪ್ಪ ಎಂಬುವವನು ಕುರುಬರ ನಾಯಕನಾಗಿದ್ದು, ಇವರಿಬ್ಬರ ನಡುವಿನ ಜಗಳಗಳೇ ಎರಡು ಸಮುದಾಯಗಳ ಜಗಳಗಳಾಗಿ ಮಾರ್ಪಡುತ್ತವೆ. ಅಲ್ಲಿನ ಜನಕ್ಕೆ ರಾಜಕೀಯವಾಗಿಯೂ ಸ್ಪಷ್ಟ ನಿಲುವುಗಳೇನಿಲ್ಲ. ತಮ್ಮ ನಾಯಕರು ಕಾಂಗ್ರೇಸ್ಸಾದರೆ ಅವರೂ ಕಾಂಗ್ರೇಸ್, ಬಿಜೆಪಿಯಾದರೆ ಬಿಜೆಪಿ.
ಕೆಲವು ತಿಂಗಳುಗಳ ಕೆಳಗೆ ಪರಿಶಿಷ್ಟರು ಅಂಬೇಡ್ಕರ್ ಹಾಗೂ ಜಗಜೀವನ್‍ರಾಮ್‍ರವರ ಚಿತ್ರಗಳನ್ನೊಳಗೊಂಡ ಫಲಕವೊಂದನ್ನು ಊರಿನ ಮಧ್ಯಭಾಗದ ರಸ್ತೆಯ ಪಕ್ಕದಲ್ಲಿ ಸ್ಥಾಪಿಸಿದರು. 5*5 ಅಳತೆಯ ಆ ಜಾಗ ಕುರುಬ ಸಮುದಾಯದ ಕುಟುಂಬವೊಂದಕ್ಕೆ ಸೇರಿದ್ದು. ಶಿಕ್ಷಣವಿಲ್ಲದಿದ್ದರೂ ಇತರರಿಗಿಂತಲೂ ಭಿನ್ನವಾಗಿ ಯೋಚಿಸುವ ಈ ಕುಟುಂಬದವರು ತಮ್ಮ ಜಾಗದಲ್ಲಿ ಆ ಫಲಕವನ್ನು ನೆಡಲು ಪರಿಶಿಷ್ಟರಿಗೆ ಅನುಮತಿಯನ್ನೂ ನೀಡಿದ್ದರು. ಆರ್ಥಿಕವಾಗಿ ತಮಗಿಂತಲೂ ಕಡಿಮೆ ಇಲ್ಲವೆಂದು ತೋರಿಸಿಕೊಳ್ಳುವ ಪರಿಶಿಷ್ಟರು ಈಗ ತಮ್ಮ ಸಾಮಾಜಿಕ ಅಸ್ತಿತ್ವವನ್ನು ಗಟ್ಟಿಯಾಗಿ ನೆಲೆಗೊಳಿಸಲು ಮಾಡಿದ ಈ ಹೊಸ ಪ್ರಯತ್ನ ಮೇಲ್ಜಾತಿ ಎಂದುಕೊಳ್ಳುವ ಕುರುಬರಿಂದ ಸಹಿಸಲಾಗಲಿಲ್ಲ. ಈ ಫಲಕ ತಮಗೆ ಸವಾಲಾಗಿದೆಯೆಂದು ಭಾವಿಸಿದ ಕುರುಬ ಸಮಾಜದ ಇತರರು ಫಲಕದ ಬಗ್ಗೆ ತಗಾದೆ ತೆಗೆದು ಒಂದು ರೀತಿಯ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿದ್ದ ಒಂದೇ ಒಂದು ಹೋಟಲಿನಲ್ಲಿ ಮತ್ತು ಬಸವಣ್ಣನವರ ದೇವಸ್ಥಾನದಲ್ಲಿ ಅಸ್ಪøಶ್ಯತೆಯ ಆಚರಣೆಯನ್ನು ಭಿನ್ನ ರೀತಿಯಲ್ಲಿ ಅವರ ಮೇಲೆ ಹೇರುವ ಪ್ರಯತ್ನ ನಡೆಯಿತು.
ಮೇ 24ರಂದು ಈ ಎರಡೂ ಸಮುದಾಯಗಳ ಇಬ್ಬರು ಊರ ಬದಿಯ ಕಾಲುದಾರಿಯಲ್ಲಿ ವಿರುದ್ಧ ದಿಕ್ಕುಗಳಿಂದ ನಡೆದು ಬಂದಿದ್ದು ಯಾರು ಯಾರಿಗೆ ದಾರಿ ಬಿಡಬೇಕೆಂಬ ಬಗ್ಗೆ ಸಣ್ಣ ಜಗಳ ನಡೆದಿದೆ. ಅಂದು ಸಂಜೆ ತನ್ನ ಸಮುದಾಯದವನ ಪರವಾಗಿ ಮೇಲ್ಜಾತಿಯವರನ್ನು ಪ್ರಶ್ನೆ ಮಾಡಿದ ಬನ್ನೆಪ್ಪನ ಮಾತುಗಳು ಮಾರನೆಯ ದಿನದ ಭಯಂಕರ ಆಗುಹೋಗುಗಳಿಗೆ ನೆಪವಾದವು. ಇಂತಹ ಸನ್ನಿವೇಶಗಳಲ್ಲಿ ಮೇಲ್ಜಾತಿ ಮನಸ್ಥಿತಿಗಳ ಸ್ಪಂದನೆ ಒಂದೇ ರೀತಿಯದ್ದು, ಅದು ತಮ್ಮ ಕಣ್‍ಕಿಚ್ಚಿಗೆ ಕಾರಣವಾದ ದಲಿತರ ಮೇಲೆ ದಾಳಿ ನಡೆಸುವುದು. ಮೇ 25ರಂದು ನಡೆದದ್ದು ಅದೇ. ಚುಂಡೂರು, ಕಾರಂಚೇಡು, ಕಂಬಾಲಪಲ್ಲಿಗಳಲ್ಲಿ ನಡೆದಿದ್ದೂ ಹೀಗೆಯೇ.
ಅಂದು ಯೋಜಿತ ರೀತಿಯಲ್ಲಿ ನಡೆದ ದಾಳಿಯನ್ನು ಎದುರಿಸಲಾಗದ ಮಾದಿಗ ಜನಾಂಗದವರು ತಿರುಗೇಟು ನೀಡಲು ಪ್ರಯತ್ನಿಸಿದರೂ, ಸಂಘಟಿತ ದಾಳಿಯನ್ನೆದುರಿಸಲಾರದೆ, ಬಹುತೇಕ ಜನ ದಾಳಿಯಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟು ಓಡಿದರು. ಈ ನಡುವೆ ಬನ್ನೆಪ್ಪನ ಮಗ ದೊಡ್ಡದೇವಣ್ಣ ದಾಳಿಕೋರರಿಂದ ಪಾರಾಗಲು ಒಂದು ಮನೆಗೆ ನುಗ್ಗಿದ. ಅವನನ್ನು ಹಿಂಬಾಲಿಸಿದ ಐದಾರು ಜನರ ಗುಂಪೊಂದು ಆ ಮನೆಯಲ್ಲಿಯೇ ಅವನನ್ನು  ಮನಸೋಇಚ್ಚೆ ಚಚ್ಚಿದರು. ಕೊನೆಗೆ ಸತ್ತನೆಂದೇ ಭಾವಿಸಿ ದೇಹವನ್ನು ಒಂದು ಛಾಪೆಯಲ್ಲಿ ಸುತ್ತಿಟ್ಟು ಜಾಗ ಖಾಲಿ ಮಾಡಿದರು. ಆದರೆ ಸುಮಾರು 4 ಘಂಟೆಗಳ ಕಾಲ ನೆತ್ತರ ಮಡುವಿನಲ್ಲಿ ಬಿದ್ದಿದ್ದ ಆ ಯುವಕ ಜಾÐನ ತಪ್ಪಿದ ಸ್ಥಿತಿಯಲ್ಲಿದ್ದ. ಸಂಜೆ ಅವನನ್ನು ಕಂಡವರು ಆ ಹೊತ್ತಿಗೆ ಹಳ್ಳಿಗೆ ಬಂದಿದ್ದ ಪೊಲೀಸರಿಗೆ ತಿಳಿಸಿದ್ದರಿಂದ ಅವರು ದೇವಣ್ಣನನ್ನು ಮೊದಲು ಬಳ್ಳಾರಿಗೆ, ನಂತರ ಬೆಂಗಳೂರಿಗೆ ಚಿಕಿತ್ಸೆಗಾಗಿ ಕಳುಹಿಸಿದರು. ತನ್ನ ಎರಡೂ ಕೈಗಳಿಗೆ ಆದ ತೀವ್ರವಾದ ಗಾಯಗಳು ತಲೆಯ ಮೇಲೆ ಬಿದ್ದಿರುವ ಪೆಟ್ಟು ಮತ್ತು ಮಾತನಾಡಲಾಗದಂತೆ ನಾಲಗೆಗೂ ಪೆಟ್ಟುಗಳಿಂದ ಆಘಾತಕ್ಕೊಳಗಾಗಿರುವ ದೇವಣ್ಣ ತನ್ನ ಮನೆಯಲ್ಲಿ ಈಗಲೂ ಅಸಹಾಯಕನಾಗಿ ಮಲಗಿದ್ದಾನೆ. ಆವನ ತಂದೆಯೂ ಸೇರಿದಂತೆ ಹತ್ತಿರದ ಬಂಧುಗಳು ಜೈಲು ಪಾಲಾಗಿದ್ದು, ಈತನಿಗೆ ಸರಿಯಾದ ಚಿಕಿತ್ಸೆಯೂ ದೊರಕದೆ, ಆತನ ಮುಂದಿನ ಸ್ಥಿತಿ ಏನಾಗುತ್ತದೋ ಹೇಳಲಾಗದು.
ಪೊಲೀಸರು ಯಥಾಪ್ರಕಾರ ಎರಡು ಕಡೆಯವರ ಮೇಲೂ ಕೇಸು ಜಡಿದು ಅವರಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಕೆಲವರು ಈಗ ಬಳ್ಳಾರಿಯ ಜೈಲಿನಲ್ಲಿದ್ದಾರೆ. ಹಳ್ಳಿಯಲ್ಲಿ ಕೇವಲ ಮುದುಕರು, ಹೆಂಗಸರು ಮತ್ತು ಮಕ್ಕಳು ಮಾತ್ರವಿದ್ದು ಕೃಷಿ ಚಟುವಟಿಕೆಗಳು ಭರದಿಂದ ಸಾಗಬೇಕಾದ ಈ ಕಾಲದಲ್ಲಿ ಗಂಡಸರು ಪೊಲೀಸರ ಭಯದಿಂದಾಗಿ ಊರಿನಿಂದ ದೂರವೇ ಉಳಿದಿದ್ದಾರೆ. ಹೆಚ್ಚಾಗಿ ಭಯ ಕಾಡುತ್ತಿರುವುದು ಮಾದಿಗ ಸಮುದಾಯದವರನ್ನು. ಇದರ ಪರಿಣಾಮವಾಗಿ ಈ ವರ್ಷದ ಬೆಳೆಹಾಳು.
ಮಾದಿಗ ಸುಮದಾಯದವರ ವಿರುದ್ಧ ಒಟ್ಟು ಸಮಾಜಕ್ಕೇ ಇರುವ ಪೂರ್ವಗ್ರಹ ಕಂಪ್ಲಿಯಲ್ಲಿನ ಪೊಲೀಸರ ಜತೆ ಮಾತನಾಡುವಾಗಲೂ ಕಂಡುಬಂತು. ಸಾಮಾಜಿಕ ವಾಸ್ತವಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲಾಗದ ಇಂಥ ಅಧಿಕಾರ ವರ್ಗದವರಿಂದ ನಿಜವಾದ ನ್ಯಾಯ ಸಿಗುವುದನ್ನು ನಿರೀಕ್ಷಿಸುವುದೂ ಕಷ್ಟ. ಸಮಾಜದ ವಿವಿಧ ಗುಂಪುಗಳ ನಡುವೆ ಏರ್ಪಟ್ಟಿರುವ ಕಂದಕವನ್ನು ಮುಚ್ಚುವ ಕೆಲಸ ಮಾಡಬೇಕಾದರೆ ಎಲ್ಲ ರೀತಿಯ ಸ್ವಾರ್ಥವನ್ನು, ಪೂರ್ವಗ್ರಹಗಳಿಂದ ದೂರವಿಟ್ಟು ಸಮಾಜದ ಸ್ವಾಸ್ಥ್ಯಯನ್ನು ಬಯಸುವ ಅದಕ್ಕಾಗಿ ಕಾಳಜಿ, ಬದ್ಧತೆಗಳಿಂದ ದುಡಿಯುವ ಮನಸ್ಸುಗಳು ಬೇಕು. ಆಗ ಮಾತ್ರ ದೇಶಕ್ಕಂಟಿದ ಜಾತಿಜಾಡ್ಯ ವಾಸಿಯಾಗಬಹುದು. ಇಂದಿನ ವ್ಯವಸ್ಥೆಯಲ್ಲಿ ಅದು ಸಾಧ್ಯವೇ ಎಂಬುದೇ ದೊಡ್ಡ ಪ್ರಶ್ನೆಯಾಗಿಯೇ ಕಾಡುತ್ತದೆ? ಇನ್ನೆಷ್ಟು ದಿನ ಹೀಗೆ…?
 – ನಗರಗೆರೆ ರಮೇಶ್ 
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...