Homeಚಳವಳಿಸೂರಿಗಾಗಿ ಕೋಟಿ ಹೆಜ್ಜೆ : ನೆಲೆ - ನಿವೇಶನಕ್ಕಾಗಿ ಬಡಜನರ ಬೃಹತ್‌ ಕಾಲ್ನಡಿಗೆ ಜಾಥ...

ಸೂರಿಗಾಗಿ ಕೋಟಿ ಹೆಜ್ಜೆ : ನೆಲೆ – ನಿವೇಶನಕ್ಕಾಗಿ ಬಡಜನರ ಬೃಹತ್‌ ಕಾಲ್ನಡಿಗೆ ಜಾಥ…

ಬಿ.ಶ್ರೀರಾಮುಲು ತನ್ನ ಮಗಳ ಅದ್ದೂರಿ ಮದುವೆಗಾಗಿ 500ಕೋಟಿ ಖರ್ಚು ಮಾಡುವ ಬದಲು ಅವರ ಮೊಳಕಾಲ್ಮೂರು ಕ್ಷೇತ್ರದಲ್ಲಿ 10000 ಕುಟುಂಬಗಳಿಗೆ ಮನೆ ಕಟ್ಟಿಸಿಕೊಡಬಹುದು - ಸಾತಿ ಸುಂದರೇಶ್‌.

- Advertisement -
- Advertisement -

ಕರ್ನಾಟಕ ಭಾರತದಲ್ಲಿಯೇ ಮುಂದುವರಿದ, ಅಭಿವೃದ್ಧಿ ಹೊಂದಿದ್ದ ರಾಜ್ಯಗಳಲ್ಲೊಂದು. ಕೇಂದ್ರ ಹೆಚ್ಚಿನ ತೆರಿಗೆ ಕಟ್ಟುವ, ಹತ್ತಾರು ನದಿಗಳಿರುವ, ಸಂಪಧ್ಭರಿತ ರಾಜ್ಯ. ಆದರೆ ಇಂತಹ ರಾಜ್ಯದಲ್ಲಿಯೂ ಸಹ ಗಾಳಿ, ಮಳೆ, ಬಿಸಿಲಿನಿಂದ ಪಾರಾಗಲು ನೆಲೆ ಇಲ್ಲದೇ ಲಕ್ಷಾಂತರ ಜನರು ಬೀದಿಯಲ್ಲಿದ್ದಾರೆ ಎಂಬುದೂ ಸಹ ವಾಸ್ತವ.

ಉಳುವವನೆ ಭೂ ಓಡೆಯ ನಂತಹ ಕಾಯ್ದೆಗಳ ಹೊರತಾಗಿಯೂ ಕೂಡ ಎಲ್ಲಾ ಕುಟುಂಬಗಳಿಗೂ ಭೂಮಿಯಿರಲಿ, ಕನಿಷ್ಟ ಸೂರು ಕೂಡ ಇಲ್ಲದೇ ಸಾವಿರಾರು ಕುಟುಂಬಗಳು ಬದುಕು ಸವೆಸುತ್ತಿರುವುದು ನಮ್ಮ ಅಭಿವೃದ್ದಿ ಮಾದರಿ ಯಾರ ಪರ ಎಂಬುದನ್ನು ತೋರಿಸುತ್ತದೆ.

ಇಂತಹ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ತುಂಡು ಭೂಮಿ, ಒಂದು ಮನೆ ಇರಬೇಕೆಂದು ಒತ್ತಾಯಿಸಿ ಹಲವು ಭೂ-ವಸತಿ ಹೋರಾಟಗಳು ನಡೆದಿವೆ. ದೊಡ್ಡ ದೊಡ್ಡ ಸಂಘರ್ಷಗಳು ಏರ್ಪಟ್ಟಿವೆ. ಆದರೆ ಯಾವ ಸರ್ಕಾರಗಳೂ ಸಹ ಬಡಜನರ ಕೂಗಿಗೆ ಸ್ಪಂದಿಸಿಲ್ಲ. ಹಾಗಂತ ಹೋರಾಟ ಮಾತ್ರ ನಿಂತಿಲ್ಲ. ಈ ಚಳವಳಿಗಳ ಕಾರಣದಿಂದಾಗಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಜನರಿಗೆ ಭೂಮಿ, ವಸತಿ, ಹಕ್ಕು ಪತ್ರಗಳು ಸಿಕ್ಕಿವೆ.

ಈಗ ರಾಜ್ಯದ ಎಲ್ಲಾ ನಾಗರಿಕರ ವಸತಿ ಹಕ್ಕಿಗಾಗಿ ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್‌ ಪಕ್ಷದ(CPI) ನೇತೃತ್ವದಲ್ಲಿ “ಸೂರಿಗಾಗಿ ಕೋಟಿ ಹೆಜ್ಜೆ” ಎಂಬ ಬೃಹತ್‌ ಕಾಲ್ನಡಿಗೆ ಜಾಥಾದ ಹೋರಾಟ ಆರಂಭವಾಗಿದೆ. ಬಳ್ಳಾರಿಯಿಂದ ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಮಾರ್ಗವಾಗಿ ಬೆಂಗಳೂರಿನವರೆಗೂ ಕನಿಷ್ಠ ಒಂದು ಸಾವಿರ ಕಿ.ಮೀ ನಡೆದು ಬರುವ ವಿಶಿಷ್ಠ ಹೋರಾಟ ನಡೆಯುತ್ತಿದೆ. ಫೆ.02ರಂದು ಬಳ್ಳಾರಿಯಲ್ಲಿ ಆರಂಭಗೊಂಡ ಜಾಥವು ಯಶಸ್ವಿಯಾಗಿ ದಾವಣಗೆರೆ ಜಿಲ್ಲೆ ದಾಟಿ ಚಿತ್ರದುರ್ಗವನ್ನು ತಲುಪಿದೆ.

ಜಾಥಾದ ವಿಡಿಯೋ ನೋಡಿ

ಸೂರಿಗಾಗಿ ಕೋಟಿ ಹೆಜ್ಜೆ – ಸಾವಿರ ಕಿ.ಮೀ ಪಾದಯಾತ್ರೆ

ವಸತಿ-ನಿವೇಶನ ರಹಿತರಿಗೆ ವಸತಿ ಹಕ್ಕಿಗಾಗಿ ಆಗ್ರಹಿಸಿ "ಸೂರಿಗಾಗಿ ಕೋಟಿ ಹೆಜ್ಜೆ – ಸಾವಿರ ಕಿ.ಮೀ ಪಾದಯಾತ್ರೆ" ಬಳ್ಳಾರಿಯಿಂದ ಆರಂಭಗೊಂಡಿದ್ದು ಚಿತ್ರದುರ್ಗ ತಲುಪಿದೆ…

Posted by Naanu Gauri on Thursday, March 12, 2020

ಪಕ್ಷದ ಮುಖಂಡರು, ಕಾರ್ಯಕರ್ತರು, ಜನರು ಸೇರಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾದಯಾತ್ರೆಯ ಪ್ರತಿ ಊರಿನಲ್ಲಿಯೂ ಸಹ ಜಾಗೃತಿ, ಬಹಿರಂಗ ಕಾರ್ಯಕ್ರಮಗಳು ನಡೆಯುತ್ತಿವೆ. ವಸತಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಎಂ.ಸಿ ಚಂದ್ರಶೇಖರ್ ಡೋಂಗ್ರೆ, ಕಾರ್ಯದರ್ಶಿ ಸಿ. ಧರ್ಮರಾಜ, ಡಾ.ಕೆ.ಎಸ್‌ ಜನಾರ್ದನ್, ಎ.ಎಸ್‌ ಮೋನಪ್ಪ, ಪ್ರಸನ್ನಕುಮಾರ್, ಎಎಸ್‌ಎಫ್‌ಐ ಜ್ಯೋತಿ ಕೆ, ವಿಠಲ ಗಜಾಪುರ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಕಾಲಜಾಥದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

“ಸೂರಿಗಾಗಿ ಸಮರ ಹೋರಾಟ ಆರಂಭಿಸಿದ್ದೇವೆ. ಐದು ಜಿಲ್ಲೆಗಳಲ್ಲಿ ಒಂದು ಸಾವಿರ ಕಿ.ಮೀ ನಡೆಯುವ ಈ ಕಾಲ್ನಡಿಗೆ ಜಾಥ 60 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಪ್ರತಿಯೊಬ್ಬ ಸಂಗಾತಿಯು ಕನಿಷ್ಠ ಒಂಟು ಕೋಟಿ, ನಲವತ್ತು ಲಕ್ಷ ಹೆಜ್ಜೆಗಳನ್ನು ಹಾಕಲಿದ್ದಾರೆ. ಈಗಾಗಲೇ 500 ಕಿ.ಮೀ ಕ್ರಮಿಸಿ ಹಲವು ತಾಲ್ಲೂಕುಗಳನ್ನು ದಾಟಿ ಬಂದಿದ್ದೇವೆ. ಒಂದು ಮನೆಯಲ್ಲಿ ಹಲವಾರು ಕುಟುಂಬಗಳು, ಅರ್ಜಿ ಸಲ್ಲಿಸಲೂ ಗೊತ್ತಿಲ್ಲದ ಕುಟುಂಬಗಳು ವಾಸಿಸುತ್ತಿವೆ. ಪರಿಶಿಷ್ಠ ಜಾತಿ, ವರ್ಗದ ನಿರಾಶ್ರಿತರೇ ಹೆಚ್ಚಿರುವುದು ಕಂಡುಬಂದಿದೆ ಇವೆರೆಲ್ಲರ ಪರವಾಗಿ ದನಿಯೆತ್ತುವುದು ನಮ್ಮ ಕರ್ತವ್ಯವಾಗಿದೆ ಎನ್ನುತ್ತಾರೆ ಹೋರಾಟದ ನೇತೃತ್ವ ವಹಿಸಿರುವ ಸಾತಿ ಸುಂದರೇಶ್‌‌ರವರು.

ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಭೀಕರ ಬಡತನವಿದೆ. ಅಲ್ಲಿನ ಶಾಸಕ ಬಿ.ಶ್ರೀರಾಮುಲುರವರು ಸಚಿವರಾಗಿದ್ದಾರೆ. ನಾನು ವಾಲ್ಮೀಕಿ ಸಮುದಾಯದ ದೊಡ್ಡ ನಾಯಕ ಎಂದು ಹೇಳುವ ಶ್ರೀರಾಮುಲುರವರು ತಮ್ಮ ಮಗಳ ಮದುವೆಗೆ ಕನಿಷ್ಠ 500ಕೋಟಿ ರೂ ಖರ್ಚು ಮಾಡುತ್ತಿದ್ದಾರೆ. ಅದೇ ದುಡ್ಡನ್ನು ಉಳಿಸಿ ತಲಾ 5 ಲಕ್ಷ ರೂಗಳಿಗೆ ಒಂದರಂತೆ ಮನೆ ಕಟ್ಟಿಕೊಟ್ಟಿದ್ದರೆ ಆ ಕ್ಷೇತ್ರದಲ್ಲಿ ಕನಿ‌ಷ್ಟ 10000 ಕುಟುಂಬಗಳಿಗೆ ನೆಲೆ ಸಿಗುತ್ತಿತ್ತು. ಈ ದೇಶದ ನೆಲ ಜಲವನ್ನು ಲೂಟಿ ಮಾಡುತ್ತಿರುವವರು ಐಷರಾಮಿ ಜೀವನ ನಡೆಸುತ್ತಿದ್ದರೆ ಜನತೆ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಇದು ರಾಜಕೀಯ ಹೋರಾಟವಾಗಲಿದೆ ಎಂದು ಸಾತಿ ಸುಂದರೇಶ್‌ ತಿಳಿಸಿದ್ದಾರೆ.

ಹಕ್ಕೊತ್ತಾಯಗಳೇನು

ನಿವೇಶನಕ್ಕಾಗಿ ಕಾದಿರಿಸಿದ ಒತ್ತುವರಿಯಾದ ಕಂದಾಯ ಭೂಮಿಯನ್ನು ಕೂಡಲೇ ಸರ್ಕಾರ ವಶಪಡಿಸಿಕೊಂಡು ಬಡಜನರಿಗೆ ನಿವೇಶನಗಳನ್ನು ಹಂಚಬೇಕು.

ಸರ್ಕಾರ ಕಂದಾಯ ಭೂಮಿಯನ್ನು ನಿವೇಶನಕ್ಕಾಗಿ ಮಂಜೂರು ಮಾಡಬೇಕು.

ಒಂದು ವೇಳೆ ಸರ್ಕಾರಿ ಜಮೀನು ಲಭ್ಯವಿಲ್ಲದೇ ಇದ್ದಲ್ಲಿ, ಸರ್ಕಾರವು ಭೂಮಿಯ ಮಾರುಕಟ್ಟೆ ದರಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡಿ, ನಿವೇಶನಕ್ಕಾಗಿ ಖಾಸಗಿ ಭೂಮಿ ಖರೀದಿಗೆ ಮುಂದಾಗಬೇಕು.

ಈ ರೀತಿ ಖಾಸಗಿ ಜಮೀನಿನ ಖರೀದಿ ಸಾಧ್ಯವಾಗಿದಿದ್ದ ಪಕ್ಷದಲ್ಲಿ, ಮನೆ ನಿವೇಶನಗಳ ಹಂಚಿಕೆಗಾಗಿ 1972ರ ವಸತಿ ನಿವೇಶನಗಳ ಮಂಜೂರಾತಿಗಾಗಿ ಕರ್ನಾಟಕ ಭೂ ಸ್ವಾಧೀನ ಕಾಯ್ದೆ (1973ರ ಕರ್ನಾಟಕ ಕಾಯ್ದೆ 18)ರ ಪ್ರಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು.

5 ಎಕರೆಗಿಂತ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿ ಮಾಡಿರುವುದನ್ನು ಖುಲ್ಲಾ ಮಾಡಿಸಿ, ಅದನ್ನು ನಿವೇಶನರಹಿತರಿಗೆ ಮತ್ತು ಭೂರಹಿತರಿಗೆ ಹಂಚಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ವಸತಿ ಯೋಜಣಿಗಳ ಸಹಾಯಧನವನ್ನು 5 ಲಕ್ಷ ರೂಗಳಿಗೆ ಹಚ್ಚಿಸಬೇಕು.

ಏಪ್ರಿಲ್‌ ಮೊದಲ ವಾರದಲ್ಲಿ ಕಾಲ್ನಡಿಗೆ ಜಾಥವು ಬೆಂಗಳೂರು ತಲುಪಲಿದ್ದು ಸರ್ಕಾರಗಳ ಗಮನ ಸೆಳೆಯಲು ಬೃಹತ್‌ ಬಹಿರಂಗ ಸಮಾವೇಶ ನಡೆಯುವ ಸಾಧ್ಯತೆಯಿದೆ. ಈ ಮೂಲಕ ಭೂಮಿ ಮತ್ತು ವಸತಿ ಹೋರಾಟಕ್ಕೆ ಮತ್ತಷ್ಟು ಜೀವ ತಂದು ಕೊಡುವ ಕೆಲಸವನ್ನು ಸಿಪಿಐ ಮಾಡುತ್ತಿದೆ. ಸರ್ಕಾರಗಳು ಈ ಹೋರಾಟಕ್ಕೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮನೆ ಮೇಲೆ ದಾಳಿ ಮಾಡಿ… ಹೇಗೆ ಎದುರಿಸಬೇಕೆಂದು ಗೊತ್ತಿದೆ..’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

"ತಮ್ಮ ನಿವಾಸ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕರ ನಿವಾಸವನ್ನು ಗುರಿಯಾಗಿಸಿಕೊಳ್ಳುವಂತೆ" ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಿಜೆಪಿಗೆ ಸವಾಲು ಹಾಕಿದರು. ರಾಜ್ಯದಲ್ಲಿ, ಟಿಎಂಸಿ ನಾಯಕರ ಮೇಲಿನ ದಾಳಿಗೆ...

ಬೆಂಗಳೂರು: ವಿಶೇಷ ಪೂಜೆ ಹೆಸರಿನಲ್ಲಿ ಐಟಿ ಅಧಿಕಾರಿಗೆ 35 ಲಕ್ಷ ವಂಚನೆ: 59 ವರ್ಷದ ‘ಗಿಳಿ ಶಾಸ್ತ್ರ’ ಹೇಳುವ ವ್ಯಕ್ತಿ ಬಂಧನ

ಬೆಂಗಳೂರು: ವಿಶೇಷ ಪೂಜೆ ಮಾಡುವುದಾಗಿ ಹೇಳಿಕೊಂಡು ಆದಾಯ ತೆರಿಗೆ ಅಧಿಕಾರಿಗೆ 35 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥೇಣಿಯ ಶೇಖರ್...

ಬಿಹಾರ| ರಾಜ್ಯಸಭಾ ಚುನಾವಣೆ ಮತದಾನದಿಂದ ಹೊರಗುಳಿದ ನಾಲ್ವರು ಶಾಸಕರು; ಮಹಾಘಟಬಂಧನ್‌ಗೆ ಹಿನ್ನಡೆ

ಸೋಮವಾರ ಸಂಜೆ 4 ಗಂಟೆಗೆ ಮುಕ್ತಾಯಗೊಂಡ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ವರು ಶಾಸಕರು ಮತದಾನದಿಂದ ಹೊರಗುಳಿಯುವ ಮೂಲಕ ಬಿಹಾರದ ಮಹಾಘಟಬಂಧನ್‌ಗೆ ಭಾರಿ ಹಿನ್ನಡೆಯಾಗಿದೆ. ಐದನೇ ಸ್ಥಾನಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ವಿರೋಧ ಮೈತ್ರಿಕೂಟದ ನಿರೀಕ್ಷೆಗೆ ಭಾರಿ...

ರಾಜ್ಯಸಭೆಯಲ್ಲಿ LPG ಕೊರತೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ; ಪ್ರತಿಪಕ್ಷ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದ ಸರ್ಕಾರ !

ನವದೆಹಲಿ: ರಾಜ್ಯಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್‌ಪಿಜಿ ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಅಡುಗೆ ಅನಿಲದ ಬಿಕ್ಕಟ್ಟು ಮತ್ತು ಕಾಳಸಂತೆಕೋರತನವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು...

ಬೆಂಗಳೂರು| ಹಣ ನೀಡಲು ನಿರಾಕರಿಸಿದ ವ್ಯಕ್ತಿಯನ್ನು ಮಕ್ಕಳ ಮುಂದೆಯೇ ಥಳಿಸಿ ಕೊಂದ ಗುಂಪು

ಹಣ ನೀಡಲು ನಿರಾಕರಿಸಿದ ತಂದೆಯನ್ನು ಮಕ್ಕಳ ಮುಂದೆಯೇ ಗುಂಪೊಂದು ಥಳಿಸಿ ಕೊಂದಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ವಿಲ್ಸನ್ ಗಾರ್ಡನ್‌ನ ಬಡಾ ಮಕನ್ ರಸ್ತೆ ಬಳಿ ರಶೀದ್ ಪಾಷಾ ಎಂದು...

ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆ ಪ್ರಶ್ನಿಸಿ ಸಿಬಿಐ ಅರ್ಜಿ; ಪ್ರತಿಕ್ರಿಯಿಸಲು ಕೇಜ್ರಿವಾಲ್-ಸಿಸೋಡಿಯಾಗೆ ಸಮಯ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರ ತಮ್ಮ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ ಅರ್ಜಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ದೆಹಲಿ...

ಪ್ರಶ್ನೆಗಳಿಗೆ ಉತ್ತರಿಸದ ಸಚಿವರು: ಸದನ ಮುಂದೂಡಿದ ಸ್ಪೀಕರ್ ಯು.ಟಿ ಖಾದರ್

ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಸೋಮವಾರ (ಮಾ.16) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಮುಂದೂಡಿಕೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ವಿಧಾನಸಭೆಯಲ್ಲಿ...

‘ಆಪರೇಷನ್ ಸಿಂಧೂರ್’ ಕುರಿತ ಪೋಸ್ಟ್: ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಹರಿಯಾಣ ಸರ್ಕಾರ

'ಆಪರೇಷನ್ ಸಿಂಧೂರ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧದ ಈ ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಹರಿಯಾಣ...

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...