Homeಚಳವಳಿಸೂರಿಗಾಗಿ ಕೋಟಿ ಹೆಜ್ಜೆ : ನೆಲೆ - ನಿವೇಶನಕ್ಕಾಗಿ ಬಡಜನರ ಬೃಹತ್‌ ಕಾಲ್ನಡಿಗೆ ಜಾಥ...

ಸೂರಿಗಾಗಿ ಕೋಟಿ ಹೆಜ್ಜೆ : ನೆಲೆ – ನಿವೇಶನಕ್ಕಾಗಿ ಬಡಜನರ ಬೃಹತ್‌ ಕಾಲ್ನಡಿಗೆ ಜಾಥ…

ಬಿ.ಶ್ರೀರಾಮುಲು ತನ್ನ ಮಗಳ ಅದ್ದೂರಿ ಮದುವೆಗಾಗಿ 500ಕೋಟಿ ಖರ್ಚು ಮಾಡುವ ಬದಲು ಅವರ ಮೊಳಕಾಲ್ಮೂರು ಕ್ಷೇತ್ರದಲ್ಲಿ 10000 ಕುಟುಂಬಗಳಿಗೆ ಮನೆ ಕಟ್ಟಿಸಿಕೊಡಬಹುದು - ಸಾತಿ ಸುಂದರೇಶ್‌.

- Advertisement -
- Advertisement -

ಕರ್ನಾಟಕ ಭಾರತದಲ್ಲಿಯೇ ಮುಂದುವರಿದ, ಅಭಿವೃದ್ಧಿ ಹೊಂದಿದ್ದ ರಾಜ್ಯಗಳಲ್ಲೊಂದು. ಕೇಂದ್ರ ಹೆಚ್ಚಿನ ತೆರಿಗೆ ಕಟ್ಟುವ, ಹತ್ತಾರು ನದಿಗಳಿರುವ, ಸಂಪಧ್ಭರಿತ ರಾಜ್ಯ. ಆದರೆ ಇಂತಹ ರಾಜ್ಯದಲ್ಲಿಯೂ ಸಹ ಗಾಳಿ, ಮಳೆ, ಬಿಸಿಲಿನಿಂದ ಪಾರಾಗಲು ನೆಲೆ ಇಲ್ಲದೇ ಲಕ್ಷಾಂತರ ಜನರು ಬೀದಿಯಲ್ಲಿದ್ದಾರೆ ಎಂಬುದೂ ಸಹ ವಾಸ್ತವ.

ಉಳುವವನೆ ಭೂ ಓಡೆಯ ನಂತಹ ಕಾಯ್ದೆಗಳ ಹೊರತಾಗಿಯೂ ಕೂಡ ಎಲ್ಲಾ ಕುಟುಂಬಗಳಿಗೂ ಭೂಮಿಯಿರಲಿ, ಕನಿಷ್ಟ ಸೂರು ಕೂಡ ಇಲ್ಲದೇ ಸಾವಿರಾರು ಕುಟುಂಬಗಳು ಬದುಕು ಸವೆಸುತ್ತಿರುವುದು ನಮ್ಮ ಅಭಿವೃದ್ದಿ ಮಾದರಿ ಯಾರ ಪರ ಎಂಬುದನ್ನು ತೋರಿಸುತ್ತದೆ.

ಇಂತಹ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ತುಂಡು ಭೂಮಿ, ಒಂದು ಮನೆ ಇರಬೇಕೆಂದು ಒತ್ತಾಯಿಸಿ ಹಲವು ಭೂ-ವಸತಿ ಹೋರಾಟಗಳು ನಡೆದಿವೆ. ದೊಡ್ಡ ದೊಡ್ಡ ಸಂಘರ್ಷಗಳು ಏರ್ಪಟ್ಟಿವೆ. ಆದರೆ ಯಾವ ಸರ್ಕಾರಗಳೂ ಸಹ ಬಡಜನರ ಕೂಗಿಗೆ ಸ್ಪಂದಿಸಿಲ್ಲ. ಹಾಗಂತ ಹೋರಾಟ ಮಾತ್ರ ನಿಂತಿಲ್ಲ. ಈ ಚಳವಳಿಗಳ ಕಾರಣದಿಂದಾಗಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಜನರಿಗೆ ಭೂಮಿ, ವಸತಿ, ಹಕ್ಕು ಪತ್ರಗಳು ಸಿಕ್ಕಿವೆ.

ಈಗ ರಾಜ್ಯದ ಎಲ್ಲಾ ನಾಗರಿಕರ ವಸತಿ ಹಕ್ಕಿಗಾಗಿ ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್‌ ಪಕ್ಷದ(CPI) ನೇತೃತ್ವದಲ್ಲಿ “ಸೂರಿಗಾಗಿ ಕೋಟಿ ಹೆಜ್ಜೆ” ಎಂಬ ಬೃಹತ್‌ ಕಾಲ್ನಡಿಗೆ ಜಾಥಾದ ಹೋರಾಟ ಆರಂಭವಾಗಿದೆ. ಬಳ್ಳಾರಿಯಿಂದ ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಮಾರ್ಗವಾಗಿ ಬೆಂಗಳೂರಿನವರೆಗೂ ಕನಿಷ್ಠ ಒಂದು ಸಾವಿರ ಕಿ.ಮೀ ನಡೆದು ಬರುವ ವಿಶಿಷ್ಠ ಹೋರಾಟ ನಡೆಯುತ್ತಿದೆ. ಫೆ.02ರಂದು ಬಳ್ಳಾರಿಯಲ್ಲಿ ಆರಂಭಗೊಂಡ ಜಾಥವು ಯಶಸ್ವಿಯಾಗಿ ದಾವಣಗೆರೆ ಜಿಲ್ಲೆ ದಾಟಿ ಚಿತ್ರದುರ್ಗವನ್ನು ತಲುಪಿದೆ.

ಜಾಥಾದ ವಿಡಿಯೋ ನೋಡಿ

ಸೂರಿಗಾಗಿ ಕೋಟಿ ಹೆಜ್ಜೆ – ಸಾವಿರ ಕಿ.ಮೀ ಪಾದಯಾತ್ರೆ

ವಸತಿ-ನಿವೇಶನ ರಹಿತರಿಗೆ ವಸತಿ ಹಕ್ಕಿಗಾಗಿ ಆಗ್ರಹಿಸಿ "ಸೂರಿಗಾಗಿ ಕೋಟಿ ಹೆಜ್ಜೆ – ಸಾವಿರ ಕಿ.ಮೀ ಪಾದಯಾತ್ರೆ" ಬಳ್ಳಾರಿಯಿಂದ ಆರಂಭಗೊಂಡಿದ್ದು ಚಿತ್ರದುರ್ಗ ತಲುಪಿದೆ…

Posted by Naanu Gauri on Thursday, March 12, 2020

ಪಕ್ಷದ ಮುಖಂಡರು, ಕಾರ್ಯಕರ್ತರು, ಜನರು ಸೇರಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾದಯಾತ್ರೆಯ ಪ್ರತಿ ಊರಿನಲ್ಲಿಯೂ ಸಹ ಜಾಗೃತಿ, ಬಹಿರಂಗ ಕಾರ್ಯಕ್ರಮಗಳು ನಡೆಯುತ್ತಿವೆ. ವಸತಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಎಂ.ಸಿ ಚಂದ್ರಶೇಖರ್ ಡೋಂಗ್ರೆ, ಕಾರ್ಯದರ್ಶಿ ಸಿ. ಧರ್ಮರಾಜ, ಡಾ.ಕೆ.ಎಸ್‌ ಜನಾರ್ದನ್, ಎ.ಎಸ್‌ ಮೋನಪ್ಪ, ಪ್ರಸನ್ನಕುಮಾರ್, ಎಎಸ್‌ಎಫ್‌ಐ ಜ್ಯೋತಿ ಕೆ, ವಿಠಲ ಗಜಾಪುರ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಕಾಲಜಾಥದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

“ಸೂರಿಗಾಗಿ ಸಮರ ಹೋರಾಟ ಆರಂಭಿಸಿದ್ದೇವೆ. ಐದು ಜಿಲ್ಲೆಗಳಲ್ಲಿ ಒಂದು ಸಾವಿರ ಕಿ.ಮೀ ನಡೆಯುವ ಈ ಕಾಲ್ನಡಿಗೆ ಜಾಥ 60 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಪ್ರತಿಯೊಬ್ಬ ಸಂಗಾತಿಯು ಕನಿಷ್ಠ ಒಂಟು ಕೋಟಿ, ನಲವತ್ತು ಲಕ್ಷ ಹೆಜ್ಜೆಗಳನ್ನು ಹಾಕಲಿದ್ದಾರೆ. ಈಗಾಗಲೇ 500 ಕಿ.ಮೀ ಕ್ರಮಿಸಿ ಹಲವು ತಾಲ್ಲೂಕುಗಳನ್ನು ದಾಟಿ ಬಂದಿದ್ದೇವೆ. ಒಂದು ಮನೆಯಲ್ಲಿ ಹಲವಾರು ಕುಟುಂಬಗಳು, ಅರ್ಜಿ ಸಲ್ಲಿಸಲೂ ಗೊತ್ತಿಲ್ಲದ ಕುಟುಂಬಗಳು ವಾಸಿಸುತ್ತಿವೆ. ಪರಿಶಿಷ್ಠ ಜಾತಿ, ವರ್ಗದ ನಿರಾಶ್ರಿತರೇ ಹೆಚ್ಚಿರುವುದು ಕಂಡುಬಂದಿದೆ ಇವೆರೆಲ್ಲರ ಪರವಾಗಿ ದನಿಯೆತ್ತುವುದು ನಮ್ಮ ಕರ್ತವ್ಯವಾಗಿದೆ ಎನ್ನುತ್ತಾರೆ ಹೋರಾಟದ ನೇತೃತ್ವ ವಹಿಸಿರುವ ಸಾತಿ ಸುಂದರೇಶ್‌‌ರವರು.

ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಭೀಕರ ಬಡತನವಿದೆ. ಅಲ್ಲಿನ ಶಾಸಕ ಬಿ.ಶ್ರೀರಾಮುಲುರವರು ಸಚಿವರಾಗಿದ್ದಾರೆ. ನಾನು ವಾಲ್ಮೀಕಿ ಸಮುದಾಯದ ದೊಡ್ಡ ನಾಯಕ ಎಂದು ಹೇಳುವ ಶ್ರೀರಾಮುಲುರವರು ತಮ್ಮ ಮಗಳ ಮದುವೆಗೆ ಕನಿಷ್ಠ 500ಕೋಟಿ ರೂ ಖರ್ಚು ಮಾಡುತ್ತಿದ್ದಾರೆ. ಅದೇ ದುಡ್ಡನ್ನು ಉಳಿಸಿ ತಲಾ 5 ಲಕ್ಷ ರೂಗಳಿಗೆ ಒಂದರಂತೆ ಮನೆ ಕಟ್ಟಿಕೊಟ್ಟಿದ್ದರೆ ಆ ಕ್ಷೇತ್ರದಲ್ಲಿ ಕನಿ‌ಷ್ಟ 10000 ಕುಟುಂಬಗಳಿಗೆ ನೆಲೆ ಸಿಗುತ್ತಿತ್ತು. ಈ ದೇಶದ ನೆಲ ಜಲವನ್ನು ಲೂಟಿ ಮಾಡುತ್ತಿರುವವರು ಐಷರಾಮಿ ಜೀವನ ನಡೆಸುತ್ತಿದ್ದರೆ ಜನತೆ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಇದು ರಾಜಕೀಯ ಹೋರಾಟವಾಗಲಿದೆ ಎಂದು ಸಾತಿ ಸುಂದರೇಶ್‌ ತಿಳಿಸಿದ್ದಾರೆ.

ಹಕ್ಕೊತ್ತಾಯಗಳೇನು

ನಿವೇಶನಕ್ಕಾಗಿ ಕಾದಿರಿಸಿದ ಒತ್ತುವರಿಯಾದ ಕಂದಾಯ ಭೂಮಿಯನ್ನು ಕೂಡಲೇ ಸರ್ಕಾರ ವಶಪಡಿಸಿಕೊಂಡು ಬಡಜನರಿಗೆ ನಿವೇಶನಗಳನ್ನು ಹಂಚಬೇಕು.

ಸರ್ಕಾರ ಕಂದಾಯ ಭೂಮಿಯನ್ನು ನಿವೇಶನಕ್ಕಾಗಿ ಮಂಜೂರು ಮಾಡಬೇಕು.

ಒಂದು ವೇಳೆ ಸರ್ಕಾರಿ ಜಮೀನು ಲಭ್ಯವಿಲ್ಲದೇ ಇದ್ದಲ್ಲಿ, ಸರ್ಕಾರವು ಭೂಮಿಯ ಮಾರುಕಟ್ಟೆ ದರಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡಿ, ನಿವೇಶನಕ್ಕಾಗಿ ಖಾಸಗಿ ಭೂಮಿ ಖರೀದಿಗೆ ಮುಂದಾಗಬೇಕು.

ಈ ರೀತಿ ಖಾಸಗಿ ಜಮೀನಿನ ಖರೀದಿ ಸಾಧ್ಯವಾಗಿದಿದ್ದ ಪಕ್ಷದಲ್ಲಿ, ಮನೆ ನಿವೇಶನಗಳ ಹಂಚಿಕೆಗಾಗಿ 1972ರ ವಸತಿ ನಿವೇಶನಗಳ ಮಂಜೂರಾತಿಗಾಗಿ ಕರ್ನಾಟಕ ಭೂ ಸ್ವಾಧೀನ ಕಾಯ್ದೆ (1973ರ ಕರ್ನಾಟಕ ಕಾಯ್ದೆ 18)ರ ಪ್ರಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು.

5 ಎಕರೆಗಿಂತ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿ ಮಾಡಿರುವುದನ್ನು ಖುಲ್ಲಾ ಮಾಡಿಸಿ, ಅದನ್ನು ನಿವೇಶನರಹಿತರಿಗೆ ಮತ್ತು ಭೂರಹಿತರಿಗೆ ಹಂಚಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ವಸತಿ ಯೋಜಣಿಗಳ ಸಹಾಯಧನವನ್ನು 5 ಲಕ್ಷ ರೂಗಳಿಗೆ ಹಚ್ಚಿಸಬೇಕು.

ಏಪ್ರಿಲ್‌ ಮೊದಲ ವಾರದಲ್ಲಿ ಕಾಲ್ನಡಿಗೆ ಜಾಥವು ಬೆಂಗಳೂರು ತಲುಪಲಿದ್ದು ಸರ್ಕಾರಗಳ ಗಮನ ಸೆಳೆಯಲು ಬೃಹತ್‌ ಬಹಿರಂಗ ಸಮಾವೇಶ ನಡೆಯುವ ಸಾಧ್ಯತೆಯಿದೆ. ಈ ಮೂಲಕ ಭೂಮಿ ಮತ್ತು ವಸತಿ ಹೋರಾಟಕ್ಕೆ ಮತ್ತಷ್ಟು ಜೀವ ತಂದು ಕೊಡುವ ಕೆಲಸವನ್ನು ಸಿಪಿಐ ಮಾಡುತ್ತಿದೆ. ಸರ್ಕಾರಗಳು ಈ ಹೋರಾಟಕ್ಕೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...