Homeಮುಖಪುಟಭಾರತದುದ್ದಕ್ಕೂ 6000 ಕಿ.ಮೀ ಸೈಕಲ್ ಸವಾರಿ: ಸೈಕ್ಲಿಸ್ಟ್‌ಗಳಿಬ್ಬರ ಸಾಹಸಗಾಥೆ

ಭಾರತದುದ್ದಕ್ಕೂ 6000 ಕಿ.ಮೀ ಸೈಕಲ್ ಸವಾರಿ: ಸೈಕ್ಲಿಸ್ಟ್‌ಗಳಿಬ್ಬರ ಸಾಹಸಗಾಥೆ

- Advertisement -
- Advertisement -

ಲಾಕ್‌ಡೌನ್ ಭಾರತದಲ್ಲಿ ವಿಚಿತ್ರ ಸನ್ನಿವೇಶವನ್ನು ಸೃಷ್ಟಿಸಿದೆ. ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಯೋಗ, ನಡಿಗೆ, ವ್ಯಾಯಾಮ, ಸೈಕ್ಲಿಂಗ್ ಹೀಗೆ ಜನರು ದೇಹ ಮನಸ್ಸಿನ ಆರೋಗ್ಯದ ಕಡೆ ಹೆಚ್ಚು ಹೆಚ್ಚು ಗಮನ ಕೊಡುತ್ತಿದ್ದಾರೆ. ಬೆಂಗಳೂರಿನಿಂದ ಇಬ್ಬರು ಸೈಕ್ಲಿಸ್ಟ್‌ಗಳು ಭಾರತ ಯಾತ್ರೆಯನ್ನು ಹೊರಟಿದ್ದಾರೆ. ಅದೂ ಸೈಕಲ್‌ನಲ್ಲಿ. ಆರಂಭದ ಉತ್ಸಾಹ, ದಾರಿ ಮಧ್ಯೆ ದಣಿಯುತ್ತಾರೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಈ ಇಬ್ಬರು ಸೈಕ್ಲಿಸ್ಟ್‌ಗಳು ಈಗಾಗಲೇ ಸೈಕಲ್ ಸವಾರಿಯ ಮೂಲಕ ದೆಹಲಿ ತಲುಪಿದ್ದಾರೆ. ಸರಿ ಸುಮಾರು 3000 ಕಿಲೋ ಮೀಟರ್‌ ದೂರವನ್ನು ಬಿಸಿಲು, ಮಳೆ, ನಿರ್ಬಂಧಗಳ ನಡುವಿನಲ್ಲಿ ಕ್ರಮಿಸಿದ್ದಾರೆ.

ಇವರದು ಸಾಮಾನ್ಯ ಸೈಕಲ್‌ ಅಲ್ಲ. ಉದ್ದವಾದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಪೆಡೆಲ್‌ ತುಳಿಯುವ ಎರಡು ಸೀಟ್‌ಗಳ ಟೆಂಡೆಮ್‌ ಸೈಕಲ್. ಒಬ್ಬರಿಗೊಬ್ಬರ ಹೊಂದಾಣಿಕೆ, ವೇಗ, ಲಯ ಮತ್ತು ಸಹಕಾರ ಮಾತ್ರ ಈ ಬಗೆಯ ಸೈಕಲ್‌ ಪ್ರಯಾಣದ ಯಶಸ್ಸನ್ನು ನಿರ್ಧರಿಸುತ್ತದೆ. ಇದುವರೆಗೆ ಟೆಂಡೆಮ್‌ ಸೈಕಲ್‌ನಲ್ಲಿ ಭಾರತದಲ್ಲಿ ಇಷ್ಟು ದೂರ ಯಾರೂ ಕ್ರಮಿಸಿಲ್ಲ. 6000 ಕಿ.ಮೀ ಪ್ರಯಾಣದ ಮೂಲಕ ಈ ಸೈಕ್ಲಿಸ್ಟ್‌ಗಳು ಹೊಸ ದಾಖಲೆಗೆ ಸದ್ಯದಲ್ಲಿಯೇ ಸಾಕ್ಷಿಯಾಗಲಿದ್ದಾರೆ.

44 ವರ್ಷದ ಮೀರಾ ವೇಲಂಕರ್ ಮತ್ತು 48 ವರ್ಷದ ದಿಂಕರ್ ಪಾಟಿಲ್ ಜೂನ್‌ 19 ರಂದು ಬೆಂಗಳೂರಿನಿಂದ ಸೈಕಲ್‌ನಲ್ಲಿ ಹೊರಟು 14 ದಿನಗಳ ನಂತರ ಇಂದು ದೆಹಲಿ ತಲುಪಿದ್ದಾರೆ. 6000 ಕಿಲೋಮೀಟರ್ ದೂರದ ಗೋಲ್ಡ್‌ನ್‌ ಕ್ವಾಡ್ರಿಲಾಟರಲ್ ರಸ್ತೆಯನ್ನು ಸಂಪೂರ್ಣವಾಗಿ ಸೈಕಲ್‌ನಲ್ಲಿಯೇ ಕ್ರಮಿಸುವ ಉದ್ಧೇಶ ಹೊಂದಿರುವ ಸೈಕ್ಲಿಸ್ಟ್‌ಗಳು ಸದ್ಯ ಅರ್ಧ ದೂರವನ್ನು ಕ್ರಮಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ನಂತರ ಅಮಿರ್ ಖಾನ್-ಕಿರಣ್ ರಾವ್ ಭಾವನಾತ್ಮಕ ವಿಡಿಯೋ ಸಂದೇಶ

12 ರಾಜ್ಯಗಳ ಮೂಲಕ  ಹಾದುಹೋಗುವ ಈ ಜರ್ನಿ ಬೆಂಗಳೂರು, ಪುಣೆ, ಮುಂಬೈ, ಅಹ್ಮದಾಬಾದ್‌, ಜೈಪುರ್, ದೆಹಲಿ, ಲಕ್ನೊ, ಕಲ್ಕತ್ತಾ, ಭುವನೇಶ್ವರ, ವಿಶಾಖಪಟ್ಟಣಂ ಚೆನ್ನೈ ನಗರಗಳ ಮೂಲಕ ಸಾಗಲಿದೆ.

ಅಹ್ಮದಾಬಾದ್‌ನಲ್ಲಿ ಮೀರಾ ಮತ್ತು ದಿಂಕರ್ ತಮ್ಮ ಟೆಂಡಮ್‌ ಸೈಕಲ್‌ನೊಂದಿಗೆ (ಚಿತ್ರ ಕೃಪೆ: Times of India)

ನನಗೆ ಸವಾಲುಗಳೆಂದರೆ ಇಷ್ಟ. ಕಳೆದ ಅಕ್ಟೋಬರ್‌ನಲ್ಲಿ ನಾನು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸೈಕಲ್‌ನಲ್ಲಿ ತೆರಳಿದ್ದೆ. ಭಾರತದ ಪೂರ್ವ ಪಶ್ಚಿಮ ತೀರಗಳನ್ನು ಬೆಸೆಯುವ ಗೋಲ್ಡನ್‌ ಕ್ವಾಡ್ರಿಲಾಟರಲ್‌ ಅನ್ನು ಸೈಕಲ್‌ ಮೂಲಕ ಕ್ರಮಿಸುವ ಆಸೆಯಿತ್ತು. ಈ ಪ್ರಯತ್ನದಲ್ಲಿ ನಾಸಿಕ್‌ ನ ದಿಂಕರ್ ಪರಿಚಯವಾಯಿತು. ಈ ಪ್ರಯಾಣದಲ್ಲಿ ನಾವಿಬ್ಬದು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇವೆ. ಮಹಾರಾಷ್ಟ್ರ, ಗುಜರಾತ್‌ನಲ್ಲಿ ಭಾರಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಆದರೂ ನಮ್ಮ ಪ್ರಯತ್ನ ಬಿಡಲಿಲ್ಲ. ಇಂದು ಸೈಕಲ್‌ ಮೂಲಕ ರಾಷ್ಟ್ರ ರಾಜಧಾನಿಯನ್ನು ತಲುಪಿದ್ದೇವೆ ಎಂದು ಮೀರಾ ವೇಲಂಕರ್‌ ತಮ್ಮ ಭಾರತ ಪ್ರಯಾಣದ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಮೀರಾ ಅವರು ಜೀವ ವಿಜ್ಞಾನದಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದಿದ್ದು ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ.

ನಾಸಿಕ್‌ನ ಹಿಂದುಸ್ತಾನ್‌ ಎರೋನಾಟಿಕಲ್ ಲಿಮಿಟ್ಸ್‌ನ ಭದ್ರತಾ ಮುಖ್ಯಸ್ಥರಾಗಿರುವ ದಿಂಕರ್ ಪಾಟೀಲ್, “ಸೈನಿಕನಾಗಿ ಯಾವಾಗಲೂ ನಾನು ಸಾಹಸಗಳಿಗೆ ಸಿದ್ಧವಿದ್ದೆ. ಮೀರಾ ಅವರು ಸೈಕ್ಲಿಂಗ್ ಯೋಜನೆಯನ್ನು ಮುಂದಿಟ್ಟರು. ಆರಂಭದಲ್ಲಿ ನನಗೆ ವಿಶ್ವಾಸವಿರಲಿಲ್ಲ. ಜೂನ್‌ 19 ರಂದು ಬೆಂಗಳೂರಿನಿಂದ ಹೊರಟ ನಮ್ಮ ಪ್ರಯಾಣ ಇಂದು ದೆಹಲಿಗೆ ತಲುಪಿದೆ” ಎಂದಿದ್ದಾರೆ.

ಬೆಂಗಳೂರಿನಿಂದ ಮುಂಬೈವರೆಗಿನ ಮಾರ್ಗ ಬೆಟ್ಟ ಗುಡ್ಡಗಳಿಂದ ಕೂಡಿದ ಪಶ್ಚಿಮಘಟ್ಟದ ಮೂಲಕ ಹಾದುಹೋಗುತ್ತದೆ. ಮುಂಗಾರಿನ ವೇಳೆ ಪಶ್ಚಿಮ ಘಟ್ಟದ ಪ್ರಯಾಣ ಅತ್ಯಂತ ಕಠಿಣವಾಗಿರುತ್ತದೆ. ನಾವು ನಿತ್ಯ 150-200 ಕಿಲೊ ಮೀಟರ್‌ ದೂರವನ್ನು ಕ್ರಮಿಸುತ್ತಿದ್ದೆವು. ಮಹಾರಾಷ್ಟ್ರದ ಬಹುಪಾಲು ಪ್ರದೇಶದಲ್ಲಿ ಮಳೆಯಿಂದ ರಸ್ತೆಗಳಲ್ಲಿ ಸೈಕಲ್ ಓಡಿಸುವುದು ಸುಲಭವಿರಲಿಲ್ಲ. ಗುಜರಾತ್, ರಾಜಸ್ಥಾನಗಳಲ್ಲಿ ಇನ್ನೊಂದು ರೀತಿಯ ಸವಾಲು. ಮರಭೂಮಿಯ ಪ್ರದೇಶಗಳಲ್ಲಿ ವಿಪರೀತ ಸೆಕೆ. ಕ್ರಮಿಸುವ ದೂರ ಮತ್ತು ವೇಗದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ದೀರ್ಘ ಪ್ರಯಾಣದಲ್ಲಿ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ ಎಂದು ಸೈಕ್ಲಿಸ್ಟ್‌ಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆರೆ ಒತ್ತುವರಿ ತೆರವು: ಮನೆಗಳು ನೆಲಸಮ

ಲಾಕ್‌ಡೌನ್ ಜಾರಿಯಿರುವ ಕಾರಣ ಕೆಲವು ರಾಜ್ಯಗಳಲ್ಲಿ ಹಗಲು ಪ್ರಯಾಣ ಸಾಧ್ಯವಿರಲಿಲ್ಲ. ರಾತ್ರಿ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಪ್ರಯಾಣಿಸಬೇಕಿತ್ತು. ಅರ್ಧ ದಾರಿಯಲ್ಲಿ ಪ್ರಯಾಣವನ್ನು ಕೈಬಿಡುವುದು ಸಾಧ್ಯವಿಲ್ಲ. ದಾಖಲೆಗಳನ್ನು ಸೃಷ್ಟಿಸುವ ಉದ್ಧೇಶಕ್ಕಿಂತ ನಮ್ಮ ಜೊತೆಗಾರರ ಉತ್ಸಾಹಕ್ಕೆ ತಣ್ಣೀರು ಎರಚಬಾರದೆಂಬುದು ನನ್ನ ಇಷ್ಟು ವರ್ಷದ ಪ್ರಯಾಣದಲ್ಲಿ ಕಂಡುಕೊಂಡಿದ್ದೇನೆ ಎಂದು ದಿಂಕರ್ ಪಾಟೀಲ್ ಹೇಳಿದ್ದಾರೆ.

ನಮ್ಮದು ಮಾಮೂಲು ಸೈಕಲ್‌ ಅಲ್ಲ. ಇದು ಟೆಂಡಾಮ್ ಸೈಕಲ್. ಇಬ್ಬರು ಸವಾರರು ಒಂದೇ ಸೈಕಲ್‌ನಲ್ಲಿ ಕುಳಿತು ಒಂದೇ ಸಮಯದಲ್ಲಿ ಪೆಡೆಲ್‌ ತುಳಿಯಬೇಕು. ಇಬ್ಬರ ವೇಗ ಹೊಂದಾಣಿಕೆಯನ್ನು ಮಾಡಬೇಕು. ಪ್ರಯಾಣವನ್ನು ನಿಲ್ಲಿಸುವುದಾದರೆ ಸೈಕಲ್‌ ಅನ್ನು ಮರಳಿ ತೆಗೆದುಕೊಂಡು ಹೋಗಲು ದೊಡ್ಡ ವಾಹನ ಬೇಕು. ಹೀಗೆ ಸಮಸ್ಯೆಗಳು ಹಲವಾರು ಇವೆ. ನಮ್ಮ ಪ್ರಯಾಣದ ಅರ್ಧದೂರವಿನ್ನು ಬಾಕಿಯಿದೆ. ಉತ್ತರ ಪ್ರದೇಶ, ಬಂಗಾಳ, ಕೊಲ್ಕತ್ತ, ವಾರಣಾಸಿಗಳ ಬಗ್ಗೆ ಕುತೂಹಲವಿದೆ. ಕುತೂಹಲವೊಂದೇ ದಿನದ ಕೊನೆಯಲ್ಲಿ ದಣಿದ  ನಮ್ಮನ್ನು ಮಾರನೇಯ ದಿನ ಇನ್ನೊಂದಿಷ್ಟು ದೂರ ಕೊಂಡೊಯ್ಯಬಲ್ಲದೆಂದು ಮೀರಾ ಮಾರ್ಮಿಕವಾಗಿ ತಮ್ಮ ಪ್ರಯಾಣದ ಹಿಂದಿನ ಸ್ಪೂರ್ತಿಯನ್ನು ತೆರೆದಿಡುತ್ತಾರೆ.

– ರಾಜೇಶ್ ಹೆಬ್ಬಾರ್ 


ಇದನ್ನೂ ಓದಿ; ಎಲ್‌ಎಸ್‌ಇಯಿಂದ ಅಂಬೇಡ್ಕರ್‌ ಅವರ ಅಪರೂಪದ ದಾಖಲೆಗಳ ಆನ್ಲೈನ್ ವಸ್ತು ಪ್ರದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...