Homeಅಂಕಣಗಳುದೇವೇಗೌಡ್ರು ಯಾವ ಜನಾಂಗನೂ ದ್ವೇಷ ಮಾಡಲ್ಲ

ದೇವೇಗೌಡ್ರು ಯಾವ ಜನಾಂಗನೂ ದ್ವೇಷ ಮಾಡಲ್ಲ

ಅದೊಂದು ಹಿರಿಯರು ಒಪ್ಪಿದ ಮದುವೆ. ಯಾಕೆಂದರೆ ಮನೆ ನಡೆದುಕೊಂಡು ಹೋಗಬೇಕು. ವಂಶಾಭಿವೃದ್ಧಿಯಾಗಬೇಕು. ಆ ವಂಶ ಊರಲ್ಲೆಲ್ಲಾ ಹರಡಬೇಕು.

- Advertisement -
- Advertisement -

ಅದೊಂದು ಹಿರಿಯರು ಒಪ್ಪಿದ ಮದುವೆ. ಯಾಕೆಂದರೆ ಮನೆ ನಡೆದುಕೊಂಡು ಹೋಗಬೇಕು. ವಂಶಾಭಿವೃದ್ಧಿಯಾಗಬೇಕು. ಆ ವಂಶ ಊರಲ್ಲೆಲ್ಲಾ ಹರಡಬೇಕು. ಕುಟುಂಬದ ವೈರಿಗಳು ನಿರ್ನಾಮವಾಗಬೇಕು. ಊರು ಅಭಿವೃದ್ಧಿಯಾಗಬೇಕು. ಇತ್ಯಾದಿ ಆಶಯಗಳೊಂದಿಗೆ ನಡೆದುಹೋದ ಬಲವಂತದ ಮದುವೆ. ಆದರೂ ಏಗಬೇಕಿದೆ. ಒಂದುವೇಳೆ ವಿಚ್ಛೇದನವಾದರೆ, ಅದನ್ನೆ ಕಾಯುತ್ತ ಕುಳಿತ ವೈರಿಪಡೆ, ಬೇಕಾದಷ್ಟು ಧನಕನಕ ವಸ್ತುಗಳನ್ನು ಕೊಟ್ಟು ಹುಡುಗಿ ಹೇಗಾದರೂ ಇರಲಿ ಆರಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ. ಇಂತಹ ಅಪಾಯದ ಸನ್ನಿವೇಶವರಿತ ವಧುವಿನ ತಂದೆಯ ಪಾಡು ಹೇಳತೀರದು. ಇಂತದೊಂದು ಕುಟುಂಬದ ಸ್ಥಿತಿ ಕರ್ನಾಟಕದ ರಾಜಕಾರಣವನ್ನೇ ಹೋಲುತ್ತಿದೆಯಂತಲ್ಲಾ. ಈ ನಡುವೆ ವಧುವಿನ ಕಡೆಯ ಕುರುಬರ ಪೈಕಿಯ ಯಜಮಾನನೊಬ್ಬ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವ ತೀರ್ಮಾನ ಕೇಳಿ ಫೋನ್ ಮಾಡಬೇಕೆನಿಸಿತಲ್ಲಾ. ತಡ ಮಾಡದೆ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: … ನಿನಗ್ಯಾರಿದ್ದರೇನು ಸುಖವಿಲ್ಲಾ ಪ್ರಭುವೆ. ದಾರಿ ಸುಖವಿಲ್ಲ… ಬಾಯಾರಿತು ಎಂದು ದಳದ ಬಾವಿಗೆ ಪೋದೆ.
“ಹಲೋ ಯಾರೂ”
“ನಾನೂ ಸರ್ ಯಾಹೂ”
“ಏನಪ್ಪ ಯಾಹೂ”
“ಚೆನ್ನಾಗಿದ್ದೀರಾ ಸರ್”
“ಏನೋ ಹಿಂಗಿದೀನಿ”
“ದಳದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ರಂತಲ್ಲ ಸಾರ್”
“ಜವಾಬ್ದಾರಿ ಸಾಕು ಅನ್ನುಸ್ತು ಕೊಟ್ಟೆ”
“ಜವಾಬ್ದಾರಿ ಏನಿತ್ತು ಸಾರ್ ಅಲ್ಲಿ”
“ಒಂದು ಪಾರ್ಟಿ ಅಧ್ಯಕ್ಷ ಅಂದಮೇಲೆ ಜವಾಬ್ದಾರಿ ಇರಲ್ವೆ”

“ನಾನು ತಿಳಕಂಡಂಗೆ ಸಾರ್, ಜನತಾದಳದ ಜವಾಬ್ದಾರಿ ಅಂದ್ರೆ, ಬೆಳಿಗ್ಗೆ ತಿಂಡಿ ತಿನ್ನುವಾಗ ದೇವೇಗೌಡ್ರು ಕುಮಾರಣ್ಣ ರೇವಣ್ಣ ಆಡಿದ ಮಾತುಗಳು ನಿಮಗೆ ತಲುಪ್ತವೆ, ಅವನ್ನ ಕೇಳಿಸಿಗಂಡು ಸುಮ್ಮನಾಗದು ಅಲವೆ ಸಾರ್”
“ಅದು ನಿಮ್ಮ ಊಹೆ”

“ಆಮೇಲೆ ಅಡುಗೆ ಮನೆಯಿಂದ ಚೆನ್ನಮ್ಮ ಅದೇನೇನೊ ಹೇಳ್ತಾರೆ. ಮತ್ತೆ ಭವಾನಿ ಹೇಳಿದ್ದ ರೇವಣ್ಣ ತಂದಿರತನೆ. ಈ ತರ ಮಾತು ಕತೆ ಪಾರ್ಟಿ ಅಧ್ಯಕ್ಷನಿಗೆ ತಲುಪಬಹುದು ಅಥವಾ ತಲುಪದೆಯೂ ಇರಬಹುದು. ಇಂತಹ ಪಾರ್ಟಿಯ ಅಧ್ಯಕ್ಷನಾದವನು ಅಸಾಮಾನ್ಯ ತಾಳ್ಮೆ, ಮುಜುಗರ ಸಹಿಸಿಕೊಳೊ ಶಕ್ತಿ ಪಡೆದಿರಬೇಕು ಅಲ್ವ ಸಾರ್”
“ನೀವು ಹೇಳ್ತಕಂತ ಯಾವುದೇ ಸನ್ನಿವೇಶನ ನಾನು ಎದುರಿಸಿಲ್ಲ”

“ಪಂಚಾಯ್ತಿ ಚುನಾವಣೇಲಿ ಸ್ವಜಾತಿಗೊಂದು ಟಿಕೆಟ್ ಕೊಡಲಿಕ್ಕಾಗದ ಪಾರ್ಟಿ ಅಧ್ಯಕ್ಷಗಿರಿ ಇನ್ನೆಂತದಿರಬೇಕು ಸಾರ್”
“ನನ್ನ ರಾಜೀನಾಮೆ ಅವನ್ನೆಲ್ಲಾ ಒಳಗೊಂಡಿದೆ”

“ಒಳ್ಳೆ ಕೆಲಸ ಮಾಡಿದ್ರಿ. ಸಾಮಾನ್ಯವಾಗಿ ದೇವೇಗೌಡ್ರು ಪಾರ್ಟಿ ಅಧ್ಯಕ್ಷನ್ನ ಅವನ ಅನುಪಸ್ಥಿತೀಲಿ ಬದ್ಲಾಯಿಸ್ತಾರೆ. ಆದ್ರೆ ನೀವೇ ರಾಜೀನಾಮೆ ಕೊಟ್ಟಿದ್ದು ಒಳ್ಳೆದು. ಸಾರ್”
“ನೋಡಿ ಯಾಹೂ, ಕಾಲಕ್ಕೆ ನಾವು ಅಂಟಿಕೊಂಡು ಕೂತ್ಗಬಾರ್ದು. ಕಾಲ ಬದಲಾವಣೆ ಬಯಸಿದಾಗ ನಾವು ಬದಲಾಗಬೇಕು”

“ನಿಜ ಸಾರ್, ಆ ಸಿದ್ದರಾಮಯ್ಯನ್ನ ಹಿಡಕಂಡೋಗಿ ಕಾಂಗೈ ಸೇರಿಸಿದ್ರಿ. ನೀವು ಬಂದು ದಳದ ಅಧ್ಯಕ್ಷರಾದ್ರಿ. ಏನಾಶ್ಚರ್ಯ ಅಲವಾ”
‘‘ಅದಕ್ಕೆ ರಾಜಕಾರಣ ಅನ್ನದು”

“ಅಂದ್ರೆ ರಾಜಕಾರಣದಲ್ಲಿ ಏನಾದ್ರು ಆಗಬವುದ?”
“ನೀವೇ ನೋಡಿದ್ರಲ್ಲ, ನಿಮ್ಮಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅಂತ ಬೆಳಿಗ್ಗೆ ಕುಮಾರಸ್ವಾಮಿಗೆ ಹೇಳಿದ ಸಿದ್ದರಾಮಯ್ಯ, ಮಧ್ಯಾಹ್ನ ಒಂದು ಗಂಟೆಗೆ ಬಂದು ನಿಮ್ಮಪ್ಪನಾಣೆ ನೀನೆ ಮುಖ್ಯಮಂತ್ರಿ ಆಗು ಬಾ ಅಂದಿರೋದು. ಇಂತದ್ದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನಡೆದಿರಲಿಲ್ಲ”

“ಇದನ್ನ ಅವಮಾನಕರ ನಡವಳಿಕೆ ಅಂತೀರಾ”
“ಇಲ್ಲ ಹಾಗನ್ನಲ್ಲ. ಮತೀಯ ಶಕ್ತಿಗೆ ಅವಕಾಶ ಕೊಡಬಾರ್ದು ಅನ್ನೊ ತೀರ್ಮಾನಕ್ಕೆ ತಲೆಬಾಗಿದ್ದು ಅಂತ ಭಾವುಸ್ತೀನಿ. ಆದ್ರೆ ಅಹಂಕಾರದ ಮಾತು ಯಾರಿಗೂ ಒಳ್ಳೆದಲ್ಲ”

“ಸಿದ್ದರಾಮಯ್ಯನಿಗೆ ಅಹಂಕಾರ ಇದೆ ಅಂತೀರಾ?”
“ಅಹಂಕಾರದ ಮೂರ್ತಿರೂಪ ಆತ”

“ಅದು ಅಹಂಕಾರದ ತರದ ವ್ಯಕ್ತಿರೂಪವಂತಲ್ಲಾ”
“ಹಾಗೇನೂ ಇಲ್ಲ. ಉಪಕಾರ ಸ್ಮರಣೆ ಇಲ್ಲದ ಧಿಮಾಕಿನ ಮನ್ಸ ಆತ. ಮನುಷ್ಯನಿಗೆ ತಪ್ಪು ತಿದ್ದಿಕಳೊ ಒಳನೋಟ, ಅಹಂಕಾರಕ್ಕೆ ಅವಕಾಶ ಕೊಡದ ವ್ಯಕ್ತಿತ್ವ ಇರಬೇಕು”

“ನೀವು ಒಂದು ಕಾಲದ ಸಿದ್ದು ಅಭಿಮಾನಿ. ಅವರಿಗಾದ ಅವಮಾನಾನ ನೀವು ಸಹಿಸುತಿರಲಿಲ್ಲ. ಸಿದ್ದುನ ಯಾರಾದ್ರು ಟೀಕೆ ಮಾಡಿದ್ರೆ ನೀವು ಪ್ರತಿಕ್ರಿಯಿಸ್ತಿದ್ರಿ. ಇದು ನಿಮ್ಮ ತಪ್ಪೊ ಸಿದ್ದರಾಮಯ್ಯರ್ ತಪ್ಪೊ ಹೇಳಿ”
“ನನ್ನದೇ ತಪ್ಪು”

“ಈ ತಪ್ಪಿನಲ್ಲಿ ಮತೀಯ ಅಂಶ ಇದೆ ಅಲ್ವ”
“ಇರಬವುದು”

“ಇರಬವುದೇನು, ಇದೆ ಸಾರ್. ನಮ್ಮ ಜನಾಂಗದ ಲೀಡ್ರು, ಅವನನ್ನ ಯಾರೂ ಟೀಕೆ ಮಾಡಬಾರ್ದು ಬೈಯ್ಯಬಾರ್ದು ಅಂತ ಭಾವಿಸಿದ್ದ ಮನಸ್ಸಿನ ಕಣ್ಣು ತೆರಿಸಿದಾನಲ್ಲ ಸಿದ್ದರಾಮಯ್ಯ”
“ಇರಬವುದು”

“ಅವುರಂಗೆ ಮಾಡಿದ್ರಿಂದ ನೀವು ದಳಕ್ಕೆ ಬಂದು ಲೀಡರಾದ್ರಿ, ಶಾಸಕರಾದ್ರಿ, ಅಧ್ಯಕ್ಷರಾದ್ರಿ”
“ನಿಜ ನನ್ನ ರಾಜಕೀಯದ ಅಂತ್ಯ, ನಿರಾಶೆಗೊಳ್ಳೊತರ ಇಲ್ಲ. ಮಾಜೀ ಪ್ರಧಾನಿಯ ಪಾರ್ಟಿಗೆ ಅಧ್ಯಕ್ಷನಾದದ್ದು ಸಾಮಾನ್ಯ ಸಂಗತಿಯಲ್ಲ”

“ಈಗಲಾದ್ರು ದೇವೇಗೌಡ್ರಿಗೆ ಕುರುಬರನ್ನ ಕಂಡ್ರೆ ಅವ್ಯಕ್ತ ಅಕ್ಕರೆ ಇದೆ ಅನ್ನದನ್ನ ಒಪ್ಪಿಗತಿರಾ”
“ನೋಡಿ ಯಾಹು, ದೇವೇಗೌಡ್ರಿಗೆ ಯಾವ ಜನಾಂಗ ಕಂಡ್ರೂ ದ್ವೇಷ ಇಲ್ಲ. ರಾಜಕಾರಣದ ಕಾರಣಕ್ಕೆ ಅಂತ ಆಪಾದನೆಗಳಿಗೆ ಗುರಿಯಾಗ್ತಾರೆ”

“ಹೌದ ಸಾರ್”
“ನೋಡಿ, ಅವುರು ಬ್ರಾಹ್ಮಣ ವಿರೋಧಿ ಅಂತಾರೆ, ಅದೂ ಕೂಡ ಸುಳ್ಳು. ಲಿಂಗಾಯತರ ಬೊಮ್ಮಾಯಿ ಅಂದ್ರೆ ಅವರಿಗೆ ಪಂಚಪ್ರಾಣ. ದಲಿತರ ಡಾ.ತಿಪ್ಪೇಸ್ವಾಮಿನ ಪಾರ್ಟಿ ಪ್ರೆಸಿಡೆಂಟ್ ಮಾಡಿದ್ರು. ಲಿಂಗಾಯಿತರ ತಿಪ್ಪಣ್ಣನ್ನ ಅಧ್ಯಕ್ಷನ್ನ ಮಾಡಿದ್ರು. ಆ ನಂತರ ಕುರುಬರ ಸಿದ್ದರಾಮಯ್ಯನ್ನ ಅಧ್ಯಕ್ಷನನ್ನಾಗಿ ಮಾಡಿ ಫೈನಾನ್ಸ್ ಮಿನಿಷ್ಟ್ರು ಮಾಡಿದ್ರು. ಈಗ ನನ್ನ ಮಾಡಿದಾರೆ”

“ಅದೇ ಸಾರ್ ನಾನೇಳಿದ್ದೂ, ಕುರುಬರನ್ನ ಮುಂದೆ ತಂದಂಗೆ ಒಕ್ಕಲಿಗರನ್ನ ತರಲಿಲ್ಲ. ಒಕ್ಕಲಿಗರನ್ನೆಲ್ಲಾ ಮುಗಿಸಿ ಅಲ್ಲಿಗೆ ತಮ್ಮ ಕುಟುಂಬವನ್ನ ನಾಟಿ ಮಾಡ್ತಾ ಬಂದ್ರು. ಇದನ್ನ ಒಪ್ಪಿಗಳ್ತಿರಾ”
“ಒಕ್ಕಲಿಗ ನಾಯಕರನ್ನ ತುಳುದ್ರು ಪರ್ಯಾಯವಾಗಿ ಒಕ್ಕಲಿಗ ಲೀಡರನ್ನ ಬೆಳಸಿದಾರೆ”

“ಅದೆಲ್ಲಾ ಅಂಗಿರ್ಲಿ. ಲೋಕಸಭಾ ಚುನಾವಣೇಲಿ ಜನ ಸಮ್ಮಿಶ್ರ ಸರ್ಕಾರದ ವಿರುದ್ಧ ಓಟು ಕೊಟ್ಟಿರೋದನ್ನ ಒಪ್ಪಿಗಳ್ತೀರಾ”

“ಮೋದಿ ಅಲೆ”
“ಮೋದಿದೂ ಇಲ್ಲ ಯಂತದೂ ಇಲ್ಲ. ಒಂದೊರ್ಸದಿಂದ ದಳದೋರು ಕಾಂಗ್ರೆಸ್‍ನೋರು ಆಡ್ತಾಯಿರೊ ಜಗಳ ನಿಲ್ಸಕ್ಕೆ ಸೋಲ್ಸಿದ್ರು”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...