Homeಕರ್ನಾಟಕಆಸ್ಪತ್ರೆಗಾಗಿ ಆನ್‍ಲೈನ್ ಅಭಿಯಾನ ಕ್ಯಾರೇ ಎನ್ನದ ಉತ್ತರಕನ್ನಡ ಸಂಸದ, ಸಚಿವರು

ಆಸ್ಪತ್ರೆಗಾಗಿ ಆನ್‍ಲೈನ್ ಅಭಿಯಾನ ಕ್ಯಾರೇ ಎನ್ನದ ಉತ್ತರಕನ್ನಡ ಸಂಸದ, ಸಚಿವರು

ಉತ್ತರ ಕನ್ನಡವೆಂದರೆ ಉತ್ತರಗಳೇ ಇಲ್ಲದ ಸಮಸ್ಯೆಗಳ ನತದೃಷ್ಟ ಜಿಲ್ಲೆ! ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬುದು ಉತ್ತರ ಕನ್ನಡದ ಬಹುದಿನದ ಕೊರಗು.

- Advertisement -
- Advertisement -

| ಶುದ್ದೋಧನ |

ಉತ್ತರ ಕನ್ನಡವೆಂದರೆ ಉತ್ತರಗಳೇ ಇಲ್ಲದ ಸಮಸ್ಯೆಗಳ ನತದೃಷ್ಟ ಜಿಲ್ಲೆ! ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬುದು ಉತ್ತರ ಕನ್ನಡದ ಬಹುದಿನದ ಕೊರಗು. ಇದನ್ನು ಆಳುವ ಖೂಳರು ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹೈವೇ-ಹಳ್ಳಿಗಳಲ್ಲಿ ಅಪಘಾತ ಸಾಮಾನ್ಯ ಎಂಬಂತಾಗಿದೆ. ತಲೆಗೆ ಗಂಭೀರ ಗಾಯಗಳಾದರೆ, ಹೃದಯಕ್ಕೆ ಹೊಡೆತ ಬಿದ್ದರೆ, ಹೃದಯಾಘಾತ ಸಂಭವಿಸಿದರೆ, ಹೆರಿಗೆ ಸಮಯದಲ್ಲಿ ಸಮಸ್ಯೆಯಾದರೆ, ಜೀರ್ಣಾಂಗಕ್ಕೆ ಪೆಟ್ಟಾಗಿ ರಕ್ತಸ್ರಾವ ಶುರುವಾದರೆ ಅರ್ಧ ಗಂಟೆಯಿಂದ ಎರಡು ಗಂಟೆಯೊಳಗೆ ತುರ್ತು ಚಿಕಿತ್ಸೆ ಕೊಟ್ಟರಷ್ಟೇ ಜೀವ ಉಳಿಸಬಹುದು. ವೈದ್ಯಕೀಯ ಪರಿಭಾಷೆಯ ಈ ಗೋಲ್ಡನ್ ಪಿರಿಯಡ್‍ನಲ್ಲಿ ಚಿಕಿತ್ಸೆ ವ್ಯವಸ್ಥೆ ಉತ್ತರ ಕನ್ನಡದಲ್ಲಿ ಇಲ್ಲ. ಶಿರಸಿ-ಯಲ್ಲಾಪುರ ಸೀಮೆಯವರು ಗಾಯಾಳು/ರೋಗಿಯನ್ನು ಹುಬ್ಬಳ್ಳಿ ಅಥವಾ ಧಾರವಾಡಕ್ಕೆ ಕರೆದೊಯ್ಯಲು ಮೂರು ತಾಸು ಬೇಕು. ಮಣಿಪಾಲ-ಮಂಗಳೂರು ನಾಲ್ಕೈದು ತಾಸುಗಳೇ ಬೇಕಾಗುತ್ತದೆ. ಕಾರವಾರದವರು ಪಣಜಿ ಆಸ್ಪತ್ರೆ ತಲುಪಲು ಎರಡು ಗಂಟೆಯಾದರೂ ಅವಶ್ಯ. ಸಿದ್ದಾಪುರ ಭಾಗದವರು ಶಿವಮೊಗ್ಗ ತಲುಪಬೇಕೆಂದರೆ 3 ಗಂಟೆ ಪ್ರಯಾಣ.

ಗೋಲ್ಡನ್ ಪಿರಿಯಡ್‍ನಲ್ಲಿ ಸುಸಜ್ಜಿತ ಆಸ್ಪತ್ರೆಗೆ ರೋಗಿಗಳನ್ನು/ಗಾಯಾಳುಗಳನ್ನು ಸೇರಿಸಲಾಗದೆ ವಾರ್ಷಿಕವಾಗಿ ನೂರಾರು ಜೀವಗಳು ಹೋಗುತ್ತಿವೆ. 2018ರ ಮೇ ತಿಂಗಳಿಂದ 2019ರ ಎಪ್ರಿಲ್‍ವರೆಗೆ ಜಿಲ್ಲೆಯಲ್ಲಿ ಸರಾಸರಿ ದಿನಕ್ಕೆರಡರಂತೆ ಗಂಭೀರ ಅಪಘಾತಗಳಾಗಿವೆ. 239 ಮಂದಿ ಸಾವಿಗೀಡಾಗಿದ್ದಾರೆ; 522 ಮಂದಿಯ ಅಂಗ ಊನವಾಗಿದೆ; 1,331 ಜನರು ಗಾಯಗೊಂಡು ಬಚಾವಾಗಿದ್ದಾರೆ. ತುರ್ತು ಸಮಯದಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಿರುವ ಅಂಬ್ಯುಲೆನ್ಸ್ ಸಹ ಜಿಲ್ಲೆಯವರಿಗೆ ಸಿಗುತ್ತಿಲ್ಲ, ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಒಂದಿದ್ದರೆ ಹಲವು ಜೀವಗಳನ್ನು ಖಂಡಿತ ಉಳಿಸಬಹುದಿತ್ತು. ಉತ್ತರ ಕನ್ನಡದಲ್ಲಿ ಮೆಡಿಕಲ್ ಕಾಲೇಜು ಶುರುವಾಗಿ ಮೂರು ವರ್ಷವಾಗಿದೆ. ಆದರೆ ಸುಸಜ್ಜಿತ ಆಸ್ಪತ್ರೆ, ಟ್ರಾಮಾ ಸೆಂಟರ್ ಬೇಕೆಂಬ ಬೇಡಿಕೆ ಈಡೇರಿಲ್ಲ.

ಈ ನರಕ ಯಾತನೆಯಿಂದ ಜಿಲ್ಲೆಯನ್ನು ಪಾರು ಮಾಡಲೇಬೇಕೆಂಬ ಯೋಚನೆಯಿಂದ ಒಂದಿಷ್ಟು ಯುವಕರು ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ಅಕ್ಷರ ಆಂದೋಲನ ಆರಂಭಿಸಿದ್ದಾರೆ.ಟ್ವಿಟರ್, ಫೇಸ್‍ಬುಕ್, ವಾಟ್ಸಾಪ್‍ಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. “ವಿ ನೀಡ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಇನ್ ಉತ್ತರ ಕನ್ನಡ” ಎಂಬ ಹ್ಯಾಶ್‍ಟ್ಯಾಗ್‍ನಿಂದ ಯುವಕರು ಜನಪ್ರತಿನಿಧಿಗಳ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಪರಸ್ಪರ ಪರಿಚಯವೇ ಇಲ್ಲದ ಈ ಸಮಾನ ಮನಸ್ಕರ ಸ್ವಯಂ ಪ್ರೇರಣೆಯ ಸುಸಜ್ಜಿತ ಆಸ್ಪತ್ರೆ ಬೇಡಿಕೆಯ ಸರಣಿ ಟ್ವೀಟ್‍ಗೆ ಪ್ರಧಾನಿ, ಸಿಎಂ, ಜಿಲ್ಲೆಯ ದಂಡಪಿಂಡ ಮಂತ್ರಿ ದೇಶಪಾಂಡೆ, ಕರ್ಮಗೇಡಿ ಸಂಸದ ಅನಂತ್ಮಾಣಿ ಮತ್ತು ಜಿಲ್ಲೆಯ ಐದು ಶಾಸಕರು ಗಡಿಬಿಡಿಗೆ ಬಿದ್ದಂತೆ ಎದ್ದು ಕುಂತಿದ್ದಾರೆ.

ಜೂನ್ 8ರ ಶನಿವಾರ ಸಂಜೆ 5.30ರಿಂದ 7.30 ಗಂಟೆವರೆಗೆ ಏಕಕಾಲದಲ್ಲಿ ಜಿಲ್ಲೆಯ ಜನ ಪ್ರಧಾನಿ ಕಾರ್ಯಾಲಯದಿಂದ ಸ್ಥಳೀಯ ಶಾಸಕರ ತನಕದ ಆಯಕಟ್ಟಿನ ಅಧಿಕಾರಸ್ಥರೆಲ್ಲರಿಗೆ ಸುಸಜ್ಜಿತ ಆಸ್ಪತ್ರೆಗಾಗಿ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಏಳು ಸಾವಿರಕ್ಕೂ ಹೆಚ್ಚು ಜನರು ತೊಡಗಿಕೊಂಡು ಅಧಿಕಾರಸ್ಥರು ಜಿಲ್ಲೆಯತ್ತ ತಿರುಗಿ ನೋಡುವಂತೆ ಮಾಡಿದ್ದು ದಾಖಲೆಯೇ ಸರಿ!! ಜಿಲ್ಲೆಯ ಯುವಕರು ಸಾಮಾಜಿಕ ಕಳಕಳಿಯ ಹೊಸ ಟ್ರೆಂಡ್ ಹುಟ್ಟಿಹಾಕಿದ್ದಾರೆ. ಈ ಅಭಿಯಾನದಿಂದ ಬೆಚ್ಚಿಬಿದ್ದಿರುವ ಜನಪ್ರತಿನಿಧಿಗಳು ಬೆಂಬಲ ಮಾತಾಡುತ್ತಿದ್ದಾರೆ. ಕಾರವಾರ ಶಾಸಕಿ ರೂಪಾಲಿ ನಾಯಕ್ ತಾನು ಹಿಂದೆ ವೈದ್ಯಕೀಯ ಶಿಕ್ಷಣ ಮಂತ್ರಿಯಾಗಿದ್ದ ಡಿಕೆಶಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಬರೆದ ಪತ್ರ ತೋರಿಸುತ್ತಿದ್ದರೆ, ಶಿರಸಿಯ ಕಾಗೇರಿ ಮಾಣಿ ಸುಸಜ್ಜಿತ ಆಸ್ಪತ್ರೆ ಶಿರಸಿ ಅಥವಾ ಕುಮಟಾದಲ್ಲಿ ಆಗುವ ಜರೂರಿದೆ ಎನ್ನುತ್ತಿದ್ದಾರೆ. ಭಟ್ಕಳದ ಶಾಸಕ ಸುನೀಲ್ ನಾಯ್ಕ ವೈದ್ಯಕೀಯ ಶಿಕ್ಷಣ ಮಂತ್ರಿಗೆ ಅವಸರವಸರದಲ್ಲಿ ಒಂದು ಪತ್ರ ಗೀಚಿದ್ದಾರೆ. ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ ನೆಟ್ಟಿಗರ ಬೇಡಿಕೆಗೆ ಬಲ ಕೊಟ್ಟಿದ್ದಾರೆ.

ಸಿಎಂ ಕುಮ್ಮಿ ಕಚೇರಿಯ ಅಧಿಕೃತ ಪೇಜ್‍ನಿಂದ ಆಸ್ಪತ್ರೆ ಅಭಿಯಾನಕ್ಕೆ ಸ್ಪಂದನೆ ಸಿಕ್ಕಿದೆ. “ಉತ್ತರ ಕನ್ನಡಿಗರ ಆಸ್ಪತ್ರೆ ಅಭಿಯಾನ ನನ್ನ ಗಮನಕ್ಕೆ ಬಂದಿದೆ, ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವರದಿ ತರಿಸಿ ಕ್ರಮ ಕೈಗೊಳ್ಳಲಾಗುವುದು” ಎಂಬ ಭರವಸೆ ಬಂದಿದೆ. ಕೇಂದ್ರ ಸರ್ಕಾರದಿಂದ ಯಾವ ರೀತಿಯ ಸಹಕಾರ ನೀಡಬಹುದೆಂದು ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸುತ್ತೇನೆ. ಉತ್ತರ ಕನ್ನಡದ ಸಂಸದನ ಜತೆಯಲ್ಲಿಟ್ಟುಕೊಂಡು ಕೇಂದ್ರದ ಸಹಾಯ ಕೋರಿಸುತ್ತೇನೆ” ಅಂದಿದ್ದಾರೆ. ಆದರೆ ಜಿಲ್ಲೆಗೆ ದೊಡ್ಡ ದಂಡವಾಗಿರುವ ಮಂತ್ರಿ ದೋಷಪಾಂಡೆ ಮತ್ತು ಅನಂತ್ಮಾಣಿ ಇದ್ಯಾವುದೂ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಮೂರೂ ಮುಚ್ಚಿಕೊಂಡು ಸ್ವಂತ ‘ದಂದೆ’ಯಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ತನ್ನ ಎಂಪಿಗಿರಿ ಅನಿವಾರ್ಯ ಎಂಬಂತೆ ಒಣ ಪೋಸು ಕೊಡುವ, ಅಭಿವೃದ್ಧಿ ಹಿಂದೂತ್ವ ಎಂದು ಬೊಬ್ಬಿರಿವ ಅನಂತ್ಮಾಣಿ ಆಸ್ಪತ್ರೆಗೆ ಒತ್ತಾಯಿಸಿ ಸರಣಿ ಟ್ವಿಟ್ ಮಾಡಿದವರನ್ನು ಬ್ಲಾಕ್ ಮಾಡಿ ತನ್ನ ಅಸಲಿ ಕರ್ಮಗೇಡಿತನ ತೋರಿಸಿಕೊಂಡಿದ್ದಾನೆ.

“ಉತ್ತರ ಕನ್ನಡ ಟ್ರೋಲರ್ಸ್” ಎಂಬ ಟ್ವಟರ್ ಖಾತೆಯಿಂದ ಮಾಣಿಗೆ ಟ್ವಿಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸುವ ಯೋಗ್ಯತೆಯಿಲ್ಲದ ಸಂಸದ ಸಾಹೇಬ ಆಸ್ಪತ್ರೆ ಬೇಡಿಕೆ ಇಡುತ್ತಿರುವವರನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಿಂದ ದೂರ ಇಟ್ಟಿದ್ದಾನೆ. ಕಾರವಾರ ಮೆಡಿಕಲ್ ಕಾಲೇಜಿನ ಬಳಿಯೇ ಟ್ರೋಮಾ ಸೆಂಟರ್ ಸ್ಥಾಪನೆಗೆ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಕಳಿಸಿ ಬಹಳ ದಿನಗಳೇ ಆಗಿಹೋಗಿವೆ. ಇದಕ್ಕೆ ಜಾಗದ ತಲಾಶ್ ಸಹ ನಡೆದಿದೆ. ಬಹುಶಃ ಸಂಸದ ಮಾಣಿಗೆ ಇದೆಲ್ಲ ಗೊತ್ತಿರುವಂತಿಲ್ಲ. ಖಾಸಗಿಯವರಿಂದ ದುಬಾರಿ ಟ್ರೋಮಾ ಸೆಂಟರ್ ನಿರ್ಮಾಣ ಸಾಧ್ಯವಾಗದು. ಅದು ಕಾರವಾರ ಮೆಡಿಕಲ್ ಕಾಲೇಜಿನ ಬಳಿಯೇ ಆಗಬೇಕಾದ ಅನಿವಾರ್ಯತೆಯಿದೆ. ಜನರ ಈ ಹೋರಾಟಕ್ಕೆ ಬರೀ ಕಣ್ಣೊರೆಸುವ ಕಿತಾಪತಿ ಆಗಬಾರದೆಂಬುದು ಆಸ್ಪತ್ರೆ ಬಯಸುವವರ ಕಳಕಳಿ. ಗುರಿಮುಟ್ಟುವ ತನಕ ಜನಪ್ರತಿನಿಧಿಗಳು ಹಿಂದಡಿ ಇಡಬಾರದೆಂದು ಜನ ಬಯಸಿದ್ದಾರೆ.ಹಾಗೆಯೇ ಭಾವನಾತ್ಮಕ ಹೋರಾಟ ಜೋರಾದಾಗ ಆಳುವವರು ಟ್ರಾಮಾ ಸೆಂಟರ್ ಬೋರ್ಡ್ ಹಾಕಿ, ನಾಲ್ಕು ಡಾಕ್ಟರ್‍ಗಳ ನೇಮಿಸುವ ನಾಟಕ ಆಡದಿರಲಿ. ಉತ್ತರ ಕನ್ನಡಿಗರ ಜೀವ ಉಳಿಸುವ ಪ್ರಾಮಾಣಿಕ ಕೆಲಸ ತುರ್ತಾಗಿ ಆಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...