Homeಮುಖಪುಟಏನಿದು ಫಿಲ್ಮ್ ಡೈರೆಕ್ಷನ್?

ಏನಿದು ಫಿಲ್ಮ್ ಡೈರೆಕ್ಷನ್?

- Advertisement -
- Advertisement -

| ರಾಜಶೇಖರ್ ಅಕ್ಕಿ |

ನಾನಾಗ ಹೈಸ್ಕೂಲಿನಲ್ಲಿದ್ದೆ, ಒಂದು ಸಿನೆಮಾ ನೋಡಿ ಬಂದ ನಂತರ ನನ್ನ ಒಬ್ಬ ಗೆಳೆಯ ಹೇಳಿದ್ದು, ‘ಪಿಚ್ಚರ್ ಅಷ್ಟು ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’. ಇದೇನಿದು? ಇದ್ಹೆಂಗೆ ಸಾಧ್ಯ? ಅಭಿನಯ ಅಂದ್ರೆ ಗೊತ್ತು, ಛಾಯಾಗ್ರಹಣ ಗೊತ್ತು, ಸಂಗೀತ ಗೊತ್ತು, ಈ ಡೈರೆಕ್ಷನ್ ಅಂದ್ರೇನು? ಸಿನೆಮಾಗಳನ್ನು ಇಷ್ಟು ಇಷ್ಟ ಪಡುವ ನನಗೆ ಈ ಡೈರೆಕ್ಷನ್ ಅನ್ನೋದೇನು ಎನ್ನೋದು ಗೊತ್ತೇ ಇಲ್ವಲ್ಲ? ನಾನು ಕಣ್ಣು ಪಿಳಿ ಪಿಳಿ ಬಿಟ್ಟು ನೋಡಿದೆ.

ಹಂಗಾದ್ರೆ ಚಲನಚಿತ್ರ ನಿರ್ದೇಶನ ಅಂದ್ರೇನು?
ಚಿತ್ರಕಥೆಯನ್ನು ತೆಗೆದುಕೊಂಡು ದೃಶ್ಯ ಮಾಧ್ಯಮಕ್ಕೆ ಇಳಿಸುವುದೇ ನಿರ್ದೇಶನ ಹಾಗೂ ಅದನ್ನು ದೃಶ್ಯ ಮಾಧ್ಯಮಕ್ಕೆ ಇಳಿಸುವ ಜವಾಬ್ದಾರಿ ಹೊತ್ತವನನ್ನು ನಿರ್ದೇಶಕ ಎನ್ನಬಹುದು. ಅಂದರೆ, ಸ್ಕ್ರಿಪ್ಟ್‍ಅನ್ನು ತೆಗೆದುಕೊಂಡು ಆಯಾ ದೃಶ್ಯಕ್ಕೆ ಬೇಕಾಗಿರುವ ಶಾಟ್‍ಗಳನ್ನು ಆಯ್ಕೆ ಮಾಡಿ ಶೂಟಿಂಗ್ ಮಾಡಿ ಸಂಕಲನ ಮಾಡಿದರೆ ಅದುವೇ ನಿರ್ದೇಶನ.

ಅಷ್ಟೇನಾ? ಹಂಗಂದ್ರೆ, ನನ್ನ ಗೆಳೆಯ ಹೇಳಿದ ಮಾತು, ಡೈರೆಕ್ಷನ್ ಮಸ್ತ್ ಇತ್ತು ಅಂದರೇನು? ನಿರ್ದೇಶನ ಮಸ್ತ್ ಆಗಲು ಏನೆಲ್ಲ ಮಾಡಬೇಕು? ಏನೆಲ್ಲ ಒಳಗೊಂಡಿರುತ್ತೆ ಈ ಚಲನಚಿತ್ರ ನಿರ್ದೇಶನ?

ಸರಳವಾಗಿ ಹೇಳಬೇಕೆಂದರೆ, ಕಥೆಯ, ಚಿತ್ರಕಥೆಯ, ಛಾಯಾಗ್ರಹಣದ, ಅಭಿನಯದ ಮತ್ತು ಸಂಕಲನದ ಆಳವಾದ ಜ್ಞಾನ ನಿರ್ದೇಶಕನಿಗಿರಬೇಕು, ಈ ಎಲ್ಲಾ ವಿಭಾಗಗಳಿಗೂ ನಿರ್ದೇಶಕನೇ ಜವಾಬ್ದಾರ. ಅಂದರೆ ನಿರ್ದೇಶಕ ಬರೀ ಸೂಪರ್‍ವೈಸರ್ ಆಗಿರಬೇಕಾ? ಅಥವಾ ಆಯಾ ದೃಶ್ಯಗಳಲ್ಲಿ ಯಾವ್ಯಾವ ಶಾಟ್ ಬೇಕು ಎಂದು ಛಾಯಾಗ್ರಾಹಕನಿಗೆ ಮತ್ತು ನಟರಿಗೆ ಹೇಳುವುದೇ ನಿರ್ದೇಶಕನ ಕೆಲಸ ಮತ್ತು ಇತರ ಕೆಲಸಗಳನ್ನೆಲ್ಲಾ ಮೇಲ್ವಿಚಾರಣೆ ಮಾಡುವುದು ಎಂದು ಅನ್ನಬಹುದಾ?

ಇರಲಿ, ನಿರ್ದೇಶಕನ ಕೆಲಸಗಳೇನು ಎಂದು ಸದ್ಯಕ್ಕೆ ನನಗೆ ತಿಳಿದಿರುವ ಕೆಲಸಗಳ ಪಟ್ಟಿ ಮಾಡುವ.
ಒಂದು, ಕಥೆಯ ಆಳ ಜ್ಞಾನ, ಕಥೆ ಹೇಗೆ ಕೆಲಸ ಮಾಡುವುದು ಎನ್ನುವುದರ ಸ್ಪಷ್ಟತೆ (ಸ್ಟ್ರಕ್ಚರ್ ಬಗ್ಗೆ ಈಗಾಗಲೇ ಬರೆದಿದ್ದೇನೆ. ಲಿಂಕ್) ಈ ಕಥೆ ಏನು? ಈ ಕಥೆ ಏಕೆ? ಈ ಕಥೆಯೇ ಏಕೆ? ಈ ಕಥೆಗೆ ಈ ನಿರ್ದೇಶಕನೇ ಏಕೆ? ಈ ಕಥೆ ಇಂದೇಕೆ? ಮೊದಲು ಈ ಮೂಲಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಿದ ನಂತರ ಈ ಕಥೆ ಯಾರದ್ದು, ಕಥೆಯ ಉದ್ದೇಶ ಏನು, ಕಥಾನಾಯಕಿಯ ಉದ್ದೇಶ ಏನು, ಕಥೆ ಎಲ್ಲೆಲ್ಲಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ, ಚಿತ್ರಕಥೆಯಲ್ಲಿ ಬರೆದ ದೃಶ್ಯಗಳು ಕಥೆಯ ಆತ್ಮವನ್ನು ಬಿಂಬಿಸುತ್ತಿವೆಯೇ ಎನ್ನುವ ಹತ್ತಾರು ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕು.

ಮೇಲಿನ ಎಲ್ಲಾ ಅಂಶಗಳನ್ನು ಖಾತ್ರಿಪಡಿಸಿಕೊಂಡ ನಂತರ ಆಯಾ ದೃಶ್ಯಗಳಿಗೆ ಆಗತ್ಯವಿರುವ ಶಾಟ್‍ಗಳನ್ನು ಆಯ್ಕೆ ಮಾಡಬೇಕು. (ಇದರ ಬಗ್ಗೆ ಮುಂದಿನ ಪ್ಯಾರಾದಲ್ಲಿ). ಆ ದೃಶ್ಯಕ್ಕೆ ಆಯ್ಕೆ ಮಾಡಿದ ಶಾಟ್‍ಗಳು ಸಾಕೇ, ಇನ್ನೂ ಕಡಿಮೆ ಶಾಟ್‍ಗಳಲ್ಲಿ ಆ ದೃಶ್ಯದ ಸಾರವನ್ನು ಸೆರೆಹಿಡಿಯಬಹುದೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿ ಅದರನುಗುಣವಾಗಿ ಚಿತ್ರೀಕರಣ ಮಾಡಬೇಕು. ಈ ಹಂತದಲ್ಲಿ ನಿರ್ದೇಶಕನಿಗೆ ತಾಂತ್ರಿಕ ಅಂಶಗಳ ಸಂಪೂರ್ಣ ಅರಿವು ಇರಬೇಕಾಗುತ್ತದೆ. ಯಾವ ಕ್ಯಾಮರ ಬಳಸಬೇಕು, ಯಾವ ಲೆನ್ಸ್ ಬಳಸಬೇಕು, ಯಾವ ಕೋನ ಇಡಬೇಕು, ಶಾಟ್‍ನಲ್ಲಿ ಕ್ಯಾಮರ ಚಲನೆ ಇರಬೇಕೇ ಇತ್ಯಾದಿ ಪ್ರಶ್ನೆಗಳೊಂದಿಗೆ ಪರದೆಯಲ್ಲಿ ಕಾಣುವ ಎಲ್ಲಾ ವಸ್ತುಗಳು ಹೇಗಿರಬೇಕು ಎನ್ನುವುದನ್ನೂ ನಿರ್ದೇಶಕನೇ ನಿರ್ಧರಿಸಬೇಕು.

ಇದರೊಂದಿಗೆ ಅಭಿನಯ. ನಟರ ಹಾವಭಾವದೊಂದಿಗೆ ಎಲ್ಲಾ ನಟರ ಚಲನೆಗಳನ್ನೂ ನಿರ್ದೇಶಕನೇ ನಿರ್ಧರಿಸಬೇಕು. (ಪಾತ್ರ ಸೃಷ್ಟಿಯಲ್ಲಿ ನಿರ್ದೇಶಕನ ಪಾತ್ರದ ಬಗ್ಗೆ ಈಗಾಗಲೇ ಬರೆದಿದ್ದೇನೆ.) ಚಿತ್ರೀಕರಣ ಮುಗಿಸಿದ ನಂತರ ಅತ್ಯಂತ ಮುಖ್ಯ ಅಂಗವಾದ ಸಂಕಲನದ ಪ್ರಕ್ರಿಯೆಯಲ್ಲಿ ಸಂಕಲನಕಾರಳೊಂದಿಗೆ ಸೇರಿ ಪ್ರೇಕ್ಷಕರಿಗೆ ಕೊನೆಯದಾಗಿ ಚಿತ್ರ ಹೇಗೆ ತಲುಪುವುದು ಎನ್ನುವ ಕೆಲಸ ಮುಗಿಸಬೇಕು. (ಸಂಕಲನದ ಬಗ್ಗೆ ಇನ್ನೊಂದು ಲೇಖನ ಬೇಕು.)

ಅಂದ್ರೆ? ಇಷ್ಟೇನಾ ನಿರ್ದೇಶನ ಅಂದರೆ?
ನಿರ್ದೇಶನದ ಬಗ್ಗೆ ಹಲವಾರು ಥಿಯರಿಗಳಿವೆ. ಅಂದ್ರೆ ತಾರ್ಕಾವ್‍ಸ್ಕಿ (Andrei Tarkovsky)ಎಂಬ ರಷಿಯಾದ ನಿರ್ದೇಶಕ ಸಿನೆಮಾ ಎನ್ನುವುದು ಸಮಯದಲ್ಲಿ ಕೆತ್ತನೆ (sculpting) ಮಾಡಿದಂತೆ ಎಂದು ಹೇಳಿ ಚಲನಚಿತ್ರ ಎಂದರೆ ಏನು, ಅದರ ಜೀವ ಎಂಥದ್ದು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. ಸ್ಟಾಕರ್, ಸೊಲಾರಿಸ್, ಮಿರರ್ ಮುಂತಾದ ಸಿನೆಮಾಗಳನ್ನು ನಿರ್ದೇಶಿಸಿದ ಇವರ ಸಿನೆಮಾಗಳಲ್ಲಿ ಆಧ್ಯಾತ್ಮ, ಕನಸು ಮುಂತಾದ ವಿಷಯಗಳನ್ನು ಸೆರೆಹಿಡಿಯುವ ಪ್ರಯತ್ನ ಕಾಣಿಸುತ್ತದೆ. ಇವರ ಚಿತ್ರಗಳಲ್ಲಿ ತುಂಬಾ ಉದ್ದದ ಶಾಟ್‍ಗಳು ಮತ್ತು ತುಂಬಾ ಕಡಿಮೆ ಕಟ್‍ಗಳು ಕಾಣಿಸುತ್ತವೆ. ಆದರೆ ಐಸೆನ್‍ಸ್ಟೈನ್ ಮತ್ತು ಡೇವಿಡ್ ಮ್ಯಾಮೆಟ್(ಇವರ ಬಗ್ಗೆ ಬರೆದಿದ್ದೇನೆ) ಮುಂತಾದವರು ಮೊಂಟಾಜ್ ಥಿಯರಿಯನ್ನು ಮುಂದಿಡುತ್ತಾರೆ. ಚಿತ್ರದಲ್ಲಿ ಮುಂದೇನಾಗುವುದು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಹಿಡಿದಿಡಬೇಕು, ಪ್ರತಿಯೊಂದು ದೃಶ್ಯವೂ ಕಥೆಯನ್ನು ಮುಂದೊಯ್ಯಬೇಕು, ಪ್ರತಿಯೊಂದು ದೃಶ್ಯದ ಉದ್ದೇಶ ಸ್ಪಷ್ಟವಾಗಿರಬೇಕು, ಸಂಭಾಷಣೆಯ ಪ್ರತಿಯೊಂದು ತುಣುಕು ಸಹ ಚಿತ್ರಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಇತ್ಯಾದಿ.

ಅಂದರೆ, ಈ ಎರಡೂ ಥಿಯರಿಗಳು ಒಂದಕ್ಕೊಂದು ವಿರುದ್ಧದ ಥಿಯರಿಗಳಾ? ದೃಶ್ಯದ ಉದ್ದೇಶ ಸ್ಪಷ್ಟವಾದರೆ ಸಾಕಲ್ವಾ, ಅದಕ್ಕೆ ಜೀವ ತುಂಬೋದು ಅಂದರೆ ಏನು?

ಕಥೆಗಳ ಆಧಾರದ ಮೇಲೆ ಅದರ ಹಿಂದಿರಬೇಕಾದ ಥಿಯರಿ ನಿರ್ಧಾರವಾಗಬೇಕೆ? ಅಥವಾ ನಿರ್ದೇಶಕ ಒಂದೇ ಥಿಯರಿಗೆ ಬದ್ಧವಾಗಬೇಕೆ?
1999ರಲ್ಲಿ ಪೋಸ್ಟ್‍ಮೆನ್ ಇನ ದ ಮೌಂಟನ್ಸ್ ಎನ್ನುವ ಚಿತ್ರ ಬಂತು. ಅದರಲ್ಲಿಯ ಮೊದಲ ದೃಶ್ಯ; ತಂದೆ ಮಗ ಇಬ್ಬರೂ ಮಾರನೆಯ ದಿನ ಬೆಳಗ್ಗೆ ತಮ್ಮ ಪ್ರವಾಸಕ್ಕೆ ಹೊರಡಲಿದ್ದಾರೆ, ಹಾಗಾಗಿ ರಾತ್ರಿ ದೀಪದ ಬೆಳಕಿನಲ್ಲಿ ನಕ್ಷೆಗಳನ್ನು, ಇತರ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನೊಂದು ದೃಶ್ಯದಲ್ಲಿ ತಂದೆ ಮಗ ಒಂದು ಊರಿಗೆ ಬೆಳ್ಳಂಬೆಳಗ್ಗೆ ಬಂದು ಮುಟ್ಟುತ್ತಾರೆ. ಈ ದೃಶ್ಯಗಳನ್ನು ನೋಡುತ್ತಿರುವಾಗ ಒಬ್ಬ ಪ್ರೇಕ್ಷಕನನ್ನು ಸಂಪೂರ್ಣವಾಗಿ ಅಲ್ಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾನೆ ನಿರ್ದೇಶಕ ಹೋ ಜಿಯಾಂಗಿ? ಅದನ್ನು ಮಾಡಲು ಹೇಗೆ ಸಾಧ್ಯವಾಯಿತು?

ಸಿಡ್ನಿ ಲುಮೆಟ್ ಅವರ ಚಿತ್ರ ದಿ ವರ್ಡಿಕ್ಟ್ ನೋಡುವಾಗ ಅದೊಂದು ವಿದ್ಯುತ್ ಪ್ರವಹಿಸುತ್ತಿರುವ ತಂತಿ ಎಂತಲೇ ಭಾಸವಾಯಿತು. ಪ್ರತಿಯೊಂದು ದೃಶ್ಯವೂ ಜೀವಂತವಾಗಿದೆ; ಅದರದೇ ಬಿಗಿತ, ಟೆನ್ಷನ್ ಹೊಂದಿದೆ. ಆ ಬಿಗಿತ ಪ್ರೇಕ್ಷಕನನ್ನು ಒಂದುಕ್ಷಣವೂ ಬಿಡುವುದಿಲ್ಲ. ಹಿನ್ನಲೆ ಸಂಗೀತ ಇಲ್ಲದೇ ಅಷ್ಟು ಟೆನ್ಷನ್ ತಂದಿಡುತ್ತಾರೆ. ಅದನ್ನು ಹೇಗೆ ಮಾಡಲು ಸಾಧ್ಯವಾಯಿತು?

ನಾವು ಚಿಕ್ಕವರಿದ್ದಾಗ ಒಂದು ಮಾಡ್ತಿದ್ವಿ. ಯಾರೋ ಸಿನೆಮಾ ನೋಡಿ ಬಂದಕೂಡಲೇ, ಅವರನ್ನು ಸ್ಟೋರಿ ಹೇಳು ಎಂದು ಪೀಡಿಸುತ್ತಿದ್ವಿ. ಅನೇಕ ಸಲ ಅವರು ಆ ಚಿತ್ರದ ಸಂಪೂರ್ಣ ಸ್ಟೋರಿಯನ್ನು ಕಣ್ಣಿಗೆ ಕಾಣುವ ಹಾಗೆ ಹೇಳುತ್ತಿದ್ದರು. (ಮಕ್ಕಳಷ್ಟೇ ಅಲ್ಲ, ವಯಸ್ಕರೂ ಇದನ್ನು ಮಾಡುತ್ತಿದ್ದರು.) ಅಂದರೆ, ಸಿನೆಮಾ ಎಂದರೆ ಕಥೆ ಎಂದಾಯಿತಲ್ಲ?

ಫಾರೆಸ್ಟ್ ಗಂಪ್, ಕಾಸ್ಟ್ ಅವೇ ಮುಂತಾದ ಚಿತ್ರಗಳು ಎಲ್ಲರಿಗೂ ಇಷ್ಟವಾಗಿದ್ದರೂ ಆ ಚಿತ್ರಗಳ ನಿರ್ದೇಶಕ ಯಾರು ಎಂದು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಅದೇಕೆ?

ನಿರ್ದೇಶನದ ವಿಷಯಕ್ಕೆ ಬಂದಾಗ ಇನ್ನೂ ಇಂತಹ ನೂರಾರು ಪ್ರಶ್ನೆಗಳು ಎದುರಾಗುತ್ತವೆ. ಲೇಖಕನ ತಲೆಯಲ್ಲಿ ಬಿತ್ತಿದ ಕಥೆಯೆನ್ನುವ ಬೀಜ ಮೊಳಕೆಯೊಡೆದು, ಚಿಗುರಿ, ಗಿಡವಾಗಿ, ಮರವಾಗಿ ಹೂ ಹಣ್ಣು ಕೊಡುವ ಪ್ರಕ್ರಿಯೆ ಇದು; ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯವರು ಪೋಷಿಸುತ್ತ ಹೋಗುತ್ತಾರೆ. ನಮಗೆ ಹಣ್ಣು ರುಚಿಕರವಾಗಿರಬೇಕು ಅಷ್ಟೇ.

ಅಂದಹಾಗೆ, ‘ಪಿಚ್ಚರ್ ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’ ಎಂದು ಹೇಳಿದ ನನ್ನ ಹೈಸ್ಕೂಲಿನ ಆ ಗೆಳೆಯ ಡಬ್ಬಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...