Homeರಾಜಕೀಯಕುರುಬ್ರು ವಿಶ್ವನಾಥನ ಹಿಂದೋದ್ರೆ?

ಕುರುಬ್ರು ವಿಶ್ವನಾಥನ ಹಿಂದೋದ್ರೆ?

- Advertisement -
- Advertisement -

ಕಾಲ ಎಂತೆಂತಹ ವಿಚಿತ್ರ ಸನ್ನಿವೇಶಗಳನ್ನು. ಸೃಷ್ಟಿ ಮಾಡುತ್ತದಲ್ಲವೆ! ಕಳೆದ ಚುನಾವಣೆಯಲ್ಲಿ ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೊಲ್ಲ ಎಂದು ಹೋದಲ್ಲಿಬಂದಲ್ಲಿ ಭಾಷಣ ಬಿಗಿದಿದ್ದ ಸಿದ್ದರಾಮಯ್ಯ, ಚುನಾವಣಾ ಫಲಿತಾಂಶ ಇನ್ನ ಬಾಕಿ ಇರುವಾಗಲೇ ಕುಮಾರಸ್ವಾಮಿ ಮನೆಯ ಕರೆಗಂಟೆ ಒತ್ತಿ ಕೈಕಟ್ಟಿ ನಿಂತಿದ್ದಾರಲ್ಲಾ. ಆಗ ಸಿದ್ದು ನಮ್ಮಪ್ಪನಾಣೆ ನೀನೇ ಮುಖ್ಯಮಂತ್ರಿ ಎನ್ನುವುದೊಂದು ಬಾಕಿ ಇತ್ತು. ಸಿದ್ದು ಸ್ಥಿತಿ ನೋಡಿ ನಗು ಅದುಮಿಕೊಂಡ ದೇವೇಗೌಡರು ಮಗ ಮುಖ್ಯಮಂತ್ರಿ ಯಾದರೂ ಬಿಡದೆ, ಸಿದ್ದು ಬಗೆಗಿನ ಸೇಡನ್ನು ಮುಂದುವರಿಸುವ ಸಲುವಾಗಿ, ವಿಶ್ವನಾಥನನ್ನೇ ಪಾರ್ಟಿ ಪ್ರೆಸಿಡೆಂಟು ಮಾಡಿಬಿಟ್ಟಿದ್ದಾರಲ್ಲಾ, ಈ ಬಗ್ಗೆ ಸಿದ್ದುವನ್ನು ಕೇಳಬೇಕೆಂದು ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್‍ಠೋನ್ “ಕರಿಯ ಕಂಬಳಿ ಗದ್ದುಗೆ ಮಾಡಿ ವೀರದೊಳ್ಳತಂದಿರಿಸಿದರೊ, ವೀರದೊಳತಂದಿರಿಸಿದರೊ. ವಿಶ್ವನಾಥನ ಭಜಿಸಿದರೊ….. ಹಲೊ.
“ಯಾರು.”
“ನಾನು ಸಾರ್ ಯಾಹೂ.”
“ಏನ್ರಿ ಯಾಹೂ.”
“ಏನ್ ಸಾರ್ ಮುಖ್ಯಮಂತ್ರಿಯಾದಾಗ ನೋಡಕ್ಕೂ ಸಿಗಲಿಲ್ಲ, ಈಗ್ಲು ಸಿಗದಿ¯ವಲ್ಲ ಸಾರ್ ಅಷ್ಟು ಬಿಜಿನ.”
“ಅಂಗೇನಿಲ್ಲ ಹೇಳಿ.”
“ನಿಮ್ಮ ಸರಕಾರ ಸೋತಿದ್ದರ ಬಗ್ಗೆ ನೀವೇನೇಳ್ತಿರಿ ಸಾರ್.”
“ಜನ ಮೋಸ ಮಾಡಿದ್ರು.”
“ನಿಮ್ಮ ಭಾಗದ ತಪ್ಪುಗಳೇನಾದ್ರು ಇದ್ದವೆ?’’
“ಆಂಂ.’’
“ನೀವೇನಾರ ತೆಪ್ಪು ಮಾಡಿದ್ರ ಸಾರ್.”
“ನಾನೇನು ಮಾಡಿದೇ.”
“ ಮೊದಲನೆದಾಗಿ ನಿಮ್ಮ ಪ್ರತಿ ಭಾಷಣದಲ್ಲಿ ಎಡೂರಪ್ಪನ ಜೈಲಿನ ವಿಷಯ ಪ್ರಸ್ತಾಪ ಮಾಡಿದ್ರಿ? ಜನ ಚಪ್ಪಾಳೆ ತಟ್ಟಿದ್ರು, ಆದ್ರೆ ಲಿಂಗಾಯಿತ್ರು ಎಡೂರಪ್ಪನ ಹಿಂದೆ ಒಗ್ಗಟ್ಟಾದ್ರು. ಆಮೇಲೆ ಕುಮಾರಸ್ವಾಮಿಯ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ್ಲ ಅಂದ್ರಿ. ಅದ್ಯಂಗಾಗಲ್ಲ ನೋಡನ ಅಂತ ಒಕ್ಕಲಿಗರೆಲ್ಲ ಒಂದಾದ್ರು. ಅಂತೂ ನಿಮ್ಮ ಭಾಷಣನೆ ಜಾತಿಜನ ಒಟ್ಟು ಮಾಡ್ತು. ಇದೇ ಕಾರಣ ಸೋಲಿಗೆ ಅಂತ ನಮ್ಮ ಲೆಕ್ಕಾಚಾರ.”
“ಈಗಾಯ್ತಲ್ಲ ಬುಡ್ರಿ ಆ ಸುದ್ದಿ ತಗಂಡೇನು.”
“ವಿಶ್ಲೇಷಣೆ ಮಾಡ್ಬೇಕಲ್ಲವಾ ಸಾರ್.”
“ಈಗ ಮಾಡಿ ಏನು ಪ್ರಯೋಜನ.”
“ಮುಂದೆ ರಾಜಕಾರಣ ಮಾಡೋರಿಗೆ ಒಂದು ಅನುಭವ ಆಗುತ್ತೆ ಸಾರ್.”
“ಆ….”
“ಅಷ್ಟೊಂದು ಹಟದ ಅಗತ್ಯ ಇರಲಿಲ್ಲ, ಆ ಮುಸ್ಲಿಮರು ಏನು ಕೇಳ್ತಾರೆ ಅದನ್ನ ಮಾತ್ರ ಕೊಡಬೇಕು. ಅದು ಬುಟ್ಟು ಏನೇನೋ ಕೊಡಕೋದ್ರೆ ಅದವುರಿಗೂ ಬೇಕಿರಲಿಲ್ಲ. ಬೇರೆ ಜನಗಳೂ ಅದನ್ನ ಸಯಿಸದಿಲ್ಲ ಸಾರ್.”
“ಸಯಿಸದಿಲ್ಲ ಅಂತ ನಾವು ಮಾಡದನ್ನ ಬಿಡಬಾರ್ದು, ಅಧಿಕಾರ ಸಿಕ್ಕಿದಾಗ ದುರ್ಬಲರಿಗೆ ಸಹಾಯ ಮಾಡ್ಳೇಬೇಕು.”
“ನಿಮ್ಮ ಸಹಾಯ ಸಾಲಮನ್ನಾ, ಬಿಟ್ಟಿ ಅನ್ನ, ಹಲವಾರು ಭಾಗ್ಯ, ಸರಕಾರಿ ಕವರ್iಜಾರಿಗಳ ಸಂಬಳ ಏರಿಸಿ, ದಲಿತ್ರ ಸಾಲ ಮನ್ನ ಮಾಡಿದ್ರೂ ಜನ ಕೈ ಹಿಡಿಲಿಲ್ಲವಲ್ಲ. ಇದರ ಕಾರಣ ಗೊತ್ತಾಯ್ತಾ ಸಾರ್.”
“ಇಲ್ಲ ಹೇಳಿ.”
“ಜನ ಜಾತ್ಯಂದ್ರಾದಾಗ ಏನು ಕೊಟ್ರೂ ಜಾತಿ ಮಕ್ಕಳಾಗೇ ವರ್ತುಸ್ತಾರೆ, ಜೊತೆಗೆ ನೀವು ತಿರಗ ನಾನೇ ಮುಖ್ಯಮಂತ್ರಿ ಅಂದ್ರೆ ಅದು ರಿವರ್ಸಾಯ್ತು. ದಲಿತ ಮುಖ್ಯಮಂತ್ರಿ ಬೇಡಿಕೆ ಇಟ್ಟಿದ್ದ ಜನ ಹಗಲುರಾತ್ರಿ ಓಡಾಡಿ ಬಿಜೆಪಿಗೆ ಓಟು ಮಾಡಿಸಿದ್ರು ಗೊತ್ತಾ.”
“ಹೋಗ್ಲಿಬುಡಿ.”
“ಬುಡದಲ್ಲ ಸಾರ್, ಅಧಿಕಾರದ ಅಂತ್ಯದಲ್ಲಿ ಯಲ್ಲಾರಿಗೂ ಅಹಂಕಾರ ಬತ್ತದೆ, ನಿಮಿಗೊಂಚೂರು ಜಾಸ್ತಿನೆ ಬಂತು.”
“ನಾನೇನು ಮಾಡಿದೆ.”
“ನಿಮ್ಮನ್ನ ಕಾಂಗ್ರೆಸಿಗೆ ಕರೆತಂದ ವಿಶ್ವನಾಥನ್ನ ಕಾಸಿಗಿಂತ ಕಡೆಮಾಡಿದ್ರಿ, ನೀವು ಗೆಲ್ಲಲಿ ಅಂತ ಓಡಾಡಿದ ರೇವಣಸಿದ್ದಯ್ಯನ್ನ ಐದೊರ್ಸ ಎಲ್ಯವುರೆ ಅಂತ ನೋಡಲಿಲ್ಲ, ಚಾಮುಂಡೇಶ್ವರಿಗಾರ ಟಿಕೆಟ್ ಕೊಡಬವುದಿತ್ತು. ಅಂಗೇ ನೋಡಿದ್ರೆ ಕಾಂಗ್ರೆಸ್ ಸೋಲಿನ ದೊಡ್ಡಪಾಲು ನಿಮ್ಮದೆ ಸಾರ್.”
“ಸೋತಾಯ್ತಲ್ಲ ಬುಡಿ.”
“ಇನ್ನೋಂದು ವಿಷಯ ಸಾರ್.”
“ಏನು.”
“ದೇವೇಗೌಡ್ರು ವಿಶ್ವನಾಥನ್ನ ಜೆಡಿಎಸ್ ಪಾರ್ಟಿ ಪ್ರೆಸಿಡೆಂಟ್ ಮಾಡ್ಯವುರೇ.”
“ಮಾಡ್ಲಿ ಬುಡ್ರಿ.”
“ಅದರಿಂದ ನಿಮಗೇನು ಬೇಜಾರಾಗಿಲ್ವೇ.”
“ಬೇಜಾರ್ಯಾಕೆ, ನಾನು ಜೆಡಿಎಸ್ ಅಧ್ಯಕ್ಷ ಆಗಿದ್ದೆ, ನನ್ನ ಹುಟ್ಟುಹಬ್ಬದ ದಿನವೇ ದೇವೇಗೌಡ ನನ್ನನ್ನ ತಗದು ಆ ತಿಪ್ಪಣ್ಣನ್ನ ಪ್ರೆಸಿಡೆಂಟ್ ಮಾಡಿದ್ರು, ಅವುರು ಪಾರ್ಟಿ ಬುಟ್ಟು ಬಿಜೆಪಿಗೋದ್ರು, ಅಂಗೆ ಒಂದಿನ ಈ ಅಪ್ಪ ಮಕ್ಕಳಿಗೆ ಬೇಜಾರಾದ್ರೆ ವಿಶ್ವನಾಥನ್ನ ತೆಗೆದಾಕ್ತರೆ. ಆದ್ರಿಂದ ವಿಶ್ವನಾಥ ನನ್ನ ಎದುರಾಳಿನೂ ಅಲ್ಲ, ಸ್ಪರ್ಧಿನೂ ಅಲ್ಲ.”
“ಕುರುಬ್ರು ವಿಶ್ವನಾಥನ ಹಿಂದೋದ್ರೆ.”
“ಹೋಗ್ಲಿ ಬುಡ್ರಿ ನಂಗೇನು.”
“ಥೂತ್ತೇರಿ.”

-ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...