Homeಅಂಕಣಗಳುಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

ಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

- Advertisement -
ತಿಜಾಡ್ಯದ ವಿರುದ್ಧ ಬಹುಕಾಲದಿಂದಲೂ ಸಂತರು, ಸಮಾಜಸುಧಾರಕರು ಎಷ್ಟೇ ಮಾತನಾಡಿದ್ದರೂ ಅವರುಗಳ ಜಾತಿ ಮೂಲವನ್ನೇ ಎತ್ತಿ ಹಿಡಿದು ಅವರನ್ನು ಅವರವರ ಜಾತಿಗಳ ಐಕಾನುಗಳನ್ನಾಗಿಸಿದ ಹಿರಿಮೆ ನಮ್ಮದು. ಈ ಮನೋಧರ್ಮದ ಬಲಿಪಶುಗಳಾಗಿರುವವರು ಇಲ್ಲಿನ ಅಸ್ಪøಶ್ಯರು. ಆರ್ಥಿಕವಾಗಿ ಸ್ವಲ್ಪ ಮಟ್ಟಿಗಾದರೂ ಸಬಲರಾದರೂ ಇವರನ್ನು ಸಾಮಾಜಿಕವಾಗಿ ತಮ್ಮ ಸಮಾನರೆಂದು ಒಪ್ಪಿಕೊಳ್ಳುವುದಕ್ಕೆ ಮೇಲ್ಜಾತಿ ಮನಸ್ಥಿತಿಯವರು ಸಿದ್ಧರಿಲ್ಲ. ಈ ಮನಸ್ಥಿತಿ ಆಗಾಗ ತನ್ನ ವಿಕೃತ ರೂಪವನ್ನು ಪ್ರದರ್ಶಿಸಿ ಸಮಾಜವನ್ನೇ ಕದಡುತ್ತದೆ.
ಈ ಮಾತಿಗೊಂದು ತಾಜಾ ಉದಾಹರಣೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೂಲೆಯಲ್ಲಿರುವ ಗೋನಾಳ ಗ್ರಾಮ. ಕುರುಬ ಸಮುದಾಯದ ಸುಮಾರು 70, ಮಾದಿಗ ಸಮುದಾಯದ ಸುಮಾರು 50, ಲಿಂಗಾಯತ, ನಾಯಕ, ಮುಸ್ಲಿಂ ಸಮುದಾಯದ ತಲಾ 10 – 15 ಮನೆಗಳಿರುವ ಈ ಹಳ್ಳಿ. ಇಲ್ಲಿ ಆರ್ಥಿಕವಾಗಿ ಹೇಳಿಕೊಳ್ಳುವಂಥ ಅಂತರ ಕಂಡು ಬರುವುದಿಲ್ಲ. ಕುರುಬರಲ್ಲಿರುವಂತೆಯೇ ಮಾದಿಗರಲ್ಲಿಯೂ ಸ್ಥಿತಿವಂತರು, ಸಣ್ಣ ಭೂಹಿಡುವಳಿದಾರರು, ಭೂಹೀನರು ಇದ್ದಾರೆ. ಎಲ್ಲ ಮನೆಗಳಲ್ಲಿಯೂ ಬಸವಣ್ಣನವರ ಪಟಗಳು ರಾರಾಜಿಸುತ್ತವೆ. ಆದರೆ ದೇವರ ಸ್ಥಾದಲ್ಲಿರುವ ಬಸವೇಶ್ವರರ ಬೋಧನೆಗಳು ಸಾಮಾಜಿಕವಾಗಿ ನೆಲೆನಿಂತಿರುವ ಸಂಬಂಧಗಳನ್ನು ಬದಲಾಯಿಸುವಷ್ಟು ಶಕ್ತನಾಗಿಲ್ಲದಿರುವುದೊಂದು ದುರಂತ.
ತಾವು ಮೇಲ್‍ಸ್ತರದವರು ಎಂದು ಕೊಳ್ಳುವ ಕುರುಬ ಸಮುದಾಯದವರು, ತಮ್ಮ ಕಣ್ಣ ಮುಂದೆಯೇ ಅಸ್ಪøಶ್ಯರೆನಿಸಿಕೊಂಡವರು ಬೆಳೆಯುವುದನ್ನು ಸಹಿಸಲಾರದೇ ಹೋದರು. ಆ ಊರಿನ ಬಹುತೇಕರು ಕಂಪ್ಲಿ, ಹೊಸಪೇಟೆಗಳಂಥಾ ಊರುಗಳಲ್ಲಿ ಶಿಕ್ಷಣವನ್ನು ಪಡೆದಿದ್ದರೂ ಆ ಶಿಕ್ಷಣ ಕೇವಲ ಸರ್ಟಿಫಿಕೇಟುಗಳಿಗೆ ಸೀಮಿತವಾಗಿದೆ. ಮನೋಭಾವಗಳಂತೂ ಹಳೆಯ ಮಾದರಿಯವೇ ಆಗಿವೆ. ಕೆಳಜಾತಿಗಳ ಬಗೆಗಿನ ಅಸಹನೆಯ ಕಿಚ್ಚು ಮೇಲ್ಜಾತಿ ಎನಿಸಿಕೊಂಡವರನ್ನು ಒಳಗೊಳಗೇ ಸುಡುತ್ತಿರುವುದನ್ನು ಕಾಣಬಹುದು.
ಜೂನ್ 19ರಂದು ಆ ಹಳ್ಳಿಗೆ ಬೇಟಿ ನೀಡಿದ ಸತ್ಯಶೋಧನ ಸಮಿತಿಗೆ ತಿಳಿದು ಬಂದಂತೆ 2012ರಿಂದ ಎರಡೂ ಸಮುದಾಯಗಳ ನಡುವೆ ಆಗಾಗ ಆಡಳಿತ ಕೈಗೊಳ್ಳುವ ಶಾಂತಿ ಸಭೆಗಳಂಥಾ ಕಾರ್ಯಕ್ರಮಗಳು ತೇಪೆ ಹಚ್ಚುವುದನ್ನು ಬಿಟ್ಟರೆ ಮತ್ತೇನೂ ಸಾಧಿಸಲಿಲ್ಲ. ಇಂಥ ತಿಕ್ಕಾಟಗಳು ಒಂದು ಕದನವಾಗಿ ಪ್ರಕಟಗೊಂಡಿದ್ದು 2018ರ ಮೇ 25ರಂದು. ಬನ್ನೆಪ್ಪ ಮಾದಿಗ ಸಮುದಾಯದ ಹಣವಂತನಾಗಿದ್ದು, ಆತನೇ ಸಮುದಾಯದ ನಾಯಕ. ಗ್ರಾಮಪಂಚಾಯತಿಯ ಸದಸ್ಯನೂ ಆಗಿರುವ ಈತನ ಮಾತೇ ಆ ಸಮುದಾಯದ ಇತರರಿಗೆ ಅಂತಿಮ. ಅದೇರೀತಿ ಹೊಸಕೆರಪ್ಪ ಎಂಬುವವನು ಕುರುಬರ ನಾಯಕನಾಗಿದ್ದು, ಇವರಿಬ್ಬರ ನಡುವಿನ ಜಗಳಗಳೇ ಎರಡು ಸಮುದಾಯಗಳ ಜಗಳಗಳಾಗಿ ಮಾರ್ಪಡುತ್ತವೆ. ಅಲ್ಲಿನ ಜನಕ್ಕೆ ರಾಜಕೀಯವಾಗಿಯೂ ಸ್ಪಷ್ಟ ನಿಲುವುಗಳೇನಿಲ್ಲ. ತಮ್ಮ ನಾಯಕರು ಕಾಂಗ್ರೇಸ್ಸಾದರೆ ಅವರೂ ಕಾಂಗ್ರೇಸ್, ಬಿಜೆಪಿಯಾದರೆ ಬಿಜೆಪಿ.
ಕೆಲವು ತಿಂಗಳುಗಳ ಕೆಳಗೆ ಪರಿಶಿಷ್ಟರು ಅಂಬೇಡ್ಕರ್ ಹಾಗೂ ಜಗಜೀವನ್‍ರಾಮ್‍ರವರ ಚಿತ್ರಗಳನ್ನೊಳಗೊಂಡ ಫಲಕವೊಂದನ್ನು ಊರಿನ ಮಧ್ಯಭಾಗದ ರಸ್ತೆಯ ಪಕ್ಕದಲ್ಲಿ ಸ್ಥಾಪಿಸಿದರು. 5*5 ಅಳತೆಯ ಆ ಜಾಗ ಕುರುಬ ಸಮುದಾಯದ ಕುಟುಂಬವೊಂದಕ್ಕೆ ಸೇರಿದ್ದು. ಶಿಕ್ಷಣವಿಲ್ಲದಿದ್ದರೂ ಇತರರಿಗಿಂತಲೂ ಭಿನ್ನವಾಗಿ ಯೋಚಿಸುವ ಈ ಕುಟುಂಬದವರು ತಮ್ಮ ಜಾಗದಲ್ಲಿ ಆ ಫಲಕವನ್ನು ನೆಡಲು ಪರಿಶಿಷ್ಟರಿಗೆ ಅನುಮತಿಯನ್ನೂ ನೀಡಿದ್ದರು. ಆರ್ಥಿಕವಾಗಿ ತಮಗಿಂತಲೂ ಕಡಿಮೆ ಇಲ್ಲವೆಂದು ತೋರಿಸಿಕೊಳ್ಳುವ ಪರಿಶಿಷ್ಟರು ಈಗ ತಮ್ಮ ಸಾಮಾಜಿಕ ಅಸ್ತಿತ್ವವನ್ನು ಗಟ್ಟಿಯಾಗಿ ನೆಲೆಗೊಳಿಸಲು ಮಾಡಿದ ಈ ಹೊಸ ಪ್ರಯತ್ನ ಮೇಲ್ಜಾತಿ ಎಂದುಕೊಳ್ಳುವ ಕುರುಬರಿಂದ ಸಹಿಸಲಾಗಲಿಲ್ಲ. ಈ ಫಲಕ ತಮಗೆ ಸವಾಲಾಗಿದೆಯೆಂದು ಭಾವಿಸಿದ ಕುರುಬ ಸಮಾಜದ ಇತರರು ಫಲಕದ ಬಗ್ಗೆ ತಗಾದೆ ತೆಗೆದು ಒಂದು ರೀತಿಯ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿದ್ದ ಒಂದೇ ಒಂದು ಹೋಟಲಿನಲ್ಲಿ ಮತ್ತು ಬಸವಣ್ಣನವರ ದೇವಸ್ಥಾನದಲ್ಲಿ ಅಸ್ಪøಶ್ಯತೆಯ ಆಚರಣೆಯನ್ನು ಭಿನ್ನ ರೀತಿಯಲ್ಲಿ ಅವರ ಮೇಲೆ ಹೇರುವ ಪ್ರಯತ್ನ ನಡೆಯಿತು.
ಮೇ 24ರಂದು ಈ ಎರಡೂ ಸಮುದಾಯಗಳ ಇಬ್ಬರು ಊರ ಬದಿಯ ಕಾಲುದಾರಿಯಲ್ಲಿ ವಿರುದ್ಧ ದಿಕ್ಕುಗಳಿಂದ ನಡೆದು ಬಂದಿದ್ದು ಯಾರು ಯಾರಿಗೆ ದಾರಿ ಬಿಡಬೇಕೆಂಬ ಬಗ್ಗೆ ಸಣ್ಣ ಜಗಳ ನಡೆದಿದೆ. ಅಂದು ಸಂಜೆ ತನ್ನ ಸಮುದಾಯದವನ ಪರವಾಗಿ ಮೇಲ್ಜಾತಿಯವರನ್ನು ಪ್ರಶ್ನೆ ಮಾಡಿದ ಬನ್ನೆಪ್ಪನ ಮಾತುಗಳು ಮಾರನೆಯ ದಿನದ ಭಯಂಕರ ಆಗುಹೋಗುಗಳಿಗೆ ನೆಪವಾದವು. ಇಂತಹ ಸನ್ನಿವೇಶಗಳಲ್ಲಿ ಮೇಲ್ಜಾತಿ ಮನಸ್ಥಿತಿಗಳ ಸ್ಪಂದನೆ ಒಂದೇ ರೀತಿಯದ್ದು, ಅದು ತಮ್ಮ ಕಣ್‍ಕಿಚ್ಚಿಗೆ ಕಾರಣವಾದ ದಲಿತರ ಮೇಲೆ ದಾಳಿ ನಡೆಸುವುದು. ಮೇ 25ರಂದು ನಡೆದದ್ದು ಅದೇ. ಚುಂಡೂರು, ಕಾರಂಚೇಡು, ಕಂಬಾಲಪಲ್ಲಿಗಳಲ್ಲಿ ನಡೆದಿದ್ದೂ ಹೀಗೆಯೇ.
ಅಂದು ಯೋಜಿತ ರೀತಿಯಲ್ಲಿ ನಡೆದ ದಾಳಿಯನ್ನು ಎದುರಿಸಲಾಗದ ಮಾದಿಗ ಜನಾಂಗದವರು ತಿರುಗೇಟು ನೀಡಲು ಪ್ರಯತ್ನಿಸಿದರೂ, ಸಂಘಟಿತ ದಾಳಿಯನ್ನೆದುರಿಸಲಾರದೆ, ಬಹುತೇಕ ಜನ ದಾಳಿಯಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟು ಓಡಿದರು. ಈ ನಡುವೆ ಬನ್ನೆಪ್ಪನ ಮಗ ದೊಡ್ಡದೇವಣ್ಣ ದಾಳಿಕೋರರಿಂದ ಪಾರಾಗಲು ಒಂದು ಮನೆಗೆ ನುಗ್ಗಿದ. ಅವನನ್ನು ಹಿಂಬಾಲಿಸಿದ ಐದಾರು ಜನರ ಗುಂಪೊಂದು ಆ ಮನೆಯಲ್ಲಿಯೇ ಅವನನ್ನು  ಮನಸೋಇಚ್ಚೆ ಚಚ್ಚಿದರು. ಕೊನೆಗೆ ಸತ್ತನೆಂದೇ ಭಾವಿಸಿ ದೇಹವನ್ನು ಒಂದು ಛಾಪೆಯಲ್ಲಿ ಸುತ್ತಿಟ್ಟು ಜಾಗ ಖಾಲಿ ಮಾಡಿದರು. ಆದರೆ ಸುಮಾರು 4 ಘಂಟೆಗಳ ಕಾಲ ನೆತ್ತರ ಮಡುವಿನಲ್ಲಿ ಬಿದ್ದಿದ್ದ ಆ ಯುವಕ ಜಾÐನ ತಪ್ಪಿದ ಸ್ಥಿತಿಯಲ್ಲಿದ್ದ. ಸಂಜೆ ಅವನನ್ನು ಕಂಡವರು ಆ ಹೊತ್ತಿಗೆ ಹಳ್ಳಿಗೆ ಬಂದಿದ್ದ ಪೊಲೀಸರಿಗೆ ತಿಳಿಸಿದ್ದರಿಂದ ಅವರು ದೇವಣ್ಣನನ್ನು ಮೊದಲು ಬಳ್ಳಾರಿಗೆ, ನಂತರ ಬೆಂಗಳೂರಿಗೆ ಚಿಕಿತ್ಸೆಗಾಗಿ ಕಳುಹಿಸಿದರು. ತನ್ನ ಎರಡೂ ಕೈಗಳಿಗೆ ಆದ ತೀವ್ರವಾದ ಗಾಯಗಳು ತಲೆಯ ಮೇಲೆ ಬಿದ್ದಿರುವ ಪೆಟ್ಟು ಮತ್ತು ಮಾತನಾಡಲಾಗದಂತೆ ನಾಲಗೆಗೂ ಪೆಟ್ಟುಗಳಿಂದ ಆಘಾತಕ್ಕೊಳಗಾಗಿರುವ ದೇವಣ್ಣ ತನ್ನ ಮನೆಯಲ್ಲಿ ಈಗಲೂ ಅಸಹಾಯಕನಾಗಿ ಮಲಗಿದ್ದಾನೆ. ಆವನ ತಂದೆಯೂ ಸೇರಿದಂತೆ ಹತ್ತಿರದ ಬಂಧುಗಳು ಜೈಲು ಪಾಲಾಗಿದ್ದು, ಈತನಿಗೆ ಸರಿಯಾದ ಚಿಕಿತ್ಸೆಯೂ ದೊರಕದೆ, ಆತನ ಮುಂದಿನ ಸ್ಥಿತಿ ಏನಾಗುತ್ತದೋ ಹೇಳಲಾಗದು.
ಪೊಲೀಸರು ಯಥಾಪ್ರಕಾರ ಎರಡು ಕಡೆಯವರ ಮೇಲೂ ಕೇಸು ಜಡಿದು ಅವರಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಕೆಲವರು ಈಗ ಬಳ್ಳಾರಿಯ ಜೈಲಿನಲ್ಲಿದ್ದಾರೆ. ಹಳ್ಳಿಯಲ್ಲಿ ಕೇವಲ ಮುದುಕರು, ಹೆಂಗಸರು ಮತ್ತು ಮಕ್ಕಳು ಮಾತ್ರವಿದ್ದು ಕೃಷಿ ಚಟುವಟಿಕೆಗಳು ಭರದಿಂದ ಸಾಗಬೇಕಾದ ಈ ಕಾಲದಲ್ಲಿ ಗಂಡಸರು ಪೊಲೀಸರ ಭಯದಿಂದಾಗಿ ಊರಿನಿಂದ ದೂರವೇ ಉಳಿದಿದ್ದಾರೆ. ಹೆಚ್ಚಾಗಿ ಭಯ ಕಾಡುತ್ತಿರುವುದು ಮಾದಿಗ ಸಮುದಾಯದವರನ್ನು. ಇದರ ಪರಿಣಾಮವಾಗಿ ಈ ವರ್ಷದ ಬೆಳೆಹಾಳು.
ಮಾದಿಗ ಸುಮದಾಯದವರ ವಿರುದ್ಧ ಒಟ್ಟು ಸಮಾಜಕ್ಕೇ ಇರುವ ಪೂರ್ವಗ್ರಹ ಕಂಪ್ಲಿಯಲ್ಲಿನ ಪೊಲೀಸರ ಜತೆ ಮಾತನಾಡುವಾಗಲೂ ಕಂಡುಬಂತು. ಸಾಮಾಜಿಕ ವಾಸ್ತವಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲಾಗದ ಇಂಥ ಅಧಿಕಾರ ವರ್ಗದವರಿಂದ ನಿಜವಾದ ನ್ಯಾಯ ಸಿಗುವುದನ್ನು ನಿರೀಕ್ಷಿಸುವುದೂ ಕಷ್ಟ. ಸಮಾಜದ ವಿವಿಧ ಗುಂಪುಗಳ ನಡುವೆ ಏರ್ಪಟ್ಟಿರುವ ಕಂದಕವನ್ನು ಮುಚ್ಚುವ ಕೆಲಸ ಮಾಡಬೇಕಾದರೆ ಎಲ್ಲ ರೀತಿಯ ಸ್ವಾರ್ಥವನ್ನು, ಪೂರ್ವಗ್ರಹಗಳಿಂದ ದೂರವಿಟ್ಟು ಸಮಾಜದ ಸ್ವಾಸ್ಥ್ಯಯನ್ನು ಬಯಸುವ ಅದಕ್ಕಾಗಿ ಕಾಳಜಿ, ಬದ್ಧತೆಗಳಿಂದ ದುಡಿಯುವ ಮನಸ್ಸುಗಳು ಬೇಕು. ಆಗ ಮಾತ್ರ ದೇಶಕ್ಕಂಟಿದ ಜಾತಿಜಾಡ್ಯ ವಾಸಿಯಾಗಬಹುದು. ಇಂದಿನ ವ್ಯವಸ್ಥೆಯಲ್ಲಿ ಅದು ಸಾಧ್ಯವೇ ಎಂಬುದೇ ದೊಡ್ಡ ಪ್ರಶ್ನೆಯಾಗಿಯೇ ಕಾಡುತ್ತದೆ? ಇನ್ನೆಷ್ಟು ದಿನ ಹೀಗೆ…?
 – ನಗರಗೆರೆ ರಮೇಶ್ 
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...