Homeಮುಖಪುಟಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

- Advertisement -
- Advertisement -

ಬನ್ನಿ ನಮ್ಮೆದುರಿಗಿರುವ ವಾಸ್ತವವನ್ನು ಎದುರಿಸುವ. ಶಬರಿಮಲದಲ್ಲಿ ನಮ್ಮ ಸಂವಿಧಾನಾತ್ಮಕ ಆದೇಶ ಸೋತಿದೆ. ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.
ಸುಲಭವಾದ, ನಮಗೆ ಅನುಕೂಲಕರವಾದ ಉತ್ತರಗಳನ್ನು ಹುಡುಕುವುದನ್ನು ಬಿಟ್ಟುಬಿಡುವ. ಹೌದು, ಬಿಜೆಪಿಯ ಬೆಂಬಲದೊಂದಿಗೆ, ಈ ಜನಪ್ರಿಯ ಪ್ರತಿಭಟನೆಯನ್ನು ಹಿಂದುತ್ವದ ಕಟ್ಟಾ ಬೆಂಬಲಿಗರಿಂದ ಆಯೋಜಿಸಲಾಗಿತ್ತು. ಹೌದು, ಕಾಂಗ್ರೆಸ್ ಮೃದು ಹಿಂದುತ್ವದ ನೀತಿಯನ್ನನುಸರಿಸಿತು, ಮೊದಲ ಬಾರಿಗೇನೂ ಅಲ್ಲ. ಹೌದು, ಆಡಳಿತ ಪಕ್ಷ ಸಿಪಿಐ(ಎಮ್) ಜನಪ್ರಿಯ ಭಾವನೆಗಳ ಎದುರಿಗೆ ಓಲಾಡುವಂತಾಯಿತು. ಆದರೆ, ಇವರ ಬಾಗಿಲಿಗೇ ಎಲ್ಲಾ ಅಸಮಾಧಾನವನ್ನು ತೂರುವುದು ನಿರರ್ಥಕ. ದಯವಿಟ್ಟು ಜನರ ಮನಃಸ್ಥಿತಿ ಮತ್ತು ಅವರ ವೋಟುಗಳನ್ನು ಹಿಂಬಾಲಿಸಿ. ನಿಜವಾದ ಪ್ರಶ್ನೆಯೇನೆಂದರೆ: ಜನರ ಮನಃಸ್ಥಿತಿ ಸಂವಿಧಾನಾತ್ಮಕ ಆದೇಶಕ್ಕೆ ತದ್ವಿರುದ್ಧವೇಕಿತ್ತು?
ತಮಾಷೆ ಮಾಡೋದನ್ನು ಬಿಟ್ಟುಬಿಡುವ: ನ್ಯಾಯಾಲಯದ ಒಂದು ‘ಶ್ರದ್ಧೆ ವಿರೋಧಿ’ ಆದೇಶವನ್ನು ಕೇರಳದಲ್ಲಿ, ಅದೂ ಜಗತ್ತಿನಲ್ಲಿ ಉಳಿದುಕೊಂಡಿರುವ ಕೆಲವೇ ಕಲವು ಸ್ಟಾö್ಯಲಿನಿಸ್ಟ್ ಪಕ್ಷದ ಆಡಳಿತದಲ್ಲಿಯೇ ಇಂತಹ ಆದೇಶವನ್ನು ಜಾರಿಗೊಳಿಸಲು ಆಗಲಿಲ್ಲ ಎಂದಲ್ಲಿ ಬೇರೆಡೆಯಂತೂ ಸಾಧ್ಯವೇ ಇಲ್ಲ. ನಿಜ, ಇಂಥದ್ದೆÃ ಆದೇಶವನ್ನು ಹಾಜಿ ಅಲಿ ದರ್ಗಾ ಪ್ರಕರಣದಲ್ಲಿ ಸಮುದಾಯದ ಭಾವನೆಗಳ ವಿರುದ್ಧವಾಗಿದ್ದರೂ ಜಾರಿಗೊಳಿಸಲಾಗಿತ್ತು. ಆದರೆ ಒಂದು ‘ಜಾತ್ಯತೀತ’ ಆಡಳಿತವಿದ್ದಾಗ ಹಾಗೆ ಆಗಲು ಸಾಧ್ಯವಿತ್ತೆ? ಶಾ ಬಾನೊ ಪ್ರಕರಣವನ್ನು ನಾವು ಮರತಿದ್ದೆÃವೆಯೇ? ಸಿಖ್ ಮತಶ್ರದ್ಧೆಯ ಹೆಸರಿನಲ್ಲಿ ಎಸ್‌ಜಿಪಿಸಿ ತನ್ನ ನ್ಯಾಯಬಾಹಿರ ಕ್ರಮಗಳನ್ನು ಮುಂದುವರೆಸಿರಲಿಲ್ಲವೇ?
ಇದನ್ನು ನೈತಿಕತೆಯ ಪ್ರಶ್ನೆಯಾಗಿಸಿ ನಮ್ಮ ಶಕ್ತಿಗಳನ್ನು ವ್ಯಯಿಸುವುದು ಬೇಡ. ಹೌದು ಈ ವೈಫಲ್ಯಗಳನ್ನು ಖಂಡಿತವಾಗಿಯೂ ಖಂಡಿಸುವ. ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನೆÃ ಉಲ್ಲಂಘಿಸುವಂತಾದರೆ ಒಂದು ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ನಡೆಸುವ ಹಕ್ಕನ್ನೆÃ ಕಳೆದುಕೊಂಡಂತೆ. ಆದರೆ, ಗೋಳಾಟ, ಅಸಮಾಧಾನ ಮತ್ತು ಕಟು ವಿರೋಧ ಇವ್ಯಾವುಗಳೂ ಆತ್ಮಾವಲೋಕನ ಮತ್ತು ಚಿಂತನೆಗೆ ಪರ್ಯಾಯಗಳಲ್ಲ. ಖಂಡನೆಗಿಂತ ಈ ಸನ್ನಿವೇಶ ಆಳವಾದ ಚಿಂತನೆಗೆ ಕರೆನೀಡುತ್ತದೆ. ಸಂವಿಧಾನಾತ್ಮಕ ನೈತಿಕತೆ ಮತ್ತು ಜನಾಭಿಪ್ರಾಯದ ನಡುವಿನ ಒಂದು ಸಂಘರ್ಷವನ್ನು ನಾವು ಹೇಗೆ ಸಮಾಲೋಚಿಸುತ್ತೆÃವೆ?
ಶೇಖರ್ ಗುಪ್ತ ಮಾಡಿದಂತೆ, ನ್ಯಾಯಾಲಯಕ್ಕೆ ಹೊಣೆ ಹೊರೆಸಿ ಈ ಕಠಿಣ ಪ್ರಶ್ನೆಯನ್ನು ಪಕ್ಕಕ್ಕೆ ಸರಿಸುವುದು ಬೇಡ. ಹೌದು ನ್ಯಾಯಾಂಗದ ಓವರ್‌ರೀಚ್ ನಮ್ಮ ವ್ಯವಸ್ಥೆಯ ಒಂದು ಸಮಸ್ಯೆ, ಆದರೆ ಈ ಪ್ರಕರಣದಲ್ಲಿ ಹಾಗನ್ನಲು ಆಗುವುದಿಲ್ಲ. ಪೂಜೆ ಆಗುವ ಒಂದು ಸಾರ್ವಜನಿಕ ಸ್ಥಳದಲ್ಲಿ ಸಮಾನವಾದ ಅವಕಾಶವನ್ನು ಕೋರಿ ಒಬ್ಬ ವ್ಯಕ್ತಿ ನ್ಯಾಯಾಲಯಕ್ಕೆ ತಲುಪಿದರೆ, ನ್ಯಾಯಾಧೀಶರು ಅಸಹಾಯಕತೆಯನ್ನು ತೋಡಿಕೊಳ್ಳಲಾಗುವುದಿಲ್ಲ, ಅದೂ ನಮ್ಮ ಸಂವಿಧಾನದಲ್ಲಿ ದೇವಸ್ಥಾನದ ಪ್ರವೇಶದ ಬಗ್ಗೆ ಸ್ಪಷ್ಟವಾಗಿ ನಮೂದಿಸಿರುವಾಗ. ಭಾರತೀಯ ಜಾತ್ಯತೀತತೆ ಫ್ರಾನ್ಸಿನ ಕಟ್ಟುನಿಟ್ಟಾದ ತಟಸ್ಥ ಧೋರಣೆಯನ್ನು ಅನುಸರಿಸುವುದಿಲ್ಲ. ಧಾರ್ಮಿಕ ವಿಷಯಗಳಲ್ಲಿ ತತ್ವಾಧಾರಿತ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮತ್ತು ಅಪೇಕ್ಷಿಸುವ ‘ತತ್ವಾಧಾರಿತ ಅಂತರ’ಕ್ಕೆ ನಮ್ಮ ಸಂವಿಧಾನ ಅನುವು ಮಾಡಿಕೊಡುತ್ತದೆ ಎಂದು ರಾಜೀವ್ ಭಾರ್ಗವ್ ಹೇಳಿದ್ದು ಸರಿಯಾಗಿದೆ.
ಈಗ ನೇರವಾಗಿ ವಿಷಯಕ್ಕೆ ಬರುವ. ದುಃಖಕರ ಮತ್ತು ಅಪ್ರಿಯವಾದ ವಾಸ್ತವವೇನೆಂದರೆ, ಈ ಲಿಬರಲ್ ಆದ ಸಂವಿಧಾನಾತ್ಮಕ ಆದೇಶ ಜನಾಭಿಪ್ರಾಯದೊಂದಿಗೆ ಮೇಳೆ ಆಗಿರಲಿಲ್ಲ, ಆಗಿಲ್ಲ. ಸುಪ್ರಿÃಮ್ ಕೋರ್ಟಿನ ನ್ಯಾಯಾಧೀಶರ ಮತ್ತು ಭಾರತದ ಲಿಬರಲ್ ಚಿಂತಕರ ನೈತಿಕ ಸಂವೇದನಗಳಿಗೂ ಹಾಗೂ ಒಬ್ಬ ಅಂiÀÄ್ಯಪ್ಪ ಸ್ವಾಮಿಯ ಸಾಮಾನ್ಯ ಭಕ್ತನ ನೈತಿಕ ಸಂವೇದನೆಗಳೊಂದಿಗೆ ಸಂಬಂಧವಿಲ್ಲದಿರುವುದು ಸ್ಪಷ್ಟ. ಸಾಮಾನ್ಯ ಭಾರತೀಯರಿಗೆ ನಮ್ಮ ಸಂವಿಧಾನಕ್ಕೆ ಅತಿ ಹಚ್ಚಿನ ಆದರೆ ಅಮೂರ್ತವಾದ ಮನ್ನಣೆಯಿದೆ. ಆದರೆ ಸಂವಿಧಾನಾತ್ಮಕ ತತ್ವಗಳನ್ನು ನಿರ್ದಿಷ್ಟವಾಗಿ ಸ್ಪಷ್ಟಪಡಿಸಿದ ಸಂದರ್ಭಗಳಲ್ಲಿ ಅನೇಕ ಸಲ ಜನರು ಅದರ ವಿರುದ್ಧ ಹೋಗುವ ಸಾಧ್ಯತೆಗಳಿವೆ.
ಈ ಕಟುಸತ್ಯದಿಂದ ಪಲಾಯನ ಮಾಡುವುದು ಬೇಡ. ಇದನ್ನು ನಾನು 1992ರಲ್ಲಿ ಬಾಬರಿ ಮಸೀದಿಯ ಧ್ವಂಸವಾದ ಸಮಯದಲ್ಲಿ ಅರಿತೆ. ಆಗ ನಾನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದೆ, ಚಂಡೀಗಡದ ಒಂದು ದುಡಿಯುವ ಜನರ ವಸತಿಪ್ರದೇಶದಲ್ಲಿ ನಾನು ವಾಸಿಸುತ್ತಿದ್ದೆ. ಅಂiÉÆÃಧ್ಯೆಯ ಪ್ರಕರಣದಲ್ಲಿ ಸುಪ್ರಿÃಮ್ ಕೋರ್ಟಿನ ಆದೇಶವನ್ನು ಉಲ್ಲಂಘಿಸಿದರ ಬಗ್ಗೆ ನಾನು ನನ್ನ ನೈತಿಕ ಅಸಮಾಧಾನವನ್ನು ವ್ಯಕ್ತಪಡಿಸಿದಾಗ, ನನ್ನ ನೆರೆಯವರೊಬ್ಬರು ಕೇಳಿದ್ದು ‘ಪ್ರೊಫೆಸರ್ ಸಾಬ್, ರಾಮನ ಮಂದಿರ ಅಂiÉÆÃಧ್ಯೆಯಲ್ಲೆÃ ಕಟ್ಟಬೇಕಲ್ವಾ, ಮತ್ತೆÃನು ಇಂಗ್ಲೆಂಡಿನಲ್ಲಿ ಕಟ್ಟಬೇಕೇ?” ಆಗ ನಾನು ನನ್ನ ಪಾಠ ಕಲಿತೆ. ಆದರೆ ಭಾರತದ ಲಿಬರಲ್, ಪ್ರಗತಿಪರರು ಇನ್ನೂ ಆ ಪಾಠ ಕಲಿತಂತಿಲ್ಲ.
ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವ ಧೈರ್ಯವನ್ನು ಬೆಳೆಸಿಕೊಳ್ಳುವ: ಇಂಗ್ಲಿÃಷ್ ಮಾತನಾಡುವ ನೆಲದೊಂದಿಗಿನ ಬೇರನ್ನು ಕಳಚಿಕೊಂಡಿರುವ ಭಾರತದ ಎಲೀಟ್ ಜನರ ಬಗ್ಗೆ ಇರುವ ಸ್ಟಿರಿಯೋಟೈಪ್‌ನಲ್ಲಿ ಸತ್ಯಾಂಶವಿದೆ. ಭಾರತದ ಲಿಬರಲ್ ಜನಗಳು ಒಂದು ಪರಕೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಮುಂಚೂಣಿಯಲ್ಲಿರುವ ಯಾವುದೇ ಭಾರತೀಯ ಚಿಂತಕನಿಗೆ ಕೇಳಿ : ಇಂಗ್ಲಿÃಷಿನಲ್ಲಿರಿದ, ಯಾವುದೇ ಒಂದು ಭಾರತೀಯ ಭಾಷೆಯಲ್ಲಿಯ ಪುಸ್ತಕವನ್ನು ಕೊನೆಯ ಸಲ ಓದಿದ್ದು ಯಾವಾಗ ಅಥವಾ ಇಂಗ್ಲಿÃಷ್ ಬಿಟ್ಟು ಯಾವುದೇ ಒಂದು ಭಾರತೀಯ ಭಾಷೆಯಲ್ಲಿ ಏ4 ಸೈಜಿನ ಒಂದು ಪುಟದ ಎರಡೂ ಬದಿಗಳಲ್ಲಿ ಕೊನೆಯ ಸಲ ಬರೆದಿದ್ದು ಯಾವಾಗ? ಭಾರತದ ಧಾರ್ಮಿಕ ಪರಂಪರೆಗಳ ವಿಷಯ ಬಂದಾಗ ಇವರುಗಳು ಕೆಲವು ಸಲ ತಾತ್ಸಾರ ಹೊಂದಿದವರಾಗಿದ್ದರೆ ಅನೇಕ ಸಲ ಅನಕ್ಷರಸ್ಥರಾಗಿರುತ್ತಾರೆ. ಉಪನಿಷತ್ತುಗಳು ಮತ್ತು ಪುರಾಣಗಳ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಎಷ್ಟು ಜನ ವಿದ್ಯಾವಂತ ಭಾರತೀಯರು ಹೇಳಬಲ್ಲರು? ಅಥವಾ ಶರಿಯತ್ ಮತ್ತು ಹದೀಸ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ. ಹಾಗಾಗಿ ಇವರಿಂದ ಭಾರತೀಯರು ನೈತಿಕ ಪಾಠಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇವರುಗಳು ವಿಮರ್ಶೆ ಮತ್ತು ಸುಧಾರಣೆಯನ್ನು ಸಂಪೂರ್ಣವಾಗಿ ನಿರಾಕರಿಸದಿದ್ದರೂ ಅದು ಒಂದು ತೀರ ಭಿನ್ನವಾದ ಮತ್ತು ಪ್ರತಿಕೂಲವಾದ ನುಡಿಗಟ್ಟಿನಲ್ಲಿ ಬಂದಾಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಲ್ಯಾಟಿನ್ ಅಮೇರಿಕದಲ್ಲಿ ಕ್ರಾಂತಿಯನ್ನು ಪ್ರತಿಪಾದಿಸಲು ಬೈಬಲ್ ಉದಾಹರಿಸಿ ಅಲ್ಲಿನ ವಿಮೋಚನೆಯ ಧರ್ಮಶಾಸ್ತçವನ್ನು ಬಳಸಲಾಗುತ್ತದೆ. ಆದರೆ, ಹೊಸ ನೈತಿಕ (ಎಥಿಕಲ್) ಚೌಕಟ್ಟುಗಳನ್ನು ಎಳೆಯಲು ಮರ್ಯಾದಾ ಪುರುಷೋತ್ತಮನನ್ನು ಅರ್ಥೈಸಿಕೊಳ್ಳುವ ಹಾಗೂ ಉದಾಹರಿಸುವ ಲಿಬರಲ್ ಚಿಂತಕರು ನಮ್ಮಲ್ಲೆÃಕಿಲ್ಲ?
ಹೆಚ್ಚಿನ ಸೂಕ್ಷö್ಮತೆಗೆ ಹೋಗುವ ಅಗತ್ಯವಿಲ್ಲ. ಭಾರತದಲ್ಲಿ ಲಿಬರಲಿಸಂಗಾಗಿ ಯಾವುದೇ ರಾಜಕೀಯ ಕ್ಷೆÃತ್ರವಿಲ್ಲ; ಮೆಟ್ರೊÃಪಾಲಿಟನ್ ಎಂದು ಕರೆದುಕೊಳ್ಳುವ ಭಾರತದ ದ್ವಿÃಪದ ಹೃದಯದಲ್ಲೂ ಇಲ್ಲ. ಲಿಬರಲ್ ಮತ್ತು ಸಂವಿಧಾನಾತ್ಮಕ ಆದೇಶವನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೇಲೆಯೇ ಅವಲಂಬಿಸುವುದು ಸರಿಯಲ್ಲ. ಕಟು ವಾಸ್ತವವೇನೆಂದರೆ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳು ಜನಾಭಿಪ್ರಾಯವನ್ನು ಲೆಕ್ಕಿಸದೇ ತಮ್ಮ ತೀರ್ಪನ್ನು ಕೆಲವು ಸಲ ನೀಡಬಹುದು. ಆದರೆ ತುಲನಾತ್ಮಕವಾಗಿ ನೋಡಿದಾಗ, ಜನಪ್ರಿಯ ಭಾವನೆಗಳ ಹರವಿನೊಂದಿಗೇ ನ್ಯಾಯಾಲಯಗಳು ಹೋಗುವ ಸಾಧ್ಯತೆಗಳೇ ಹೆಚ್ಚು. ಸದ್ಯದ ಇದೇ ಪ್ರವೃತ್ತಿ ಮುಂದುವರೆದಲ್ಲಿ, ನಮ್ಮ ಗಣರಾಜ್ಯವನ್ನು ಇದೇ ಗಣರಾಜ್ಯದಿಂದಲೇ ವಿಫಲವಾಗಿಸಬಹುದಾದ ನಿಜವಾದ ಆತಂಕ ನಮ್ಮೆದುರಿಗಿದೆ.
ನಮ್ಮೆದುರಿಗಿರುವ ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳುವ. ಒಂದು, ಜನಾಭಿಪ್ರಾಯದ ಹರವಿನೊಂದಿಗೆ ಹೋಗುವುದು, ಅದು ನಮ್ಮನ್ನೆಲ್ಲಿಗೆ ಕೊಂಡೊಯ್ಯುತ್ತದೋ ಅಲ್ಲಿಗೆ ಹೋಗುವುದು ಒಂದು ಆಯ್ಕೆ. ಅದು ಒಂದು ಅಪಾಯಕಾರಿ ಜಾರುಬಂಡೆ. ಇನ್ನೊಂದು ಆಯ್ಕೆ; ಜನಾಭಿಪ್ರಾಯವನ್ನು ಬದಲಿಸುವಂತೆ ಜನರೊಂದಿಗೆ ಮಾತುಕತೆಗೆ ಇಳಿಯುವುದು. ಈ ಮಾತುಕತೆ ಮೋನೋಲಾಗ್ ಅಥವಾ ಸ್ವಗತವಾಗಿರಬಾರದು. ನಾವುಗಳು ಹೊಸದೊಂದು ಭಾಷೆಯನ್ನು ಕಲಿಯಲು ಮುಕ್ತರಾಗಿರಬೇಕು, ಹೊಸದೊಂದು ಸಂವೇದನೆಯನ್ನು ಅನುಭವಿಸಲು ಇಚ್ಛುಕರಾಗಿರಬೇಕು ಹಾಗೂ ಜ್ಞಾನದ ಇತರೆ ಸ್ವರೂಪಗಳ ಬಗ್ಗೆ ಗೌರವ ಹೊಂದಿರಬೇಕು. ಇದುವೇ ಗಾಂಧಿಯ ಮಾರ್ಗ, ಒಬ್ಬ ವಿಮರ್ಶಾತ್ಮಕ ಆಂತರ್ಯದವಳ/ನ ಮಾರ್ಗ. ಮೂರನೇಯ ಆಯ್ಕೆಯೂ ಒಂದಿದೆ: ಹೊಸ ಜನರನ್ನು ಆಯ್ಕೆ ಮಾಡುವುದು.
ಬನ್ನಿ, ಆಯ್ಕೆ ಮಾಡುವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...