Homeರಾಜಕೀಯಕುರುಬ್ರು ವಿಶ್ವನಾಥನ ಹಿಂದೋದ್ರೆ?

ಕುರುಬ್ರು ವಿಶ್ವನಾಥನ ಹಿಂದೋದ್ರೆ?

- Advertisement -
- Advertisement -

ಕಾಲ ಎಂತೆಂತಹ ವಿಚಿತ್ರ ಸನ್ನಿವೇಶಗಳನ್ನು. ಸೃಷ್ಟಿ ಮಾಡುತ್ತದಲ್ಲವೆ! ಕಳೆದ ಚುನಾವಣೆಯಲ್ಲಿ ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೊಲ್ಲ ಎಂದು ಹೋದಲ್ಲಿಬಂದಲ್ಲಿ ಭಾಷಣ ಬಿಗಿದಿದ್ದ ಸಿದ್ದರಾಮಯ್ಯ, ಚುನಾವಣಾ ಫಲಿತಾಂಶ ಇನ್ನ ಬಾಕಿ ಇರುವಾಗಲೇ ಕುಮಾರಸ್ವಾಮಿ ಮನೆಯ ಕರೆಗಂಟೆ ಒತ್ತಿ ಕೈಕಟ್ಟಿ ನಿಂತಿದ್ದಾರಲ್ಲಾ. ಆಗ ಸಿದ್ದು ನಮ್ಮಪ್ಪನಾಣೆ ನೀನೇ ಮುಖ್ಯಮಂತ್ರಿ ಎನ್ನುವುದೊಂದು ಬಾಕಿ ಇತ್ತು. ಸಿದ್ದು ಸ್ಥಿತಿ ನೋಡಿ ನಗು ಅದುಮಿಕೊಂಡ ದೇವೇಗೌಡರು ಮಗ ಮುಖ್ಯಮಂತ್ರಿ ಯಾದರೂ ಬಿಡದೆ, ಸಿದ್ದು ಬಗೆಗಿನ ಸೇಡನ್ನು ಮುಂದುವರಿಸುವ ಸಲುವಾಗಿ, ವಿಶ್ವನಾಥನನ್ನೇ ಪಾರ್ಟಿ ಪ್ರೆಸಿಡೆಂಟು ಮಾಡಿಬಿಟ್ಟಿದ್ದಾರಲ್ಲಾ, ಈ ಬಗ್ಗೆ ಸಿದ್ದುವನ್ನು ಕೇಳಬೇಕೆಂದು ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್‍ಠೋನ್ “ಕರಿಯ ಕಂಬಳಿ ಗದ್ದುಗೆ ಮಾಡಿ ವೀರದೊಳ್ಳತಂದಿರಿಸಿದರೊ, ವೀರದೊಳತಂದಿರಿಸಿದರೊ. ವಿಶ್ವನಾಥನ ಭಜಿಸಿದರೊ….. ಹಲೊ.
“ಯಾರು.”
“ನಾನು ಸಾರ್ ಯಾಹೂ.”
“ಏನ್ರಿ ಯಾಹೂ.”
“ಏನ್ ಸಾರ್ ಮುಖ್ಯಮಂತ್ರಿಯಾದಾಗ ನೋಡಕ್ಕೂ ಸಿಗಲಿಲ್ಲ, ಈಗ್ಲು ಸಿಗದಿ¯ವಲ್ಲ ಸಾರ್ ಅಷ್ಟು ಬಿಜಿನ.”
“ಅಂಗೇನಿಲ್ಲ ಹೇಳಿ.”
“ನಿಮ್ಮ ಸರಕಾರ ಸೋತಿದ್ದರ ಬಗ್ಗೆ ನೀವೇನೇಳ್ತಿರಿ ಸಾರ್.”
“ಜನ ಮೋಸ ಮಾಡಿದ್ರು.”
“ನಿಮ್ಮ ಭಾಗದ ತಪ್ಪುಗಳೇನಾದ್ರು ಇದ್ದವೆ?’’
“ಆಂಂ.’’
“ನೀವೇನಾರ ತೆಪ್ಪು ಮಾಡಿದ್ರ ಸಾರ್.”
“ನಾನೇನು ಮಾಡಿದೇ.”
“ ಮೊದಲನೆದಾಗಿ ನಿಮ್ಮ ಪ್ರತಿ ಭಾಷಣದಲ್ಲಿ ಎಡೂರಪ್ಪನ ಜೈಲಿನ ವಿಷಯ ಪ್ರಸ್ತಾಪ ಮಾಡಿದ್ರಿ? ಜನ ಚಪ್ಪಾಳೆ ತಟ್ಟಿದ್ರು, ಆದ್ರೆ ಲಿಂಗಾಯಿತ್ರು ಎಡೂರಪ್ಪನ ಹಿಂದೆ ಒಗ್ಗಟ್ಟಾದ್ರು. ಆಮೇಲೆ ಕುಮಾರಸ್ವಾಮಿಯ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ್ಲ ಅಂದ್ರಿ. ಅದ್ಯಂಗಾಗಲ್ಲ ನೋಡನ ಅಂತ ಒಕ್ಕಲಿಗರೆಲ್ಲ ಒಂದಾದ್ರು. ಅಂತೂ ನಿಮ್ಮ ಭಾಷಣನೆ ಜಾತಿಜನ ಒಟ್ಟು ಮಾಡ್ತು. ಇದೇ ಕಾರಣ ಸೋಲಿಗೆ ಅಂತ ನಮ್ಮ ಲೆಕ್ಕಾಚಾರ.”
“ಈಗಾಯ್ತಲ್ಲ ಬುಡ್ರಿ ಆ ಸುದ್ದಿ ತಗಂಡೇನು.”
“ವಿಶ್ಲೇಷಣೆ ಮಾಡ್ಬೇಕಲ್ಲವಾ ಸಾರ್.”
“ಈಗ ಮಾಡಿ ಏನು ಪ್ರಯೋಜನ.”
“ಮುಂದೆ ರಾಜಕಾರಣ ಮಾಡೋರಿಗೆ ಒಂದು ಅನುಭವ ಆಗುತ್ತೆ ಸಾರ್.”
“ಆ….”
“ಅಷ್ಟೊಂದು ಹಟದ ಅಗತ್ಯ ಇರಲಿಲ್ಲ, ಆ ಮುಸ್ಲಿಮರು ಏನು ಕೇಳ್ತಾರೆ ಅದನ್ನ ಮಾತ್ರ ಕೊಡಬೇಕು. ಅದು ಬುಟ್ಟು ಏನೇನೋ ಕೊಡಕೋದ್ರೆ ಅದವುರಿಗೂ ಬೇಕಿರಲಿಲ್ಲ. ಬೇರೆ ಜನಗಳೂ ಅದನ್ನ ಸಯಿಸದಿಲ್ಲ ಸಾರ್.”
“ಸಯಿಸದಿಲ್ಲ ಅಂತ ನಾವು ಮಾಡದನ್ನ ಬಿಡಬಾರ್ದು, ಅಧಿಕಾರ ಸಿಕ್ಕಿದಾಗ ದುರ್ಬಲರಿಗೆ ಸಹಾಯ ಮಾಡ್ಳೇಬೇಕು.”
“ನಿಮ್ಮ ಸಹಾಯ ಸಾಲಮನ್ನಾ, ಬಿಟ್ಟಿ ಅನ್ನ, ಹಲವಾರು ಭಾಗ್ಯ, ಸರಕಾರಿ ಕವರ್iಜಾರಿಗಳ ಸಂಬಳ ಏರಿಸಿ, ದಲಿತ್ರ ಸಾಲ ಮನ್ನ ಮಾಡಿದ್ರೂ ಜನ ಕೈ ಹಿಡಿಲಿಲ್ಲವಲ್ಲ. ಇದರ ಕಾರಣ ಗೊತ್ತಾಯ್ತಾ ಸಾರ್.”
“ಇಲ್ಲ ಹೇಳಿ.”
“ಜನ ಜಾತ್ಯಂದ್ರಾದಾಗ ಏನು ಕೊಟ್ರೂ ಜಾತಿ ಮಕ್ಕಳಾಗೇ ವರ್ತುಸ್ತಾರೆ, ಜೊತೆಗೆ ನೀವು ತಿರಗ ನಾನೇ ಮುಖ್ಯಮಂತ್ರಿ ಅಂದ್ರೆ ಅದು ರಿವರ್ಸಾಯ್ತು. ದಲಿತ ಮುಖ್ಯಮಂತ್ರಿ ಬೇಡಿಕೆ ಇಟ್ಟಿದ್ದ ಜನ ಹಗಲುರಾತ್ರಿ ಓಡಾಡಿ ಬಿಜೆಪಿಗೆ ಓಟು ಮಾಡಿಸಿದ್ರು ಗೊತ್ತಾ.”
“ಹೋಗ್ಲಿಬುಡಿ.”
“ಬುಡದಲ್ಲ ಸಾರ್, ಅಧಿಕಾರದ ಅಂತ್ಯದಲ್ಲಿ ಯಲ್ಲಾರಿಗೂ ಅಹಂಕಾರ ಬತ್ತದೆ, ನಿಮಿಗೊಂಚೂರು ಜಾಸ್ತಿನೆ ಬಂತು.”
“ನಾನೇನು ಮಾಡಿದೆ.”
“ನಿಮ್ಮನ್ನ ಕಾಂಗ್ರೆಸಿಗೆ ಕರೆತಂದ ವಿಶ್ವನಾಥನ್ನ ಕಾಸಿಗಿಂತ ಕಡೆಮಾಡಿದ್ರಿ, ನೀವು ಗೆಲ್ಲಲಿ ಅಂತ ಓಡಾಡಿದ ರೇವಣಸಿದ್ದಯ್ಯನ್ನ ಐದೊರ್ಸ ಎಲ್ಯವುರೆ ಅಂತ ನೋಡಲಿಲ್ಲ, ಚಾಮುಂಡೇಶ್ವರಿಗಾರ ಟಿಕೆಟ್ ಕೊಡಬವುದಿತ್ತು. ಅಂಗೇ ನೋಡಿದ್ರೆ ಕಾಂಗ್ರೆಸ್ ಸೋಲಿನ ದೊಡ್ಡಪಾಲು ನಿಮ್ಮದೆ ಸಾರ್.”
“ಸೋತಾಯ್ತಲ್ಲ ಬುಡಿ.”
“ಇನ್ನೋಂದು ವಿಷಯ ಸಾರ್.”
“ಏನು.”
“ದೇವೇಗೌಡ್ರು ವಿಶ್ವನಾಥನ್ನ ಜೆಡಿಎಸ್ ಪಾರ್ಟಿ ಪ್ರೆಸಿಡೆಂಟ್ ಮಾಡ್ಯವುರೇ.”
“ಮಾಡ್ಲಿ ಬುಡ್ರಿ.”
“ಅದರಿಂದ ನಿಮಗೇನು ಬೇಜಾರಾಗಿಲ್ವೇ.”
“ಬೇಜಾರ್ಯಾಕೆ, ನಾನು ಜೆಡಿಎಸ್ ಅಧ್ಯಕ್ಷ ಆಗಿದ್ದೆ, ನನ್ನ ಹುಟ್ಟುಹಬ್ಬದ ದಿನವೇ ದೇವೇಗೌಡ ನನ್ನನ್ನ ತಗದು ಆ ತಿಪ್ಪಣ್ಣನ್ನ ಪ್ರೆಸಿಡೆಂಟ್ ಮಾಡಿದ್ರು, ಅವುರು ಪಾರ್ಟಿ ಬುಟ್ಟು ಬಿಜೆಪಿಗೋದ್ರು, ಅಂಗೆ ಒಂದಿನ ಈ ಅಪ್ಪ ಮಕ್ಕಳಿಗೆ ಬೇಜಾರಾದ್ರೆ ವಿಶ್ವನಾಥನ್ನ ತೆಗೆದಾಕ್ತರೆ. ಆದ್ರಿಂದ ವಿಶ್ವನಾಥ ನನ್ನ ಎದುರಾಳಿನೂ ಅಲ್ಲ, ಸ್ಪರ್ಧಿನೂ ಅಲ್ಲ.”
“ಕುರುಬ್ರು ವಿಶ್ವನಾಥನ ಹಿಂದೋದ್ರೆ.”
“ಹೋಗ್ಲಿ ಬುಡ್ರಿ ನಂಗೇನು.”
“ಥೂತ್ತೇರಿ.”

-ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...