Homeಆರೋಗ್ಯ2017ರಲ್ಲಿ ಅನಾರೋಗ್ಯದಿಂದ ಸತ್ತವರ ಸಂಖ್ಯೆ 99 ಲಕ್ಷ. ಎಲ್ಲಿದ್ದಾರೆ ದೇಶಪ್ರೇಮಿಗಳು?

2017ರಲ್ಲಿ ಅನಾರೋಗ್ಯದಿಂದ ಸತ್ತವರ ಸಂಖ್ಯೆ 99 ಲಕ್ಷ. ಎಲ್ಲಿದ್ದಾರೆ ದೇಶಪ್ರೇಮಿಗಳು?

ಅನಾರೋಗ್ಯಕ್ಕೆ ಬಲಿಯಾದವರ ಸಂಖ್ಯೆ ಭಯೋತ್ಪಾದನೆಗೆ ಸತ್ತವರ ಸಂಖ್ಯೆಗಿಂತಲೂ 8,000 ಪಟ್ಟು ಹೆಚ್ಚು

- Advertisement -
- Advertisement -

| ಜಿ.ಆರ್ ವಿದ್ಯಾರಣ್ಯ |

ನಮ್ಮೆಲ್ಲರಿಗೂ ತಿಳಿದಂತೆ 2019ರ ಚುನಾವಣೆ ಚರ್ಚೆ ದೇಶಪ್ರೇಮ. ಆತಂಕವಾದ, ಮುಂತಾದವುಗಳ ಮೇಲೆಯೇ ಹೆಚ್ಚಾಗಿ ನಡೆಯಿತು. ದೇಶದ ಆರ್ಥಿಕ ಪರಿಸ್ಥಿತಿ ಅಥವಾ ನಿರುದ್ಯೋಗ ಸಮಸ್ಯೆ, ಕುಡಿಯುವ ನೀರು, ಸ್ವಚ್ಛ ಗಾಳಿ, ಪರ್ಯಾವರಣ, ರೈತ ಸಂಕಷ್ಟ, ಹಣದುಬ್ಬರ, ಬೆಲೆವಾಸಿ, ಇವುಗಳ ಮೇಲಿನ ಚರ್ಚೆಯನ್ನು ಯಾವ ರಾಜಕೀಯ ಪಕ್ಷವಾಗಲೀ, ನಾಯಕರಾಗಲೀ, ಪ್ರಜೆಗಳಾಗಲೀ ಅವಶ್ಯಕ ಎಂದು ಪರಿಗಣಿಸಲಿಲ್ಲ.

ದೇಶಪ್ರೇಮ ಮುಖ್ಯವೇನೋ ಸರಿ, ಅವಶ್ಯಕತೆ ಬಿದ್ದಲ್ಲಿ ದೇಶಕ್ಕೋಸ್ಕರ ಹೋರಾಡಲು ಅಥವಾ ಪ್ರಾಣತ್ಯಾಗಕ್ಕೂ ಸಿದ್ಧರಾಗಿರಬೇಕು, ಆದರೆ ಪ್ರಾಣತ್ಯಾಗಕ್ಕೆ ಮುಂಚೆ ದೇಶಪ್ರೇಮಿ ಜೀವಂತವಾಗಿರಬೇಕು, ಅಲ್ಲವೇ? 2017ರಲ್ಲಿ ಭಯೋತ್ಪಾದನೆಗೆ ಬಲಿಯಾದವರ ಸಂಖ್ಯೆ 766 ಅಂದರೆ ಆ ವರ್ಷ ಸತ್ತವರ ಒಟ್ಟು ಸಂಖ್ಯೆಯ 0.007%. ಆದರೆ ಆರೋಗ್ಯ ಸಂಬಂಧಿ ಕಾರಣದಿಂದ ಸತ್ತವರ ಸಂಖ್ಯೆ 66 ಲಕ್ಷ ಅಥವಾ ಒಟ್ಟು ಸತ್ತವರ ಸಂಖ್ಯೆಯ 90%. 2017ರಲ್ಲಿ ಸಮಾನಾಂತರವಾಗಿ ಪರಿಶೀಲಿಸಬಲ್ಲ ಸರಕಾರಿ ಅಂಕಿ-ಅಂಶಗಳ ಆಧಾರದ ಮೇಲೆ ಹೇಳುವುದಾದರೆ ನಮ್ಮ ರಕ್ಷಣಾ ಬಜೆಟ್ ನಮ್ಮ ಜನರ ಸ್ವಾಸ್ಥ್ಯ ಮುಂಗಡಪತ್ರದ ದುಪ್ಪಟ್ಟು.

ಸಾರ್ವಜನಿಕ ಸ್ವಾಸ್ಥ್ಯ ಮತ್ತು ಶಿಕ್ಷಣದ ಮೇಲೆ ದೇಶದ ಹೂಡುವಳಿ ಕಡಿಮೆಯಾಗುತ್ತಿದ್ದು ಇದು ನೇರವಾಗಿ ನೇರವಾಗಿ ಔದ್ಯೋಗಿಕ ಮತ್ತು ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ. ಭಾರತೀಯರ ಅತ್ತ್ಯುತ್ತಮ ಉತ್ಪನ್ನಕಾರಕ ಸಾಮರ್ಥ್ಯ ಕೇವಲ ಆರೂವರೆ ವರ್ಷ ಮಾತ್ರ ಆದರೆ ಚೀನಾ ದೇಶದ ಜನರ ಸಾಮರ್ಥ್ಯ 20 ವರ್ಷ, ಅಂದರೆ ನಮ್ಮ ಮೂರು ಪಟ್ಟು. ಬ್ರೆಜಿಲ್ ದೇಶದಲ್ಲಿ 16 ವರ್ಷ ಮತ್ತು ಶ್ರೀಲಂಕಾದಲ್ಲಿ 13 ವರ್ಷ ಎಂದರೆ ಆಶ್ಚರ್ಯವಲ್ಲವೇ? 195 ದೇಶಗಳ ಮಾನವ ಬಂಡವಾಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಥಾನ 158. ಇದನ್ನು ಸೆಪ್ಟೆಂಬರ್ 2018ರಲ್ಲಿ “ಇಂಡಿಯಾಸ್ಪೆಂಡ್” ಸಂಸ್ಥೆ ಪ್ರಕಟಿಸಿದೆ.

ಅನಾರೋಗ್ಯಕ್ಕೆ ಬಲಿಯಾದವರ ಸಂಖ್ಯೆ ಭಯೋತ್ಪಾದನೆಗೆ ಸತ್ತವರ ಸಂಖ್ಯೆಗಿಂತಲೂ 8,000 ಪಟ್ಟು ಹೆಚ್ಚು

2017ರಲ್ಲಿ ಸತ್ತವರು ಒಟ್ಟು 99 ಲಕ್ಷ, ಅದರಲ್ಲಿ ಡಯಾಬಿಟೀಸ್ನಿಂದ ಸತ್ತವರು 2,54,500, ಆತ್ಮಹತ್ಯೆ ಮಾಡಿಕೊಂಡವರು 2,10,800, ಸಾಂಕ್ರಮಿಕ ರೋಗಕ್ಕೆ ತುತ್ತಾದವರು 20 ಲಕ್ಷ, ಸಾಂಕ್ರಮಿಕವಲ್ಲದ ರೋಗದಿಂದ ಸತ್ತವರು 62 ಲಕ್ಷ. ಇವೆಲ್ಲವನ್ನು ಒಟ್ಟುಗೂಡಿಸಿದಲ್ಲಿ ಆತಂಕವಾದಕ್ಕೆ ಬಲಿಯದವರ ಸಂಖ್ಯೆಯ 8,000 ಪಟ್ಟು ಜನ ಆರೋಗ್ಯ ಸಂಬಂಧಿ ಕಾರಣಕ್ಕೆ ಜೀವ ಕಳೆದು ಕೊಂಡಿದ್ದಾರೆ.

ಹಾಗಾದರೆ ನಮ್ಮ ಸರಕಾರದ ಆದ್ಯತೆ ಯಾವ ವಿಷಯಕ್ಕೆ ಇರಬೇಕು, ಚುನಾವಣೆಯ ಸಮಯದಲ್ಲಿ ಚರ್ಚೆ ಯಾವ ವಿಷಯದ ಮೇಲಿರಬೇಕು ಅಥವಾ ಈ ವಿಷಯದಲ್ಲಿ ಮಾತನಾಡುವ ಹಕ್ಕು ಜನಸಾಮಾನ್ಯರಿಗಿದೆಯೇ? ನಮ್ಮ ಮುಖ್ಯ ವಾಹಿನಿ ಮಾಧ್ಯಮ ಇಂತಹ ವಿಷಯದ ಚರ್ಚೆ ಇತ್ತೀಚೆಗೆ ಏರ್ಪಡಿಸಿರುವುದು ನಿಮಗೆ ನೆನಪಿದೆಯೇ ನೀವೇ ಯೋಚಿಸಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...