Homeರಾಜಕೀಯಕುರುಬ್ರು ವಿಶ್ವನಾಥನ ಹಿಂದೋದ್ರೆ?

ಕುರುಬ್ರು ವಿಶ್ವನಾಥನ ಹಿಂದೋದ್ರೆ?

- Advertisement -
- Advertisement -

ಕಾಲ ಎಂತೆಂತಹ ವಿಚಿತ್ರ ಸನ್ನಿವೇಶಗಳನ್ನು. ಸೃಷ್ಟಿ ಮಾಡುತ್ತದಲ್ಲವೆ! ಕಳೆದ ಚುನಾವಣೆಯಲ್ಲಿ ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೊಲ್ಲ ಎಂದು ಹೋದಲ್ಲಿಬಂದಲ್ಲಿ ಭಾಷಣ ಬಿಗಿದಿದ್ದ ಸಿದ್ದರಾಮಯ್ಯ, ಚುನಾವಣಾ ಫಲಿತಾಂಶ ಇನ್ನ ಬಾಕಿ ಇರುವಾಗಲೇ ಕುಮಾರಸ್ವಾಮಿ ಮನೆಯ ಕರೆಗಂಟೆ ಒತ್ತಿ ಕೈಕಟ್ಟಿ ನಿಂತಿದ್ದಾರಲ್ಲಾ. ಆಗ ಸಿದ್ದು ನಮ್ಮಪ್ಪನಾಣೆ ನೀನೇ ಮುಖ್ಯಮಂತ್ರಿ ಎನ್ನುವುದೊಂದು ಬಾಕಿ ಇತ್ತು. ಸಿದ್ದು ಸ್ಥಿತಿ ನೋಡಿ ನಗು ಅದುಮಿಕೊಂಡ ದೇವೇಗೌಡರು ಮಗ ಮುಖ್ಯಮಂತ್ರಿ ಯಾದರೂ ಬಿಡದೆ, ಸಿದ್ದು ಬಗೆಗಿನ ಸೇಡನ್ನು ಮುಂದುವರಿಸುವ ಸಲುವಾಗಿ, ವಿಶ್ವನಾಥನನ್ನೇ ಪಾರ್ಟಿ ಪ್ರೆಸಿಡೆಂಟು ಮಾಡಿಬಿಟ್ಟಿದ್ದಾರಲ್ಲಾ, ಈ ಬಗ್ಗೆ ಸಿದ್ದುವನ್ನು ಕೇಳಬೇಕೆಂದು ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್‍ಠೋನ್ “ಕರಿಯ ಕಂಬಳಿ ಗದ್ದುಗೆ ಮಾಡಿ ವೀರದೊಳ್ಳತಂದಿರಿಸಿದರೊ, ವೀರದೊಳತಂದಿರಿಸಿದರೊ. ವಿಶ್ವನಾಥನ ಭಜಿಸಿದರೊ….. ಹಲೊ.
“ಯಾರು.”
“ನಾನು ಸಾರ್ ಯಾಹೂ.”
“ಏನ್ರಿ ಯಾಹೂ.”
“ಏನ್ ಸಾರ್ ಮುಖ್ಯಮಂತ್ರಿಯಾದಾಗ ನೋಡಕ್ಕೂ ಸಿಗಲಿಲ್ಲ, ಈಗ್ಲು ಸಿಗದಿ¯ವಲ್ಲ ಸಾರ್ ಅಷ್ಟು ಬಿಜಿನ.”
“ಅಂಗೇನಿಲ್ಲ ಹೇಳಿ.”
“ನಿಮ್ಮ ಸರಕಾರ ಸೋತಿದ್ದರ ಬಗ್ಗೆ ನೀವೇನೇಳ್ತಿರಿ ಸಾರ್.”
“ಜನ ಮೋಸ ಮಾಡಿದ್ರು.”
“ನಿಮ್ಮ ಭಾಗದ ತಪ್ಪುಗಳೇನಾದ್ರು ಇದ್ದವೆ?’’
“ಆಂಂ.’’
“ನೀವೇನಾರ ತೆಪ್ಪು ಮಾಡಿದ್ರ ಸಾರ್.”
“ನಾನೇನು ಮಾಡಿದೇ.”
“ ಮೊದಲನೆದಾಗಿ ನಿಮ್ಮ ಪ್ರತಿ ಭಾಷಣದಲ್ಲಿ ಎಡೂರಪ್ಪನ ಜೈಲಿನ ವಿಷಯ ಪ್ರಸ್ತಾಪ ಮಾಡಿದ್ರಿ? ಜನ ಚಪ್ಪಾಳೆ ತಟ್ಟಿದ್ರು, ಆದ್ರೆ ಲಿಂಗಾಯಿತ್ರು ಎಡೂರಪ್ಪನ ಹಿಂದೆ ಒಗ್ಗಟ್ಟಾದ್ರು. ಆಮೇಲೆ ಕುಮಾರಸ್ವಾಮಿಯ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ್ಲ ಅಂದ್ರಿ. ಅದ್ಯಂಗಾಗಲ್ಲ ನೋಡನ ಅಂತ ಒಕ್ಕಲಿಗರೆಲ್ಲ ಒಂದಾದ್ರು. ಅಂತೂ ನಿಮ್ಮ ಭಾಷಣನೆ ಜಾತಿಜನ ಒಟ್ಟು ಮಾಡ್ತು. ಇದೇ ಕಾರಣ ಸೋಲಿಗೆ ಅಂತ ನಮ್ಮ ಲೆಕ್ಕಾಚಾರ.”
“ಈಗಾಯ್ತಲ್ಲ ಬುಡ್ರಿ ಆ ಸುದ್ದಿ ತಗಂಡೇನು.”
“ವಿಶ್ಲೇಷಣೆ ಮಾಡ್ಬೇಕಲ್ಲವಾ ಸಾರ್.”
“ಈಗ ಮಾಡಿ ಏನು ಪ್ರಯೋಜನ.”
“ಮುಂದೆ ರಾಜಕಾರಣ ಮಾಡೋರಿಗೆ ಒಂದು ಅನುಭವ ಆಗುತ್ತೆ ಸಾರ್.”
“ಆ….”
“ಅಷ್ಟೊಂದು ಹಟದ ಅಗತ್ಯ ಇರಲಿಲ್ಲ, ಆ ಮುಸ್ಲಿಮರು ಏನು ಕೇಳ್ತಾರೆ ಅದನ್ನ ಮಾತ್ರ ಕೊಡಬೇಕು. ಅದು ಬುಟ್ಟು ಏನೇನೋ ಕೊಡಕೋದ್ರೆ ಅದವುರಿಗೂ ಬೇಕಿರಲಿಲ್ಲ. ಬೇರೆ ಜನಗಳೂ ಅದನ್ನ ಸಯಿಸದಿಲ್ಲ ಸಾರ್.”
“ಸಯಿಸದಿಲ್ಲ ಅಂತ ನಾವು ಮಾಡದನ್ನ ಬಿಡಬಾರ್ದು, ಅಧಿಕಾರ ಸಿಕ್ಕಿದಾಗ ದುರ್ಬಲರಿಗೆ ಸಹಾಯ ಮಾಡ್ಳೇಬೇಕು.”
“ನಿಮ್ಮ ಸಹಾಯ ಸಾಲಮನ್ನಾ, ಬಿಟ್ಟಿ ಅನ್ನ, ಹಲವಾರು ಭಾಗ್ಯ, ಸರಕಾರಿ ಕವರ್iಜಾರಿಗಳ ಸಂಬಳ ಏರಿಸಿ, ದಲಿತ್ರ ಸಾಲ ಮನ್ನ ಮಾಡಿದ್ರೂ ಜನ ಕೈ ಹಿಡಿಲಿಲ್ಲವಲ್ಲ. ಇದರ ಕಾರಣ ಗೊತ್ತಾಯ್ತಾ ಸಾರ್.”
“ಇಲ್ಲ ಹೇಳಿ.”
“ಜನ ಜಾತ್ಯಂದ್ರಾದಾಗ ಏನು ಕೊಟ್ರೂ ಜಾತಿ ಮಕ್ಕಳಾಗೇ ವರ್ತುಸ್ತಾರೆ, ಜೊತೆಗೆ ನೀವು ತಿರಗ ನಾನೇ ಮುಖ್ಯಮಂತ್ರಿ ಅಂದ್ರೆ ಅದು ರಿವರ್ಸಾಯ್ತು. ದಲಿತ ಮುಖ್ಯಮಂತ್ರಿ ಬೇಡಿಕೆ ಇಟ್ಟಿದ್ದ ಜನ ಹಗಲುರಾತ್ರಿ ಓಡಾಡಿ ಬಿಜೆಪಿಗೆ ಓಟು ಮಾಡಿಸಿದ್ರು ಗೊತ್ತಾ.”
“ಹೋಗ್ಲಿಬುಡಿ.”
“ಬುಡದಲ್ಲ ಸಾರ್, ಅಧಿಕಾರದ ಅಂತ್ಯದಲ್ಲಿ ಯಲ್ಲಾರಿಗೂ ಅಹಂಕಾರ ಬತ್ತದೆ, ನಿಮಿಗೊಂಚೂರು ಜಾಸ್ತಿನೆ ಬಂತು.”
“ನಾನೇನು ಮಾಡಿದೆ.”
“ನಿಮ್ಮನ್ನ ಕಾಂಗ್ರೆಸಿಗೆ ಕರೆತಂದ ವಿಶ್ವನಾಥನ್ನ ಕಾಸಿಗಿಂತ ಕಡೆಮಾಡಿದ್ರಿ, ನೀವು ಗೆಲ್ಲಲಿ ಅಂತ ಓಡಾಡಿದ ರೇವಣಸಿದ್ದಯ್ಯನ್ನ ಐದೊರ್ಸ ಎಲ್ಯವುರೆ ಅಂತ ನೋಡಲಿಲ್ಲ, ಚಾಮುಂಡೇಶ್ವರಿಗಾರ ಟಿಕೆಟ್ ಕೊಡಬವುದಿತ್ತು. ಅಂಗೇ ನೋಡಿದ್ರೆ ಕಾಂಗ್ರೆಸ್ ಸೋಲಿನ ದೊಡ್ಡಪಾಲು ನಿಮ್ಮದೆ ಸಾರ್.”
“ಸೋತಾಯ್ತಲ್ಲ ಬುಡಿ.”
“ಇನ್ನೋಂದು ವಿಷಯ ಸಾರ್.”
“ಏನು.”
“ದೇವೇಗೌಡ್ರು ವಿಶ್ವನಾಥನ್ನ ಜೆಡಿಎಸ್ ಪಾರ್ಟಿ ಪ್ರೆಸಿಡೆಂಟ್ ಮಾಡ್ಯವುರೇ.”
“ಮಾಡ್ಲಿ ಬುಡ್ರಿ.”
“ಅದರಿಂದ ನಿಮಗೇನು ಬೇಜಾರಾಗಿಲ್ವೇ.”
“ಬೇಜಾರ್ಯಾಕೆ, ನಾನು ಜೆಡಿಎಸ್ ಅಧ್ಯಕ್ಷ ಆಗಿದ್ದೆ, ನನ್ನ ಹುಟ್ಟುಹಬ್ಬದ ದಿನವೇ ದೇವೇಗೌಡ ನನ್ನನ್ನ ತಗದು ಆ ತಿಪ್ಪಣ್ಣನ್ನ ಪ್ರೆಸಿಡೆಂಟ್ ಮಾಡಿದ್ರು, ಅವುರು ಪಾರ್ಟಿ ಬುಟ್ಟು ಬಿಜೆಪಿಗೋದ್ರು, ಅಂಗೆ ಒಂದಿನ ಈ ಅಪ್ಪ ಮಕ್ಕಳಿಗೆ ಬೇಜಾರಾದ್ರೆ ವಿಶ್ವನಾಥನ್ನ ತೆಗೆದಾಕ್ತರೆ. ಆದ್ರಿಂದ ವಿಶ್ವನಾಥ ನನ್ನ ಎದುರಾಳಿನೂ ಅಲ್ಲ, ಸ್ಪರ್ಧಿನೂ ಅಲ್ಲ.”
“ಕುರುಬ್ರು ವಿಶ್ವನಾಥನ ಹಿಂದೋದ್ರೆ.”
“ಹೋಗ್ಲಿ ಬುಡ್ರಿ ನಂಗೇನು.”
“ಥೂತ್ತೇರಿ.”

-ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...