Homeಅಂಕಣಗಳುಸ್ವಾತಂತ್ರ್ಯ ಸಿಗಲು ನೆಹರು ಕೊಡುಗೆಯೇ ಇಲ್ಲವೇ ಮೋದೀಜಿ?

ಸ್ವಾತಂತ್ರ್ಯ ಸಿಗಲು ನೆಹರು ಕೊಡುಗೆಯೇ ಇಲ್ಲವೇ ಮೋದೀಜಿ?

- Advertisement -
- Advertisement -

ಮಿಥ್ಯ: ಸ್ವಾತಂತ್ರಯ ಸಿಗಲು ನೆಹರೂ ಕೊಡುಗೆ ಏನಿಲ್ಲ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿದ್ದರು. ಬಿಜೆಪಿಯ ಐಟಿ ಸೆಲ್ ಕೂಡ ನೆಹರು ಕುರಿತು ಸಾಕಷ್ಟು ಫೇಕ್ ಸ್ಟೋರಿಗಳನ್ನು ಹರಡುತ್ತಲೇ ಬಂದಿದೆ.

ಸತ್ಯ: ಇವತ್ತು ಖರೀದಿಸಿದ ಮಾಧ್ಯಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು, ಜವಾಹರಲಾಲ್ ನೆಹರೂ ಕುರಿತು ಏನೆಲ್ಲ ಸುಳ್ಳುಗಳನ್ನು ಹಬ್ಬಿಸಲು ಯತ್ನಿಸುತ್ತಿದ್ದರೂ, ನೆಹರೂ ಕೊಡುಗೆ ಈ ದೇಶಕ್ಕೆ ಅಪಾರ ಎಂಬುದನ್ನು ಅವರಿಂದ ಮುಚ್ಚಿಡಲಾಗುತ್ತಿಲ್ಲ. 1964ರಲ್ಲಿ ನೆಹರೂ ಮಡಿದಾಗ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ‘ಆಧುನಿಕ ಭಾರತದ ನಿಮ್ರಾತೃ’ ಎಂದು ಬಣ್ಣಿಸುತ್ತದೆ. ‘ದಿ ಎಕನಾಮಿಸ್ಟ್’ ಪತ್ರಿಕೆಯು ‘ನೆಹರೂ ಇಲ್ಲದ ಜಗತ್ತು’ ಎಂಬ ಕವರ್ಸ್ಟೋರಿಯನ್ನು ಪ್ರಕಟಿಸುತ್ತದೆ. ಆ ಹೊತ್ತಿಗಾಗಲೇ ನೆಹರೂ ತೃತೀಯ ರಾಷ್ಟ್ರಗಳಲ್ಲಿ ಹೊಸ ಭರವಸೆ ಮೂಡಿಸಿದ್ದರು.

ಸಂಸತ್ತಿನಲ್ಲಿ ಇಂತಹ ನೆಹರೂ ಕುರಿತು ಮಾತನಾಡುವ ನಮ್ಮ ದಿ ಗ್ರೇಟ್ ಪ್ರಧಾನ ಮಂತ್ರಿಯವರು, ‘ಸ್ವಾಂತಂತ್ರ್ಯ ಹೋರಾಟಕ್ಕೆ ನೆಹರೂ ಕೊಡುಗೆ ಏನಿಲ್ಲ’ ಎಂದು ಮೂರ್ಖನಂತೆ ಮಾತಾಡುತ್ತಾರೆ. ಹಾಗಾದರೆ ಮೋದಿಯವರ ಆದರ್ಶಗಳಾದ ಹೆಡಗೆವಾರ್, ಸಾವರ್ಕರ್, ಗೋಳ್ವಾಲ್ಕರ್-ಈ ತರಿವಳಿಗಳ ಕೊಡುಗೆ ಏನು? ಇವರು ಪುಟ್ಟಾಪೂರಾ ಬ್ರಿಟಿಷರ ಚೇಲಾಗಳಂತೆ ವರ್ತಿಸಿದ್ದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಅದಿರಲಿ, ಇವರ ಕುರಿತು ಮೋದಿ ಸಾಹೇಬರೇಕೆ ಮಾತೇ ಆಡಲ್ಲ? ಈ ತ್ರಿವಳಿಗಳನ್ನು ಆರೆಸ್ಸೆಸ್ ಆರಾಧಿಸುತ್ತದೆ, ಮೋದಿಗೂ ಕೂಡ ಈ ಮೂವರು ಆದರ್ಶರೇ. ಬಟ್, ಬಾಹ್ಯವಾಗಿ ಮೋದಿ ಎಂದೂ ಇವರ ಪರ ಮಾತಾಡುತ್ತಿಲ್ಲ. ಮಾತಾಡುವ ಧಮ್ಮೂ ಇಲ್ಲ. ಯಾಕೆಂದರೆ ಈ ಮೂವರೂ ಮೋದಿಯಷ್ಟೇ ದೇಶದ್ರೋಹಿಗಳಾಗಿದ್ದರು!

ಹೀಗಾಗಿ ಐದು ವರ್ಷಗಳಲ್ಲಿ ನೀವೇನು ಮಾಡಿದಿರಾ ಎಂಬ ಪ್ರಶ್ನೆಗೆ ಉತ್ತರಿಸುವ ಯೋಗ್ಯತೆಯನ್ನೇ ಕಳೆದುಕೊಂಡಿರುವ ಪ್ರಧಾನಿ, ನೆಹರೂ ಈ ದೇಶಕ್ಕೆ ಏನು ಮಾಡಿದರು, ಕಾಂಗ್ರೆಸ್ ಈ ದೇಶಕ್ಕೆ ಏನು ಮಾಡಿತು ಎಂದು ವಿಷಯಾಂತರ ಮಾಡುತ್ತಿದ್ದಾರೆ. ನೆಹರು ವ್ಯಕ್ತಿತ್ವವನ್ನು ಮಸುಕಾಗಿಸುವ ಉದ್ದೇಶದಿಂದಲೇ ಹಲವಾರು ಮಿಥ್ಯಗಳನ್ನು, ಮತ್ತೆ ಕೆಲವು ತಪ್ಪು ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಪಾಲು ಏನಿಲ್ಲ ಎಂಬುದು ತೀರಾ ಬಾಲಿಶತನದ ಹೇಳಿಕೆಯಷ್ಟೇ. 1921ರಿಂದ 1945ರ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕಾರಣಕ್ಕೆ ನೆಹರು 9 ಸಲ ಜೈಲಿಗೆ ತಳ್ಳಲ್ಪಡುತ್ತಾರೆ. 12 ದಿನಗಳಿಂದ ಹಿಡಿದು, 1041ಗಳ ಅವಧಿಯ ಜೈಲು ಶಿಕ್ಷೆ ಅನುಭವಿಸಿದರು. ಒಟ್ಟು 3,259 ದಿನಗಳನ್ನು ನೆಹರು ಜೈಲಿನಲ್ಲಿ ಕಳೆದರು. ಅಂದರೆ ತಮ್ಮ ಜೀವನದ ಒಂಭತ್ತು ವರ್ಷಗಳಷ್ಟು ಅವಧಿಯನ್ನು ನೆಹರು ಜೈಲಿನಲ್ಲೇ ಕಳೆದರು. ಜೈಲು ಶಿಕ್ಷೆಯನ್ನು ನೆಹರು ತಮ್ಮ ಓದಿಗೆ ಬಳಸಿಕೊಂಡರು. ಸಾಕಷ್ಟು ವೈವಿಧ್ಯಮಯ ಪುಸ್ತಕಗಳನ್ನು ಓದುತ್ತ ನಿಜವಾದ ಭಾರತದ ರೂಪುರೇಷೆ ಹೇಗಿರಬೇಕೆಂಬುದನ್ನು ಅರಿಯುತ್ತ ಹೋದರು. ಫೆಬ್ರುವರಿ 1934 ಮತ್ತು ಸೆಪ್ಟೆಂಬರ್ 1935- ಈ ಅವಧಿಯಲ್ಲಿ ನೆಹರು 188 ಪುಸ್ತಕಗಳನ್ನು ಜೈಲಿನಲ್ಲಿ ಓದಿದ್ದರು.

ಆದರೆ ಸಂಘ ಪರಿವಾರದ ಕೇಂದ್ರಸ್ಥಾನದಲ್ಲಿರುವ ಮತ್ತು ಇಡೀ ಸಂಘ ಪರಿವಾರವನ್ನು ನಿರ್ದೇಶಿಸುವ, ನಿಯಂತ್ರಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮಾತ್ರ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದಿದ್ದಷ್ಟೇ ಅಲ್ಲ, ಅದು ಬ್ರಿಟಿಷರ ಪರವಾದ ನಿಲುವುಗಳನ್ನು ಹೊಂದಿತ್ತು. ಅದರ ನಾಯಕ ಕೇಶವ ಹೆಡಗೆವಾರ್ ಸ್ವಾತಂತ್ರ್ಯ ಚಳುವಳಿಯಿಂದ ದೂರ ಇರುವಂತೆ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದರು. ಹಿಂದೂತ್ವದ ಇನ್ನೊಬ್ಬ ನಾಯಕ ಸಾವರ್ಕರ್ ಆರಂಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ, ಅಂಡಮಾನ್ ಜೈಲು ಸೇರಿದ್ದು ನಿಜ. ಹಾಗೆಯೇ ಬ್ರಿಟಿಷರೊಂದಿಗೆ ರಾಜಿಯಾಗಿ ಶಿಕ್ಷೆಯಿಂದ ಮುಕ್ತಿ ಪಡೆದಿದ್ದೂ ನಿಜ.

ಸ್ವಾತಂತ್ರ್ಯ ಚಳುವಳಿಯಿಂದ ದೂರವೇ ಉಳಿದ ಸಂಘಟನೆಯಿಂದ ರೂಪುಗೊಂಡ ನರೇಂದ್ರ ಮೋದಿಯವರು, ಸುಮಾರು 9 ವರ್ಷಗಳಷ್ಟು ಕಾಲ ಜೈಲಿನಲ್ಲಿ ಕಳೆದ ನೆಹರುರ ಹೋರಾಟದ ಪಾತ್ರವನ್ನು ಕಡೆಗಣಿಸಿ ಮಾತಾಡುತ್ತಿರುವುದೇ ಹಾಸ್ಯಾಸ್ಪದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...