Homeಅಂಕಣಗಳುಎರಡೂ ಮ್ಯಾನಿಫೆಸ್ಟೊಗಳಿಗೆ ಮನ್ನಣೆ ಸಿಗಲಿ...

ಎರಡೂ ಮ್ಯಾನಿಫೆಸ್ಟೊಗಳಿಗೆ ಮನ್ನಣೆ ಸಿಗಲಿ…

- Advertisement -
- Advertisement -

ಜಾತ್ಯಾತೀತ ಜನತಾದಳ ಮತ್ತು ಕಾಂಗ್ರೆಸ್ ಇವುಗಳ ಸಂಯುಕ್ತ ಸರ್ಕಾರ ಈಗ ಅಸ್ತಿತ್ವಕ್ಕೆ ಬಂದಿದೆ. ಜಾತ್ಯಾತಿತ ಜನತಾದಳಕ್ಕೆ ಬೆಂಬಲ ನೀಡುವುದಾಗಿ ಹೇಳಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ವಿನಂತಿಸಿಕೊಂಡಿತು. ಈ ಕರಾರಿನ ಪ್ರಕಾರವೇ ಈಗ ಸರ್ಕಾರ ನಡೆಯುತ್ತಿದೆ.
‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬಂತೆ ಭಾಜಪ ಈ ಸಂಯುಕ್ತ ಸರಕಾರದ ಬಗೆಗೆ ವಿಷ ಕಾರುತ್ತಿದೆ. ಅದು ಭಾಜಪಗೆ ಸಹಜ. ಯಡಿಯುರಪ್ಪನವರು ‘ತೀನ್‍ದಿನ್‍ಕಾ ಸುಲ್ತಾನ್’ ಆಗಿ ಬಹುಮತವಿಲ್ಲದೆ, ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಹೋಗಬೇಕಾದ ದುಸ್ಥಿತಿ ಬಂದಿದ್ದರಿಂದ ಅವರಿಗೆ ಮುಖ ಭಂಗವಾಗಿದೆ. ಅದಕ್ಕಾಗಿ ಯಡಿಯುರಪ್ಪನವರೂ, ಭಾಜಪದ ಇತರ ಶಾಸಕರೂ ಹೊಸ ಸರ್ಕಾರದ ಬಗೆಗೆ ಮನಸೋ ಇಚ್ಛೆ ಮಾತಾನಾಡುತ್ತಿದ್ದಾರೆ. ಅದೂ ಅವರಿಗೆ ಸಹಜ.
ಆದರೆ ಆಡಳಿತ ಪಕ್ಷಗಳ ಶಾಸಕರೇ ಸರ್ಕಾರದ ಕಾಲು ಹಿಡಿದು ಎಳೆಯುವ ಕಾರ್ಯದಲ್ಲಿ ತೊಡಗಿರುವುದು ಅವರ ಬೇಜವಾಬ್ದಾರಿ ಪ್ರವೃತ್ತಿಯನ್ನು ತೋರಿಸುತ್ತದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಮಾದ್ಯಮಗಳು ಕೂಡ ಈ ಸರ್ಕಾರದ ವಿರುದ್ಧದ ಅನವಶ್ಯಕ ಟೀಕೆಗಳಿಗೆ ಹೆಚ್ಚಿನ ಮಹತ್ವ ನೀಡಿ ಪ್ರಚಾರ ಮಾಡುತ್ತಿರುವುದು ಅಪೇಕ್ಷಣೀಯವಲ್ಲ.
‘ಕುಮಾರಸ್ವಾಮಿಯವರು ಸರ್ಕಾರವನ್ನು ರಚಿಸಲಿ, ಅವರಿಗೆ ನಾವು ಬೆಂಬಲ ನೀಡುತ್ತೇವೆ’ ಎಂದು ಕಾಂಗ್ರೆಸ್ ಹೇಳಿದ ಮಾತ್ರಕ್ಕೆ ಕಾಂಗ್ರೆಸ್ ಕುಮಾರಸ್ವಾಮಿ ಅವರಿಗೆ ಎಲ್ಲ ಅಧಿಕಾರ ನೀಡಬೇಕು, ಕಾಂಗ್ರೆಸ್ ನಿಷ್ಕ್ರಿಯವಾಗಬೇಕು ಎಂಬಂತೆ ಅರ್ಥೈಸಬಾರದು. ಮೈತ್ರಿ ಧರ್ಮಕ್ಕೆ ಪಾಲಿಸುತ್ತಾ ಎರಡೂ ಪಕ್ಷಗಳ ಮ್ಯಾನಿಫೆಸ್ಟೋಗಳಿಗೆ ಮನ್ನಣೆ ನೀಡಬೇಕು. ಎರಡೂ ಪಕ್ಷಗಳು ಚುನಾವಣಾ ವೇಳೆಯಲ್ಲಿ ಘೋಷಿಸಿರುವ ಮುಖ್ಯ ಭರವಸೆಗಳನ್ನು ಕಾರ್ಯರೂಪಕ್ಕಿಳಿಸುವ ಮಾರ್ಗಗಳನ್ನು ಹುಡುಕಬೇಕು. ಎರಡೂ ಪಕ್ಷಗಳೂ ಜನರ ಮನ್ನಣೆ ಪಡೆಯಬೇಕು ಎಂಬ ಧ್ಯೇಯ ಇಟ್ಟುಕೊಂಡು ಸರ್ಕಾರ ಮುನ್ನಡೆಯಬೇಕಾಗುತ್ತದೆ.
ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿಯವರು ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಘೋಷಣೆ ಮಾಡಿದ್ದಾರೆ. ಅದು ಕಷ್ಟ ಸಾಧ್ಯವಾದ ಕೆಲಸ ಎಂಬುದು ಉಭಯ ಪಕ್ಷಗಳಿಗೂ ಗೊತ್ತು. ರೈತರ ಆಗ್ರಹಕ್ಕೆ ತುತ್ತಾಗಲು ಕುಮಾರಸ್ವಾಮಿಗಳು ತಯಾರಿಲ್ಲವಾದ್ದರಿಂದ ಅವರ ಮಾತನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳೂ ಇದಕ್ಕೆ ಒಪ್ಪಿಕೊಂಡಿವೆ. ಅದರಂತೆಯೇ ಕಾಂಗ್ರೆಸ್ ತಾನು ಆರಂಭಿಸಿದ ಜನಪ್ರಿಯ ಕಾರ್ಯಕ್ರಮಗಳನ್ನು ಈ ಸರ್ಕಾರ ಮುಂದುವರೆಸಬೇಕು ಎಂದು ಒತ್ತಾಯ ಹಾಕುತ್ತಿದೆ. ಅದನ್ನು ಕಾರ್ಯಗತಗೊಳಿಸುವುದು ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿCommon Minimum Programme ಏನಿರಬೇಕು ಎಂಬುದನ್ನು ಗೊತ್ತುಮಾಡಿ ಅದರಂತೆ ನಡೆಯುವುದು ಸೂಕ್ತ.
ಕುಮಾರಸ್ವಾಮಿ ತಾವು ಹೇಗೊ ಅಧಿಕಾರಕ್ಕೆ ಬರುವುದಿಲ್ಲವೆಂದು ತಿಳಿದು ರೈತರ ಸಾಲಮನ್ನಾ ವಿಚಾರವನ್ನು ಚುನಾವಣಾ ಪ್ರಚಾರ ಕಾಲದಲ್ಲಿ ಪ್ರಸ್ತಾಪಿಸಿರಬಹುದು. ಅಕಸ್ಮಾತ್ ಅಧಿಕಾರಕ್ಕೆ ಬಂದಿರುವುದರಿಂದ ಅದನ್ನು ಕಾರ್ಯಗತ ಮಾಡಿ ತೋರಿಸಲೇಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಇದನ್ನು ಹೇಗೆ ನಿಭಾಯಿಸುವರೆಂಬುದನ್ನು ಕುತೂಹಲದಿಂದ ಕರ್ನಾಟಕದ ಜನತೆ ಎದುರು ನೋಡುತ್ತಿದೆ.
‘ಎತ್ತು ಏರಿಗೆ ಎಳೆಯಿತು, ಎಮ್ಮೆ ನೀರಿಗಿಳಿಯಿತು’. ಎಂಬ ರೀತಿ ಈ ಸಂಯುಕ್ತ ಸರ್ಕಾರ ಮೂರಾಬಟ್ಟೆ ಯಾಗಬೇಕೆಂದು ವಿರೋಧಪಕ್ಷ ಆಶಿಸುತ್ತದೆ. ವಿರೋಧ ಪಕ್ಷದ ಈ ಆಶಯವನ್ನು ಸುಳ್ಳು ಮಾಡುವುದಾಗಿ ಅಧಿಕಾರಾರೂಢ ಪಕ್ಷಗಳು ಶಪಥ ತೊಡಬೇಕು. ಎಲ್ಲ ಶಾಸಕರಿಗೂ, ಮಂತ್ರಿಗಳಿಗೂ ಒಳ್ಳೆಯ ಆಡಳಿತ ನೀಡಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸಬೇಕು, ಭ್ರಷ್ಟಾಚಾರರಹಿತ ಆಡಳಿತವನ್ನು ಜಾರಿಗೆ ತರಬೇಕು ಎಂಬ ಕಾತರ ಇರಬೇಕು. ಯಾವುದೇ ಕಾರಣದಿಂದ ಈ ಉಭಯ ಪಕ್ಷಗಳು ಕಚ್ಚಾಡಿಕೊಂಡು ಬೀದಿಗೆ ಬೀಳಬಾರದು. ನಮ್ಮ ಶಾಸಕರಲ್ಲಿ, ಮಂತ್ರಿಗಳಾಗಿರುವವರಲ್ಲಿ ಅನೇಕರಿಗೆ ತಮ್ಮ ಹೊಣೆಗಾರಿಕೆ ಏನು ಎಂಬುದು ತಿಳಿದಿಲ್ಲ. ರಾಜ್ಯಾಡಳಿತ ಮಕ್ಕಳ ಆಟವಲ್ಲ ಎಂಬ ಅರಿವು ಅವರಲ್ಲಿ ಮೂಡಬೇಕು. ಅಧಿಕಾರ ಹಂಚಿಕೆಯೆಂಬುದು ಪಿತ್ರಾರ್ಜಿತ ಸ್ವತ್ತುಗಳ ಹಂಚಿಕೆಯಂತಲ್ಲ ಎಂಬುದನ್ನು ಉಭಯರೂ ಅರ್ಥಮಾಡಿಕೊಳ್ಳಬೇಕು.
ಕುಮಾರಸ್ವಾಮಿಯವರ ಸರ್ಕಾರ ರೈತರ ಸಾಲಮನ್ನಾದಂತಹ ಕ್ಲಿಷ್ಟವಾದ ಸಮಸ್ಯೆಗಳನ್ನು ತನ್ನ ಆಡಳಿತಾವಧಿಯಲ್ಲಿ ಮತ್ತೆ ಸೃಷ್ಟಿಸಬಾರದು. ರೈತ ಸಂಘಕ್ಕೆ ರೈತರ ಸಾಲಮನ್ನಾ ಧ್ಯಾನ ಬಿಟ್ಟರೆ ಇತರೆ ವಿಚಾರಗಳ ಬಗ್ಗೆ ಅವರು ಲಕ್ಷ್ಯ ಕೊಡುವುದಿಲ್ಲ. ರೈತರ ಸಂಘಟನೆಗಳ ನಾಯಕತ್ವದಲ್ಲಿ ಬಹಳಷ್ಟು ಮಂದಿ ಜಮೀನ್ದಾರರು. ಇವರು ರೈತಸಂಘಕ್ಕೂ ಸದಸ್ಯರು, ಬೇರೆ ಬೇರೆ ರಾಜಕೀಯ ಪಾರ್ಟಿಗಳಿಗೂ ಸದಸ್ಯರು. ರೈತ ಸಂಘಟನೆಗಳಲ್ಲಿ ನುಸುಳಿರುವ ಈ ಪಟ್ಟ ಭದ್ರ ಹಿತಾಸಕ್ತಿಗಳು, ರೈತ ಸಂಘಕ್ಕೆ ಸದಸ್ಯರಾಗುವ ಏಕೈಕ ಉದ್ದೇಶ, ಸಾಲಮನ್ನಾ ಮೊದಲುಗೊಂಡು ರೈತರ ಹೆಸರಿನಲ್ಲಿ ದೊರಕಬಹುದಾದ ಎಲ್ಲ ಸೌಕರ್ಯಗಳನ್ನೂ ತಮ್ಮದಾಗಿಸಿಕೊಳ್ಳುವುದಲ್ಲದೆ ಬೇರೇನೂ ಇಲ್ಲ. ಈ ವ್ಯವಸ್ಥೆಯಲ್ಲಿ ಸರ್ಕಾರದಿಂದ ಬಡ ರೈತರಿಗೆ ಪುಡಿಕಾಸು ಸಿಕ್ಕಿದರೆ ಈ ಛದ್ಮ ವೇಷದ ಸ್ವಾರ್ಥಿ ಜಮೀನ್ದಾರರಿಗೆ ದೊಚಲು ಸಿಗುವುದು ಸಿಂಹಪಾಲು.
ಪ್ರತಿವರ್ಷ ಸ್ವಾರ್ಥಿಗಳ ಕಿಸೆತುಂಬುವ ಈ ಸಾಲಮನ್ನಾ ಪ್ರಹಸನವನ್ನು ಈ ಸರ್ಕಾರ ಕೊನೆಗಾಣಿಸಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ನಿರ್ಧರಿಸಬೇಕು. ರೈತರು ಬೆಳೆದ ಬೆಳೆ ನೇರವಾಗಿ ಗ್ರಾಹಕನಿಗೆ ದೊರಕುವಂತೆ ಮಾಡಿ ದಳ್ಳಾಳಿಗಳ ಹಾವಳಿಯಿಂದ ರೈತರನ್ನು ಪಾರು ಮಾಡಬೇಕು.
ರೈತ ಸಂಘಕ್ಕೆ ಒಂದು ಸೂಚನೆ. ರೈತ ಸಂಘ ಒಂದು ರಾಜಕೀಯ ಪಕ್ಷವಾಗಿಯೂ ಬೆಳೆಯಬೇಕು. ಹಾಗೆಯೇ ಅದು ಒಂದು ರೈತರ ಹಿತಕಾಯುವ ಹೋರಾಟ ಸಮಿತಿಯಾಗಿಯೂ ಕೆಲಸ ಮಾಡಬೇಕು. ರೈತ ಸಂಘಕ್ಕೆ ಸೇರುವವರು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸದಸ್ಯರಾಗಿರಬಾರದು ಎಂಬ ನಿಯಮವನ್ನು ಜಾರಿಗೆ ತರಬೇಕು. ಹೀಗಾದಾಗ ಒಂದಲ್ಲ ಒಂದು ದಿನ ಕರ್ನಾಟಕದಲ್ಲಿ ರೈತರ ರಾಜ್ಯ ಸ್ಥಾಪನೆಯಾಗುವ ಸಾಧ್ಯತೆ ಇದೆ.
ಈ ನಿಟ್ಟಿನಲ್ಲಿ ರಾಜ್ಯದ ರೈತ ಸಂಘ ಗಂಭೀರವಾಗಿ ವಿಚಾರ ಮಾಡಿ ಕೂಡಲೇ ಒಂದು ನಿರ್ಧಾರಕ್ಕೆ ಬರಬೇಕು.

– ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...