Homeಅಂಕಣಗಳುದೇವೇಗೌಡ್ರು ಯಾವ ಜನಾಂಗನೂ ದ್ವೇಷ ಮಾಡಲ್ಲ

ದೇವೇಗೌಡ್ರು ಯಾವ ಜನಾಂಗನೂ ದ್ವೇಷ ಮಾಡಲ್ಲ

ಅದೊಂದು ಹಿರಿಯರು ಒಪ್ಪಿದ ಮದುವೆ. ಯಾಕೆಂದರೆ ಮನೆ ನಡೆದುಕೊಂಡು ಹೋಗಬೇಕು. ವಂಶಾಭಿವೃದ್ಧಿಯಾಗಬೇಕು. ಆ ವಂಶ ಊರಲ್ಲೆಲ್ಲಾ ಹರಡಬೇಕು.

- Advertisement -
- Advertisement -

ಅದೊಂದು ಹಿರಿಯರು ಒಪ್ಪಿದ ಮದುವೆ. ಯಾಕೆಂದರೆ ಮನೆ ನಡೆದುಕೊಂಡು ಹೋಗಬೇಕು. ವಂಶಾಭಿವೃದ್ಧಿಯಾಗಬೇಕು. ಆ ವಂಶ ಊರಲ್ಲೆಲ್ಲಾ ಹರಡಬೇಕು. ಕುಟುಂಬದ ವೈರಿಗಳು ನಿರ್ನಾಮವಾಗಬೇಕು. ಊರು ಅಭಿವೃದ್ಧಿಯಾಗಬೇಕು. ಇತ್ಯಾದಿ ಆಶಯಗಳೊಂದಿಗೆ ನಡೆದುಹೋದ ಬಲವಂತದ ಮದುವೆ. ಆದರೂ ಏಗಬೇಕಿದೆ. ಒಂದುವೇಳೆ ವಿಚ್ಛೇದನವಾದರೆ, ಅದನ್ನೆ ಕಾಯುತ್ತ ಕುಳಿತ ವೈರಿಪಡೆ, ಬೇಕಾದಷ್ಟು ಧನಕನಕ ವಸ್ತುಗಳನ್ನು ಕೊಟ್ಟು ಹುಡುಗಿ ಹೇಗಾದರೂ ಇರಲಿ ಆರಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ. ಇಂತಹ ಅಪಾಯದ ಸನ್ನಿವೇಶವರಿತ ವಧುವಿನ ತಂದೆಯ ಪಾಡು ಹೇಳತೀರದು. ಇಂತದೊಂದು ಕುಟುಂಬದ ಸ್ಥಿತಿ ಕರ್ನಾಟಕದ ರಾಜಕಾರಣವನ್ನೇ ಹೋಲುತ್ತಿದೆಯಂತಲ್ಲಾ. ಈ ನಡುವೆ ವಧುವಿನ ಕಡೆಯ ಕುರುಬರ ಪೈಕಿಯ ಯಜಮಾನನೊಬ್ಬ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವ ತೀರ್ಮಾನ ಕೇಳಿ ಫೋನ್ ಮಾಡಬೇಕೆನಿಸಿತಲ್ಲಾ. ತಡ ಮಾಡದೆ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: … ನಿನಗ್ಯಾರಿದ್ದರೇನು ಸುಖವಿಲ್ಲಾ ಪ್ರಭುವೆ. ದಾರಿ ಸುಖವಿಲ್ಲ… ಬಾಯಾರಿತು ಎಂದು ದಳದ ಬಾವಿಗೆ ಪೋದೆ.
“ಹಲೋ ಯಾರೂ”
“ನಾನೂ ಸರ್ ಯಾಹೂ”
“ಏನಪ್ಪ ಯಾಹೂ”
“ಚೆನ್ನಾಗಿದ್ದೀರಾ ಸರ್”
“ಏನೋ ಹಿಂಗಿದೀನಿ”
“ದಳದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ರಂತಲ್ಲ ಸಾರ್”
“ಜವಾಬ್ದಾರಿ ಸಾಕು ಅನ್ನುಸ್ತು ಕೊಟ್ಟೆ”
“ಜವಾಬ್ದಾರಿ ಏನಿತ್ತು ಸಾರ್ ಅಲ್ಲಿ”
“ಒಂದು ಪಾರ್ಟಿ ಅಧ್ಯಕ್ಷ ಅಂದಮೇಲೆ ಜವಾಬ್ದಾರಿ ಇರಲ್ವೆ”

“ನಾನು ತಿಳಕಂಡಂಗೆ ಸಾರ್, ಜನತಾದಳದ ಜವಾಬ್ದಾರಿ ಅಂದ್ರೆ, ಬೆಳಿಗ್ಗೆ ತಿಂಡಿ ತಿನ್ನುವಾಗ ದೇವೇಗೌಡ್ರು ಕುಮಾರಣ್ಣ ರೇವಣ್ಣ ಆಡಿದ ಮಾತುಗಳು ನಿಮಗೆ ತಲುಪ್ತವೆ, ಅವನ್ನ ಕೇಳಿಸಿಗಂಡು ಸುಮ್ಮನಾಗದು ಅಲವೆ ಸಾರ್”
“ಅದು ನಿಮ್ಮ ಊಹೆ”

“ಆಮೇಲೆ ಅಡುಗೆ ಮನೆಯಿಂದ ಚೆನ್ನಮ್ಮ ಅದೇನೇನೊ ಹೇಳ್ತಾರೆ. ಮತ್ತೆ ಭವಾನಿ ಹೇಳಿದ್ದ ರೇವಣ್ಣ ತಂದಿರತನೆ. ಈ ತರ ಮಾತು ಕತೆ ಪಾರ್ಟಿ ಅಧ್ಯಕ್ಷನಿಗೆ ತಲುಪಬಹುದು ಅಥವಾ ತಲುಪದೆಯೂ ಇರಬಹುದು. ಇಂತಹ ಪಾರ್ಟಿಯ ಅಧ್ಯಕ್ಷನಾದವನು ಅಸಾಮಾನ್ಯ ತಾಳ್ಮೆ, ಮುಜುಗರ ಸಹಿಸಿಕೊಳೊ ಶಕ್ತಿ ಪಡೆದಿರಬೇಕು ಅಲ್ವ ಸಾರ್”
“ನೀವು ಹೇಳ್ತಕಂತ ಯಾವುದೇ ಸನ್ನಿವೇಶನ ನಾನು ಎದುರಿಸಿಲ್ಲ”

“ಪಂಚಾಯ್ತಿ ಚುನಾವಣೇಲಿ ಸ್ವಜಾತಿಗೊಂದು ಟಿಕೆಟ್ ಕೊಡಲಿಕ್ಕಾಗದ ಪಾರ್ಟಿ ಅಧ್ಯಕ್ಷಗಿರಿ ಇನ್ನೆಂತದಿರಬೇಕು ಸಾರ್”
“ನನ್ನ ರಾಜೀನಾಮೆ ಅವನ್ನೆಲ್ಲಾ ಒಳಗೊಂಡಿದೆ”

“ಒಳ್ಳೆ ಕೆಲಸ ಮಾಡಿದ್ರಿ. ಸಾಮಾನ್ಯವಾಗಿ ದೇವೇಗೌಡ್ರು ಪಾರ್ಟಿ ಅಧ್ಯಕ್ಷನ್ನ ಅವನ ಅನುಪಸ್ಥಿತೀಲಿ ಬದ್ಲಾಯಿಸ್ತಾರೆ. ಆದ್ರೆ ನೀವೇ ರಾಜೀನಾಮೆ ಕೊಟ್ಟಿದ್ದು ಒಳ್ಳೆದು. ಸಾರ್”
“ನೋಡಿ ಯಾಹೂ, ಕಾಲಕ್ಕೆ ನಾವು ಅಂಟಿಕೊಂಡು ಕೂತ್ಗಬಾರ್ದು. ಕಾಲ ಬದಲಾವಣೆ ಬಯಸಿದಾಗ ನಾವು ಬದಲಾಗಬೇಕು”

“ನಿಜ ಸಾರ್, ಆ ಸಿದ್ದರಾಮಯ್ಯನ್ನ ಹಿಡಕಂಡೋಗಿ ಕಾಂಗೈ ಸೇರಿಸಿದ್ರಿ. ನೀವು ಬಂದು ದಳದ ಅಧ್ಯಕ್ಷರಾದ್ರಿ. ಏನಾಶ್ಚರ್ಯ ಅಲವಾ”
‘‘ಅದಕ್ಕೆ ರಾಜಕಾರಣ ಅನ್ನದು”

“ಅಂದ್ರೆ ರಾಜಕಾರಣದಲ್ಲಿ ಏನಾದ್ರು ಆಗಬವುದ?”
“ನೀವೇ ನೋಡಿದ್ರಲ್ಲ, ನಿಮ್ಮಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅಂತ ಬೆಳಿಗ್ಗೆ ಕುಮಾರಸ್ವಾಮಿಗೆ ಹೇಳಿದ ಸಿದ್ದರಾಮಯ್ಯ, ಮಧ್ಯಾಹ್ನ ಒಂದು ಗಂಟೆಗೆ ಬಂದು ನಿಮ್ಮಪ್ಪನಾಣೆ ನೀನೆ ಮುಖ್ಯಮಂತ್ರಿ ಆಗು ಬಾ ಅಂದಿರೋದು. ಇಂತದ್ದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನಡೆದಿರಲಿಲ್ಲ”

“ಇದನ್ನ ಅವಮಾನಕರ ನಡವಳಿಕೆ ಅಂತೀರಾ”
“ಇಲ್ಲ ಹಾಗನ್ನಲ್ಲ. ಮತೀಯ ಶಕ್ತಿಗೆ ಅವಕಾಶ ಕೊಡಬಾರ್ದು ಅನ್ನೊ ತೀರ್ಮಾನಕ್ಕೆ ತಲೆಬಾಗಿದ್ದು ಅಂತ ಭಾವುಸ್ತೀನಿ. ಆದ್ರೆ ಅಹಂಕಾರದ ಮಾತು ಯಾರಿಗೂ ಒಳ್ಳೆದಲ್ಲ”

“ಸಿದ್ದರಾಮಯ್ಯನಿಗೆ ಅಹಂಕಾರ ಇದೆ ಅಂತೀರಾ?”
“ಅಹಂಕಾರದ ಮೂರ್ತಿರೂಪ ಆತ”

“ಅದು ಅಹಂಕಾರದ ತರದ ವ್ಯಕ್ತಿರೂಪವಂತಲ್ಲಾ”
“ಹಾಗೇನೂ ಇಲ್ಲ. ಉಪಕಾರ ಸ್ಮರಣೆ ಇಲ್ಲದ ಧಿಮಾಕಿನ ಮನ್ಸ ಆತ. ಮನುಷ್ಯನಿಗೆ ತಪ್ಪು ತಿದ್ದಿಕಳೊ ಒಳನೋಟ, ಅಹಂಕಾರಕ್ಕೆ ಅವಕಾಶ ಕೊಡದ ವ್ಯಕ್ತಿತ್ವ ಇರಬೇಕು”

“ನೀವು ಒಂದು ಕಾಲದ ಸಿದ್ದು ಅಭಿಮಾನಿ. ಅವರಿಗಾದ ಅವಮಾನಾನ ನೀವು ಸಹಿಸುತಿರಲಿಲ್ಲ. ಸಿದ್ದುನ ಯಾರಾದ್ರು ಟೀಕೆ ಮಾಡಿದ್ರೆ ನೀವು ಪ್ರತಿಕ್ರಿಯಿಸ್ತಿದ್ರಿ. ಇದು ನಿಮ್ಮ ತಪ್ಪೊ ಸಿದ್ದರಾಮಯ್ಯರ್ ತಪ್ಪೊ ಹೇಳಿ”
“ನನ್ನದೇ ತಪ್ಪು”

“ಈ ತಪ್ಪಿನಲ್ಲಿ ಮತೀಯ ಅಂಶ ಇದೆ ಅಲ್ವ”
“ಇರಬವುದು”

“ಇರಬವುದೇನು, ಇದೆ ಸಾರ್. ನಮ್ಮ ಜನಾಂಗದ ಲೀಡ್ರು, ಅವನನ್ನ ಯಾರೂ ಟೀಕೆ ಮಾಡಬಾರ್ದು ಬೈಯ್ಯಬಾರ್ದು ಅಂತ ಭಾವಿಸಿದ್ದ ಮನಸ್ಸಿನ ಕಣ್ಣು ತೆರಿಸಿದಾನಲ್ಲ ಸಿದ್ದರಾಮಯ್ಯ”
“ಇರಬವುದು”

“ಅವುರಂಗೆ ಮಾಡಿದ್ರಿಂದ ನೀವು ದಳಕ್ಕೆ ಬಂದು ಲೀಡರಾದ್ರಿ, ಶಾಸಕರಾದ್ರಿ, ಅಧ್ಯಕ್ಷರಾದ್ರಿ”
“ನಿಜ ನನ್ನ ರಾಜಕೀಯದ ಅಂತ್ಯ, ನಿರಾಶೆಗೊಳ್ಳೊತರ ಇಲ್ಲ. ಮಾಜೀ ಪ್ರಧಾನಿಯ ಪಾರ್ಟಿಗೆ ಅಧ್ಯಕ್ಷನಾದದ್ದು ಸಾಮಾನ್ಯ ಸಂಗತಿಯಲ್ಲ”

“ಈಗಲಾದ್ರು ದೇವೇಗೌಡ್ರಿಗೆ ಕುರುಬರನ್ನ ಕಂಡ್ರೆ ಅವ್ಯಕ್ತ ಅಕ್ಕರೆ ಇದೆ ಅನ್ನದನ್ನ ಒಪ್ಪಿಗತಿರಾ”
“ನೋಡಿ ಯಾಹು, ದೇವೇಗೌಡ್ರಿಗೆ ಯಾವ ಜನಾಂಗ ಕಂಡ್ರೂ ದ್ವೇಷ ಇಲ್ಲ. ರಾಜಕಾರಣದ ಕಾರಣಕ್ಕೆ ಅಂತ ಆಪಾದನೆಗಳಿಗೆ ಗುರಿಯಾಗ್ತಾರೆ”

“ಹೌದ ಸಾರ್”
“ನೋಡಿ, ಅವುರು ಬ್ರಾಹ್ಮಣ ವಿರೋಧಿ ಅಂತಾರೆ, ಅದೂ ಕೂಡ ಸುಳ್ಳು. ಲಿಂಗಾಯತರ ಬೊಮ್ಮಾಯಿ ಅಂದ್ರೆ ಅವರಿಗೆ ಪಂಚಪ್ರಾಣ. ದಲಿತರ ಡಾ.ತಿಪ್ಪೇಸ್ವಾಮಿನ ಪಾರ್ಟಿ ಪ್ರೆಸಿಡೆಂಟ್ ಮಾಡಿದ್ರು. ಲಿಂಗಾಯಿತರ ತಿಪ್ಪಣ್ಣನ್ನ ಅಧ್ಯಕ್ಷನ್ನ ಮಾಡಿದ್ರು. ಆ ನಂತರ ಕುರುಬರ ಸಿದ್ದರಾಮಯ್ಯನ್ನ ಅಧ್ಯಕ್ಷನನ್ನಾಗಿ ಮಾಡಿ ಫೈನಾನ್ಸ್ ಮಿನಿಷ್ಟ್ರು ಮಾಡಿದ್ರು. ಈಗ ನನ್ನ ಮಾಡಿದಾರೆ”

“ಅದೇ ಸಾರ್ ನಾನೇಳಿದ್ದೂ, ಕುರುಬರನ್ನ ಮುಂದೆ ತಂದಂಗೆ ಒಕ್ಕಲಿಗರನ್ನ ತರಲಿಲ್ಲ. ಒಕ್ಕಲಿಗರನ್ನೆಲ್ಲಾ ಮುಗಿಸಿ ಅಲ್ಲಿಗೆ ತಮ್ಮ ಕುಟುಂಬವನ್ನ ನಾಟಿ ಮಾಡ್ತಾ ಬಂದ್ರು. ಇದನ್ನ ಒಪ್ಪಿಗಳ್ತಿರಾ”
“ಒಕ್ಕಲಿಗ ನಾಯಕರನ್ನ ತುಳುದ್ರು ಪರ್ಯಾಯವಾಗಿ ಒಕ್ಕಲಿಗ ಲೀಡರನ್ನ ಬೆಳಸಿದಾರೆ”

“ಅದೆಲ್ಲಾ ಅಂಗಿರ್ಲಿ. ಲೋಕಸಭಾ ಚುನಾವಣೇಲಿ ಜನ ಸಮ್ಮಿಶ್ರ ಸರ್ಕಾರದ ವಿರುದ್ಧ ಓಟು ಕೊಟ್ಟಿರೋದನ್ನ ಒಪ್ಪಿಗಳ್ತೀರಾ”

“ಮೋದಿ ಅಲೆ”
“ಮೋದಿದೂ ಇಲ್ಲ ಯಂತದೂ ಇಲ್ಲ. ಒಂದೊರ್ಸದಿಂದ ದಳದೋರು ಕಾಂಗ್ರೆಸ್‍ನೋರು ಆಡ್ತಾಯಿರೊ ಜಗಳ ನಿಲ್ಸಕ್ಕೆ ಸೋಲ್ಸಿದ್ರು”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...