Homeರಾಜಕೀಯಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

ಸಾಧನೆಶೂನ್ಯ ಬಿಜೆಪಿಯಿಂದ ಮತ್ತೆ ರಾಮ ಮಂದಿರದ ಜಪ

- Advertisement -
- Advertisement -

ಪಿ.ಕೆ. ಮಲ್ಲನಗೌಡರ್ |

ರಾಮಮಂದಿರದ ಹೆಸರಲ್ಲಿ ಕೋಮು ಧ್ರುವೀಕರಣ ಮಾಡಿ, 2019ರ ಚುನಾವಣೆ ಗೆಲ್ಲಲು ಸಂಘಪರಿವಾರ ರೂಪಿಸಿರುವ ಜೀವದ್ವೇಷಿ ಕಾರ್ಯಕ್ರಮದ ರಿಹರ್ಸಲ್ ರವಿವಾರ ಯಾವುದೇ ಅಹಿತಕರ ಘಟನೆಗಳಿಲ್ಲದೇ ಮುಗಿದಿದೆ. ಆದರೆ ಅದು ಒಂದು ಅಪಾಯದ ಮುನ್ಸೂಚನೆಯನ್ನು ನೀಡಿದೆ. 1992ರಲ್ಲಾದಂತೆ ಮತ್ತೆ ಹಿಂಸಾಚಾರದ ಮೂಲಕ ಧ್ರುವೀಕರಣ ಮಾಡವ ಹುನ್ನಾರಕ್ಕೆ ಚಾಲನೆ ನೀಡಲಾಗಿದೆ.

ವಿಎಚ್‍ಪಿ, ಆರ್‍ಎಸ್‍ಎಸ್‍ಗಳ ಈ ಸರಣಿ ಕಾರ್ಯಕ್ರಮ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದ್ದು ಎನಿಸುವಂತೆ ಬಿಂಬಿಸಲಾಗಿದೆ. ಆದರೆ ಈ ಕಾರ್ಯಕ್ರಮದ ಪ್ರಾಯೋಜಕ ಖುದ್ದು ಬಿಜೆಪಿಯೇ ಆಗಿದೆ. ಇನ್ನು ಸ್ಪಷ್ಟವಾಗಿ ನರೇಂದ್ರ ಮೋದಿ ಮತ್ತು ಅಮಿತ್‍ಶಾಗಳೇ ಆಗಿದ್ದಾರೆ.

ನೋಟು ಅಮಾನ್ಯೀಕರಣ, ಜಿಎಸ್‍ಟಿಗಳಿಂದ ಜರ್ಜರಿತಗೊಂಡ ಜನಸಾಮಾನ್ಯರನ್ನು ಒಲಿಸಿಕೊಳ್ಳಲು ಅದಕ್ಕೆ ಈಗ ಉಳಿದಿರುವ ದಾರಿ ಇದೇ ಆಗಿದೆ. 2014ರ ನಂತರ ನಡೆದ ಲೋಕಸಭಾ ಉಪಚುನಾವಣೆಗಳಲ್ಲಿ, ವಿಪಕ್ಷಗಳು ಒಮ್ಮತದ ಅಭ್ಯರ್ಥಿ ಹಾಕಿದರೆ ಬಿಜೆಪಿಗೆ ಹೀನಾಯ ಸೋಲು ಎಂಬುದು ಪಕ್ಕಾ ಆಗಿದೆ. ಒಟ್ಟು 16 ಉಪಚುನಾವಣೆಗಳಲ್ಲಿ ಸೋತಿರುವ ಬಿಜೆಪಿ, 2014ರಲ್ಲಿ ತಾನು ಗೆದ್ದಿದ್ದ 10 ಕ್ಷೇತ್ರಗಳನ್ನು ಕಳೆದುಕೊಂಡು, 282ರಿಂದ 272ಕ್ಕೆ ಕುಸಿದಿದೆ. ಭಾರಿ ಅಂತರದ ಸೋಲುಗಳು ಅದನ್ನು ಕಂಗೆಡಿಸಿವೆ.

ಮೋದಿಯ ಭಾಷಣಗಳು ಈಗ ಜನರಿಂದ ಲೇವಡಿಗೆ ಒಳಗಾಗುತ್ತಿವೆ. ಅಭಿವೃದ್ಧಿ ಆಧಾರದಲ್ಲಿ ಮತ ಕೇಳುವೆವು ಎಂಬ ಸೋಗಲಾಡಿತನ ಮಾಡುತ್ತಲೇ ಅಡ್ಡ ಮಾರ್ಗಗಳನ್ನು ಹಿಡಿಯುತ್ತ ಸಾಗಿದೆ. ಉತ್ತರದಲ್ಲಿ ಈಗ ಚುನಾವಣಾ ಪ್ರಚಾರಗಳಲ್ಲಿ ಮೋದಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ವ್ಯಂಗ್ಯ ಮಾಡುವ ಕಸರತ್ತಿನಲ್ಲಿ ತೊಡಗಿದ್ದಾರೆ. ಇದು ಫಲ ಕೊಡಲಾರದು ಎಂದು ಸಂಶಯ ಬರತೊಡಗಿದ ಮೇಲೆ ಸಂಘ ಪರಿವಾರ ಅಖಾಡಕ್ಕೆ ಇಳಿದಿದೆ. ರಕ್ತಪಾತ ನಡೆಸಿಯಾದರೂ 2019ರ ಚುನಾವಣೆ ಗೆಲ್ಲುವ ಜೀವವಿರೋಧಿ, ದೇಶವಿರೋಧಿ ಕೃತ್ಯಕ್ಕೆ ಧರ್ಮಸಂಸದ್ ಎಂಬ ಅಧರ್ಮದ ಕಾರ್ಯಕ್ರಮಕ್ಕೆ ಈಗ ಖುಲ್ಲಂಖುಲ್ಲಂ ಕೈಹಾಕಿದೆ.

ಆದರೆ ಅನಧಿಕೃತವಾಗಿಇದು ಎಂದೋ ಶುರುವಾಗಿದೆ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಅದು ಗೆದ್ದಿದ್ದು ಜನರ ಬದುಕಿಗೆ ಬೆಂಕಿ ಇಡುವ ಮೂಲಕವೇ. ಅಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಿದ್ದು, ಹಿಂದೂ ಮತಗಳ ಧ್ರುವೀಕರಣಕ್ಕಾಗಿಯೇ. ಮೊದಲ ದಿನದಿಂದಲೂ ಯೋಗಿ ಇದಕ್ಕೆ ಪೂರಕವಾದ ಹುಚ್ಚಾಟವನ್ನೇ ನಡೆಸುತ್ತ ಬಂದಿದ್ದಾರೆ. ಕಳೆದ 2 ತಿಂಗಳಿಂದ ಈ ಪುಣ್ಯಾತ್ನ ಮುಖ್ಯಮಂತ್ರಿಯ ಅಜೆಂಡಾ ಅಯೋಧ್ಯಾ, ರಾಮಮಂದಿರವಷ್ಟೇ ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಆಹಾರಧಾನ್ಯಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಸಮರ್ಥವಾಗಿರುವ ಸರ್ಕಾರ, ಈಗ ರಫೇಲ್ ರಾಡಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದೆಲ್ಲಕ್ಕೂ ಮುಖ್ಯವಾಗಿ ರೈತಾಪಿ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವ ಒಂದೇಒಂದು ಕಾರ್ಯಕ್ರಮವನ್ನೂ ರೂಪಿಸದ ಸರ್ಕಾರ, ಉದ್ಯಮಿಗಳ ಹಿತ ಕಾಯುತ್ತ ದೇಶದ ಆರ್ಥಿಕತೆಯನ್ನೇ ಡೋಲಾಯಮಾನ ಮಾಡಿದೆ.

ನ್ಯಾಯಾಲಯಕ್ಕೇ ಸವಾಲು

ಹೊರಮಾತಿನಲ್ಲಿ ನ್ಯಾಯಾಲಯದ ತೀರ್ಪಿಗೆ ಬದ್ಧ ಎಂದು 4 ವರ್ಷ ಕಾಲ ಹಾಕಿದ ಬಿಜೆಪಿ, ಈಗ ತನ್ನ ಮಾನ ಮುಚ್ಚಿಕೊಳ್ಳಲು ಸಂಘ ಪರಿವಾರದ ಇತರ ಅಂಗಗಳ ಮೂಲಕ ಕಾನೂನು ಅಥವಾ ಸುಗ್ರಿವಾಜ್ಞೆಯ ಬೇಡಿಕೆಯನ್ನು ಮುನ್ನೆಲೆಗೆ ತಂದಿದೆ. ನ್ಯಾಯಾಲಯ ವಿಚಾರಣೆಯನ್ನು ಈಗಲೇ ಆರಂಭಿಸಿದ್ದರೂ ಅದರ ನಿಲುವೇನೂ ಬದಲಾಗುತ್ತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಮಂದಿರದ ಭರಸ ನೀಡಿ, ‘ರಾಮಭಕ್ತರಿಗೇ’ ವಂಚಿಸಿದ ನಡೆಯ ಲಾಭವನ್ನು ಶಿವಸೇನಾ ಪಡೆಯಲು ಕಣಕ್ಕೆ ಇಳಿದ ಮೇಲಂತೂ ಸಂಘಕ್ಕೆ ಹಿಂದೂತ್ವದ ಹಾದಿಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ.

2017ರಲ್ಲಿ ಸುಪ್ರಿಂ ತೀರ್ಪ ಉಲ್ಲಂಘನೆ

ಬಿಜೆಪಿ ಮತ್ತೆ ಧ್ವಂಸ ರಾಜಕಾರಣಕ್ಕೆ ಇಳಿಯುವ ಸುಳಿವು 2017ರಲ್ಲಿಯೇ ಸಿಕ್ಕಿತ್ತು. ವಿಎಚ್‍ಪಿ ಮುಖಡ ರಾಮ ವಿಲಾಸ್ ವೇದಾಂತಿ, ಅಭಯ ಚೈತನ್ಯ ಸ್ವಾಮಿಯ ನೇತೃತ್ವದಲ್ಲಿ ಸಾಧುಸಂತರ ಗುಂಪೊಂದು ರಾಮಲಲ್ಲಾ ದೇಗುಲಕ್ಕೆ ತ್ರಿಶೂಲ ಹಿಡಿದು ಪ್ರವೇಶಿಸುವ ಮೂಲಕ ಸುಪ್ರಿಂ ಕೋರ್ಟ್‍ನ 2002ರ ಆದೇಶವನ್ನು ಉಲ್ಲಂಘಿಸಿತ್ತು. ಯಾವುದೇ ಆಯುಧ, ಧರ್ಮದ ಸಂಕೇತಗಳನ್ನು ಈ ನಿಷೇಧಿತ ಪ್ರದೇಶದಲ್ಲಿ ತರಬಾರದು ಎಂಬ ಆದೇಶವನ್ನು ಉಲ್ಲಂಘಿಸಲು ಯೋಗಿ ಆದಿತ್ಯನಾಥ ಸರ್ಕಾರ ಕುಮ್ಮಕ್ಕು ನೀಡಿತ್ತು. ಫೈಜಾಬಾದ್‍ನ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಎಚ್‍ಪಿಯ ನಡೆಯನ್ನು ಬೆಂಬಲಿಸಿ ಮಾತಾಡಿದ್ದರು.

2014ರಿಂದ ಕಲ್ಲು ಸಂಗ್ರಹ

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿಎಚ್‍ಪಿ ದೇಶಾದ್ಯಂತ ಕಲ್ಲು ಸಂಗ್ರಹ ಕೆಲಸವನ್ನು ಆರಂಭಿಸಿತ್ತು. ಅಯೋಧ್ಯೆಯಲ್ಲಿರುವ ತನ್ನ ವರ್ಕ್‍ಶಾಪ್‍ನಲ್ಲಿ ಕಲ್ಲು ಕೆತ್ತನೆಯ ಕೆಲಸಕ್ಕೆ ವೇಗ ನೀಡಲಾರಂಭಿಸಿತು. 2017ರಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್‍ಮಂದಿರ ನಿರ್ಮಾಣಕ್ಕೆ ಕೋರ್ಟ್ ಸಂಧಾನ ವಹಿಸಲು ಸಿದ್ದವೆಂದಾಗ, ಇನ್ನಷ್ಟು ಚುರುಕುಗೊಂಡ ವಿಎಚ್‍ಪಿ, ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿತ್ತು. ಆದರೆ ಆ ವರ್ಷ ಅಪೆಕ್ಸ್ ಕೋರ್ಟ್ ಬಿಜೆಪಿಯ ಲಾಲ ಕೃಷ್ಣ ಅದ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯವರ ಮೇಲೆ ಹೊರಿಸಿದ್ದ ಕ್ರಿಮಿನಲ್‍ಸಂಚಿನ ಆರೋಪಗಳನ್ನು ಮಾನ್ಯ ಮಾಡಿತು.ಹೀಗಾಗಿ ಖೇಹರ್ ಸಾಹೇಬರ ‘ಸಂಧಾನ’ ಶುರುವೇ ಆಗಲಿಲ್ಲ.

ಸಂಕಟ ಬಂದಾಗ ರಾಮರಮಣ!

ಜನಪರ ಆಡಳಿತ ನೀಡುವ ಯಾವ ಪ್ರಯತ್ನವನ್ನೂ ಇಲ್ಲಿವರೆಗಿನ ಬಿಜೆಪಿ ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ನೀಡಿಲ್ಲ. ಸಂಘ ಪರಿವಾರದ ತಲೆಯಲ್ಲಿ ಹಿಂದೂರಾಷ್ಟ್ರ ಎಂಬ ಗೊಬ್ಬರ ಬಿಟ್ಟರೆ ಮತ್ತೇನಿಲ್ಲ. ಗೋಳ್ವಾಲ್ಕರ್ ಎಂಬ ಜೀವವಿರೋಧಿಯ ‘ಸಿದ್ದಾಂತ’ವೇ ಅದಕ್ಕೆ ಸಂವಿಧಾನ. ಗಾಂಧಿ, ಅಂಬೇಡ್ಕರ್, ಪಟೇಲರ ಹೆಸರನ್ನು ಕೇವಲ ಲಾಭಕ್ಕಷ್ಟೇ ಅದು ಬಳಸಿಕೊಳ್ಳುತ್ತದೆ. ಈಗ ಮೋದಿ ಮಾಡುತ್ತಿರುವುದೂ ಅದನ್ನೇ. ಮೋದಿಯ ‘ಅಭಿವೃದ್ಧಿ’ ಎಂದರೆ ಖದೀಮ ಉದ್ಯಮಿಗಳಿಗಾಗಿ ಯೋಜನೆ ರೂಪಿಸುವುದು, ಹಣ ಕೊಳ್ಳೆ ಹೊಡೆದು, ಅದನ್ನು ಹಿಂದೂತ್ವದ ಉದ್ಯಮದಲ್ಲಿ ಹೂಡುವುದು.

ಜನರ ನಿತ್ಯ ಬವಣೆಗಳ ಬಗ್ಗೆ ಯೋಚಿಸದ ಬಿಜೆಪಿಗೆ ಚುನಾವಣೆ ಬಂದಾಗ ರಾಮ ನೆನಪಾಗುತ್ತಾನೆ. ಆದರೆ ಈ ಸಲ ಮಾಧ್ಯಮಗಳ ಭಾರಿಬೆಂಬಲದ ಹೊರತಾಗಿಯೂ 2019ರ ಚುನಾವಣೆಯ ಭಯ ಶುರುವಾಗಿರುವುದರಿಂದ ಮತ್ತೆ ಅದು ಧ್ರುವೀಕರಣಕ್ಕೆ ಕೈ ಹಾಕಿದೆ.

ಮೊನ್ನೆ ದೇಶಾದ್ಯಂತ ನಡೆಸಿದ ಸಭೆಗಳ ಸ್ವರೂಪ, ಧಾಟಿ ನೋಡಿದರೆ 1992 ಮತ್ತು 2002ರ ಹತ್ಯಾಕಾಂಡಗಳಿಗಿಂತಲೂ ಭೀಕರವಾದ ಕೋಮುಗಲಭೆಗೆ ಅದು ಸಿದ್ಧತೆ ನಡೆಸಿರುವ ಸೂಚನೆಗಳು ಕಾಣುತ್ತಿವೆ. ಅಯೋಧ್ಯೆಯಲ್ಲಿ ನಡೆದ ಧರ್ಮಸಂಸದ್ ಬರೀ ಆರಂಭ ಮತ್ತು ರಿಹರ್ಸಲ್ ಮಾತ್ರ…..

ಈ ದೇಶದ ರೈತರು, ದಲಿತರು ಮತ್ತು ಎಲ್ಲ ಶ್ರಮಜೀವಿಗಳು ಈ ಹುನ್ನಾರವನ್ನು ಚಿವುಟಿ ಹಾಕಲು ಜನಾಂದೋಲನ ರೂಪಿಸಬೇಕಿದೆ.

ನಂಬುಗೆ, ಪುರಾಣ ಮತ್ತು ನ್ಯಾಯ!

2010ರಲ್ಲಿ ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿಯ ಜಾಗವನ್ನು ಮೂವರೂ ದಾವೆದಾರರಿಗೆ ಸರಿಸಮವಾಗಿ ಹಂಚಿ ನೀಡಿದ ತೀರ್ಪಿಗೆ ಆಗ ಜನಸಾಮಾನ್ಯರು ಸ್ವಾಗತಿಸಿದ್ದರು. ಮತ್ತೆ 1992ರ ದುಸ್ವಪ್ನ ಕಾಡಲಾರದು ಎಂಬ ಆಶಾಭಾವನೆಯೇ ಅದಕ್ಕೆ ಕಾರಣವಾಗಿತ್ತು.

ಆದರೆ ಪುರಾಣ ಮತ್ತು ದೇಶದ ಬಹುಸಂಖ್ಯಾತರ ನಂಬುಗೆಗಳನ್ನು ಆಧರಿಸಿ ಆ ವಿಲಕ್ಷಣ ತೀರ್ಪನ್ನು ನೀಡಲಾಗಿತ್ತು. ಆಶಿಶ್ ನಂದಿಯವರಂತಹ ದೇಸಿ ಚಿಂತಕರು ಕೂಡ, ನ್ಯಾಯದ ಚೌಕಟ್ಟನ್ನು ಮೀರಿ, ದೇಶದ ಜನರ ನಂಬಿಕೆಗಳನ್ನು ಆಧರಿಸಿ ತೀರ್ಪು ನೀಡುವ ಮೂಲಕ ಕೋರ್ಟ್ ಇತಿಹಾಸ ಸೃಷ್ಟಿಸಲು ಯತ್ನಿಸಿದೆ ಎಂದು ಕೊಂಡಾಡಿದ್ದರು! ಕನ್ನಡದ ‘ದೇಸಿ’ ಚಿಂತಕರಲ್ಲಿ ಒಬ್ಬರಾದ ಕೆ.ವಿ. ಅಕ್ಷರ ಕೂಡ ಸಂಭ್ರಮಪಟ್ಟಿದ್ದರು.

ಈ ದೇಶದ ಬಹುಸಂಖ್ಯಾತ ಶ್ರಮಿಕರಿಗೆ ರಾಮ ಆರಾಧ್ಯ ದೈವವೇ ಅಲ್ಲ. ರಾಮನ್ನು ಆರಾಧಿಸುವ ಬಹುಪಾಲು ಜನರು ‘ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ’ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿಯೇ ಇಲ್ಲ. ಮಾಧ್ಯಮಗಳ ನೆರವಿನಿಂದ ಸಂಘಪರಿವಾರ ಅಂತಹ ನಂಬಿಕೆಯನ್ನು ಸೃಷಿಸಲು ಯತ್ನಿಸುತ್ತ ಬಂದಿದೆಯಷ್ಟೇ. ಸುಪ್ರಿಂಕೋರ್ಟ್ ವಿಚಾರಣೆ ಈ ಬಿಂಬಿತ ‘ಸತ್ಯ’ಗಳನ್ನು ದಾಟಿ ನ್ಯಾಯ ನೀಡುತ್ತದೆ ಎಂದು ಆಶಿಸೋಣ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...