Homeರಾಜಕೀಯಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

ಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

- Advertisement -
- Advertisement -

ಪಿ.ಕೆ. ಮಲ್ಲನಗೌಡರ್ |

ರಾಮಮಂದಿರದ ಹೆಸರಲ್ಲಿ ಕೋಮು ಧ್ರುವೀಕರಣ ಮಾಡಿ, 2019ರ ಚುನಾವಣೆ ಗೆಲ್ಲಲು ಸಂಘಪರಿವಾರ ರೂಪಿಸಿರುವ ಜೀವದ್ವೇಷಿ ಕಾರ್ಯಕ್ರಮದ ರಿಹರ್ಸಲ್ ರವಿವಾರ ಯಾವುದೇ ಅಹಿತಕರ ಘಟನೆಗಳಿಲ್ಲದೇ ಮುಗಿದಿದೆ. ಆದರೆ ಅದು ಒಂದು ಅಪಾಯದ ಮುನ್ಸೂಚನೆಯನ್ನು ನೀಡಿದೆ. 1992ರಲ್ಲಾದಂತೆ ಮತ್ತೆ ಹಿಂಸಾಚಾರದ ಮೂಲಕ ಧ್ರುವೀಕರಣ ಮಾಡವ ಹುನ್ನಾರಕ್ಕೆ ಚಾಲನೆ ನೀಡಲಾಗಿದೆ.

ವಿಎಚ್‍ಪಿ, ಆರ್‍ಎಸ್‍ಎಸ್‍ಗಳ ಈ ಸರಣಿ ಕಾರ್ಯಕ್ರಮ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದ್ದು ಎನಿಸುವಂತೆ ಬಿಂಬಿಸಲಾಗಿದೆ. ಆದರೆ ಈ ಕಾರ್ಯಕ್ರಮದ ಪ್ರಾಯೋಜಕ ಖುದ್ದು ಬಿಜೆಪಿಯೇ ಆಗಿದೆ. ಇನ್ನು ಸ್ಪಷ್ಟವಾಗಿ ನರೇಂದ್ರ ಮೋದಿ ಮತ್ತು ಅಮಿತ್‍ಶಾಗಳೇ ಆಗಿದ್ದಾರೆ.

ನೋಟು ಅಮಾನ್ಯೀಕರಣ, ಜಿಎಸ್‍ಟಿಗಳಿಂದ ಜರ್ಜರಿತಗೊಂಡ ಜನಸಾಮಾನ್ಯರನ್ನು ಒಲಿಸಿಕೊಳ್ಳಲು ಅದಕ್ಕೆ ಈಗ ಉಳಿದಿರುವ ದಾರಿ ಇದೇ ಆಗಿದೆ. 2014ರ ನಂತರ ನಡೆದ ಲೋಕಸಭಾ ಉಪಚುನಾವಣೆಗಳಲ್ಲಿ, ವಿಪಕ್ಷಗಳು ಒಮ್ಮತದ ಅಭ್ಯರ್ಥಿ ಹಾಕಿದರೆ ಬಿಜೆಪಿಗೆ ಹೀನಾಯ ಸೋಲು ಎಂಬುದು ಪಕ್ಕಾ ಆಗಿದೆ. ಒಟ್ಟು 16 ಉಪಚುನಾವಣೆಗಳಲ್ಲಿ ಸೋತಿರುವ ಬಿಜೆಪಿ, 2014ರಲ್ಲಿ ತಾನು ಗೆದ್ದಿದ್ದ 10 ಕ್ಷೇತ್ರಗಳನ್ನು ಕಳೆದುಕೊಂಡು, 282ರಿಂದ 272ಕ್ಕೆ ಕುಸಿದಿದೆ. ಭಾರಿ ಅಂತರದ ಸೋಲುಗಳು ಅದನ್ನು ಕಂಗೆಡಿಸಿವೆ.

ಮೋದಿಯ ಭಾಷಣಗಳು ಈಗ ಜನರಿಂದ ಲೇವಡಿಗೆ ಒಳಗಾಗುತ್ತಿವೆ. ಅಭಿವೃದ್ಧಿ ಆಧಾರದಲ್ಲಿ ಮತ ಕೇಳುವೆವು ಎಂಬ ಸೋಗಲಾಡಿತನ ಮಾಡುತ್ತಲೇ ಅಡ್ಡ ಮಾರ್ಗಗಳನ್ನು ಹಿಡಿಯುತ್ತ ಸಾಗಿದೆ. ಉತ್ತರದಲ್ಲಿ ಈಗ ಚುನಾವಣಾ ಪ್ರಚಾರಗಳಲ್ಲಿ ಮೋದಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ವ್ಯಂಗ್ಯ ಮಾಡುವ ಕಸರತ್ತಿನಲ್ಲಿ ತೊಡಗಿದ್ದಾರೆ. ಇದು ಫಲ ಕೊಡಲಾರದು ಎಂದು ಸಂಶಯ ಬರತೊಡಗಿದ ಮೇಲೆ ಸಂಘ ಪರಿವಾರ ಅಖಾಡಕ್ಕೆ ಇಳಿದಿದೆ. ರಕ್ತಪಾತ ನಡೆಸಿಯಾದರೂ 2019ರ ಚುನಾವಣೆ ಗೆಲ್ಲುವ ಜೀವವಿರೋಧಿ, ದೇಶವಿರೋಧಿ ಕೃತ್ಯಕ್ಕೆ ಧರ್ಮಸಂಸದ್ ಎಂಬ ಅಧರ್ಮದ ಕಾರ್ಯಕ್ರಮಕ್ಕೆ ಈಗ ಖುಲ್ಲಂಖುಲ್ಲಂ ಕೈಹಾಕಿದೆ.

ಆದರೆ ಅನಧಿಕೃತವಾಗಿಇದು ಎಂದೋ ಶುರುವಾಗಿದೆ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಅದು ಗೆದ್ದಿದ್ದು ಜನರ ಬದುಕಿಗೆ ಬೆಂಕಿ ಇಡುವ ಮೂಲಕವೇ. ಅಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಿದ್ದು, ಹಿಂದೂ ಮತಗಳ ಧ್ರುವೀಕರಣಕ್ಕಾಗಿಯೇ. ಮೊದಲ ದಿನದಿಂದಲೂ ಯೋಗಿ ಇದಕ್ಕೆ ಪೂರಕವಾದ ಹುಚ್ಚಾಟವನ್ನೇ ನಡೆಸುತ್ತ ಬಂದಿದ್ದಾರೆ. ಕಳೆದ 2 ತಿಂಗಳಿಂದ ಈ ಪುಣ್ಯಾತ್ನ ಮುಖ್ಯಮಂತ್ರಿಯ ಅಜೆಂಡಾ ಅಯೋಧ್ಯಾ, ರಾಮಮಂದಿರವಷ್ಟೇ ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಆಹಾರಧಾನ್ಯಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಸಮರ್ಥವಾಗಿರುವ ಸರ್ಕಾರ, ಈಗ ರಫೇಲ್ ರಾಡಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದೆಲ್ಲಕ್ಕೂ ಮುಖ್ಯವಾಗಿ ರೈತಾಪಿ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವ ಒಂದೇಒಂದು ಕಾರ್ಯಕ್ರಮವನ್ನೂ ರೂಪಿಸದ ಸರ್ಕಾರ, ಉದ್ಯಮಿಗಳ ಹಿತ ಕಾಯುತ್ತ ದೇಶದ ಆರ್ಥಿಕತೆಯನ್ನೇ ಡೋಲಾಯಮಾನ ಮಾಡಿದೆ.

ನ್ಯಾಯಾಲಯಕ್ಕೇ ಸವಾಲು

ಹೊರಮಾತಿನಲ್ಲಿ ನ್ಯಾಯಾಲಯದ ತೀರ್ಪಿಗೆ ಬದ್ಧ ಎಂದು 4 ವರ್ಷ ಕಾಲ ಹಾಕಿದ ಬಿಜೆಪಿ, ಈಗ ತನ್ನ ಮಾನ ಮುಚ್ಚಿಕೊಳ್ಳಲು ಸಂಘ ಪರಿವಾರದ ಇತರ ಅಂಗಗಳ ಮೂಲಕ ಕಾನೂನು ಅಥವಾ ಸುಗ್ರಿವಾಜ್ಞೆಯ ಬೇಡಿಕೆಯನ್ನು ಮುನ್ನೆಲೆಗೆ ತಂದಿದೆ. ನ್ಯಾಯಾಲಯ ವಿಚಾರಣೆಯನ್ನು ಈಗಲೇ ಆರಂಭಿಸಿದ್ದರೂ ಅದರ ನಿಲುವೇನೂ ಬದಲಾಗುತ್ತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಮಂದಿರದ ಭರಸ ನೀಡಿ, ‘ರಾಮಭಕ್ತರಿಗೇ’ ವಂಚಿಸಿದ ನಡೆಯ ಲಾಭವನ್ನು ಶಿವಸೇನಾ ಪಡೆಯಲು ಕಣಕ್ಕೆ ಇಳಿದ ಮೇಲಂತೂ ಸಂಘಕ್ಕೆ ಹಿಂದೂತ್ವದ ಹಾದಿಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ.

2017ರಲ್ಲಿ ಸುಪ್ರಿಂ ತೀರ್ಪ ಉಲ್ಲಂಘನೆ

ಬಿಜೆಪಿ ಮತ್ತೆ ಧ್ವಂಸ ರಾಜಕಾರಣಕ್ಕೆ ಇಳಿಯುವ ಸುಳಿವು 2017ರಲ್ಲಿಯೇ ಸಿಕ್ಕಿತ್ತು. ವಿಎಚ್‍ಪಿ ಮುಖಡ ರಾಮ ವಿಲಾಸ್ ವೇದಾಂತಿ, ಅಭಯ ಚೈತನ್ಯ ಸ್ವಾಮಿಯ ನೇತೃತ್ವದಲ್ಲಿ ಸಾಧುಸಂತರ ಗುಂಪೊಂದು ರಾಮಲಲ್ಲಾ ದೇಗುಲಕ್ಕೆ ತ್ರಿಶೂಲ ಹಿಡಿದು ಪ್ರವೇಶಿಸುವ ಮೂಲಕ ಸುಪ್ರಿಂ ಕೋರ್ಟ್‍ನ 2002ರ ಆದೇಶವನ್ನು ಉಲ್ಲಂಘಿಸಿತ್ತು. ಯಾವುದೇ ಆಯುಧ, ಧರ್ಮದ ಸಂಕೇತಗಳನ್ನು ಈ ನಿಷೇಧಿತ ಪ್ರದೇಶದಲ್ಲಿ ತರಬಾರದು ಎಂಬ ಆದೇಶವನ್ನು ಉಲ್ಲಂಘಿಸಲು ಯೋಗಿ ಆದಿತ್ಯನಾಥ ಸರ್ಕಾರ ಕುಮ್ಮಕ್ಕು ನೀಡಿತ್ತು. ಫೈಜಾಬಾದ್‍ನ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಎಚ್‍ಪಿಯ ನಡೆಯನ್ನು ಬೆಂಬಲಿಸಿ ಮಾತಾಡಿದ್ದರು.

2014ರಿಂದ ಕಲ್ಲು ಸಂಗ್ರಹ

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿಎಚ್‍ಪಿ ದೇಶಾದ್ಯಂತ ಕಲ್ಲು ಸಂಗ್ರಹ ಕೆಲಸವನ್ನು ಆರಂಭಿಸಿತ್ತು. ಅಯೋಧ್ಯೆಯಲ್ಲಿರುವ ತನ್ನ ವರ್ಕ್‍ಶಾಪ್‍ನಲ್ಲಿ ಕಲ್ಲು ಕೆತ್ತನೆಯ ಕೆಲಸಕ್ಕೆ ವೇಗ ನೀಡಲಾರಂಭಿಸಿತು. 2017ರಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್‍ಮಂದಿರ ನಿರ್ಮಾಣಕ್ಕೆ ಕೋರ್ಟ್ ಸಂಧಾನ ವಹಿಸಲು ಸಿದ್ದವೆಂದಾಗ, ಇನ್ನಷ್ಟು ಚುರುಕುಗೊಂಡ ವಿಎಚ್‍ಪಿ, ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿತ್ತು. ಆದರೆ ಆ ವರ್ಷ ಅಪೆಕ್ಸ್ ಕೋರ್ಟ್ ಬಿಜೆಪಿಯ ಲಾಲ ಕೃಷ್ಣ ಅದ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯವರ ಮೇಲೆ ಹೊರಿಸಿದ್ದ ಕ್ರಿಮಿನಲ್‍ಸಂಚಿನ ಆರೋಪಗಳನ್ನು ಮಾನ್ಯ ಮಾಡಿತು.ಹೀಗಾಗಿ ಖೇಹರ್ ಸಾಹೇಬರ ‘ಸಂಧಾನ’ ಶುರುವೇ ಆಗಲಿಲ್ಲ.

ಸಂಕಟ ಬಂದಾಗ ರಾಮರಮಣ!

ಜನಪರ ಆಡಳಿತ ನೀಡುವ ಯಾವ ಪ್ರಯತ್ನವನ್ನೂ ಇಲ್ಲಿವರೆಗಿನ ಬಿಜೆಪಿ ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ನೀಡಿಲ್ಲ. ಸಂಘ ಪರಿವಾರದ ತಲೆಯಲ್ಲಿ ಹಿಂದೂರಾಷ್ಟ್ರ ಎಂಬ ಗೊಬ್ಬರ ಬಿಟ್ಟರೆ ಮತ್ತೇನಿಲ್ಲ. ಗೋಳ್ವಾಲ್ಕರ್ ಎಂಬ ಜೀವವಿರೋಧಿಯ ‘ಸಿದ್ದಾಂತ’ವೇ ಅದಕ್ಕೆ ಸಂವಿಧಾನ. ಗಾಂಧಿ, ಅಂಬೇಡ್ಕರ್, ಪಟೇಲರ ಹೆಸರನ್ನು ಕೇವಲ ಲಾಭಕ್ಕಷ್ಟೇ ಅದು ಬಳಸಿಕೊಳ್ಳುತ್ತದೆ. ಈಗ ಮೋದಿ ಮಾಡುತ್ತಿರುವುದೂ ಅದನ್ನೇ. ಮೋದಿಯ ‘ಅಭಿವೃದ್ಧಿ’ ಎಂದರೆ ಖದೀಮ ಉದ್ಯಮಿಗಳಿಗಾಗಿ ಯೋಜನೆ ರೂಪಿಸುವುದು, ಹಣ ಕೊಳ್ಳೆ ಹೊಡೆದು, ಅದನ್ನು ಹಿಂದೂತ್ವದ ಉದ್ಯಮದಲ್ಲಿ ಹೂಡುವುದು.

ಜನರ ನಿತ್ಯ ಬವಣೆಗಳ ಬಗ್ಗೆ ಯೋಚಿಸದ ಬಿಜೆಪಿಗೆ ಚುನಾವಣೆ ಬಂದಾಗ ರಾಮ ನೆನಪಾಗುತ್ತಾನೆ. ಆದರೆ ಈ ಸಲ ಮಾಧ್ಯಮಗಳ ಭಾರಿಬೆಂಬಲದ ಹೊರತಾಗಿಯೂ 2019ರ ಚುನಾವಣೆಯ ಭಯ ಶುರುವಾಗಿರುವುದರಿಂದ ಮತ್ತೆ ಅದು ಧ್ರುವೀಕರಣಕ್ಕೆ ಕೈ ಹಾಕಿದೆ.

ಮೊನ್ನೆ ದೇಶಾದ್ಯಂತ ನಡೆಸಿದ ಸಭೆಗಳ ಸ್ವರೂಪ, ಧಾಟಿ ನೋಡಿದರೆ 1992 ಮತ್ತು 2002ರ ಹತ್ಯಾಕಾಂಡಗಳಿಗಿಂತಲೂ ಭೀಕರವಾದ ಕೋಮುಗಲಭೆಗೆ ಅದು ಸಿದ್ಧತೆ ನಡೆಸಿರುವ ಸೂಚನೆಗಳು ಕಾಣುತ್ತಿವೆ. ಅಯೋಧ್ಯೆಯಲ್ಲಿ ನಡೆದ ಧರ್ಮಸಂಸದ್ ಬರೀ ಆರಂಭ ಮತ್ತು ರಿಹರ್ಸಲ್ ಮಾತ್ರ…..

ಈ ದೇಶದ ರೈತರು, ದಲಿತರು ಮತ್ತು ಎಲ್ಲ ಶ್ರಮಜೀವಿಗಳು ಈ ಹುನ್ನಾರವನ್ನು ಚಿವುಟಿ ಹಾಕಲು ಜನಾಂದೋಲನ ರೂಪಿಸಬೇಕಿದೆ.

ನಂಬುಗೆ, ಪುರಾಣ ಮತ್ತು ನ್ಯಾಯ!

2010ರಲ್ಲಿ ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿಯ ಜಾಗವನ್ನು ಮೂವರೂ ದಾವೆದಾರರಿಗೆ ಸರಿಸಮವಾಗಿ ಹಂಚಿ ನೀಡಿದ ತೀರ್ಪಿಗೆ ಆಗ ಜನಸಾಮಾನ್ಯರು ಸ್ವಾಗತಿಸಿದ್ದರು. ಮತ್ತೆ 1992ರ ದುಸ್ವಪ್ನ ಕಾಡಲಾರದು ಎಂಬ ಆಶಾಭಾವನೆಯೇ ಅದಕ್ಕೆ ಕಾರಣವಾಗಿತ್ತು.

ಆದರೆ ಪುರಾಣ ಮತ್ತು ದೇಶದ ಬಹುಸಂಖ್ಯಾತರ ನಂಬುಗೆಗಳನ್ನು ಆಧರಿಸಿ ಆ ವಿಲಕ್ಷಣ ತೀರ್ಪನ್ನು ನೀಡಲಾಗಿತ್ತು. ಆಶಿಶ್ ನಂದಿಯವರಂತಹ ದೇಸಿ ಚಿಂತಕರು ಕೂಡ, ನ್ಯಾಯದ ಚೌಕಟ್ಟನ್ನು ಮೀರಿ, ದೇಶದ ಜನರ ನಂಬಿಕೆಗಳನ್ನು ಆಧರಿಸಿ ತೀರ್ಪು ನೀಡುವ ಮೂಲಕ ಕೋರ್ಟ್ ಇತಿಹಾಸ ಸೃಷ್ಟಿಸಲು ಯತ್ನಿಸಿದೆ ಎಂದು ಕೊಂಡಾಡಿದ್ದರು! ಕನ್ನಡದ ‘ದೇಸಿ’ ಚಿಂತಕರಲ್ಲಿ ಒಬ್ಬರಾದ ಕೆ.ವಿ. ಅಕ್ಷರ ಕೂಡ ಸಂಭ್ರಮಪಟ್ಟಿದ್ದರು.

ಈ ದೇಶದ ಬಹುಸಂಖ್ಯಾತ ಶ್ರಮಿಕರಿಗೆ ರಾಮ ಆರಾಧ್ಯ ದೈವವೇ ಅಲ್ಲ. ರಾಮನ್ನು ಆರಾಧಿಸುವ ಬಹುಪಾಲು ಜನರು ‘ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ’ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿಯೇ ಇಲ್ಲ. ಮಾಧ್ಯಮಗಳ ನೆರವಿನಿಂದ ಸಂಘಪರಿವಾರ ಅಂತಹ ನಂಬಿಕೆಯನ್ನು ಸೃಷಿಸಲು ಯತ್ನಿಸುತ್ತ ಬಂದಿದೆಯಷ್ಟೇ. ಸುಪ್ರಿಂಕೋರ್ಟ್ ವಿಚಾರಣೆ ಈ ಬಿಂಬಿತ ‘ಸತ್ಯ’ಗಳನ್ನು ದಾಟಿ ನ್ಯಾಯ ನೀಡುತ್ತದೆ ಎಂದು ಆಶಿಸೋಣ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...