Homeಅಂಕಣಗಳುಮೋದಿಯ ಅವಸಾನ ಕರ್ನಾಟಕದಿಂದ ಆರಂಭವಾಗಲಿದೆ

ಮೋದಿಯ ಅವಸಾನ ಕರ್ನಾಟಕದಿಂದ ಆರಂಭವಾಗಲಿದೆ

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ರಾಜಕೀಯದಲ್ಲಿ chaotic meltdown ಆಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿವೆ. ಈ ಹೋರಾಟ ಸ್ವಪ್ರತಿಷ್ಠೆಗೆ, ಅನಾಗರಿಕ ನಡವಳಿಕೆಗೆ ಎಡೆಮಾಡಿದೆ. ರಾಜಕೀಯ ವ್ಯಕ್ತಿಗಳು ಪ್ರಾಥಮಿಕ ಮಾನವೀಯ instinctಗಳನ್ನು ಗಾಳಿಗೆ ತೂರಿವೆ. ಅನಾಗರಿಕರಿಗಿಂತ ಕೀಳುಮಟ್ಟದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಸಮಾಜಕ್ಕೆ ತನ್ನಿಂದ ಆಗಬೇಕಾಗಿರುವ ಸೇವೆಯ ಬಗೆಗೆ ಆಲೋಚನೆ ಮಾಡುತ್ತಿಲ್ಲ. ಸ್ವಲಾಭದ ಕಡೆಗೇ ಅವನ ಗಮನವೆಲ್ಲ ರಾಜಕೀಯ ನಾಯಕರು ರಾಜಕೀಯ ಮೌಲ್ಯಗಳನ್ನು ಕುರಿತು ಮಾತನಾಡುತ್ತಿಲ್ಲ. ವಕೀಲರು ಕಾನೂನನ್ನು ಎತ್ತಿ ಹಿಡಿಯುವವರಾಗಿ ಉಳಿದಿಲ್ಲ. ನ್ಯಾಯಾಧಿಪತಿಗಳು ಕೇಂದ್ರ ಸರ್ಕಾರದ ರಕ್ಷಣೆಗೆ ನಿಲ್ಲುತ್ತಿದ್ದಾರೆ. ಸರ್ಕಾರ ಸಿಬಿ, ಆದಾಯ ತೆರಿಗೆ ಇಲಾಖೆ ಮುಂತಾದವನ್ನು ತನ್ನ ಕೈಗೊಂಬೆ ಮಾಡಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣ್ಣು ಮಾಡಲು ಬಳಸುತ್ತಿದೆ. ಶಾಸಕರು, ಪಾರ್ಲಿಮೆಂಟ್ ಸದಸ್ಯರು ಶಾಸನ ರೂಪಿಸುವ ಕೆಲಸ ಬಿಟ್ಟು ತಮ್ಮ ಕರ್ತವ್ಯಗಳನ್ನು ಮರೆತು, ಶಾಸನಸಭೆ ಮತ್ತು ಪಾರ್ಲಿಮೆಂಟ್ ಸಭೆಗಳು, ಕಾರ್ಯಕಲಾಪಗಳನ್ನು ನಡೆಸಲು ಬಿಡದೆ, ಜನದ್ರೋಹದ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಹಿಂದೆಂದೂ ಕೇಳರಿಯದ ಮಟ್ಟದಲ್ಲಿ ಭಾರತದ ಎಲ್ಲ ಕಡೆಗಳಲ್ಲಿ ಹಿಂಸಾಚಾರ, ಗೂಂಡಾಗಿರಿ, ಮಹಿಳೆಯರ ಹಾಗೂ ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ನಡೆಯುತ್ತಲೇ ಇವೆ. ದೇಶ ಇಂತಹ ಘೋರ ವಿಪತ್ತುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಚುನಾವಣೆ ಬಂದಿದೆ.

ಚುನಾವಣೆ ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವುದರಿಂದ, ಸೀಟು ಸಿಕ್ಕದವರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಿದ್ದಾರೆ. ಇವರಿಗೆ ನಾಚಿಕೆಯೂ ಇಲ್ಲ, ಮತದಾರರ ಭಯವೂ ಇಲ್ಲ. ಪಕ್ಷ ಇರುವುದು ಇವರ ದೃಷ್ಟಿಯಲ್ಲಿ ತಮ್ಮ ಸ್ವಾರ್ಥಸಾಧನೆಗೆ ಅವಕಾಶ ಮಾಡಿಕೊಡಲು ಮಾತ್ರ. ಮತದಾರನೂ ಕೂಡ ಇಂಗುತಿಂದ ಮಂಗನಂತೆ ಈ ಸಮಯಸಾಧಕ ಸ್ವಾರ್ಥಿಗಳ ಹುಚ್ಚಾಟವನ್ನು ಮೂಕಪ್ರೇಕ್ಷಕನಂತೆ ನೋಡುತ್ತಾ ಕೂತಿದ್ದಾನೆ.

ಸೀಟು ಆಕಾಂಕ್ಷಿಗಳ ಅನೀತಿಯುತ ಗೆಯ್ಮೆಯನ್ನು ತಡೆಗಟ್ಟಬೇಕಾದ ರಾಜಕೀಯ ಪಕ್ಷಗಳು, ಅವರಿಗೆ ಮಣೆ ಹಾಕಿ ಬರಮಾಡಿಕೊಳ್ಳುತ್ತಿವೆ. ಹೀಗೆ ಅನೀತಿಯನ್ನು ಪ್ರೋತ್ಸಾಹಿಸುವ ರಾಜಕೀಯ ಪಕ್ಷಗಳು ನಮಗೆ ಬೇಕೇ ಎಂದು ಮತದಾರ ವಿಚಾರ ಮಾಡಬೇಕು. ರಾಜಕೀಯ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕು. ಆದರೆ ನಮ್ಮ ಮತದಾರ ಗರಬಡಿದವನಂತೆ ಇದ್ದಾನೆ. ನಡೆಯುತ್ತಿರುವ ವಿದ್ಯಮಾನಗಳನ್ನು ವಿಶ್ಲೇಷಣೆ ಮಾಡಲಾರದಷ್ಟು ಜಡವಾಗಿ ಬಿಟ್ಟಿದ್ದಾನೆ.

ಯಶ್ವಂತ್‍ಸಿನ್ಹಾ, ಶತ್ರುಘ್ನಸಿನ್ಹಾ ಮೊದಲಾದ ನಿಷ್ಠಾವಂತ ಬಿಜೆಪಿ ನಾಯಕರು ಮೋದಿಯ ಹುಚ್ಚಾಟಗಳಿಗೆ ರೋಸಿಹೋಗಿ, ಪಕ್ಷವನ್ನು ಬಿಟ್ಟುಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಪಕ್ಷವನ್ನು ಸರಿದಾರಿಗೆ ತರಲು ಶಾಂತಿಯುತ ಹೋರಾಟ ನಡೆಸಲೂ ನಿರ್ಧರಿಸಿದ್ದಾರೆ.

ಯಡಿಯೂರಪ್ಪನವರಿಗೆ ಚುನಾವಣೆ ವಿಷಯದಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಲು ತೀರ್ಮಾನಿಸಿದ್ದ ಹೈಕಮಾಂಡ್, ಸೀಟು ಹಂಚಿಕೆಯಲ್ಲಿ ಪ್ರಮಾದವೆಸಗಿದ್ದ ಯಡಿಯೂರಪ್ಪನವರ ಅಧಿಕಾರವನ್ನೂ ಮೊಟಕು ಮಾಡಿ, ಯಡಿಯೂರಪ್ಪನವರ ಮಗನಿಗೆ, ಕರಂದ್ಲಾಜೆಯವರಿಗೆ ಸೀಟು ಕೊಡಲು ನಿರಾಕರಿಸಿದೆ. ಮೊದಲು ಎಲ್ಲಾ ಸೀಟುಗಳನ್ನು ಹಂಚಲು ಯಡಿಯೂರಪ್ಪನವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದ ಹೈಕಮಾಂಡ್ ಅದನ್ನು 40ಕ್ಕೆ ಇಳಿಸಿ, ಈಗ 16 ಸೀಟುಗಳನ್ನು ಮಾತ್ರ ತಮಗೆ ಬೇಕಾದವರಿಗೆ ನೀಡಲು ಅವಕಾಶ ಕೊಟ್ಟು ಉಳಿದದ್ದನ್ನು ತಾನೇ ಭರ್ತಿ ಮಾಡಿದೆ.

ಬಳ್ಳಾರಿ ಜನಾರ್ದನ ರೆಡ್ಡಿಯನ್ನು ಯಡಿಯೂರಪ್ಪನವರು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಕರೆದಿದ್ದಕ್ಕಾಗಿ ಮೋದಿ ಮತ್ತು ಶಾ ಮುನಿಸಿಕೊಂಡಿದ್ದಾರೆ. ಮೋದಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ಹೋಗುವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

ಈ chaotic situation ನಲ್ಲಿ, ಮತದಾರ ತಾನೇನು ಮಾಡಬೇಕು ಎಂದು ತಿಳಿಯದೆ ದಿಗ್ಭ್ರಾಂತನಾಗಿದ್ದಾನೆ. ಮತದಾರನಿಗೆ ದಿಕ್ಸೂಚಿ ಮಾಡುವ ಕೆಲಸವನ್ನು ಯಾರೂ ಮಾಡುತ್ತಿಲ್ಲ.

ಈ ಕೆಲಸವನ್ನು ಈಗ ಕೋಮು ಸೌಹಾರ್ದ ವೇದಿಕೆಯಂತಹ ಸಂಸ್ಥೆ ಇತರ ಎಲ್ಲ ಪ್ರಗತಿಪರ ಕೋಮು ವಿರೋಧಿ ಶಕ್ತಿಗಳನ್ನೂ ಕೂಡಿಕೊಂಡು, ಸಂವಿಧಾನ ವಿರೋಧಿಗಳನ್ನು ಕೊಟ್ಟ ಮಾತಿನಂತೆ ನಡೆದುಕೊಳ್ಳದ ಮೋದಿಯನ್ನೂ ಪರಾಭವಗೊಳಿಸಲು ನಿರ್ಧರಿಸಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕೆ ಈಗ ಮೋದಿ ಒಬ್ಬನೇ ನಾಯಕ. ಆ ನಾಯಕನ ಪರಿಸ್ಥಿತಿ ಏನಾಗಿದೆ ನೋಡಿ 2014ರ ಲೋಕಸಭೆ ಚುನಾವಣೆಗೆ ಮೋದಿ ಹಠಾತ್ತನೆ ಇಳಿದರು. ಅಂದಿನ ದಿನಗಳಲ್ಲಿ ಕಾಂಗ್ರೆಸ್ ಅನೇಕ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಮತದಾರರಿಗೂ ಇದು ಬೇಸರ ತಂದಿತ್ತು. ಮೋದಿ ಕಾಂಗ್ರೆಸ್ಸಿನ ಹಗರಣಗಳನ್ನೆಲ್ಲ ಬಿಚ್ಚಿ ಮತ್ತು ಅದನ್ನು ಪ್ರಬಲ ಅಸ್ತ್ರವಾಗಿ ಚುನಾವಣೆಗೆ ಬಳಸಿಕೊಂಡರು. ರೋಸಿದ್ದ ಜನ ಕಾಂಗ್ರೆಸ್ಸಿನ ವಿರುದ್ಧವಾಗಿ ಮೋದಿಗೆ ಮತಹಾಕಿ ಗೆಲ್ಲಿಸಿದರು.

ಮೋದಿ ಆಡಳಿತವನ್ನು 4 ವರ್ಷಗಳಿಂದ ನೋಡುತ್ತಿರುವ ಮತದಾರನಿಗೆ ಭ್ರಮನಿರಸನ ಆಗಿದೆ. ಮೋದಿ ಹೆಜ್ಜೆಹೆಜ್ಜೆಗೂ ಮಾತು ತಪ್ಪಿದ್ದಾರೆ. ಕಾಳಹಣವನ್ನು 100 ದಿನಗಳ ಒಳಗೆ ಸ್ವಿಸ್‍ಬ್ಯಾಂಕಿನಿಂದ ತಂದು ಪ್ರತಿ ಬಡವನ ಹೆಸರಿನಲ್ಲೂ ಒಂದು ಉಳಿತಾಯ ಖಾತೆ ತೆರೆದು ಬ್ಯಾಂಕಿನಲ್ಲಿ ಅವರ ಹೆಸರಿಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿ ಬಡವರ ಮತ ಕಿತ್ತುಕೊಂಡರು. ಭಾರತದಲ್ಲಿ ಒಂದು ವರ್ಷದಲ್ಲಿ 5 ಲಕ್ಷ ಹುದ್ದೆಗಳನ್ನು ಸೃಷ್ಟಿ ಮಾಡಿ ಯುವಕರಿಗೆ ನೀಡುವುದಾಗಿ ಬೊಗಳೆಬಿಟ್ಟರು. ಅದೂ ಕೈಗೂಡಲಿಲ್ಲ. 1000 ಹಾಗೂ ಐದು ನೂರು ರೂಪಾಯಿ ನೋಟುಗಳನ್ನು ಅಪಮೌಲ್ಯ ಮಾಡಿ ಕಾಳಧನವನ್ನು ಹೊರತೆಗೆಯುವುದಾಗಿ ಹೇಳಿದರು. ಈ ಅಪಮೌಲ್ಯ ಮಾಡಿ ಹೊಸ 2000 ಹಾಗೂ 500 ರೂ.ಗಳ ನೋಟುಗಳನ್ನು ಪ್ರಿಂಟ್ ಮಾಡಿದ್ದು. ಕಾಳಹಣ ಸಂಗ್ರಹಿಸಿದ್ದ ಖದೀಮರು, ಕಪ್ಪುಹಣವನ್ನೆಲ್ಲ ಬಿಳಿಯ ಹಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಯಿತು. ರಾಷ್ಟ್ರೀಕೃತ ಬ್ಯಾಂಕುಗಳು ಈ ಕಾಳಹಣದ ಖದೀಮರಿಗೆ ತಮ್ಮ ಬಳಿ ಇದ್ದ ಕಪು ್ಪಹಣವನ್ನು ಬಿಳಿ ಹಣ ಮಾಡಿಕೊಳ್ಳುವುದಕ್ಕೆ ನೆರವಾದವು.

ಹೀಗಾಗಿ ಮೋದಿಯವರ ವರ್ಚಸ್ಸು ಕ್ಷೀಣವಾಯಿತು. ಅವರು ಬರೀ ಬಾಯ್ಬಡಕ ಎಂಬುದು ಜನತೆಗೆ ಈ ನಾಲ್ಕು ವರ್ಷದಲ್ಲಿ ಅರಿವಾಯಿತು.
ಮೋದಿ ಮೇಲಿನ ಪ್ರತೀಕಾರ ಕರ್ನಾಟಕದಿಂದ ಆರಂಭವಾಗಲಿದೆ. ಮೋದಿಗೆ ಇದು ಫೈನಲ್ಸ್. 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಅವರ ಭಾಗಕ್ಕೆ ಫೈನಲ್ಸ್. ಮೋದಿಯವರ ವಿರೋಧವಾಗಿ ರಾಜಕೀಯ ಪಕ್ಷಗಳ ಧ್ರುವೀಕರಣ ಈಗಾಗಲೇ ಆರಂಭವಾಗಿದೆ.

ಈ ಫೈನಲ್ಸ್‍ಗೆ ಮುಂಚೆಯೇ ಕರ್ನಾಟಕದಲ್ಲಿ ನಡೆಯುವ ವಿಧಾನಸಭೆಯ ಚುನಾವಣೆಯಲ್ಲಿ ಮೋದಿಗೆ ಶಾಕ್ ಕೊಡಲು ಕರ್ನಾಟಕ ಜನ ಸಂಕಲ್ಪ ಮಾಡಿದ್ದಾರೆ.

ಮೋದಿಯ ಅಲೆಯ ಅಬ್ಬರ ಇಳಿದು ಎಷ್ಟೋ ದಿನಗಳಾದವು. ಈಗ ಜನ ಅವರ ಬೊಗಳೆ ಮಾತುಗಳಿಗೆ ಬೇಸರಗೊಂಡಿದ್ದಾರೆ. ಬಿಜೆಪಿ ವಿರೋಧದ ಅಲೆ ಕರ್ನಾಟಕದ ಬಿಜೆಪಿಯನ್ನು ಅಪ್ಪಳಿಸಲು ಸನ್ನದ್ಧವಾಗಿದೆ.

ಮೋದಿ, ಅಮಿತ್ ಶಾ ಹೋದಲ್ಲೆಲ್ಲ ಕಪ್ಪುಬಾವುಟ ಪ್ರದರ್ಶನ ಆಗುತ್ತಿದೆ. ಜನಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬಿಜೆಪಿಗೆ ವಿರುದ್ಧವಾಗಿ ಮತ ಹಾಕಲು ಬಡವರು, ಶ್ರಮಿಕರು, ಕಾರ್ಮಿಕರು, ದಲಿತರು, ನಿರುದ್ಯೋಗಿ ಯುವಕರು, ಸ್ತ್ರೀಯರು, ಮುಸ್ಲಿಮರು, ಕ್ರಿಶ್ಚಿಯನ್ನರು ಮತಾಂಧ ಬಿಜೆಪಿ ಹಿಂದುಗಳನ್ನುಳಿದು ಇತರ ಹಿಂದುಗಳು ಒಮ್ಮತದಿಂದ ಮೋದಿ ಹಠಾವ್ ಮಾಡಬೇಕೆಂದು ಸಂಕಲ್ಪ ಮಾಡಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಕರ್ನಾಟಕದಲ್ಲಿ ಮೋದಿಯ ಮೋಡಿಗೆ ಒಳಗಾಗುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಸಾರಿ ನಡೆಯುವ ಚುನಾವಣೆಯಲ್ಲಿ ಅದು ಪ್ರಕಟವಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...