Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಮರೆ ಮಾಚಿದ ಇತಿಹಾಸದ ಬಗ್ಗೆ......

ಮರೆ ಮಾಚಿದ ಇತಿಹಾಸದ ಬಗ್ಗೆ……

- Advertisement -
- Advertisement -

ಗೌರಿ ಲಂಕೇಶ್ |

ಮೊನ್ನೆ ಎಡ್ಮಂಡ್ ಹಿಲೇರಿ ತೀರಿಹೋಗಿದ್ದರ ಬಗ್ಗೆ ವರದಿ ಮಾಡಿದ ಎಲ್ಲಾ ಮಾಧ್ಯಮಗಳು ಮೌಂಟ್ ಎವರೆಸ್ಟ್ ಬಗ್ಗೆಯೂ ಬರೆದಿದ್ದೆವು. ಆದರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದಿರುವುದೇನೆಂದರೆ ಯಾವುದನ್ನು ನಾವೆಲ್ಲ ಇವತ್ತು ಮೌಂಟ್ ಎವರೆಸ್ಟ್ ಎಂದು ಕರೆಯುತ್ತೇವೋ ಆ ಶಿಖರವನ್ನು ನೇಪಾಳದ ಜನ ಸಾಗರಮಾತಾ ಎಂದೂ, ಟಿಬೆಟ್‌ನ ಜನ ಚಿಮೋಲುಂಗ್ಮಾ ಎಂದೂ, ಭಾರತದ ಜನ ಗೌರಿಶಂಕರ ಎಂದೂ ಕರೆಯುತ್ತಿದ್ದರು.

ಆದರೆ ಯಾವಾಗ 1865ರಲ್ಲಿ ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಸರ್ವೇಯರ್ ಜನರಲ್ ಆಫ್ ಇಂಡಿಯಾ ಸರ್ ಜಾರ್ಜ್ ಎವರೆಸ್ಟ್ ಎಂಬ ಅಧಿಕಾರಿ ಆ ಶಿಖರವನ್ನು ಅಳತೆ ಮಾಡಿದನೋ, ಆನಂತರ ಅದಕ್ಕೆ ಆತನ ಹೆಸರನ್ನೇ ಬ್ರಿಟಿಷರು ಇಟ್ಟರು. ಈಗ ಅದರ ಸುತ್ತಮುತ್ತಲಿನ ಜನ ಇಟ್ಟಿದ್ದ ಹೆಸರು ಮಾಯವಾಗಿ ಎಲ್ಲರಿಗೂ ಅದು ಮೌಂಟ್ ಎವರೆಸ್ಟ್ ಎಂದೇ ಪರಿಚಿತವಾಗಿದೆ.

ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಇತ್ತೀಚಿಗೆ ಎಡ್ವರ್ಡೋ ಗಲಿಯಾನೊ ಎಂಬ ಉರುಗ್ವೇ ದೇಶದ ಖ್ಯಾತ ಪತ್ರಕರ್ತ ಮತ್ತು ಬರಹಗರ ಜನರ ಇತಿಹಾಸವನ್ನು ಹೇಗೆ ಪಟ್ಟಭದ್ರ ಹಿತಾಸಕ್ತಿಗಳು ಮರೆಮಾಚುತ್ತವೆ ಎಂಬುದನ್ನು ಕುರಿತು ಒಂದು ಪುಸ್ತಕ ಬರೆದಿದ್ದಾರೆ.

ಗಲಿಯಾನೊ ಅಂತಹ ಹಲವು ಸತ್ಯಗಳನ್ನು ತಮ್ಮ ಪುಸ್ತಕದಲ್ಲಿ ಪಟ್ಟಿ ಮಾಡಿದ್ದಾರೆ. ವಿಶ್ವ ಇತಿಹಾಸವನ್ನರಿಯಲು ಅವು ನೆರವಾಗಬಹುದೆಂಬ ಕಾರಣಕ್ಕೆ ಇಲ್ಲಿ ಹಲವನ್ನು ನೀಡಿದ್ದೇನೆ.

  • ಅರ್ಜೆಂಟಿನಾದಲ್ಲಿರುವ ಅತಿ ಎತ್ತರದ ಸ್ಮಾರಕಕ್ಕೆ ಜನರಲ್ ರೋಕಾನ ಹೆಸರಿಡಲಾಗಿದೆ. ಈ ಪ್ರದೇಶಕ್ಕೆ ರೋಕಾನ ಕೊಡುಗೆ ಏನೆಂದರೆ ಪಟಗೊನಿಯಾದಲ್ಲಿದ್ದ ಬುಡಕಟ್ಟು ಜನರನ್ನು 19ನೇ ಶತಮಾನದಲ್ಲಿ ನಿರ್ನಾಮ ಮಾಡಿದ್ದು.
  • ಗುಲಾಮರನ್ನು ಸಾಗಿಸಲು ಬಳಸುತ್ತಿದ್ದ ಹಲವು ಹಡಗುಗಳ ಹೆಸರುಗಳು ಪೋಲ್ಫೇರ್, ಜೀಸಸ್, ವಿಶ್ವಾಸ, ಸಮಾನತೆ ಮತ್ತು ಸ್ನೇಹ ಎಂಬುದಾಗಿತ್ತು.
  • ಅಮೆರಿಕವನ್ನು ಸ್ಥಾಪಿಸಿದ ಇಬ್ಬರು ಹಿರಿಯರ ಹೆಸರುಗಳು ಅಧಿಕೃತ ಇತಿಹಾಸದಿಂದಲೇ ಮರೆಯಾಗಿವೆ. ಯಾಕೆಂದರೆ ಅವರಲ್ಲಿ ರಾಬರ್ಟ್ ಕಾರ್ಟರ್ ಎಂಬಾತ ತನಗಾಗಿ ದುಡಿಯುತ್ತಿದ್ದ ಕರಿಯರಿಗೂ ಸ್ವಾತಂತ್ರ್ಯ ನೀಡಿದ್ದ ಮತ್ತು ಗವರ್ನರ್ ಮೋರಿಸ್ ಎಂಬಾತ ಕರಿಯ ಗುಲಾಮರು ಇತರರಿಗಿಂತ ಕೀಳು ಎಂಬ ಅಂಶವನ್ನು ಸಂವಿಧಾನದಲ್ಲಿ ಸೇರಿಸುವುದನ್ನು ವಿರೋಧಿಸಿದ್ದ. ಅವರ ಈ ನಿಲುವಿನಿಂದಾಗಿಯೇ ಅವರಿಬ್ಬರನ್ನು ಈಗ ಸಾಮೂಹಿಕ ನೆನಪಿನಿಂದಲೇ ಗಡಿಪಾರು ಮಾಡಲಾಗಿದೆ.
  • 1234 ರಿಂದ ಏಳು ಶತಮಾನಗಳ ಕಾಲ ಚರ್ಚ್‌ಗಳಲ್ಲಿ ಮಹಿಳೆಯರು ಹಾಡುವುದನ್ನು ನಿಷೇಧಿಸಲಾಗಿತ್ತು. ಕಾರಣ ಅವರ ದನಿಗಳು ಅಪವಿತ್ರವೆಂದು ಭಾವಿಸಲಾಗಿತ್ತು.
  • 1793 ರ ಫ್ರೆಂಚ್ ಕ್ರಾಂತಿಯ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಸೂತ್ರಗಳನ್ನು ಘೋಷಿಸಿದಾಗ ’ಪುರುಷರ ಹಕ್ಕುಗಳು’ ಎಂಬ ಕಾನೂನನ್ನು ಪ್ರಕಟಿಸಲಾಗಿತ್ತು. ಆಗ ಕ್ರಾಂತಿಕಾರಿ ತೀವ್ರವಾದಿ ಓಲಿಂಪಿಯಾ ದೆ ಗೂಬ್ ಎಂಬಾಕೆ ’ಮಹಿಳೆಯರ ಹಕ್ಕುಗಳು’ ಎಂಬ ಕಾನೂನನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಳು. ಹಾಗೆ ಕೇಳಿದ್ದಕ್ಕೆ ಅವಳ ಶಿರಛ್ಛೇಧನೆ ಮಾಡಲಾಯಿತು.
  • ರಾಣಿ ಥಿಯೊಡೋರಾಳನ್ನು ಯಾರೂ ಕ್ರಾಂತಿಕಾರಿ, ಮಹಿಳಾವಾದಿ ಎಂದು ನೆನಪಿಸಿಕೊಳ್ಳುವುದಿಲ್ಲ. ಆದರೆ 1500 ವರ್ಷಗಳ ಹಿಂದೆ ಆಳಿದ್ದ ಈಕೆ ಮಹಿಳೆಯರಿಗೆ ಗರ್ಭಪಾತ ಮತ್ತು ವಿಚ್ಛೇದನಾ ಹಕ್ಕುಗಳನ್ನು ನೀಡಿದ್ದ ಪ್ರಥಮ ಮಹಿಳಾವಾದಿ.
  • ಚೀನಾದ ಪೀಕಿಂಗ್‌ನಿಂದ ಯುರೋಪಿಗೆ ತಂದ ಪ್ರಥಮ ಪೀಕಿನೀಸ್ ನಾಯಿಗೆ ಇಂಗ್ಲಿಷರು ’ಲೂಟಿ’ ಎಂದು ಹೆಸರಿಟ್ಟರು. ಬ್ರಿಟಿಷರು ಚೀನಾ ದೇಶವನ್ನು ಲೂಟಿ ಹೊಡೆದದ್ದರ ಸಂಕೇತವಾಗಿ ಆ ಹೆಸರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
  • ಮುಕ್ತ ವ್ಯಾಪಾರ ಮತ್ತು ಸ್ವಾತಂತ್ರ್ಯದ ಹೆಸರಿಲ್ಲಿ ಪರಗ್ವೇ ದೇಶವನ್ನು 1870 ರಲ್ಲಿ ಸಂಪೂರ್ಣವಾಗಿ ನಾಶ ಮಾಡಲಾಯಿತು. ಅಲ್ಲಿಯವರೆಗೂ ಒಂದೇ ಒಂದು ನಯಾಪೈಸೆಯ ಸಾಲವನ್ನು ಮಾಡಿರದಿದ್ದ ಆ ದೇಶ ಐದು ವರ್ಷಗಳ ಯುದ್ಧದ ನಂತರ ಎಷ್ಟು ತತ್ತರಿಸಿತ್ತೆಂದರೆ ಪ್ರಥಮ ಬಾರಿಗೆ ಇಂಗ್ಲೆಂಡಿನಿಂದ ಸಾಲ ಪಡೆದು ಬ್ರೆಜಿಲ್, ಅರ್ಜೆಂಟಿನಾ ಮತ್ತು ಉರುಗ್ವೇ ದೇಶಕ್ಕೆ ನೀಡಿತು, ಕೊಲ್ಲಲ್ಟಟ್ಟ ದೇಶವೇ ತನ್ನ ಕೊಲೆಗಡುಕರಿಂದ ಹಣ ಸಾಲ ಪಡೆಯುವಂತ ಪರಿಸ್ಥಿತಿ ಆದಾಗಿತ್ತು.
  • ಕುಖ್ಯಾತ ಚಿತ್ರಹಿಂಸೆಯ ಯತನಾ ಶಿಬಿರಗಳನ್ನು ಮೊದಲ ಬಾರಿ ಆಫ್ರಿಕಾದಲ್ಲಿ ಪ್ರಾರಂಭಿಸಿದವರು ಬ್ರಿಟಿಷರು. ಆನಂತರ 2ನೇ ವಿಶ್ವ ಮಹಾಯುದ್ಧದಲ್ಲಿ ಯಹೂದಿಯರನ್ನು ಕೊಲ್ಲಲು ಅದನ್ನು ಉಪಯೋಗಿಸಿದವರು ಜರ್ಮನರು.
  • 1936ರ ಒಲಂಪಿಕ್ಸ್ ಅನ್ನು ಅಯೀಜಿಸಿದ್ದು ಹಿಟ್ಲರ್. ಅಂದು ಫುಟ್‌ಬಾಲ್‌ನಲ್ಲಿ ಆಸ್ಟ್ರಿಯಾ ದೇಶವನ್ನು ಪೆರು ದೇಶ ಸೋಲಿಸಿತ್ತು. ಹಿಟ್ಲರ್‌ನ ಜನ್ಮಭೂಮಿ ಅಸ್ಟ್ರಿಯಾ ಆಗಿದ್ದರಿಂದ ಆ ಮ್ಯಾಚನ್ನೇ ಒಲಂಪಿಕ್ಸ್ ಸಮಿತಿ ರದ್ದುಗೊಳಿಸಿತ್ತು.
  • 1964ರಲ್ಲಿ ಟಾನ್ಕಿನ್ ಬೇ ಎಂಬಲ್ಲಿ ವಿಯಟ್ನಾಮ್ ಜನರನ್ನು ಹತ್ಯೆ ಮಾಡಿದ ನಂತರ ಅಮೆರಿಕದ ಎರಡು ಹಡಗುಗಳ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿ ಅಮೆರಿಕ ವಿಯಟ್ನಾಮ್ ಮೇಲೆ ಯುದ್ಧ ಸಾರಿತು. ಸಾವಿರಾರು ವಿಯಟ್ನಾಮ್ ಜನರನ್ನು ಹತ್ಯೆ ಮಾಡಿದ ನಂತರ ಅಮೆರಿಕಾದ ರಕ್ಷಣಾ ಸಚಿವ ಟಾನ್ಕಿನ್ ಬೇನಲ್ಲಿ ಯಾವುದೇ ದಾಳಿ ನಡೆದಿರಲಿಲ್ಲ ಎಂದು ಒಪ್ಪಿಕೊಂಡ. ನಲವತ್ತು ವರ್ಷಗಳ ನಂತರ ಇರಾಕ್ ಮೇಲೂ ಇಂತಹದ್ದೇ ಕುತಂತ್ರವನ್ನು ಅಮೆರಿಕಾ ನಡೆಸಿತು.

ಇದು ನಿಜವಾದ ಇತಿಹಾಸ, ಜನರನ್ನು ಬಲಿ ತೆಗೆದುಕೊಂಡ ಇತಿಹಾಸ, ಸಂಸ್ಕೃತಿಗಳನ್ನು ನಾಶ ಮಾಡಿದ ಇತಿಹಾಸ. ಆದರೆ ಪಟ್ಟಭದ್ರದ ದೃಷ್ಠಿಕೋನದಿಂದ ಬರೆದ ಇತಿಹಾಸದಲ್ಲಿ ಈ ಯಾವುದಕ್ಕೂ ಪ್ರಾಮುಖ್ಯತೆ ಇರುವುದಿಲ್ಲ.

30 ಜನವರಿ, 2008 (‘ಕಂಡಹಾಗೆ’ ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...