Homeಮುಖಪುಟಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

- Advertisement -
- Advertisement -

ಬನ್ನಿ ನಮ್ಮೆದುರಿಗಿರುವ ವಾಸ್ತವವನ್ನು ಎದುರಿಸುವ. ಶಬರಿಮಲದಲ್ಲಿ ನಮ್ಮ ಸಂವಿಧಾನಾತ್ಮಕ ಆದೇಶ ಸೋತಿದೆ. ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.
ಸುಲಭವಾದ, ನಮಗೆ ಅನುಕೂಲಕರವಾದ ಉತ್ತರಗಳನ್ನು ಹುಡುಕುವುದನ್ನು ಬಿಟ್ಟುಬಿಡುವ. ಹೌದು, ಬಿಜೆಪಿಯ ಬೆಂಬಲದೊಂದಿಗೆ, ಈ ಜನಪ್ರಿಯ ಪ್ರತಿಭಟನೆಯನ್ನು ಹಿಂದುತ್ವದ ಕಟ್ಟಾ ಬೆಂಬಲಿಗರಿಂದ ಆಯೋಜಿಸಲಾಗಿತ್ತು. ಹೌದು, ಕಾಂಗ್ರೆಸ್ ಮೃದು ಹಿಂದುತ್ವದ ನೀತಿಯನ್ನನುಸರಿಸಿತು, ಮೊದಲ ಬಾರಿಗೇನೂ ಅಲ್ಲ. ಹೌದು, ಆಡಳಿತ ಪಕ್ಷ ಸಿಪಿಐ(ಎಮ್) ಜನಪ್ರಿಯ ಭಾವನೆಗಳ ಎದುರಿಗೆ ಓಲಾಡುವಂತಾಯಿತು. ಆದರೆ, ಇವರ ಬಾಗಿಲಿಗೇ ಎಲ್ಲಾ ಅಸಮಾಧಾನವನ್ನು ತೂರುವುದು ನಿರರ್ಥಕ. ದಯವಿಟ್ಟು ಜನರ ಮನಃಸ್ಥಿತಿ ಮತ್ತು ಅವರ ವೋಟುಗಳನ್ನು ಹಿಂಬಾಲಿಸಿ. ನಿಜವಾದ ಪ್ರಶ್ನೆಯೇನೆಂದರೆ: ಜನರ ಮನಃಸ್ಥಿತಿ ಸಂವಿಧಾನಾತ್ಮಕ ಆದೇಶಕ್ಕೆ ತದ್ವಿರುದ್ಧವೇಕಿತ್ತು?
ತಮಾಷೆ ಮಾಡೋದನ್ನು ಬಿಟ್ಟುಬಿಡುವ: ನ್ಯಾಯಾಲಯದ ಒಂದು ‘ಶ್ರದ್ಧೆ ವಿರೋಧಿ’ ಆದೇಶವನ್ನು ಕೇರಳದಲ್ಲಿ, ಅದೂ ಜಗತ್ತಿನಲ್ಲಿ ಉಳಿದುಕೊಂಡಿರುವ ಕೆಲವೇ ಕಲವು ಸ್ಟಾö್ಯಲಿನಿಸ್ಟ್ ಪಕ್ಷದ ಆಡಳಿತದಲ್ಲಿಯೇ ಇಂತಹ ಆದೇಶವನ್ನು ಜಾರಿಗೊಳಿಸಲು ಆಗಲಿಲ್ಲ ಎಂದಲ್ಲಿ ಬೇರೆಡೆಯಂತೂ ಸಾಧ್ಯವೇ ಇಲ್ಲ. ನಿಜ, ಇಂಥದ್ದೆÃ ಆದೇಶವನ್ನು ಹಾಜಿ ಅಲಿ ದರ್ಗಾ ಪ್ರಕರಣದಲ್ಲಿ ಸಮುದಾಯದ ಭಾವನೆಗಳ ವಿರುದ್ಧವಾಗಿದ್ದರೂ ಜಾರಿಗೊಳಿಸಲಾಗಿತ್ತು. ಆದರೆ ಒಂದು ‘ಜಾತ್ಯತೀತ’ ಆಡಳಿತವಿದ್ದಾಗ ಹಾಗೆ ಆಗಲು ಸಾಧ್ಯವಿತ್ತೆ? ಶಾ ಬಾನೊ ಪ್ರಕರಣವನ್ನು ನಾವು ಮರತಿದ್ದೆÃವೆಯೇ? ಸಿಖ್ ಮತಶ್ರದ್ಧೆಯ ಹೆಸರಿನಲ್ಲಿ ಎಸ್‌ಜಿಪಿಸಿ ತನ್ನ ನ್ಯಾಯಬಾಹಿರ ಕ್ರಮಗಳನ್ನು ಮುಂದುವರೆಸಿರಲಿಲ್ಲವೇ?
ಇದನ್ನು ನೈತಿಕತೆಯ ಪ್ರಶ್ನೆಯಾಗಿಸಿ ನಮ್ಮ ಶಕ್ತಿಗಳನ್ನು ವ್ಯಯಿಸುವುದು ಬೇಡ. ಹೌದು ಈ ವೈಫಲ್ಯಗಳನ್ನು ಖಂಡಿತವಾಗಿಯೂ ಖಂಡಿಸುವ. ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನೆÃ ಉಲ್ಲಂಘಿಸುವಂತಾದರೆ ಒಂದು ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ನಡೆಸುವ ಹಕ್ಕನ್ನೆÃ ಕಳೆದುಕೊಂಡಂತೆ. ಆದರೆ, ಗೋಳಾಟ, ಅಸಮಾಧಾನ ಮತ್ತು ಕಟು ವಿರೋಧ ಇವ್ಯಾವುಗಳೂ ಆತ್ಮಾವಲೋಕನ ಮತ್ತು ಚಿಂತನೆಗೆ ಪರ್ಯಾಯಗಳಲ್ಲ. ಖಂಡನೆಗಿಂತ ಈ ಸನ್ನಿವೇಶ ಆಳವಾದ ಚಿಂತನೆಗೆ ಕರೆನೀಡುತ್ತದೆ. ಸಂವಿಧಾನಾತ್ಮಕ ನೈತಿಕತೆ ಮತ್ತು ಜನಾಭಿಪ್ರಾಯದ ನಡುವಿನ ಒಂದು ಸಂಘರ್ಷವನ್ನು ನಾವು ಹೇಗೆ ಸಮಾಲೋಚಿಸುತ್ತೆÃವೆ?
ಶೇಖರ್ ಗುಪ್ತ ಮಾಡಿದಂತೆ, ನ್ಯಾಯಾಲಯಕ್ಕೆ ಹೊಣೆ ಹೊರೆಸಿ ಈ ಕಠಿಣ ಪ್ರಶ್ನೆಯನ್ನು ಪಕ್ಕಕ್ಕೆ ಸರಿಸುವುದು ಬೇಡ. ಹೌದು ನ್ಯಾಯಾಂಗದ ಓವರ್‌ರೀಚ್ ನಮ್ಮ ವ್ಯವಸ್ಥೆಯ ಒಂದು ಸಮಸ್ಯೆ, ಆದರೆ ಈ ಪ್ರಕರಣದಲ್ಲಿ ಹಾಗನ್ನಲು ಆಗುವುದಿಲ್ಲ. ಪೂಜೆ ಆಗುವ ಒಂದು ಸಾರ್ವಜನಿಕ ಸ್ಥಳದಲ್ಲಿ ಸಮಾನವಾದ ಅವಕಾಶವನ್ನು ಕೋರಿ ಒಬ್ಬ ವ್ಯಕ್ತಿ ನ್ಯಾಯಾಲಯಕ್ಕೆ ತಲುಪಿದರೆ, ನ್ಯಾಯಾಧೀಶರು ಅಸಹಾಯಕತೆಯನ್ನು ತೋಡಿಕೊಳ್ಳಲಾಗುವುದಿಲ್ಲ, ಅದೂ ನಮ್ಮ ಸಂವಿಧಾನದಲ್ಲಿ ದೇವಸ್ಥಾನದ ಪ್ರವೇಶದ ಬಗ್ಗೆ ಸ್ಪಷ್ಟವಾಗಿ ನಮೂದಿಸಿರುವಾಗ. ಭಾರತೀಯ ಜಾತ್ಯತೀತತೆ ಫ್ರಾನ್ಸಿನ ಕಟ್ಟುನಿಟ್ಟಾದ ತಟಸ್ಥ ಧೋರಣೆಯನ್ನು ಅನುಸರಿಸುವುದಿಲ್ಲ. ಧಾರ್ಮಿಕ ವಿಷಯಗಳಲ್ಲಿ ತತ್ವಾಧಾರಿತ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮತ್ತು ಅಪೇಕ್ಷಿಸುವ ‘ತತ್ವಾಧಾರಿತ ಅಂತರ’ಕ್ಕೆ ನಮ್ಮ ಸಂವಿಧಾನ ಅನುವು ಮಾಡಿಕೊಡುತ್ತದೆ ಎಂದು ರಾಜೀವ್ ಭಾರ್ಗವ್ ಹೇಳಿದ್ದು ಸರಿಯಾಗಿದೆ.
ಈಗ ನೇರವಾಗಿ ವಿಷಯಕ್ಕೆ ಬರುವ. ದುಃಖಕರ ಮತ್ತು ಅಪ್ರಿಯವಾದ ವಾಸ್ತವವೇನೆಂದರೆ, ಈ ಲಿಬರಲ್ ಆದ ಸಂವಿಧಾನಾತ್ಮಕ ಆದೇಶ ಜನಾಭಿಪ್ರಾಯದೊಂದಿಗೆ ಮೇಳೆ ಆಗಿರಲಿಲ್ಲ, ಆಗಿಲ್ಲ. ಸುಪ್ರಿÃಮ್ ಕೋರ್ಟಿನ ನ್ಯಾಯಾಧೀಶರ ಮತ್ತು ಭಾರತದ ಲಿಬರಲ್ ಚಿಂತಕರ ನೈತಿಕ ಸಂವೇದನಗಳಿಗೂ ಹಾಗೂ ಒಬ್ಬ ಅಂiÀÄ್ಯಪ್ಪ ಸ್ವಾಮಿಯ ಸಾಮಾನ್ಯ ಭಕ್ತನ ನೈತಿಕ ಸಂವೇದನೆಗಳೊಂದಿಗೆ ಸಂಬಂಧವಿಲ್ಲದಿರುವುದು ಸ್ಪಷ್ಟ. ಸಾಮಾನ್ಯ ಭಾರತೀಯರಿಗೆ ನಮ್ಮ ಸಂವಿಧಾನಕ್ಕೆ ಅತಿ ಹಚ್ಚಿನ ಆದರೆ ಅಮೂರ್ತವಾದ ಮನ್ನಣೆಯಿದೆ. ಆದರೆ ಸಂವಿಧಾನಾತ್ಮಕ ತತ್ವಗಳನ್ನು ನಿರ್ದಿಷ್ಟವಾಗಿ ಸ್ಪಷ್ಟಪಡಿಸಿದ ಸಂದರ್ಭಗಳಲ್ಲಿ ಅನೇಕ ಸಲ ಜನರು ಅದರ ವಿರುದ್ಧ ಹೋಗುವ ಸಾಧ್ಯತೆಗಳಿವೆ.
ಈ ಕಟುಸತ್ಯದಿಂದ ಪಲಾಯನ ಮಾಡುವುದು ಬೇಡ. ಇದನ್ನು ನಾನು 1992ರಲ್ಲಿ ಬಾಬರಿ ಮಸೀದಿಯ ಧ್ವಂಸವಾದ ಸಮಯದಲ್ಲಿ ಅರಿತೆ. ಆಗ ನಾನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದೆ, ಚಂಡೀಗಡದ ಒಂದು ದುಡಿಯುವ ಜನರ ವಸತಿಪ್ರದೇಶದಲ್ಲಿ ನಾನು ವಾಸಿಸುತ್ತಿದ್ದೆ. ಅಂiÉÆÃಧ್ಯೆಯ ಪ್ರಕರಣದಲ್ಲಿ ಸುಪ್ರಿÃಮ್ ಕೋರ್ಟಿನ ಆದೇಶವನ್ನು ಉಲ್ಲಂಘಿಸಿದರ ಬಗ್ಗೆ ನಾನು ನನ್ನ ನೈತಿಕ ಅಸಮಾಧಾನವನ್ನು ವ್ಯಕ್ತಪಡಿಸಿದಾಗ, ನನ್ನ ನೆರೆಯವರೊಬ್ಬರು ಕೇಳಿದ್ದು ‘ಪ್ರೊಫೆಸರ್ ಸಾಬ್, ರಾಮನ ಮಂದಿರ ಅಂiÉÆÃಧ್ಯೆಯಲ್ಲೆÃ ಕಟ್ಟಬೇಕಲ್ವಾ, ಮತ್ತೆÃನು ಇಂಗ್ಲೆಂಡಿನಲ್ಲಿ ಕಟ್ಟಬೇಕೇ?” ಆಗ ನಾನು ನನ್ನ ಪಾಠ ಕಲಿತೆ. ಆದರೆ ಭಾರತದ ಲಿಬರಲ್, ಪ್ರಗತಿಪರರು ಇನ್ನೂ ಆ ಪಾಠ ಕಲಿತಂತಿಲ್ಲ.
ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವ ಧೈರ್ಯವನ್ನು ಬೆಳೆಸಿಕೊಳ್ಳುವ: ಇಂಗ್ಲಿÃಷ್ ಮಾತನಾಡುವ ನೆಲದೊಂದಿಗಿನ ಬೇರನ್ನು ಕಳಚಿಕೊಂಡಿರುವ ಭಾರತದ ಎಲೀಟ್ ಜನರ ಬಗ್ಗೆ ಇರುವ ಸ್ಟಿರಿಯೋಟೈಪ್‌ನಲ್ಲಿ ಸತ್ಯಾಂಶವಿದೆ. ಭಾರತದ ಲಿಬರಲ್ ಜನಗಳು ಒಂದು ಪರಕೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಮುಂಚೂಣಿಯಲ್ಲಿರುವ ಯಾವುದೇ ಭಾರತೀಯ ಚಿಂತಕನಿಗೆ ಕೇಳಿ : ಇಂಗ್ಲಿÃಷಿನಲ್ಲಿರಿದ, ಯಾವುದೇ ಒಂದು ಭಾರತೀಯ ಭಾಷೆಯಲ್ಲಿಯ ಪುಸ್ತಕವನ್ನು ಕೊನೆಯ ಸಲ ಓದಿದ್ದು ಯಾವಾಗ ಅಥವಾ ಇಂಗ್ಲಿÃಷ್ ಬಿಟ್ಟು ಯಾವುದೇ ಒಂದು ಭಾರತೀಯ ಭಾಷೆಯಲ್ಲಿ ಏ4 ಸೈಜಿನ ಒಂದು ಪುಟದ ಎರಡೂ ಬದಿಗಳಲ್ಲಿ ಕೊನೆಯ ಸಲ ಬರೆದಿದ್ದು ಯಾವಾಗ? ಭಾರತದ ಧಾರ್ಮಿಕ ಪರಂಪರೆಗಳ ವಿಷಯ ಬಂದಾಗ ಇವರುಗಳು ಕೆಲವು ಸಲ ತಾತ್ಸಾರ ಹೊಂದಿದವರಾಗಿದ್ದರೆ ಅನೇಕ ಸಲ ಅನಕ್ಷರಸ್ಥರಾಗಿರುತ್ತಾರೆ. ಉಪನಿಷತ್ತುಗಳು ಮತ್ತು ಪುರಾಣಗಳ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಎಷ್ಟು ಜನ ವಿದ್ಯಾವಂತ ಭಾರತೀಯರು ಹೇಳಬಲ್ಲರು? ಅಥವಾ ಶರಿಯತ್ ಮತ್ತು ಹದೀಸ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ. ಹಾಗಾಗಿ ಇವರಿಂದ ಭಾರತೀಯರು ನೈತಿಕ ಪಾಠಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇವರುಗಳು ವಿಮರ್ಶೆ ಮತ್ತು ಸುಧಾರಣೆಯನ್ನು ಸಂಪೂರ್ಣವಾಗಿ ನಿರಾಕರಿಸದಿದ್ದರೂ ಅದು ಒಂದು ತೀರ ಭಿನ್ನವಾದ ಮತ್ತು ಪ್ರತಿಕೂಲವಾದ ನುಡಿಗಟ್ಟಿನಲ್ಲಿ ಬಂದಾಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಲ್ಯಾಟಿನ್ ಅಮೇರಿಕದಲ್ಲಿ ಕ್ರಾಂತಿಯನ್ನು ಪ್ರತಿಪಾದಿಸಲು ಬೈಬಲ್ ಉದಾಹರಿಸಿ ಅಲ್ಲಿನ ವಿಮೋಚನೆಯ ಧರ್ಮಶಾಸ್ತçವನ್ನು ಬಳಸಲಾಗುತ್ತದೆ. ಆದರೆ, ಹೊಸ ನೈತಿಕ (ಎಥಿಕಲ್) ಚೌಕಟ್ಟುಗಳನ್ನು ಎಳೆಯಲು ಮರ್ಯಾದಾ ಪುರುಷೋತ್ತಮನನ್ನು ಅರ್ಥೈಸಿಕೊಳ್ಳುವ ಹಾಗೂ ಉದಾಹರಿಸುವ ಲಿಬರಲ್ ಚಿಂತಕರು ನಮ್ಮಲ್ಲೆÃಕಿಲ್ಲ?
ಹೆಚ್ಚಿನ ಸೂಕ್ಷö್ಮತೆಗೆ ಹೋಗುವ ಅಗತ್ಯವಿಲ್ಲ. ಭಾರತದಲ್ಲಿ ಲಿಬರಲಿಸಂಗಾಗಿ ಯಾವುದೇ ರಾಜಕೀಯ ಕ್ಷೆÃತ್ರವಿಲ್ಲ; ಮೆಟ್ರೊÃಪಾಲಿಟನ್ ಎಂದು ಕರೆದುಕೊಳ್ಳುವ ಭಾರತದ ದ್ವಿÃಪದ ಹೃದಯದಲ್ಲೂ ಇಲ್ಲ. ಲಿಬರಲ್ ಮತ್ತು ಸಂವಿಧಾನಾತ್ಮಕ ಆದೇಶವನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೇಲೆಯೇ ಅವಲಂಬಿಸುವುದು ಸರಿಯಲ್ಲ. ಕಟು ವಾಸ್ತವವೇನೆಂದರೆ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳು ಜನಾಭಿಪ್ರಾಯವನ್ನು ಲೆಕ್ಕಿಸದೇ ತಮ್ಮ ತೀರ್ಪನ್ನು ಕೆಲವು ಸಲ ನೀಡಬಹುದು. ಆದರೆ ತುಲನಾತ್ಮಕವಾಗಿ ನೋಡಿದಾಗ, ಜನಪ್ರಿಯ ಭಾವನೆಗಳ ಹರವಿನೊಂದಿಗೇ ನ್ಯಾಯಾಲಯಗಳು ಹೋಗುವ ಸಾಧ್ಯತೆಗಳೇ ಹೆಚ್ಚು. ಸದ್ಯದ ಇದೇ ಪ್ರವೃತ್ತಿ ಮುಂದುವರೆದಲ್ಲಿ, ನಮ್ಮ ಗಣರಾಜ್ಯವನ್ನು ಇದೇ ಗಣರಾಜ್ಯದಿಂದಲೇ ವಿಫಲವಾಗಿಸಬಹುದಾದ ನಿಜವಾದ ಆತಂಕ ನಮ್ಮೆದುರಿಗಿದೆ.
ನಮ್ಮೆದುರಿಗಿರುವ ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳುವ. ಒಂದು, ಜನಾಭಿಪ್ರಾಯದ ಹರವಿನೊಂದಿಗೆ ಹೋಗುವುದು, ಅದು ನಮ್ಮನ್ನೆಲ್ಲಿಗೆ ಕೊಂಡೊಯ್ಯುತ್ತದೋ ಅಲ್ಲಿಗೆ ಹೋಗುವುದು ಒಂದು ಆಯ್ಕೆ. ಅದು ಒಂದು ಅಪಾಯಕಾರಿ ಜಾರುಬಂಡೆ. ಇನ್ನೊಂದು ಆಯ್ಕೆ; ಜನಾಭಿಪ್ರಾಯವನ್ನು ಬದಲಿಸುವಂತೆ ಜನರೊಂದಿಗೆ ಮಾತುಕತೆಗೆ ಇಳಿಯುವುದು. ಈ ಮಾತುಕತೆ ಮೋನೋಲಾಗ್ ಅಥವಾ ಸ್ವಗತವಾಗಿರಬಾರದು. ನಾವುಗಳು ಹೊಸದೊಂದು ಭಾಷೆಯನ್ನು ಕಲಿಯಲು ಮುಕ್ತರಾಗಿರಬೇಕು, ಹೊಸದೊಂದು ಸಂವೇದನೆಯನ್ನು ಅನುಭವಿಸಲು ಇಚ್ಛುಕರಾಗಿರಬೇಕು ಹಾಗೂ ಜ್ಞಾನದ ಇತರೆ ಸ್ವರೂಪಗಳ ಬಗ್ಗೆ ಗೌರವ ಹೊಂದಿರಬೇಕು. ಇದುವೇ ಗಾಂಧಿಯ ಮಾರ್ಗ, ಒಬ್ಬ ವಿಮರ್ಶಾತ್ಮಕ ಆಂತರ್ಯದವಳ/ನ ಮಾರ್ಗ. ಮೂರನೇಯ ಆಯ್ಕೆಯೂ ಒಂದಿದೆ: ಹೊಸ ಜನರನ್ನು ಆಯ್ಕೆ ಮಾಡುವುದು.
ಬನ್ನಿ, ಆಯ್ಕೆ ಮಾಡುವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...