Homeಆರೋಗ್ಯ2017ರಲ್ಲಿ ಅನಾರೋಗ್ಯದಿಂದ ಸತ್ತವರ ಸಂಖ್ಯೆ 99 ಲಕ್ಷ. ಎಲ್ಲಿದ್ದಾರೆ ದೇಶಪ್ರೇಮಿಗಳು?

2017ರಲ್ಲಿ ಅನಾರೋಗ್ಯದಿಂದ ಸತ್ತವರ ಸಂಖ್ಯೆ 99 ಲಕ್ಷ. ಎಲ್ಲಿದ್ದಾರೆ ದೇಶಪ್ರೇಮಿಗಳು?

ಅನಾರೋಗ್ಯಕ್ಕೆ ಬಲಿಯಾದವರ ಸಂಖ್ಯೆ ಭಯೋತ್ಪಾದನೆಗೆ ಸತ್ತವರ ಸಂಖ್ಯೆಗಿಂತಲೂ 8,000 ಪಟ್ಟು ಹೆಚ್ಚು

- Advertisement -
- Advertisement -

| ಜಿ.ಆರ್ ವಿದ್ಯಾರಣ್ಯ |

ನಮ್ಮೆಲ್ಲರಿಗೂ ತಿಳಿದಂತೆ 2019ರ ಚುನಾವಣೆ ಚರ್ಚೆ ದೇಶಪ್ರೇಮ. ಆತಂಕವಾದ, ಮುಂತಾದವುಗಳ ಮೇಲೆಯೇ ಹೆಚ್ಚಾಗಿ ನಡೆಯಿತು. ದೇಶದ ಆರ್ಥಿಕ ಪರಿಸ್ಥಿತಿ ಅಥವಾ ನಿರುದ್ಯೋಗ ಸಮಸ್ಯೆ, ಕುಡಿಯುವ ನೀರು, ಸ್ವಚ್ಛ ಗಾಳಿ, ಪರ್ಯಾವರಣ, ರೈತ ಸಂಕಷ್ಟ, ಹಣದುಬ್ಬರ, ಬೆಲೆವಾಸಿ, ಇವುಗಳ ಮೇಲಿನ ಚರ್ಚೆಯನ್ನು ಯಾವ ರಾಜಕೀಯ ಪಕ್ಷವಾಗಲೀ, ನಾಯಕರಾಗಲೀ, ಪ್ರಜೆಗಳಾಗಲೀ ಅವಶ್ಯಕ ಎಂದು ಪರಿಗಣಿಸಲಿಲ್ಲ.

ದೇಶಪ್ರೇಮ ಮುಖ್ಯವೇನೋ ಸರಿ, ಅವಶ್ಯಕತೆ ಬಿದ್ದಲ್ಲಿ ದೇಶಕ್ಕೋಸ್ಕರ ಹೋರಾಡಲು ಅಥವಾ ಪ್ರಾಣತ್ಯಾಗಕ್ಕೂ ಸಿದ್ಧರಾಗಿರಬೇಕು, ಆದರೆ ಪ್ರಾಣತ್ಯಾಗಕ್ಕೆ ಮುಂಚೆ ದೇಶಪ್ರೇಮಿ ಜೀವಂತವಾಗಿರಬೇಕು, ಅಲ್ಲವೇ? 2017ರಲ್ಲಿ ಭಯೋತ್ಪಾದನೆಗೆ ಬಲಿಯಾದವರ ಸಂಖ್ಯೆ 766 ಅಂದರೆ ಆ ವರ್ಷ ಸತ್ತವರ ಒಟ್ಟು ಸಂಖ್ಯೆಯ 0.007%. ಆದರೆ ಆರೋಗ್ಯ ಸಂಬಂಧಿ ಕಾರಣದಿಂದ ಸತ್ತವರ ಸಂಖ್ಯೆ 66 ಲಕ್ಷ ಅಥವಾ ಒಟ್ಟು ಸತ್ತವರ ಸಂಖ್ಯೆಯ 90%. 2017ರಲ್ಲಿ ಸಮಾನಾಂತರವಾಗಿ ಪರಿಶೀಲಿಸಬಲ್ಲ ಸರಕಾರಿ ಅಂಕಿ-ಅಂಶಗಳ ಆಧಾರದ ಮೇಲೆ ಹೇಳುವುದಾದರೆ ನಮ್ಮ ರಕ್ಷಣಾ ಬಜೆಟ್ ನಮ್ಮ ಜನರ ಸ್ವಾಸ್ಥ್ಯ ಮುಂಗಡಪತ್ರದ ದುಪ್ಪಟ್ಟು.

ಸಾರ್ವಜನಿಕ ಸ್ವಾಸ್ಥ್ಯ ಮತ್ತು ಶಿಕ್ಷಣದ ಮೇಲೆ ದೇಶದ ಹೂಡುವಳಿ ಕಡಿಮೆಯಾಗುತ್ತಿದ್ದು ಇದು ನೇರವಾಗಿ ನೇರವಾಗಿ ಔದ್ಯೋಗಿಕ ಮತ್ತು ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ. ಭಾರತೀಯರ ಅತ್ತ್ಯುತ್ತಮ ಉತ್ಪನ್ನಕಾರಕ ಸಾಮರ್ಥ್ಯ ಕೇವಲ ಆರೂವರೆ ವರ್ಷ ಮಾತ್ರ ಆದರೆ ಚೀನಾ ದೇಶದ ಜನರ ಸಾಮರ್ಥ್ಯ 20 ವರ್ಷ, ಅಂದರೆ ನಮ್ಮ ಮೂರು ಪಟ್ಟು. ಬ್ರೆಜಿಲ್ ದೇಶದಲ್ಲಿ 16 ವರ್ಷ ಮತ್ತು ಶ್ರೀಲಂಕಾದಲ್ಲಿ 13 ವರ್ಷ ಎಂದರೆ ಆಶ್ಚರ್ಯವಲ್ಲವೇ? 195 ದೇಶಗಳ ಮಾನವ ಬಂಡವಾಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಥಾನ 158. ಇದನ್ನು ಸೆಪ್ಟೆಂಬರ್ 2018ರಲ್ಲಿ “ಇಂಡಿಯಾಸ್ಪೆಂಡ್” ಸಂಸ್ಥೆ ಪ್ರಕಟಿಸಿದೆ.

ಅನಾರೋಗ್ಯಕ್ಕೆ ಬಲಿಯಾದವರ ಸಂಖ್ಯೆ ಭಯೋತ್ಪಾದನೆಗೆ ಸತ್ತವರ ಸಂಖ್ಯೆಗಿಂತಲೂ 8,000 ಪಟ್ಟು ಹೆಚ್ಚು

2017ರಲ್ಲಿ ಸತ್ತವರು ಒಟ್ಟು 99 ಲಕ್ಷ, ಅದರಲ್ಲಿ ಡಯಾಬಿಟೀಸ್ನಿಂದ ಸತ್ತವರು 2,54,500, ಆತ್ಮಹತ್ಯೆ ಮಾಡಿಕೊಂಡವರು 2,10,800, ಸಾಂಕ್ರಮಿಕ ರೋಗಕ್ಕೆ ತುತ್ತಾದವರು 20 ಲಕ್ಷ, ಸಾಂಕ್ರಮಿಕವಲ್ಲದ ರೋಗದಿಂದ ಸತ್ತವರು 62 ಲಕ್ಷ. ಇವೆಲ್ಲವನ್ನು ಒಟ್ಟುಗೂಡಿಸಿದಲ್ಲಿ ಆತಂಕವಾದಕ್ಕೆ ಬಲಿಯದವರ ಸಂಖ್ಯೆಯ 8,000 ಪಟ್ಟು ಜನ ಆರೋಗ್ಯ ಸಂಬಂಧಿ ಕಾರಣಕ್ಕೆ ಜೀವ ಕಳೆದು ಕೊಂಡಿದ್ದಾರೆ.

ಹಾಗಾದರೆ ನಮ್ಮ ಸರಕಾರದ ಆದ್ಯತೆ ಯಾವ ವಿಷಯಕ್ಕೆ ಇರಬೇಕು, ಚುನಾವಣೆಯ ಸಮಯದಲ್ಲಿ ಚರ್ಚೆ ಯಾವ ವಿಷಯದ ಮೇಲಿರಬೇಕು ಅಥವಾ ಈ ವಿಷಯದಲ್ಲಿ ಮಾತನಾಡುವ ಹಕ್ಕು ಜನಸಾಮಾನ್ಯರಿಗಿದೆಯೇ? ನಮ್ಮ ಮುಖ್ಯ ವಾಹಿನಿ ಮಾಧ್ಯಮ ಇಂತಹ ವಿಷಯದ ಚರ್ಚೆ ಇತ್ತೀಚೆಗೆ ಏರ್ಪಡಿಸಿರುವುದು ನಿಮಗೆ ನೆನಪಿದೆಯೇ ನೀವೇ ಯೋಚಿಸಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...