Homeಅಂಕಣಗಳುಮುದ್ದೆ ರಫ್ತು ಮಾಡಿದ್ರೆ ಹೆಂಗೆ?

ಮುದ್ದೆ ರಫ್ತು ಮಾಡಿದ್ರೆ ಹೆಂಗೆ?

- Advertisement -
- Advertisement -

ಕರ್ನಾಟಕದಲ್ಲಿ ಚುನಾವಣೆ ಸಂಭವಿಸಲಿದೆ ಅಂದರೆ ಅಪ್ಪಳಿಸಲಿದೆ. ಈ ಹಿಂದಿನವೆಲ್ಲಾ ಚುನಾವಣೆಗಳಾದರೆ, ಈಗಿನದ್ದು ಸಮರ ಚುನಾವಣಾ ಸಾಮಗ್ರಿಗಳೊಡಗೂಡಿದ ಸಮರ. ಇಲ್ಲಿ ಬಳಕೆಯಾಗುವ ಎಲ್ಲ ಆಯುಧಗಳಿಗಿಂತಲೂ ಮತೀಯವಾದ ಆಯುಧ ಭಯಾನಕವಾದದ್ದು. ಮೂರು ಪಾರ್ಟಿಗಳೂ ಈ ಆಯುಧಗಳನ್ನು ಕೈಗೆತ್ತಿಕೊಂಡಿವೆ. ಕಾಂಗ್ರೆಸ್ ಪಾರ್ಟಿ ಅಹಿಂದ ಜಪ ಕಡಿಮೆ ಮಾಡಿ ಅಹಿಂದದ ಜೊತೆಗೆ ಲಿಂಗ ಸೇರಿಸಿಕೊಂಡಿದೆ. ಆದರೆ ಒಲ್ಲದ ಗಂಡನೊಡನೆ ಬಾಳುವೆ ಮಾಡಿದಂತೆ ವೀರಶೈವರೊಟ್ಟಿಗಿದ್ದ ಲಿಂಗಾಯತರು ತಮ್ಮಸ್ಥಾನದಿಂದ ಕೆಳಗಿಳಿದು ಅಹಿಂದರೊಟ್ಟಿಗೆ ನಿಲ್ಲುವುದು ಸಾಧ್ಯವೇ ಎಂದು ಸಮಾಜ ವಿಜ್ಞಾನಿಗಳು ಚರ್ಚೆ ಮಾಡುತ್ತಿರುವಾಗಲೇ, ಶಾ ಎಂಬ ಭಾರತದ ಶನಿ ಹೆದರಬೇಡಿ ಬೇರೆ ಧರ್ಮ ಮಾನ್ಯತೆ ಕೊಡುವುದಿಲ್ಲ ಎಂದುಬಿಟ್ಟಿದ್ದಾನಲ್ಲಾ.
ಈತನ ಅಜ್ಞಾನದ ಮುಸುಡಿಗೆ ಇಕ್ಕಿರುವ ಮಾತೆಮಾದೇವಿ ನಿನ್ನ ಬುದ್ಧಿ ದಾರಿದ್ರ್ಯಕ್ಕಿಷ್ಟು ಬೆಂಕಿಹಾಕ. ನೀನು ಮಾತ್ರ ಜೈನ ಧರ್ಮ ಪಡಕೊಂಡಿ, ನಮಗೆ ಲಿಂಗಧರ್ಮ ಬೇಡವೆ ಎಂದರಂತಲ್ಲಾ, ಥೂತ್ತೇರಿ!

*******

ಕರ್ನಾಟಕದ ಮತದಾರರ ಎದುರು ಮೂರು ಪಾರ್ಟಿಗಳು ತಮ್ಮತಮ್ಮ ಸಾಧನೆಗಳನ್ನು ಅನಾವರಣ ಮಾಡಿಕೊಳ್ಳುತ್ತಿವೆಯಲ್ಲಾ. ಆ ಪೈಕಿ ಕಾಂಗ್ರೆಸ್ ಈ ಐದು ವರ್ಷ ತಾನು ಮಾಡಿದ ಸಾಧನೆಗಳನ್ನು ಸಾರಲು ಹೆಣಗುತ್ತಿರುವಾಗ, ಅತ್ತ ಬಿಜೆಪಿ ಹೇಳಿಕೊಳ್ಳಲು ಏನೂ ಇಲ್ಲದ ಕಾರಣ ಸಿದ್ದು ಸರ್ಕಾರ ಶುದ್ಧ ಭ್ರಷ್ಟ ಸರ್ಕಾರ. ಅದರಲ್ಲೂ ನಂ. 1 ಭ್ರಷ್ಟ ಸರ್ಕಾರ ಎಂದು ಹೇಳುತ್ತಲೇ `ಶಾ’ರವರು ಸಿದ್ದು ಹೆಸರಿನ ಜಾಗಕ್ಕೆ ಎಡೂರಪ್ಪನನ್ನು ತಂದು ಕೂರಿಸಿದ್ದು ಕರ್ನಾಟಕವನ್ನೆ ನಗಿಸಿತಂತಲ್ಲಾ. ಇನ್ನು ಜೆಡಿಎಸ್‍ನಿಂದ ಇಂತಹ ಪ್ರಮಾದಗಳಿಲ್ಲವಿದ್ದರೂ ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಸಿರಾಮಯ್ಯನಂಥ ನೀಚನನ್ನು ನಾನು ಬೆಳೆಸಿ ಉಪಮುಖ್ಯಮಂತ್ರಿ ಮಾಡಿದ್ದೇ ತಪ್ಪು ಎಂದು ಹಲುಬಿದ್ದಾರಂತಲ್ಲಾ. ಆಗ ಅಲ್ಲೇ ಇದ್ದ ಅಡಗೂರಿನ ಬುಂಡೆಖ್ಯಾತ ಅಂದರೆ ಎಚ್. ವಿಶ್ವನಾಥ್ ನಾನು ಸಿದ್ದರಾಮಯ್ಯನ ಕೊರಳಿಗೆ ಹಗ್ಗಹಾಕಿ ಸೋನಿಯಾ ಮನೆಗೆ ಎಳೆದುಕೊಂಡು ಹೋಗಿದ್ದು ಈ ಶತಮಾನದಲ್ಲಿ ನಾನು ಮಾಡಿದ ಘೋರ ತಪ್ಪು ಎಂದರಂತಲ್ಲಾ ಥೂತ್ತೇರಿ.

*******

“ಸಿದ್ದುವನ್ನು ನಾನು ಬೆಳೆಸಿದೆ” ಎಂಬ ದೇವೇಗೌಡರ ಮಾತಿಗೆ ಸಾಕ್ಷಿಯೊದಗಿಸಿರುವ ಕೊಳ್ಳೇಗಾಲದ ಪ್ರಸಾದ ಎಂಬ ಸಿದ್ದು ಸೇವಕ. ಗೌಡರು ಹೇಳಿದ್ದು ನೂರಕ್ಕೆ ನೂರಮೂರು ಸತ್ಯ.
ಸಿದ್ದರಾಮನ ಹುಂಡಿಯಲ್ಲಿ, ಹರುಕಲು ಅಂಗಿ, ತೂತಾದ ಚೆಡ್ಡಿ, ಇಕ್ಕಿಕೊಂಡು ಎಣ್ಣೆಗಾಣದ ತಲೆ ಕೆದರಿಕೊಂಡು ಕುರಿ ಕಾಯುತ್ತಿದ್ದ ಸಿದ್ದುವನ್ನು ಹಿಡಿದು ತಂದ ದೇವೇಗೌಡರು, ರೇವಣ್ಣನಿಗಿಂತಲೂ ಹಿರಿಯವನೆಂದು ಸಾಕಿ ಎಲ್‍ಎಲ್‍ಬಿ ಮಾಡಿಸಿ, ಲಾಯರ್ ಮಾಡಿ, ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ, ಕನ್ನಡ ಅಭಿವೃದ್ಧಿ ಅಧ್ಯಕ್ಷನನ್ನಾಗಿ ಮಾಡಿ, ನಂತರ ಆಡುಕುರಿ ದನಗಳ ಮಂತ್ರಿ ಮಾಡಿ, ಆರಾಣೆ ಎಣಿಸಲು ಬಾರದಿದ್ದರೂ ಅರ್ಥಮಂತ್ರಿ ಮಾಡಿ, ಉಪಮುಖ್ಯಮಂತ್ರಿ ಮಾಡಿದ್ದೂ ಅಲ್ಲದೆ, ಚಾಮುಂಡೇಶ್ವರಿ ಚುನಾವಣೆಯಲ್ಲಿ ಕೇವಲ 274 ಮತಗಳ ಅಂತರದಲ್ಲಿ ಗೆಲ್ಲಿಸಿ ಕೊಟ್ಟ ದೇವೇಗೌಡರು ಸಿದ್ದು ಪಾಲಿಗೆ ದೇವರಾಗಬೇಕಿತ್ತು. ಅದುಬಿಟ್ಟು ಕರ್ನಾಟಕವನ್ನು ಕಾಡುತ್ತಿರುವ ದೆವ್ವನಂತೆ ಪರಿಗಣಿಸಬಾರದಿತ್ತು. ಯಾರಾದರಾಗಲಿ ದೆವ್ವನನ್ನು ಆರಾಧಿಸಬೇಕೆ ಹೊರತು ಸಿಟ್ಟು ತರಿಸಬಾರದು ಎನ್ನುತ್ತಿದ್ದಾರಂತಲ್ಲಾ, ಥೂತ್ತೇರಿ.

*******

ಸಿದ್ದು ಸರ್ಕಾರ ಮರಳಿ ಬಂದುದಾದರೆ ಕರುಣಿಸಿರುವ ಭಾಗ್ಯಗಳು ಮುಂದುವರಿಯುತ್ತವಂತೆ. ಅದೇ ಬಿಜೆಪಿ ಸರ್ಕಾರ ಬಂದರೆ ಹಿಂದಿನ ಸಾಧನೆಗಳು ಮುಂದುವರಿಯುತ್ತವಂತೆ! ಹಾಗೆಯೇ ಇಪ್ಪತ್ತೇ ತಿಂಗಳಿದ್ದು ಇಬ್ಬರು ಹೆಂಡಿರ ಮನೆ ಮರೆತು ಗ್ರಾಮ ವಾಸ್ತವ್ಯ ಮಾಡಿದ ಕುಮಾರಣ್ಣನ ಕೆಲಸಗಳೂ ಮುಂದುವರಿಯುತ್ತವಂತೆ. ಜೊತೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡ 25 ಗಂಟೆ ಅವಧಿಯಲ್ಲಿ ರೈತರ 51 ಸಾವಿರ ಕೋಟಿ ಸಾಲಮನ್ನ, ಗರ್ಭಿಣಿಯರು. ಗರ್ಭಿಣಿಯಾಗುವ ತಿಂಗಳಿನಿಂದಲೇ ಮಾಸಾಶನ ಮಾಡುತ್ತೇನೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರು ಮನೆಯಿಂದ ಈಚೆ ಬರದಂತಹ ಕೆಲಸ ಕೊಡುತ್ತೇನೆ. ಅಂದರೆ ಮನೆ ಕೈಗಾರಿಕೆಗಳು ಜಾರಿಯಾಗುತ್ತವೆ. ಮುಖ್ಯವಾಗಿ ನಮ್ಮ ತಂದೆಯವರಿಗೆ ಪ್ರಿಯವಾದ ಮುದ್ದೆ ತಯಾರಿಸುವಂತೆ ಮಾಡಿ. ಅದರ ಜೊತೆಗೆ ರೊಟ್ಟಿಯನ್ನು ತಯಾರಿಸಿ ಮಾರ್ಕೆಟಿಂಗ್ ವ್ಯವಸ್ಥೆ ಮಾಡುತ್ತೇನೆ. ಮುದ್ದೆ ಖರ್ಚಾಗದಿದ್ದರೆ ಬೃಹತ್ ಶೀತಲೀಕರಣ ನಿರ್ಮಿಸಿ ಕೆಡದಂತೆ ಸಂಗ್ರಹಿಸಿ ರಫ್ತು ಮಾಡುತ್ತೇವೆ ಎಂದು ಇನ್ನು ಹೇಳಿಲ್ಲವಂತಲ್ಲಾ, ಥೂತ್ತೇರಿ.

*******

ಹಸುವಿನಿಂದ ಬೇರೆಯಾದ ಕರುವಿನಂತೆ ಕರ್ನಾಟಕವನ್ನು ಸುತ್ತುತ್ತ. ಇವನಾರ್ವ ಇವನಾರ್ವ ಎನ್ನುತ್ತಿರುವ ರಾಹುಲ್ ಗಾಂಧಿಯನ್ನು ನೋಡಿ ಪಾಪ ಪಾಂಡು ಎಂದು ಆಡಿಕೊಂಡಿರುವ ಅಡುಕುರಿ ವಿಶ್ವನಾಥ್‍ನನ್ನು ನೋಡಿ, ಕೆರಳಿದ ಕಾಂಗೈಗಳೂ ಬುಂಡೆಕ್ಯಾತನೆಂದು ನಾಮಕರಣ ಮಾಡಿವೆಯಲ್ಲಾ. ಅಷ್ಟಕ್ಕೂ ಈ ಬುಂಡೆಕ್ಯಾತ ಮಗ ಅಯ್ಯು ಚಿತ್ರದ್ದು. ಆ ಚಿತ್ರದಲ್ಲಿ ಬುಂಡೇಕ್ಯಾತನ ಯಾರೆಂದು ಇತಿಹಾಸವನ್ನು ಕೆದಕಿದಾಗ ಬುಂಡೆಕ್ಯಾತ ಎಂಬ ಪಾತ್ರ ಬೂತಯ್ಯನ ಕೆಲಸವೇನೆಂದರೆ, ಭೂತಯ್ಯನ ಜೊತೆಗಿದ್ದೇ ವಿರೋಧಿಗಳಿಗೆ ಭೂತಯ್ಯನ ನಾಶ ಸಂಚನ್ನು ಹೇಳಿಕೊಡುವುದು. ನಾಯಕನ ಹಿಂದಿರುತ್ತಲೇ ಎದುರಾಳಿಗೆ ಕಣ್ಸನ್ನೆ ಮಾಡುವ ಈ ಪಾತ್ರಗಳಿಗೆ ದೊಡ್ಡ ಇತಿಹಾಸವೇ ಇದೆ. ಅದೇನಾದರಾಗಲಿ ದೇವೇಗೌಡರು ಟೀಕೆ ಮಾಡುವ ಯಾವ ಅವಕಾಶವನ್ನು ಕಳೆದುಕೊಳ್ಳದೇ ಟೀಕಿಸಿ ಚಪ್ಪಾಳೆ ಗಿಟ್ಟಿಸಿದ್ದ ವಿಶ್ವನಾಥ್, ಈಗ ದೇವೇಗೌಡರ ಹಿಂದೆ ಇದ್ದು,ಈ ಬುರುಡೆ ಅವರೇದ್ದೊ ಇವರದ್ದೊ ಎಂಬ ಅನುಮಾನ ಹುಟ್ಟಿಸುವಂತೆ ಹತ್ತಿರದಲ್ಲೇ ಇರುವುದು ಮೌಲ್ಯಗಳನ್ನು ಕುರಿತು ಚಿಂತಿಸುವವರ ಮನಕರಗಿಸುವಂತಿದೆಯಲ್ಲಾ ಥೂತ್ತೇರಿ!!!

– ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...