Homeಅಂಕಣಗಳುಮೋದಿಯ ಅವಸಾನ ಕರ್ನಾಟಕದಿಂದ ಆರಂಭವಾಗಲಿದೆ

ಮೋದಿಯ ಅವಸಾನ ಕರ್ನಾಟಕದಿಂದ ಆರಂಭವಾಗಲಿದೆ

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ರಾಜಕೀಯದಲ್ಲಿ chaotic meltdown ಆಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿವೆ. ಈ ಹೋರಾಟ ಸ್ವಪ್ರತಿಷ್ಠೆಗೆ, ಅನಾಗರಿಕ ನಡವಳಿಕೆಗೆ ಎಡೆಮಾಡಿದೆ. ರಾಜಕೀಯ ವ್ಯಕ್ತಿಗಳು ಪ್ರಾಥಮಿಕ ಮಾನವೀಯ instinctಗಳನ್ನು ಗಾಳಿಗೆ ತೂರಿವೆ. ಅನಾಗರಿಕರಿಗಿಂತ ಕೀಳುಮಟ್ಟದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಸಮಾಜಕ್ಕೆ ತನ್ನಿಂದ ಆಗಬೇಕಾಗಿರುವ ಸೇವೆಯ ಬಗೆಗೆ ಆಲೋಚನೆ ಮಾಡುತ್ತಿಲ್ಲ. ಸ್ವಲಾಭದ ಕಡೆಗೇ ಅವನ ಗಮನವೆಲ್ಲ ರಾಜಕೀಯ ನಾಯಕರು ರಾಜಕೀಯ ಮೌಲ್ಯಗಳನ್ನು ಕುರಿತು ಮಾತನಾಡುತ್ತಿಲ್ಲ. ವಕೀಲರು ಕಾನೂನನ್ನು ಎತ್ತಿ ಹಿಡಿಯುವವರಾಗಿ ಉಳಿದಿಲ್ಲ. ನ್ಯಾಯಾಧಿಪತಿಗಳು ಕೇಂದ್ರ ಸರ್ಕಾರದ ರಕ್ಷಣೆಗೆ ನಿಲ್ಲುತ್ತಿದ್ದಾರೆ. ಸರ್ಕಾರ ಸಿಬಿ, ಆದಾಯ ತೆರಿಗೆ ಇಲಾಖೆ ಮುಂತಾದವನ್ನು ತನ್ನ ಕೈಗೊಂಬೆ ಮಾಡಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣ್ಣು ಮಾಡಲು ಬಳಸುತ್ತಿದೆ. ಶಾಸಕರು, ಪಾರ್ಲಿಮೆಂಟ್ ಸದಸ್ಯರು ಶಾಸನ ರೂಪಿಸುವ ಕೆಲಸ ಬಿಟ್ಟು ತಮ್ಮ ಕರ್ತವ್ಯಗಳನ್ನು ಮರೆತು, ಶಾಸನಸಭೆ ಮತ್ತು ಪಾರ್ಲಿಮೆಂಟ್ ಸಭೆಗಳು, ಕಾರ್ಯಕಲಾಪಗಳನ್ನು ನಡೆಸಲು ಬಿಡದೆ, ಜನದ್ರೋಹದ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಹಿಂದೆಂದೂ ಕೇಳರಿಯದ ಮಟ್ಟದಲ್ಲಿ ಭಾರತದ ಎಲ್ಲ ಕಡೆಗಳಲ್ಲಿ ಹಿಂಸಾಚಾರ, ಗೂಂಡಾಗಿರಿ, ಮಹಿಳೆಯರ ಹಾಗೂ ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ನಡೆಯುತ್ತಲೇ ಇವೆ. ದೇಶ ಇಂತಹ ಘೋರ ವಿಪತ್ತುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಚುನಾವಣೆ ಬಂದಿದೆ.

ಚುನಾವಣೆ ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವುದರಿಂದ, ಸೀಟು ಸಿಕ್ಕದವರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಿದ್ದಾರೆ. ಇವರಿಗೆ ನಾಚಿಕೆಯೂ ಇಲ್ಲ, ಮತದಾರರ ಭಯವೂ ಇಲ್ಲ. ಪಕ್ಷ ಇರುವುದು ಇವರ ದೃಷ್ಟಿಯಲ್ಲಿ ತಮ್ಮ ಸ್ವಾರ್ಥಸಾಧನೆಗೆ ಅವಕಾಶ ಮಾಡಿಕೊಡಲು ಮಾತ್ರ. ಮತದಾರನೂ ಕೂಡ ಇಂಗುತಿಂದ ಮಂಗನಂತೆ ಈ ಸಮಯಸಾಧಕ ಸ್ವಾರ್ಥಿಗಳ ಹುಚ್ಚಾಟವನ್ನು ಮೂಕಪ್ರೇಕ್ಷಕನಂತೆ ನೋಡುತ್ತಾ ಕೂತಿದ್ದಾನೆ.

ಸೀಟು ಆಕಾಂಕ್ಷಿಗಳ ಅನೀತಿಯುತ ಗೆಯ್ಮೆಯನ್ನು ತಡೆಗಟ್ಟಬೇಕಾದ ರಾಜಕೀಯ ಪಕ್ಷಗಳು, ಅವರಿಗೆ ಮಣೆ ಹಾಕಿ ಬರಮಾಡಿಕೊಳ್ಳುತ್ತಿವೆ. ಹೀಗೆ ಅನೀತಿಯನ್ನು ಪ್ರೋತ್ಸಾಹಿಸುವ ರಾಜಕೀಯ ಪಕ್ಷಗಳು ನಮಗೆ ಬೇಕೇ ಎಂದು ಮತದಾರ ವಿಚಾರ ಮಾಡಬೇಕು. ರಾಜಕೀಯ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕು. ಆದರೆ ನಮ್ಮ ಮತದಾರ ಗರಬಡಿದವನಂತೆ ಇದ್ದಾನೆ. ನಡೆಯುತ್ತಿರುವ ವಿದ್ಯಮಾನಗಳನ್ನು ವಿಶ್ಲೇಷಣೆ ಮಾಡಲಾರದಷ್ಟು ಜಡವಾಗಿ ಬಿಟ್ಟಿದ್ದಾನೆ.

ಯಶ್ವಂತ್‍ಸಿನ್ಹಾ, ಶತ್ರುಘ್ನಸಿನ್ಹಾ ಮೊದಲಾದ ನಿಷ್ಠಾವಂತ ಬಿಜೆಪಿ ನಾಯಕರು ಮೋದಿಯ ಹುಚ್ಚಾಟಗಳಿಗೆ ರೋಸಿಹೋಗಿ, ಪಕ್ಷವನ್ನು ಬಿಟ್ಟುಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಪಕ್ಷವನ್ನು ಸರಿದಾರಿಗೆ ತರಲು ಶಾಂತಿಯುತ ಹೋರಾಟ ನಡೆಸಲೂ ನಿರ್ಧರಿಸಿದ್ದಾರೆ.

ಯಡಿಯೂರಪ್ಪನವರಿಗೆ ಚುನಾವಣೆ ವಿಷಯದಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಲು ತೀರ್ಮಾನಿಸಿದ್ದ ಹೈಕಮಾಂಡ್, ಸೀಟು ಹಂಚಿಕೆಯಲ್ಲಿ ಪ್ರಮಾದವೆಸಗಿದ್ದ ಯಡಿಯೂರಪ್ಪನವರ ಅಧಿಕಾರವನ್ನೂ ಮೊಟಕು ಮಾಡಿ, ಯಡಿಯೂರಪ್ಪನವರ ಮಗನಿಗೆ, ಕರಂದ್ಲಾಜೆಯವರಿಗೆ ಸೀಟು ಕೊಡಲು ನಿರಾಕರಿಸಿದೆ. ಮೊದಲು ಎಲ್ಲಾ ಸೀಟುಗಳನ್ನು ಹಂಚಲು ಯಡಿಯೂರಪ್ಪನವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದ ಹೈಕಮಾಂಡ್ ಅದನ್ನು 40ಕ್ಕೆ ಇಳಿಸಿ, ಈಗ 16 ಸೀಟುಗಳನ್ನು ಮಾತ್ರ ತಮಗೆ ಬೇಕಾದವರಿಗೆ ನೀಡಲು ಅವಕಾಶ ಕೊಟ್ಟು ಉಳಿದದ್ದನ್ನು ತಾನೇ ಭರ್ತಿ ಮಾಡಿದೆ.

ಬಳ್ಳಾರಿ ಜನಾರ್ದನ ರೆಡ್ಡಿಯನ್ನು ಯಡಿಯೂರಪ್ಪನವರು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಕರೆದಿದ್ದಕ್ಕಾಗಿ ಮೋದಿ ಮತ್ತು ಶಾ ಮುನಿಸಿಕೊಂಡಿದ್ದಾರೆ. ಮೋದಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ಹೋಗುವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

ಈ chaotic situation ನಲ್ಲಿ, ಮತದಾರ ತಾನೇನು ಮಾಡಬೇಕು ಎಂದು ತಿಳಿಯದೆ ದಿಗ್ಭ್ರಾಂತನಾಗಿದ್ದಾನೆ. ಮತದಾರನಿಗೆ ದಿಕ್ಸೂಚಿ ಮಾಡುವ ಕೆಲಸವನ್ನು ಯಾರೂ ಮಾಡುತ್ತಿಲ್ಲ.

ಈ ಕೆಲಸವನ್ನು ಈಗ ಕೋಮು ಸೌಹಾರ್ದ ವೇದಿಕೆಯಂತಹ ಸಂಸ್ಥೆ ಇತರ ಎಲ್ಲ ಪ್ರಗತಿಪರ ಕೋಮು ವಿರೋಧಿ ಶಕ್ತಿಗಳನ್ನೂ ಕೂಡಿಕೊಂಡು, ಸಂವಿಧಾನ ವಿರೋಧಿಗಳನ್ನು ಕೊಟ್ಟ ಮಾತಿನಂತೆ ನಡೆದುಕೊಳ್ಳದ ಮೋದಿಯನ್ನೂ ಪರಾಭವಗೊಳಿಸಲು ನಿರ್ಧರಿಸಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕೆ ಈಗ ಮೋದಿ ಒಬ್ಬನೇ ನಾಯಕ. ಆ ನಾಯಕನ ಪರಿಸ್ಥಿತಿ ಏನಾಗಿದೆ ನೋಡಿ 2014ರ ಲೋಕಸಭೆ ಚುನಾವಣೆಗೆ ಮೋದಿ ಹಠಾತ್ತನೆ ಇಳಿದರು. ಅಂದಿನ ದಿನಗಳಲ್ಲಿ ಕಾಂಗ್ರೆಸ್ ಅನೇಕ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಮತದಾರರಿಗೂ ಇದು ಬೇಸರ ತಂದಿತ್ತು. ಮೋದಿ ಕಾಂಗ್ರೆಸ್ಸಿನ ಹಗರಣಗಳನ್ನೆಲ್ಲ ಬಿಚ್ಚಿ ಮತ್ತು ಅದನ್ನು ಪ್ರಬಲ ಅಸ್ತ್ರವಾಗಿ ಚುನಾವಣೆಗೆ ಬಳಸಿಕೊಂಡರು. ರೋಸಿದ್ದ ಜನ ಕಾಂಗ್ರೆಸ್ಸಿನ ವಿರುದ್ಧವಾಗಿ ಮೋದಿಗೆ ಮತಹಾಕಿ ಗೆಲ್ಲಿಸಿದರು.

ಮೋದಿ ಆಡಳಿತವನ್ನು 4 ವರ್ಷಗಳಿಂದ ನೋಡುತ್ತಿರುವ ಮತದಾರನಿಗೆ ಭ್ರಮನಿರಸನ ಆಗಿದೆ. ಮೋದಿ ಹೆಜ್ಜೆಹೆಜ್ಜೆಗೂ ಮಾತು ತಪ್ಪಿದ್ದಾರೆ. ಕಾಳಹಣವನ್ನು 100 ದಿನಗಳ ಒಳಗೆ ಸ್ವಿಸ್‍ಬ್ಯಾಂಕಿನಿಂದ ತಂದು ಪ್ರತಿ ಬಡವನ ಹೆಸರಿನಲ್ಲೂ ಒಂದು ಉಳಿತಾಯ ಖಾತೆ ತೆರೆದು ಬ್ಯಾಂಕಿನಲ್ಲಿ ಅವರ ಹೆಸರಿಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿ ಬಡವರ ಮತ ಕಿತ್ತುಕೊಂಡರು. ಭಾರತದಲ್ಲಿ ಒಂದು ವರ್ಷದಲ್ಲಿ 5 ಲಕ್ಷ ಹುದ್ದೆಗಳನ್ನು ಸೃಷ್ಟಿ ಮಾಡಿ ಯುವಕರಿಗೆ ನೀಡುವುದಾಗಿ ಬೊಗಳೆಬಿಟ್ಟರು. ಅದೂ ಕೈಗೂಡಲಿಲ್ಲ. 1000 ಹಾಗೂ ಐದು ನೂರು ರೂಪಾಯಿ ನೋಟುಗಳನ್ನು ಅಪಮೌಲ್ಯ ಮಾಡಿ ಕಾಳಧನವನ್ನು ಹೊರತೆಗೆಯುವುದಾಗಿ ಹೇಳಿದರು. ಈ ಅಪಮೌಲ್ಯ ಮಾಡಿ ಹೊಸ 2000 ಹಾಗೂ 500 ರೂ.ಗಳ ನೋಟುಗಳನ್ನು ಪ್ರಿಂಟ್ ಮಾಡಿದ್ದು. ಕಾಳಹಣ ಸಂಗ್ರಹಿಸಿದ್ದ ಖದೀಮರು, ಕಪ್ಪುಹಣವನ್ನೆಲ್ಲ ಬಿಳಿಯ ಹಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಯಿತು. ರಾಷ್ಟ್ರೀಕೃತ ಬ್ಯಾಂಕುಗಳು ಈ ಕಾಳಹಣದ ಖದೀಮರಿಗೆ ತಮ್ಮ ಬಳಿ ಇದ್ದ ಕಪು ್ಪಹಣವನ್ನು ಬಿಳಿ ಹಣ ಮಾಡಿಕೊಳ್ಳುವುದಕ್ಕೆ ನೆರವಾದವು.

ಹೀಗಾಗಿ ಮೋದಿಯವರ ವರ್ಚಸ್ಸು ಕ್ಷೀಣವಾಯಿತು. ಅವರು ಬರೀ ಬಾಯ್ಬಡಕ ಎಂಬುದು ಜನತೆಗೆ ಈ ನಾಲ್ಕು ವರ್ಷದಲ್ಲಿ ಅರಿವಾಯಿತು.
ಮೋದಿ ಮೇಲಿನ ಪ್ರತೀಕಾರ ಕರ್ನಾಟಕದಿಂದ ಆರಂಭವಾಗಲಿದೆ. ಮೋದಿಗೆ ಇದು ಫೈನಲ್ಸ್. 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಅವರ ಭಾಗಕ್ಕೆ ಫೈನಲ್ಸ್. ಮೋದಿಯವರ ವಿರೋಧವಾಗಿ ರಾಜಕೀಯ ಪಕ್ಷಗಳ ಧ್ರುವೀಕರಣ ಈಗಾಗಲೇ ಆರಂಭವಾಗಿದೆ.

ಈ ಫೈನಲ್ಸ್‍ಗೆ ಮುಂಚೆಯೇ ಕರ್ನಾಟಕದಲ್ಲಿ ನಡೆಯುವ ವಿಧಾನಸಭೆಯ ಚುನಾವಣೆಯಲ್ಲಿ ಮೋದಿಗೆ ಶಾಕ್ ಕೊಡಲು ಕರ್ನಾಟಕ ಜನ ಸಂಕಲ್ಪ ಮಾಡಿದ್ದಾರೆ.

ಮೋದಿಯ ಅಲೆಯ ಅಬ್ಬರ ಇಳಿದು ಎಷ್ಟೋ ದಿನಗಳಾದವು. ಈಗ ಜನ ಅವರ ಬೊಗಳೆ ಮಾತುಗಳಿಗೆ ಬೇಸರಗೊಂಡಿದ್ದಾರೆ. ಬಿಜೆಪಿ ವಿರೋಧದ ಅಲೆ ಕರ್ನಾಟಕದ ಬಿಜೆಪಿಯನ್ನು ಅಪ್ಪಳಿಸಲು ಸನ್ನದ್ಧವಾಗಿದೆ.

ಮೋದಿ, ಅಮಿತ್ ಶಾ ಹೋದಲ್ಲೆಲ್ಲ ಕಪ್ಪುಬಾವುಟ ಪ್ರದರ್ಶನ ಆಗುತ್ತಿದೆ. ಜನಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬಿಜೆಪಿಗೆ ವಿರುದ್ಧವಾಗಿ ಮತ ಹಾಕಲು ಬಡವರು, ಶ್ರಮಿಕರು, ಕಾರ್ಮಿಕರು, ದಲಿತರು, ನಿರುದ್ಯೋಗಿ ಯುವಕರು, ಸ್ತ್ರೀಯರು, ಮುಸ್ಲಿಮರು, ಕ್ರಿಶ್ಚಿಯನ್ನರು ಮತಾಂಧ ಬಿಜೆಪಿ ಹಿಂದುಗಳನ್ನುಳಿದು ಇತರ ಹಿಂದುಗಳು ಒಮ್ಮತದಿಂದ ಮೋದಿ ಹಠಾವ್ ಮಾಡಬೇಕೆಂದು ಸಂಕಲ್ಪ ಮಾಡಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಕರ್ನಾಟಕದಲ್ಲಿ ಮೋದಿಯ ಮೋಡಿಗೆ ಒಳಗಾಗುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಸಾರಿ ನಡೆಯುವ ಚುನಾವಣೆಯಲ್ಲಿ ಅದು ಪ್ರಕಟವಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...