Homeಅಂಕಣಗಳುಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

ಗಟ್ಟಿತನವಿಲ್ಲದ ಸೆಕ್ಯುಲರಿಸಂನಿಂದ ಸಮ್ಮಿಶ್ರ ಸರ್ಕಾರ ಪರ್ಯಾಯವಾಗಲಾರದು

- Advertisement -
- Advertisement -

ಬೆಂಗಳೂರು ಸಮೀಪದ ಜಿಲ್ಲೆಯ ತಾಲೂಕು. ಆರೆಸ್ಸೆಸ್ ಮತ್ತು ಅದರ ಪರಿವಾರ ಅಲ್ಲಿ ಸಕ್ರಿಯವಾಗಿಲ್ಲ. ಬಿಜೆಪಿ ಎಂದೂ ಗೆದ್ದಿಲ್ಲ. ಮುಸ್ಲಿಮರು ಹೆಚ್ಚಲ್ಲದಿದ್ದರೂ ದೇಶದ ಸರಾಸರಿಯ ಪ್ರಮಾಣದಲ್ಲಿ ಅಲ್ಲೂ ಇದ್ದಾರೆ. ಟಿಪ್ಪು ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸುವ ಮುನ್ನ ತಹಸೀಲ್ದಾರರು ಸಭೆ ಕರೆದಿದ್ದಾರೆ. ನಿಯಮಗಳ ಪ್ರಕಾರ ಅವರು ರಾಷ್ಟಿçÃಯ ಹಬ್ಬಗಳ ಸಮಿತಿಯ ಅಧ್ಯಕ್ಷರು. ಇಂತಹ ಎಲ್ಲಾ ಜಯಂತಿಗಳಲ್ಲೂ ಮಾಡುವಂತೆ, ಯಾರ ಜಯಂತಿಯನ್ನು ಆಚರಿಸಲಾಗುತ್ತದೋ, ಆ ವ್ಯಕ್ತಿಯು ಯಾವ ಜಾತಿ ಅಥವಾ ಧರ್ಮಕ್ಕೆ ಸೇರಿದವರೆಂದು ಹೇಳಲಾಗುತ್ತದೋ ಅವರನ್ನು ಹೆಚ್ಚಾಗಿ ಕರೆಯಲಾಯಿತು. ಹಾಗಾಗಿ ಮುಸ್ಲಿಮರೂ ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ತಹಸೀಲ್ದಾರರು ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಹೇಳಿದ್ದಿಷ್ಟು. ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡೋಣ; ಮೆರವಣಿಗೆ ಮಾಡಲು ಅಥವಾ ಮೈದಾನದಲ್ಲಿ ಮಾಡಲು ಈ ಸಾರಿ ಅನುಮತಿ ನೀಡಬಾರದೆಂದು ಮೇಲಿನಿಂದ ಆದೇಶ ಬಂದಿದೆ. ಇದನ್ನು ಸಭೆಯಲ್ಲಿದ್ದ ಮುಸ್ಲಿಮರು ಒಪ್ಪಲಿಲ್ಲ. ‘ಬೇರೆ ಎಲ್ಲಾ ಜಯಂತಿಗಳಿಗಾದರೆ ಈ ರೀತಿ ಮೆರವಣಿಗೆ ಮಾಡಲು ಅವಕಾಶ ಕೊಡುತ್ತಿÃರಿ, ಟಿಪ್ಪು ಜಯಂತಿಗೆ ಏಕೆ ಕೊಡುವುದಿಲ್ಲ?’ವೆಂದು ಕೇಳಿದರು. ಕೇಳಿದ್ದರಲ್ಲಿ ತಪ್ಪೆÃನಿರಲಿಲ್ಲ. ಆದರೆ, ಈ ಸಾರಿ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ತಹಸೀಲ್ದಾರರು ಇರಲಿಲ್ಲ. ಇದು ಮೇಲಿನಿಂದ ಬಂದ ಆದೇಶವಾಗಿತ್ತು. ಅಲ್ಲಿಗೂ ಇನ್ನೊಂದು ಮಾತನ್ನು ಹೇಳಿದರು, ‘ಒಂದು ವೇಳೆ ಈ ಆದೇಶದಲ್ಲಿ ಬದಲಾವಣೆ ಬಂದು, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಮೆರವಣಿಗೆ ಇತ್ಯಾದಿಗಳ ವಿಚಾರದಲ್ಲಿ ಸ್ಥಳೀಯವಾಗಿಯೇ ತೀರ್ಮಾನ ತೆಗೆದುಕೊಳ್ಳಬಹುದು ಎಂದಾದರೆ, ನಾವು ಖಂಡಿತವಾಗಿ ಅವಕಾಶ ಮಾಡಿಕೊಡುತ್ತೆÃವೆ’. ಸರ್ಕಲ್ ಇನ್ಸ್ಪೆಕ್ಟರ್ ಸಹಾ ದನಿಗೂಡಿಸಿದರು.
ಇದನ್ನು ಒಪ್ಪದ ಮುಸ್ಲಿಂ ಮುಖಂಡರು ಸಭಾತ್ಯಾಗ ಮಾಡಿದರಲ್ಲದೇ, ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿಯೇ ಹೋದರು. ಅಷ್ಟು ಹೊತ್ತಿಗೆ ಮಧ್ಯಮ ಪ್ರಮಾಣದ ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ಮಾಡುವುದೆಂದು ತೀರ್ಮಾನವಾಗಿತ್ತು ಮತ್ತು ಭಾಷಣ ಮಾಡಲು ಭಾಷಣಕಾರರನ್ನೂ ನಿಗದಿ ಮಾಡಲಾಗಿತ್ತು. ಈ ಸದ್ಯ ಎಲ್ಲಾ ಮಹಾಪುರುಷರೂ, ಮಹಿಳೆಯರೂ ಆಯಾ ಜಾತಿ ಅಥವಾ ಧರ್ಮಕ್ಕೆ ಸೀಮಿತರು. ಹಾಗಾಗಿ ಜಾತ್ಯಸ್ಥರೇ ಕೈಬಿಟ್ಟ ಮೇಲೆ ಟಿಪ್ಪು ಅನಾಥ.
ಆ ತಾಲೂಕಿನ ಶಾಸಕರು ಸಚಿವರಾಗಿದ್ದರಿಂದ, ಅವರು ಜಿಲ್ಲಾ ಕೇಂದ್ರಕ್ಕೆ ಹೋದರು. ಹೀಗಾಗಿ ಅವರನ್ನು ನೋಡಲು ಅಥವಾ ಮೆಚ್ಚಿಸಲು ಬರಬಹುದಾದವರೂ ಕಾರ್ಯಕ್ರಮಕ್ಕೆ ಬರಲಿಲ್ಲ. ಅಲ್ಲಿನ ಸಂಘಪರಿವಾರದ ಗುಂಪೂ ದುರ್ಬಲವಾದ್ದರಿಂದ, ಗಲಭೆಯೆಬ್ಬಿಸಲು ಬರಬಹುದಾದವರೂ ಬರಲಿಲ್ಲ. ಕಾರ್ಯಕ್ರಮ ಆರಂಭದ ಸಮಯಕ್ಕೆ ಸಭಾಂಗಣದಲ್ಲಿ 30 ಜನರಿದ್ದರು. ತಹಸೀಲ್ದಾರರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಅವರು ಕ್ಷೆÃತ್ರ ಶಿಕ್ಷಣಾಧಿಕಾರಿಗಳನ್ನು ಕರೆದು, ಹತ್ತಿರದ ಯಾವುದಾದರೂ ಶಾಲೆಯಿಂದ ಮಕ್ಕಳನ್ನು ಕರೆಸಿರಿ ಎಂದರು. ಆದರೆ, ಅವರಿಗೆ ಹಿಂಜರಿಕೆ. ‘ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕರೆದಿದ್ದಾರೆ ಎಂದು ವಿವಾದವಾದರೆ?’ ಎಂಬುದು ಅವರ ಕಾರಣ. ಅಂದರೆ, ಟಿಪ್ಪು ಸುಲ್ತಾನ್ ನಾಡು ಕಂಡ ಹೆಮ್ಮೆಯ ದೊರೆ ಎಂದು ಪಠ್ಯಪುಸ್ತಕದಲ್ಲಿ ಇನ್ನೂ ಉಳಿದಿರಬಹುದಾದರೂ, ಸರ್ಕಾರವೇ ಟಿಪ್ಪು ಜಯಂತಿಯನ್ನು ಮಾಡುತ್ತಿದ್ದರೂ, ಮಕ್ಕಳನ್ನು ಕರೆದರೆ ‘ಇದು ಟಿಪ್ಪು ಜಯಂತಿ’ ಎನ್ನುವ ಕಾರಣಕ್ಕೆÃ ವಿವಾದವಾಗುತ್ತದೆಂಬುದು ಅವರ ಭಯ.
ಅಂತಿಮವಾಗಿ ಸಭಾಂಗಣದೊಳಗೆ ಒಂದಷ್ಟು ಜನ ಮುಸ್ಲಿಮರು ಬಂದರು. ಪುರಸಭೆಯ ಅಧ್ಯಕ್ಷ ಮುಸ್ಲಿಮರಾಗಿದ್ದುದರಿಂದ ಅವರು ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡು ಕೆಲವರಾದರೂ ಬರಬೇಕೆಂದು ಶತಪ್ರಯತ್ನ ಹಾಕಿದ್ದರು! ಅಸಲು ಸಮಸ್ಯೆ ಏನಾಗಿತ್ತೆಂದರೆ, ಈ ಅಧ್ಯಕ್ಷರಿಗಿಂತ ಮುಂಚೆ ಅಧ್ಯಕ್ಷರಾಗಿದ್ದವರೂ ಮುಸ್ಲಿಮರೇ. ತನ್ನ ನಂತರ ಇನ್ನೊಬ್ಬ ನಾಯಕ ತನ್ನದೇ ಸಮುದಾಯದಲ್ಲಿ ಮೇಲೆ ಬಂದು, ಆತನ ವೇದಿಕೆಯ ಮೇಲೆ ವಿರಾಜಮಾನನಾಗಿರುವಾಗ ಆ ಕಾರ್ಯಕ್ರಮ ಯಶಸ್ವಿಯಾಗಬಾರದೆಂಬುದು ವಿರೋಧಕ್ಕೆ ಅಸಲೀ ಕಾರಣವಾಗಿತ್ತು. ಮೆರವಣಿಗೆ ಕೇವಲ ನೆಪವಾಗಿತ್ತು. ಹೊಸದಾಗಿ ಅಧ್ಯಕ್ಷರಾಗಿದ್ದ ವ್ಯಕ್ತಿಗಿಂತ ಪ್ರಭಾವಿಯಾಗಿದ್ದ ಹಿಂದಿನ ಅಧ್ಯಕ್ಷ ಮಿಕ್ಕವರನ್ನು ತಡೆದಿದ್ದರು!
ಇಂದು ಟಿಪ್ಪು ಸುಲ್ತಾನರ ಜಯಂತಿ ಹೀಗೂ ನಡೆಯುತ್ತಿದೆ. ನಾಡಿಗೆ ನಾಡೇ ಹೆಮ್ಮೆ ಪಡಬೇಕಿದ್ದ ಧೀಮಂತ ಆಡಳಿತಗಾರನೊಬ್ಬನನ್ನು, ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತಗೊಳಿಸುವುದು. ಆ ಕಾರಣಕ್ಕೆÃ ಜಯಂತಿಯನ್ನು ಆಚರಿಸುವುದು ಅಥವಾ ವಿರೋಧಿಸುವುದು. ತಮ್ಮದೇ ಸ್ವಂತ ಹಿತಾಸಕ್ತಿಯು ಮುಂದೆ ಬರುವುದಾದಲ್ಲಿ, ಆ ಜಾತಿಯವರೂ ಕಾರ್ಯಕ್ರಮಕ್ಕೆ ತಿರಸ್ಕಾರ ತೋರುವುದು ಇದು ವಿದ್ಯಮಾನ.
ಇದಕ್ಕೆ ಸ್ವತಃ ಮುಖ್ಯಮಂತ್ರಿಯವರೇ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಮೊದಲು ಯಾವುದೇ ಕಾರಣ ನೀಡದೇ, ರಾಜ್ಯ ಮಟ್ಟದ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲೂ ತಮ್ಮ ಹೆಸರಿಲ್ಲದಂತೆ ಗೈರುಹಾಜರಿಯ ತೀರ್ಮಾನ ಘೋಷಿಸಿದ್ದರು. ನಂತರ ಇದೊಂದು ಸುದ್ದಿಯಾದಾಗ ಅನಾರೋಗ್ಯದ ಸ್ಪಷ್ಟಿÃಕರಣ ಕೊಟ್ಟರು. ಇದಲ್ಲದೇ ವಾಲ್ಮಿÃಕಿ ಜಯಂತಿ ಕಾರ್ಯಕ್ರಮಕ್ಕೂ ಹೋಗಿರಲಿಲ್ಲ, ಈಗ ಹೋದರೆ ಬೇರೆ ಅರ್ಥ ಬರುತ್ತದೆಂಬ ಸುದ್ದಿಯನ್ನೂ ತೇಲಿಬಿಡಲಾಯಿತು. ಇದೇ ಮುಖ್ಯಮಂತ್ರಿಯವರು ಕೆಂಪೇಗೌಡ ಜಯಂತಿ ಸರ್ಕಾರದ ವತಿಯಿಂದ ಆದಾಗ ಬೆಂಗಳೂರಿನಲ್ಲೂ (ಜೂನ್ 27) ಭಾಗವಹಿಸಿದ್ದರು, (ಆಗಸ್ಟ್ 11ರಂದು) ಒಕ್ಕಲಿಗರ ಸಂಘದಿಂದ ಚಿಕ್ಕಬಳ್ಳಾಪುರದಲ್ಲಿ ನಡೆದಾಗಲೂ ಭಾಗವಹಿಸಿದ್ದರು.
ದೇಶದ ಇಂದಿನ ಸ್ಥಿತಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಭಾಗವಹಿಸದೇ ಇದ್ದರೆ ಅದು ಯಾವ ಸಂದೇಶ ಕೊಡುತ್ತದೆಂಬುದು ಅವರಿಗೆ ಗೊತ್ತಿಲ್ಲದೇ ಏನಿಲ್ಲ. ಅಂತಹದೊಂದು ಸಂದೇಶ ಹೋಗಲಿ ಎಂಬ ಬಯಕೆಯೂ ಅವರದ್ದಿರಬಹುದು. ಇದು ಕೇವಲ ಜೆಡಿಎಸ್‌ನ ಸಮಸ್ಯೆಯಲ್ಲ. ಕಾಂಗ್ರೆಸ್ ನಾಯಕರಲ್ಲಿ ಟಿಪ್ಪು ಸುಲ್ತಾನರ ಮಹತ್ವವನ್ನು ಅರಿತು ಅದನ್ನು ಸಮರ್ಥಿಸಿಕೊಳ್ಳಬಲ್ಲವರು ಬಹಳ ಕಡಿಮೆ. ಹೇಗೂ ಮುಸ್ಲಿಮರು ತಮಗೇ ಓಟು ಹಾಕುತ್ತಾರೆಂಬ ಭಾವನೆ ಅವರದ್ದಿದ್ದರೆ, ಬಹುಶಃ ಇನ್ನು ಮುಂದೆ ಮುಸ್ಲಿಮರು ತಮಗೆ ಓಟು ಹಾಕಲಾರರು ಎಂದು ಜೆಡಿಎಸ್ ಭಾವಿಸಿದಂತಿದೆ. ಟಿಪ್ಪು ಕುರಿತು ಸಂಘಪರಿವಾರದ ಫೇಕ್ ಸ್ಟೊÃರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ, ಬಹುಶಃ ಟಿಪ್ಪು ಸುಲ್ತಾನ್ ಆ ರೀತಿಯೂ ಇದ್ದಿರಬಹುದು ಎಂದು ಕಾಂಗ್ರೆಸ್ ನಾಯಕರಲ್ಲಿ ಹಲವರು ಭಾವಿಸಿರಲಿಕ್ಕೂ ಸಾಕು. ಇಂತಹ ಎಡಬಿಡಂಗಿತನವನ್ನು ಕಾಂಗ್ರೆಸ್ – ಜೆಡಿಎಸ್ ನಾಯಕರು ತೊರೆಯುವವರೆಗೂ ಅವರು ಬಿಜೆಪಿಗೆ ಸರಿಯಾದ ಪರ್ಯಾಯವಾಗಲು ಸಾಧ್ಯವೇ ಇಲ್ಲ.
ಇಂತಹುದೇ ಇನ್ನೊಂದು ಸುದ್ದಿ ಈ ವಾರ ಬೆಳಕಿಗೆ ಬಂದಿದೆ. ಗೌರಿ ಲಂಕೇಶರ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್‌ಐಟಿಗೆ ಆದ ಖರ್ಚಿನ ಬಾಕಿಯನ್ನು ಸರ್ಕಾರವಿನ್ನೂ ಪಾವತಿ ಮಾಡಿಲ್ಲವೆಂದು ವರದಿಯಾಗಿದೆ. ಬಹುಶಃ ಹಣ ಪಾವತಿಯಾಗಿಲ್ಲವೆಂಬ ಕಾರಣಕ್ಕೆ ಪೊಲೀಸ್ ಇಲಾಖೆಯು ತನಿಖೆಯನ್ನೆÃನೂ ನಿಲ್ಲಿಸುವುದಿಲ್ಲ ಅಥವಾ ಬೇರೆ ದಿಕ್ಕಿಗೆ ಹೋಗುವುದಿಲ್ಲ. ಆದರೆ, ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಡಚಣೆಯಾಗುವುದರಲ್ಲಂತೂ ಸಂದೇಹವಿಲ್ಲ. ಈ ಕುರಿತ ಸತ್ಯಾಸತ್ಯತೆಯನ್ನು ಸರ್ಕಾರ, ಇಲಾಖೆ ಜನರ ಮುಂದಿಡಬೇಕು. ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...