Homeಅಂಕಣಗಳುಮುದ್ದೆ ರಫ್ತು ಮಾಡಿದ್ರೆ ಹೆಂಗೆ?

ಮುದ್ದೆ ರಫ್ತು ಮಾಡಿದ್ರೆ ಹೆಂಗೆ?

- Advertisement -
- Advertisement -

ಕರ್ನಾಟಕದಲ್ಲಿ ಚುನಾವಣೆ ಸಂಭವಿಸಲಿದೆ ಅಂದರೆ ಅಪ್ಪಳಿಸಲಿದೆ. ಈ ಹಿಂದಿನವೆಲ್ಲಾ ಚುನಾವಣೆಗಳಾದರೆ, ಈಗಿನದ್ದು ಸಮರ ಚುನಾವಣಾ ಸಾಮಗ್ರಿಗಳೊಡಗೂಡಿದ ಸಮರ. ಇಲ್ಲಿ ಬಳಕೆಯಾಗುವ ಎಲ್ಲ ಆಯುಧಗಳಿಗಿಂತಲೂ ಮತೀಯವಾದ ಆಯುಧ ಭಯಾನಕವಾದದ್ದು. ಮೂರು ಪಾರ್ಟಿಗಳೂ ಈ ಆಯುಧಗಳನ್ನು ಕೈಗೆತ್ತಿಕೊಂಡಿವೆ. ಕಾಂಗ್ರೆಸ್ ಪಾರ್ಟಿ ಅಹಿಂದ ಜಪ ಕಡಿಮೆ ಮಾಡಿ ಅಹಿಂದದ ಜೊತೆಗೆ ಲಿಂಗ ಸೇರಿಸಿಕೊಂಡಿದೆ. ಆದರೆ ಒಲ್ಲದ ಗಂಡನೊಡನೆ ಬಾಳುವೆ ಮಾಡಿದಂತೆ ವೀರಶೈವರೊಟ್ಟಿಗಿದ್ದ ಲಿಂಗಾಯತರು ತಮ್ಮಸ್ಥಾನದಿಂದ ಕೆಳಗಿಳಿದು ಅಹಿಂದರೊಟ್ಟಿಗೆ ನಿಲ್ಲುವುದು ಸಾಧ್ಯವೇ ಎಂದು ಸಮಾಜ ವಿಜ್ಞಾನಿಗಳು ಚರ್ಚೆ ಮಾಡುತ್ತಿರುವಾಗಲೇ, ಶಾ ಎಂಬ ಭಾರತದ ಶನಿ ಹೆದರಬೇಡಿ ಬೇರೆ ಧರ್ಮ ಮಾನ್ಯತೆ ಕೊಡುವುದಿಲ್ಲ ಎಂದುಬಿಟ್ಟಿದ್ದಾನಲ್ಲಾ.
ಈತನ ಅಜ್ಞಾನದ ಮುಸುಡಿಗೆ ಇಕ್ಕಿರುವ ಮಾತೆಮಾದೇವಿ ನಿನ್ನ ಬುದ್ಧಿ ದಾರಿದ್ರ್ಯಕ್ಕಿಷ್ಟು ಬೆಂಕಿಹಾಕ. ನೀನು ಮಾತ್ರ ಜೈನ ಧರ್ಮ ಪಡಕೊಂಡಿ, ನಮಗೆ ಲಿಂಗಧರ್ಮ ಬೇಡವೆ ಎಂದರಂತಲ್ಲಾ, ಥೂತ್ತೇರಿ!

*******

ಕರ್ನಾಟಕದ ಮತದಾರರ ಎದುರು ಮೂರು ಪಾರ್ಟಿಗಳು ತಮ್ಮತಮ್ಮ ಸಾಧನೆಗಳನ್ನು ಅನಾವರಣ ಮಾಡಿಕೊಳ್ಳುತ್ತಿವೆಯಲ್ಲಾ. ಆ ಪೈಕಿ ಕಾಂಗ್ರೆಸ್ ಈ ಐದು ವರ್ಷ ತಾನು ಮಾಡಿದ ಸಾಧನೆಗಳನ್ನು ಸಾರಲು ಹೆಣಗುತ್ತಿರುವಾಗ, ಅತ್ತ ಬಿಜೆಪಿ ಹೇಳಿಕೊಳ್ಳಲು ಏನೂ ಇಲ್ಲದ ಕಾರಣ ಸಿದ್ದು ಸರ್ಕಾರ ಶುದ್ಧ ಭ್ರಷ್ಟ ಸರ್ಕಾರ. ಅದರಲ್ಲೂ ನಂ. 1 ಭ್ರಷ್ಟ ಸರ್ಕಾರ ಎಂದು ಹೇಳುತ್ತಲೇ `ಶಾ’ರವರು ಸಿದ್ದು ಹೆಸರಿನ ಜಾಗಕ್ಕೆ ಎಡೂರಪ್ಪನನ್ನು ತಂದು ಕೂರಿಸಿದ್ದು ಕರ್ನಾಟಕವನ್ನೆ ನಗಿಸಿತಂತಲ್ಲಾ. ಇನ್ನು ಜೆಡಿಎಸ್‍ನಿಂದ ಇಂತಹ ಪ್ರಮಾದಗಳಿಲ್ಲವಿದ್ದರೂ ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಸಿರಾಮಯ್ಯನಂಥ ನೀಚನನ್ನು ನಾನು ಬೆಳೆಸಿ ಉಪಮುಖ್ಯಮಂತ್ರಿ ಮಾಡಿದ್ದೇ ತಪ್ಪು ಎಂದು ಹಲುಬಿದ್ದಾರಂತಲ್ಲಾ. ಆಗ ಅಲ್ಲೇ ಇದ್ದ ಅಡಗೂರಿನ ಬುಂಡೆಖ್ಯಾತ ಅಂದರೆ ಎಚ್. ವಿಶ್ವನಾಥ್ ನಾನು ಸಿದ್ದರಾಮಯ್ಯನ ಕೊರಳಿಗೆ ಹಗ್ಗಹಾಕಿ ಸೋನಿಯಾ ಮನೆಗೆ ಎಳೆದುಕೊಂಡು ಹೋಗಿದ್ದು ಈ ಶತಮಾನದಲ್ಲಿ ನಾನು ಮಾಡಿದ ಘೋರ ತಪ್ಪು ಎಂದರಂತಲ್ಲಾ ಥೂತ್ತೇರಿ.

*******

“ಸಿದ್ದುವನ್ನು ನಾನು ಬೆಳೆಸಿದೆ” ಎಂಬ ದೇವೇಗೌಡರ ಮಾತಿಗೆ ಸಾಕ್ಷಿಯೊದಗಿಸಿರುವ ಕೊಳ್ಳೇಗಾಲದ ಪ್ರಸಾದ ಎಂಬ ಸಿದ್ದು ಸೇವಕ. ಗೌಡರು ಹೇಳಿದ್ದು ನೂರಕ್ಕೆ ನೂರಮೂರು ಸತ್ಯ.
ಸಿದ್ದರಾಮನ ಹುಂಡಿಯಲ್ಲಿ, ಹರುಕಲು ಅಂಗಿ, ತೂತಾದ ಚೆಡ್ಡಿ, ಇಕ್ಕಿಕೊಂಡು ಎಣ್ಣೆಗಾಣದ ತಲೆ ಕೆದರಿಕೊಂಡು ಕುರಿ ಕಾಯುತ್ತಿದ್ದ ಸಿದ್ದುವನ್ನು ಹಿಡಿದು ತಂದ ದೇವೇಗೌಡರು, ರೇವಣ್ಣನಿಗಿಂತಲೂ ಹಿರಿಯವನೆಂದು ಸಾಕಿ ಎಲ್‍ಎಲ್‍ಬಿ ಮಾಡಿಸಿ, ಲಾಯರ್ ಮಾಡಿ, ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ, ಕನ್ನಡ ಅಭಿವೃದ್ಧಿ ಅಧ್ಯಕ್ಷನನ್ನಾಗಿ ಮಾಡಿ, ನಂತರ ಆಡುಕುರಿ ದನಗಳ ಮಂತ್ರಿ ಮಾಡಿ, ಆರಾಣೆ ಎಣಿಸಲು ಬಾರದಿದ್ದರೂ ಅರ್ಥಮಂತ್ರಿ ಮಾಡಿ, ಉಪಮುಖ್ಯಮಂತ್ರಿ ಮಾಡಿದ್ದೂ ಅಲ್ಲದೆ, ಚಾಮುಂಡೇಶ್ವರಿ ಚುನಾವಣೆಯಲ್ಲಿ ಕೇವಲ 274 ಮತಗಳ ಅಂತರದಲ್ಲಿ ಗೆಲ್ಲಿಸಿ ಕೊಟ್ಟ ದೇವೇಗೌಡರು ಸಿದ್ದು ಪಾಲಿಗೆ ದೇವರಾಗಬೇಕಿತ್ತು. ಅದುಬಿಟ್ಟು ಕರ್ನಾಟಕವನ್ನು ಕಾಡುತ್ತಿರುವ ದೆವ್ವನಂತೆ ಪರಿಗಣಿಸಬಾರದಿತ್ತು. ಯಾರಾದರಾಗಲಿ ದೆವ್ವನನ್ನು ಆರಾಧಿಸಬೇಕೆ ಹೊರತು ಸಿಟ್ಟು ತರಿಸಬಾರದು ಎನ್ನುತ್ತಿದ್ದಾರಂತಲ್ಲಾ, ಥೂತ್ತೇರಿ.

*******

ಸಿದ್ದು ಸರ್ಕಾರ ಮರಳಿ ಬಂದುದಾದರೆ ಕರುಣಿಸಿರುವ ಭಾಗ್ಯಗಳು ಮುಂದುವರಿಯುತ್ತವಂತೆ. ಅದೇ ಬಿಜೆಪಿ ಸರ್ಕಾರ ಬಂದರೆ ಹಿಂದಿನ ಸಾಧನೆಗಳು ಮುಂದುವರಿಯುತ್ತವಂತೆ! ಹಾಗೆಯೇ ಇಪ್ಪತ್ತೇ ತಿಂಗಳಿದ್ದು ಇಬ್ಬರು ಹೆಂಡಿರ ಮನೆ ಮರೆತು ಗ್ರಾಮ ವಾಸ್ತವ್ಯ ಮಾಡಿದ ಕುಮಾರಣ್ಣನ ಕೆಲಸಗಳೂ ಮುಂದುವರಿಯುತ್ತವಂತೆ. ಜೊತೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡ 25 ಗಂಟೆ ಅವಧಿಯಲ್ಲಿ ರೈತರ 51 ಸಾವಿರ ಕೋಟಿ ಸಾಲಮನ್ನ, ಗರ್ಭಿಣಿಯರು. ಗರ್ಭಿಣಿಯಾಗುವ ತಿಂಗಳಿನಿಂದಲೇ ಮಾಸಾಶನ ಮಾಡುತ್ತೇನೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರು ಮನೆಯಿಂದ ಈಚೆ ಬರದಂತಹ ಕೆಲಸ ಕೊಡುತ್ತೇನೆ. ಅಂದರೆ ಮನೆ ಕೈಗಾರಿಕೆಗಳು ಜಾರಿಯಾಗುತ್ತವೆ. ಮುಖ್ಯವಾಗಿ ನಮ್ಮ ತಂದೆಯವರಿಗೆ ಪ್ರಿಯವಾದ ಮುದ್ದೆ ತಯಾರಿಸುವಂತೆ ಮಾಡಿ. ಅದರ ಜೊತೆಗೆ ರೊಟ್ಟಿಯನ್ನು ತಯಾರಿಸಿ ಮಾರ್ಕೆಟಿಂಗ್ ವ್ಯವಸ್ಥೆ ಮಾಡುತ್ತೇನೆ. ಮುದ್ದೆ ಖರ್ಚಾಗದಿದ್ದರೆ ಬೃಹತ್ ಶೀತಲೀಕರಣ ನಿರ್ಮಿಸಿ ಕೆಡದಂತೆ ಸಂಗ್ರಹಿಸಿ ರಫ್ತು ಮಾಡುತ್ತೇವೆ ಎಂದು ಇನ್ನು ಹೇಳಿಲ್ಲವಂತಲ್ಲಾ, ಥೂತ್ತೇರಿ.

*******

ಹಸುವಿನಿಂದ ಬೇರೆಯಾದ ಕರುವಿನಂತೆ ಕರ್ನಾಟಕವನ್ನು ಸುತ್ತುತ್ತ. ಇವನಾರ್ವ ಇವನಾರ್ವ ಎನ್ನುತ್ತಿರುವ ರಾಹುಲ್ ಗಾಂಧಿಯನ್ನು ನೋಡಿ ಪಾಪ ಪಾಂಡು ಎಂದು ಆಡಿಕೊಂಡಿರುವ ಅಡುಕುರಿ ವಿಶ್ವನಾಥ್‍ನನ್ನು ನೋಡಿ, ಕೆರಳಿದ ಕಾಂಗೈಗಳೂ ಬುಂಡೆಕ್ಯಾತನೆಂದು ನಾಮಕರಣ ಮಾಡಿವೆಯಲ್ಲಾ. ಅಷ್ಟಕ್ಕೂ ಈ ಬುಂಡೆಕ್ಯಾತ ಮಗ ಅಯ್ಯು ಚಿತ್ರದ್ದು. ಆ ಚಿತ್ರದಲ್ಲಿ ಬುಂಡೇಕ್ಯಾತನ ಯಾರೆಂದು ಇತಿಹಾಸವನ್ನು ಕೆದಕಿದಾಗ ಬುಂಡೆಕ್ಯಾತ ಎಂಬ ಪಾತ್ರ ಬೂತಯ್ಯನ ಕೆಲಸವೇನೆಂದರೆ, ಭೂತಯ್ಯನ ಜೊತೆಗಿದ್ದೇ ವಿರೋಧಿಗಳಿಗೆ ಭೂತಯ್ಯನ ನಾಶ ಸಂಚನ್ನು ಹೇಳಿಕೊಡುವುದು. ನಾಯಕನ ಹಿಂದಿರುತ್ತಲೇ ಎದುರಾಳಿಗೆ ಕಣ್ಸನ್ನೆ ಮಾಡುವ ಈ ಪಾತ್ರಗಳಿಗೆ ದೊಡ್ಡ ಇತಿಹಾಸವೇ ಇದೆ. ಅದೇನಾದರಾಗಲಿ ದೇವೇಗೌಡರು ಟೀಕೆ ಮಾಡುವ ಯಾವ ಅವಕಾಶವನ್ನು ಕಳೆದುಕೊಳ್ಳದೇ ಟೀಕಿಸಿ ಚಪ್ಪಾಳೆ ಗಿಟ್ಟಿಸಿದ್ದ ವಿಶ್ವನಾಥ್, ಈಗ ದೇವೇಗೌಡರ ಹಿಂದೆ ಇದ್ದು,ಈ ಬುರುಡೆ ಅವರೇದ್ದೊ ಇವರದ್ದೊ ಎಂಬ ಅನುಮಾನ ಹುಟ್ಟಿಸುವಂತೆ ಹತ್ತಿರದಲ್ಲೇ ಇರುವುದು ಮೌಲ್ಯಗಳನ್ನು ಕುರಿತು ಚಿಂತಿಸುವವರ ಮನಕರಗಿಸುವಂತಿದೆಯಲ್ಲಾ ಥೂತ್ತೇರಿ!!!

– ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...