Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಓಡಿ ಹೋದ ಹುಡುಗ ಮರಳಿ ಬಂದ ಕಥೆ

ಓಡಿ ಹೋದ ಹುಡುಗ ಮರಳಿ ಬಂದ ಕಥೆ

‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ ಮಕ್ಕಳ ಕಾದಂಬರಿ.

- Advertisement -
| ಡಾ.ಎಸ್.ಬಿ.ಜೋಗುರ |
‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ  ಮಕ್ಕಳ ಕಾದಂಬರಿ. ಈ ಕಾದಂಬರಿಯ ಬಹುತೇಕ ಪಾತ್ರಗಳು ಮಲ್ಲೂರಲ್ಲಿ ಸುತ್ತಿ ಸುಳಿಯುತ್ತವೆ. ಈ ಕಾದಂಬರಿಯನ್ನು ಓದತೊಡಗಿದಾಗ ಓದುಗರಿಗೆ ತಮ್ಮ ತಮ್ಮ ಬಾಲ್ಯದ ಸ್ವಚ್ಚಂದ ಮನದ ಸುಳಿದಾಟವನ್ನು ನೆನಪಿಸಿಕೊಡುವ ಜೊತೆಗೆ, ಗಜ್ಯಾ ಎಂಬ ಬಾಲಕನ ಮೂಲಕ ಇಡೀ ಊರನ್ನು ನಿದ್ದೆಯಿಂದೆಬ್ಬಿಸಿ ಚಟುವಟಿಕೆಗೆ ನೂಕುವ ಕ್ರಿಯಾಶೀಲತೆಯಂತೆ ಕಾದಂಬರಿಕಾರರು ಗಜ್ಯಾ ಪಾತ್ರವನ್ನು ಸೃಷ್ಟಿಸಿದ್ದಾರೆ. ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಹೊಸತೇನೂ ಮಹತ್ತರವಾಗಿ ಚಿತ್ರಿಸಲಾಗದಿದ್ದರೂ ಮಕ್ಕಳ ಕಾದಂಬರಿಗೆ ತಕ್ಕುದಾದ ಸಕಲ ಸಾಮಗ್ರಿಯನ್ನು ಮೈಗೂಡಿಸಿಕೊಂಡು ಕಾದಂಬರಿ ಮುಂದೆ ಸಾಗುತ್ತದೆ. ಕಾದಂಬರಿಯ ಆರಂಭದಲ್ಲಿ ಕೊಂಚ ಸಾವಧಾನ ಮತ್ತು ಜಡವೆನಿಸುವ ವಿವರಗಳಿವೆಯಾದರೂ ಕ್ರಮೇಣವಾಗಿ ತನ್ನದೇಯಾದ ವಿಶಿಷ್ಟ ಜಾಡಿನಲ್ಲಿ ಮುಂದೆ ಸಾಗುತ್ತದೆ. ಗಜ್ಯಾ ಈ ಕಾದಂಬರಿಯ ನಾಯಕ. ಚಿಕ್ಕ ವಯಸ್ಸಿನಲ್ಲಿಯೇ ಕುಳಿತುಂಡು ಕೆಡಬಾರದು ಎನ್ನುವ ಧೋರಣೆಯನ್ನು ಮೈಗೂಡಿಸಿಕೊಂಡಂತೆ ಬದುಕಿದ ಈ ಗಜ್ಯಾ ಊರಿನ ಅನೇಕರಿಗೆ ಮಾದರಿಯಾಗಿರುವಂತೆ ಉಡಾಳನಾಗಿಯೂ ಗುರುತಿಸಿಕೊಂಡವನು. ಗಜ್ಯಾ ಮತ್ತು ಅವನ ಸ್ನೇಹಿತರಲ್ಲಿ ಆ ವಯಸ್ಸಿಗೆ ತಕ್ಕಂತ ಸಹಜವಾಗಿರಬಹುದಾದ ಹುಡುಗ ಬುದ್ಧ್ಢಿಯ ಗುಣಗಳೂ ಇವೆ. ಎಲ್ಲ ಕಾಲಗಳಲ್ಲಿ ಎಲ್ಲ ಮಕ್ಕಳಲ್ಲಿ ವ್ಯಾಪಕವಾಗಿ ಕಾಣಬಹುದಾದ ಗುಣಗಳವು.
ಒಬ್ಬರನ್ನೊಬ್ಬರು ದೂರುವ ದ್ವೇಷಿಸುವ, ಮತ್ತೆ ಒಂದುಗೂಡುವ, ಕೂಡಿ ಕದಿಯುವ, ತಿನ್ನುವ, ಸೇಡಿಗಾಗಿ ಹೂಂಕರಿಸುವ ಇಂಥಾ ಹತ್ತಾರು ವಕ್ರಗುಣಂಗಣ ಪಟಾಲಮ್ಮಿನಂತಿರುವ ಆ ಹುಡುಗರು ಹಾಗಾಗಲು ಕಾರಣ ಆ ಆಲದ ಮರದ ಕೆಳಗೆ ವಾಸವಾಗಿರುವ ಅಜ್ಜ ಎನ್ನುವುದು ಹೆತ್ತವರ ದೂರುವಿಕೆ. ಗಜ್ಯಾ ಆಟವಾಡುವ ವಯಸ್ಸಿನಲ್ಲಿಯೇ ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಂಡು ತಾನು ಶಾಲೆ ಕಲಿಯದಿದ್ದರೂ ತನ್ನ ತಂಗಿಯನ್ನು ಓದಿಸಬೇಕೆಂದು ದುಡಿಯುವ ಅವನ ಗುಣವನ್ನು ಊರಿನ ಅನೇಕರು ಕೊಂಡಾಡುವ ಜೊತೆಗೆ ದಾರಿ ತಪ್ಪಿದ ಮಕ್ಕಳಿಗೆ ಗಜ್ಯಾನನ್ನು ಉದಾಹರಣೆಯಾಗಿ ಕೊಡುವಷ್ಟರ ಮಟ್ಟಿಗೆ ಮಲ್ಲೂರಿನ ಅನೇಕರಿಗೆ ಗಜ್ಯಾ ಇಷ್ಟವಾಗುತ್ತಿದ್ದ. ಗಜ್ಯಾ ಮತ್ತು ಅವನ ಸೈಕಲ್ ಇಡೀ ಮಲ್ಲೂರಿನ ಚಟುವಟಿಕೆಯ ಸಂಕೇತಗಳಾಗಿದ್ದವು. ಆತನ ಸೈಕಲ್ ಬೆಲ್ ಜಾಗೃತಿಯ ಸಂಕೇತದಂತೆ ಬಳಕೆಯಾಗುವದಿತ್ತು. ಕಾದಂಬರಿಕಾರ ಕಾಲನ ಓಟವನ್ನು ಸೈಕಲ್ ಜೊತೆಗೆ ಮತ್ತು ಅದರ ಗಂಟೆಯನ್ನು ಕಾಲ ಸರಿಯುವ ಎಚ್ಚರದ ನಾದವಾಗಿ ಬಳಸಿರುವುದು ಗಮನಾರ್ಹವಾದುದು. ಓಡಿ ಹೋದ ಹುಡುಗ ಇಲ್ಲಿ ಬೇರೆ ಯಾರೂ ಅಲ್ಲ ಆ ಸೈಕಲ್ ಸವಾರ ಗಜ್ಯಾ. ಆತ ದಿಕ್ಕು ದೆಸೆಯಿಲ್ಲದೇ ಓಡಿ ಹೋದವನಲ್ಲ, ಬದುಕನ್ನು ರೂಪಿಸಿಕೊಳ್ಳಲು ಹೋದವನು. ಸಿನೇಮಾ ಒಂದರಲ್ಲಿ ನಟಿಸುವ ಅವಕಾಶ ಸಿಕ್ಕ ಕಾರಣದಿಂದ ಕರೀಕಟ್ಟೆ ಮಾಸ್ತರರ ಜೊತೆಗೆ ಹೋಗಿ ಸಿನೇಮಾದಲ್ಲಿ ಪಾತ್ರ ನಿರ್ವಹಿಸಿ ಮರಳಿ ಬರುವಷ್ಟರಲ್ಲಿ ಮಲ್ಲೂರಿನ ಪಾಲಿಗೆ, ಗಜ್ಯಾನ ಜೊತೆಗಾರರಿಗೆ ಆತ ಓಡಿ ಹೋದ ಹುಡುಗನಾಗಿರುತ್ತಾನೆ. ಗಜ್ಯಾ ದಿನಾಲು ಊರಲ್ಲಿ ಸುತ್ತಿ ಸುಳಿಯುವಾಗ ಕಾಣದ ಅವನ ಹರಕತ್ತು ಒಂದೆರಡು ದಿನ ಅವನಿಲ್ಲದಿರುವಾಗ ಎದ್ದು ತೋರುವ ಜೊತೆಗೆ, ಅವನಿಗಾಗಿ ಇಡೀ ಊರಿನ ಬೆಟ್ಟ ಗುಡ್ಡಗಳನ್ನು ಹತ್ತಿ ಹುಡುಕುವ ರೀತಿಯಲ್ಲಿಯೇ ಓಡಿ ಹೋದ ಹುಡುಗನ ಪಾತ್ರದ ಹಿಕಮತ್ತು ಓದುಗನಿಗೆ ಮನದಟ್ಟಾಗುತ್ತದೆ.
ಇದು ಹೇಳೀ ಕೇಳೀ ಮಕ್ಕಳ ಕಾದಂಬರಿ. ಹೀಗಾಗಿ ಕಾದಂಬರಿಕಾರ ತಕ್ಕ ಮಟ್ಟಿಗೆ ಭಾಷೆಯನ್ನು ಸಡಿಲುಗೊಳಿಸಿ ಕತೆ ಹೇಳುತ್ತಾ ಹೋಗಿರುವದಿದೆ. ಜೊತೆಗೆ ಕತೆಯ ಹಂದರ ಜಾಳುಜಾಳಾಗದಂತೆ ಎಚ್ಚರವಹಿಸುವ ಜೊತೆಗೆ ಒಂದು ಮಕ್ಕಳ ಕಾದಂಬರಿಯ ಸೊಗಸಿಗೆ ಏನು ಸಾಮಗ್ರಿ ಬೇಕೋ ಅದೆಲ್ಲವನ್ನು ಒದಗಿಸಿಕೊಟ್ಟು ಕಾದಂಬರಿಗೆ ಪೂರಕವಾಗಿ ಸಲ್ಲಬಹುದಾದ ಹಿತಕರ ಪರಿಸರವನ್ನು ಕಾದಂಬರಿಕಾರ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಯ ಭಾಷೆ, ವಸ್ತು, ತಂತ್ರ, ವಿನ್ಯಾಸ, ನಿರೂಪಣೆ ಎಲ್ಲವೂ ಮಕ್ಕಳ ಕಾದಂಬರಿಗೆ ಸಲ್ಲುವಂತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....