Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಮರೆ ಮಾಚಿದ ಇತಿಹಾಸದ ಬಗ್ಗೆ......

ಮರೆ ಮಾಚಿದ ಇತಿಹಾಸದ ಬಗ್ಗೆ……

- Advertisement -
- Advertisement -

ಗೌರಿ ಲಂಕೇಶ್ |

ಮೊನ್ನೆ ಎಡ್ಮಂಡ್ ಹಿಲೇರಿ ತೀರಿಹೋಗಿದ್ದರ ಬಗ್ಗೆ ವರದಿ ಮಾಡಿದ ಎಲ್ಲಾ ಮಾಧ್ಯಮಗಳು ಮೌಂಟ್ ಎವರೆಸ್ಟ್ ಬಗ್ಗೆಯೂ ಬರೆದಿದ್ದೆವು. ಆದರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದಿರುವುದೇನೆಂದರೆ ಯಾವುದನ್ನು ನಾವೆಲ್ಲ ಇವತ್ತು ಮೌಂಟ್ ಎವರೆಸ್ಟ್ ಎಂದು ಕರೆಯುತ್ತೇವೋ ಆ ಶಿಖರವನ್ನು ನೇಪಾಳದ ಜನ ಸಾಗರಮಾತಾ ಎಂದೂ, ಟಿಬೆಟ್‌ನ ಜನ ಚಿಮೋಲುಂಗ್ಮಾ ಎಂದೂ, ಭಾರತದ ಜನ ಗೌರಿಶಂಕರ ಎಂದೂ ಕರೆಯುತ್ತಿದ್ದರು.

ಆದರೆ ಯಾವಾಗ 1865ರಲ್ಲಿ ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಸರ್ವೇಯರ್ ಜನರಲ್ ಆಫ್ ಇಂಡಿಯಾ ಸರ್ ಜಾರ್ಜ್ ಎವರೆಸ್ಟ್ ಎಂಬ ಅಧಿಕಾರಿ ಆ ಶಿಖರವನ್ನು ಅಳತೆ ಮಾಡಿದನೋ, ಆನಂತರ ಅದಕ್ಕೆ ಆತನ ಹೆಸರನ್ನೇ ಬ್ರಿಟಿಷರು ಇಟ್ಟರು. ಈಗ ಅದರ ಸುತ್ತಮುತ್ತಲಿನ ಜನ ಇಟ್ಟಿದ್ದ ಹೆಸರು ಮಾಯವಾಗಿ ಎಲ್ಲರಿಗೂ ಅದು ಮೌಂಟ್ ಎವರೆಸ್ಟ್ ಎಂದೇ ಪರಿಚಿತವಾಗಿದೆ.

ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಇತ್ತೀಚಿಗೆ ಎಡ್ವರ್ಡೋ ಗಲಿಯಾನೊ ಎಂಬ ಉರುಗ್ವೇ ದೇಶದ ಖ್ಯಾತ ಪತ್ರಕರ್ತ ಮತ್ತು ಬರಹಗರ ಜನರ ಇತಿಹಾಸವನ್ನು ಹೇಗೆ ಪಟ್ಟಭದ್ರ ಹಿತಾಸಕ್ತಿಗಳು ಮರೆಮಾಚುತ್ತವೆ ಎಂಬುದನ್ನು ಕುರಿತು ಒಂದು ಪುಸ್ತಕ ಬರೆದಿದ್ದಾರೆ.

ಗಲಿಯಾನೊ ಅಂತಹ ಹಲವು ಸತ್ಯಗಳನ್ನು ತಮ್ಮ ಪುಸ್ತಕದಲ್ಲಿ ಪಟ್ಟಿ ಮಾಡಿದ್ದಾರೆ. ವಿಶ್ವ ಇತಿಹಾಸವನ್ನರಿಯಲು ಅವು ನೆರವಾಗಬಹುದೆಂಬ ಕಾರಣಕ್ಕೆ ಇಲ್ಲಿ ಹಲವನ್ನು ನೀಡಿದ್ದೇನೆ.

  • ಅರ್ಜೆಂಟಿನಾದಲ್ಲಿರುವ ಅತಿ ಎತ್ತರದ ಸ್ಮಾರಕಕ್ಕೆ ಜನರಲ್ ರೋಕಾನ ಹೆಸರಿಡಲಾಗಿದೆ. ಈ ಪ್ರದೇಶಕ್ಕೆ ರೋಕಾನ ಕೊಡುಗೆ ಏನೆಂದರೆ ಪಟಗೊನಿಯಾದಲ್ಲಿದ್ದ ಬುಡಕಟ್ಟು ಜನರನ್ನು 19ನೇ ಶತಮಾನದಲ್ಲಿ ನಿರ್ನಾಮ ಮಾಡಿದ್ದು.
  • ಗುಲಾಮರನ್ನು ಸಾಗಿಸಲು ಬಳಸುತ್ತಿದ್ದ ಹಲವು ಹಡಗುಗಳ ಹೆಸರುಗಳು ಪೋಲ್ಫೇರ್, ಜೀಸಸ್, ವಿಶ್ವಾಸ, ಸಮಾನತೆ ಮತ್ತು ಸ್ನೇಹ ಎಂಬುದಾಗಿತ್ತು.
  • ಅಮೆರಿಕವನ್ನು ಸ್ಥಾಪಿಸಿದ ಇಬ್ಬರು ಹಿರಿಯರ ಹೆಸರುಗಳು ಅಧಿಕೃತ ಇತಿಹಾಸದಿಂದಲೇ ಮರೆಯಾಗಿವೆ. ಯಾಕೆಂದರೆ ಅವರಲ್ಲಿ ರಾಬರ್ಟ್ ಕಾರ್ಟರ್ ಎಂಬಾತ ತನಗಾಗಿ ದುಡಿಯುತ್ತಿದ್ದ ಕರಿಯರಿಗೂ ಸ್ವಾತಂತ್ರ್ಯ ನೀಡಿದ್ದ ಮತ್ತು ಗವರ್ನರ್ ಮೋರಿಸ್ ಎಂಬಾತ ಕರಿಯ ಗುಲಾಮರು ಇತರರಿಗಿಂತ ಕೀಳು ಎಂಬ ಅಂಶವನ್ನು ಸಂವಿಧಾನದಲ್ಲಿ ಸೇರಿಸುವುದನ್ನು ವಿರೋಧಿಸಿದ್ದ. ಅವರ ಈ ನಿಲುವಿನಿಂದಾಗಿಯೇ ಅವರಿಬ್ಬರನ್ನು ಈಗ ಸಾಮೂಹಿಕ ನೆನಪಿನಿಂದಲೇ ಗಡಿಪಾರು ಮಾಡಲಾಗಿದೆ.
  • 1234 ರಿಂದ ಏಳು ಶತಮಾನಗಳ ಕಾಲ ಚರ್ಚ್‌ಗಳಲ್ಲಿ ಮಹಿಳೆಯರು ಹಾಡುವುದನ್ನು ನಿಷೇಧಿಸಲಾಗಿತ್ತು. ಕಾರಣ ಅವರ ದನಿಗಳು ಅಪವಿತ್ರವೆಂದು ಭಾವಿಸಲಾಗಿತ್ತು.
  • 1793 ರ ಫ್ರೆಂಚ್ ಕ್ರಾಂತಿಯ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಸೂತ್ರಗಳನ್ನು ಘೋಷಿಸಿದಾಗ ’ಪುರುಷರ ಹಕ್ಕುಗಳು’ ಎಂಬ ಕಾನೂನನ್ನು ಪ್ರಕಟಿಸಲಾಗಿತ್ತು. ಆಗ ಕ್ರಾಂತಿಕಾರಿ ತೀವ್ರವಾದಿ ಓಲಿಂಪಿಯಾ ದೆ ಗೂಬ್ ಎಂಬಾಕೆ ’ಮಹಿಳೆಯರ ಹಕ್ಕುಗಳು’ ಎಂಬ ಕಾನೂನನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಳು. ಹಾಗೆ ಕೇಳಿದ್ದಕ್ಕೆ ಅವಳ ಶಿರಛ್ಛೇಧನೆ ಮಾಡಲಾಯಿತು.
  • ರಾಣಿ ಥಿಯೊಡೋರಾಳನ್ನು ಯಾರೂ ಕ್ರಾಂತಿಕಾರಿ, ಮಹಿಳಾವಾದಿ ಎಂದು ನೆನಪಿಸಿಕೊಳ್ಳುವುದಿಲ್ಲ. ಆದರೆ 1500 ವರ್ಷಗಳ ಹಿಂದೆ ಆಳಿದ್ದ ಈಕೆ ಮಹಿಳೆಯರಿಗೆ ಗರ್ಭಪಾತ ಮತ್ತು ವಿಚ್ಛೇದನಾ ಹಕ್ಕುಗಳನ್ನು ನೀಡಿದ್ದ ಪ್ರಥಮ ಮಹಿಳಾವಾದಿ.
  • ಚೀನಾದ ಪೀಕಿಂಗ್‌ನಿಂದ ಯುರೋಪಿಗೆ ತಂದ ಪ್ರಥಮ ಪೀಕಿನೀಸ್ ನಾಯಿಗೆ ಇಂಗ್ಲಿಷರು ’ಲೂಟಿ’ ಎಂದು ಹೆಸರಿಟ್ಟರು. ಬ್ರಿಟಿಷರು ಚೀನಾ ದೇಶವನ್ನು ಲೂಟಿ ಹೊಡೆದದ್ದರ ಸಂಕೇತವಾಗಿ ಆ ಹೆಸರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
  • ಮುಕ್ತ ವ್ಯಾಪಾರ ಮತ್ತು ಸ್ವಾತಂತ್ರ್ಯದ ಹೆಸರಿಲ್ಲಿ ಪರಗ್ವೇ ದೇಶವನ್ನು 1870 ರಲ್ಲಿ ಸಂಪೂರ್ಣವಾಗಿ ನಾಶ ಮಾಡಲಾಯಿತು. ಅಲ್ಲಿಯವರೆಗೂ ಒಂದೇ ಒಂದು ನಯಾಪೈಸೆಯ ಸಾಲವನ್ನು ಮಾಡಿರದಿದ್ದ ಆ ದೇಶ ಐದು ವರ್ಷಗಳ ಯುದ್ಧದ ನಂತರ ಎಷ್ಟು ತತ್ತರಿಸಿತ್ತೆಂದರೆ ಪ್ರಥಮ ಬಾರಿಗೆ ಇಂಗ್ಲೆಂಡಿನಿಂದ ಸಾಲ ಪಡೆದು ಬ್ರೆಜಿಲ್, ಅರ್ಜೆಂಟಿನಾ ಮತ್ತು ಉರುಗ್ವೇ ದೇಶಕ್ಕೆ ನೀಡಿತು, ಕೊಲ್ಲಲ್ಟಟ್ಟ ದೇಶವೇ ತನ್ನ ಕೊಲೆಗಡುಕರಿಂದ ಹಣ ಸಾಲ ಪಡೆಯುವಂತ ಪರಿಸ್ಥಿತಿ ಆದಾಗಿತ್ತು.
  • ಕುಖ್ಯಾತ ಚಿತ್ರಹಿಂಸೆಯ ಯತನಾ ಶಿಬಿರಗಳನ್ನು ಮೊದಲ ಬಾರಿ ಆಫ್ರಿಕಾದಲ್ಲಿ ಪ್ರಾರಂಭಿಸಿದವರು ಬ್ರಿಟಿಷರು. ಆನಂತರ 2ನೇ ವಿಶ್ವ ಮಹಾಯುದ್ಧದಲ್ಲಿ ಯಹೂದಿಯರನ್ನು ಕೊಲ್ಲಲು ಅದನ್ನು ಉಪಯೋಗಿಸಿದವರು ಜರ್ಮನರು.
  • 1936ರ ಒಲಂಪಿಕ್ಸ್ ಅನ್ನು ಅಯೀಜಿಸಿದ್ದು ಹಿಟ್ಲರ್. ಅಂದು ಫುಟ್‌ಬಾಲ್‌ನಲ್ಲಿ ಆಸ್ಟ್ರಿಯಾ ದೇಶವನ್ನು ಪೆರು ದೇಶ ಸೋಲಿಸಿತ್ತು. ಹಿಟ್ಲರ್‌ನ ಜನ್ಮಭೂಮಿ ಅಸ್ಟ್ರಿಯಾ ಆಗಿದ್ದರಿಂದ ಆ ಮ್ಯಾಚನ್ನೇ ಒಲಂಪಿಕ್ಸ್ ಸಮಿತಿ ರದ್ದುಗೊಳಿಸಿತ್ತು.
  • 1964ರಲ್ಲಿ ಟಾನ್ಕಿನ್ ಬೇ ಎಂಬಲ್ಲಿ ವಿಯಟ್ನಾಮ್ ಜನರನ್ನು ಹತ್ಯೆ ಮಾಡಿದ ನಂತರ ಅಮೆರಿಕದ ಎರಡು ಹಡಗುಗಳ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿ ಅಮೆರಿಕ ವಿಯಟ್ನಾಮ್ ಮೇಲೆ ಯುದ್ಧ ಸಾರಿತು. ಸಾವಿರಾರು ವಿಯಟ್ನಾಮ್ ಜನರನ್ನು ಹತ್ಯೆ ಮಾಡಿದ ನಂತರ ಅಮೆರಿಕಾದ ರಕ್ಷಣಾ ಸಚಿವ ಟಾನ್ಕಿನ್ ಬೇನಲ್ಲಿ ಯಾವುದೇ ದಾಳಿ ನಡೆದಿರಲಿಲ್ಲ ಎಂದು ಒಪ್ಪಿಕೊಂಡ. ನಲವತ್ತು ವರ್ಷಗಳ ನಂತರ ಇರಾಕ್ ಮೇಲೂ ಇಂತಹದ್ದೇ ಕುತಂತ್ರವನ್ನು ಅಮೆರಿಕಾ ನಡೆಸಿತು.

ಇದು ನಿಜವಾದ ಇತಿಹಾಸ, ಜನರನ್ನು ಬಲಿ ತೆಗೆದುಕೊಂಡ ಇತಿಹಾಸ, ಸಂಸ್ಕೃತಿಗಳನ್ನು ನಾಶ ಮಾಡಿದ ಇತಿಹಾಸ. ಆದರೆ ಪಟ್ಟಭದ್ರದ ದೃಷ್ಠಿಕೋನದಿಂದ ಬರೆದ ಇತಿಹಾಸದಲ್ಲಿ ಈ ಯಾವುದಕ್ಕೂ ಪ್ರಾಮುಖ್ಯತೆ ಇರುವುದಿಲ್ಲ.

30 ಜನವರಿ, 2008 (‘ಕಂಡಹಾಗೆ’ ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...